ತತ್ವಗಳುಪಾಲಿಸಬೇಕು

ಒಂದು ಊರಿನಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಒಬ್ಬ ತಂದೆ ತಾಯಿಯನ್ನು ಕಳೆದುಕೊಂಡ ಕರವೀರ್ ಹುಡುಗ ಇರುತ್ತಾನೆ, ಹುಡುಗ ಒಳ್ಳೆಯ ವಿದ್ಯಾಭ್ಯಾಸ ಪಡೆಯುತ್ತಾನೆ ನಂತರ ಹುಡುಗ ಯುವಕನಾಗುತ್ತಾನೆ ಆಗ ಗುರುಗಳು ಯುವಕನನ್ನು ಕರೆದು ಸಾಕಷ್ಟು ನಿನ್ನಲ್ಲಿ ವಿದ್ಯೆ ಬಂದಿದೆ ನೀನು ಕೂಡ ಯುವಕನಾಗಿದ್ದೀಯ ಈಗ ನೀನು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಹೇಳುತ್ತಾರೆ. ಯುವಕನು ಹೇಳುತ್ತಾನೆ ನೀವು ಹೇಳಿದ ಮೇಲೆ ನಾನು ಹಾಗೆಯೇ ಮಾಡುತ್ತೇನೆ ಆದರೆ ಗುರುಕುಲದಲ್ಲಿ ಬದುಕಿ ನನಗೆ ಅಭ್ಯಾಸವಾಗಿದೆ ಈಗ ನಾನು ಹೊರಗೆ ಬದುಕಬೇಕು … Read more

ಕಂಟಕ ಬರಲಿದೆ

ಒಂದು ಕಾಡಿನಲ್ಲಿ ಒರಟು ಸ್ವಭಾವದ ಹುಲಿ ಇರುತ್ತದೆ. ಇತರರಿಗೆ ತೊಂದರೆ ಕೊಡುತ್ತಿರುತ್ತದೆ ಸ್ವಲ್ಪ ದೂರದಲ್ಲಿ ತಾಯಿ ಜಿಂಕೆ ಒಂದು ಮರಿಗೆ ಜನ್ಮ ನೀಡಿರುತ್ತದೆ ಆ ಮರಿ ನಲಿಯುತ್ತಾ ಕುಣಿಯುತ್ತ ಓಡಾಡಿಕೊಂಡು ಇರುತ್ತದೆ.  ಈ ಜಿಂಕೆಮರಿಯನ್ನು ನೋಡಿ ಎಲ್ಲಾ ಪ್ರಾಣಿಗಳು ಸಂತೋಷ ಪಡುತ್ತವೆ ಹುಲಿ ತನ್ನ ಆಹಾರ ಹುಡುಕಲು ಬರುತ್ತದೆ ಚಿಕ್ಕ ಜಿಂಕೆಮರಿಯನ್ನು ನೋಡಿ ಆ ಮರಿಯನ್ನು ಹಿಡಿದುಕೊಳ್ಳುತ್ತದೆ ಜಿಂಕೆಮರಿ ವಿಲವಿಲ ಒದ್ದಾಡುತ್ತಿರುತ್ತದೆ ಆಗ ಜಿಂಕೆಯ ತಾಯಿ ಪರಿಪರಿಯಾಗಿ ಕೇಳಿಕೊಳ್ಳುತ್ತದೆ ದಯವಿಟ್ಟು ಬಿಟ್ಟುಬಿಡು ಎಂದು ಅಳುತ್ತದೆ.  ಈ ಘಟನೆ … Read more

 ಮಹಾತ್ಮರಂತೆ ನೋಡಿದರೆ ಸಾಕು

ನಿಲೋತ್ಕಲ್ ತರುಣನಿದ್ದನು ಅವನು ತುಂಬ ಶ್ರೀಮಂತ ವ್ಯಕ್ತಿಯ ಮಗ ಅವರ ಹಲವಾರು ವ್ಯಾಪಾರಗಳು ಇದ್ದವು ತರುಣನಿಗೆ ಯಾವುದೇ ಕೆಲಸ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಏನೇ ಹೇಳಿದರೂ ಎಲ್ಲರೂ ಕೆಲಸ ಮಾಡಿ ಕೊಡುತ್ತಿದ್ದರು ಬಹಳಷ್ಟು  ಸೇವಕರು ಕೂಡಾ ಇದ್ದರು.  ಕೆಲವು ದಿನಗಳಲ್ಲಿ ತಂದೆ ತೀರಿಕೊಂಡರು ನಂತರ ಶ್ರೀಮಂತರ ವ್ಯವಹಾರ ತರುಣನೆ ಸಂಭಾಳಿಸಬೇಕಾಗಿತ್ತು ಆದರೆ ಬರ್ತಾ ಬರ್ತಾ ವ್ಯವಹಾರ ಸರಿಯಾಗಿ ನಡೆಯುತ್ತಿರಲಿಲ್ಲ ಮತ್ತೆ ಈ ತರುಣನಿಗೆ ಅಹಂಕಾರ ದರ್ಪ ಎಲ್ಲರನ್ನು ಕೀಳಾಗಿ ನೋಡುವ ಸ್ವಭಾವವಿತ್ತು ನಂತರ ತರುಣನು ಏನಾದರೂ ಮಾಡಿ … Read more

ಹೆದರಿಕೆಯನ್ನು ಮೆಟ್ಟಿನಿಂತಾಗ

ಒಂದು ಊರಿನಲ್ಲಿ ಒಬ್ಬ ಬಹದ್ದೂರ್ ಆಕ್ರಾಂತ್ ರಾಜ ಇದ್ದನು ರಾಜನ ಬಳಿ ಒಳ್ಳೆಯ ಸೈನ್ಯ ಇತ್ತು ಅದರಲ್ಲಿ ಒಂದು ಆಕರ್ಷಕ ಬಿಳಿ ಕುದುರೆಯೂ ಇತ್ತು ಕಾರಣ ಗೊತ್ತಿಲ್ಲ ಆ ಕುದುರೆಯು ಒಂದು ವಾರವಾದರೂ ಎದ್ದು ನಿಲ್ಲುತ್ತಲೇ ಇಲ್ಲ ಕಷ್ಟಪಟ್ಟು ನಿಲ್ಲಿಸಿದರೂ ಕೂಡ 3 ಕಾಲುಗಳಲ್ಲಿ ಮಾತ್ರ ನಿಲ್ಲುತ್ತಿದೆ.  ಒಂದು ಕಾಲನ್ನು ಭೂಮಿಯ ಮೇಲೆ ಇಡುವುದೇ ಇಲ್ಲ ಕುಸಿದು ಬೀಳುತ್ತಿತ್ತು ಆಗ ರಾಜನು ಕುದುರೆಯ ಚಿಂತೆಯಲ್ಲಿ ಮುಳುಗಿದನು ಮತ್ತೆ ಕುದುರೆ ನೋಡಿಕೊಳ್ಳುವವನು ಕರೆದನು ಈ ಕುದುರೆ ಹೀಗೆ ಇರಲು … Read more

ದುಶ್ಚಟಗಳು ಏನು ಮಾಡುತ್ತವೆ

ಒಂದು ಊರಿನಲ್ಲಿ ಒಂದು ಸಂಸಾರ ಇತ್ತು ಆ ಸಂಸಾರದಲ್ಲಿ ಗಂಡ ಹೆಂಡತಿ ಮಗ ಎಲ್ಲರೂ ಸೇರಿ ಇದ್ದರು ತಂದೆಯ ಕೆಲಸ ಏನೆಂದರೆ ಉಪನ್ಯಾಸಗಳನ್ನು, ಕಥೆಗಳನ್ನು ಹಾಸ್ಯವಾಗಿ ಹೇಳುವುದು ಇವರ ಉದ್ಯೋಗವಾಗಿತ್ತು ಇವರ ಕೀರ್ತಿ ಹಲವಾರು ಊರುಗಳಿಗೆ ಹರಡಿತು ನಂತರ ಮಧ್ಯಪ್ರಿಯ ರಾಜನು ಒಂದು ದಿನ ಗೊತ್ತು ಮಾಡಿ ಆಮಂತ್ರಣ ನೀಡಿದನು. ಇವರು ಆ ದರ್ಬಾರಿನಲ್ಲಿ ತಮ್ಮ ಉಪನ್ಯಾಸವನ್ನು ನೀಡಲು ಆರಂಭಿಸಿದರು ಉಪನ್ಯಾಸಗಳು ಕೇಳುತ್ತಿದ್ದಂತೆಯೇ ಮಗ್ನರಾಗುತ್ತಿದ್ದರು ಒಳ್ಳೆಯ ಚಟಗಳು ಏನು ಮಾಡುತ್ತವೆ ದುಶ್ಚಟಗಳು ಏನು ಮಾಡುತ್ತವೆ ಎಂಬ ಒಂದು … Read more

ಇನ್ನೊಬ್ಬರು ತಪ್ಪು ಮಾಡಲಿ

ಒಂದು ಸಾರಿ ಎಲ್ಲ ನಾಯಿಗಳನ್ನು ಸಭೆ ಸೇರಿದವು ನಮ್ಮಲ್ಲಿ ಎಲ್ಲಾ ಒಳ್ಳೆಯ ಗುಣಗಳು ಇವೆ ಆದುದರಿಂದ ಮನುಷ್ಯರು ನಮಗೆ ಹೆಚ್ಚು ಪ್ರೀತಿಸುತ್ತಾರೆ ನಮ್ಮ 2 ಗುಣಗಳಿಗೆ ಯಾರೂ ಇಷ್ಟಪಡುತ್ತಿಲ್ಲ.  ಮೊದಲನೇ ಗುಣ ದಾರಿಯಲ್ಲಿ ಹೊಸ ವಾಹನ ಹೋದರೂ ಬೊಗಳಿಕೊಂಡು ಅದರ ಹಿಂದೆ ಹೋಗುವುದು ಎರಡನೆಯದು ಸುಮ್ಮನೆ ಸುಮ್ಮನೆ ಬೊಗಳುವುದು   ಈ ಗುಣಗಳು ತೆಗೆದುಬಿಟ್ಟರೆ ನಮ್ಮ ಗೌರವ ಹೆಚ್ಚುತ್ತದೆ ಎಂದು ಹೇಳಿದವು ಎಲ್ಲಾ ನಾಯಿಗಳು ಇನ್ನು ಮುಂದೆ ಬೊಗಳಬಾರದು ಎಂದು ಪ್ರಮಾಣ ಮಾಡಿದವು ಅದಕ್ಕೆ ಎಲ್ಲಾ ನಾಯಿಗಳು … Read more

ನಿನ್ನ ಸೇವೆ ಅಮೂಲ್ಯವಾದದ್ದು

ಹೊಸದಾಗಿ ಮದುವೆಯಾದ ಜಗಪಾಲ್ ಪತಿ ದಮತಿ ಪತ್ನಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತಾರೆ ಸ್ವಲ್ಪ ಕಾಲ ಕಳೆದಂತೆ ಸಮಸ್ಯೆಗಳು ಬರುತ್ತವೆ ಆಗ ಪತಿ ಪತ್ನಿ ಇಬ್ಬರು ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಾರೆ ಪತ್ನಿ ಹೇಳುತ್ತಾಳೆ ನಿಮಗೆ ಸಾಕಷ್ಟು ಹೇಳಬೇಕು ಆದರೆ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.  ನಾಳೆಯೇ ಹೊಸ ವರ್ಷ ಅದಕ್ಕೆ ಇಬ್ಬರು ಎರಡು ಡೈರಿಗಳನ್ನು ಖರೀದಿ ಮಾಡೋಣ ನಂತರ ಅದರಲ್ಲಿ ದಿನನಿತ್ಯ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯೋಣ ಒಂದು ವರ್ಷವಾದ ನಂತರ ಒಟ್ಟಾಗಿ ಕುಳಿತುಕೊಂಡು ಓದೋಣ ಎಂದು ಪತ್ನಿ ಹೇಳುತ್ತಾಳೆ.  ಮನಸ್ಸಿನಲ್ಲಿ … Read more

ಕೆಲವೇ ಕ್ಷಣಗಳು ಸಾಕು

ಒಂದು ಊರಿನ ಆಚೆ ಒಂದು ದೊಡ್ಡ ಆಶ್ರಮ ಇತ್ತು ಆ ಆಶ್ರಮದಲ್ಲಿ ಗುರುಗಳು ಇದ್ದರು ಹೊಸದಾಗಿ ಯಾರೇ ಆಶ್ರಮಕ್ಕೆ ಬಂದು ಸೇರಿದರೆ ಅವರಿಗೆ ಮೊದಲನೇ ಕೆಲಸ ಕೆಳಗೆ ಬಿದ್ದಿರುವ ಒಂದು ಬಂಡೆಯನ್ನು ಬೆಟ್ಟದ ಮೇಲೆ ಇಡುವಂತೆ ಹೇಳುತ್ತಿದ್ದರು.  ಬಂದವರು ಕಷ್ಟಪಟ್ಟು ಆ ಬಂಡೆಯನ್ನು ಮೇಲಕ್ಕೆ ಸಾಗಿಸಿ ಇಡುತ್ತಿದ್ದರು ಗುರುಗಳು ನೋಡಿ ಆ ಬಂಡೆಯನ್ನು ಕೆಳಗೆ ಬಿಳಿಸುತ್ತಿದ್ದರು ಯಾರೇ ಹೊಸಬರು ಹೋದರೆ ಈ ರೀತಿ ಮಾಡುತ್ತಿದ್ದರು ಇಲ್ಲಿಯ ಗುರುಗಳಿಗೆ ಹುಚ್ಚು ಹಿಡಿದಿರಬೇಕು ಎಂದು ಬಹಳಷ್ಟು ಮಂದಿ ಹೊರಟು ಹೋಗುತ್ತಿದ್ದರು. … Read more

ಎಲ್ಲಿ ಕಳೆದುಕೊಂಡೆ

ಒಂದು ಸಾರಿ ಒಬ್ಬ ಮರೆಯುವ ಸ್ವಭಾವದ ಮೌಲಿಂದ್ರ ದಿನನಿತ್ಯದಂತೆ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಬಂದನು ನಂತರ ಅವನಿಗೆ ನನ್ನ ಕನ್ನಡಕ ಕಳೆದುಕೊಂಡಿದ್ದೇನೆ ಎಂದು ಯೋಚನೆ ಮಾಡಿದ ಆಗ ನಾನು ಕನ್ನಡಕ ಓದುವಾಗ ಎಲ್ಲಿಯಾದರೂ ಬಿಟ್ಟಿದ್ದೇನೆಯೇ ನಂತರ ಹೋಟೆಲ್ ನಲ್ಲಿ ತಿಂಡಿ ತಿಂದೆ ಅಲ್ಲಿ ಏನಾದರೂ ಬಿಟ್ಟಿದ್ದೇನೆಯೇ  ಎಂದು ಮತ್ತೆ ಮಂದಿರಕ್ಕೆ ಹೋಗಿ ಎಲ್ಲಾ ಕಡೆಯೂ ಹುಡುಕಿದನು.  ಕನ್ನಡಕ ಸಿಗಲಿಲ್ಲ ನಂತರ ಹೋಟೆಲ್ಗೆ ಹೋದನು ಅಲ್ಲಿಯೂ ಕೂಡ ಕನ್ನಡಕ ಸಿಗಲಿಲ್ಲ ನಂತರ ಯೋಚನೆ ಮಾಡಿದನು ಮನೆಯಲ್ಲಿಯೇ ಎಲ್ಲಾದರೂ … Read more

ಕಲ್ಪಿಸಿದಂತೆ ಬದುಕಬಹುದಾಗಿದೆ

ಕುತೂಹಲ್ ಚಿತ್ರಕಾರನು ಯಾವುದಾದರೂ ಒಳ್ಳೆಯ ಚಿತ್ರ ಬರೆಯಬೇಕು ಎಂದು ಯೋಚಿಸಿದನು ಅದಕ್ಕೆ ಊರಿನ ಶ್ರೀಮಂತರ ಮನೆಗೆ ಹೋದನು ಬಾಗಿಲು ತಟ್ಟಿದನು ನಂತರ ತಾಯಿ ಬಂದರು ತಾಯಿಯವರಿಗೆ ಹೇಳಿದನು ಅಮ್ಮಾ ನಾನು ಒಂದು ಚಿತ್ರವನ್ನು ಬರೆಯಬೇಕು ಎಂದಿದ್ದೇನೆ ಆಗ ಆ ತಾಯಿಯು ನನ್ನ ಚಿತ್ರ ಬರೆದರೆ ಏನು ಉಪಯೋಗವಿಲ್ಲ ಎಂದು ಹೇಳಿದರು. ಚಿತ್ರಕಾರನು ಯಾರ ಚಿತ್ರ ಬೇಕಾದರೂ ನಾನು ಬರೆಯುತ್ತೇನೆ ಹೇಳಿ ಎಂದು ವಿನಂತಿಸಿದನು ಅದಕ್ಕೆ ತಾಯಿಯೂ ಸ್ವಲ್ಪ ಸಮಯ ಯೋಚಿಸಿ ಹೇಳಿದಳು ನನ್ನ ಮಗ ಇದ್ದಾನೆ ಅವನ … Read more