babakategalu.com https://babakategalu.com Fri, 06 Jun 2025 19:30:06 +0000 en-US hourly 1 https://wordpress.org/?v=6.7.2 ನಾನು ಎಲ್ಲೆಲ್ಲೂ ಹುಡುಕಿದೆ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%8e%e0%b2%b2%e0%b3%8d%e0%b2%b2%e0%b3%86%e0%b2%b2%e0%b3%8d%e0%b2%b2%e0%b3%82-%e0%b2%b9%e0%b3%81%e0%b2%a1%e0%b3%81%e0%b2%95%e0%b2%bf%e0%b2%a6%e0%b3%86/ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%8e%e0%b2%b2%e0%b3%8d%e0%b2%b2%e0%b3%86%e0%b2%b2%e0%b3%8d%e0%b2%b2%e0%b3%82-%e0%b2%b9%e0%b3%81%e0%b2%a1%e0%b3%81%e0%b2%95%e0%b2%bf%e0%b2%a6%e0%b3%86/#respond Wed, 30 Apr 2025 04:40:00 +0000 https://babakategalu.com/?p=312 Read more]]> ಪ್ರಖ್ಯಾತ ಮನೋರಂಜನ್ ಚಿತ್ರಕಾರನ್ನು ತನ್ನದೇ ಆದ ಒಂದು ಚಿತ್ರವನ್ನು ಬರೆಯಬೇಕು ಅದು ಎಲ್ಲರಿಗೂ ನೆಮ್ಮದಿ ತರಬೇಕು ಎಂದು ಚಿಂತನೆ ಮಾಡಿದನು ಅದಕ್ಕಾಗಿ ಮುಂದೆ ಒಬ್ಬ ಯುವಕ ಹೋಗುತ್ತಿದ್ದನು ಯುವಕನಿಗೆ ಕೇಳಿದನು ಯಾವುದನ್ನು ನೋಡಿದರೆ ನೆಮ್ಮದಿ ಸಿಗುತ್ತದೆ ಎಂದು ಕೇಳಿದನು.

ಯುವಕ ಯುಗ ಯುಗ  ಗಳೇ ಸಾಗಿದರು ಪ್ರೀತಿ ಮಾತ್ರ ಶಾಶ್ವತವಾಗಿರುತ್ತದೆ ಪ್ರೀತಿಗೆ ಸಾವಿಲ್ಲ ಪ್ರೀತಿಯನ್ನು  ನೆನೆಸಿಕೊಂಡರು ತೃಪ್ತಿ ಸಿಗುತ್ತದೆ ಎಂದು ಹೇಳಿದ ಈ ಮಾತು ಚಿತ್ರಕಾರನಿಗೆ ಹಿಡಿಸಲಿಲ್ಲ ನಂತರ  ವಿಶ್ರಾಂತಿಯಲ್ಲಿ ಕುಳಿತಿದ್ದ ಸೈನಿಕ ನಿಗೆ ಇದೇ ಪ್ರಶ್ನೆಯನ್ನು ಚಿತ್ರಕಾರ ಕೇಳಿದನು.

ಸೈನಿಕ ಜಗತ್ತಿನಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಶಾಂತಿ ಶಾಂತಿ ಇಲ್ಲದೆ ಮನುಷ್ಯ ಬದುಕಲಾರ ಶಾಂತಿಯೇ ಸರ್ವಸ್ವ ಎಂದು ಹೇಳಿದನು ಇದು ಚಿತ್ರಕಾರನಿಗೆ ಸರಿ ಎನಿಸಲಿಲ್ಲ ಇನ್ನು ಮುಂದೆ ಹೋಗುತ್ತಿದ್ದಾಗ ಋಷಿಗಳು ಹೋಗುತ್ತಿದ್ದರು ಅವರನ್ನು ಕೂಡ ಇದೇ ಪ್ರಶ್ನೆಯನ್ನು ಕೇಳಿದನು ಆಗ ಋಷಿಗಳು ಶ್ರದ್ಧೆ ಅಭಿವೃದ್ಧಿಯ ಬುನಾದಿ ಶ್ರದ್ಧೆ ಗಿಂತಲೂ ಸೌಂದರ್ಯವಾದುದು ಯಾವುದು ಇಲ್ಲ ಎಂದು ಹೇಳಿದರು.

   ಯುವಕ, ಸೈನಿಕ, ಋಷಿಗಳು ಹೇಳಿದ ಮಾತುಗಳನ್ನು  ನೆನಪಿಸಿಕೊಳ್ಳುತ್ತಿದ್ದನು ನಂತರ ಚಿತ್ರಕಾರ ಮನೆಗೆ ಬಂದ ಆಗ ಹೆಂಡತಿಯು ಗಂಡನ ಬರುವಿಕೆಗಾಗಿ ಪ್ರೀತಿಯಿಂದ ಕಾಯುತ್ತಿದ್ದಳು ಮಕ್ಕಳು ಶ್ರದ್ಧೆ ಭಕ್ತಿಯಿಂದ ಓದುತ್ತಿದ್ದರು ತಂದೆ ತಾಯಿ ಅಂಗಳದಲ್ಲಿ ಶಾಂತಿಯಾಗಿ ಕುಳಿತಿದ್ದರು.

ಈ ದೃಶ್ಯವನ್ನು ನೋಡಿ ಚಿತ್ರಕಾರನು ನಾನು ಎಲ್ಲೆಲ್ಲೂ ಹುಡುಕಿದೆ ಆದರೆ ಮನೆಯ ಒಂದು ಚಿತ್ರ ಬರೆದರೆ ಸಾಕು ನೆಮ್ಮದಿ ಸಿಗುತ್ತದೆ ಎಂದು ಸುಂದರವಾದ ಮನೆಯ ಚಿತ್ರವನ್ನು ಚಿತ್ರಿಸಿದನು ನಾವು ನೆಮ್ಮದಿಗಾಗಿ ಬೇರೆ ಬೇರೆ ಕಡೆ ಹುಡುಕುವುದಕ್ಕಿಂತ ನಮ್ಮ ಮನೆಯಲ್ಲಿಯೇ ನೆಮ್ಮದಿ ಇದೆ ಸರಿಯಾಗಿ ಗುರುತಿಸೋಣ.

ಎಲ್ಲರಿಗೂ ಬುದ್ಧಿ ಇದ್ದೇ ಇದೆ

ಒಂದು ಹಳ್ಳಿಯಲ್ಲಿ ನಾಲ್ಕು ಸ್ನೇಹಿತರು ಇದ್ದರು ಇವರು ಜೊತೆಯಲ್ಲೆ ಓದಿದವರು ನಂತರ ಇವರು ಊರಿಗೆ ಹೋಗಿ ಕೆಲಸವನ್ನು ಮಾಡಿದರು ಊರಿನ ವೈಭವ ಆಕರ್ಷಣೆಗಳು ಸೆಳೆದವು ಹಲವು ವರ್ಷಗಳ ನಂತರ ಅವರಿಗೆ ಊರಿನ ಜೀವನ ಸಾಕಾಯಿತು ನಂತರ ನಾಲ್ಕು ಸ್ನೇಹಿತರು ಮಾತನಾಡಿಕೊಂಡರು.

 ನಮ್ಮೂರೇ ನಮಗೆ ಮೇಲು ಎಂದು ತಮ್ಮ ಊರಿಗೆ ಬಂದರು ಊರಿನಲ್ಲಿ ಏನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದರು ಹಿರಿಯರು ಹೇಳಿದರು ನೀವು ರೈತರ ಮಕ್ಕಳು ಭೂಮಿ ಯಾವತ್ತೂ ಕೈಬಿಡುವುದಿಲ್ಲ ಊರಿಗೆ ಹೋಗಿ ಬೇರೆಯವರ ಹತ್ತಿರ ಗುಲಾಮರಾಗಿ ಬದುಕುವುದಕ್ಕಿಂತ ನಮ್ಮ ಊರಿನಲ್ಲಿಯೇ ಕೃಷಿ ಮಾಡಿ ಸ್ವತಂತ್ರವಾಗಿ ಬೆಳೆಯಬಹುದು ಎಂದು ವಿವರಿಸಿದರು.

ಈ ಮಾತು ನಾಲ್ಕು ಸ್ನೇಹಿತರಿಗೂ ಹಿಡಿಸಿತು ಅದರಂತೆ ತಮಗೆ ಇರುವ ಜಮೀನಿನಲ್ಲಿ ಬಿತ್ತನೆ ಮಾಡೋಣ ಎಂದು ಬಿತ್ತನೆ ಚೆನ್ನಾಗಿ ಮಾಡಿದರು ಆದರೆ ಆ ವರ್ಷ ಮಳೆಯೇ ಬರಲಿಲ್ಲ.

  ಮೊದಲನೆಯವನು ನದಿಯ ಬಳಿ ಕುಳಿತು ಯೋಚಿಸಿದ ನಮ್ಮ ಭೂಮಿ ನದಿಯ ಮೇಲೆ ಇದೆ ನೀರು ಬರುವುದೇ ಕಷ್ಟ ಎಂದು ಚಿಂತಿಸಿದನು ಅದೇ ಎರಡನೆಯವನು ಯೋಚಿಸಿದನು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನದಿಯ ನೀರನ್ನು ತೆಗೆದುಕೊಂಡು ಹೋಗಿ ನನ್ನ ಹೊಲಕ್ಕೆ ದಿನನಿತ್ಯ ಹಾಕುತ್ತೇನೆ.

ಮೂರನೇಯವನ್ನು ಆಲೋಚಿಸಿದ ನದಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನೀರು ಧಾರಾಕಾರವಾಗಿ ಬರುತ್ತಿದೆ  ನಾನು ಪಟ್ಟಣದಲ್ಲಿ ಕೆಲಸ ಮಾಡಿದ ಅನುಭವವಿದೆ ನಾನು ಪಟ್ಟಣದಿಂದ ನೀರಿನ ಪಂಪ್ ಸೆಟ್ ಅನ್ನು ಖರೀದಿ ಮಾಡಿ ತನಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡನು ಹಾಗಾಗಿ ಒಳ್ಳೆಯ ಬೆಳೆ ಬೆಳೆಸಿದನು 

ನಾಲ್ಕನೇವನು ಚಾಣಾಕ್ಷ  ಅದ್ಭುತವಾಗಿ ಯೋಚಿಸಿದನು ನಾನು  ಬೋರ್ವೆಲ್ ಕೊರೆಸಿದರೆ ನೀರು ಯಾವಾಗಲೂ ಬರುತ್ತದೆ ಎಂದು ಚಿಂತನೆ ಮಾಡಿ ಬೋರ್ವೆಲ್ ಅನ್ನು ಕೊರೆಸಿದನು ಕರೆಂಟ್ ಇದ್ದಾಗ ನೀರನ್ನು ಶೇಖರಣೆ ಮಾಡಿ ಇಡುತ್ತಿದ್ದನು ತನಗೆ ಬೇಕಾದಾಗ ಬಳಸಿಕೊಳ್ಳುತ್ತಿದ್ದನು ಇದರಿಂದಾಗಿ ಸಮೃದ್ಧವಾಗಿ  ಬೆಳೆ ಕಂಡನು.

ಬೆಳೆಯೂ ಚೆನ್ನಾಗಿ ಬಂತು ಮತ್ತೆ ಇವನು ತುಂಬಾ ಶ್ರೀಮಂತನಾದನು ಎಲ್ಲರಿಗೂ ಬುದ್ಧಿ ಇದ್ದೇ ಇದೆ ಆದರೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ.  ನಾನು ಬುದ್ಧಿವಂತಿಕೆಯನ್ನು ಹೇಗೆ ಬಳಸಿಕೊಳ್ಳುತ್ತೇನೆಯೋ ಹಾಗೆಯೇ ನಾನು ಅಭಿವೃದ್ಧಿಯಾಗುತ್ತೇನೆ. ನಾನು ವಿಭಿನ್ನವಾಗಿ ಯೋಚಿಸಿ ಯಾವ ಸಾಧನೆ ಮಾಡಿದ್ದೇನೆ?

ಮಿತಿಯನ್ನು ದಾಟುವ ಹಾಗಿಲ್ಲ

ಯಾವುದೇ ಕೆಲಸ ಮಾಡಬೇಕಾದರೂ ಒಂದು ಇತಿ ಮಿತಿ ಅನ್ನೋದು ಇದ್ದೇ ಇರುತ್ತದೆ ಆದರೂ ಆ ಇತಿಮಿತಿಯನ್ನು ಮುರಿದು ಹಾಕಿ ಸಾಧನೆ ಮಾಡಿದವರು ಕೂಡ ಇದ್ದಾರೆ ವೈದ್ಯಕೀಯ ಶಾಸ್ತ್ರದ ಪ್ರಕಾರ ಒಂದು ಮೈಲಿಯನ್ನು 4ನಿಮಿಷದ ಒಳಗೆ ಓಡುವುದು ಅಸಾಧ್ಯ ಎಂದು ಹೇಳಿದ್ದರು.

 ಇದನ್ನು ಮೀರಿದರೆ ಮನುಷ್ಯನ ಮೇಲೆ ಒತ್ತಡ ಬೀಳುತ್ತದೆ ಇದರಿಂದಾಗಿ ಆರೋಗ್ಯ ಸ್ಥಿತಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು ಈ ಮಿತಿಯನ್ನು ದಾಟುವ ಹಾಗಿಲ್ಲ ಎಂದು ಓಟಗಾರರ ಕೋಚ್ ಗಳು ಈ ನಿಯಮವನ್ನು ಪಾಲಿಸುತ್ತಿದ್ದರು.

 ಆದರೆ ರೋಜರ್ ಬ್ಯಾರಿಸ್ಟರ್ ಈ ಮಿತಿಯನ್ನು ಮೀರಿ ಒಂದು ಮೈಲಿ ದೂರವನ್ನು 4ನಿಮಿಷದ ಒಳಗೆ ಓಡಿ ವಿಶ್ವದಾಖಲೆ ಮಾಡಿದರು

ನಂತರ ಪತ್ರಕರ್ತರ ಇವರನ್ನು ಬಂದು ಕೇಳಿದರು ವೇಗವಾಗಿ ಓಡಬಾರದು ಎನ್ನುವ ಮಿತಿಯನ್ನು ಇದ್ದರೂ ಕೂಡ ನೀವು ಹೇಗೆ ಓಡಿದ್ದೀರಿ ಎಂದು ಕೇಳಿದರು ಬ್ಯಾರಿಸ್ಟರ್ ಅವರು ಹೇಳಿದರು ಓಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಮನಸ್ಥಿತಿ ಅವ್ರಿಗೆ ಇರಬಹುದು.

 ನನ್ನ ಪ್ರಕಾರ ಇಲ್ಲ ಮನಸ್ಥಿತಿ ಹೇಗೆ ಇರುತ್ತೋ ಹಾಗೆ ಉದಾಹರಣೆಗೆ ನೋಡಿ ಎಷ್ಟೋ ಜನ ವಿಶೇಷ ಚೇತನರು ಅಂದರೆ ಕೈಯಿಲ್ಲ ಕಾಲುಗಳು ಇಲ್ಲ ಕಣ್ಣು ಇಲ್ಲ ಆದರೂ ಅವರೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ ಅದೇ ಇನ್ನೊಂದು ಕಡೆ ನೋಡಿದಾಗ ಗಟ್ಟಿ ಮುಟ್ಟಾಗಿದ್ದು ಕೂಡ ಅವರು ಭಿಕ್ಷೆ ಬೇಡುತ್ತಿದ್ದಾರೆ.

ನಾನು ಇಬ್ಬರಿಗೂ ಇದು ಸರಿ ಅದು ತಪ್ಪು ಎಂದು ಹೇಳಲಿಕ್ಕೆ ಸಾಧ್ಯವಿಲ್ಲ ಆದರೆ ಅವರ ಮನಸ್ಥಿತಿ ಹೇಗೆ ಇದೆಯೋ ಹಾಗೆ ಅವರ ಭವಿಷ್ಯವನ್ನು ಅವರು ಮಾತ್ರ ನಿರ್ಮಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ನಾನು ಮಿತಿಯನ್ನು ಮೀರಿ ನಾನು ಯಾವ ಸಾಧನೆ ಮಾಡಿದ್ದೇನೆ?

 

ಎಣ್ಣೆ ನೀರಿನ ಮೇಲೆ ತೇಲುತ್ತದೆ

ಒಬ್ಬ ಮನ್ಸೀಜ್ ಯುವಕ ಹಳ್ಳಿಯಲ್ಲಿ ಕಷ್ಟಪಟ್ಟು ದುಡಿಯುತ್ತಾನೆ ನಂತರ ನಾನು ಇನ್ನೂ ಹೆಚ್ಚು ಸಾಧನೆ ಮಾಡಬೇಕು ಎಂದು ಮಾರ್ಗದರ್ಶನಕ್ಕಾಗಿ ಬಾಬಾ ಅವರನ್ನು ಹುಡುಕಿಕೊಂಡು ಹೋಗುತ್ತಾನೆ.

 ಬಾಬಾ ಅವರು ಆಶ್ರಮದಲ್ಲಿ ಇರುತ್ತಾರೆ ಯುವಕ ನಾನು ಆಳವಾದ ಸಾಧನೆ ಮಾಡಬೇಕು ಎಂದು ಹೇಳುತ್ತಾನೆ ಅದಕ್ಕೆ ಬಾಬಾ ಅವರು ಅಡಿಗೆ ಮನೆಯಿಂದ ಎಣ್ಣೆ ಹಾಗೂ ನೀರನ್ನು ಸಮಪ್ರಮಾಣದಲ್ಲಿ ತಂದು ಯಾವುದೂ ತೂಕ ಇದೆ ಹೇಳು ಎಂದು ಕೇಳುತ್ತಾರೆ.

 ಯುವಕನು ಎಣ್ಣೆಯನ್ನು ಕೈಯಲ್ಲಿ ಹಿಡಿದು ಎಣ್ಣೆಯ ತೂಕ ಜಾಸ್ತಿ ಇದೆ ಎಂದು ಹೇಳುತ್ತಾನೆ ಆಗ ಬಾಬಾ ಅವರು ನೀರಿನ ಮೇಲೆ ಎಣ್ಣೆಯನ್ನು ಹಾಕುತ್ತಾರೆ ಎಣ್ಣೆ ನೀರಿನ ಮೇಲೆ ತೇಲುತ್ತದೆ ಇದರ ಅರ್ಥವೇನು? ಎಂದು ಕೇಳುತ್ತಾರೆ.

 ಯುವಕನಿಗೆ ಅರ್ಥವಾಗುವುದಿಲ್ಲ ಆಗ ಬಾಬಾ ಅವರು ವಿವರಿಸುತ್ತಾರೆ ಎಣ್ಣೆ ನಿನ್ನ ಪ್ರಕಾರ ತೂಕವಾಗಿ ತೂಕವಾಗಿ ಇರಬಹುದು ಆದರೂ ಎಣ್ಣೆ ಮೇಲೆ ತೇಲುತ್ತದೆ ಏಕೆಂದರೆ ನೀರಿಗಿಂತ ಎಣ್ಣೆ ತುಂಬಾ ಕಷ್ಟ ಪಟ್ಟಿದೆ. ಒಂದು ಬೀಜವಾಗಿ ಹೋಗಿ ಮಣ್ಣಿನಲ್ಲಿ ಇದ್ದು ನಂತರ ಗಿಡವಾಗಿ ಮರವಾಗಿ ನಂತರ ಬೀಜಗಳಾಗಿ ಆ ಬೀಜಗಳು ಬಿಸಿಲಿನಲ್ಲಿ ಒಣಗಿ ನಂತರ ಆ ಬೀಜಗಳಿಗೆ ಗಾಣದಲ್ಲಿ ಹಾಕಿದರಿಂದ ಎಣ್ಣೆ ಬರುತ್ತದೆ.

 ಹೆಚ್ಚು ಕಷ್ಟಪಟ್ಟಿದೆ ಆದುದರಿಂದ ಎಣ್ಣೆ ಮೇಲೆ ತೇಲುತ್ತದೆ ಎಂದು ಯುವಕನಿಗೆ ತಿಳಿಸುತ್ತಾರೆ ಸಾಧನೆ ಮಾಡಬೇಕು ಎನ್ನುವವರು ಕಷ್ಟಗಳು ನಷ್ಟಗಳು ಚಳಿ ಬಿಸಿಲು ಮಳೆ ಬಾಯಾರಿಕೆ ಹಸಿವು ನಿದ್ರೆ ಎಲ್ಲವೂ ಮೀರಿ ಮುಂದೆ ಸಾಗಬೇಕು ಆಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳುತ್ತಾರೆ. ಆಗ ಯುವಕನಿಗೆ ಅರ್ಥವಾಗುತ್ತದೆ.

ಕೋಪ ಬಂದಾಗ ಏನಾಗುತ್ತದೆ?

ಒಂದು ಊರಿನಲ್ಲಿ ಒಬ್ಬ ಸಜ್ಜನ ಯಶಸ್ಕರ್ ಮಾಲೀಕ ಇದ್ದನು ಅವನಿಗೆ ಒಬ್ಬನೇ ಮಗ ರಣಂಜೈ ಕೋಪಿಷ್ಟ 20 ವರ್ಷದವನಾಗಿದ್ದನು ಮನೆಯಲ್ಲಿ ಚೆನ್ನಾಗಿ ಬೆಳೆಸಿದ್ದರಿಂದ ಯಾವುದಕ್ಕೂ ಕಿರಿಕಿರಿ ಮುಂಗೋಪಿಯಾಗಿರುತ್ತಿದ್ದನು ತಂದೆಯವರು ಯಾವುದೋ ಕೆಲಸಕ್ಕೆ ಊರಿಗೆ ಹೋಗಿದ್ದರು ಆದುದರಿಂದ ಈ ಯುವಕ ಏನೋ ಯೋಚಿಸಿಕೊಂಡು ಆಕಡೆ ಈಕಡೆ ಕೂಪದಿಂದ ಸುತ್ತಾಡುತ್ತಿದ್ದನು.

 ಸುಮ್ಮನೆ ಯಾರೋ ಒಬ್ಬರು ಕೆಲಸಗಾರರು ನಿಮ್ಮ ಹೆಂಡತಿಗೆ ಯಾರೋ ಹೊಡೆದಿದ್ದಾರೆ. ಎಂದು ಹೇಳಿದನು ಈ ಮಾತನ್ನು ಕೇಳಿದ ಯುವಕ ತಕ್ಷಣ ಮನೆಯಲ್ಲಿದ್ದ ಬಂದೂಕವನ್ನು ತೆಗೆದುಕೊಂಡು ಆ ಕೆಲಸಗಾರ ಹೇಳಿದ ಸ್ಥಳದಲ್ಲಿ ಹೋಗಿ ಹುಡುಕುತ್ತಿದ್ದನು ಆ ಕಡೆಯಿಂದ ವಯಸ್ಸಾದ ಹಿರಿಯರು ಬರುತ್ತಿದ್ದರು.

 ಇವನ ಚಲನ ವಲನವನ್ನು ಗುರುತಿಸಿ ಯಾರನ್ನೂ ಹುಡುಕುತ್ತಿದ್ದೀರಿ ಎಂದು ಕೇಳಿದರು ನನ್ನ ಹೆಂಡತಿಯನ್ನು ಯಾರೂ ಹೊಡೆದಿದ್ದಾರೆ ಎಂದು ಕೇಳಿದೆ ಎಂದು ಹೇಳಿದನು ಆಗ ಹಿರಿಯರು ಹೇಳಿದರು ನಾನು ನೋಡಿದ ಹಾಗೆ ನೀನು ಮದುವೆಯೇ ಆಗಿಲ್ಲವಲ್ಲ ಯಾವಾಗ ಮದುವೆಯಾಯಿತು ಎಂದು ಪ್ರಶ್ನಿಸಿದರು.

ಯುವಕನಿಗೆ ಅರಿವಾಯಿತು ನಾನು ಮದುವೆಯೇ ಆಗಿಲ್ಲವಲ್ಲ ಕೋಪ ಬಂದಾಗ ಏನಾಗುತ್ತದೆ? ನಮ್ಮ ಪ್ರಜ್ಞೆ ಕಳೆದುಕೊಳ್ಳುವುದು ಸಹಜ ಆದ್ದರಿಂದ ನಮ್ಮ ಕೋಪವನ್ನು ನಾವೇ ನಿಯಂತ್ರಿಸಿಕೊಳ್ಳೋಣ.

]]>
https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%8e%e0%b2%b2%e0%b3%8d%e0%b2%b2%e0%b3%86%e0%b2%b2%e0%b3%8d%e0%b2%b2%e0%b3%82-%e0%b2%b9%e0%b3%81%e0%b2%a1%e0%b3%81%e0%b2%95%e0%b2%bf%e0%b2%a6%e0%b3%86/feed/ 0
ಹಿಂತಿರುಗಿ ಬಂದೆ ಬರುತ್ತದೆ https://babakategalu.com/%e0%b2%b9%e0%b2%bf%e0%b2%82%e0%b2%a4%e0%b2%bf%e0%b2%b0%e0%b3%81%e0%b2%97%e0%b2%bf-%e0%b2%ac%e0%b2%82%e0%b2%a6%e0%b3%86-%e0%b2%ac%e0%b2%b0%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/ https://babakategalu.com/%e0%b2%b9%e0%b2%bf%e0%b2%82%e0%b2%a4%e0%b2%bf%e0%b2%b0%e0%b3%81%e0%b2%97%e0%b2%bf-%e0%b2%ac%e0%b2%82%e0%b2%a6%e0%b3%86-%e0%b2%ac%e0%b2%b0%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/#respond Tue, 29 Apr 2025 04:40:00 +0000 https://babakategalu.com/?p=309 Read more]]> ಒಂದು ಸಂಸಾರ ಗಂಗಾ ನದಿಯ ಹತ್ತಿರಕ್ಕೆ ಹೋಗಿ ಸ್ನಾನ ಮಾಡುತ್ತಾರೆ ನಿರ್ಲಿಪ್ ಮಗು ಸ್ನಾನ ಏಕೆ ಮಾಡಬೇಕು ಎಂದು ಕೇಳಿದಾಗ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪವೂ ಕಳೆದುಹೋಗುತ್ತದೆ ಎಂದು ಮಿಲಿಂದ್ ಹಿರಿಯರು ಹೇಳುತ್ತಾರೆ.

 ಮಗುವಿಗೆ ಒಂದು ಸಂದೇಹ ಬರುತ್ತದೆ ಎಲ್ಲಾ ಜನರು ತಮ್ಮ ಪಾಪವನ್ನು ಗಂಗಾನದಿಯಲ್ಲಿ ಶುದ್ಧಿಕರಿಸಿಕೊಂಡರೆ ಗಂಗಾ ನದಿ ಹೇಗೆ ತನ್ನ ಪಾಪವನ್ನು ಶುದ್ಧಿ ಕರೆಸಿಕೊಳ್ಳುತ್ತದೆ? ಅದಕ್ಕೆ ನೇರವಾಗಿ ಗಂಗಾಮಾತೆಯನ್ನು ಮಗು ಕೇಳುತ್ತದೆ ಅಮ್ಮ ಗಂಗಾಮಾತೆ ಎಲ್ಲಾ ಜನರು ತಮ್ಮ ಪಾಪವನ್ನು ನಿನ್ನಲ್ಲಿ (ಗಂಗಾ ನದಿಯಲ್ಲಿ) ಶುದ್ಧೀಕರಣ ಮಾಡಿಕೊಳ್ಳುತ್ತಾರೆ.

 ಆದರೆ ಗಂಗಾಮಾತೆ ನಿಮ್ಮ ಪಾಪವನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳುತ್ತೀರಾ? ಆಗ ಗಂಗಾಮಾತೆಯು ನಾನು ಸಮುದ್ರಕ್ಕೆ ಹೋಗಿ ಸೇರಿದಾಗ ನಾನು ಶುದ್ಧನಾಗುತ್ತೇನೆ ಎಂದು ಹೇಳುತ್ತದೆ ಆಗ ಮಗುವು ಮತ್ತೆ ನೇರವಾಗಿ ಇದೇ ಪ್ರಶ್ನೆಯನ್ನು ಸಮುದ್ರಕ್ಕೆ ಕೇಳುತ್ತದೆ.

 ಸಮುದ್ರ ಹೇಳುತ್ತದೆ ನಾನು ಆವಿಯಾಗುವ ಮೂಲಕ ಶುದ್ಧೀ ಆಗುತ್ತೇನೆ ಇದೇ ಪ್ರಶ್ನೆಯನ್ನು ಆವಿಗೆ ಕೇಳಿದಾಗ ಆವಿಯೂ ಹೇಳುತ್ತದೆ ನಾನು ಮೋಡವಾಗಿ ಶುದ್ಧಿ ಆಗುತ್ತೇನೆ ಎಂದು ಹೇಳುತ್ತದೆ ಇದೇ ಪ್ರಶ್ನೆಯನ್ನು ಮೋಡಕ್ಕೆ ಕೇಳಿದಾಗ ಮೋಡವು ವಿನಯವಾಗಿ ಹೇಳುತ್ತದೆ.

  ನನ್ನಲ್ಲಿ ಏನೋ ಅಡಗಿದೆಯೋ ಅದೆಲ್ಲವೂ ಮಳೆಯ ಮೂಲಕ ಮತ್ತೆ ಹೊರ ಚೆಲ್ಲುತ್ತೇನೆ ನಾನು ಏನು ಇಟ್ಟುಕೊಳ್ಳುವುದಿಲ್ಲ ಬಂದಿದ್ದನ್ನು ವರ್ಗಾವಣೆ ಮಾಡುತ್ತೇನೆ ಮನುಷ್ಯರ ಮೇಲೆ ನದಿ ಮೇಲೆ ಸಮುದ್ರ ಮೇಲೆ ಎಲ್ಲಾ ಕಡೆಯೂ ಬೀಳುತ್ತೇನೆ ಅಂದರೆ ನಾನು ಅವರದ್ದು ಅವರಿಗೆ ಹಿಂತಿರುಗಿಸುತ್ತೇನೆ ಎಂದು ಹೇಳುತ್ತದೆ.

 ನಾವು ಮಾಡಿದ ಪಾಪ ನಮಗೆ ಹಿಂತಿರುಗುತ್ತದೆ ಎಂದು ಮಗು ಅರ್ಥಮಾಡಿಕೊಳ್ಳುತ್ತದೆ ಇದು ಒಂದು ಕಥೆಯಾಗಿರಬಹುದು ಆದ್ರೆ ಎಷ್ಟು ಸತ್ಯ ಅಡಗಿದೆ ಅಲ್ಲವೆ ನಾವು ಮಾಡಿದ್ದು ಎಲ್ಲೂ ಹೋಗುವುದಿಲ್ಲ ಸ್ವಲ್ಪ ಸಮಯದ ನಂತರ ಮತ್ತೆ ಹಿಂತಿರುಗಿ ಬಂದೆ ಬರುತ್ತದೆ ಆದುದರಿಂದ ನಾವು ಒಳ್ಳೆಯದನ್ನೇ ಮಾಡೋಣ.

ಒಳ್ಳೆಯ ಸಮಯ ಯಾವುದು?

ಒಂದು ಊರಿನಲ್ಲಿ ಒಬ್ಬ ಮನ್ಮಂತರ್ ಸುಸಂಸ್ಕೃತ ರಾಜ ಇರುತ್ತಾನೆ, ಒಳ್ಳೆಯ ರಾಜ್ಯಭಾರ ಮಾಡುತ್ತಿರುತ್ತಾನೆ ಇವನಿಗೆ ಒಂದು ಪ್ರಶ್ನೆ ಕಾಡುತ್ತದೆ ಕೆಲಸ ಯಾವಾಗ ಆರಂಭಿಸಬೇಕು ಒಳ್ಳೆಯ ಸಮಯ ಯಾವುದು ವಾರದ ಯಾವ ದಿನ ಸೂಕ್ತವಾದದ್ದು ಇದಕ್ಕೆ ಉತ್ತರ ನೀಡಿದರೆ ಒಳ್ಳೆಯ ಬಹುಮಾನ ಕೊಡುತ್ತೇನೆ ಎಂದು ಹೇಳುತ್ತಾನೆ.

ಬಹಳಷ್ಟು ಊರಿನ ಚಾಣಾಕ್ಷ ಪ್ರಜೆಗಳು ರಾಜನ ಹತ್ತಿರ ಬಂದು ತಮಗೆ ಗೊತ್ತಿರುವುದನ್ನು ತಿಳಿಸುತ್ತಾರೆ ರಾಜನು ಎಲ್ಲಾ ಸಲಹೆಗಳನ್ನು ಕೇಳಿಸಿಕೊಳ್ಳುತ್ತಾನೆ ಆದರೆ ಚಾಣಾಕ್ಷ ಪ್ರಜೆಗಳ ಮಾತುಗಳು ರಾಜನಿಗೆ ಇಷ್ಟವಾಗುವುದಿಲ್ಲ ಆಗ ರಾಜನು ನಿರಾಶನಾಗಿ ರಾತ್ರಿಯೆಲ್ಲ ಯೋಚಿಸಿ ಊರಿನ ಆಚೆ ಇರುವ ಬಾಬಾ ಅವರೊಂದಿಗೆ ಚರ್ಚಿಸಿದರೆ ನನ್ನ ಮನದಲ್ಲಿ ಕಾಡುತ್ತಿರುವ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ಯೋಚಿಸಿ ರಾಜ ವೇಷವನ್ನು ಬದಲಿಸಿಕೊಂಡು ಸಾಮಾನ್ಯ ವ್ಯಕ್ತಿಯಂತೆ ಹೋಗುತ್ತಾನೆ.

 ಆಗ ಬಾಬಾ ಅವರು ಗಿಡಗಳಿಗೆ ನೀರು ಹಾಕುತ್ತಿರುತ್ತಾರೆ ಆಗ ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಹೇಳುತ್ತಾನೆ ಆಗ ಬಾಬಾ ಅವರು ವ್ಯಕ್ತಿಯನ್ನು ಗಮನಿಸಿ ತನ್ನ ಕೆಲಸ ತಾವು ಮಾಡುತ್ತಿರುತ್ತಾರೆ ರಾಜನು ಇವರ ಹತ್ತಿರ ತಗ್ಗಿ ಬಗ್ಗಿ ಇರಬೇಕು ಎಂದು ಅವರು ಮಾಡುತ್ತಿದ್ದ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.

  ಕೆಲಸ ಮಾಡಿದರು ಬಾಬಾ ಅವರು ಇವನ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಸಂಜೆ ಆಗುತ್ತದೆ ನಂತರ ವಾಯುವಿಹಾರಕ್ಕೆ ಎಂದು ಬಾಬಾ ಹಾಗೂ ರಾಜ ಇಬ್ಬರು ಹೊರಡುತ್ತಾರೆ ಆಗ ಊರಿನ ಒಬ್ಬ ವ್ಯಕ್ತಿಯನ್ನು ಡಕಾಯಿತರು ಇರುವ ಹಣವನ್ನು ಕಿತ್ತುಕೊಂಡು ಕೈಗೆ ಚಾಕುವಿನಿಂದ ಚುಚ್ಚಿರುತ್ತಾರೆ ಆ ವ್ಯಕ್ತಿ ಕಾಪಾಡಿ ಕಾಪಾಡಿ ಎಂದು ಬರುತ್ತಿರುತ್ತಾನೆ.

ಬಾಬಾ ಹಾಗೂ ರಾಜ ಸಹಾಯಕ್ಕೆ ಬರುತ್ತಾರೆ ತಕ್ಷಣ ತಾನು ಹಾಕಿದ್ದ ಟವಲ್ ಅನ್ನು ಹರಿದು ಕಟ್ಟುತ್ತಾನೆ ನಂತರ ನಿಧಾನವಾಗಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಗಿಡಮೂಲಿಕೆಯಿಂದ ಚಿಕಿತ್ಸೆ ನೀಡುತ್ತಾರೆ ನಂತರ ನಿಧಾನವಾಗಿ ಅವನ ಮನೆಗೆ ಬಿಡುತ್ತಾರೆ ಆಗ ಆ ವ್ಯಕ್ತಿಯು ಬಾಬಾ ಅವರಿಗೆ ಹಾಗೂ ಈ ರಾಜನಿಗೆ ನಮ್ಮಿಂದ ನನಗೆ ತುಂಬಾ ಸಹಾಯವಾಯಿತು ನೀವು ನನ್ನ ಪ್ರಾಣವನ್ನು ಉಳಿಸಿದ್ದೀರಿ ಎಂದು ಮನದಾಳದಿಂದ ಧನ್ಯವಾದಗಳು ಅರ್ಪಿಸಿ ಹೋಗುತ್ತಾನೆ.

ರಾಜನಿಗೂ ಸಂತೋಷವಾಗುತ್ತದೆ ಮತ್ತೆ ಬೆಳಿಗ್ಗೆ ಎದ್ದು ಬಾಬಾ ಅವರ ಜೊತೆ ಕೆಲಸಕ್ಕೆ ಕೈಜೋಡಿಸುತ್ತಾನೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಾನೆ ಆದರೂ ಬಾಬಾ ಉತ್ತರಿಸುವುದಿಲ್ಲ ಮಧ್ಯಾಹ್ನ ಆಗುತ್ತದೆ ಆವಾಗ ಮರದ ಕೆಳಗೆ ಕುಳಿತುಕೊಂಡು ಬಾಬಾ ಅವರು ಹೇಳುತ್ತಾರೆ.

 ಮೊದಲ ನಿನ್ನ ಪ್ರಶ್ನೆ ಏನು ಎಂದು ಕೇಳುತ್ತಾರೆ ರಾಜನು ಉತ್ಸಾಹಭರಿತನಾಗಿ ಕೆಲಸ ಯಾವಾಗ ಆರಂಭಿಸಬೇಕು ನೀನು ನೆನ್ನೆ ಬಂದಾಗ ನೀನು ಏನು ಮಾಡಿದೆ ಎಂದು ರಾಜನಿಗೆ ಕೇಳುತ್ತಾರೆ ನೀವು ಕೆಲಸ ಮಾಡುತ್ತಿದ್ದೀರಿ ನಾನು ನಿಮ್ಮ ಜೊತೆ ಕೈ ಜೋಡಿಸಿದೆ ನೀನು ಬಂದ ತಕ್ಷಣವೇ ಕೆಲಸ ಆರಂಭಿಸಿದೆ ಅದೇ ನೀನು ಸ್ವಲ್ಪ ಸಮಯದ ನಂತರವೂ ಬೇಕಾದರೆ ಆರಂಭಿಸಬಹುದಾಗಿತ್ತು ಎಂದು ಕೇಳಿದಾಗ ಹೌದು ಎನ್ನುತ್ತಾನೆ.

. ಹಾಗೆಯೇ ಕೆಲಸ ಯಾವಾಗ ಬೇಕಾದರೂ ಆರಂಭಿಸಬಹುದು ಯಾವುದೇ ಕ್ಷಣದಲ್ಲಿಯೂ ಆರಂಭಿಸಬಹುದು ಎರಡನೆಯ ಪ್ರಶ್ನೆ ಒಳ್ಳೆಯ ಸಮಯ ಯಾವುದು ನೀನು ನೆನ್ನೆ ವ್ಯಕ್ತಿಗೆ ರಕ್ತ ಬರುತ್ತಿದ್ದಾಗ ಏನು ಮಾಡಿದೆ ನೋಡಿದ್ ತಕ್ಷಣ ಟವಲಿನಿಂದ ರಕ್ತ ಬರದಂತೆ ಕಟ್ಟಿದೆ.

 ಯಾವ ಸಂದರ್ಭ ಇರುತ್ತದೆ ಆ ಸಂದರ್ಭದಲ್ಲಿ ಆ ಕೆಲಸವನ್ನು ಮಾಡಬೇಕು ಅದೇ ಒಳ್ಳೆಯ ಸಮಯ ನೀನು ಆ ಸಮಯ ಬಿಟ್ಟು ಆಮೇಲೆ ಮಾಡುತ್ತಿದ್ದರೆ ವ್ಯಕ್ತಿ ಏನಾಗುತ್ತಿದ್ದನು?  ಎಲ್ಲಾ ಸಮಯವು ಒಳ್ಳೆಯದೇ ಎಂದು ಹೇಳಿದರು ರಾಜ ಹೌದು ಎಂದು ತಲೆ ಅಲ್ಲಾಡಿಸಿದ್ದನು.

 ವಾರದಲ್ಲಿ ಯಾವ ದಿನ ಸೂಕ್ತ ಅಂದರೆ ಎಲ್ಲಾ ದಿನವೂ ಸೂಕ್ತವೇ   ನೀನು ಇಲ್ಲಿಗೆ ಬರಬೇಕಾದರೆ ಇದೇ ದಿನ ಬರಬೇಕು ಎಂದು ಏನಾದರೂ ಯೋಚನೆ ಮಾಡಿದ್ದೀಯಾ ಇಲ್ಲ ನಿನ್ನ ಮನಸ್ಸಿನಲ್ಲಿ ಬಂತು ಹೋಗಬೇಕು ಎಂದು ಬಂದೆ ಅದೇ ರೀತಿ ಎಲ್ಲಾ ದಿನವೂ ಸೂಕ್ತವೇ ಎಂದು ತಿಳಿಸಿ ಹೇಳಿದರು.

   ನನ್ನ ಪ್ರಶ್ನೆಗೆ ನೀವು ಸರಿಯಾಗಿ ಉದಾಹರಣೆ ಸಮೇತ ತಿಳಿಸಿದ್ದೀರಿ ನಾನು ಈ ಊರಿನ ರಾಜ ಎಂದು ತನ್ನ ಪರಿಚಯ ಮಾಡಿಕೊಂಡನು ಬಾಬಾ ಅವರಿಂದ ಆಶೀರ್ವಾದ ಪಡೆದು ಹೊರಟನು ಒಳ್ಳೆಯ ಮನಸ್ಸಿನಿಂದ ಕೆಲಸ ಆರಂಭಿಸೋಣ.

 ನನಗೆ ಗೌರವಿಸುತ್ತಿರಬೇಕು

ಒಂದು ಹಳ್ಳಿಯಲ್ಲಿ ದೊಡ್ಡಣ್ಣ ಎಂಬುವವನು ಇದ್ದನು ಇವನಿಗೆ ಹಲವಾರು ಹೊಲ ಗದ್ದೆಗಳು ಮನೆಗಳು ತೋಟ ಜಮೀನು ಎಲ್ಲವೂ ಇತ್ತು, ಆದರೆ ಇದು ದೊಡ್ಡಣ್ಣ ದುಡಿದು ಅಲ್ಲಿ ವಂಶ ಪಾರಂಪರೆಯಾಗಿ ಉಳಿಸಿಕೊಂಡು ಬಂದಿದ್ದು ದೊಡ್ಡಣ್ಣನ ತಾತ ಅರಮನೆಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು.

ತಾತನವರಿಗೆ ಒಳ್ಳೆಯ ಗೌರವವು ಇತ್ತು ನಂತರ ತಂದೆಯವರು ಕೂಡ ಅರಮನೆಯಲ್ಲಿಯೇ ಇನ್ನೊಂದು ಹುದ್ದೆಯಲ್ಲಿ ಸೇವೆ ಸಲ್ಲಿಸಿದರು ಆದರೆ ದೊಡ್ಡಣ್ಣ ಅದೇ ರೀತಿ ಬದುಕಲು ಪ್ರಯತ್ನಿಸಿದನು ಆದರೆ ಸಾಧ್ಯವಾಗಲಿಲ್ಲ ಇರುವ ಜಮೀನಿನಲ್ಲೆ ವ್ಯವಸಾಯ ಮಾಡಿಕೊಂಡು ಕಾಲ ಕಳೆಯುತ್ತಿದ್ದನು.

ದೊಡ್ಡಣ್ಣನಿಗೆ ಒಂದು ದುರಭ್ಯಾಸ ಏನು ಎಂದರೆ ಏನೇ ಹೇಳಿದರು ನಾನು ಅದನ್ನು ಮಾಡಿದ್ದೇನೆ ನನ್ನದೇ ಸರಿ ಎಂದು ಹೇಳುವ ದುರಭ್ಯಾಸ ಯಾರಾದರೂ ಬಂದು ಈ ಸಾರಿ ಬೆಳೆ ಚೆನ್ನಾಗಿ ಆಯಿತು ಚೆನ್ನಾಗಿ ಸಂಪಾದನೆ ಮಾಡಿದೆ ಎಂದು ಹೇಳಿದರೆ ದೊಡ್ಡಣ್ಣ ನಾನು ನಿನಗಿಂತ ಚೆನ್ನಾಗಿ ಸಂಪಾದನೆ ಮಾಡಿದೆ ಎಂದು ಹೇಳುತ್ತಿದ್ದನು.

 ಯಾವುದೇ ಕಾರ್ಯಕ್ರಮಕ್ಕೆ ಸಮಾರಂಭಕ್ಕೆ ಹೋಗಬೇಕಾದರೆ ಸೂಟು ಬೂಟು ಹಾಕಿಕೊಂಡು ನಾವು ದೊಡ್ಡ ಕುಟುಂಬದವರು ಎಂದು ಹೇಳಿಕೊಳ್ಳುತ್ತಿದ್ದನು ಹಾಗೆಯೇ ದೊಡ್ಡ ದೊಡ್ಡ ವ್ಯಕ್ತಿಯ ಜೊತೆಯಲ್ಲಿಯೇ ಮಾತನಾಡಿಕೊಂಡು ಇರುತ್ತಿದ್ದನು.

 ನಾನು ಹೋದ ಕಡೆ ನನಗೆ ಗೌರವಿಸುತ್ತಿರಬೇಕು ಎನ್ನುವ ಭಾವನೆ ಸೂಕ್ತ ಮನಸ್ಸಿನಲ್ಲಿ ಅಡಗಿರುತ್ತದೆ ಯಾವ ವಿಷಯ ಹೇಳಿದರು ಆ ವಿಷಯ ನನಗೆ ಮೊದಲೇ ತಿಳಿದಿದೆ ನನಗಿಂತ ಬುದ್ದಿವಂತರು ಯಾರು ಇಲ್ಲ ಎಂದು ಜಂಬದಿಂದ ಹೇಳುತ್ತಿದ್ದನು ಹಳ್ಳಿಯ ಕೆಲವು ರೈತರು ನೀವು ಕೂಡ ಅರಮನೆಯಲ್ಲಿಯೇ ಇರಬೇಕಾಗಿತ್ತು ಎಂದಾಗ  ನಾನು ಸ್ವಾಭಿಮಾನಿಯಾಗಿ ಬದುಕಬೇಕು ಎದೆ ಉಬ್ಬಿಸಿ ಹೇಳುತ್ತಿದ್ದನು

ಒಂದು ಸಾರಿ ಹಳ್ಳಿಯ ಒಬ್ಬ. ರೈತ ನಾನು ಇವತ್ತು ಅರಮನೆಗೆ ಹೋಗುತ್ತಿದ್ದೇನೆ ಇವತ್ತು ಅಲ್ಲಿ ಕಾರ್ಯಕ್ರಮವಿದೆ ಎಂದು ಹೇಳುತ್ತಾನೆ ಕಾರ್ಯಕ್ರಮದ ನಂತರ ಪ್ರಸಾದವನ್ನು ಹಂಚುತ್ತಾರೆ ಅದನ್ನು ಪಡೆದು ಬರಲು ಹೋಗುತ್ತಿದ್ದೇನೆ ಎಂದಾಗ ದೊಡ್ಡಣ್ಣ ಹೇಳಿದ ಹೌದು ನನಗೂ ಅಲ್ಲಿಂದ ಆಹ್ವಾನ ಪತ್ರಿಕೆ ಬಂದಿದೆ.

 ನಾನು ಹೋಗುವುದು ಬೇಡವೋ ಎಂದು ಯೋಚಿಸುತ್ತಿದೆ ನೀನು ಹೋಗುತ್ತಿದ್ದೀಯಾ ಅಂದಮೇಲೆ ನಾನು ನಿನ್ನ ಜೊತೆ ಬರುತ್ತೇನೆ ಎಂದು ಸೂಟು ಬೂಟು ಹಾಕಿಕೊಂಡು ಬಂದನು ಇಬ್ಬರು ಅರಮನೆಯ ದ್ವಾರದ ಬಳಿಗೆ ಬಂದರು ಅಲ್ಲಿ ಎರಡು ದ್ವಾರಗಳಿದ್ದವು ಒಂದು ಸಾಮಾನ್ಯ ಜನರಿಗೆ ಇನ್ನೊಂದು ವಿಶೇಷ ವ್ಯಕ್ತಿಗಳಿಗೆ ಎರಡನ್ನು ಗಮನಿಸಿದ ದೊಡ್ಡಣ್ಣ ನನಗೆ ಎಷ್ಟು ಮರ್ಯಾದೆ ನೀಡುತ್ತಾರೆ.

 ಬಾ ನನ್ನ ಜೊತೆ ಎಂದು ವಿಶೇಷ ವ್ಯಕ್ತಿಗಳು ಹೋಗುವ ದ್ವಾರದಲ್ಲಿ ಹೋಗುತ್ತಾನೆ ಆಗ ಎಲ್ಲರೂ ಇವರನ್ನು ನಮಸ್ಕರಿಸಿ ಒಳಗೆ ಕಳುಹಿಸುತ್ತಾರೆ ಆಗ ದೊಡ್ಡಣ್ಣ ಹೇಳುತ್ತಾನೆ ನೋಡು ನನಗೆ ಹೇಗೆ ಗೌರವಿಸುತ್ತಿದ್ದಾರೆ ಆಗ ರೈತನಿಗೆ ಆಶ್ಚರ್ಯವಾಗುತ್ತದೆ ನಂತರ  ಮುಂದೆ ಒಂದು ಸಭೆ ನಡೆಯುತ್ತಿರುತ್ತದೆ.

 ಆ ಸಭೆಗೆ ಇವನು ಹೋಗಿ ಕುಳಿತುಕೊಳ್ಳುತ್ತಾನೆ ಆ ಸಭೇ ಏತಕ್ಕಾಗಿ ನಡೆಯುತ್ತಿದೆ ಎಂದು ಗೊತ್ತಿರುವುದಿಲ್ಲ ನಂತರ ಮಂತ್ರಿಗಳು ಬಂದು ಸಭೆಯಲ್ಲಿ ಕುಳಿತಿರುವ ಎಲ್ಲಾ ವಿಶೇಷ ವ್ಯಕ್ತಿಗಳನ್ನು ಕೇಳುತ್ತಾರೆ.

 ಈ ಸಾರಿ ನೀವು ಎಷ್ಟು ಮನೆಗಳು ಕೊಡಲಿಕ್ಕೆ ಸಾಧ್ಯವೊ ಅಷ್ಟನ್ನು ನಾವು ಬರೆಯುತ್ತೇವೆ ಎಂದು ಹೇಳುತ್ತಾರೆ ಆಗ ಕೆಲವರು ಎರಡು ಮನೆ ನಾಲ್ಕು ಮನೆ 5 ಮನೆ ಹೀಗೆ ಹೇಳುತ್ತಾರೆ ಇವನ ಸರದಿ ಬಂದಾಗ 5 ಮನೆ ಎಂದು ಹೇಳುತ್ತಾನೆ.

 ಅವರು ಬರೆದುಕೊಳ್ಳುತ್ತಾರೆ ನಂತರ ಒಂದು ನೆನಪಿನ ಕಾಣಿಕೆಯನ್ನು ಕೊಟ್ಟು ಶಾಲು ಹಾರ ಹಾಕಿ ಗೌರವಿಸಿ ಕಳುಹಿಸುತ್ತಾರೆ ಆಗ ದೊಡ್ಡಣ್ಣ ನನಗೆ ಎಷ್ಟು ಗೌರಿಸುತ್ತಾರೆ ಎಂದು ಹೇಳುತ್ತಾನೆ ನಂತರ ಮನೆಗೆ ಬರುತ್ತಾರೆ ಅರಮನೆಯಿಂದ ಮಾರನೆಯ ದಿನವೇ ಬಂದು 5 ಮನೆಯನ್ನು ವಶಪಡಿಸಿಕೊಳ್ಳುತ್ತಾರೆ.

ದೊಡ್ಡಣ್ಣ ವಶಪಡಿಸಿ ಕೊಂಡುವವರನ್ನು ಕೇಳುತ್ತಾನೆ ಆಗ ನೀವೇ ಐದು ಮನೆ ಕೊಡುತ್ತೇನೆ ಎಂದು ಹೇಳಿದರಲ್ಲ ಆದುದರಿಂದ ನಿಮ್ಮ ಐದು ಮನೆಗಳನ್ನು ನಾವು ನಿರಾಶ್ರಿತರಾಗಾಗಿ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ ವಿಶೇಷ ಸಭೆ ಏತಕ್ಕಾಗಿ ಏರ್ಪಡಿಸಿರುತ್ತಾರೆ ಎಂದರೆ ಬರಗಾಲ ಬಂದಿರುವುದರಿಂದ ಕೆಲವು ನಿರಾಶ್ರಿತ ವ್ಯಕ್ತಿಗಳು ಬಂದಿರುತ್ತಾರೆ.

 ಅವರಿಗೆ ಅರಮನೆಯಲ್ಲಿ ಅಷ್ಟು ಸ್ಥಳ ಇರುವುದಿಲ್ಲ ಅದಕ್ಕಾಗಿ ರಾಜರು ಒಂದು ಪ್ರಕಟಣೆಯನ್ನು ಹೊರಡಿಸುತ್ತಾರೆ ಯಾರು ಮಾಲೀಕರಿದ್ದೀರಿ ಹಾಗೂ ಹೆಚ್ಚು ಮನೆಗಳು ಇದೆಯೋ ಅವರು ನಿರಾಶ್ರಿತರಿಯಾಗಿ ನಿಮ್ಮಗೆ ಸಾಧ್ಯವಾದಷ್ಟು ಮನೆಗಳನ್ನು ನೀಡಬಹುದು ಎಂದು ಹೇಳಿರುತ್ತಾರೆ.

 ಅದೇ ಸಭೆಗೆ ದೊಡ್ಡಣ್ಣ ಹೋಗಿರುತ್ತಾನೆ ಇವನು 5 ಎಂದು ಹೇಳಿರುತ್ತಾನೆ, ಅದಕ್ಕಾಗಿ ಐದು ಮನೆಯನ್ನು ವಶಪಡಿಸಿಕೊಳ್ಳುತ್ತಾರೆ ಆಗ ದೊಡ್ಡಣ್ಣನ್ನು ಇನ್ನು ಮುಂದೆ ನಾನು ದೊಡ್ಡಸ್ತಿಕೆ ತೋರಿಸಿಕೊಳ್ಳುವುದಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಾನೆ. 

ಮಾತಿನಿಂದಲೇ ಕೊಂದುಬಿಟ್ಟೆ

ಭಗವಾನ್ ಬುದ್ಧನವರು ಒಂದು ಹಳ್ಳಿಯಲ್ಲಿ ತಮ್ಮ ಉಪನ್ಯಾಸವನ್ನು ಮುಗಿಸಿ ಬೇರೆ ಊರಿಗೆ ಹೋಗಬೇಕಾಗಿತ್ತು ಆ ಊರಿಗೆ ಹೋಗಬೇಕಾದರೆ ಒಂದು ಚಿಕ್ಕದಾದ ಕಾಡು ಸಿಕ್ಕೇ ಸಿಗುತ್ತದೆ ಅದನ್ನು ಪಾರು ಮಾಡಿ ಹೋಗಬೇಕು ಬೇರೆ ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಆ ಹಳ್ಳಿಯವರು ನೀವು ಹೋಗುವುದು ಬೇಡ ಏಕೆಂದರೆ ನೀವು ಹೋಗುವ ದಾರಿಯ ಮಧ್ಯದಲ್ಲಿ ಒಬ್ಬ ಅಂಗುಲಿ ಮಾಲ ಎಂಬುವವನೂ ಇದ್ದಾನೆ.

 ಅವನು ದೊಡ್ಡ ಕ್ರೂರಿ ಈಗಾಗಲೇ 99 ಜನರನ್ನು ಕೊಂದು ಅದರ ಲೆಕ್ಕಕ್ಕಾಗಿ ಅವನು ಒಂದೊಂದು ಬೆರಳನ್ನೂ ಹಾರ ಮಾಡಿಕೊಂಡು ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದಾನೆ ಈಗಾಗಲೇ ತೊಂಭತ್ತೊಂಭತ್ತು ಜನರನ್ನು ಕೊಂದಿದ್ದಾನೆ ಒಬ್ಬ ಮಾತ್ರ ಅವನಿಗೆ ಬೇಕಾಗಿದೆ ಅದರಲ್ಲಿ ನೀವು ಹೋದರೆ ಅವನು ಬಿಡುವುದಿಲ್ಲ ಅದಕ್ಕಾಗಿ ನೀವು ಹೋಗದೆ ಇರುವುದು ಒಳ್ಳೆಯದು ಎಂದು ಹೇಳುತ್ತಾರೆ.

ಬುದ್ಧರು ಮುಗುಳ್ನಗುತ್ತಾ ಹಾಗಾದರೆ ನಾನು ಕಾಡಿಗೆ ಹೋಗಲೇ ಬೇಕು ಎಂದು ತೀರ್ಮಾನ ಮಾಡುತ್ತಾರೆ ಬೇರೆ ಎಲ್ಲರೂ ಹೇಳುತ್ತಾರೆ ಬೇಡ ಬೇಡ ಎಂದರು ಬುದ್ಧರು ನಾನು ಹೋಗಿ ಅವನನ್ನು ನೋಡಿ ಅವನ ಕೋಪವನ್ನು ಕಡಿಮೆ ಮಾಡುತ್ತೀನಿ ಎಂದು ಹೇಳಿ ಹೊರಡುತ್ತಾರೆ.

 ನಿಧಾನವಾಗಿ ಬುದ್ಧರು ಬರುತ್ತಿದ್ದಂತೆಯೇ ಖಡ್ಗ ಹಿಡಿದು ಮುಂದೆ ನಿಂತು ನಗುತ್ತಾ ಹೇಳುತ್ತಾನೆ ಎಷ್ಟು ಧೈರ್ಯ ನಿನಗೆ ನೀನು ಬರುತ್ತಿದ್ದೀಯಲ್ಲಾ ಬೇರೆ ಇತರರು ಯಾರು ನಿನಗೆ ಹೇಳಲಿಲ್ಲವೇ ಎಂದು ಅಂಗುಲಿಮಾಲ ಹೇಳುತ್ತಾನೆ ಅದಕ್ಕೆ ಬುದ್ಧ ನಗುತ್ತಾ ಹೇಳುತ್ತಾರೆ.

 ನನಗೆ ಎಲ್ಲವೂ ಗೊತ್ತು ನೀನು ನನ್ನನ್ನು ಕೊಲ್ಲಬೇಕು ಎಂದು ಕಾಯುತ್ತಿದ್ದೀಯಾ ಎಂದು ಕೇಳುತ್ತಾರೆ ಆಗ ಅಂಗುಲಿಮಾಲ ಇಲ್ಲಿಯವರೆಗೆ 99 ಜನರನ್ನು ಕೊಂದಿದ್ದೇನೆ ಈಗ ನಿನ್ನನ್ನು ಕೊಂದರೆ ನಾನು ನೂರು ಜನರ ಕೊಂದಂತೆ ಆಗುತ್ತದೆ ನನ್ನ ಪ್ರತಿಜ್ಞೆ ಪೂರ್ಣವಾಗುತ್ತದೆ ಎಂದು ಹೇಳಿ ನಗುತ್ತಾನೆ.

 ಭಗವಾನ್ ಬುದ್ಧರು ಕೂಡ ನಗುತ್ತಾರೆ ಅಂಗುಲಿಮಾಲನಿಗೆ ಆಶ್ಚರ್ಯವಾಗುತ್ತದೆ ಮತ್ತೆ ಕೇಳುತ್ತಾನೆ ನಿನಗೆ ಹೆದರಿಕೆ ಆಗುವುದಿಲ್ಲವೇ ಎಂದಾಗ ನಗುತ್ತಾ ನನಗೆ ಯಾವುದೇ ರೀತಿಯ ಭಯ ಇಲ್ಲ ಎಂದು ಹೇಳುತ್ತಾರೆ. ಆಗ ಅಂಗುಲಿಮಾಲ ಬುದ್ಧರ ಧೈರ್ಯ ನೋಡಿ ನೀನು ಮುಂದೆ ಬರಬೇಡ ಓಡಿ ಹೋಗು ನಿನ್ನ ಪ್ರಾಣ ಉಳಿಸಿಕೊ ಎಂದು ಕರುಣೆಯಿಂದ ಹೇಳಿದನು.

ಹೋಗಲಿಲ್ಲವೆಂದರೆ ನಾನು ನಿನ್ನನ್ನು ಸಾಯಿಸುತ್ತೇನೆ ಎಂದಾಗ ತಕ್ಷಣ  ನನ್ನನ್ನು ಸಾಯಿಸುವುದಕ್ಕಿಂತ ಮುಂಚೆ ನನ್ನ ಮಾತನ್ನು ಒಂದು ನಡೆಸು ಕೊಡುವೆಯಾ ಎಂದು ಅಂಗುಲಿಮಾಲನಿಗೆ ಕೇಳುತ್ತಾರೆ ಅದಕ್ಕೆ ಅಂಗುಲಿಮಾಲ ಆಗಲಿ ಎನ್ನುತ್ತಾನೆ. ಆಗ ನೀನು ನಿಂತಿರುವ ಪಕ್ಕದಲ್ಲಿ ಇರುವ ಮರದ ಒಂದು ಕೊಂಬೆಯನ್ನು ಕತ್ತರಿಸು ಎಂದು ಹೇಳುತ್ತಾರೆ ಮರದ ಕೊಂಬೆಯನ್ನು ಕತ್ತರಿಸುತ್ತಾನೆ.

ಕತ್ತರಿಸಿದ ಮರದ ಕೊಂಬೆಯನ್ನು ಮತ್ತೆ ಜೋಡಿಸು ಎಂದು ಹೇಳಿದರು ಆಗ ಅಂಗುಲಿಮಾಲ ಜೋಡಿಸಲು ಹೇಗೆ ಸಾಧ್ಯ ಎನ್ನುತ್ತಾನೆ ಆಗ ಈ ಸೃಷ್ಟಿಯಲ್ಲಿರುವ ಯಾವುದೇ ವಸ್ತುವನ್ನು ನಾವು ಸೃಷ್ಟಿ ಮಾಡಲು ಸಾಧ್ಯವಿಲ್ಲದಿದ್ದರೆ ಅದನ್ನು ನಾಶ ಗೊಳಿಸುವ ಹಕ್ಕು ಕೂಡ ನಮಗೆ ಇಲ್ಲ ಎಂದು ಹೇಳುತ್ತಾರೆ.

 ಅಂಗುಲಿಮಾಲನಿಗೆ ಇವರ ಮಾತುಗಳನ್ನು ಕೇಳಿ ದಂಗು ಬಡಿದಂತೆ ನಿಂತುಕೊಳ್ಳುತ್ತಾನೆ ನೀನು ನಿನ್ನ ರಕ್ಷಣೆಗೆ ಕತ್ತಿಯ ಸಹಾಯ ಪಡೆಯುತ್ತಿದ್ದೀಯ ನಿನ್ನ ಮನದಲ್ಲಿ ಭಯವಿದೆ ನನ್ನ ಹತ್ತಿರ ಧೈರ್ಯ ಎನ್ನುವ ಶಕ್ತಿಶಾಲಿಯಾದ ಆಯುಧವಿದೆ ಎಂದು ಹೇಳುತ್ತಾರೆ ಈ ಮಾತು ಕೇಳಿ ತನ್ನಲ್ಲಿರುವ ಕೋಪ ಸಿಟ್ಟು ದ್ವೇಷ ನಕರಾತ್ಮಕ ಭಾವನೆಗಳು ಆ ಕ್ಷಣದಲ್ಲೇ ಬೆಣ್ಣೆಯಂತೆ ಕರಗಿತು.

ಮೊದಲು ನಿನ್ನ ಕೋಪವನ್ನು ನೀನು ಗೆಲ್ಲು ಎಂದಾಗ ಅಂಗುಲಿಮಾಲನ ಮನಸು ಪರಿವರ್ತನೆಯಾಗುತ್ತದೆ. ಅಂಗುಲಿಮಾಲ ನಾನು ಬೇರೆಯವರನ್ನು ಆಯುಧದಿಂದ ಕೊಲ್ಲುತ್ತಿದೆ ಆದರೆ ನೀನು ನನ್ನನ್ನು ಮಾತಿನಿಂದಲೇ ಕೊಂದುಬಿಟ್ಟೆ ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಒಳ್ಳೆಯ ಮನುಷ್ಯನಾಗುತ್ತಾನೆ. ಈಗಲೂ ಶಾಂತಿಯಿಂದ ಬದುಕಿದವರು ನಮ್ಮ ಮನಸ್ಸಿನಲ್ಲಿ ಉಳಿದಿದ್ದಾರೆ.

ನೀನು ಧೈರ್ಯವಂತ

ತಾಯಿಗೆ ಮಗ ನನಗೆ ಏನಾದರೂ ಕೊಡಿಸಿ ಎಂದು ಕೇಳುತ್ತಿದ್ದನು ಅದಕ್ಕೆ ತಾಯಿಯು ಯೋಚನೆ ಮಾಡಿ ಸಂತೆಗೆ ಹೋಗಿ ಒಂದು ಜೀವಂತ ಗಿಳಿಯನ್ನು ತಂದು ಕೊಟ್ಟರು ಮತ್ತೆ ಹೇಳಿದರು ಇದನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸಮಯಕ್ಕೆ ಸರಿಯಾಗಿ ಆಹಾರ ಹಾಕಬೇಕು ಏಕೆಂದರೆ ನಮ್ಮ ಮನೆಯಲ್ಲಿ ಒಂದು ಬೆಕ್ಕು ಇದೆ ಆಗ ಹುಡುಗ  ಶರ್ಲಿನ್ ಸಂತೋಷಪಟ್ಟನು.

 ಶರ್ಲಿನ್ ತಾಯಿ ಹೇಳಿದ ಎಲ್ಲಾ ಮಾತಿಗೂ ಹೌದು ಎಂದು ಒಪ್ಪಿಕೊಂಡನು  ನೋಡುವುದಕ್ಕೂ ಗಿಣಿ ಆಕರ್ಷಕವಾಗಿತ್ತು ಆಗಾಗ ಪಂಜರದಿಂದ ಆಚೆ ಬರುತ್ತಿತ್ತು ನೋಡುತ್ತಿತ್ತು ಮತ್ತೆ ಪಂಜರದ ಒಳಗೆ ಹಾಕುತ್ತಿದ್ದನು ಎಲ್ಲರೂ ಬಂದಾಗ ಇದನ್ನು ಪ್ರೀತಿಯಿಂದ ಮಾತನಾಡುತ್ತಿದ್ದರು ನಂತರ  ಶರ್ಲಿನ್ ಗೆ ಗಿಳಿಯ ಮೇಲೆ ಆಸಕ್ತಿ ಹೊರಟು ಹೋಯಿತು.

 ಸದಾ ಬೆಕ್ಕು ಗಿಳಿ ತಿನ್ನುವುದಕ್ಕೆ ಕಾಯುತ್ತಲೇ ಇತ್ತು ರಕ್ಷಣೆ ಮಾಡಲು  ಶರ್ಲಿನ್ ಗೆ ಬೇಸರವಾಯಿತು ಇತ್ತು ಇದನ್ನು ಅರಿತ ತಾಯಿ ಬೆಕ್ಕಿನಿಂದ ಎಚ್ಚರಿಕೆಯಾಗಿ ಇರಬೇಕು ಎಂದು  ಶರ್ಲಿನ್ ಗೆ ಆಗಾಗ ಎಚ್ಚರಿಸುತ್ತಿದ್ದರು ಗಗನ್ ಹೇಳಿದನು ನೀವೇನು ಯೋಚನೆ ಮಾಡಬೇಡಿ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದನು ತಾಯಿ ಸಂತೆಗೆ ಹೋದಾಗ  ಶರ್ಲಿನ್ ಸ್ನೇಹಿತ ಬಂದು ಗಿಳಿಯನ್ನು ನೋಡಿದನು.

ಸ್ನೇಹಿತ ಗಿಳಿಯನ್ನು ನೋಡಿ ತುಂಬಾ ಸಂತೋಷ ಪಟ್ಟನು ಎಷ್ಟು ಚೆನ್ನಾಗಿದೆ ಗಿಳಿ ಯಾರು ಕೊಟ್ಟರು ಎಲ್ಲಿಂದ ತಂದರು ಎಂದು ಎಲ್ಲಾ ವಿಷಯವನ್ನು ಕೇಳಿದನು  ಶರ್ಲಿನ್ ಸ್ನೇಹಿತ ಅರುಣನಾದವನು ಈ ರೀತಿ ಗಿಳಿ ನನಗಿದ್ದರೆ ನಾನು ತುಂಬಾ ಸಂತೋಷ ಪಡುತ್ತಿದ್ದೆ ಹಾಗೆಯೇ ನೋಡು ನನ್ನ ಹತ್ತಿರ ಒಂದು ವಿಶೇಷವಾದ ಬುಗುರಿ ಇದೆ ನೋಡು ಎಂದು ಬುಗುರಿಯನ್ನು ತಿರುಗಿಸಿದನು.

  ಶರ್ಲಿನ್  ಗೆ ದಿನನಿತ್ಯ ಗಿಳಿ ನೋಡಿದ್ದರಿಂದ ಬುಗುರಿ ತುಂಬಾ ಇಷ್ಟವಾಯಿತು ಅದಕ್ಕೆ ಅರುಣ ಕೇಳಿದನು ನೀನು ನನಗೆ ಗಿಣಿ ಕೊಡು ನಾನು ನಿನಗೆ ಬುಗುರಿಯನ್ನು ಕೊಡುತ್ತೇನೆ ಎಂದು ಹೇಳಿದನು ಮೊದಲು  ಶರ್ಲಿನ್ ಒಪ್ಪಲಿಲ್ಲ ನಂತರ ಅರುಣ ಹಾಗೆ ಹೀಗೆ ಏನೇನೋ ಸುಳ್ಳು ಹೇಳಿ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಪುಸಲಾಯಿಸಿ ಗಿಣಿಯನ್ನು ಪಡೆದುಕೊಂಡನು.

 ನಮ್ಮ ತಾಯಿಗೆ ಏನು ಹೇಳಬೇಕು ಎಂದಾಗ   ಅರುಣ ಉಪಾಯ ಹೇಳಿದನು ನೀನೇನು ಯೋಚನೆ ಮಾಡಬೇಡ ಬುಗುರಿಯನ್ನು ಇಟ್ಟುಕೋ ಮತ್ತೆ ತಾಯಿಗೆ ಹೇಳು ಬೆಕ್ಕು ಗಿಳಿಯನ್ನು ತಿಂದಿದೆ ಆಗ ಅವರು ಸುಮ್ಮನಾಗುತ್ತಾರೆ ಎಂದನು  ಶರ್ಲಿನ್ ನಾನು ಒಂದು ಸಾರಿ ಬುಗುರಿಯನ್ನು ತಿರುಗಿಸುತ್ತೇನೆ ಎಂದು ಕೇಳಿದಾಗ ಅರುಣ ಇಲ್ಲ ನೀನು ನನಗೆ ಗಿಳಿ ಕೊಟ್ಟರೆ ಮಾತ್ರ ನಾನು ಕೊಡುತ್ತೇನೆ ಎಂದು ಹೇಳಿದನು.

ಮತ್ತೆ ನಾನು ನಿನಗೆ ಗಿಳಿಯನ್ನು ನೀಡಿದರೆ ನೀನು   ಎಲ್ಲಿ ಸಾಗುತ್ತಿಯಾ ಎಂದು ಪ್ರಶ್ನಿಸಿದನು ಆಗ ಅರುಣ ತಕ್ಷಣ ಬುದ್ಧಿವಂತಿಕೆಯಿಂದ  ನಮ್ಮ ಮನೆಯ ಹಿಂಭಾಗದಲ್ಲಿ ಬಹಳಷ್ಟು ಸ್ಥಳ ಇದೆ ಅಲ್ಲಿ ನಾನು ಸಾಕುತ್ತೇನೆ  ನಾನು ಮಾತ್ರ ಅಲ್ಲಿಗೆ ಹೋಗುತ್ತೇನೆ ಬೇರೆಯವರು ಬರುವುದಿಲ್ಲ ಎಂದು ಭರವಸೆ ನೀಡಿದನು ಕೊನೆಗೆ  ಶರ್ಲಿನ್ ಗಿಳಿಯನ್ನು ಕೊಡಲು ಒಪ್ಪಿದನು ನಂತರ ಗಿಳಿಯನ್ನು ಕೊಟ್ಟನು ನಂತರ ಮನಸ್ಸಿನಲ್ಲಿ ಭಯ ಏಕೆಂದರೆ ತಾಯಿ ಪ್ರೀತಿಯಿಂದ ಕೊಡಿಸಿದ್ದಾರೆ.

  ತಾಯಿ ಮನಸ್ಸಿಗೆ ಹೇಗೆ ಆಗಬಹುದು ಎಂದು ಯೋಚಿಸಿದನು ನಾನು ಕೊಡ ಬಾರದಾಗಿತ್ತು ಎಂದು ಚಿಂತೆ ಮಾಡಿದನು ಸ್ವಲ್ಪ ಸಮಯದ ನಂತರ ತಾಯಿ ಬಂದರು ಎಲ್ಲವೂ ಪರಿಶೀಲಿಸಿ ಗಿಳಿ ಎಲ್ಲಿ ಎಂದು ಕೇಳಿದರು ನಾನು ಆಟ ಆಡಿಕೊಂಡಿದ್ದೆ ನನಗೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದನು ಆಗ ಅಮ್ಮ ಎಲ್ಲಾ ಕಡೆಯೂ ನೋಡಿದರೂ ಮತ್ತೆ  ಶರ್ಲಿನ್ ಗೆ ಹೇಳಿದರು.

 ಆಚೆ ಅಂಗಳದಲ್ಲಿ ಎಲ್ಲಾ ಕಡೆ ನೋಡು ಎಂದು ಹೇಳಿದರು ಎಲ್ಲಾ ಕಡೆ ನೋಡಿದ ನಂತರ ಇದು ಬೆಕ್ಕೆ ತಿಂದಿದೆ ಅದಕ್ಕೆ ಬೆಕ್ಕು ಸಿಕ್ಕರೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಕೋಪದಿಂದ ಇದ್ದರು ತಾಯಿಗೆ ಬೆಕ್ಕಿನ ಮೇಲೆ ಅನುಮಾನ ಇತ್ತು ಆದ್ದರಿಂದ ತಾಯಿಗೆ  ಬೆಕ್ಕೆ ತಿಂದಿದೆ ಎಂದು ಸಂದೇಹ ಬಂತು.

  ಶರ್ಲಿನ್ ಬೆಕ್ಕಿಗೆ ಸರಿಯಾದ ಶಿಕ್ಷೆ ಸಿಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಂಡನು ಅದಕ್ಕೆ ಬೆಕ್ಕು ಬರುತ್ತಿದಂತೆ ದೂರ ಓಡಿಸಿದನು ಆದರೆ ಬೆಕ್ಕಿಗೆ ಅರ್ಥ ಆಗುತ್ತದೆಯೇ ಇಲ್ಲ ಅದು ಮಿಯಾಂ ಮಿಯಾವ್ ಎಂದು ಒಳಗಡೆ ಬಂತು ನಿಧಾನವಾಗಿ ಕೊಠಡಿಯಲ್ಲಿ ಹಾಕಿ ಮುಚ್ಚಿದನು.

 ಇದು ತಾಯಿ ನೋಡಲಿಲ್ಲ ನಂತರ  ಶರ್ಲಿನ್ ಗೆ ತಿಂಡಿಯನ್ನು ಇಟ್ಟು ತಿಂಡಿ ತಿನ್ನು ಎಂದು ತಾಯಿ ಆ ಕಡೆ ಹೋದರು ಆದರೆ  ಶರ್ಲಿನ್ ಗೆ ಊಟ ಮಾಡಲು ಮನಸ್ಸು ಬರುತ್ತಿಲ್ಲ ಮತ್ತೆ ತಾಯಿ ಬಂದು ಸಮಾಧಾನ ಮಾಡಿದರು ಬೇಸರಿಸಿಕೊಳ್ಳಬೇಡ ತಿಂಡಿ ತಿನ್ನು ಎಂದು ಸಮಾಧಾನದಿಂದ ಹೇಳಿದಾಗ   ಶರ್ಲಿನ್ ನೊಂದುಕೊಂಡನು ಏಕೆಂದರೆ ನನ್ನ ತಪ್ಪಿನಿಂದ ಬೆಕ್ಕಿಗೆ ಹೊಡೆಯುತ್ತಾರಲ್ಲ ಎಂದು ಆತಂಕದಲ್ಲಿ ಮುಳುಗಿದನು ನಂತರ ಕಣ್ಣಿನಲ್ಲಿ ನೀರು ಬಂತು ತಾಯಿ ಬಂದು ಕೇಳಿದರು.

 ಏಕೆ ಅಳುತ್ತಿದೆಯಾ ಇರಲಿ ಬಿಡು ಇನ್ನೊಂದು ಗಿಳಿ ತರೋಣ ಎಂದು ಸಮಾಧಾನ ಪಡಿಸಿದರು ನಂತರ ನಿಧಾನವಾಗಿ ಬೆಕ್ಕು ಬಂತು ತಾಯಿ ಹೊಡೆಯಲು ಹೋದರೂ ಮೇಲಿಂದ ಬಿದ್ದು ಸ್ವಲ್ಪ ಏಟಾಯ್ತು ಆಗ  ಶರ್ಲಿನ್ ಗೆ ಬೇಸರವಾಯಿತು ಅಮ್ಮನಿಗೆ ಹೇಳಿದ ಅಮ್ಮ ಬೆಕ್ಕಿಗೆ ಹೊಡೆಯಬೇಡಿ ಏಕೆ ಎಂದು ಕೇಳಿದಾಗ ನಿಜವನ್ನು ಹೇಳಿದನು.

 ಆಗ ಬೆಕ್ಕಿಗೆ ಹೊಡೆಯಲಿಲ್ಲ ನಂತರ ಗಿಳಿ ಎಲ್ಲಿ ಎಂದು ಕೇಳಿದಾಗ ಗಿಳಿ ನನ್ನ ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ ಎಂದು ಸತ್ಯ ಹೇಳಿದನು ಆಗ ತಾಯಿಯು   ಎಂದಿಗೂ ಇತರರ ಮೇಲೆ ಅಪವಾದ ಹೊರಿಸಬಾರದು ಉದಾಹರಣೆಗೆ ನೀನು ಹೇಳದಿದ್ದರೆ ನಾನು ಬೆಕ್ಕಿಗೆ ಚೆನ್ನಾಗಿ ಹೊಡೆಯುತ್ತಿದ್ದೆ ಎಂದು ಹೇಳಿದರು.

 ನಿನ್ನ ತಪ್ಪಿನಿಂದ ಬೆಕ್ಕು ಏಟು ತಿನ್ನ ಬೇಕಾಗಿತ್ತು ಎಂದು ಹೇಳಿದಾಗ  ಶರ್ಲಿನ್ ಗೆ ಅರ್ಥವಾಯಿತು ಮತ್ತೆ ತಾಯಿ ಹೇಳಿದರು ನೀನು ಸತ್ಯ ಹೇಳಿದ್ದೀಯಾ ಅಂದರೆ ನೀನು ಧೈರ್ಯವಂತ ಎಂದು ಹೊಗಳಿದರು.

 ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದರು ಆಗ  ಶರ್ಲಿನ್ ಗೆ ಮನಸ್ಸಿನಲ್ಲಿದ್ದ ತಳಮಳ ಕಡಿಮೆ ಆಯಿತು ನೆಮ್ಮದಿ ಸಿಕ್ಕಿತು.

]]>
https://babakategalu.com/%e0%b2%b9%e0%b2%bf%e0%b2%82%e0%b2%a4%e0%b2%bf%e0%b2%b0%e0%b3%81%e0%b2%97%e0%b2%bf-%e0%b2%ac%e0%b2%82%e0%b2%a6%e0%b3%86-%e0%b2%ac%e0%b2%b0%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/feed/ 0
ನಮ್ಮ ಜೊತೆ ಇದ್ದರೆ ಸಾಕು https://babakategalu.com/%e0%b2%a8%e0%b2%ae%e0%b3%8d%e0%b2%ae-%e0%b2%9c%e0%b3%8a%e0%b2%a4%e0%b3%86-%e0%b2%87%e0%b2%a6%e0%b3%8d%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/ https://babakategalu.com/%e0%b2%a8%e0%b2%ae%e0%b3%8d%e0%b2%ae-%e0%b2%9c%e0%b3%8a%e0%b2%a4%e0%b3%86-%e0%b2%87%e0%b2%a6%e0%b3%8d%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/#respond Mon, 28 Apr 2025 04:40:00 +0000 https://babakategalu.com/?p=307 Read more]]> ಒಂದು ಸಾರಿ ತನಿಷ್ ಶ್ರೀಮಂತರ ಕಾರ್ ಸ್ಟಾರ್ಟ್ ಆಗುತ್ತಿರುವುದಿಲ್ಲಾ ಅಲ್ಲೇ ಹತ್ತಿರದಲ್ಲಿ ಇರುವ ನಿರ್ಮಯ್ ಮೆಕಾನಿಕ್ ಅನ್ನು ಕರಿಸುತ್ತಾರೆ ಮೆಕಾನಿಕ್ ಎಲ್ಲವನ್ನು ನೋಡಿ ಚೆಕ್ ಮಾಡಿ ಸರಿ ಮಾಡುತ್ತಾನೆ ನಂತರ ಶ್ರೀಮಂತರು ಮೆಕಾನಿಕ್ ಗೆ ಹಣವನ್ನು ಕೊಡುತ್ತಾರೆ ಆಗ ಕೇಳುತ್ತಾರೆ ನಿಮ್ಮ ಮಗ ಏನು ಮಾಡುತ್ತಿದ್ದಾನೆ ಆಗ ಮೆಕಾನಿಕ್ ಪ್ರಾಮಾಣಿಕವಾಗಿ ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ.

  ಶ್ರೀಮಂತ ಹೆಮ್ಮೆಯಿಂದ ನನ್ನ ಮಗ ಈ ಊರಿನ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾನೆ ಹಾಗೆಯೇ ನಂತರ ಲಂಡನ್ ನಲ್ಲಿ ಓದುತ್ತಾನೆ ಶ್ರೀಮಂತನಾಗಿ ಬದುಕುತ್ತಾನೆ ಎಂದು ಗರ್ವದಿಂದ ಹೇಳುತ್ತಾರೆ ಆಗ ಮೆಕಾನಿಕ್ ಆದವನು ನೋಡಿ ಸ್ವಾಮಿ ನಮಗೆ ಅದೆಲ್ಲವೂ ಅಷ್ಟು ತಿಳಿಯುವುದಿಲ್ಲ.

  ವಿದ್ಯಾಭ್ಯಾಸ ಮಾಡಲಿ ಮಾಡದೆ ಹೋಗಲಿ ನಮ್ಮನ್ನು ನೋಡಿಕೊಂಡು ನಮ್ಮ ಜೊತೆ ಇದ್ದರೆ ಸಾಕು ಎಂದು ಹೇಳುತ್ತಾನೆ.  ಅದಕ್ಕೆ ಶ್ರೀಮಂತ ನೀವು ಸಾಧಾರಣವಾಗಿ ಬೆಳೆದು ಬಂದಿರುತ್ತೀರಿ ನಿಮ್ಮ ಯೋಚನೆಯು ಸಾಧಾರಣ ರೀತಿಯಲ್ಲಿಯೇ ಇರುತ್ತದೆ ಎಂದು ಕೀಳಾಗಿ ಹೇಳುತ್ತಾನೆ ಮೆಕಾನಿಕ್ ಆದವನು ತಲೆಕೆಡಿಸಿಕೊಳ್ಳದೆ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಾನೆ.

ಹಲವು ವರ್ಷಗಳ ನಂತರ ಊರಿನಲ್ಲಿ ಒಂದು ಮದುವೆ ಇರುತ್ತದೆ ಆ ಮದುವೆಗೆ ಶ್ರೀಮಂತ ಬಂದಿರುತ್ತಾನೆ ಆಗ ಮೆಕಾನಿಕ್ ಕೂಡ ತನ್ನ ಮಗನೊಂದಿಗೆ ಬಂದಿರುತ್ತಾನೆ ಶ್ರೀಮಂತನನ್ನು ನೋಡಿದ ತಕ್ಷಣ ಹೇಗಿದ್ದೀರಾ?  ಶ್ರೀಮಂತ ಹೇಳಿದ ಮಾತು ನೆನಪಿಗೆ ಬರುತ್ತದೆ ನಂತರ ಪ್ರೀತಿಯಿಂದ ನೋಡಿ ಮೆಕಾನಿಕ್ ಇವನು ನನ್ನ ಮಗ ಒಂದು ಕಾರ್ ಶೋರೂಮ್ ಇಟ್ಟಿದ್ದಾನೆ ಕೆಲವು ಕೆಲಸಗಾರರಿಗೆ ಕೆಲಸ ಕೊಟ್ಟಿದ್ದಾನೆ ಸ್ವಂತವಾಗಿ ಬದುಕುತ್ತಿದ್ದಾನೆ.

 ಎಲ್ಲಿ ನಿಮ್ಮ ಮಗ ಎಂದು ಕೇಳುತ್ತಾನೆ ಆಗ ಶ್ರೀಮಂತರ ಮುಖ ಬಾಡಿ ಹೋಗುತ್ತದೆ ನನ್ನ ಮಗ ಲಂಡನ್ ನಲ್ಲಿ ಇದ್ದಾನೆ ಅಲ್ಲಿಯೇ ಮದುವೆ ಮಾಡಿಕೊಂಡು ಸೆಟಲ್ ಆಗಿದ್ದಾನೆ ಎಂದು ನಿರಾಶೆಯಿಂದ ಹೇಳುತ್ತಾರೆ.

ಹೆಚ್ಚು ವಿದ್ಯಾಭ್ಯಾಸ ಪಡೆದು ಗುಲಾಮನಾಗಿ ಬದುಕುವುದೊ ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿ ಸ್ವಂತವಾಗಿ ಬದುಕುವುದೊ ಯಾವುದು ಒಳ್ಳೆಯದು ನಾವು ಮಾಡಿದ್ದೆ ಸರಿ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ ಕಾಲಚಕ್ರ ಯಾವಾಗ ಬೇಕಾದರೂ ಬದಲಾಗುತ್ತದೆ.

 ಅವರ ಕೆಲಸದಿಂದ ಅವರ ಬಟ್ಟೆಯಿಂದ ಅವರ ಶ್ರೀಮಂತಿಕೆಯಿಂದ ಗೌರವಿಸುವುದು ಬೇಡ ಅವರ ಮಾನವೀಯತೆಗೆ ಗೌರವಿಸೋಣ.

ಯತ್ನಿಸಿ ಸೋತಿದ್ದೇವೆ

ಒಂದು ಸಾರಿ ತ್ರಯಂಬಿಕ್ ರಾಜನು ಕಾಡಿಗೆ ಬೇಟೆಯಾಡಲು ಹೋಗುತ್ತಾನೆ ಆಗ ರಾಜನಿಗೆ ಒಂದು ಆಕರ್ಷಕವಾದ ಜಿಂಕೆ ಕಾಣುತ್ತದೆ ಇದನ್ನು ಬೇಟೆಯಾಡಬೇಕು ಎಂದು ಬೇಟೆಯಾಡಲು ಸಿದ್ಧನಾಗಿ ಹಲವಾರು ಬಾಣಗಳನ್ನು ಬಿಟ್ಟರು.

 ಆ ಜಿಂಕೆ ಗುರಿಗೆ ಸಿಗುವುದಿಲ್ಲ ರಾಜನಿಗೆ ಇದೊಂದು ಸವಾಲು ಎನಿಸಿ ಮತ್ತೆ ನಾಳೆ ಬಂದು ಬೇಟೆಯಾಡುತ್ತಾನೆ ಬಹಳಷ್ಟು ಸಾರಿ ಪ್ರಯತ್ನ ಪಟ್ಟರು ಆ ಜಿಂಕೆಯು ತಪ್ಪಿಸಿಕೊಳ್ಳುತ್ತಿರುತ್ತದೆ ನಂತರ ಆ ಕಾಡಿನಲ್ಲಿ ಇರುವ ಬೇಟೆಗಾರರಿಗೆ ಹೇಳುತ್ತಾನೆ ಈ ಜಿಂಕೆಯನ್ನು ಹಿಡಿದು ಕೊಡಿ ಎಂದಾಗ ಆಗ ಬೇಟೆಗಾರರು ಹೇಳುತ್ತಾರೆ.

  ಇಲ್ಲಿಯವರೆಗೆ ನಾವು ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ ಮನುಷ್ಯರನ್ನು ನೋಡಿದ ತಕ್ಷಣ ಅದು ಶರವೇಗದಿಂದ ಓಡಿ ಹೋಗುತ್ತಿದೆ  ನಾವು ಜಿಂಕೆಯನ್ನು ಹಿಡಿಯಲು ಯತ್ನಿಸಿ ಸೋತಿದ್ದೇವೆ ಆದುದರಿಂದ ನೀವು ಈ ಕನಸನ್ನು ಬಿಟ್ಟುಬಿಡಿ ಎಂದು ಹೇಳಿದರು ಈ ಮಾತು ಕೇಳಿ ರಾಜನಿಗೆ ನಿರಾಶೆಯಾಯಿತು.

 ರಾಜನು ಇದೇ ಆಲೋಚನೆಯಲ್ಲಿ ಮುಳುಗಿದನು ನಂತರ ನಮ್ಮ ಬಾಬಾ ಅವರನ್ನು ಭೇಟಿಯಾಗಿ ಹಲವಾರು ದಿನವಾಗಿದೆ ಅವರನ್ನು ಕೇಳಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಬಾಬಾ ಅವರ ಬಳಿಗೆ ಬರುತ್ತಾನೆ ಬಾಬಾ ಅವರಿಗೆ ಪ್ರಣಾಮಮಾಡಿ ನಂತರ ತನ್ನ ಸಮಸ್ಯೆಯನ್ನು ಹೇಳುತ್ತಾನೆ.

 ಬಾಬಾ ಅವರು ಸಮಾಧಾನವಾಗಿ ಹೇಳುತ್ತಾರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಉದ್ಯಾನವನದಲ್ಲಿ ಬರುತ್ತದೆ. ಎಂದು ರಾಜನಿಗೆ ಭರವಸೆ ನೀಡಿ ಕಳುಹಿಸುತ್ತಾರೆ.

 ರಾಜನಿಗೆ ಒಂದು ಮನಸ್ಸು ನಂಬುತ್ತದೆ ಇನ್ನೊಂದು ಮನಸ್ಸು ಸುಮ್ಮನೆ ಹೇಳುತ್ತಿರಬಹುದು ಏನೇ ಇರಲಿ ಕಾದು ನೋಡೋಣ ಎಂದು ಅರಮನೆಗೆ ಹೋಗುತ್ತಾನೆ ಹದಿನೈದು ದಿನದ ನಂತರ ಹೇಳಿದ ಹಾಗೆಯೇ ರಾಜನ ಹತ್ತಿರ ಜಿಂಕೆ ಇರುತ್ತದೆ ರಾಜನಿಗೆ ಆಶ್ಚರ್ಯವಾಗುತ್ತದೆ.

 ಬಾಬಾ ಅವರೇ ನಾನು ಹಾಗೂ ಬೇಟೆಗಾರರೇ ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ ನೀವು ಹೇಗೆ ಜಿಂಕೆಯನ್ನು ಹಿಡಿದಿದ್ದೀರಿ ಹೇಳಿ ಎಂದು ಕೇಳಿದಾಗ ಬಾಬಾ ಅವರು ಹೇಳುತ್ತಾರೆ ನಾನು ಕಾಡಿಗೆ ಹೋಗಿ ಜಿಂಕೆಗಳು ಎಲ್ಲೆಲ್ಲಿ ಇರುತ್ತವೆ ಎಂದು ಗಮನಿಸಿದೆ ಮತ್ತೆ ಏನೇನು ತಿನ್ನುತ್ತವೆ ಅದನ್ನು ಗಮನಿಸಿದೆ ಜಿಂಕೆಗಳು ತಿನ್ನುವ ಹುಲ್ಲಿನ ಮೇಲೆ ಸ್ವಲ್ಪ ಜೇನುತುಪ್ಪವನ್ನು ಸವರಿದೆ.

 ಈ ಹುಲ್ಲನ್ನು ತಿಂದಿತು ಈ ಹುಲ್ಲಿನ ರುಚಿಗಾಗಿ ಮತ್ತೆ ಅಲ್ಲಿಯೇ ಬಂದು ಹುಲ್ಲು ತಿನ್ನುತ್ತಿದ್ದವು ಇದನ್ನು ಗಮನಿಸಿದ ನಂತರ ನಾನು ಮತ್ತೆ ಸ್ವಲ್ಪ ದೂರದಲ್ಲಿ ಇರುವ ಹುಲ್ಲಿಗೆ ಜೇನು ಹಚ್ಚಿದೆ ನಂತರ ಆ ಜಿಂಕೆಗಳು ಅಲ್ಲಿಗೆ ಬಂದು ಹುಲ್ಲು ತಿನ್ನಲು ಪ್ರಾರಂಭಿಸಿತು ಮತ್ತೆ 2 ದಿನದ ನಂತರ ಬೇರೆ ಕಡೆ ಹುಲ್ಲಿಗೆ ಜೇನನ್ನು ಸವರಿದೆ ನಂತರ ಅಲ್ಲಿಗೆ ಬಂದು ಹುಲ್ಲನ್ನು ತಿನ್ನತೊಡಗಿದವು.

 ಕೊನೆಗೆ ಅರಮನೆಯ ಅಂಗಳದಲ್ಲಿ ಇರುವ ಹುಲ್ಲಿನಲ್ಲಿ ಜೇನನ್ನು ಹಚ್ಚಿದೆ ಈ ರುಚಿಗಾಗಿ ಜಿಂಕೆಗಳೇ ಇಲ್ಲಿಗೆ ಬಂದಿದೆ ಪ್ರತಿಯೊಬ್ಬರಿಗೂ ಯಾವುದಾದರೂ ಒಂದೊಂದು ದೌರ್ಬಲ್ಯ ಇದ್ದೇ ಇರುತ್ತದೆ ಅದನ್ನು ನಾನು ಬಳಸಿಕೊಂಡು ಸುಲಭವಾಗಿ ಹಿಡಿದಿದ್ದೇನೆ ಎಂದು ಹೇಳಿದರು.

  ಜಿಂಕೆ ಸಿಕ್ಕಿ ಹಾಕಿಕೊಂಡಿದ್ದು ಏಕೆ ಎಂದರೆ ಜಿಂಕೆಯ ದುರ್ಬಲತೆಯಿಂದಾಗಿ ಹಾಗೆಯೇ ಮನುಷ್ಯನಿಗೂ ಹಲವಾರು ದುರ್ಬಲತೆಗಳು ಇವೆ. ನನ್ನ ಯಾವ ದುರ್ಬಲತೆಯಿಂದ ನಾನು ಯಾವುದಕ್ಕೆ ಬಲಿಯಾಗಿದ್ದೇನೆ?

ಶರಣಾಗತಿ, ಶ್ರದ್ಧೆ, ಶಿಸ್ತು.

ಒಂದು ಊರಿನ ಕೊನೆಯಲ್ಲಿ ಒಂದು ಆಶ್ರಮ ಇತ್ತು ಅಲ್ಲಿ ತಪೋಮಯ್ ಗುರುಗಳು ಇದ್ದರು ಶಿಷ್ಯ ಬಂದು ನಾನು ಬೃಹತ್ ಆಗಿ ಬೆಳೆಯಬೇಕು ಅದಕ್ಕಾಗಿ ಮಾರ್ಗದರ್ಶನ ಮಾಡಿ ಎಂದು ಕೇಳಿಕೊಂಡನು. ಆಗ ಗುರುಗಳು ದಿನನಿತ್ಯ ಪಾಠ ಪ್ರವಚನಗಳು ಅಭ್ಯಾಸಗಳು ಮಾಡುತ್ತಿದ್ದೀಯಾ ಮುಖ್ಯವಾಗಿ ಶರಣಾಗತಿ ಬರಬೇಕು ಶ್ರದ್ದೆಯಿಂದ ಕಲಿಯಬೇಕು ಶಿಸ್ತುಗಳು ಪಾಲನೆ ಮಾಡಲೇಬೇಕು ಎಂದು ಹೇಳುತ್ತಿದ್ದರು.

 ಕೆಲವು ದಿನಗಳ ನಂತರ ಗುರುಗಳು ನಾನು ಬೇರೆ ಊರಿಗೆ ಹೋಗಿ ಬರುತ್ತೇನೆ ಅಲ್ಲಿಯವರೆಗೂ ನೀನು ನಾನು ಹೇಳಿದಂತೆ ನಿನ್ನ ಅಭ್ಯಾಸವನ್ನು ಮುಂದುವರಿಸು ಎಂದು ಹೇಳಿ ಹೊರಟರು ಶಿಷ್ಯನಾದವನು ದಿನನಿತ್ಯ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತ ಕಾಲದಲ್ಲಿ ಎದ್ದು ಸ್ನಾನ ಮಾಡಿ ಆಶ್ರಮವನ್ನು ನೀಟಾಗಿ ಇಟ್ಟು ಬಟ್ಟೆಗಳನ್ನು ತೊಳೆದು ಒಣಗಿಸಿ ನಂತರ ತನ್ನ ಹೊಟ್ಟೆಪಾಡಿಗಾಗಿ ದಿನನಿತ್ಯ ಭಿಕ್ಷೆ ಬೇಡಿಕೊಂಡು ಬರುತ್ತಿದ್ದನು.

ಬಟ್ಟೆ ತೊಳೆದು ಒಣಗಿದ ನಂತರ ಮನೆಯಲ್ಲಿ ಇಟ್ಟರೆ ಇಲಿಗಳು ಬಂದು ಬಟ್ಟೆಗಳನ್ನು ಸ್ವಲ್ಪ ಸ್ವಲ್ಪ ತಿಂದು ಹೋಗುತ್ತಿದ್ದವು. ದಿನನಿತ್ಯ ಬಂದು ಸೂಜಿಯಿಂದ ಹೋಲಿಯಬೇಕಾಗಿತ್ತು ಇದು ಶಿಷ್ಯನಿಗೆ ತುಂಬಾ ಕೋಪ ಬಂತು ನಂತರ ಯೋಚನೆ ಮಾಡಿದನು ಇದಕ್ಕೆ ಸರಿಯಾದ ಮಾರ್ಗ ಹುಡುಕಲೇಬೇಕು ಎಂದು ಯೋಚನೆ ಮಾಡಿದ ನಂತರ ಒಂದು ಬೆಕ್ಕನ್ನು ತಂದನು ತಾನು ತಂದ ಭಿಕ್ಷೆಯಲ್ಲಿ ಬೆಕ್ಕಿಗೂ ಸ್ವಲ್ಪ ಹಾಕುತ್ತಿದ್ದನು.

 ಚಿಕ್ಕ ಮನೆಯಲ್ಲಿ ಇರುವುದರಿಂದ ಇಲಿ ಕಾಟ ತಪ್ಪಿತು ಸಮಾಧಾನವಾಯಿತು ಆದರೆ ಬೆಕ್ಕಿಗೆ ಸಾಕುವುದು ಸ್ವಲ್ಪ ಕಷ್ಟವಾಯಿತು ಏಕೆಂದರೆ ಬೆಕ್ಕಿಗೆ ಹಾಲನ್ನು ಕೊಡಬೇಕು ಆಗ ಶಿಷ್ಯ ಯೋಚನೆ ಮಾಡಿದನು ಏಕೆ ನಾನು ಒಂದು ಹಸುವನ್ನು ತರಬಾರದು ಎಂದು ಯೋಚನೆ ಮಾಡಿದನು ಕಷ್ಟಪಟ್ಟು ಒಂದು ಹಸುವನ್ನು ಖರೀದಿ ಮಾಡಿಕೊಂಡು ಬಂದನು.

 ಸ್ವಲ್ಪ ಹಾಲನ್ನು ಬೆಕ್ಕಿಗೆ ಹಾಕಿ ಇನ್ನು ಉಳಿದ  ಹಾಲನ್ನು ಮಾರಿದನು ಇದರಿಂದ ಸ್ವಲ್ಪ ಹಣ ಬಂತು ನಾನು ಸಾಧನೆ ಮಾಡಬೇಕಾದರೆ ಇದು ಅಡ್ಡಿ ಬರುತ್ತಿದೆ ಎಂದು ಯೋಚನೆ ಮಾಡಿ ಒಂದು ಕೆಲಸಗಾರನನ್ನು ನೇಮಿಸಿದ ನಂತರ ಕೆಲಸಗಾರರಿಗೆ ಸಂಬಳ ನೀಡಬೇಕು ಏನು ಮಾಡುವುದು ಎಂದು ಯೋಚನೆ ಮಾಡಿ ತನ್ನ ಸುತ್ತ ಇರುವ ಭೂಮಿಯಲ್ಲಿಯೇ ತರಕಾರಿಗಳನ್ನು ಬೆಳೆಸಿದನು.

 ತರಕಾರಿಗಳು ಸಮೃದ್ಧವಾಗಿ ಬೆಳೆಯಿತು ನಂತರ ತೆಂಗಿನ ಮರಗಳನ್ನು ನೆಟ್ಟಿದನು ಬೆಳೆಯುತ್ತಾ ಬೆಳೆಯುತ್ತಾ ಗುಡಿಸಲು ಇದ್ದಂತಹ ಸ್ಥಳದಲ್ಲಿ ಈಗ ದೊಡ್ಡ ಮಂದಿರದಂತೆ ಆಗಿದೆ ಹಲವಾರು ವರ್ಷಗಳ ನಂತರ ಗುರುಗಳು ಬಂದರು ನನ್ನ ಶಿಷ್ಯ ಹೇಗಿರಬಹುದು ಎಂದು ಯೋಚಿಸಿದರು ಬಂದು ನೋಡಿದರೆ ಗುಡಿಸಲು ಇದ್ದ ಸ್ಥಳದಲ್ಲಿ ಮಂದಿರವಾಗಿದೆ.

 ಗುರುಗಳು ಅಶ್ಚರ್ಯಚಕಿತರಾದರು ನಂತರ ನಿಧಾನವಾಗಿ ನೋಡೋಣ ಎಂದು ಬಂದಾಗ ಶಿಷ್ಯ ನೋಡಿದ ನಂತರ ಓಡಿಬಂದು ಗುರುಗಳಿಗೆ ನಮಸ್ಕರಿಸಿದನು ಆಗ ಗುರುಗಳು ಹೇಳಿದರು ಇಷ್ಟೆಲ್ಲಾ ಹೇಗೆ ಬೆಳೆದೆ ಎಂದು ಕೇಳಿದರು ಆಗ ಶಿಷ್ಯನು ಹೇಳಿದನು ನೀವು ಹೇಳಿದ ಮೂರು ಮಾತು ಈಗಲೂ ನಾನು ಮರೆತಿಲ್ಲ ಶರಣಾಗತಿ, ಶ್ರದ್ಧೆ, ಶಿಸ್ತು. ಇದರಿಂದ ನಾನು ಇಷ್ಟು ಬೆಳೆದಿದ್ದೇನೆ ಎಂದು ತಾನು ಬೆಳೆದು ಬಂದ ಕಥೆಯನ್ನು ಹೇಳಿದನು.

 ಆಗ ನಿಜವಾಗಿಯೂ ಗುರುಗಳಿಗೆ ತುಂಬಾ ಸಂತೋಷವಾಯಿತು ನಾವು ಕೂಡ ಅಷ್ಟೇ ಇನ್ನಷ್ಟು ಅಭಿವೃದ್ಧಿ ಆಗಬೇಕಾದರೆ, ಶರಣಾಗತಿ, ಶ್ರದ್ಧೆ, ಶಿಸ್ತು ನಿಯಮಗಳನ್ನು ನಾವು ಪಾಲಿಸೋಣ.

ಮೂರು ಪ್ರಶ್ನೆಗಳ ಅರ್ಥ

ಸಾಕ್ರೆಟಿಸ್ ವಿಭಿನ್ನ ಸ್ವಭಾವದವರು ಹಲವಾರು ಜನರು ಇವರನ್ನು ಅರ್ಥಮಾಡಿ ಕೊಳ್ಳಲು ಆಗಲೇ ಇಲ್ಲ ಹಾಗೆಯೇ ಇವರ ರೀತಿ ನೀತಿಗಳು ಹಾಗೆ ಇರುತ್ತಿದ್ದವು ಬಹಳಷ್ಟು ಜನರಿಗೆ ಇವರು ಅರ್ಥವೇ ಆಗುತ್ತಿರಲಿಲ್ಲ ಇವರ ಬಳಿ ಶಿಷ್ಯರಾಗಿ ಬರಬೇಕಾದ್ರೆ ಕೆಲವು ಪರೀಕ್ಷೆಗಳನ್ನು ಕೊಡುತ್ತಿದ್ದರು.

 ಪರೀಕ್ಷೆಗಳಲ್ಲಿ ಶಿಷ್ಯರು ಪಾಸಾದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು ಮಿಕ್ಕಿದವರನ್ನು ಕಳಿಸಿಬಿಡುತ್ತಿದ್ದರು ಒಂದು ಸಾರಿ ಒಬ್ಬ ಶಿಷ್ಯ ತುಂಬಾ ಆತುರದಲ್ಲಿ ಓಡೋಡಿ ಬಂದನು ಉತ್ಸಾಹ ಕುತೂಹಲದಿಂದ ಒಂದು ಮುಖ್ಯವಾದ ವಿಷಯವನ್ನು ಹೇಳಲು ಬಂದಿದ್ದೇನೆ ಎಂದು ಹೇಳುತ್ತಾನೆ.

 ಸಾಕ್ರೆಟಿಸ್ ರವರು ಆಗ ಸಮಾಧಾನ ಸಮಾಧಾನ ಅವಸರ ಬೇಡ ಸಾಕ್ರೆಟಿಸ್ ಅವರು ನನ್ನ 3 ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಯಾವ ವಿಷಯವನ್ನು ಬೇಕಾದರು ಹೇಳಬಹುದು ಎಂದು ಹೇಳಿದರು ಯಾವ 3 ಪ್ರಶ್ನೆಗಳು ಎಂದು ಶಿಷ್ಯನು ಕೇಳಿದನು

1 ಒಂದನೇ ಪ್ರಶ್ನೆ ನೀನು ಹೇಳುವ ವಿಷಯ ಸತ್ಯವೇ? ಆ ವಿಷಯ ನೀನು ಸತ್ಯ ವೆಂಬುದು ನಿನಗೆ ತಿಳಿದಿದೆಯೇ ಅಥವಾ ಪರೀಕ್ಷಿಸಿದ್ದಿಯೋ ನೋಡಿದ್ದೇಯೇ?

2 ನೀನು ಹೇಳಬೇಕು ಎನ್ನುವ ವಿಷಯ ಹೇಳಲೇ ಬೇಕೆ ಅಥವಾ ಹೇಳದಿದ್ದರೆ ನನಗೆ ಏನಾದರೂ ತೊಂದರೆ ಆಗುತ್ತದೆಯೇ?

3 ಈ ವಿಷಯ ಹೇಳಲು ನಾನೇ ಸರಿಯಾದ ಮನುಷ್ಯನೇ ವಿಷಯ ಹೇಳಿದರೆ ಏನಾದರೂ ಪ್ರಯೋಜನ ಇದೆಯೇ? ಎಂದು ಕೇಳಿದರು. ಆ ಶಿಷ್ಯನು ಈ ವಿಷಯವನ್ನು ನಾನು ಖಚಿತವಾಗಿ ನೋಡಲಿಲ್ಲ ಬರಿ ಕೇಳಿದ್ದೇನೆ ಹೇಳಿದರೂ ತೊಂದರೆಯಿಲ್ಲ ಹೇಳದಿದ್ದರೂ ಅದು ಏನೂ ಸಮಸ್ಯೆ ಆಗುವುದಿಲ್ಲ.

 ಈ ವಿಷಯ ಕೇಳುವುದರಿಂದ ನನಗೆ ಏನು ಪ್ರಯೋಜನ ಹಾಗೆ ನಿನಗೆ ಪ್ರಯೋಜನವಿದೆಯೇ ಇಷ್ಟನ್ನು ಹೇಳಿದ ಮೇಲೆ ಆ ಶಿಷ್ಯನು ಮಾತನಾಡಲೇ ಇಲ್ಲ ಇದು ತಮಾಷೆಯಾಗಿ ಕಾಣಿಸಬಹುದು ಆದರೆ ಇದರ ಮೂರು ಪ್ರಶ್ನೆಗಳ ಅರ್ಥಮಾತ್ರ ತುಂಬಾ ವಿಶಾಲವಾಗಿದೆ.

 ನಾವು ಯಾವುದೇ ವಿಷಯವನ್ನು ಇತರರಿಗೆ ಹೇಳಬೇಕಾದರೆ ಈ 3ಪ್ರಶ್ನೆಗಳನ್ನು ನೆನಪಿನಲ್ಲಿ ಇಟ್ಟು ಕೊಂಡು ಹೇಳಿದರೆ ಅವರಿಗೂ ನಮಗೂ ಪ್ರಯೋಜನವಾಗುತ್ತದೆ.

ಭಗವಂತನಿಗೂ ಮೆಚ್ಚುಗೆ ಆಗುತ್ತದೆ

ಒಂದು ಊರಿನಲ್ಲಿ ಒಂದು ದೊಡ್ಡ ಸರ್ವಧರ್ಮ ಮಂದಿರ ಇರುತ್ತದೆ ಯಾರು ಬೇಕಾದರೂ ಬಂದು ಉಳಿದು ಹೋಗಬಹುದು ಊಟ ವಸತಿ ಎಲ್ಲವೂ ಉಚಿತವಾಗಿರುತ್ತದೆ ಇದನ್ನು ನೋಡಿಕೊಳ್ಳುವವರು ಸಹ ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುತ್ತಾರೆ.

 ಒಂದು ಸಾರಿ ದೂರದ ಊರಿನಿಂದ ಒಬ್ಬ ದೊಡ್ಡ ಇಂಧೀವರ್ ಶ್ರೀಮಂತ ಬರುತ್ತಾನೆ ಅವನು ಮಂದಿರದ ವ್ಯವಸ್ಥಾಪಕರಿಗೆ ನಮಸ್ಕಾರ ಮಾಡಿ ನನ್ನ ಹತ್ತಿರ ಲಕ್ಷಗಟ್ಟಲೆ ಹಣ ಇದೆ ಈ ಮಂದಿರದ ಅಭಿವೃದ್ಧಿಗೆ ನನ್ನ ಕಡೆಯಿಂದ ಯಾವ ರೀತಿ ಸಹಾಯ ಮಾಡಬಹುದು ತಿಳಿಸಿ ಎಂದು ವಿನಂತಿಸಿಕೊಳ್ಳುತ್ತಾನೆ.

ವ್ಯವಸ್ಥಾಪಕರು ಇವರ ಉದಾರತೆಗೆ ಸಂತೋಷವಾಗುತ್ತದೆ ಮಂದಿರ ಇನ್ನಷ್ಟು ಅಭಿವೃದ್ಧಿ ಗೊಳಿಸಬಹುದು ವ್ಯವಸ್ಥಾಪಕರು ಶ್ರೀಮಂತನಿಗೆ ಇನ್ನೂ ಒಂದು ಕಟ್ಟಡ ಕಟ್ಟಬಹುದು ಎಂದು ಹೇಳಿ ಎರಡು ನಿಮಿಷ ದೀರ್ಘವಾಗಿ ಯೋಚಿಸಿ ಇನ್ನೊಂದು ದೇವರು ಮೆಚ್ಚುವ ಕಾರ್ಯವನ್ನು ಮಾಡಬಹುದು ಎಂದು ಹೇಳಿದರು.

 ಆ ಶ್ರೀಮಂತ ಏನು ಮಾಡಬೇಕು ಎಂದಾಗ ವ್ಯವಸ್ಥಾಪಕರು ಸದ್ಯಕ್ಕೆ ಈ ಊರಿನಲ್ಲಿ ಬರಗಾಲ ಬಂದಿದೆ ಊರಿನ ಜನರಿಗೆ ತಿನ್ನುವುದಕ್ಕೂ ಕಷ್ಟವಾಗಿದೆ ಅದಕ್ಕಾಗಿ ನಿಮ್ಮ ಹತ್ತಿರ ಇರುವ ಹಣದಲ್ಲಿ ನೀವೇ ಊರಿನ ಜನರಿಗೆ ಆಹಾರವನ್ನು ನೀಡಬಹುದು ಆಗ ಆ ಶ್ರೀಮಂತನು ಯೋಚನೆ ಮಾಡಿ ಮಂದಿರದ ಪಕ್ಕದಲ್ಲೇ ಒಂದು ಕಟ್ಟಡವನ್ನು ನಿರ್ಮಾಣಮಾಡಿ ಅದರಲ್ಲಿ ದವಸ ಧಾನ್ಯಗಳನ್ನು ತರಿಸಿದನು.

 ಅವನೇ ಕೆಲವು ಕೆಲಸಗಾರರನ್ನು ನೇಮಿಸಿ ಎಲ್ಲರಿಗೂ ಸರಿಯಾಗಿ ಹಂಚುವಂತೆ ವ್ಯವಸ್ಥೆ ಮಾಡಿದನು. ಅವನ ಬಳಿ ಇದ್ದ ಹಣದಿಂದ ಹಲವಾರು ತಿಂಗಳು ತನ್ನ ಸೇವೆಯನ್ನು ಸಲ್ಲಿಸಿದನು ನಂತರ ಆ ಊರಿನಲ್ಲಿ ಮಳೆ ಬಂತು ನಂತರ ಎಲ್ಲಾ ಸಮಸ್ಯೆಗಳು ತೊಂದರೆಗಳು ನಿವಾರಣೆಯಾದವು.

 ನಂತರ ಶ್ರೀಮಂತನೂ ಊರಿಗೆ ಹೊರಟನು ಸ್ವಲ್ಪ ದಿನಗಳ ನಂತರ ಬಂದು ನೋಡಿದರೆ ಶ್ರೀಮಂತನಿಗೆ ತುಂಬಾ ಸಂತೋಷ ವಾಯಿತು ಏಕೆಂದರೆ ಇವನು ಕಟ್ಟಿಸಿದ ಕಟ್ಟಡಕ್ಕೆ ಇವನದೇ ಹೆಸರು ಹಾಕಿ ಇವನದೇ ಒಂದು ವಿಗ್ರಹದಂತೆ ಮಾಡಿ ಇದಕ್ಕೆ ಹಲವಾರು ಜನರು ನಮಸ್ಕರಿಸುತ್ತಿದ್ದರು.

 ಕಷ್ಟ ಕಾಲದಲ್ಲಿ ಈ ವ್ಯಕ್ತಿಯು ನಮಗೆ ಆಹಾರವನ್ನು ನೀಡಿದ ಕರುಣಾಮಯಿ ಎಂದು ಹೇಳುತ್ತಿದ್ದರು ವ್ಯವಸ್ಥಾಪಕರಿಗೂ ತುಂಬಾ ಸಂತೋಷವಾಯ್ತು ಆ ಶ್ರೀಮಂತನಿಗೂ ತುಂಬ ತೃಪ್ತಿಯಾಯಿತು. ನನಗೆ ಹಾಗೂ ಇತರರಿಗೆ ತೃಪ್ತಿಯಾಗುವಂತಹ ಸಹಾಯ ಮಾಡೋಣ?

]]>
https://babakategalu.com/%e0%b2%a8%e0%b2%ae%e0%b3%8d%e0%b2%ae-%e0%b2%9c%e0%b3%8a%e0%b2%a4%e0%b3%86-%e0%b2%87%e0%b2%a6%e0%b3%8d%e0%b2%a6%e0%b2%b0%e0%b3%86-%e0%b2%b8%e0%b2%be%e0%b2%95%e0%b3%81/feed/ 0
ಇಲ್ಲಿ ಯಾರಿಗೆ ಪ್ರವೇಶವಿದೆ https://babakategalu.com/%e0%b2%87%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%be%e0%b2%b0%e0%b2%bf%e0%b2%97%e0%b3%86-%e0%b2%aa%e0%b3%8d%e0%b2%b0%e0%b2%b5%e0%b3%87%e0%b2%b6%e0%b2%b5%e0%b2%bf%e0%b2%a6%e0%b3%86/ https://babakategalu.com/%e0%b2%87%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%be%e0%b2%b0%e0%b2%bf%e0%b2%97%e0%b3%86-%e0%b2%aa%e0%b3%8d%e0%b2%b0%e0%b2%b5%e0%b3%87%e0%b2%b6%e0%b2%b5%e0%b2%bf%e0%b2%a6%e0%b3%86/#respond Sun, 27 Apr 2025 04:40:00 +0000 https://babakategalu.com/?p=305 Read more]]> ಒಂದು ದೊಡ್ಡ ಆಸ್ಪತ್ರೆಯಲ್ಲಿ ಅಳಗಿರಿ ಹುಡುಗ ಹೋಗುತ್ತಾನೆ ತನ್ನ ಚಿಕ್ಕಪ್ಪನನ್ನು ಅಡ್ಮಿಟ್ ಮಾಡಿರುತ್ತಾರೆ ಯಾವ ವಾರ್ಡ್ ಎಂದು ಹುಡುಗನಿಗೆ ತಿಳಿದಿರುತ್ತದೆ ಆದ್ರೆ ಆಸ್ಪತ್ರೆಗೆ ಹೋದಾಗ ಎಲ್ಲಿ ಹೇಗೆ ಹೋಗಬೇಕು ಎಂಬುದು ಗೊತ್ತಿರುವುದಿಲ್ಲ.

 ಸೆಕ್ಯೂರಿಟಿ ಅವರಿಗೆ ನಾನು ನಮ್ಮ ಚಿಕ್ಕಪ್ಪ ಅವರನ್ನು ನೋಡಬೇಕು ಹೇಗೆ ಹೋಗಬೇಕು ಎಂದಾಗ ಆಗ ಅಲ್ಲೇ ಇದ್ದ ಒಬ್ಬ ಸೆಕ್ಯುರಿಟಿ ಗಾರ್ಡ್ ಹೇಳುತ್ತಾರೆ ನೇರವಾಗಿ ಹೋಗು ಎಡಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿ ಹಾಗೆ ನೇರವಾಗಿ ಹೋಗು ಒಂದು ಕೊಠಡಿ ಕಾಣುತ್ತದೆ.

 ಅಲ್ಲಿ ಪ್ರವೇಶವಿಲ್ಲ ಎಂದು ಒಂದು ಫಲಕವಿರುತ್ತದೆ ಅದರೆ ಬಲಗಡೆಗೆ ಹೋಗು ನಿನಗೆ ತುಂಬ ಸುಲಭವಾಗಿ ನಿನ್ನ ವಾರ್ಡ್ ಸಿಗುತ್ತದೆ ಎಂದು ಹೇಳಿದರು ಹಾಗೆಯೇ ಹುಡುಗ ಹೋಗುತ್ತಾನೆ ಎಡಕ್ಕೆ ಬಲಕ್ಕೆ ಹೋಗಿ ನೇರವಾಗಿ ಒಂದು ಕೊಠಡಿ ಕಾಣುತ್ತದೆ ಬೋರ್ಡ್ ಇರುತ್ತದೆ ಆದರೆ ಏನು ಬರೆದಿದ್ದಾರೆ ಎಂದು ಅಷ್ಟೊಂದು ಗಮನಿಸಲಿಲ್ಲ ಓದಿನಲ್ಲೂ ಅಷ್ಟೊಂದು ಜಾಣನಲ್ಲ ಒಳಗಡೆ ಹೋಗುತ್ತಾನೆ.

 ಅಲ್ಲಿ ಹಿರಿಯರು ಹುಡುಗನನ್ನು ಹೇಳುತ್ತಾರೆ ಪ್ರವೇಶವಿಲ್ಲ ಎಂದರು ನೀನು ಬಂದಿದ್ದೀಯಲ್ಲ ಎಂದು ಹೇಳುತ್ತಾರೆ ಆಗ ಹುಡುಗ ಮುಗ್ಧವಾಗಿ ಕೇಳುತ್ತಾನೆ ಇಲ್ಲಿ ಯಾರಿಗೆ ಪ್ರವೇಶವಿದೆ ಎಂದಾಗ ಹಿರಿಯ ಸರ್ಜನ್ ರವರು ಇಲ್ಲಿ ಪರಿಣಿತಿ ಪಡೆದ ಸರ್ಜನ್ ಗಳು ಡಾಕ್ಟರ್ ಗಳಿಗೆ ಮಾತ್ರ ಪ್ರವೇಶ ಇರುತ್ತದೆ ಸಾಮಾನ್ಯವಾದ ವೈದ್ಯರು ನರ್ಸ್ ಗಳು ಅಲ್ಲಲ್ಲೇ ಇರುತ್ತಾರೆ ಎಂದು ಮೃದುವಾಗಿ ಹೇಳಿದರು ನಂತರ ವಾರ್ಡ್ ಸಂಖ್ಯೆ ಹೇಳಿ ಕಳುಹಿಸುತ್ತಾರೆ.

 ಹುಡುಗ ತನ್ನ ಚಿಕ್ಕಪ್ಪನವರನ್ನು ನೋಡಿದ ನಂತರ ಹುಡುಗನ ಮನಸ್ಸಿನಲ್ಲಿ ಮತ್ತೊಂದು ಪ್ರಶ್ನೆ ಕಾಡುತ್ತದೆ ಪ್ರವೇಶವಿಲ್ಲ ಎಂದು ಹೇಳಿದರು ಮತ್ತೆ ಆ ಹಿರಿಯರನ್ನು ಹೋಗಿ ಕೇಳುತ್ತಾನೆ ನಾನು ಇದೇ ರೀತಿ ಓದಿಕೊಂಡರೆ ನನಗೂ ವಾರ್ಡ್ ಗೆ ಪ್ರವೇಶ ಇರುತ್ತದೆ ಅಲ್ಲವೆ ಎಂದು ಕೇಳುತ್ತಾನೆ.

ಸರ್ಜನ್ ರವರು ಹೌದು ನೀನೂ ಕೂಡ ಏನು ಬೇಕಾದರೂ ಮಾಡಬಹುದಾಗಿದೆ ನೀನು ಎಂಬಿಬಿಎಸ್ ಹಾಗೂ ಎಂ ಎಸ್ ಮಾಡಿದರೆ ನಿನಗೂ ಪ್ರವೇಶವಿದೆ ಎಂದು ಹೇಳುತ್ತಾರೆ ಆಗ ಹುಡುಗನು ಇದೇ ಒಂದು ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ನಂತರ ಚೆನ್ನಾಗಿ ಓದಿ ದೊಡ್ಡ ಸರ್ಜನ್ ಆಗುತ್ತಾನೆ ಇಲ್ಲಿ ನಾವು 2 ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು.

  ಪ್ರವೇಶವಿಲ್ಲ ಎಂದಾಗ ಪ್ರವೇಶ ಎನ್ನುವ ಅರ್ಹತೆ ಗಳಿಸಿಕೊಳ್ಳಬೇಕು ಆಗ ನಮಗೂ ಪ್ರವೇಶ ಇರುತ್ತದೆ ಇನ್ನೊಂದು ಉನ್ನತ ಮಟ್ಟಕ್ಕೆ ಬೆಳೆದಾಗ ಮೃದುವಾಗಿ ನಯವಾಗಿ ಮಾತನಾಡೋಣ ಬೆಳೆಯುವವರಿಗೆ ಸರಿಯಾದ ಮಾರ್ಗದರ್ಶನ ನೀಡೋಣ.

ತಪ್ಪು ನನ್ನದೋ ನಿಮ್ಮದೋ

ರೈಲ್ವೆ ನಿಲ್ದಾಣದಿಂದ ಆಚೆ ಬಂದ ನಂತರ ಒಬ್ಬ ಆರಿದಂ ತರಲೇ ಪ್ರಯಾಣಿಕ ಅವಸರವಾಗಿ ಬಂದು ಆಟೋದಲ್ಲಿ ಕುಳಿತುಕೊಂಡನು ನಂತರ ಮೀಟರ್ ಹಾಕಿ ಬೇಗ ಹೋಗು ಎಂದು ಚಾಲಕನಿಗೆ ಹೇಳಿದನು ಅದರಂತೆ ಆ ಆಟೋ ಚಾಲಕ ವೇಗವಾಗಿಯೇ ಹಾರನ್ ಮಾಡಿಕೊಂಡು ವೇಗವಾಗಿ ಮುಂದೆ ಮುಂದೆ ಹೋಗುತ್ತಿದ್ದಾನೆ.

ಆಟೋ ಚಾಲಕ ಕೇಳಿದನು ಸರ್ ಎಲ್ಲಿಗೆ ಹೋಗಬೇಕು ಆದರೂ ಪ್ರಯಾಣಿಕ ಮಾತ್ರ ಮುಂದೆ ಬೇಗ ಹೋಗಿ ನನಗೆ ಸಮಯವಾಗುತ್ತಿದೆ ಎಂದು ಹೇಳುತ್ತಿದ್ದಾನೆ ಎಲ್ಲಿಗೆ ಎಂದು ಹೇಳುತ್ತಿಲ್ಲ ಸುಮಾರು ಅರ್ಧಗಂಟೆಯಷ್ಟು ಕಳೆದಿದೆ ಚಾಲಕನು ತನಗೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಚಾಲನೆ ಮಾಡುತ್ತಿದ್ದಾನೆ ಆದರೂ ಆ ಪ್ರಯಾಣಿಕ ಬೆವರು ಒರೆಸಿಕೊಳ್ಳುತ್ತಿದ್ದಾನೆ.

 ಮತ್ತೆ ಕೇಳಿದರೆ ಇನ್ನೂ ವೇಗವಾಗಿ ಹೋಗು ಇದನ್ನು ಕೇಳಿದ ಚಾಲಕ ಕೊನೆಗೆ ಕೇಳಿದನು ಸರ್ ನನಗೆ ಎಷ್ಟು ಸಾಧ್ಯವೋ ಅಷ್ಟು ನಾನು ವೇಗವಾಗಿ ಚಾಲನೆ ಮಾಡುತ್ತಿದ್ದೇನೆ ನಾವು ಎಲ್ಲಿಗೆ ಹೋಗಬೇಕು ಎಂದು ಹೇಳಿ ಎಂದು ಬಲವಂತವಾಗಿ ಹೇಳಿದಾಗ ಪ್ರಯಾಣಿಕ ಆಗ ವಿಳಾಸ ಹೇಳಿದ.

ವಿಳಾಸವನ್ನು ಕೇಳಿದ ನಂತರ ಚಾಲಕ ಗಾಬರಿಯಾದನು ಮೊದಲೇ ಹೇಳಬಾರದೆ ನಾವು ವಿಳಾಸದ ವಿರುದ್ಧ ದಿಕ್ಕಿಗೆ ಹೋಗುತ್ತಿದ್ದೇವೆ ಎಂದನು ಆಗ ಆ ಪ್ರಯಾಣಿಕ ತಲೆ ಚಚ್ಚಿಕೊಂಡು ಹೇಳಿದನು.

 ನನ್ನ ಸಮಯ ವ್ಯರ್ಥ ಮಾಡಿದೆ ಎಂದು ಚಾಲಕನನ್ನು ಬಯ್ಯಲು ಶುರುಮಾಡಿದರು ಆಗ ಚಾಲಕನು ವಿನಮ್ರವಾಗಿ ಹೇಳಿದನು ನೀವು ಹೇಳಿದಂತೆ ನಾನು ಚಾಲನೆ ಮಾಡುತ್ತಿದ್ದೇನೆ ಅಷ್ಟೆ ಆದರೆ ನೀವು ಎಲ್ಲಿಗೆ ಎಂದು ಹೇಳುತ್ತಿಲ್ಲ ತಪ್ಪು ನನ್ನದೋ ಅಥವಾ ನಿಮ್ಮದೋ ಎಂದು ಕೇಳಿದನು

ನಂತರ ಮೀಟರ್ ನಲ್ಲಿ ತೋರಿಸಿದಷ್ಟು ದುಡ್ಡು ಕೊಟ್ಟು ಮತ್ತೆ ಬೇರೆ ಆಟೊಗೆ ಪ್ರಯಾಣಿಕ ಹೋದನು ಚಾಲಕ ತಲೆಕೆಟ್ಟ ಗಿರಾಕಿ ಎಂದು ಮುಂದೆ ಹೋದನು.

ಸರಿಯಾದ ಯೋಜನೆ ಇದ್ದು ಕೆಲಸ ಮಾಡಿದರೆ ಕೆಲಸವು ಪೂರ್ಣವಾಗುತ್ತದೆ ಯೋಜನೆ ಇಲ್ಲದ ಕೆಲಸ ಮಾಡಿದರೆ ಸಮಯವೂ ಹಣವು ವ್ಯರ್ಥವಾಗುವುದಲ್ಲದೇ ದೈಹಿಕವಾಗಿ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೇವೆ ಆದುದರಿಂದ ಮೊದಲೇ ಯೋಜನೆ ಮಾಡಿ ಮುನ್ನಡೆಯೋಣ.

ಯೋಚಿಸಿದ ನಂತರ

ಹಲವಾರು ವರ್ಷಗಳ ಹಿಂದೆ ಒಂದು ಅರಣ್ಯದಲ್ಲಿ ಒಂದು ನದಿ ಇತ್ತು ಆ ನದಿಯ ಬಳಿ ಒಂದು ಕೋತಿ ಹಾಗೂ ಒಂದು ಮೀನು ಆತ್ಮೀಯ ಸ್ನೇಹಿತರಾಗಿದ್ದವು ದಿನನಿತ್ಯವೂ ತನ್ನ ಕಷ್ಟ ಸುಖ ಎಲ್ಲವೂ ಹಂಚಿಕೊಳ್ಳುತ್ತಿದ್ದವು ನೀರಿನ ಪ್ರವಾಹ ತುಂಬಾ ಜಾಸ್ತಿಯಾಯ್ತು.

ನದಿಯ ನೀರು ಹೆಚ್ಚಾಗು ತ್ತಿದೆ ಇದನ್ನು ಗ್ರಹಿಸಿದ  ಮೀನು ಹೇಳಿತು ಸ್ನೇಹಿತ ನನಗೆ ಯಾಕೋ ತುಂಬಾ ಹೆದರಿಕೆಯಾಗುತ್ತಿದೆ ಬೆಳಿಗ್ಗೆಯಿಂದ ಸಂಜೆಗೆ ದಿನದಿಂದ ದಿನಕ್ಕೆ ನೀರು ಹೆಚ್ಚಾಗಿ ಹೋಗುತ್ತಿದೆ ನಾನು ಬದುಕುತ್ತೇನೆಯೊ ಇಲ್ಲವೊ ಎಂದು ಜೀವಭಯದಿಂದ ಹೇಳಿತು.

 ಆಗ ಕೋತಿಯು ನೀನು ಯಾವುದೇ ಕಾರಣಕ್ಕೂ ನೀನು ಹೆದರಬೇಡ ನಾನು ಇದ್ದೇನೆ ನಾನು ನಿನ್ನನ್ನು ಕಾಪಾಡುತ್ತೇನೆ ಎಂದು ಹೇಳಿ ನಿಧಾನವಾಗಿ ಮೀನನ್ನು ಹಿಡಿದು ಕೊಂಡು ಮರದ ಮೇಲೆ ಹೋಗಿ ಎಲೆಗಳನ್ನು ಜೋಡಿಸಿ ಒಂದು ಬೆಚ್ಚಗಿನ ಮನೆಯನ್ನು ಮಾಡಿತು.

 ಮೀನನ್ನು ಅಲ್ಲಿ ಇಟ್ಟಿತು ಕೋತಿಗೆ ತುಂಬಾ ಸಂತೋಷವಾಯ್ತು ನಾನು ನನ್ನ ಸ್ನೇಹಿತನನ್ನು ಸಾವಿನಿಂದ ಕಾಪಾಡಿದ್ದೇನೆ ಎಂದು ಹೀಗಿತು ಬೆಳಿಗ್ಗೆ ಪ್ರವಾಹ ಕಡಿಮೆಯಾಯಿತು ಮೀನನ್ನು ಬಿಡಲು ಹೋಗೋಣ ಎಂದು ನೋಡಿದಾಗ ಮೀನು ಸತ್ತು ಹೋಗಿತ್ತು ಕೋತಿ ಮರೆತು ಬಿಟ್ಟಿತ್ತು.

 ಮೀನು ನೀರು ಇಲ್ಲದೆ ಬದುಕುವುದಿಲ್ಲ ಕೋತಿಯು ತನ್ನ ಸ್ನೇಹಿತನನ್ನು ಕಳೆದುಕೊಂಡೆ ಎಂದು ಕೊನೆಗೆ ಪಶ್ಚಾತ್ತಾಪಪಟ್ಟಿತು ಹೀಗೆಯೇ ಕೆಲವರು ಸಹಾಯ ಮಾಡುತ್ತಾರೆ ಆದರೆ ಆ ಸಹಾಯ ನಿಜಕ್ಕೂ ಅನುಕೂಲ ವಾಗುತ್ತದೆಯೋ ಅಥವಾ ಅನಾನುಕೂಲವಾಗುತ್ತದೆಯೋ ತಿಳಿದ ನಂತರ ನಾವು ಯೋಚಿಸಿ ಸಹಾಯ ಮಾಡೋಣ.

ಮಹಾಸೋಮರಿ

ಒಂದು ಊರಿನಲ್ಲಿ ಒಬ್ಬ ಅಜಿಶ್ಯ ಸೋಮಾರಿ ರಾಜ ಇರುತ್ತಾನೆ ಅವನಿಗೆ ಒಂದು ಆಲೋಚನೆ ಬರುತ್ತದೆ ಮಹಾ ಸೋಮರಿಗಳನ್ನು ಹೇಗೆ ಕಂಡುಹಿಡಿಯಬಹುದು ಎಂದು ಅಕ್ಷಲಾ ಮಂತ್ರಿಗೆ ಕೇಳುತ್ತಾನೆ. ಮಂತ್ರಿ ಹೇಳುತ್ತಾನೆ ಮಹಾರಾಜರೇ. ಎಲ್ಲಾ ಸೋಮಾರಿಗಳಿಗೆ ಕರೆಸಿ ಗುಡಿಸಿನಲ್ಲಿ ಇರಿಸೋಣ ಆಗ ತಿಳಿಯುತ್ತದೆ ಎಂದು ಹೇಳಿದಾಗ ರಾಜನಿಗೆ ಇದು ಅರ್ಥವಾಗುವುದಿಲ್ಲ.

 ಪ್ರಾಯೋಗಿಕವಾಗಿ ಮಾಡಿ ತೋರಿಸು ಎಂದು ರಾಜರು ಹೇಳುತ್ತಾರೆ ಸೋಮಾರಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಎಲ್ಲಾ ಸೋಮಾರಿಗಳಿಗೂ ಕರೆಯುತ್ತಾರೆ ಪ್ರತಿಯೊಬ್ಬರಿಗೂ ಒಂದೊಂದು ಗುಡಿಸಿಲಿನಲ್ಲಿ ಉಳಿದುಕೊಳ್ಳಲಿಕ್ಕೆ ವ್ಯವಸ್ಥೆ ಮಾಡುತ್ತಾರೆ ಸೋಮಾರಿಗಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಿದ್ಧಪಡಿಸುತ್ತಾರೆ.

 ಮುಸ್ಸಂಜೆಯ ಸಮಯ ಇದ್ದಕ್ಕಿದ್ದಂತೆ ಗುಡಿಸಿಲು ಗಳಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಇದನ್ನು ನೋಡಿದ ಬಹಳಷ್ಟು ಸೋಮಾರಿಗಳು ಬದುಕಿದರೆ ಸಾಕು ಎಂದು ಓಡಿ ಹೋಗುತ್ತಾರೆ ಆದರೆ ಒಬ್ಬ ಸೋಮಾರಿ ಮಾತ್ರ ಹಾಗೆ ಮಲಗಿರುತ್ತಾನೆ ಇನ್ನೊಬ್ಬ ಬಂದು ಮಹಾ ಸೋಮಾರಿಗೆ ಎಬ್ಬಿಸುತ್ತಾನೆ.

 ಕುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ ಬೇಗ ಆಚೆ ಬಾ ಎಂದರೆ ನೀನೇಕೆ ತಲೆಕೆಡಿಸಿಕೊಳ್ಳುತ್ತಿಯ ಈ ಗುಡಿಸಲು ಬೇರೆಯವರದು ಗುಡಿಸಿಲಿಗೆ ಬೆಂಕಿ ಹತ್ತಿಕೊಂಡಿದೆ ನಾನು ನಿಶ್ಚಿಂತೆಯಿಂದ ಮಲಗುತ್ತೇನೆ ಎಂದು ಹೇಳುತ್ತಾನೆ ತಕ್ಷಣ ನೀನು ಕೂಡ ಅದರಲ್ಲೇ ಬೆಂಕಿಗೆ ಸುಟ್ಟು ಹೋಗುತ್ತೀಯಾ ಎಂದಾಗ ಮಹಾ ಸೋಮಾರಿಗೆ ಅರ್ಥವಾಗುತ್ತದೆ.

 ಆಗ ಮಹಾಸಮಾರಿ ನಿಧಾನಕ್ಕೆ ಆಚೆ ಬರುತ್ತಾನೆ ಇವನನ್ನು ಹಿಡಿದು ಮಹಾಸಮಾರಿಯೆಂದು ಬಹುಮಾನ ಕೊಟ್ಟಿ ಕಳುಹಿಸುತ್ತಾರೆ.

ಆಕಾಶದಲ್ಲಿ ಹಾರಲು ಸಾಧ್ಯವಿಲ್ಲ

ಒಂದು ದೊಡ್ಡ ಚರ್ಚಿನಲ್ಲಿ ಒಂದು ಸಮಾರಂಭ ಇತ್ತು ಇದರಲ್ಲಿ ಹಲವಾರು ದೊಡ್ಡ ದೊಡ್ಡ ಪಾದ್ರಿಗಳು ಭಾಗವಹಿಸಿದರು ಚರ್ಚಿಸಿದ ವಿಷಯ ಏನೆಂದರೆ ಪ್ರಪಂಚ ಮುಂದೆ ಬದಲಾಗುತ್ತದೆ ಅದಕ್ಕೆ ಹೊಂದಿ ಕೊಳ್ಳಬೇಕು.

 ಹೇಗೆ ಹೊಂದಿಕೊಳ್ಳಬೇಕು ಎನ್ನುವ ಚಿಂತನೆಗಳನ್ನು ಎಲ್ಲರೂ ಅವರಿಗೆ ಅನಿಸಿತಂತೆ ಹೇಳಿದರು ಅದರಲ್ಲಿ ಒಬ್ಬ ಪಾದ್ರಿಯವರು ಹೇಳಿದರು ಮುಂದೆ ತಂತ್ರಜ್ಞಾನ ಆವಿಷ್ಕಾರ ಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತದೆ ಹಾಗೆಯೇ ಮನುಷ್ಯ ಗಾಳಿಯಲ್ಲಿ ಹಾರಾಡುವ ದಿನಗಳು ಕೂಡ ನಾವು ನೋಡಬಹುದು ಎಂದು ಹೇಳಿದರು.

ಈ ಮಾತು ಕೇಳುತ್ತಿದ್ದಂತೆಯೇ ಸಭೆಯಲ್ಲಿ ಕುಳಿತಿದ್ದವರು ಗಾಬರಿಯಾದರು ಬಹಿರಂಗವಾಗಿ ಪ್ರತಿಭಟಿಸಿದರು  ಆಕಾಶದಲ್ಲಿ ಹಾರುವುದು   ಹಾರುವುದು ಅಸಂಭವ  ಇದು ದೇವರಿಂದ ಮಾತ್ರ ಸಾಧ್ಯ ಎಂದು ಮೇಲು ಧ್ವನಿಯಲ್ಲಿ  ಕಿರಿಚಿದರು ಈ ಮಾತನ್ನು ಕೇಳುತ್ತಿದ್ದಂತೆಯೇ ಹಿರಿಯ ಪಾದ್ರಿ ಅವರು ಮರು ಮಾತನಾಡದೆ  ಆ ಸಮಾರಂಭದಿಂದ ತಮ್ಮ ಎರಡೂ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದರು ನಂತರದಲ್ಲಿ ಇದೇ ಮಕ್ಕಳು ದೊಡ್ಡವರಾಗಿ ಅಸಾಧ್ಯ ಸಾಧಿಸಿದರು.

 ಪ್ರಪ್ರಥಮವಾಗಿ ವಿಮಾನ ಯಾನವನ್ನು ಪರಿಚಯಿಸಿದರು ಇವರ ಹೆಸರು ಬಿಷಪ್ ರೈಟ್ ಮಕ್ಕಳ ಹೆಸರು ಆರ್ವಿಲ್ ರೈಟ್ ಮತ್ತು ವಿಲ್ಬರ್ ರೈಟ್ ಯಾರು ಹೆಚ್ಚಾಗಿ ಭೂತಕಾಲದಲ್ಲಿಯೇ ಇರುತ್ತಾರೋ ಅವರು ಹಿಂದೆ ಉಳಿಯುತ್ತಾರೆ ಯಾರೂ ವರ್ತಮಾನದ ಕಾಲದ ಬಗ್ಗೆ ಚಿಂತಿಸುತ್ತಾರೆ ಅವರು ಮಧ್ಯಮದಲ್ಲಿ ಇರುತ್ತಾರೆ ಯಾರು ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಅವರು ಅಭಿವೃದ್ಧಿ ಹೊಂದುತ್ತಾ ಹೋಗುತ್ತಾರೆ. ನಾನು ಭವಿಷ್ಯದ ಬಗ್ಗೆ ಏನೇನು ಯೋಚಿಸುತ್ತಿದ್ದೇನೆ?

]]>
https://babakategalu.com/%e0%b2%87%e0%b2%b2%e0%b3%8d%e0%b2%b2%e0%b2%bf-%e0%b2%af%e0%b2%be%e0%b2%b0%e0%b2%bf%e0%b2%97%e0%b3%86-%e0%b2%aa%e0%b3%8d%e0%b2%b0%e0%b2%b5%e0%b3%87%e0%b2%b6%e0%b2%b5%e0%b2%bf%e0%b2%a6%e0%b3%86/feed/ 0
ಸಿಕ್ಕೇ ಸಿಗುತ್ತದೆ https://babakategalu.com/%e0%b2%b8%e0%b2%bf%e0%b2%95%e0%b3%8d%e0%b2%95%e0%b3%87-%e0%b2%b8%e0%b2%bf%e0%b2%97%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/ https://babakategalu.com/%e0%b2%b8%e0%b2%bf%e0%b2%95%e0%b3%8d%e0%b2%95%e0%b3%87-%e0%b2%b8%e0%b2%bf%e0%b2%97%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/#respond Sat, 26 Apr 2025 04:40:00 +0000 https://babakategalu.com/?p=303 Read more]]> ಒಂದು ಊರಿನಲ್ಲಿ ಒಬ್ಬ ಅಮನ್ ವ್ಯಕ್ತಿ ಹಜರತ್ ಬಳಿ ಬಂದು ಕೇಳುತ್ತಾನೆ ಈಗೀಗ ನನಗೆ ತುಂಬಾ ಸಮಸ್ಯೆಗಳು ಕಷ್ಟಗಳು ದುಃಖಗಳು ಬರುತ್ತಿದೆ ನಾನು ತುಂಬಾ ಕಂಗಾಲಾಗಿ ಹೋಗಿದ್ದೇನೆ ದಾರಿ ಕಾಣದಂತಾಗಿದೆ ಬಹಳ ನೊಂದಿಕೊಂಡು ಹೇಳುತ್ತಾನೆ.

ಹಜರತ್ ಅವರು ಸಮಾಧಾನದಿಂದ ಹೇಳುತ್ತಾರೆ ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡಬಾರದು ಇತರರು ನಿನಗೆ ಎಷ್ಟೇ ಒಳ್ಳೆಯದನ್ನು ಮಾಡಲಿಕ್ಕೆ ಯೋಚಿಸಿದರೂ ಒಳ್ಳೆಯದು ಆಗುವುದಿಲ್ಲ ನಿನ್ನ ಹಣೆಬರಹದಲ್ಲಿ ಏನು ಇದೆಯೋ ಅದು ಮಾತ್ರ ಸಿಗುತ್ತದೆ.

 ಇತರರು ನಿಮ್ಮ ಕೇಡನ್ನು ಬಯಸಿದರೂ ಕೂಡ ಅದು ತಟ್ಟುವುದಿಲ್ಲ ಅಲ್ಲಾ ನಿನಗೆ ಎಷ್ಟು ಕೊಟ್ಟಿರುವವನು ಅಷ್ಟೆ ಸಿಗುತ್ತದೆ ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡದೆ ಪ್ರಾರ್ಥನೆ ಮಾಡು ಆದರೆ ನೀನು ಹಿಡಿದಿರುವ ಕೆಲಸವನ್ನು ಮಾಡುತ್ತಲೇ ಇರು ಹಾಗೂ ಏನೇ ಕೇಳಬೇಕಾದರು ಅಲ್ಲ ನ ಬಳಿ ಕೇಳು ಅದು ನಿನಗೆ ನಿಧಾನವಾಗಿಯಾದರೂ ಹಜರತ್ ರವರು ನಿನ್ನ ಋಣದಲ್ಲಿ ಇದ್ದರೆ ನಿನಗೆ ಸಿಕ್ಕೆ ಸಿಕ್ಕೇ ಸಿಗುತ್ತದೆ ಎಂದು ಹೇಳಿ ಕಳುಹಿಸಿದರು.

ಹಜರತ್ ಅವರ ಮಾತಿನ ಮೇಲೆ ವಿಶ್ವಾಸ ಬಂತು ಹಾಗೆ ಮಾರನೆಯ ದಿನ ಸಂಜೆ ಮನೆಗೆ ಬರುತ್ತಿರಬೇಕಾದರೆ ಊರಿನ ಆಚೆ ಒಂದು ಹಿತ್ತಾಳೆಯ ಬಿಂದಿಗೆಯಲ್ಲಿ ನೋಡುತ್ತಾನೆ ಬಿಂದಿಗೆಯಲ್ಲಿ ಚಿನ್ನದ ನಾಣ್ಯಗಳು ತುಂಬಿರುತ್ತದೆ ನಂತರ ಬಾಬಾ ಅವರ ಮಾತು ನೆನಪಿಗೆ ಬರುತ್ತದೆ.

ನನ್ನ ಋಣದಲ್ಲಿ ನಾಣ್ಯಗಳು ಸಿಗಬೇಕಾದರೆ ನನ್ನ ಮನೆಯಲ್ಲಿಯೇ ಸಿಗುತ್ತದೆ ಎಂದು ನೇರವಾಗಿ ಮನೆಗೆ ಬಂದು ಹೆಂಡತಿಗೆ ನಾನು ಮನೆಗೆ ಬರಬೇಕಾದರೆ ಊರಿನ ಆಚೆ ಒಂದು ಹಿತ್ತಾಳೆಯ ಬಿಂದಿಗೆಯಲ್ಲಿ ಚಿನ್ನದ ನಾಣ್ಯಗಳು ಇದ್ದವು ಅದನ್ನು ನೋಡಿ ನಾನು ನನ್ನ ಋಣದಲ್ಲಿ ಇದ್ದರೆ ನನಗೆ ಮನೆಯಲ್ಲಿಯೇ ಸಿಗುತ್ತದೆ ಎಂದು ಬಂದೆ ಎಂದು ಹೇಳಿದನು ಆಗ ಹೆಂಡತಿಯು ಎಂಥ ಮೂರ್ಖರು ನೀವು ನಮಗೆ ಸಿಕ್ಕಿದ್ದು ನಾವು ತೆಗೆದುಕೊಂಡು ಬರಬೇಕು ಎಂದು ಹೇಳಿದಳು.

 ಗಂಡ ನೋಡೋಣ ನಮ್ಮ ಋಣದಲ್ಲಿ ಇದ್ದರೆ ಬಂದೆ ಬರುತ್ತದೆ ಎಂದು ಹೇಳಿದನು ಈ ಮಾತನ್ನು ಪಕ್ಕದ ಮನೆಯವನು ಕೇಳಿಸಿಕೊಂಡು ನಂತರ ನಿಧಾನವಾಗಿ ಊರಿನ ಆಚೆ ಹೋಗಿ ನೋಡಿದರೆ ವ್ಯಕ್ತಿ ಹೇಳಿದಂತೆಯೇ ಒಂದು ಹಿತ್ತಾಳೆಯ ಬಿಂದಿಗೆ ಇದೆ ನಿಧಾನವಾಗಿ ಬಿಂದಿಗೆಯ ಒಳಗಡೆ ನೋಡಿದಾಗ ಚೇಳುಗಳು ಕಾಣಿಸುತ್ತವೆ.

 ಪಕ್ಕದ ಮನೆಯವನಿಗೆ ಕೋಪ ಬಂದು ನನಗೆ ಸಾಯಿಸಲು ಈ ರೀತಿಯ ಉಪಾಯ ಮಾಡಿದ್ದಾನೆ ಹಾಗಾಗಿ ಇವನೇ ಸಾಯಬೇಕು ಎಂದು ಹಿತ್ತಾಳೆಯ ಬಿಂದಿಗೆಯನ್ನು ತೆಗೆದುಕೊಂಡು ಬಂದು ಅರ್ಧರಾತ್ರಿಯ ಸಮಯದಲ್ಲಿ ಪಕ್ಕದ ಮನೆಯವನ ಮೇಲೆ ಹತ್ತಿ ನಾಲ್ಕು ಹಂಚುಗಳನ್ನು ತೆಗೆದು ನಿಧಾನವಾಗಿ ಹಿತ್ತಾಳೆಯ ಬಿಂದಿಗೆಯಲ್ಲಿ ಇದ್ದ ಎಲ್ಲಾ ಚೇಳುಗಳನ್ನು ಬೀಳಿಸಿದನು.

 ವ್ಯಕ್ತಿ ಎದ್ದು ನೋಡಿದರೆ ಮನೆಯಲ್ಲ ಚಿನ್ನದ ನಾಣ್ಯಗಳಿಂದ ತುಂಬಿದೆ ಆಗ ವ್ಯಕ್ತಿಗೆ ನಂಬಿಕೆಯಾಯಿತು ನನ್ನ ಋಣದಲ್ಲಿ ಇದ್ದರೆ ನನಗೆ ಸಿಕ್ಕೇ ಸಿಗುತ್ತದೆ ಎಂದು ನಂಬಿದನು ಇದನ್ನು ನಾವು ಕೂಡ ಪ್ರಾಯೋಗಿಕವಾಗಿ ನೋಡಬಹುದಾಗಿದೆ ಕೆಲವರು ಹೆಚ್ಚಾಗಿ ಓದಿರುವುದಿಲ್ಲ ಒಳ್ಳೆಯ ಹುದ್ದೆಯಲ್ಲಿ ಇರುತ್ತಾರೆ ಕೆಲವರು ಬಹಳಷ್ಟು ಓದಿರುತ್ತಾರೆ ಆದರೂ ಅವರು ಬೇರೆ ಚಿಕ್ಕ ಕೆಲಸದಲ್ಲಿ ಇರುತ್ತಾರೆ ಋಣ ಇದ್ದರೆ ಮಾತ್ರ ಸಿಗುತ್ತದೆ ನಮ್ಮ ಸಮಯ ಬರೆಯುವವರೆಗೂ ತಾಳ್ಮೆಯಿಂದ ಸಹಿಸಿಕೊಳ್ಳೋಣ.

ಬರಿ ಕೈ ಮಾತ್ರ ಕಾಣುತ್ತಿದೆ

ಒಬ್ಬ ಧಾರ್ಮಿಕ ಸಾರ್ಥಕ್ ಮನುಷ್ಯ ಹಲವಾರು ದಿನಗಳ ನಂತರ ಒಂದು ಭಾಷಣವನ್ನು ಕೇಳಿದನು ಅದರಲ್ಲಿ ಸ್ವರ್ಗ ನರಕದ ಬಗ್ಗೆ ಚೆನ್ನಾಗಿ ವಿವರಣೆ ನೀಡಿದರು ಇವನು ಈ ಭಾಷಣ ಕೇಳಿದ ನಂತರ ಮನೆಗೆ ಬಂದು ಮಲಗಿದನು ಧಾರ್ಮಿಕ ಮನುಷ್ಯನಿಗೆ ಒಂದು ಕನಸು ಬಿತ್ತು ಇವನು ಕೂಡ ಸತ್ತು ಹೋಗಿದ್ದಾನೆ.

 ಸ್ವರ್ಗದಲ್ಲಿ ಇದ್ದಾನೆ ಯಾರ್ಯಾರು ಏನೇನು ಕರ್ಮ ಮಾಡಿದ್ದರು ಅದರ ಫಲವಾಗಿ ಸ್ವರ್ಗ ನರಕವನ್ನು ಅನುಭವಿಸುತ್ತಿದ್ದಾರೆ ಹೀಗೆ ಮುಂದೆ ಹೋದಾಗ ಬರಿ ಕೈ ಮಾತ್ರ ಕಾಣುತ್ತಿತ್ತು ಇದೇನಿದು ಸ್ವರ್ಗದಲ್ಲಿ ಬರಿ ಕೈ ಮಾತ್ರ ಕಾಣುತ್ತಿದೆ ದೇಹ ಕಾಣುತ್ತಿಲ್ಲವಲ್ಲ ಎಂದು ಅಲ್ಲಿಯ ರಕ್ಷಕರಿಗೆ ಕೇಳಿದನು.

ಅಲ್ಲಿಯ ರಕ್ಷಕರು ಇವನು ಮಾಡಬಾರದ ಕೆಲಸಗಳನ್ನು ಮಾಡಿದ್ದಾನೆ ಆದರೆ ಇವನ ಜೀವನದಲ್ಲಿ ಒಂದೇ ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾನೆ ಒಂದು ನಾಯಿಯೂ ಬಾಯಾರಿಕೆಯಿಂದ ತುಂಬ ಒದ್ದಾಡುತ್ತಿತ್ತು ಆಗ ಇದನ್ನು ನೋಡಿದ ಕೈಯಿಂದ ಮಾತ್ರ ನಾಯಿಗೆ  ಮುಂದೆ ತಳ್ಳಿದ ಅದು ನೀರು ಕುಡಿದು ಬಾಯಾರಿಕೆ ನೀಗಿಸಿ ಗೊಂಡಿತು.

 ಆದುದರಿಂದ ಕೈ ಮಾತ್ರ ಸ್ವರ್ಗದಲ್ಲಿದೆ ಇತರ ಎಲ್ಲಾ ದೇಹವು ನರಕದಲ್ಲಿ ಶಿಕ್ಷೆ ಅನುಭವಿಸುತ್ತಿದೆ ಎಂದು ಹೇಳಿದನು ನಾವು ಒಳ್ಳೆಯದನ್ನು ಮಾಡಿದರೆ ಮಾತ್ರ ನಮಗೆ ಹಿಂತಿರುಗಿ ಬರುತ್ತದೆ ಎಂದು ಅರ್ಥಮಾಡಿಕೊಂಡನು ನಂತರ ಎಚ್ಚರವಾಯಿತು.

ಯಾರಿಗೂ ಗೊತ್ತಾಗುವುದಿಲ್ಲ

ಒಂದು ಊರಿನಲ್ಲಿ ಮುಲ್ಲಾ ಅವರ ಆಶ್ರಮದಲ್ಲಿ ಹಲವಾರು ಶಿಷ್ಯರು ಇರ್ತಾರೆ ಬಹಳ ವರ್ಷಗಳ ನಂತರ ಮುಲ್ಲಾರವರು ಹಜ್ ಯಾತ್ರೆಗೆ ಹೋಗಲು ನಿರ್ಧಾರ ಮಾಡುತ್ತಾರೆ ಈ ಸಂದೇಶವನ್ನು ಕೇಳಿ ಅವರ ಶಿಷ್ಯರು ಇವರಿಗಾಗಿ ಬಟ್ಟೆ, ಹಣ್ಣು ಅವರಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ತಂದು ಕೊಡುತ್ತಾರೆ.

 ಮುಲ್ಲಾರವರು ಇದು ಯಾವುದೂ ನನಗೆ ಬೇಡ ಎಂದು ನಗುತ್ತಾ ಹೇಳುತ್ತಾರೆ ಕೊನೆಗೆ ಒಬ್ಬ ಶಿಷ್ಯ ಮಾತ್ರ ಬಂದು ನಿಮ್ಮ ಮೇಲೆ ನನಗೆ ತುಂಬಾ ಅಭಿಮಾನವಿದೆ ನೀವು ಹಣವಾದರೂ ಇಡಲೇಬೇಕು ಎಂದು ಸಾವಿರ ನಾಣ್ಯಗಳನ್ನು ನೀಡಿದನು ಇದು ನೀವು ಇಟ್ಟುಕೊಂಡರೆ ನಿಮಗೆ ಅವಶ್ಯಕತೆ ಬಂದಾಗ ಮಾತ್ರ ಖರ್ಚುಮಾಡಿ ಮಿಕ್ಕಿದ ಹಣವನ್ನು ದಾನ ಧರ್ಮ ಮಾಡಿ ಎಂದು ಬೇಡಿಕೊಂಡನು.

 ಆಗ ಮುಲ್ಲಾರವರು ನೂರು ನಾಣ್ಯಗಳನ್ನು ತೆಗೆದುಕೊಂಡು ಇದು ಒಂದು ವಾರದ ವರೆಗೆ ಅಂದರೆ ನನಗೆ ಹೋಗಲಿಕ್ಕೆ ಸಾಕು ಎಂದು ಇಟ್ಟುಕೊಂಡರು ಇನ್ನೂ ಸ್ವಲ್ಪ ಮುಂದೆ ಹೋದಾಗ ಅಲ್ಲೇ ಒಬ್ಬ ಫಕೀರರು ಕುಳಿತಿದ್ದರು ಅವರ ಬಟ್ಟೆಯು ಹರುಕು ಮುರುಕು ಆಗಿತ್ತು ಕೇಶ ವಿನ್ಯಾಸವು ಚೆನ್ನಾಗಿ ಇರಲಿಲ್ಲ.

 ನೋಡಲಿಕ್ಕೆ ಒಬ್ಬ ಗೆಳೆಯನಂತೆ ಕಾಣುತ್ತಿದ್ದರು ಈ ಘಟನೆಯನ್ನು ನೋಡಿ ಮುಲ್ಲಾ ರವರಿಗೆ ಹೇಳಿದರು ನೀನು ಒಂದು ವಾರ ಬದುಕುತ್ತೀನಿ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದೀಯಾ ಎಂದಾಗ ಮುಲ್ಲಾ ಅವರಿಗೆ ಅರಿವಾಯಿತು.

  ಮುಲ್ಲಾ ಅವರಿಗೆ ವಂದನೆಗಳನ್ನು ತಿಳಿಸಿದರು ಯಾವ ಕ್ಷಣ ಏನು ಆಗುತ್ತದೋ ಯಾರಿಗೂ ತಿಳಿಯುವುದಿಲ್ಲ ನಂತರ ತೆಗೆದುಕೊಂಡಿದ್ದ ನಾಣ್ಯಗಳನ್ನು ಮತ್ತೆ ಹಿಂತಿರುಗಿಸಿದರು ಹಾಗೆ ಬರಿಗೈಯಲ್ಲಿ ಅಲ್ಲಾನ ಮೇಲೆ ನಂಬಿಕೆ ಇಟ್ಟು ಹೋದರು ಯಾವ ಕ್ಷಣದಲ್ಲಿ ಏನು ಆಗುತ್ತದೋ ಯಾರಿಗೂ ಗೊತ್ತಾಗುವುದಿಲ್ಲ ಇರುವ ಕ್ಷಣವನ್ನೇ ಆನಂದವಾಗಿ ಬದುಕೋಣ.

ನಾವೇ ಬಲಿಯಾಗಬಾರದು

ಹರ್ಜಿತ್ ಯುವಕ ಕಾಡಿನ ದಾರಿಯಲ್ಲಿ ಹೋಗುತ್ತಿರುತ್ತಾನೆ ಆಗ ಒಂದು ಬೆಕ್ಕು ಬಲೆಯಲ್ಲಿ ಸಿಲುಕಿಕೊಂಡಿರುತ್ತದೆ ನಿಧಾನವಾಗಿ ಒಂದು ಇಲಿ ಬರುತ್ತದೆ ಬೆಕ್ಕನ್ನು ನೋಡಿದ ತಕ್ಷಣ ಇಲಿ ಹೆದರಿ ಓಡಿ ಹೋಗುತ್ತಿರುತ್ತದೆ ಆಗ ಬೆಕ್ಕು ಇಲಿಗೆ ಅಂಗಲಾಚಿ ಬೇಡಿಕೊಳ್ಳುತ್ತದೆ.

 ನೀನು ನನ್ನನ್ನು ಬಿಡಿಸು ಇಲಿ ಮುಂದೆ ಬಂದು ಬಿಡುಗಡೆಯಾದ ಮೇಲೆ ನೀನೆ ನನ್ನನ್ನು ತಿಂದರೆ ಏನು ಮಾಡುವುದು ನನಗೆ ಹೆದರಿಕೆಯಾಗುತ್ತಿದೆ ಎಂದು ಇಲಿ ಹೇಳುತ್ತದೆ ಕಷ್ಟ ಕಾಲದಲ್ಲಿ ಯಾರೂ ನಮ್ಮನ್ನು ಸಹಾಯ ಮಾಡುತ್ತಾರೋ ಅವರನ್ನು ನಾವು ಮರೆಯಬಾರದು.

 ನಾನು ನಿನ್ನನ್ನು ತಿನ್ನಲಾರೆ ದಯವಿಟ್ಟು ನನ್ನನ್ನು ಬಲೆಯಿಂದ ಬಿಡುಗಡೆಗೊಳಿಸಬೇಕು ಎಂದು ಬೇಡಿಕೊಳ್ಳುತ್ತದೆ ಇಲಿಯೂ ಬಲೆಯನ್ನು ತನ್ನ ಹುಲ್ಲುಗಳಿಂದ ಕತ್ತರಿಸುತ್ತದೆ ನಂತರ ಬೆಕ್ಕು ಆಚೆ ಬಂದು ಮೊದಲಿನ ಬೇಟೆಯೇ ಇಲಿಯನ್ನು ಹಿಡಿದು ತಿನ್ನುತ್ತದೆ.

 ನಾನು ನಿನ್ನನ್ನು ಕಾಪಾಡಿದ್ದೀನಿ ಎಂದು ಹೇಳಿದರು ಕೇಳುವುದಿಲ್ಲಇದೇ ಪ್ರಕೃತಿ ನಿಯಮ ಎಂದು ಹೇಳುತ್ತದೆ ಇಲಿಯನ್ನು ತಿನ್ನುತ್ತದೆ ನಂತರ ನಿಧಾನವಾಗಿ ಬೆಕ್ಕು ಹೋಗುತ್ತಿರಬೇಕಾದರೆ ಒಂದು ನಾಯಿ ಬೇಲಿಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತದೆ ಆಗ ನಾಯಿಯೂ ಬೆಕ್ಕಿಗೆ ದಯವಿಟ್ಟು ನನ್ನನ್ನು ಉಳಿಸು ಎಂದು ಗೋಗರೆಯುತ್ತದೆ.

 ನೀನು ಬಿಡುಗಡೆಯಾದ ನಂತರ ನನ್ನನ್ನೇ ನೀನು ಬೇಟೆಯಾಡಿದರೆ ಏನು ಮಾಡುವುದು ನನಗೆ ಭಯವಾಗುತ್ತದೆ ಎಂದು ಬೆಕ್ಕು ಹೇಳುತ್ತದೆ ಸಹಾಯ ಮಾಡಿದವರನ್ನು ಯಾವತ್ತೂ ಮರೆಯಬಾರದು ಎಂದು ಹೇಳುತ್ತದೆ ಆಗ ನಂತರ ನಿಧಾನವಾಗಿ ಬೇಲಿಯನ್ನು ನಿಧಾನವಾಗಿ ಬಿಚ್ಚುತ್ತದೆ.

 ಆಗ ನಾಯಿಯೂ ಈಚೆ ಬಂದು ಬೆಕ್ಕಿನ ಕತ್ತು ಹಿಡಿಯುತ್ತದೆ ಆಗ ಬೆಕ್ಕು ಹೇಳುತ್ತದೆ ಏಕೆ ಹೀಗೆ ಮಾಡುತ್ತಿದ್ದೀಯಾ ಎಂದು ಬೆಕ್ಕು ಕೇಳುತ್ತದೆ ನನಗೆ ಹೊಟ್ಟೆ ಹಸಿದಿದೆ ನೀನೆ ನನಗೆ ಗತಿ ಇದೇ ಪ್ರಕೃತಿ ನಿಯಮ ಎಂದು ನಾಯಿ ಹೇಳುತ್ತದೆ.

 ನಾಯಿ ಮುಂದೆ ಹೋಗುತ್ತಿದ್ದಾಗ ಒಂದು ಚಿರತೆ ಅಳುತ್ತಿರುತ್ತದೆ ಚಿರತೆ ಏಕೆ ಅಳುತ್ತಿದೆ ಎಂದು ದೂರದಿಂದ ನಾಯಿ ನೋಡುತ್ತದೆ ಆಗ ವಿನಮ್ರವಾಗಿ ಚಿರತೆಯು ಹೇಳುತ್ತದೆ ಗೆಳೆಯ ನನ್ನ ಬಾಲ ಸಿಕ್ಕಿಹಾಕಿಕೊಂಡಿದೆ ನನಗೆ ಹಿಂದೆ ಕಾಣುವುದಿಲ್ಲ.

 ದಯವಿಟ್ಟು ನನ್ನನ್ನು ರಕ್ಷಣೆ ಮಾಡು ಎಂದು ಕೇಳುತ್ತದೆ ಚಿರತೆ ನಾನು ಎರಡೂ ದಿನದಿಂದ ಬೇಟೆ ಆಡಿಲ್ಲ ಸಹಾಯ ಮಾಡು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತದೆ ನಾಯಿಯು ಹಿಂದೆ ಹೋಗಿ ಬಾಲವನ್ನು ನಿಧಾನವಾಗಿ ಬಿಡಿಸುತ್ತದೆ ಬಿಡಿಸಿದ ತಕ್ಷಣ ನಾಯಿಯನ್ನೇ ಹಿಡಿದುಕೊಳ್ಳುತ್ತದೆ.

 ಗೆಳೆಯ ನನ್ನನ್ನು ಕ್ಷಮಿಸು ಈಗಾಗಲೇ ನಾನು ಆಯಾಸವಾಗಿದ್ದೇನೆ ನಡೆಯಲು ಆಗುತ್ತಿಲ್ಲ ನಿನ್ನನ್ನು ತಿಂದರೆ ಸ್ವಲ್ಪ ಶಕ್ತಿ ಬರುತ್ತದೆ ಎಂದು ಚಿರತೆ ಹೇಳುತ್ತದೆ ನಾಯಿ ನಾನು ನಿನಗೆ ಪ್ರಾಣ ಉಳಿಸಿದ್ದೇನೆ ಎಂದು ಹೇಳಿದಾಗ ಇದೇ ಪ್ರಕೃತಿ ನಿಯಮ ಎಂದು ಚಿರತೆ ಹೇಳುತ್ತದೆ.

 ಈ ಮೂರು ಘಟನೆಗಳನ್ನು ಯುವಕ ನೋಡಿ ಬರುತ್ತಿರುತ್ತಾನೆ ಇನ್ನೇನು ಊರಿಗೆ ಸೇರಬೇಕು ಆಗ ಒಂದು ಹುಲಿಯು ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುತ್ತದೆ ಯುವಕನನ್ನು ಹೇಳುತ್ತದೆ ದಯವಿಟ್ಟು ನನ್ನನ್ನು ಬಿಡಿಸು ಆಗ ಯುವಕನು ಯೋಚನೆ ಮಾಡುತ್ತಾನೆ ನಂತರ ಮತ್ತೆ ಯೋಚನೆ ಮಾಡಿ ಅರಣ್ಯ ಇಲಾಖೆ ಅವರಿಗೆ ಹೇಳುತ್ತಾನೆ ಉಪಕಾರ ಮಾಡುವುದು ಒಳ್ಳೆಯ ಗುಣವೇ ಆದರೆ ಉಪಕಾರ ಮಾಡಲು ಹೋಗಿ ನಾವೇ ಬಲಿಯಾಗಬಾರದು ಎಂದು ಹುಲಿಗೆ ಹೇಳುತ್ತಾನೆ.

ಎಲ್ಲರು ಒಂದಾಗಿ ಸೇರಿಕೊಂಡರೆ

ಒಂದು ಊರಿನಲ್ಲಿ ಒಬ್ಬ ಕಲ್ಮಶ್ ಬುದ್ಧಿವಂತ ಪ್ರಾಮಾಣಿಕನಾದ ಮನುಷ್ಯ ನಿದ್ದನು ಅವನಿಗೆ 6 ಆರು ಜನ ಗಂಡು ಮಕ್ಕಳು ಮಕ್ಕಳಲ್ಲಿ ಹೊಂದಾಣಿಕೆ ಇರಲಿಲ್ಲ ಯಾರಿಗೆ ಯಾರು ಸಹಕರಿಸುತ್ತಿರಲಿಲ್ಲ ಯಾವಾಗಲೂ ಜಗಳವಾಡುತ್ತಿದ್ದರು ಅಣ್ಣ ತಮ್ಮಂದಿರಲ್ಲಿ ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಬೇಸರ ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆಗೆ ತುಂಬಾ ಬೇಸರವಾಯಿತು ಚಿಂತೆಯಲ್ಲಿ ಮುಳುಗಿದರು ತಂದೆಯವರಿಗೆ ಇದ್ದಕ್ಕಿದ್ದ ಹಾಗೆ ಒಂದು ಉಪಾಯ ಹೊಳೆಯಿತು.

ಎಲ್ಲಾ ಮಕ್ಕಳಿಗೂ ಒಂದೊಂದು ಕಡ್ಡಿಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದನು ಅದರಂತೆ ಮಕ್ಕಳು ಎಲ್ಲರೂ ಒಂದೊಂದು ಕಡ್ಡಿಯನ್ನು ತಂದರು ಆಗ ಎಲ್ಲಾ ಕಡ್ಡಿಗಳನ್ನು ಜೋಡಿಸಿ ಸೇರಿಸಿ ಕಟ್ಟಿದ ಕಡ್ಡಿಯ ಕಟ್ಟನ್ನು ಕೊಟ್ಟರು ಇದನ್ನು ಮುರಿಯಿರಿ ಎಂದು ಒಬ್ಬನಿಗೆ ಕೊಟ್ಟು ನಂತರ ಮತ್ತೊಬ್ಬನಿಗೆ ಹೀಗೆ ಎಲ್ಲಾ ಮಕ್ಕಳಿಗೂ ಕೊಟ್ಟರು ಎಲ್ಲಾ ಮಕ್ಕಳು ಪ್ರಯತ್ನಿಸಿದರು.

ಮಕ್ಕಳು ಎಲ್ಲಾ ಸೇರಿದ ಕಡ್ಡಿಗಳು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಗ ಮತ್ತೆ ಆ ಎಲ್ಲಾ ಕಡ್ಡಿಗಳನ್ನು ಬಿಚ್ಚಿ ಮತ್ತೆ ಒಂದೊಂದಾಗಿ ಬೇರ್ಪಡಿಸಿ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಕಡ್ಡಿಯನ್ನು ಕೊಟ್ಟರು ನಂತರ ಆ ಕಡ್ಡಿಯನ್ನು ಮುರಿಯಿರಿ ಎಂದಾಗ ಸುಲಭವಾಗಿ ಆ ಕಡ್ಡಿಯನ್ನು ಮುರಿದರು.

ತಂದೆಯವರು ಏನು ಅರ್ಥವಾಯಿತು ಎಂದು ಕೇಳಿದರು ಮಕ್ಕಳು ಗೊತ್ತಿಲ್ಲ ಎಂದಾಗ ನೋಡಿ ನೀವು ಕೂಡ ಎಲ್ಲರೂ ಸೇರಿದರೆ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಆದರೆ ನೀವು ಒಬ್ಬರೇ ಇದ್ದರೆ ನಿಮ್ಮನ್ನು ತುಂಬಾ ಬೇಗ ಸೋಲಿಸಬಹುದಾಗಿದೆ ಒಂಟಿಯಲ್ಲಿ ಬಲವು ಕಡಿಮೆ ಇರುತ್ತದೆ ಎಲ್ಲರು ಒಂದಾಗಿ ಸೇರಿಕೊಂಡರೆ ಬಲವು ಮತ್ತಷ್ಟು ಹೆಚ್ಚಾಗುತ್ತದೆ ಇದು ನಮ್ಮ ಜೀವನಕ್ಕೆ ಅತಿ ಮುಖ್ಯ ಪಾಠ ಎಂದು ಹೇಳುತ್ತಾರೆ ನಂತರ ಅವರ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ.

]]>
https://babakategalu.com/%e0%b2%b8%e0%b2%bf%e0%b2%95%e0%b3%8d%e0%b2%95%e0%b3%87-%e0%b2%b8%e0%b2%bf%e0%b2%97%e0%b3%81%e0%b2%a4%e0%b3%8d%e0%b2%a4%e0%b2%a6%e0%b3%86/feed/ 0
ಆಪತ್ತು ಬಂದಾಗ https://babakategalu.com/%e0%b2%86%e0%b2%aa%e0%b2%a4%e0%b3%8d%e0%b2%a4%e0%b3%81-%e0%b2%ac%e0%b2%82%e0%b2%a6%e0%b2%be%e0%b2%97/ https://babakategalu.com/%e0%b2%86%e0%b2%aa%e0%b2%a4%e0%b3%8d%e0%b2%a4%e0%b3%81-%e0%b2%ac%e0%b2%82%e0%b2%a6%e0%b2%be%e0%b2%97/#respond Fri, 25 Apr 2025 04:40:00 +0000 https://babakategalu.com/?p=300 Read more]]> ವೀರಾಜಿತ್ ಮತ್ತು ಶೈಲ್ ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕಾಡಿನ ಹತ್ತಿರ ಪವಾಸ ಹೋಗುತ್ತಿರುತ್ತಾರೆ ಸ್ವಲ್ಪ ದಾರಿ ಸಾಗಿದ ನಂತರ ಒಂದು ಶಬ್ದ ಬರುತ್ತದೆ ಒಬ್ಬ ಸ್ನೇಹಿತ ನೋಡುತ್ತಾನೆ ಕರಡಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಇದನ್ನು ನೋಡಿ ಗಾಬರಿಯಾಗಿ ತನ್ನ ಆತ್ಮೀಯ ಮಿತ್ರನಿಗೂ ಹೇಳದೆ ತಾನು ಒಬ್ಬನೇ ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ.

 ಸ್ನೇಹಿತ ಮರ ಏಕೆ ಹತ್ತಿದನು ಎಂದು ಹಿಂದೆ ತಿರುಗಿ ನೋಡಿದರೆ ಕರಡಿಯು ಬರುತ್ತಿರುತ್ತದೆ ಆಗ ನಿಂತಿರುವನು ಹಾಗೆ ನಿಧಾನವಾಗಿ ಮಲಗಿ ಸತ್ತಂತೆ ನಟನೆ ಮಾಡುತ್ತಾನೆ ಕರಡಿಯು ಬಂದು ಬದುಕಿದ್ದಾನೆ ಎಂದು ಕೈ ಕಾಲು ಮುಖ ಕಿವಿ ನೆಕ್ಕುತ್ತದೆ ಆದರೂ ಇವನು ಸತ್ತಂತೆಯೇ ಮಲಗಿರುತ್ತಾನೆ.

 ಕರಡಿಗೆ ಮನುಷ್ಯ ಸತ್ತಿದ್ದಾನೆ ಎಂದು ತಿಳಿಯುತ್ತದೆ ನಂತರ ಕರಡಿಯು ಹೊರಟುಹೋಗುತ್ತದೆ ನಂತರ ಮರದ ಮೇಲೆ ಇದ್ದ ಸ್ನೇಹಿತ ನಿಧಾನವಾಗಿ ಕೆಳಗೆ ಇಳಿಯುತ್ತಾನೆ ಬಂದು ಕೇಳುತ್ತಾನೆ ನಿನ್ನ ಜೊತೆ ಕರಡಿ ಏನು ಮಾತನಾಡಿತು ಏನು ಹೇಳಿತು ಎಂದು ಕೇಳುತ್ತಾನೆ.

 ಸ್ನೇಹಿತ ಹೇಳುತ್ತಾನೆ ಕರಡಿ ನನಗೆ ನೀನು ಯಾರನ್ನೂ ನಂಬಬೇಡ ಕೆಲವರು ಆತ್ಮೀಯ ಸ್ನೇಹಿತರು ಇರುತ್ತಾರೆ ಆದರೆ ಆಪತ್ತು ಬಂದಾಗ ಬಿಟ್ಟು ಹೋಗುತ್ತಾರೆ ಇನ್ನು ಮುಂದೆ ಎಚ್ಚರಿಕೆಯಾಗಿ ಇರು ಎಂದು ಹೇಳಿತು ಎಂದು ಹೇಳಿದನು ಆಗ  ಮಿತ್ರನಿಗೆ ಅರ್ಥವಾಯ್ತು.

  ಮಿತ್ರ ಕ್ಷಮೆ ಕೇಳಿದನು ಕೆಲವರು ಆತ್ಮೀಯ ಸ್ನೇಹಿತರು ಇದ್ದೇ ಇರುತ್ತಾರೆ ಆದರೆ ಅವರ ಮಿತ್ರತ್ವ ಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತಾರೋ ಇಲ್ಲವೋ ಎಂಬುದರ ಮೇಲೆ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.

ಬೆಕ್ಕಿನ ನ್ಯಾಯ

ಕೋತಿ ಮತ್ತು ನಾಯಿ ಯಾವುದೋ ವಿಷಯದ ಬಗ್ಗೆ ಜಗಳವಾಡಿಕೊಂಡು ಬೆಕ್ಕಿನ ಹತ್ತಿರ ನ್ಯಾಯ ಕೇಳಲು ಬರುತ್ತವೆ ಮೊದಲಿಗೆ ನಾಯಿ ಹೇಳುತ್ತದೆ ನಾನು ಒಂದು ಕಡೆ ಇಟ್ಟ ವಸ್ತುಗಳನ್ನು ಕೋತಿ ಕಳ್ಳತನ ಮಾಡಿದೆ ಕೋತಿ ಹೇಳುತ್ತದೆ ನಾನು ಕಷ್ಟಪಟ್ಟು ವಸ್ತುವನ್ನು ಸಂಪಾದನೆ ಮಾಡಿದ್ದೇನೆ ನಾನು ಕಳ್ಳತನ ಮಾಡಿಲ್ಲ ಎಂದು ಸಾಬೀತುಪಡಿಸುತ್ತದೆ.

 ಬೆಕ್ಕು ಒಬ್ಬೊಬ್ಬರಾಗಿ ಕರೆದು ಕೇಳುತ್ತದೆ ಕೋತಿ ಒಂದು ರೀತಿ ಹೇಳುತ್ತದೆ ನಾಯಿ ಒಂದು ರೀತಿ ಹೇಳುತ್ತದೆ ಎರಡನ್ನು ಕೇಳಿಸಿ ಕೊಂಡು ಬೆಕ್ಕಿಗೆ ತಲೆಕೆಟ್ಟು ಹೋಗುತ್ತದೆ ಇಬ್ಬರಲ್ಲಿ ಯಾರು ಸರಿ ಎಂದು ತೀರ್ಮಾನ ಮಾಡುವುದೇ ಕಷ್ಟವಾಗುತ್ತದೆ ಆಗ ಬೆಕ್ಕು ಇಬ್ಬರು ಕೂಡ ತಪ್ಪು ಮಾಡಿದ್ದಿರಾ ಹಾಗಾಗಿ ಇಬ್ಬರಿಗೂ ಶಿಕ್ಷೆ ಆಗಲೇಬೇಕು ಎಂದು ಇಬ್ಬರಿಗೂ ಶಿಕ್ಷೆ ನೀಡುತ್ತದೆ.

 ಕೆಲವು ಸಾರಿ ಬೇರೆಯವರ ಮೇಲೆ ಆಪಾದನೆ ಹೇಳಲಿಕ್ಕೆ ಹೋದಾಗ ಕೆಲವೊಂದು ಸಾರಿ ಆ ಶಿಕ್ಷೆ ನಾವು ಅನುಭವಿಸಬೇಕಾದ ಸ್ಥಿತಿ ಬರಬಹುದು ಆದುದರಿಂದ ಎಚ್ಚರಿಕೆಯಾಗಿ ಇರೋಣ.

 ದೇಶಕ್ಕಾಗಿ ಹೋರಾಟ

ತಾರಾಸು ಕನ್ನಡದ ಹೆಸರಾಂತ ಕಾದಂಬರಿಕಾರರು ಇವರು ಸ್ವಾತಂತ್ರ ಹೋರಾಟದಲ್ಲೂ ಮುಖ್ಯವಾಗಿ ಭಾಗವಹಿಸಿದ್ದರು ನಂತರ ಹಲವಾರು ಗೆಳೆಯರು ಸರ್ಕಾರದಲ್ಲಿ ಒಳ್ಳೆಯ ಹುದ್ದೆಗಳನ್ನು ಪಡೆದರು ಆದರೆ  ತಾರಾಸು ಅವರು ಮಾತ್ರ ಜೀವನ ಪರ್ಯಂತ ಲೇಖಕರಾಗಿಯೇ ಉಳಿದರು.

ತಾರಾಸು ಅವರು ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದಾರೆ ಬಹಳಷ್ಟು ಕಾದಂಬರಿಗಳು ಹೆಸರುವಾಸಿಯಾಗಿವೆ ಆದರೆ ಸಾಕಷ್ಟು ಹಣ ಗಳಿಸಲಿಲ್ಲ ಅದಕ್ಕಾಗಿ ಸ್ನೇಹಿತರಲ್ಲಿ ಒಬ್ಬ ಸ್ನೇಹಿತ  ಉನ್ನತ ಹುದ್ದೆಯಲ್ಲಿ ಇದ್ದರು   ಪರಸು ಅವರ ಆಪ್ತಮಿತ್ರ ಸಚಿವರನ್ನು ಮಾತನಾಡಿಸಿ  ತರಸು ಅವರ ಯೋಗ ಕ್ಷೇಮವನ್ನು ವಿಚಾರಿಸಿ ಮನೆಯ ವಿಷಯ ಎಲ್ಲವನ್ನೂ ಚರ್ಚಿಸಿ  ನಂತರ ಅವರು ಹೇಳಿದರು.

 ನೀವು ನಿಮ್ಮ ದಿನನಿತ್ಯದ ಖರ್ಚಿಗೆ ಸಹಾಯವಾಗುತ್ತದೆ ಏಕೆ ನೀವು ಸ್ವಲ್ಪ ಜಮೀನನ್ನು ಖರೀದಿಸಬಾರದು ಎಂದು ಹೇಳಿದರು ಆಗ ತರಾಸು ಅವರು ಹೇಳಿದರು ನನ್ನ ಹತ್ತಿರ ಅಷ್ಟು ಹಣ ಎಲ್ಲಿಂದ ಬರಬೇಕು ಎಂದು ಕೇಳಿದರು.

ತನ್ನ ಸ್ನೇಹಿತ ಸಚಿವರು ನೀವು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಂದು ಅರ್ಜಿ ಬರೆದು ಸರ್ಕಾರಕ್ಕೆ ಸಲ್ಲಿಸಿದರೆ ಸಾಕು ನಿಮಗೆ ಜಮೀನು ಸಿಗುತ್ತದೆ ಎಂದು ತಿಳಿಸಿ ಒಂದು ಅರ್ಜಿಯನ್ನು ತಂದು ಕೊಟ್ಟರು ಮನೆಗೆ ಹೋಗಿ ತಮ್ಮ ಪತ್ನಿಗೆ ಹೇಳಿದರು.

 ತಾರಾಸು ಅವರ ಪತ್ನಿ ಕೇಳಿದರು ನೀವು ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಟ ಮಾಡಿದ್ದು ದೇಶಕ್ಕಾಗಿಯೋ ಅಥವಾ ಜಮೀನು ಪಡೆಯುವುದಕ್ಕಾಗಿಯೂ ಎಂದು ಕೇಳಿದರು ತರಾಸು ದೇಶಕ್ಕಾಗಿ ಹೋರಾಟ ಮಾಡಿದ್ದು ಎಂದು ಉತ್ತರಿಸಿದಾಗ ಅರ್ಜಿಯನ್ನು ಹರಿದು ಬಿಸಾಕಿದರು ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ಹಾಗೆ ಬದುಕು ಸಾಗಿಸಿದರಂತೆ.

ನಾವು ಹುಡುಕಿದರೆ ಮಾತ್ರ ಸಿಗುತ್ತದೆ

ಒಬ್ಬ ಸುಜ್ಞಾನ್ ಯುವಕ ಬಹಳಷ್ಟು ದಿನಗಳ ನಂತರ ಜಾತ್ರೆಗೆ ಹೋಗುತ್ತಾನೆ ನಂತರ ವಿಶ್ರಾಂತಿ ಪಡೆಯಲು ಒಂದು ಕಡೆ ಹೋಗಿ ಕುಳಿತುಕೊಂಡನು ಅಲ್ಲಿ ಒಬ್ಬರು ವಯಸ್ಸಾದ ಹಿರಣ್ಣಯ್ ವ್ಯಕ್ತಿ ಕುಳಿತಿರುತ್ತಾರೆ ಆಗ ಈ ಯುವಕನು ವಯಸ್ಸಾದವರ ಜೊತೆ ಮಾತಾಡುತ್ತಾನೆ ನಂತರ ವಯಸ್ಸಾದವರಿಗೆ ಹೇಳುತ್ತಾನೆ.

 ಏನೇ ಹೇಳಿ ದೇವರು ಮಾತ್ರ ಇಲ್ಲ ಎಂದು ಹೇಳುತ್ತಾನೆ ನೀವು ಹೇಗೆ ಖಚಿತವಾಗಿ ಹೇಳುತ್ತೀರಿ ಎಂದು ಹಿರಿಯರು ಹೇಳುತ್ತಾರೆ ಅದಕ್ಕೆ ಸಾಕ್ಷಿ ಇದೆಯೇ ಎಂದು ಕೇಳುತ್ತಾರೆ ನಿಜವಾಗಿ ದೇವರು ಇದ್ದಿದ್ದರೆ ದುಃಖಗಳು ಇರಬಾರದು ರೋಗಿಗಳು ಏಕೆ ಇದ್ದಾರೆ ಅನಾಥರು ಏಕೆ ಆಗಬೇಕು ನೋವು ಸಾವುಗಳು ಕಷ್ಟಗಳು ಏಕೆ ಬರುತ್ತವೆ.

 ದೇವರ ಪ್ರೀತಿ ಅನ್ನುವುದು ಇದ್ದಿದ್ದರೆ ಇಂತಹ ಸಮಸ್ಯೆಗಳು ಇರುತ್ತಿರಲಿಲ್ಲ ಆದುದರಿಂದ ನಾನು ದೇವರು ಇಲ್ಲ ಎಂದು ಖಂಡಿತವಾಗಿ ಹೇಳುತ್ತೇನೆ ಎಂದು ಹೇಳುತ್ತಾನೆ ಹಿರಿಯರಾದವರು ಕೇಳಿದ ನಂತರ ಹೇಗೆ ಇವನನ್ನು ಹೇಳಬೇಕು ಎಂದು ಆಲೋಚನೆ ಮಾಡುತ್ತಿರುತ್ತಾರೆ.

 ಅಷ್ಟರಲ್ಲಿ ಒಬ್ಬ ವ್ಯಕ್ತಿ ಹರಿದ ಬಟ್ಟೆಗಳನ್ನು ಧರಿಸಿದನು ತಲೆ ಕೆದರಿಕೊಂಡು ತಲೆ ಬಾಚಿರುವುದಿಲ್ಲ ತಲೆ  ಕೂದಲುಗಳು  ಮುಳ್ಳಿನಂತೆ ಕಾಣುತ್ತಿರುತ್ತದೆ. ಕೂದಲು ತುಂಬಾ ಉದ್ದವಾಗಿ ಇರುತ್ತವೆ ತಲೆ ಕೂಡ ಬಾಚಿರುವುದಿಲ್ಲ ಗಡ್ಡವೂ ಕೂಡ ತುಂಬಾ ಆಲದ ಮರದ ಬೇಲಿಗಳಂತೆ ಬೆಳೆದು ವಿಚಿತ್ರವಾಗಿ ಒಬ್ಬ ಭಿಕ್ಷೆ ಬೇಡುವನಂತೆ ಕಾಣುತ್ತಿರುತ್ತಾನೆ.

 ಈ ವ್ಯಕ್ತಿಯನ್ನು ನೋಡಿದ ತಕ್ಷಣ ಇವರಿಗೆ ಒಂದು ಉಪಾಯ ಹೊಳೆಯುತ್ತದೆ ಆಗ ಆ ಯುವಕನನ್ನು ಹಿರಿಯರು ಕ್ಷೌರಿಕ ಇಲ್ಲ ಎಂದು ನಾನು ಹೇಳುತ್ತೇನೆ ಆಗ ಆ ಯುವಕ ಏಕೆ ಇಲ್ಲ ಕ್ಷೌರಿಕ ಇದ್ದೇ ಇದಾನೆ ಬೇಕಾದರೆ ನಾನು ನಿಮಗೆ ಸಾಕ್ಷಿ ಸಮೇತ ತೋರಿಸುತ್ತೇನೆ ಎಂದು ಮುಂದೆ ಇರುವ ಕ್ಷೌರಿಕನ ಒಂದು ಅಂಗಡಿ ತೋರಿಸುತ್ತಾನೆ.

ಹಿರಿಯರು ಆ ಭಿಕ್ಷುಕ ಕ್ಷೌರಿಕ ಅಂಗಡಿ ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದು ತಿಳಿದಿದ್ದಾನೆ ಭಿಕ್ಷುಕನು ಕ್ಷೌರಿಕನ ಅಂಗಡಿಗೆ ಹೋದರೆ ಅವನಿಗೂ ಕ್ಷೌರ ಮಾಡಿ ಅವನು ನೀಟಾಗಿ ಕಾಣುತ್ತಾನೆ ಅವನು ಹೋಗಲಿಲ್ಲ ವೆಂದರೆ ಅವನಿಗೆ ಅದೇ ರೀತಿ ಭಿಕ್ಷುಕನಂತೆಯೇ ಇರುತ್ತಾನೆ ಎಂದು ಹೇಳಿದರು.

 ಹಾಗೆಯೇ ನಾವು ಹುಡುಕಿದರೆ ಸಿಗುತ್ತದೆ ಹುಡುಕದೆಯೇ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹಿರಿಯರು ಉದಾಹರಣೆ ಸಮೇತ ತಿಳಿಸುತ್ತಾರೆ.

ಶಾಂತಿಯಿಂದ ಇರಬಹುದು

ಮುಸ್ಸಂಜೆಯ ವಾತಾವರಣವಿತ್ತು ಒಬ್ಬ ಸವರತ್ ಶ್ರೀಮಂತ ವಾಯು ವಿಹಾರಕ್ಕೆ ಬಂದು ನದಿಯ ಒಂದು ದಡದಲ್ಲಿ ಕುಳಿತು ಧ್ಯಾನವನ್ನು ಮಾಡುತ್ತಿದ್ದನು ನಂತರ ಒಬ್ಬ ವಯಸ್ಸಾದ ಬಾಬಾ ಅವರು ಬಂದರು ನದಿಯಲ್ಲಿ ಇಳಿದರು ಸ್ನಾನ ಮಾಡಿದರು ಬಟ್ಟೆಯನ್ನು ಒಗೆಯುತ್ತಿದ್ದರು.

 ಬಟ್ಟೆ ಒಗೆಯುತ್ತಿದ್ದಾಗ ಸ್ವಲ್ಪ ನೀರು ಆ ಶ್ರೀಮಂತನ ಮೇಲೇ ಬಿತ್ತು ಆಗ ಶ್ರೀಮಂತನು ವಯಸ್ಸಾದವರನ್ನು ನಿಮಗೆ ಕಣ್ಣು ಕಾಣುವುದಿಲ್ಲವೇ ನಾನು ಧ್ಯಾನ ಮಾಡುತ್ತಿದ್ದೇನೆ ಎಂದು ಸಿಟ್ಟಿನಿಂದ ಹೇಳಿದನು ಆಗ ವಯಸ್ಸಾದ ಬಾಬಾ ಹೇಳಿದರು ನೀವು ಧ್ಯಾನ ಧ್ಯಾನ ಮಾಡುತ್ತಿದ್ದೀರೋ ಅಥವಾ ಸಂತೆಯಲ್ಲಿ ಯಾವ ಬಟ್ಟೆ ಖರೀದಿ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದು ಯೋಚಿಸುತ್ತಿದ್ದೀರಾ ಎಂದು ಹೇಳಿದರು.

 ಈ ಮಾತನ್ನು ಕೇಳಿದ ತಕ್ಷಣ ಶ್ರೀಮಂತನ ಆಶ್ಚರ್ಯಚಕಿತನಾದ ಅವರು ಹೇಳಿದ್ದು ಸರಿಯಾಗಿಯೇ ಇತ್ತು ಆಗ ಶ್ರೀಮಂತನು ನನ್ನ ಮನಸ್ಸಿನಲ್ಲಿ ಇರುವುದನ್ನು ಹೇಳುವವರು ಸಾಮಾನ್ಯ ವ್ಯಕ್ತಿಯಲ್ಲ ಎಂದು ಅರಿತುಕೊಂಡನು ನಂತರ ಬಾಬಾ ಅವರಿಗೆ ನಮಸ್ಕಾರ ಮಾಡಿದನು ನಂತರ ಬಾಬಾ ಅವರು ಹೇಳಿದರು.

  ಕೆಲವರಿಗೆ ಧ್ಯಾನ, ಜಪ, ಪ್ರಾರ್ಥನೆ ಮಾಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಅದರ ಮೇಲೆ ಮಾತ್ರ ಗಮನ ಇರಬೇಕು ಇಲ್ಲದಿದ್ದರೆ ಏನೇ ಮಾಡಿದರೂ ಪ್ರಯೋಜನವಿಲ್ಲ.

ನಮ್ಮ ಮನಸ್ಸಿನ ಉದ್ವೇಗಗಳನ್ನು ಕಡಿಮೆ ಮಾಡಿಕೊಂಡಾಗ ಮಾತ್ರ ಶಾಂತಿ ದೊರೆಯುತ್ತದೆ ಮೊದಲು ಮನಸ್ಸಿಗೆ ಶಾಂತಿ ಬೇಕು ಮನಸ್ಸಿನಲ್ಲಿ ಸಾತ್ವಿಕ ವಿಚಾರಗಳನ್ನು ನೆಲೆಸಿದರೆ ಮಾಡಿದರೆ ಮಾತ್ರ ಶಾಂತಿಯಿಂದ ಇರಬಹುದು ಇದಕ್ಕಾಗಿ ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಹೇಳಿದರು ಆಗ ಶ್ರೀಮಂತನು ಅರ್ಥಮಾಡಿಕೊಂಡನು.

]]>
https://babakategalu.com/%e0%b2%86%e0%b2%aa%e0%b2%a4%e0%b3%8d%e0%b2%a4%e0%b3%81-%e0%b2%ac%e0%b2%82%e0%b2%a6%e0%b2%be%e0%b2%97/feed/ 0
ಶಾಂತಿ ನೆಮ್ಮದಿಯ ರಹಸ್ಯವೇನು? https://babakategalu.com/%e0%b2%b6%e0%b2%be%e0%b2%82%e0%b2%a4%e0%b2%bf-%e0%b2%a8%e0%b3%86%e0%b2%ae%e0%b3%8d%e0%b2%ae%e0%b2%a6%e0%b2%bf%e0%b2%af-%e0%b2%b0%e0%b2%b9%e0%b2%b8%e0%b3%8d%e0%b2%af%e0%b2%b5%e0%b3%87%e0%b2%a8%e0%b3%81/ https://babakategalu.com/%e0%b2%b6%e0%b2%be%e0%b2%82%e0%b2%a4%e0%b2%bf-%e0%b2%a8%e0%b3%86%e0%b2%ae%e0%b3%8d%e0%b2%ae%e0%b2%a6%e0%b2%bf%e0%b2%af-%e0%b2%b0%e0%b2%b9%e0%b2%b8%e0%b3%8d%e0%b2%af%e0%b2%b5%e0%b3%87%e0%b2%a8%e0%b3%81/#respond Thu, 24 Apr 2025 04:40:00 +0000 https://babakategalu.com/?p=298 Read more]]> ಒಂದು ಊರಿನಲ್ಲಿ ಒಬ್ಬ ಯೋಗಿನ್ ಯುವಕ ಸದಾ ಒಂದು ಮರದ ಕೆಳಗೆಯೇ ಇರುತ್ತಾನೆ ಅದೇ ಅವನ ವಾಸಸ್ಥಾನ ಎಂದು ಹೇಳಬಹುದು ಊರಿನವರು ಏನಾದರೂ ಕೊಟ್ಟರೆ ತಿನ್ನುತ್ತಾನೆ ಇಲ್ಲದಿದ್ದರೆ ಇಲ್ಲ ಅವನಾಗಿ ಭಿಕ್ಷೆ ಬೇಡಲು ಹೋಗುವುದಿಲ್ಲ ಆಗಾಗ ಉಪನ್ಯಾಸಗಳನ್ನು ನೀಡಿ ಬರುತ್ತಿರುತ್ತಾನೆ.

ದಿನನಿತ್ಯ ಎರಡು ಸಾರಿ ಯೋಗ ಅಭ್ಯಾಸವನ್ನು ಮಾಡುತ್ತಾನೆ ಒಂದು ಸಾರಿ ರಾಜರು ವಾಯು ವಿಹಾರಕ್ಕೆ ಬರುತ್ತಾರೆ ಆಗ ಯುವಕನನ್ನು ನೋಡುತ್ತಾರೆ ಯೋಗಿಯಂತೆ ಕಾಣುತ್ತಿದ್ದಾನೆ ಎಂದು ಯೋಗಿಗೆ ಹೋಗಿ ಮಾತನಾಡಿಸುತ್ತಾರೆ.

 ಯೋಗಿಗಳೇ ನೀವು ದಿನನಿತ್ಯ ಯೋಗ ಅಭ್ಯಾಸ ಮಾಡುತಿದ್ದೀರಾ ಎಂದಾಗ ಯುವಕ ಯೋಗಿ ಹೌದು ಎನ್ನುತ್ತಾನೆ ನಂತರ ರಾಜನು ಬಹಳಷ್ಟು ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತಾರೆ ಯುವಕ ಯೋಗಿಯು ರಾಜರ ಪ್ರಶ್ನೆಗಳಿಗೆ ಕೆಲವು ಕ್ಷಣಗಳು ಯೋಚಿಸಿ ನಂತರ ನಿಖರವಾದ ಉತ್ತರವನ್ನು ಕೊಡುತ್ತಾನೆ ಆಗ ರಾಜನಿಗೆ ತುಂಬಾ ಸಂತೋಷವಾಗುತ್ತದೆ ಆಗ ರಾಜನು ಯೋಗಿಗೆ ಹೇಳುತ್ತಾನೆ.

 ಯೋಗಿಯವರೇ ನೀವು ಇಲ್ಲಿ ಇರುವ ಬದಲು ನನ್ನ ಅರಮನೆಯಲ್ಲಿ ಇದ್ದರೆ ನಮ್ಮ ಅರಮನೆಯಲ್ಲಿಯೂ ಬಹಳಷ್ಟು ಜನ ಯೋಗಾಭ್ಯಾಸ ಮಾಡುತ್ತಾರೆ   ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ರಾಜರು ಹೇಳಿದರು ಅದಕ್ಕೆ ಯೋಗಿಯು ಕೆಲವು ನಿಮಿಷಗಳು ಯೋಚನೆ ಮಾಡಿ ಆಗಲಿ ನಾನು ಬರುತ್ತೇನೆ ಎಂದು ಅರಮನೆಗೆ ಯೋಗಿಯು ಬಂದನು.

 ಯೋಗಿಯ ಕೆಲಸ ಇಷ್ಟೇ ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಯೋಗ ಅಭ್ಯಾಸವನ್ನು ಎಲ್ಲರಿಗೂ ಹೇಳಿಕೊಡುತ್ತಿದ್ದನು ನಂತರ ತನಗೆ ಹೇಗೆ ಬೇಕೋ ಹಾಗೆ ಇರುತ್ತಿದ್ದನು ದಿನ ಕಳೆದಂತೆ ಎಲ್ಲರೂ ಯಾವ ರೀತಿ (ಎಂಜಾಯ್) ಸಂತೋಷ ಆನಂದದಿಂದ ಇರುತ್ತಾರೆ ಅದೇ ರೀತಿ ಯೋಗಿಯೂ ಕೂಡ ಎಂಜಾಯ್ ಮಾಡಿಕೊಂಡು ಇರುತ್ತಿದ್ದನು.

 ಬಹಳಷ್ಟು ದಿನಗಳ ನಂತರ ರಾಜನಿಗೆ ಯೋಗಿ ಯಾವಾಗ ಹೋಗುತ್ತಾನೆ ಎಂದು ಯೋಚಿಸಿದರು ಏಕೆಂದರೆ ಯೋಗಿಯ ಚಲನ ವಲನ ಗಳಿಲ್ಲವೂ ಸಹಜ ರೀತಿಯಲ್ಲಿಯೇ ಇದೆ ಯೋಗಿ ಯಾಗಿ ಇರುವ ಬದಲು ಭೋಗಿಯಂತೆ ಚೆನ್ನಾಗಿ ತಿನ್ನುತ್ತಿದ್ದಾನೆ ಒಳ್ಳೆಯ ಬಟ್ಟೆಗಳು ಹಾಕಿಕೊಂಡು ಮಿಂಚುತ್ತಿದ್ದಾನೆ ನಂತರ ರಾಜನು ಯೋಗಿಗೆ ಕರೆದು ಯೋಗಿಯವರೇ ನೀವು ಯಾವಾಗ ಇಲ್ಲಿಂದ ಹೋಗುತ್ತೀರಿ ಎಂದು ಕೇಳುತ್ತಾರೆ.

 ಯುವಕ ಯೋಗಿಯು ನಗುತ್ತಾ ರಾಜರೇ ಈ ಪ್ರಶ್ನೆಯನ್ನು ನೀವು ನಾನು ಬಂದ ಎರಡು ವಾರಕ್ಕೆ ಕೇಳಬೇಕಾಗಿತ್ತು ಆದರೆ ನೀವು ಐದು ತಿಂಗಳ ನಂತರ ಕೇಳುತ್ತಿದ್ದೀರಿ ಇರಲಿ ನಾನು ನಾಳೆ ಹೊರಡುತ್ತೇನೆ ಆದರೆ ನೀವೇ ನನಗೆ ಅರಮನೆಯಿಂದ ಆಚೆಯವರೆಗೂ ಬಿಡಲು ಬರಬೇಕು ಎಂದು ಕೇಳಿಕೊಳ್ಳುತ್ತಾನೆ ಆಗ ರಾಜರು ಆಗಲಿ ಎಂದು ಒಪ್ಪಿಕೊಳ್ಳುತ್ತಾರೆ.

 ಮಾರನೆಯ ದಿನ ಯೋಗಿಯನ್ನು ಕರೆದುಕೊಂಡು ಅರಮನೆಯ ಆಚೆ ಬರುತ್ತಾರೆ ಯೋಗಿಯ ಮುಖದಲ್ಲಿ ಶಾಂತಿ ಸಂತೋಷ ದಿಂದ ಇರುತ್ತಾನೆ ಇದನ್ನು ನೋಡಿದ ರಾಜನು ಹೇಳುತ್ತಾನೆ ಯೋಗಿಯವರೇ ನೀವು ಯಾವಾಗಲೂ ಶಾಂತಿ ನೆಮ್ಮದಿಯಿಂದ ಇರುತ್ತೀರಿ ಇದರ ರಹಸ್ಯವೇನು ಎಂದು ಕೇಳುತ್ತಾರೆ ಆಗ ಯೋಗಿ ಹೇಳುತ್ತಾನೆ.

 ರಾಜರೆ ಅದು ನಿಮಗೂ ಸಾಧ್ಯವಿದೆ ನಾನು ತುಂಬಾ ಶಾಂತಿ ನೆಮ್ಮದಿಯಿಂದ ಇದ್ದೇನೆ ಇದೆ ಶಾಂತಿ ನೆಮ್ಮದಿ ನಿಮಗೂ ಬೇಕಿದ್ದರೆ ಬನ್ನಿ ನನ್ನ ಜೊತೆ ಹೋಗೋಣ ಎಂದು ಕರೆಯುತ್ತಾನೆ ಆಗ ರಾಜರು ಇಲ್ಲ ನಾನು ಬರಲು ಸಾಧ್ಯವಿಲ್ಲ ಏಕೆಂದರೆ ನನಗೆ ಬಹಳಷ್ಟು ಜವಾಬ್ದಾರಿಗಳಿವೆ ಎಂದಾಗ ಯೋಗಿಯು ಹೇಳುತ್ತಾನೆ.

ರಾಜರೇ ಯೋಗಿಗೂ ಸಾಮಾನ್ಯರಿಗೂ ಇಷ್ಟೆ ವ್ಯತ್ಯಾಸ ನೋಡಿ ನಾನು ನಿಮ್ಮ ಅರಮನೆಯಲ್ಲಿ ಇಷ್ಟು ದಿನ ಸಂತೋಷವಾಗಿಯೇ ಇದ್ದೆ ಈಗಲೂ ನಾನು ಸಂತೋಷವಾಗಿದೆ ಇದ್ದೇನೆ ಮುಂದೆಯೂ ಕೂಡ ನಾನು ಸಂತೋಷವಾಗಿರುತ್ತೇನೆ ಸಾಮಾನ್ಯನಿಗೂ ಯೋಗಿಗೂ ಇಷ್ಟೇ ವ್ಯತ್ಯಾಸ ಎಲ್ಲಿ ಯಾವಾಗ ಹೇಗೆ ಇರಬೇಕು ಹಾಗೆಯೇ ಸಂತೋಷದಿಂದ ಕಾಲ ಕಳೆಯುತ್ತೇನೆ ಎಂದು ಹೇಳಿದನು. ಹಾಗೆಯೇ ನಾವು ಕೂಡ ಯಾವುದೇ ಸಂದರ್ಭ ಸನ್ನಿವೇಶವಿರಲಿ ತೃಪ್ತಿ ನೆಮ್ಮದಿಯಾಗಿ ಇರೋಣ.

ಕೆಲವರು ಪ್ರಾರ್ಥಿಸುತ್ತಲೆ ಕಾಲ ಕಳೆದರು

ಒಂದು ಹಳ್ಳಿಯಲ್ಲಿ ಬಿಲ್ವತೇಜ್ ಮತ್ತು ವಿಧೋತ್ ಇಬ್ಬರು ರೈತರು ವಾಸವಾಗಿದ್ದರು ಇವರು ತಮ್ಮ ಹೊಲಗದ್ದೆ ಕೆಲಸಗಳನ್ನು ತಾವೇ ಮಾಡುತ್ತಿದ್ದರು ಮತ್ತೆ ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು ಪ್ರತಿ ಸಾರಿಯಂತೆ ರೈತರು ಬೀಜಗಳನ್ನು ಹಾಕಿ ಪೈರು ಬಂದ ನಂತರ ಸಸಿಯನ್ನು ನೆಟ್ಟರು ಪೈರು ಬೆಳೆಯುತ್ತಾ ಬಂದಿತು.

ಪ್ರತಿ ವರ್ಷದಂತೆ ಬರಬೇಕಾಗಿದ್ದ ಮಳೆಯೂ ಬರಲಿಲ್ಲ ಆದ್ದರಿಂದ ಆ ಹಳ್ಳಿಯವರು ಎಲ್ಲರೂ ಕಂಗಾಲಾದರು ಏನು ಮಾಡುವುದು ಎಂದು ಚಿಂತೆಯಲ್ಲಿ ಮುಳುಗಿದರು ಹಳ್ಳಿಯವರು ಪೂಜೆ ಪ್ರಾರ್ಥನೆಗಳನ್ನು ಮಾಡಿದರು ಹೀಗೆ ಕೆಲವು ದಿನಗಳು ಕಳೆದವು.

 ಬರಬೇಕಾಗಿದ್ದ ಮಳೆ ಬರಲೇಇಲ್ಲ ಒಬ್ಬ ಬುದ್ಧಿವಂತ ರೈತನು ಯೋಚಿಸಿದ ಅವನಿಗೆ ಒಂದು ಉಪಾಯ ಹೊಳೆಯಿತು ಏನೆಂದರೆ ತಾನು ಮತ್ತು ತನ್ನ ಸ್ನೇಹಿತರು ತನ್ನ ಸಂಬಂಧಿಕರು ಎಲ್ಲರೂ ಸೇರಿ ಬೆಳಗಿನ ಜಾವದಿಂದಲೇ ಒಂದು ಬಾವಿಯನ್ನು ತೋಡಲು ಶುರು ಮಾಡಿದರೂ.

 ಕೊನೆಗೆ ನೀರು ಬಂತು ನೀರನ್ನು ಹೊಲ ಗದ್ದೆಗಳಿಗೆ ಹಾಕಿದರೂ ಅವರ ಬೆಳೆಯೂ ಚೆನ್ನಾಗಿ ಫಸಲು ಕಂಡಿತ್ತು ಮತ್ತೆ ಕೆಲವರು ಪ್ರಾರ್ಥಿಸುತ್ತಲೆ ಕಾಲ ಕಳೆದರು.

ಕೊಟ್ಟರೆ ಮತ್ತೆ ಮರಳಿ ಬರುತ್ತದೆ

ಹಲವಾರು ವರ್ಷಗಳ ಹಿಂದೆ ಹಳ್ಳಿಯ ಹೊರಗೆ ಒಬ್ಬ ದೈತ್ಯಾಕಾರದ ರಾಕ್ಷಸ ಇದ್ದನಂತೆ ಹಳ್ಳಿಯಿಂದ ಹೊರಗೆ ಹೋಗಬೇಕಾದರೆ ಜನ ಹೆದರುತ್ತಿದ್ದರು ಇದರಿಂದಾಗಿ ಹಳ್ಳಿಯಲ್ಲಿ ಪರಿಸ್ಥಿತಿ ತುಂಬ ಚಿಂತಾಜನಕವಾಯಿತು ಹಳ್ಳಿಯ ಒಬ್ಬ ವ್ಯಕ್ತಿ ರಾಕ್ಷಸನನ್ನು ಓಡಿಸುತ್ತೇನೆ ಎಂದು ಹೋದನು.

 ಅವನೇ ಓಡಿಬಂದನು ಅದೇ ರೀತಿ ಇನ್ನೊಬ್ಬ ವ್ಯಕ್ತಿ ರಾಕ್ಷಸನಿಗೆ ಕಷ್ಟ ಕೊಡುತ್ತೇನೆ ಎಂದನು ಇವನೇ ಕಷ್ಟ ಕ್ಕೆ ಗುರಿಯಾದನು ಇನ್ನೊಬ್ಬ ಹಳ್ಳಿಯವನು ರಾಕ್ಷಸನ ಕಾಲು ಮುರಿಯುತ್ತೇನೆ ಎಂದು ಹೋದವನು ಕಾಲು ಮುರಿದುಕೊಂಡು ಬಂದನು ಇನ್ನೊಬ್ಬ ಯುವಕ ರಾಕ್ಷಸನನ್ನು ಸಾಯಿಸಿ ಬಿಡ್ತೀನಿ ಎಂದು ಹೋದನು ಆದರೆ ಇವನೇ ಸತ್ತನು.

ಕೆಲವು ದಿನಗಳ ನಂತರ ಹಳ್ಳಿಯ ಜನರು ತುಂಬಾ ಚಿಂತೆಯಲ್ಲಿ ಮುಳುಗಿದರು ರಾಕ್ಷಸನನ್ನು ಹೇಗೆ ಓಡಿಸುವುದು ಎಂದು ಚಿಂತಿಸುತ್ತಿದ್ದರು ನಂತರ ಬಾಬಾ ಅವರು ಆ ಹಳ್ಳಿಗೆ ಬರುತ್ತಾರೆ ಬಂದು ಇಲ್ಲಿನ ವಿಷಯವೆಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ನಂತರ ನಾನು ನೋಡಿ ಬರುತ್ತೇನೆ ಎಂದು ಹೋಗುತ್ತಾರೆ.

ಊರಿನವರು ಬಾಬಾ ಅವರಿಗೆ ಏನಾಗುತ್ತದೋ ಎಂದು ಹಿಂದೆ ಬರುತ್ತಾರೆ. ಬಾಬಾ ಅವರು ಆ ರಾಕ್ಷಸ ಇರುವ ಕಡೆಗೆ ಹೋಗುತ್ತಾರೆ ರಾಕ್ಷಸ ಮರದ ಮೇಲೆ ಕುಳಿತಿದ್ದಾನೆ ಆಗ ಬಾಬಾ ಅವರು ತುಂಬಾ ನಗು ಮುಖದಿಂದ ನೋಡಿದರು.

 ತಮ್ಮ ಜೋಳಿಗೆಯಲ್ಲಿ ಕೈ ಹಾಕಿದರು 2 ಹಣ್ಣುಗಳು ಇತ್ತು ಅದನ್ನು ಆ ರಾಕ್ಷಸನಿಗೆ ಕೊಟ್ಟರು ಆ 2 ಹಣ್ಣುಗಳನ್ನು ರಾಕ್ಷಸ ಪಡೆದುಕೊಂಡು ತಿಂದು ಸಂತೋಷಪಟ್ಟಿತು ನಂತರ ಸ್ವಲ್ಪ ಸಮಯದಲ್ಲಿಯೇ ಆ ರಾಕ್ಷಸನು ಬೇರೆ ರೀತಿಯ ಹಣ್ಣುಗಳನ್ನು ತಂದು ಬಾಬಾ ಅವರ ಕೈಗೆ ಕೊಟ್ಟಿತು ಬಾಬಾ ಅವರಿಗೆ ಆಶ್ಚರ್ಯವಾಯ್ತು.

 ಮರಳಿ ಬಂದರು ಇದನ್ನೆಲ್ಲ ಊರಿನವರು ಕೂಡ ದೂರದಿಂದ ನೋಡುತ್ತಿದ್ದರು ನಂತರ ಮಾರನೆಯ ದಿನ ಬೇರೆ ರೀತಿಯ ತಿಂಡಿಗಳನ್ನು ತೆಗೆದುಕೊಂಡು ಹೋಗಿ ರಾಕ್ಷಸನಿಗೆ ಕೊಟ್ಟರು ಆ ರಾಕ್ಷಸನ ಸ್ವಲ್ಪ ಸಮಯದಲ್ಲಿ ಬೇರೆ ಇತರ ಹಣ್ಣು ಹಂಪಲುಗಳನ್ನು ಕೊಟ್ಟಿತು ಬಾಬಾ ಅವರಿಗೆ ಮತ್ತೆ ಆಶ್ಚರ್ಯವಾಯ್ತು ಮತ್ತೆ ಮಾರನೇ ದಿನ ಅದ್ಬುತವಾದ ಊಟವನ್ನು ನೀಡಿದರು.

ರಾಕ್ಷಸನು ಕೂಡ ಸ್ವಲ್ಪ ಸಮಯದ ನಂತರ ಕೊಬ್ಬರಿ ಬಾದಾಮಿ ಏನೇನೋ ತಿನ್ನುವ ಆಹಾರ ಕೊಟ್ಟಿತು ನಂತರ ಬಾಬಾ ಅವರು ಅರ್ಥಮಾಡಿಕೊಂಡರು ನಾವು ಈ ರಾಕ್ಷಸನಿಗೆ ಏನು ನೀಡುತ್ತೇವೊ ಅದರ ಬದಲಿಗೆ ಬೇರೆಯದು ಮರಳಿ ನೀಡುತ್ತದೆ ನಂತರ ಹಳ್ಳಿಯವರು ಕೂಡ ಏನೇನೋ ಕೊಟ್ಟರು ಅದರಂತೆ ಅದು ಕೂಡ ಏನೇನೋ ನೀಡುತ್ತಿತ್ತು.

ಹಳ್ಳಿಯ ಜನರಿಂದ ರಾಕ್ಷಸ ಸ್ನೇಹ ಮಾಡಿಕೊಂಡಿತು ಇದು ಹಿಂದೆ ನಡೆದ ಕಥೆ ಆಗಿರಬಹುದು ಆದರೆ ನಾವು ಏನು ಕೊಡುತ್ತೇವೆ ಅದು ಮಾತ್ರ ಮರಳಿ ಬಂದೇ ಬರುತ್ತದೆ.

ಬದಲಾವಣೆ ಆಗಲೇಬೇಕು

ಒಬ್ಬ ವಯಸ್ಸಾದ ವಿದ್ಯಾಭರಣ್ ಹಿರಿಯರು ಕುಡಿದ ಮತ್ತಿನಲ್ಲಿ ಚಿಕಿತ್ಸೆಗೆ ಎಂದು ಬಂದರು ಇವರನ್ನು ನೋಡಿದ ಶಾಲಂಕ್ ವೈದ್ಯರು ನನ್ನ ಹತ್ತಿರ ಖಾಯಂ ಆಗಿ ಬರುವವರು ನೀವೊಬ್ಬರೇ ನನ್ನ ಹತ್ತಿರ ಚಿಕಿತ್ಸೆಗೆ ಎಂದು ಬಂದರೆ ಒಂದು ಇಂಜೆಕ್ಷನ್ 3 ದಿನದ ಮಾತ್ರೆ ಕೊಡುತ್ತೇನೆ ಅಷ್ಟೆ ಮತ್ತೆ ಯಾವುದೇ ಕಾರಣಕ್ಕೂ ಬರುವುದಿಲ್ಲ.

 ನೀವು ಮಾತ್ರ ಆಗಾಗ ಬರುತ್ತೀರಾ ಸ್ವಲ್ಪವಾದರೂ ಬದಲಾವಣೆ ಆಗಲೇಬೇಕು ಎಂದು ಹೇಳಿದರು ಕುಡಿದ ಹಿರಿಯರು ನಾನು ಕುಡಿಯುವುದನ್ನು ಬಿಡಬೇಕು ಎಂದು ಮನಸ್ಸಿನಲ್ಲಿ ಬರುತ್ತದೆ ಆದರೆ ಕುಡಿತ ಮಾತ್ರ ನನ್ನನ್ನು ಬಿಡುವುದೇ ಇಲ್ಲ ಎಂದರು ಆಗ ವೈದ್ಯರು ನಿಮ್ಮಿಂದ ನನಗೆ ಒಂದು ಸಹಾಯ ಬೇಕಾಗಿದೆ ಎಂದರು.

 ಏನು ಎಂದು ಕೇಳಿದಾಗ ಈಗ ಒಬ್ಬ ವಿಖ್ಯಾತ್ ತರುಣ ಕುಡಿದ ಅಮಲಿನಲ್ಲಿ ಬಂದಿದ್ದಾನೆ ಒಬ್ಬನೇ ಮಗ ತಂದೆ ತಾಯಿಯ ದುಃಖ ನೋಡಲು ಆಗುತ್ತಿಲ್ಲ ಆದುದರಿಂದ ನಿಮ್ಮ ಅವಸ್ಥೆಯನ್ನು ತಿಳಿಸಿದರೆ ಆತನಾದರೂ ಕುಡಿತದ ಚಟದಿಂದ ಬಿಡುಗಡೆ ಹೊಂದಬಹುದು ಎಂದು ವೈದ್ಯರು ಹೇಳಿದರು ಕುಡಿದ ಹಿರಿಯರು ತೂರಾಡುತ್ತಾ ಆಗಲಿ ಎಂದರು ಈಗ ಬಂದಿದ್ದ ತರುಣನ ಬಳಿಗೆ ಹೋಗಿ ಹೇಳಿದರು.

  ಗೆಳೆಯ ಕುಡಿತ ಒಳ್ಳೆಯದಲ್ಲ ನಾನು ಬಹಳಷ್ಟು ವರ್ಷಗಳ ಹಿಂದೆಯೇ ಕುಡಿತವನ್ನು ಕಲಿತೆನು ಇದರಿಂದಾಗಿ ನನ್ನ ಕನಸುಗಳು ನುಚ್ಚು ನೂರಾಗಿದೆ ನನಗೂ ಕನಸುಗಳಿದ್ದವು ತಂದೆ ತಾಯಿಗೆ ಒಳ್ಳೆಯ ಮಗನಾಗಬೇಕು ಹೆಂಡತಿ ಜೊತೆ ಒಳ್ಳೆಯ ಗಂಡ ಅನ್ನಿಸಿಕೊಳ್ಳಬೇಕಾಯಿತು.

 ಮಕ್ಕಳಿಂದ ಒಳ್ಳೆಯ ತಂದೆ ಎನ್ನಿಸಿಕೊಳ್ಳಬೇಕು ನಂತರ ಸಮಾಜದಲ್ಲಿ ಒಳ್ಳೆಯ ಗೌರವ ಇರಬೇಕು ಎಂದು ಕನಸು ಕಂಡಿದ್ದೆ ಆದರೆ ಈ ಕುಡಿತದಿಂದಾಗಿ ನನಗೆ ತಂದೆ ತಾಯಿಯೂ ಗೌರವಿಸುವುದಿಲ್ಲ ಹೆಂಡತಿಯೂ ಅಷ್ಟೇ ಮಕ್ಕಳೂ ಅಷ್ಟೆ ಸಮಾಜದಲ್ಲಿ ನನಗೆ ಗೌರವವಂತೂ ಇಲ್ಲವೇ ಇಲ್ಲ ಇದರಿಂದ ನನ್ನ ಬದುಕೇ ಹಾಳಾಗಿ ಹೋಗಿದೆ.

 ನನ್ನವರು ಎನ್ನುವವರು ಯಾರೂ ಇಲ್ಲ ನೀನು ಇನ್ನೂ ತರುಣ ನಿನಗೆ ಭವಿಷ್ಯವಿದೆ ನಿನ್ನ ಭವಿಷ್ಯ ನೀನು ಏಕೆ ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳಿದರು ಹೇಳಿದಾಗ ಇವರಲ್ಲಿ ಒಂದು ಹೊಸ ಶಕ್ತಿ ಬಂತು ಮತ್ತೆ ಹಿರಿಯರು ಯೋಚನೆ ಮಾಡಿದರು ಇನ್ನು ಮುಂದೆ ನೀನು ಕುಡಿಯುವುದು ಬೇಡ ಕುಡಿಯುವ ಸಮಯದಲ್ಲಿ ಸ್ವಲ್ಪ ಹೊತ್ತು ಮಾತನಾಡೋಣ ಆಗ ತರುಣ ಹೌದು ಎಂದನು.

ಇಬ್ಬರೂ ಸ್ನೇಹಿತರಾದರು ಹಿರಿಯರು ನಾನೇ ಕುಡಿದರೆ ನನಗೂ ಗೌರವ ಇರುವುದಿಲ್ಲ ಎಂದು ವೃದ್ಧರು ಕುಡಿಯುವುದನ್ನು ಬಿಟ್ಟರೂ ಆ ತರುಣನು ಕುಡಿಯುವುದು ಬಿಟ್ಟನು ನಂತರ ಇಬ್ಬರೂ ಸೇರಿ ನಾವು ಇನ್ನು ಮುಂದೆ ಕುಡಿತದ ಚಟವನ್ನು ಬಿಡಿಸೋಣ ಎಂದು ಚಿಕ್ಕದಾಗಿ ಒಂದು ಆಫೀಸನ್ನು ತೆರೆದರು.

 ನಂತರ ಇದೇ ಕೆಲಸದಲ್ಲಿ ತೊಡಗಿದರು ಇದರಿಂದಾಗಿ ಹಲವಾರು ಜನರು ಕುಡಿತ ಚಟದಿಂದ ಬಿಡುಗಡೆಗೊಂಡರು ಈಗಲೂ ನಮ್ಮ ಕಣ್ಣ ಮುಂದೆ ಯಾರಾದರೂ ಕುಡಿದು ಬಂದರೆ ನಾವು ಅವರನ್ನು ಕೀಳಾಗಿ ಮಾತನಾಡುವ ಬದಲು ಪ್ರೀತಿಯಿಂದ ಮಾತನಾಡೋಣ.

ಪ್ರೀತಿಯಿಂದ ಮಾತನಾಡಿಸುತ್ತಿದ್ದರು

ನಾನು ಮದುವೆಯಾದ ಮೇಲೆ ಬೆಂಗಳೂರಿನಲ್ಲಿ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದೆ ಆಗ ನಾನು ಒಂದು ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದೆ ತಿಂಗಳಿಗೆ ಸಂಬಳ ಬರುತ್ತಿತ್ತು ಹಾಗಾಗಿ ನಮ್ಮ ಮನೆಯ ಮುಂದೆ ಇರುವ ಅಂಗಡಿಯಲ್ಲಿ ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಿಕೊಂಡು ತಿಂಗಳಿಗೆ ಹಣ ಕೊಡುತ್ತಿದ್ದೆವು ಹೀಗೆ ಹಲವಾರು ವರ್ಷ ನಡೆಯಿತು.

ಆ ಅಂಗಡಿಯ ಮಾಲೀಕ ಮೊದಲು ಒಂದು ಅಂಗಡಿ ಮಾಡಿದನು ನಂತರ ಎರಡು ಅಂಗಡಿಗಳು ಹೀಗೆ ಎಂಟು ಅಂಗಡಿಗಳನ್ನು ಅಭಿವೃದ್ಧಿಪಡಿಸಿದನು ಸಾಕಷ್ಟು ಹಣ ಗಳಿಸಿದನು ಆದರೆ ಇವರು ಸ್ವತಂತ್ರವಾಗಿ ಇರಬೇಕು ಪರಿವಾರದ ಜೊತೆ ಹೆಚ್ಚು ಇರಬೇಕು ಹೆಚ್ಚು ಸ್ನೇಹಿತರು, ಸಂಬಂಧಿಕರೊಂದಿಗೆ ಇರುವುದು, ಪ್ರೀತಿ ಕೊಡುವುದು ಪ್ರೀತಿ ಪಡೆಯುವುದು ಸಂತೋಷವಾಗಿರುವುದು ಇವರಿಗೆ ಗೊತ್ತೇ ಇಲ್ಲವೇನೋ ಹಾಗೆ ಬದುಕಿದರು.

 ಕೆಲವು ವರ್ಷಗಳ ನಂತರ ನಾನು ಮನೆಯನ್ನು ಬದಲಾಯಿಸಿ ಬೇರೆ ಕಡೆಗೆ ಹೋದೆ ಅಲ್ಲಿಯು ಕೂಡ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು ಆಗ ನಾನು ಅವರ ಅಂಗಡಿಯಿಂದ ಸಾಮಾನುಗಳನ್ನು ಖರೀದಿಸುತ್ತಿದ್ದೇ ಅವರಲ್ಲಿ ನೋಡಿದ್ದು ಚಿಕ್ಕ ಅಂಗಡಿ ಎಷ್ಟು ಬೇಕೋ ಅಷ್ಟು ವ್ಯಾಪಾರ ಹೆಚ್ಚಾಗಿ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ.

 ಯಾರೇ ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಇರುವುದರಲ್ಲಿ ಸಂತೋಷವಾಗಿ ತೃಪ್ತಿಯಿಂದ ಕಾಲ ಕಳೆಯುತ್ತಿದ್ದರು ಆಗ ನನಗೆ ಅರ್ಥವಾಯಿತು ಅವರವರ ಆಲೋಚನೆಯಂತೆ ಅವರು ಬದುಕುತ್ತಾರೆ ಯಾವ ರೀತಿ ಬದುಕಬೇಕು ಎನ್ನುವುದು ಆಯ್ಕೆ ನಮ್ಮದೇ.

]]>
https://babakategalu.com/%e0%b2%b6%e0%b2%be%e0%b2%82%e0%b2%a4%e0%b2%bf-%e0%b2%a8%e0%b3%86%e0%b2%ae%e0%b3%8d%e0%b2%ae%e0%b2%a6%e0%b2%bf%e0%b2%af-%e0%b2%b0%e0%b2%b9%e0%b2%b8%e0%b3%8d%e0%b2%af%e0%b2%b5%e0%b3%87%e0%b2%a8%e0%b3%81/feed/ 0
ವಾಪಸ್ ಪಡೆಯಲು ಸಾಧ್ಯವಿಲ್ಲ https://babakategalu.com/%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%aa%e0%b2%a1%e0%b3%86%e0%b2%af%e0%b2%b2%e0%b3%81-%e0%b2%b8%e0%b2%be%e0%b2%a7%e0%b3%8d%e0%b2%af%e0%b2%b5%e0%b2%bf%e0%b2%b2%e0%b3%8d%e0%b2%b2/ https://babakategalu.com/%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%aa%e0%b2%a1%e0%b3%86%e0%b2%af%e0%b2%b2%e0%b3%81-%e0%b2%b8%e0%b2%be%e0%b2%a7%e0%b3%8d%e0%b2%af%e0%b2%b5%e0%b2%bf%e0%b2%b2%e0%b3%8d%e0%b2%b2/#respond Wed, 23 Apr 2025 04:40:00 +0000 https://babakategalu.com/?p=296 Read more]]> ಒಂದು ಆಶ್ರಮವಿತ್ತು ಆಶ್ರಮದಲ್ಲಿ ದಿನನಿತ್ಯ ಉಪನ್ಯಾಸಗಳು ನಡೆಯುತ್ತಿತ್ತು ಉಪನ್ಯಾಸಗಳಿಂದ ಮನುಷ್ಯರು ತೃಪ್ತಿ ನೆಮ್ಮದಿ ಕಾಣುತ್ತಿದ್ದರು ಒಂದು ಸಾರಿ ಚಿಮಿಣಿ ಹೆಂಗಸು ಉಪನ್ಯಾಸವನ್ನು ಕೇಳಿದಳು ಕೇಳಿದ ನಂತರ ಬಾಬಾ ಅವರಿಗೆ ಹೋಗಿ ನಮಸ್ಕಾರ ಮಾಡಿ ನನಗೆ ಒಂದು ಸಮಸ್ಯೆ ತುಂಬಾ ಕಾಡುತ್ತಿದೆ ಅದಕ್ಕೆ ನೀವು ಪರಿಹಾರ ತಿಳಿಸಿ ಎಂದು ಕಳಿಕಳಿಯಿಂದ ಕೇಳಿದಳು.

 ಸಮಸ್ಯೆ ಏನು ಎಂದು ಬಾಬಾ ಅವರು ಕೇಳಿದರು ಹೆಂಗಸು ನಾನು ಪರೀಕ್ಷೆ ಮಾಡದೆ ಬೇರೆಯವರ ಮಾತು ಕೇಳಿ ನನ್ನ ಸ್ನೇಹಿತೆ ಸ್ವಲ್ಪ ತಪ್ಪು ಮಾಡಿದ್ದಳು ಅದರ ಜತೆಗೆ ಇನ್ನಷ್ಟು ಸೇರಿಸಿ ಹೇಳಿಬಿಟ್ಟಿದ್ದೇನೆ ಇದು ನನಗೆ ತುಂಬಾ ವೇದನೆಯಾಗುತ್ತಿದೆ ಆಕೆ ಎಷ್ಟು ನೊಂದಿದ್ದಾಳೆ ಗೊತ್ತಿಲ್ಲ ನನ್ನ ತಪ್ಪಿಗೆ ನಾನು ಯಾವ ರೀತಿ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು ಎಂದು ದೀನವಾಗಿ ಕೇಳಿದಳು.

ಬಾಬಾ ಅವರು ಒಂದು ಬಿದಿರಿನ ಬುಟ್ಟಿಯನ್ನು ತೆಗೆದುಕೊಂಡು ಬಂದು ಅದರಲ್ಲಿ ಚಿಕ್ಕ ಚಿಕ್ಕ ಹತ್ತಿಯ ಉಂಡೆಗಳು ಹಾಕಿದರು ತಲೆ ಮೇಲೆ ಇಟ್ಟುಕೊಂಡು ಮನೆಗೆ ಹೋಗು ನಂತರ ನಾಳೆ ಬಾ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.

 ಅದೇ ರೀತಿ ಮಾರನೆಯ ದಿನ  ಚಿಮಿಣಿ ಹೆಂಗಸು ಬಂದಳು ಹತ್ತಿಯ ಉಂಡೆ ಎಲ್ಲಿ ಎಂದು ಕೇಳಿದಾಗ ಗಾಳಿಗೆ ಹಾರಿ ಹೋಯ್ತು ಎಂದು ಹೆಂಗಸು ಹೇಳಿದಳು ಈಗ ಆ ಹತ್ತಿಯ ಉಂಡೆಗಳು ಎಲ್ಲೆಲ್ಲಿ ಇವೆಯೋ ಅದನ್ನು ಶೇಖರಣೆ ಮಾಡಿಕೊಂಡು ಬಾ ಎಂದು ಹೇಳಿದರು ಇದು ಹೇಗೆ ಸಾಧ್ಯ ಬಾಬಾ ಅವರೇ ಎಂದು ಕೇಳಿದಾಗ ಬಾಬಾ ಅವರು ಹೇಳಿದರು.

 ನೀನು ಹೇಳಿ ಆಗಿದೆ ಯಾವುದೇ ಕಾರಣಕ್ಕೂ ಆಗಿರುವುದನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಆಗಿದ್ದು ಆಗಿ ಹೋಯಿತು ಮಾಡಿದ ತಪ್ಪು ಇನ್ನೊಂದು ಸಾರಿ ಮಾಡದೇ ಇರುವುದೇ ಮನುಷ್ಯನ ಲಕ್ಷಣ ಎಂದು ಹೇಳಿದರು.

 ಹಳೆ ಮನೆಯಲ್ಲಿಯೇ

ಒಂದು ಹಳ್ಳಿಯಿಂದ ಜ್ಞಾನ್ ದತ್ ಯುವಕ ಊರಿಗೆ ಬಂದನು ಒಳ್ಳೆಯ ಕೆಲಸಕ್ಕಾಗಿ ಹುಡುಕಿದನು ನಂತರ ಅದೇ ರೀತಿ ಒಳ್ಳೆಯ ಕೆಲಸವೂ ಸಿಕ್ಕಿತು ಸಂಬಳವೂ ಚೆನ್ನಾಗಿ ಬರುತ್ತಿತ್ತು ಬಂದ ಸಂಬಳದಲ್ಲಿ ಉಳಿಸೀ ಒಂದು ಮನೆಯನ್ನು ಕಟ್ಟಿದನು ಮನೆಯನ್ನು ಕೂಡ ತುಂಬಾ ಚೆನ್ನಾಗಿ ಕಟ್ಟಿದನು.

 ಕಟ್ಟಿದ ಮನೆಯನ್ನು ಬಾಡಿಗೆಗೆ ಕೊಟ್ಟನು ಅದರಿಂದ ಬರುವ ಹಣವನ್ನು ಇನ್ನೊಂದಕ್ಕೆ ಹೂಡಿಕೆ  ಮಾಡಿದನು ಆದರೆ ಇವನು ಮಾತ್ರ ಅದೇ ಹಳೆ ಬಾಡಿಗೆ ಮನೆಯಲ್ಲಿಯೇ ಇದ್ದಾನೆ ಬಾಡಿಗೆ ಮನೆಯಲ್ಲಿ ಸೌಲಭ್ಯಗಳು ಇಲ್ಲದೇ ಇದ್ದರೂ ಅಲ್ಲೇ ಹೊಂದಿಕೊಂಡು ಬದುಕುತ್ತಿದ್ದಾನೆ.

 ಇವನ ಸ್ವಂತ ಮನೆಯಲ್ಲಿ ಹೋಗಿ ಬದುಕಬಹುದು ಆದರೂ ಕೂಡ ಆ ಹಳೆ ಮನೆಯಲ್ಲಿಯೇ ಜೀವನಪೂರ್ತಿ ಇದ್ದು ಸತ್ತನು ಅದೃಷ್ಟ ಒಲಿದಿದ್ದರೂ ಸಣ್ಣ ಬುದ್ಧಿ ಹೋಗಲಿಲ್ಲ.

ಆಯ್ಕೆ ನಮ್ಮದೇ ಇರಬೇಕು

ಜಾನಿ ಎಂಬುವ ವ್ಯಕ್ತಿ ಒಂದು ಊರಿನಲ್ಲಿ ಸಂಸಾರ ಸಮೇತವಾಗಿ ಒಂದು ಚಿಕ್ಕ ವ್ಯಾಪಾರ ಮಾಡಿಕೊಂಡು ಇದ್ದನು ಆದರೆ ಅಷ್ಟು ಬೆಳವಣಿಗೆ ಯಾಗಲಿಲ್ಲ ಜಾನಿಗೆ ಒಬ್ಬ ಸ್ನೇಹಿತ ಇದ್ದನು ಅವನ ಹೆಸರು ಲಿಯೋ ಇವನು ಆಗಾಗ ಬಂದು ಹೇಳುತ್ತಿದ್ದನು ನೀನು ಇಷ್ಟು ಕಷ್ಟ ಪಡುವ ಬದಲು ಒಂದು ವಜ್ರವನ್ನು ಹುಡುಕಿಕೊಂಡರೆ ಸಾಕು ನೀನೆ ತುಂಬ ದೊಡ್ಡ ಶ್ರೀಮಂತನಾಗುತ್ತಿದ್ದೆ ಎಂದು ಹೇಳುತ್ತಿದ್ದನು.

 ಇವನಿಗೂ ಸ್ನೇಹಿತ ಹೇಳಿದ ಮಾತು ಹಿಡಿಸಿತು ಅದಕ್ಕಾಗಿ ಇವನು ತಾನು ಇದ್ದ ಮನೆಯನ್ನೂ ಮಾರಿ ತನ್ನ ಹೆಂಡತಿ ಮಕ್ಕಳನ್ನು ಬೇರೆ ಬಾಡಿಗೆ ಮನೆ ಮಾಡಿ ಇಟ್ಟನು ನಂತರ ಸ್ವಲ್ಪ ಹಣ ತೆಗೆದುಕೊಂಡು ವಜ್ರ ಹುಡುಕುವುದಕ್ಕಾಗಿ ಹೊರಟನು ಅಲ್ಲಿ ಇಲ್ಲಿ ಹುಡುಕಾಡಿ ಇರುವ ಹಣವನ್ನು ಖರ್ಚು ಮಾಡಿಕೊಂಡನು.

ಬಹಳಷ್ಟು ಶ್ರಮ ಪಟ್ಟನು ಆದರೂ ಏನೂ ಉಪಯೋಗವಾಗಲಿಲ್ಲ ಕೊನೆಗೆ ಮಾನಸಿಕವಾಗಿ ಕೂಡ ನೊಂದುಕೊಂಡನು ನಂತರ ಬೇರೆ ಕಡೆ ಕೆಲಸ ಮಾಡಿ ಅಲ್ಪ ಸ್ವಲ್ಪ ಹಣ ಮನೆಗೆ ಕಳುಹಿಸುತ್ತಿದ್ದನು ನಂತರ ಕೆಲವು ವರ್ಷಗಳ ಮೇಲೆ ಯೋಚನೆ ಮಾಡಿದನು.

 ನಾನು ಏನಾದರೂ ನಮ್ಮ ಊರಿನಲ್ಲಿಯೇ ಚಿಕ್ಕದಾದ ವ್ಯಾಪಾರ ಮಾಡಿ ನಾನು ಬದುಕುತ್ತೇನೆ ಎಂದು ತೀರ್ಮಾನ ಮಾಡಿದನು ನಂತರ ಊರಿಗೆ ಬಂದನು ನೋಡಿದರೆ ತುಂಬಾ ಬದಲಾಗಿಬಿಟ್ಟಿದೆ ಮನೆಗಳು ಇದ್ದಿದ್ದು ಭವ್ಯ ಕಟ್ಟಡಗಳಾಗಿವೆ ಮನೆಗೆ ಬಂದನು ಆಗ ಹೆಂಡತಿ ಹೇಳಿದಳು ಬಿಲ್ಡಿಂಗ್ ಕಟ್ಟಬೇಕಾದರೆ ಒಂದು ಕಲ್ಲು ಸಿಕ್ಕಿತು ಅದನ್ನು ಪರೀಕ್ಷಿಸಿದರೆ ವಜ್ರವೇ ಆಗಿತ್ತು.

 ನಾವು ಮಾರಿದ ಆಸ್ತಿಯಲ್ಲಿ ವಜ್ರದ ಗಣಿಯೇ ಇದೆಯಂತೆ ಅದಕ್ಕಾಗಿ ಸರ್ಕಾರದವರು ದುಪ್ಪಟ್ಟು ಹಣವನ್ನು ಕೊಟ್ಟು ಅದನ್ನು ಖರೀದಿ ಮಾಡಿದ್ದಾರೆ ಅದರಿಂದ ವಜ್ರವನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದಳು ಈ ಆಸ್ತಿಯನ್ನು ಖರೀದಿಸಿದವನು ಆ ಊರಿಗೆ ದೊಡ್ಡ ಶ್ರೀಮಂತನಾಗಿದ್ದನು,

ಜಾನಿ ಮಾತ್ರ ಅತಿ ಚಿಕ್ಕ ವ್ಯಕ್ತಿಯಾಗಿಯೇ ಇದ್ದನು ತನ್ನ ತಪ್ಪಿನ ಅರಿವೂ ಆಯಿತು ನನ್ನ ಜಾಗದಲ್ಲಿ ವಜ್ರ ಇತ್ತು ಆದರೆ ಅದನ್ನು ಬಿಟ್ಟು ನಾನು ಹೊರಗಡೆ ಅಲೆಮಾರಿಯಂತೆ ಬಹಳಷ್ಟು ಕಡೆ ಹುಡುಕಿಕೊಂಡು ಹೋದೆ ನಮ್ಮ ಆಸ್ತಿಯಲ್ಲಿಯೇ ಇದೆಯೆಂದು ನನಗೆ ಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಕೊರಗಿದನು.

 ಕೆಲವು ಸಾರಿ ಯಾವುದೋ ಆಕರ್ಷಣೆಗೆ ಒಳಗಾಗಿ ಇರುವುದೆಲ್ಲವನ್ನೂ ನಷ್ಟ ಮಾಡಿಕೊಳ್ಳುತ್ತೇವೆ ಯಾವುದೇ ಕೆಲಸ ಮಾಡಬೇಕಾದರೂ ಆಯ್ಕೆ ನಮ್ಮದೇ ಇರಬೇಕು ದೀರ್ಘವಾಗಿ ಆಲೋಚನೆ ಮಾಡಿ ಸಾಗೋಣ.

 ಕತ್ತಲೆ ಕವಿದಿರುತ್ತದೆ

ಒಂದು ಕಾಡಿನ ಮೂಲೆಯಲ್ಲಿ ಒಂದು ಆಶ್ರಮವಿತ್ತು ರಾತ್ರಿಯವರೆಗೂ ಆಶ್ರಮದಲ್ಲಿ ಇರುತ್ತಿದ್ದರು ನಂತರ ಋಷಿಗಳು ಧ್ಯಾನ ಮಾಡಲಿಕ್ಕೆ ಕಾಡಿನ ಒಳಗೆ ಹೋಗಿ ಧ್ಯಾನ ಮಾಡಿ ಬರುತ್ತಿದ್ದರು ಆಶ್ರಮದಲ್ಲಿ ಇರುವ ಒಬ್ಬ ಶಿಷ್ಯನಿಗೆ ಅನುಮಾನ ಬಂತು ಭಯಂಕರ ಕತ್ತಲೆ ಕವಿದಿರುತ್ತದೆ ಕಾಡಿನಲ್ಲಿ ಹೇಗೆ ಧ್ಯಾನ ಮಾಡುತ್ತಾರೆ ಏನಾದರೂ ಆಗಲಿ ಇವರನ್ನು ನಾನು ನೋಡಲೇಬೇಕು ಎಂದು ಹಿಂಬಾಲಿಸಿದನು.

 ಋಷಿಗಳು ದಿನನಿತ್ಯ ಅವರು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತು ಧ್ಯಾನಮಗ್ನರಾದರು ಶಿಷ್ಯನು ಮರೆಯಲ್ಲಿ ಕುಳಿತು ನೋಡುತ್ತಲೇ ಇದ್ದಾನೆ ರಾತ್ರಿ 3ಗಂಟೆ ಯಾದರೂ ಕೂಡ ಧ್ಯಾನಮಗ್ನವಾಗಿ ಇದ್ದಾರೆ 4 ಗಂಟೆಗೆ ಒಂದು ಹುಲಿ ಬಂದು ಇವರ ಕಾಲು ಇವರ ಮುಖವನ್ನು ನಕ್ಕಿತು ನಿದಾನವಾಗಿ ಕಣ್ಣು ತೆರೆದರು ಹುಲಿಯನ್ನು ತಬ್ಬಿಕೊಂಡು ಪ್ರೀತಿಯಿಂದ ಕೆಲವು ನಿಮಿಷಗಳ ಕಾಲ ಅಲ್ಲೇ ಇದ್ದು ನಂತರ ಹುಲಿಯು ನಮಸ್ಕಾರ ಮಾಡಿ ಹೊರಟು ಹೋಯಿತು ಇದನ್ನು ನೋಡಿದ ಶಿಷ್ಯನಿಗೆ ಚಮತ್ಕಾರ ಎನಿಸಿತು.

 ಶಿಷ್ಯನು ಬಂದು ಕಾಲು ಮುಗಿದನು ನೀವು ಹುಲಿಯನ್ನು ಬೆಕ್ಕಿನ ಹಾಗೆ ಪಳಗಿಸಿ ಬಿಟ್ಟಿದ್ದೀರಿ ಇದು ಯಾವ ಶಕ್ತಿ ನಿಮ್ಮಲ್ಲಿ ಅಡಗಿದೆ ಎಂದು ಶಿಷ್ಯ ಕೇಳಿದನು ಇದು ಯಾವ ಶಕ್ತಿ ಯಾವ ಪವಾಡವೂ ಇಲ್ಲ ಒಂದು ಸಾರಿ ಹುಲಿಗೆ ಬೇಟೆಗಾರನು ಬಾಣ ಬಿಟ್ಟನು ಅದು ತಗುಲಿ ಕಾಲಿಗೆ ಗಾಯವಾಗಿತ್ತು.

 ಹೇಗೋ ತಪ್ಪಿಸಿಕೊಂಡು ಬಂತು ಅದು ತುಂಬಾ ಭಯ ಪಟ್ಟಿತ್ತು ಆಗ ನಾನು ನೋಡಿದೆ ನಂತರ ಅದಕ್ಕೆ ಕುಡಿಯಲು ನೀರು ಕೊಟ್ಟೆ ನಂತರ ಆ ಗಾಯಕ್ಕೆ ಗಿಡ ಮೂಲಿಕೆಗಳನ್ನು ಹಾಕಿ ಕಟ್ಟಿದೆ ಕೆಲವು ದಿನಗಳ ನಂತರ ಅದು ಚೆನ್ನಾಗಿ ಓಡಾಡಲು ಆರಂಭಿಸಿತು ಅಂದಿನಿಂದ ದಿನನಿತ್ಯವೂ ನನ್ನ ಜೊತೆ ಪ್ರೀತಿಯನ್ನು ತೋರಿಸುತ್ತಿದೆ ನಾನೂ ಕೂಡ ಅದಕ್ಕೆ ಪ್ರೀತಿಯನ್ನು ತೋರಿಸುತ್ತೇನೆ ಎಂದು ಹೇಳಿದರು.

ಯಾವ ನರಕ ಬೇಕು?

ಒಬ್ಬ ಪುಷ್ಕಲ್ ವ್ಯಕ್ತಿ ಸ್ವರ್ಗ ನರಕದ ಬಗ್ಗೆ ಯೋಚನೆ ಮಾಡಿ ಮಲಗುತ್ತಾನೆ ನಂತರ ಒಂದು ಕನಸು ಬೀಳುತ್ತದೆ ಸ್ವರ್ಗ ನರಕ ಎರಡೂ ಇದೆ ನೀವು ಮಾಡಿದ ಕರ್ಮದ ಅನುಸಾರವಾಗಿ ನಿಮಗೆ ಸ್ವರ್ಗ ಅಥವಾ ನರಕ ಸಿಗುತ್ತದೆ.

 ಸ್ವರ್ಗ ನರಕ ಗಳಲ್ಲಿಯೂ ದರ್ಜೆಗಳು ಇವೆಯಂತೆ ಸರ್ಕಸ್ ನೋಡಲು ಹೋದರೆ ಮೊದಲನೆಯ ದರ್ಜೆ ಎರಡನೆ ದರ್ಜೆ ಮೂರನೆ ದರ್ಜೆ ಹೀಗೆ ಇರುತ್ತದೆ ಅದೇ ರೀತಿ ಸ್ವರ್ಗ ನರಕಗಳನ್ನು ಇರುತ್ತದೆಯಂತೆ.

ಒಬ್ಬ ಮನುಷ್ಯನು ಸಾಯುತ್ತಾನೆ ನಂತರ ಇವನನ್ನು ಚಿತ್ರಗುಪ್ತನ ಹತ್ತಿರ ಕರೆದುಕೊಂಡು ಹೋಗುತ್ತಾರೆ ಇವನ ಲೆಕ್ಕ ನೋಡಿದರೆ ಪಾಪದ್ದೆ ಲೆಕ್ಕ ಜಾಸ್ತಿ ಇರುತ್ತದೆ ಆದ್ದರಿಂದ ಇವನಿಗೆ ನರಕ ಎಂದು ಘೋಷಿಸುತ್ತಾರೆ ನಂತರ ನಿನಗೆ ವಿದೇಶಿ ನರಕ ಬೇಕೊ ಸ್ವದೇಶಿ ನರಕ ಬೇಕೊ ಎಂದು ಕೇಳುತ್ತಾರೆ.

 ಈ ಮಾತು ಕೇಳಿ ಈ ವ್ಯಕ್ತಿಗೆ ಆಶ್ಚರ್ಯವಾಗುತ್ತದೆ ಎರಡು ರೀತಿಯ ನರಕವಿದೆಯೋ ಎರಡನ್ನೂ ವಿವರಿಸಿ ಎಂದು ಹೇಳುತ್ತಾನೆ ಸ್ವದೇಶಿ ನರಕದಲ್ಲಿ (ಕರೆಂಟಿನ ರೂಮಿನಲ್ಲಿ) ವಿದ್ಯುಚ್ಛಕ್ತಿಯ ಕೊಠಡಿಯಲ್ಲಿ ಕೂರಿಸಿ (ಕರೆಂಟ್) ವಿದ್ಯುಚ್ಛಕ್ತಿ ಕೊಡಲಾಗುತ್ತದೆ ಕಾದ ನಂತರ ಮತ್ತೆ ಕಡಿಮೆ ಮಾಡುತ್ತಾರೆ ಅಲ್ಲಿ ಇರುವವರು ಸರಿಯಾಗಿ ನಿಮ್ಮನ್ನು ನೋಡಿಕೊಳ್ಳುತ್ತಾರೆ.

 ವಿದೇಶಿ ನರಕದಲ್ಲೂ ಒಂದು ವಿದ್ಯುಚ್ಚಕ್ತಿ ಕೊಠಡಿಯಲ್ಲಿ ಕೂರಿಸಿ ಕರೆಂಟ್ ಕೊಡಲಾಗುತ್ತದೆ ಕಾದ ನಂತರ ಮತ್ತೆ ಕಡಿಮೆ ಮಾಡುತ್ತಾರೆ ಅಲ್ಲಿ ಇರುವವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಕೇಳಿದ ವ್ಯಕ್ತಿ ಗಾಬರಿಯಾದನು.

 ನೀವು ಎರಡರಲ್ಲೂ ಅದೇ ಶಿಕ್ಷೆ ಹೇಳುತ್ತಿದ್ದೀರಾ ಏನೂ ವ್ಯತ್ಯಾಸವಿಲ್ಲ ಎಂದು ಹೇಳುತ್ತಿದ್ದೀರಿ ಎಂದಾಗ ಆಗ ಚಿತ್ರಗುಪ್ತ ಸ್ವದೇಶಿ ನರಕವೇ ತೆಗೆದುಕೊ ಏಕೆಂದರೆ ಕೆಲವು ಸಾರಿ ಕರೆಂಟ್ ಇರುವುದಿಲ್ಲ ನೋಡಿಕೊಳ್ಳುವವರು ಕೂಡ ಅಷ್ಟಾಗಿ ಸರಿಯಾಗಿ ಜವಾಬ್ದಾರಿ ವಹಿಸಿ ಕೆಲಸ ಮಾಡುವುದಿಲ್ಲ.

 ಸ್ವಲ್ಪ ಲಂಚ ಕೊಟ್ಟರೆ ಅವರು ನಿಮ್ಮ ಕಡೆ ಇರುತ್ತಾರೆ ನೀವು ಎಷ್ಟು ಸಮಯ ಕುಳಿತಿದ್ದೀರಿ ಎನ್ನುವುದು ಲೆಕ್ಕ ಸರಿಯಾಗಿ ಇಡುವುದಿಲ್ಲ ನಿಮಗೆ ಹೇಗೆ ಬೇಕೋ ಹಾಗೆ ಲೆಕ್ಕವನ್ನು ತೋರಿಸುತ್ತಾರೆ ಎಂದು ಹೇಳಿದರಂತೆ ನಂತರ ಗಾಬರಿಯಾದ ಕಣ್ಣು ಬಿಟ್ಟನು ಕನಸು ಎಂದು ಅರ್ಥಮಾಡಿಕೊಂಡನು.

]]>
https://babakategalu.com/%e0%b2%b5%e0%b2%be%e0%b2%aa%e0%b2%b8%e0%b3%8d-%e0%b2%aa%e0%b2%a1%e0%b3%86%e0%b2%af%e0%b2%b2%e0%b3%81-%e0%b2%b8%e0%b2%be%e0%b2%a7%e0%b3%8d%e0%b2%af%e0%b2%b5%e0%b2%bf%e0%b2%b2%e0%b3%8d%e0%b2%b2/feed/ 0
ನಾನು ಗುಲಾಮನಲ್ಲ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%97%e0%b3%81%e0%b2%b2%e0%b2%be%e0%b2%ae%e0%b2%a8%e0%b2%b2%e0%b3%8d%e0%b2%b2/ https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%97%e0%b3%81%e0%b2%b2%e0%b2%be%e0%b2%ae%e0%b2%a8%e0%b2%b2%e0%b3%8d%e0%b2%b2/#respond Tue, 22 Apr 2025 04:40:00 +0000 https://babakategalu.com/?p=294 Read more]]> ಒಂದು ಸಾರಿ ಕಳಂದ್ ರಾಜ ತನ್ನ ಊರನ್ನು ಮೆರವಣಿಗೆ ಮಾಡಿಕೊಂಡು ಬರಬೇಕಾದರೆ ಒಬ್ಬ ಇಕ್ಷುಚಾಪ್ ವ್ಯಕ್ತಿ ಧ್ಯಾನಾಸಕ್ತನಾಗಿ ಊರಿನ ಆಚೆ ಕುಳಿತಿದ್ದನು ಆದರೆ ಇವನ ಬಟ್ಟೆ ಹರುಕು ಮುರುಕಾಗಿ ಇತ್ತು ರಾಜ ಮೆರವಣಿಗೆ ಬರುತ್ತಿದ್ದಾನೆ ಎಂದು ಎಲ್ಲರೂ ನಮಸ್ಕರಿಸುತ್ತಿದ್ದರು.

ಆ ವ್ಯಕ್ತಿ ಮಾತ್ರ ಧ್ಯಾನದಲ್ಲೇ ಇದ್ದನು ಇದನ್ನು ಗಮನಿಸಿದ ರಾಜನಿಗೆ ಸಿಟ್ಟು ಬಂತು ನಾನು ಬರುತ್ತಿರುವುದು ಗೊತ್ತಾದರೂ ಕೂಡ ಇವನು ಹೀಗೆಯೇ ಇದ್ದಾನಲ್ಲ ಎಷ್ಟು ಅಹಂಕಾರ ಇರಬೇಕು ಎಂದು ಮಂತ್ರಿಗೆ ಕಳಿಸಿದನು ಮಂತ್ರಿಯೂ ಇವನಿಗೆ ಸರಿಯಾದ ಶಿಕ್ಷೆ ನೀಡುತ್ತೇನೆ ಎಂದು ಹೋದನು.

 ಮಂತ್ರಿ ಹೇಳಿದನು ರಾಜ ಬರುತ್ತಿದ್ದರೂ ಕೂಡ ಅವರಿಗೆ ಗೌರವಿಸದೆ ನೀನು ಹೀಗೆ ಕುಳಿತಿದ್ದೀಯಾ ಎಷ್ಟು ಅಹಂಕಾರ ಎಷ್ಟು ಅಹಂಕಾರವಿದೆ ನಿನಗೆ ಎಂದಾಗ ನಿಧಾನವಾಗಿ ಗುರುಗಳು ಕಣ್ಣು ಬಿಟ್ಟು ಯಾರು ಅಹಂಕಾರಿ ರಾಜನ ಎಂಜಲಿಗೆ ಕೈ ಒಡ್ಡಿ ಏನು ಕೊಡುತ್ತಾನೆ ಅದಕ್ಕೆ ಅವನಿಗೆ ಭಕ್ತಿ ವಿನಯ ತೋರಿಸುವವರು ಗುಲಾಮರು ನಾನು ಗುಲಾಮನಲ್ಲ ನನಗೆ ರಾಜನಿಂದ ಏನು ಬೇಕಾಗಿಲ್ಲ.

 ನನ್ನಷ್ಟಕ್ಕೆ ನನಗೇ ಎಲ್ಲವೂ ಇದೆ ಆದರೆ ನಿಮ್ಮ ರಾಜ ಅಹಂಕಾರಿ ಏಕೆಂದರೆ ರಾಜನಾದರೆ ಅವನ ಕರ್ತವ್ಯ ಎಲ್ಲರ ರಕ್ಷಣೆ ಮಾಡುವುದು ಎಂದು ಹೇಳಿದರು ಮಂತ್ರಿಯು ಕೂಡ ಇದನ್ನು ಅರಿತು ಸುಮ್ಮನೆ ಹೊರಟು ಹೋದನು.

ಹಸಿದವರು ಊಟ ಮಾಡಲಿ

ಒಂದು ಊರಿನಲ್ಲಿ ಬರಗಾಲ ಬಂದು ತಿನ್ನಲಿಕ್ಕೆ ಅನ್ನವು ಕೂಡ ಸಿಗುತ್ತಿರುವುದಿಲ್ಲ ಎಲ್ಲರೂ ಭಯಭೀತರಾದರು ಆಗ ಅಲ್ಲಿಗೆ ಬಾಬಾ ಬಂದರು ಇಲ್ಲಿಯ ಪರಿಸ್ಥಿತಿ ನೋಡಿ ಏನು ಮಾಡಬಹುದು ಎಂದು ಚಿಂತಿಸಿದರು ಅದರಲ್ಲಿ ಒಬ್ಬ ಉದಾಲಕ್  ಊರಿನವನು ಹೇಳಿದನು.

 ನಮ್ಮ ಊರಿನಲ್ಲಿ ಕೆಲವರು ಶ್ರೀಮಂತರಿದ್ದಾರೆ ಅವರು ನಮಗೆ ಸ್ವಲ್ಪ ಹಣ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದನು ಆದರೆ ಇದಕ್ಕೆ ಕೆಲವು ಶ್ರೀಮಂತರು ಒಪ್ಪಲಿಲ್ಲ ನಂತರ ಈ ಏನು ಮಾಡಬೇಕು ಎಂದು ಚಿಂತಿಸುತ್ತಿದ್ದಾಗ ಒಂದು ಹುಡುಗಿ ಬಂದು ನಾನೂ ಕೂಡ ಸಹಾಯ ಮಾಡುತ್ತೇನೆ ಎಂದು ಹೇಳಿದಳು.

 ಆಗ ಎಲ್ಲರೂ ಆ ಹುಡುಗಿಯನ್ನು ನೋಡಿದರೆ ಈ ಚಿಕ್ಕ ಹುಡುಗಿ ಏನು ಸಹಾಯ ಮಾಡಬಲ್ಲಳು ಎಂದು ಯೋಚಿಸಿದರು ಆಗ ಆ ಹುಡುಗಿಯೂ ಮುಂದೆ ಬಂದು ಇಲ್ಲಿ ತೊಂದರೆ ಯಾಗಿರುವುದರಿಂದ ಮೊದಲು ನಾನು ಮನೆ ಮನೆಗೆ ಹೋಗಿ ಅನ್ನವನ್ನು ಭಿಕ್ಷೆ ಪಡೆದು ಬರುತ್ತೇನೆ ನಂತರ ಉಪವಾಸ ಇರುವವರಿಗೆ ನೀಡುತ್ತೇನೆ.

 ಮೊದಲು ಹಸಿದವರು ಊಟ ಮಾಡಲಿ ನಂತರ ನಾವೆಲ್ಲರೂ ಕುಳಿತು ಯೋಚಿಸೋಣ ಎಂದು ಹೇಳಿದಳು ಆಗ ಈ ಮಾತಿಗೆ ಎಲ್ಲರೂ ಒಪ್ಪಿದರು ಈ ಹುಡುಗಿ ತುಂಬಾ ಶ್ರೀಮಂತನ ಮಗಳೆ ಆಗಿದ್ದಳು ಆದರೂ ಇವಳಿಗೆ ಹಸಿವು ಏನೆಂದು ತಿಳಿದಿತ್ತು ನಂತರ ಭಿಕ್ಷೆ ಬೇಡಲು ಮುಂದಾದಳು.

 ನಂತರ ಇತರರು ಜೊತೆಗೆ ಬಂದರು ಕೆಲವು ತಿಂಗಳಲ್ಲೇ ಈ ಸಮಸ್ಯೆ ಬಗೆಹರಿಯಿತು ಹುಡುಗಿಯ ಸೃಜನಶೀಲತೆ ಒಪ್ಪುವಂತದ್ದು ಏಕೆಂದರೆ ತಕ್ಷಣಕ್ಕೆ ಏನು ಬೇಕೋ ಅದನ್ನು ಮಾಡಿ ತೋರಿಸಿದಳು.

ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ

 

ಹಲವಾರು ವರ್ಷಗಳ ಹಿಂದೆ ಒಬ್ಬ ಬಾಲಕ ಶಾಲೆಯಿಂದ ಬಂದು ನಡುಗುತ್ತಿದ್ದನು ತಾಯಿಯಾದವರು ಮಗ ಏಕೆ ನಡುಗುತ್ತಿದ್ದಾನೆ ಎಂದು ಇನ್ನೊಂದು ಕಂಬಳಿಯನ್ನು ಹಾಕಿದರು ಆದರೂ ಮಗ ನಡುಗುತ್ತಲೇ ಇದ್ದಾನೆ ಮನೆಯಲ್ಲಿ ಇದ್ದ ಎಲ್ಲ ಕಂಬಳಿಗಳು ಕೂಡ ಹಾಕಿದರು  ಮಗನಿಗೆ ಚಳಿ ತಡೆಯಲು ಆಗುತ್ತಿಲ್ಲ ಆಗ ತಾಯಿಯು ಕೇಳಿದರೂ ಏಕೆ ಹೀಗೆ ನಡುಗುತಿದೆಯಾ ನಿನಗೆ ಏನು ಆಗುತ್ತಿದೆ ಎಂದು ಕೇಳಿದಾಗ ಆ ಹುಡುಗನು ಹೇಳಿದನು.

 ನನಗೆ ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ ಇಂದು ನಾನು ದಾರಿಯಲ್ಲಿ ಬರಬೇಕಾದರೆ ದಾರಿಯ ಬದಿಯಲ್ಲಿ ಹಲವಾರು ನಿರ್ಗತಿಕರು ಇದ್ದರು ಅವರಿಗೆ ಸರಿಯಾಗಿ ಬಟ್ಟೆಯು ಇಲ್ಲ ಹಾಗೆ ಹಾಸಿಗೆಯು ಹೊದಿಕೆ ಕಂಬಳಿಯೂ ಇಲ್ಲ ಅವರೆಲ್ಲರೂ ಚಳಿಯಿಂದ ನಡುಗುತ್ತಿದ್ದಾರೆ.

 ಈ ದೃಶ್ಯವನ್ನು ನಾನು ಕಣ್ಣಾರೆ ಕಂಡೆ ಅವರನ್ನು ಚಳಿಯಿಂದ ಹೇಗೆ ಪಾರು ಮಾಡುವುದು ಎಂದು ಚಿಂತಿಸುತ್ತಿದ್ದೇನೆ ಅದಕ್ಕಾಗಿ ನನಗೆ ನಿದ್ದೆ ಬರುತ್ತಿಲ್ಲ ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ ಎಂದು ಹೇಳಿದನು ಈ ಹುಡುಗನೇ ವಾಸ್ವಾನಿ ಎಂದು ಹೆಸರು ಪಡೆದು ಸಂತರಾದರು.

 ಇವರು ಪುಣೆಯಲ್ಲಿ ಸಾಧು ವಾಸ್ವಾನಿ ಮಿಷನ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದರು ನಂತರ ಹಲವಾರು ಶಾಲೆಗಳನ್ನು ಹುಟ್ಟುಹಾಕಿದರು ಬದುಕಿನ ಕೊನೆಯವರೆಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದರು.

  ಕಲ್ಲಿನಿಂದ ಹೊಡೆಯಲು

ಒಂದು ಕಾಡಿನಲ್ಲಿ ಕೋತಿ ಮತ್ತು ಮೊಲ ಎರಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಬರುತ್ತಿದ್ದವು ನಂತರ ಒಂದು ಕಡೆ ಮೊಲ ಕುಳಿತುಕೊಂಡಿತು ಕೋತಿ ಮಾತ್ರ ಪದೇ ಪದೇ ತನ್ನ ಕೈಗಳಿಂದ ತನ್ನ ಮೈಯನ್ನು ಕೆರೆದುಕೊಳ್ಳುತ್ತಿತ್ತು ಮೊಲ ಕೂಡ ತನ್ನ ಕತ್ತು ಈಕಡೆ ಆಕಡೆ ತಿರುಗಿಸುತ್ತಲೇ ಇತ್ತು ಅಷ್ಟರಲ್ಲಿ ಮೊಲ ಹೇಳಿತು.

 ಕೋತಿ ಅಣ್ಣ ನೀನು ಸುಮ್ಮನೆ ಕೂರಲಿಕ್ಕೆ ಸಾಧ್ಯವಿಲ್ಲವೇ ಎಂದು ಹೇಳಿತು ಆಗ ಕೋತಿ ಹೇಳಿತು ಮೊಲಕ್ಕೆ ನೀನೂ ಕೂಡ ಆಗಾಗ ತಲೆ ಅಲ್ಲಾಡಿಸುತಿದ್ದೀಯಾ ತಲೆ ಅಲ್ಲಾಡಿಸದೆ ಇರಲು ಸಾಧ್ಯವಿಲ್ಲವೇ ಎಂದು ಕೋತಿ ಕೇಳಿತು ಆಗ ಎರಡು ಪ್ರಾಣಿಗಳು ಕೂಡ ಯಾರು ಹೆಚ್ಚು ಹೊತ್ತು ಸುಮ್ಮನಿರುತ್ತಾರೋ ಅವರೇ ಗೆದ್ದಂತೆ ಯಾರು ಮೊದಲು ಅಲುಗಾಡಿಸುತ್ತಾರೆ ಕೆರೆದುಕೊಳ್ಳುತ್ತಾರೆ ಅವರು ಸೋತಂತೆ ಎಂದು ಕೋತಿ ಮತ್ತು ಮೊಲ ಒಪ್ಪಿಕೊಂಡವು.

 ಕೋತಿ ಮೊಲ ಸುಮ್ಮನೆ ನೋಡುತ್ತಿದ್ದವು ಅಬ್ಬಬ್ಬಾ ಎಂದರೆ ಒಂದು ನಿಮಿಷ ಕಳೆದಿರಬಹುದು ಅಷ್ಟೆ ಕೋತಿಗೆ ಕೆರೆದುಕೊಳ್ಳದೆ ಕಷ್ಟವಾಗುತ್ತಿದೆ ಅದೇ ರೀತಿ ಮೊಲಕ್ಕೂ ಕತ್ತು ಅಲ್ಲಾಡಿಸದೆ ಇರುವುದರಿಂದ ಅದಕ್ಕೂ ಅಷ್ಟೇ ಕಷ್ಟವಾಗುತ್ತಿದೆ. ಆಗ ಬುದ್ಧಿವಂತ ಮೊಲ ಹೇಳಿತು ಕೋತಿಯನ್ನು ನಾವು ಅಲುಗಾಡಬಾರದು ಎಂದು ಷರತ್ತು ಮಾಡಿಕೊಂಡಿದ್ದೇವೆ ಆದರೆ ಒಬ್ಬರಿಗೆ ಒಬ್ಬರು ಕಥೆ ಹೇಳಬಹುದು ಎಂದು ಹೇಳಿತು.

 ಮೊಲ ಒಂದು ಕಥೆ ಹೇಳಲು ಶುರು ಮಾಡಿತು ನಾನು ಒಂದು ದಿನ ಊರಿನಿಂದ ಬರಬೇಕಾದರೆ ಶತ್ರುಗಳು ನಾಲ್ಕಾರು ಕಡೆಯಿಂದ ಅಟ್ಟಿಸಿಕೊಂಡು ಬರುತ್ತಿದ್ದರು ಎಂದು ಹೇಳುವಷ್ಟರಲ್ಲಿ ಕೋತಿಯು ಕೂಡ ಹೌದು ನನಗೆ ಒಂದು ಸರಿ ಹೀಗೆ ಆಯಿತು ಎಂದು ಹೇಳಿತು.

 ಮೊಲ ಹೇಳಿತು ನಾನು ಬರುತ್ತಿರಬೇಕಾದರೆ ಯಾವ ಕಡೆಯಿಂದ ಶಬ್ದ ಬರುತ್ತಿದೆ ಎಂದು ನೋಡಲೆಂದು ನಾನು ಆ ಕಡೆ ಈ ಕಡೆ ಎಲ್ಲವೂ ತಿರುಗಿ ನೋಡಿದೆ ಎನ್ನುತ್ತಾ ತನ್ನ ಕುತ್ತಿಗೆಯನ್ನು ತಿರುಗಿಸಿ ಕೊಂಡಿತು ಹೌದಾ ಎಂದು ಕೋತಿಯು ಕೂಡ ಹೇಳಿತು.

 ಕೋತಿಯು ನಾನು ಊರಿನಿಂದ ಬರಬೇಕಾದರೆ ಎಲ್ಲಾ ಹುಡುಗರೂ ಕೂಡ ನನಗೆ ಕಲ್ಲಿನಿಂದ ಹೊಡೆಯಲು ಶುರು ಮಾಡಿದರು ಬಹಳಷ್ಟು ಕಲ್ಲುಗಳು ತಪ್ಪಿಸಿಕೊಂಡೆ ಆದರೆ ಕೆಲವು ಕಲ್ಲುಗಳು ಮಾತ್ರ ಹೊಟ್ಟೆಗೆ ಬಂದು ಬಿತ್ತು ಎಂದು ಕೆರೆದು ಕೊಂಡಿತು ಮತ್ತೆ ಇಲ್ಲಿಯೂ ಬಿದ್ದಿತು ಎಂದು ತೃಪ್ತಿಯಾಗುವಷ್ಟು   ಕೆರೆದುಕೊಂಡಿತು.

ಮೊಲಕ್ಕೆ ಮತ್ತು ಕೋತಿಗೆ ಪರಿಸ್ಥಿತಿಯು ಅರ್ಥವಾಯಿತು ಎರಡು ಪ್ರಾಣಿಗಳು ನಕ್ಕವು ಏನೇ ಮಾಡಿದರೂ ನಮಗೆ ಹುಟ್ಟಿನಿಂದ ಬಂದ ಸ್ವಭಾವಗಳು ಹೋಗುವುದಿಲ್ಲ ಎಂದು ಅರಿತುವು ಈ ಪಂದ್ಯದಲ್ಲಿ ಯಾರು ಸೋಲಲೂ ಇಲ್ಲ ಯಾರು ಗೆಲ್ಲಲೂ ಇಲ್ಲ ಹಾಗೆಯೇ ಕೆಲವು ಗುಣಗಳು ಮನುಷ್ಯರಲ್ಲಿ ಇವೆ ಅವು ಯಾವುದೇ ಕಾರಣಕ್ಕೆ ಬದಲಾಗಲಾರವು.

ಮಾರಲಿಕ್ಕೆ ಮನಸು ಬರಲಿಲ್ಲ

ಒಂದು ಊರಿನಲ್ಲಿ ತುಕಾರಾಂ ಎಂಬುವ ವ್ಯಾಪಾರಿ ಇದ್ದನು ದಿನ ಕಳೆದಂತೆ ಅವನ ವ್ಯಾಪಾರವು ಕಡಿಮೆಯಾಗುತ್ತಾ ಬಂತು ನಂತರ ತುಕಾರಾಂ ಯೋಚನೆ ಮಾಡಿದನು ಬೇರೆ ಊರಿನಲ್ಲಿ ನಾನು ವ್ಯಾಪಾರ ಮಾಡುತ್ತೇನೆ ಎಂದು ಕೆಲವು ವಸ್ತುಗಳನ್ನು ಮಾರಿದನು.

ಒಂದು ತಕ್ಕಡಿ ಇತ್ತು ಅದನ್ನು ಮಾರಲಿಕ್ಕೆ ಮನಸು ಬರಲಿಲ್ಲ ಏಕೆಂದರೆ ಮತ್ತೆ ನಾನು ಇಲ್ಲಿ ಬಂದರೆ ನನಗೆ ಉಪಯೋಗವಾಗುತ್ತದೆ ಎಂದು ಯೋಚನೆ ಮಾಡಿ ತನ್ನ ಮಿತ್ರನ ಬಳಿ ಹೋದ ನಾನು ಕೆಲವು ತಿಂಗಳುಗಳ ಕಾಲ ಬೇರೆ ಊರಿಗೆ ಹೋಗಿ ಸಂಪಾದನೆ ಮಾಡಿಕೊಂಡು ಬರುತ್ತೇನೆ ಈ ತಕ್ಕಡಿಯನ್ನು ಇಟ್ಟಿರು ಎಂದು ತಕ್ಕಡಿಯನ್ನು ಕೊಟ್ಟು ಹೊರಟು ಹೋದನು.

 ತುಕಾರಾಂ ಬೇರೆ ಊರಿಗೆ ಹೋದನು ಚೆನ್ನಾಗಿ ಸಂಪಾದನೆ ಮಾಡಿದನು ನಂತರ ಬಂದನು ಮಿತ್ರ ನನ್ನ ತಕ್ಕಡಿ ಕೊಡು ಎಂದು ಕೇಳಿದನು ಆಗ ಮಿತ್ರನೂ ಹೇಳಿದನು ನಿನ್ನ ತಕ್ಕಡಿ ನಾನು ಅಟ್ಟದ ಮೇಲೆ ಇಟ್ಟಿದೆ ತಕ್ಕಡಿಗೆ ಇಲಿಗಳು ತಿಂದು ತುಕ್ಕು ಹಿಡಿದು ನಾಶವಾಗಿ ಹೋಗಿದೆ ನಾನು ಹೇಗೆ ಕೊಡಲಿ ಎಂದು ಸುಳ್ಳು ಹೇಳಿದನು.

 ತುಕಾರಾಮ್ ಗೆ ತುಂಬಾ ಬೇಸರ ಬೇಸರವಾಯಿತು ಮನೆಗೆ ಹೋದನು ಮಾರನೆಯ ದಿನ ಆ ಮಿತ್ರನ ಮಗ ಶಾಲೆಗೆ ಬಂದಿದ್ದನು ಆಗ ಮಿತ್ರನ ಮಗನನ್ನು ಮಾತನಾಡಿಸಿ ನನ್ನ ಮನೆಗೆ ಬಂದು ಹೋಗು ಎಂದು ಹೇಳಿ ಮಗನನ್ನು ತನ್ನ ಮನೆಯ ಒಳಗೆ ಕೂರಿಸಿ ಬೀಗಹಾಕಿ ಬಂದನು ನಂತರ ಮಿತ್ರನ ಹತ್ತಿರ ಹೋದನು ನಾನು ಸಂತೆಯಿಂದ ಬರ ಬೇಕಾದರೆ ನಿನ್ನ ಮಗ ಸಿಕ್ಕಿದನು ಅಲ್ಲೇ ಪ್ರಸಾದ ಕೊಡುತ್ತಿದ್ದರೂ ಎಲ್ಲರೂ ಪ್ರಸಾದ ತಿನ್ನಬೇಕಾದರೆ ನಿನ್ನ ಮಗನನ್ನು ಹದ್ದು ಎತ್ತಿಕೊಂಡು ಹೋಯಿತು ಎಂದು ಹೇಳಿದನು.

 ಈ ಮಾತನ್ನು ಕೇಳಿದ ಮಿತ್ರನೂ ಕೆಂಡಾಮಂಡಲವಾದ 8ವರ್ಷದ ಹುಡುಗನಿಗೆ ಹದ್ದು ಎತ್ತಿಕೊಂಡು ಹೋಗಲು ಸಾಧ್ಯವೇ? ನೀನು ಸುಳ್ಳು ಹೇಳುತ್ತಿದ್ದೀಯಾ ನನ್ನ ಮಗನನ್ನು ಕೊಡದಿದ್ದರೆ ನಿನ್ನನ್ನು ಸೆರೆಮನೆಗೆ ಕಳಿಸುತ್ತೇನೆ ಎಂದು ಹೆದರಿಸಿದನು. ಆಗ ತುಕಾರಾಮ್ ನನ್ನ ಕಬ್ಬಿಣದ ತಕ್ಕಡಿ ಇಲಿಗಳು ತಿನ್ನಬಹುದಾದರೆ ನಿನ್ನ ಮಗನನ್ನು ಹದ್ದು ಎತ್ತಿಕೊಂಡು ಹೋಗಲು ಸಾಧ್ಯವಾಗಬಹುದಲ್ಲವೆ ಎಂದನು.

 ಆಗ ಮಿತ್ರನಿಗೆ ಅರ್ಥ ವಾಯಿತು ಮನೆಯಲ್ಲಿ ಇದ್ದ ತಕ್ಕಡಿಯನ್ನು ತಂದು ಕೊಟ್ಟ ಅದರಂತೆ ಅವನ ಮಗನಿಗೂ ತಂದುಬಿಟ್ಟನು ಯಾವುದೇ ಸಮಸ್ಯೆ ಬಂದರು ಅದನ್ನು ಕೂಲಂಕಷವಾಗಿ ವಿಮರ್ಶಿಸಿ ನಂತರ ನಿರ್ಧರಿಸೋಣ.

]]>
https://babakategalu.com/%e0%b2%a8%e0%b2%be%e0%b2%a8%e0%b3%81-%e0%b2%97%e0%b3%81%e0%b2%b2%e0%b2%be%e0%b2%ae%e0%b2%a8%e0%b2%b2%e0%b3%8d%e0%b2%b2/feed/ 0
ಇನ್ನೂ ಕಳೆದುಕೊಳ್ಳಬೇಕಾಗುತ್ತದೆ https://babakategalu.com/%e0%b2%87%e0%b2%a8%e0%b3%8d%e0%b2%a8%e0%b3%82-%e0%b2%95%e0%b2%b3%e0%b3%86%e0%b2%a6%e0%b3%81%e0%b2%95%e0%b3%8a%e0%b2%b3%e0%b3%8d%e0%b2%b3%e0%b2%ac%e0%b3%87%e0%b2%95%e0%b2%be%e0%b2%97%e0%b3%81%e0%b2%a4/ https://babakategalu.com/%e0%b2%87%e0%b2%a8%e0%b3%8d%e0%b2%a8%e0%b3%82-%e0%b2%95%e0%b2%b3%e0%b3%86%e0%b2%a6%e0%b3%81%e0%b2%95%e0%b3%8a%e0%b2%b3%e0%b3%8d%e0%b2%b3%e0%b2%ac%e0%b3%87%e0%b2%95%e0%b2%be%e0%b2%97%e0%b3%81%e0%b2%a4/#respond Mon, 21 Apr 2025 04:40:00 +0000 https://babakategalu.com/?p=292 Read more]]> ಒಂದು ಊರಿನಲ್ಲಿ ಜಗವೀರ್ ಮಹಾರಾಜ ಅಕಂಪಿತ ಮಹಾರಾಣಿ ಇಬ್ಬರೂ ವಾಯು ಸಂಚಾರಕ್ಕೆಂದು ಬಂದಿರುತ್ತಾರೆ ಎಲ್ಲವನ್ನು ನೋಡಿದ ನಂತರ ದಾರಿಯಲ್ಲಿ ಬರಬೇಕಾದರೆ ಒಬ್ಬ ಮೀನು ವ್ಯಾಪಾರಿಯೂ ಆಕರ್ಷಕವಾಗಿರುವ ಬಣ್ಣ ಬಣ್ಣದ ಮೀನುಗಳನ್ನು ಮಾರಾಟಕ್ಕೆ ಇಟ್ಟಿದ್ದನು ಇದನ್ನು ರಾಜರು ನೋಡಿ ಒಂದು ಮೀನನ್ನು ತೆಗೆದುಕೊಂಡು ಮಹಾರಾಣಿಯವರಿಗೆ ಕೊಟ್ಟರು ನಂತರ ಮೀನಿನ ಬೆಲೆ ಎಷ್ಟು ಎಂದು ಕೇಳಿದರು.

ಬುದ್ಧಿವಂತ ಮೀನು ವ್ಯಾಪಾರಿಯು ಮಹಾರಾಜರೇ ನನಗೆ ಏನೂ ಬೇಡ ನನ್ನ ಕಡೆಯಿಂದ ನಿಮಗೆ ಸಮರ್ಪಣೆ ಯಾಗಲಿ ಎಂದು ವಿನಮ್ರವಾಗಿ ಕೇಳಿದ ರಾಜನಾದವನು ಇವನ ಒಳ್ಳೆಯ ಮನಸ್ಸನ್ನು ನೋಡಿ ನೂರು ಚಿನ್ನದ ನಾಣ್ಯ ಇರುವ ಒಂದು ಥೈಲಿಯನ್ನು ಕೊಟ್ಟನು ರಾಣಿಗೆ ಮಾತ್ರ ತುಂಬ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ಮನಸ್ಸಿನಲ್ಲಿ ಕೊರಗಿದಳು.

 ತಕ್ಷಣ ಅತಿ ಬುದ್ಧಿವಂತಿಕೆಯಿಂದ ರಾಣಿಯು ಈ ಮೀನು ಗಂಡೋ ಹೆಣ್ಣೋ ಎಂದು ಕೇಳಿ ಗಂಡು ಇದ್ದರೆ ಹೆಣ್ಣು ಹೆಣ್ಣು ಇದ್ದರೆ ಗಂಡು ಎಂದು ಹೇಳಿ ಆ ಹಣವನ್ನು ವಾಪಸ್ ಪಡೆಯುತ್ತೇನೆ ಎಂದು ರಾಜನಿಗೆ ಹೇಳಿದಳು ರಾಜರು ಸುಮ್ಮನಾದರು ಮಹಾರಾಣಿ ಕೇಳಿದಳು ಆ ಮೀನು ಗಂಡೋ ಹೆಣ್ಣೋ ಹೇಳಿ ಎಂದು ಕೇಳಿದಳು ಮೀನು ವ್ಯಾಪಾರಿಯೂ ವಿನಯದಿಂದ ಮಹಾರಾಣಿಯವರೇ ಇದು ನಿಮ್ಮ ಕೈಗೆ ಸೇರಿದೆ ಗಂಡಾದರೇನು ಹೆಣ್ಣಾದರೇನು ಅದು ನೀವೇ ಹೇಳಬಹುದಾಗಿದೆ ಎಂದು ಹೇಳಿದನು.

 ರಾಣಿಯ ಕಸರತ್ತು ವಿಫಲವಾಯಿತು ಆಗ ರಾಜನಿಗೆ ಇನ್ನಷ್ಟು ಸಂತೋಷವಾಗಿ ಇನ್ನೂ ನೂರು ಚಿನ್ನದ ನಾಣ್ಯ ಇರುವ ಥೈಲಿಯನ್ನು ಹೆಂಡತಿಗೆ ಕೊಟ್ಟನು ವ್ಯಾಪಾರಿಗೆ ಕೊಡು ಎಂದು ಹೇಳಿದನು ರಾಣಿಯು ಬೇಕು ಬೇಕೆಂದು ಒಂದು ಚಿನ್ನದ ನಾಣ್ಯ ಬೀಳುವಂತೆ ಕೊಟ್ಟಳು ವ್ಯಾಪಾರಿಯು ಒಂದು ಚಿನ್ನದ ನಾಣ್ಯವನ್ನು ಹುಡುಕುತ್ತಿದ್ದನು.

ರಾಣಿಯು ಇಷ್ಟು ಚಿನ್ನದ ನಾಣ್ಯಗಳು ಬಂದರೂ ಒಂದು ಚಿನ್ನದ ನಾಣ್ಯ ಬೇರೆಯವರಿಗೆ  ಸಿಕ್ಕರೆ ಅವರು ಸಂತೋಷ ಪಡುತ್ತಾರೆ ನಿನಗೆ ಹೆಚ್ಚು ದುರಾಸೆ ಇದೆ ಎಂದು ಹೇಳಿದಳು ಇದನ್ನು ಕೇಳಿದ ಮೀನಿನ ವ್ಯಾಪಾರಿಯು ನಯ  ವಿನಯವಾಗಿ ಮಹಾರಾಣಿಯವರೇ ನಾನು ಒಂದು ಚಿನ್ನದ ನಾಣ್ಯಕ್ಕೆ ದುರಾಸೆ ಪಡುತ್ತಿಲ್ಲ ಆ ನಾಣ್ಯದ ಮೇಲೆ ರಾಜರ ಭಾವಚಿತ್ರವಿದೆ ಅದನ್ನು ಯಾರೂ ತುಳಿಯಬಾರದು ಎನ್ನುವ ನನ್ನ ಮನೋಭಾವನೆ ಆದ್ದರಿಂದ ಚಿನ್ನದ ನಾಣ್ಯವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದನು.

 ಸಿಕ್ಕಿದ ಮೇಲೆ ಆ ನಾಣ್ಯ ನಾನು ಬೇರೆಯವರಿಗೆ ಕೊಡುತ್ತೇನೆ ಇದನ್ನು ಕೇಳಿದ ಮಹಾರಾಣಿಗೆ ತಲೆ ಕೆಟ್ಟು ಹೋಯಿತು ನಂತರ ಮಹಾರಾಜರು ಇನ್ನೂ ನೂರು ಚಿನ್ನದ ನಾಣ್ಯದ ಥೈಲಿಯನ್ನು ವ್ಯಾಪಾರಿಗೆ ಬಹುಮಾನವಾಗಿ ಕೊಟ್ಟರು ರಾಣಿಯು ಈಗ ನಾನು ಏನೇ ಮಾತನಾಡಿದರೂ ಇನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಮೌನವಾದಳು.  

ಯಾರೂ ಗುರುತು ಹಿಡಿಯುತ್ತಿಲ್ಲ

ಒಂದು ಕಾಗೆ ಆಹಾರಕ್ಕಾಗಿ ಅಲೆದು ಅಲೆದು ಸಾಕಾಗಿ ಒಂದು ಕಡೆ ಕುಳಿತುಕೊಂಡಿತು ಎಲ್ಲಾ ಪಾರಿವಾಳಗಳು ಮಂದಿರದ ಮುಂದೆ ಚೆನ್ನಾಗಿ ತಿನ್ನುತ್ತಾ ಇದ್ದವು ಅವುಗಳಿಗೆ ಬೇಕಾದಷ್ಟು ಧಾನ್ಯಗಳು ಇದ್ದವು ಕಾಗೆ ಯೋಚಿಸಿತು ನಾನೂ ಕೂಡ ಪಾರಿವಾಳದ ತರ ಇದ್ದರೆ ನನಗೂ ಚೆನ್ನಾಗಿ ಆಹಾರ ಸಿಗುತ್ತದೆ ಎಂದು ಒಂದು ಉಪಾಯ ಕೊಂಡುಕೊಂಡಿತು.

 ಬೂದಿಯಲ್ಲಿ ಹೋಗಿ ಒದ್ದಾಡಿ ಮತ್ತೆ ನೀರಿನಲ್ಲಿ ಬಂದು ತನ್ನ ಬಣ್ಣವೆಲ್ಲವೂ ಪಾರಿವಾಳದ ರೀತಿಲಿ ಮಾಡಿಕೊಂಡಿತು ನಂತರ ಕಾಗೆಯು ಪಾರಿವಾಳದ ತರವೇ ಇತ್ತು ಕಾಗೆಯು ಕೂಡ ಚೆನ್ನಾಗಿ ತಿಂದಿತು ನಂತರ ಸುಮ್ಮನೆ ಇರಬಾರದೆ ಕಾಗೆ ಕಾಕಾ ಎಂದು ಶಬ್ದವನ್ನು ಮಾಡಿತು ಆಗ ಎಲ್ಲ ಪಾರಿವಾಳಗಳಿಗೆ ತಿಳಿದು ಚುಚ್ಚಿ ಚುಚ್ಚಿ ಓಡಿಸಿದವು.

 ಕಾಗೆಯು ತನ್ನ ಪರಿವಾರದೊಂದಿಗೆ ಬಂದಿತು ಆಗ ಅಲ್ಲಿಯೂ ಕೂಡ ಯಾರೂ ಗುರುತು ಹಿಡಿಯುತ್ತಿಲ್ಲ ಕಾಗೆಗಳು ಕೂಡ ಅವರ ಭಾಷೆಯಲ್ಲಿ ಬೈದು ಹೊಡೆದು ಓಡಿಸುತ್ತಾರೆ ಕಾಗೆಯ ಭಾಷೆಯಲ್ಲಿ ಮಾತನಾಡಿದರೂ ಕಾಗೆಗಳು ಅರ್ಥಮಾಡಿಕೊಳ್ಳುತ್ತಿಲ್ಲ ಆಗ ನಾನು ಮಾಡಿದ್ದು ತಪ್ಪು ಎಂದು ಕಾಗೆ ಅರ್ಥಮಾಡಿಕೊಳ್ಳುತ್ತದೆ.

 ಮಾಡಿದ್ದು ಒಂದೇ ತಪ್ಪು ಬಣ್ಣ ಬದಲಾಯಿಸಿತು ಇದು ಪಾರಿವಾಳದ ಕಡೆಗೂ ಹೋಗಲಿಲ್ಲ ಈ ಕಡೆ ಕಾಗೆಯ ಗುಂಪಿಗೂ ಸೇರಲಿಲ್ಲ ನಂತರ ಹೋಗಿ ತನ್ನ ದೇಹ ಸರಿ ಮಾಡಿಕೊಂಡು ಬಂದರು ಯಾರು ಸೇರಿಸಲಿಲ್ಲ.

ಯಾರು ಬೇಕಾದರೂ ಬರಬಹುದು

ಒಂದು ಸಾರಿ ಬಾಬಾ ಅವರು ಊರಿನ ತತ್ತರ್ ರಾಜನ ಅಹಂ ಕಡಿಮೆ ಮಾಡಬೇಕೆಂದು ತೀರ್ಮಾನಿಸಿದರು ಅದಕ್ಕಾಗಿ ಬಾಬಾ ಅವರು ರಾಜನ ಅರಮನೆಯ ಮುಂದೆ ಕುಳಿತರು ಸಿಪಾಯಿಗಳು ಬಂದು ಇಲ್ಲಿಂದ ಹೋಗಿ ಎಂದು ಹೇಳಿದರು.

 ಬಾಬಾ ಅವರು ಕೇಳಲಿಲ್ಲ ಅಲ್ಲಿಯೇ ಇದರು ನಂತರ ಬೇರೆ ಮಂತ್ರಿಗಳು ಕೂಡ ಹೋಗಿ ಹೇಳಿದರು ಆದರೂ ಬಾಬಾ ಸುಮ್ಮನೆ ಕುಳಿತಿದ್ದರು ನಂತರ ರಾಜನೆ ಬಂದನು ಕೋಪದಿಂದ ಹೇಳಿದನು ಇದು ನನ್ನ ಅರಮನೆ ಧರ್ಮಛತ್ರವಲ್ಲ ಎಂದನು.

 ಬಾಬಾ ಅವರು ರಾಜನನ್ನು ನೋಡಿ ನಾನು ದಾರಿಯಲ್ಲಿ ಬರುತ್ತಿರಬೇಕಾದರೆ ಎರಡು ವೃತ್ತಗಳಲ್ಲಿಅಂದವಾದ ಎರಡು ಮೂರ್ತಿಗಳನ್ನು ನೋಡಿದೆ ನಿಮ್ಮನ್ನೇ ಕೋಲುವಂತಿದ್ದವು ಎಂದಾಗ ರಾಜನು ಹೆಮ್ಮೆಯಿಂದ ಒಂದು ಮೂರ್ತಿ ನನ್ನ ತಂದೆಯವರದು ಇನ್ನೊಂದು ಮೂರ್ತಿ ನನ್ನ ತಾತನವರದು ಎಂದು ಹೇಳಿದನು.

ಬಾಬಾ ಅವರು ರಾಜನಿಗೆ ಒಂದು ಪ್ರಶ್ನೆ ಕೇಳಿದರು ಈ ಅರಮನೆಯಲ್ಲಿ ನೀವು ರಾಜ ಆಗುವುದಕ್ಕಿಂತ ಮುಂಚೆ ಯಾರು ರಾಜರಾಗಿದ್ದರು ರಾಜ ನನ್ನ ತಂದೆ ತಂದೆಗೆ ಮುಂಚೆ ನನ್ನ ತಾತ ತಾತನಿಗಿಂತ ಮುಂಚೆ ಯಾರು ಇದ್ದರು ನನ್ನ ಮುತ್ತಾತ ಅವರಿಗಿಂತ ಮುಂಚೆ ಯಾರು ಇದ್ದರು ನನ್ನ ಪೂರ್ವಜರು ಎಂದು ಸಿಟ್ಟಿನಿಂದ ಹೇಳಿದ.

 ನಿಮ್ಮ ಅರಮನೆಯು ಧರ್ಮಛತ್ರ ಧರ್ಮಾಚತ್ರಕ್ಕೆ ಯಾರು ಬೇಕಾದರೂ ಬರಬಹುದು ಯಾರು ಬೇಕಾದರೂ ಹೋಗಬಹುದು. ನೀವು ಸತ್ತನಂತರವೂ ಅರಮನೆ ಇದ್ದೆ ಇರುತ್ತದೆ. ನಿಮ್ಮ ಅರಮನೆ ಏಕೆ ಈ ಜಗತ್ತೇ ಒಂದು ಧರ್ಮಛತ್ರ ನಾವು ಹುಟ್ಟುತ್ತೇವೆ ಸಾಯುವವರೆಗೂ ಇಲ್ಲಿ ಬದುಕುತ್ತೇವೆ ಆದ್ದರಿಂದ ನನ್ನದು ಎಂಬ ಮೋಹ ಇರುವುದು ಒಳ್ಳೆಯದಲ್ಲ ಎಂದು ಹೇಳಿದರು. ಈ ಮಾತಿನಿಂದ ರಾಜನಿಗೆ ಜ್ಞಾನೋದಯವಾಯ್ತು.

ಕೇವಲ ಗೆರೆಗಳು

ಒಂದು ಊರಿನಲ್ಲಿ ಒಬ್ಬ ತಪೋನಿಧಿ ಶ್ರೀಮಂತ ಇದ್ದನು ಅವನಿಗೆ ಒಬ್ಬ ದುರ್ಜಯ್ ಮಗನಿದ್ದನು ಅದೇ ಊರಿನಲ್ಲಿ ಒಬ್ಬ ಕ್ಷೀರಜ್ ಬಡವ ಇದ್ದನು ಬಡವನಿಗೂ ಒಬ್ಬ ಮಗ ಇದ್ದನು ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು ಶ್ರೀಮಂತನ ಮಗ ಇವನು ಒಳ್ಳೆಯ ವಾತಾವರಣದಲ್ಲಿ ಬೆಳೆಯಲಿಲ್ಲ ಬರೀ ಮೋಜು ಮಸ್ತಿ ಮಾಡಿಕೊಂಡು ಇದ್ದನು.

 ಕಲಿಯುವುದರಲ್ಲೂ ಬರೆಯುವುದರಲ್ಲೂ ತುಂಬಾ ಹಿಂದೆ ಉಳಿದಿದ್ದನು ಅದೇ ಬಡವನ ಮಗ ತುಂಬಾ ಚೆನ್ನಾಗಿ ಓದುತ್ತಿದ್ದನು ಹಾಗೆ ಮನೆಯಲ್ಲೂ ಕೂಡ ಓದುತ್ತಿದ್ದನು ಹೀಗೆ ಕಾಲ ಕಳೆಯಿತು ಒಂದು ಸಾರಿ ಶಾಲೆಯಲ್ಲಿ ಯಾರು ಚೆನ್ನಾಗಿ ಓದುತ್ತಿದ್ದಾರೆ ಎಂದು ಪರೀಕ್ಷೆ ಮಾಡಲು ಕಪ್ಪು ಹಲಗೆಯ ಮೇಲೆ ಏನೋ ಬರೆದರು.

 ಮೊದಲು ಶ್ರೀಮಂತನ ಮಗನಿಗೆ ಏನು ಬರೆದಿದೆ ಎಂದು ಶಿಕ್ಷಕರು ಕೇಳಿದರು ಕಪ್ಪು ಹಲಗೆಯ ಮೇಲೆ ಬರೆದಿರುವುದು ಎಲ್ಲ ಗೆರೆಗಳು ಎಂದು ಹೇಳಿದನು ಓದಿಸಿದ ಶಿಕ್ಷಕರಿಗೂ ತುಂಬಾ ಅವಮಾನವಾಯಿತು ನಂತರ ಬಡವನ ಹುಡುಗನಿಗೆ ಓದಲು ಹೇಳಿದರು ಶಿಕ್ಷಕರು ಏನು ಬರೆದಿದ್ದರು ಅದನ್ನು ಸರಿಯಾಗಿ ಉಚ್ಚಾರ ಮಾಡಿ ಓದಿದನು.

 ಆಗ ಪರೀಕ್ಷೆಗೆ ಬಂದಿದ್ದವರು ಸಂತೋಷಪಟ್ಟು ಹೋದರು ಇಲ್ಲಿ ಕಪ್ಪು ಹಲಗೆಯ ಮೇಲೆ ಏನೇನೋ ಬರೆದಿರುತ್ತದೆ ಆದರೆ ಅದನ್ನು ಚೆನ್ನಾಗಿ ಬಲ್ಲವರು ಅಕ್ಷರವೆಂದು ಅರಿತರೆ ಗೊತ್ತಿಲ್ಲದೇ ಇರುವವರು ಕೇವಲ ಗೆರೆಗಳು ಎಂದು ಅರ್ಥಮಾಡಿಕೊಳ್ಳುತ್ತಾರೆ.

ಸನ್ನೆ ಮಾಡಿ ತೋರಿಸುತ್ತಿದೆ

ಒಂದು ಸಾರಿ ಮನೆ ನಾಯಿಯು ಆಚೆ ಓಡಾಡಲು ಬರುತ್ತದೆ ಅದೇ ಸಮಯಕ್ಕೆ ನಾಯಿ ಹಿಡಿಯುವವರು ಬರುತ್ತಾರೆ ಓಡಾಡುತ್ತಿದ್ದ ನಾಯಿಯನ್ನು ಹಿಡಿಯಲು ಓಡಿಸಿಕೊಂಡು ಬರುತ್ತಾರೆ ನಾಯಿಯು ತುಂಬಾ ವೇಗವಾಗಿ ಓಡಿ ಪಕ್ಕದ ಬೀದಿಗೆ ಬರುತ್ತದೆ ಆಗ ಒಂದು ಮನೆ ಕಾಣುತ್ತದೆ.

 ಮನೆಯ ಮುಂದೆ ಒಬ್ಬ ಶಕುನಿ ಮನುಷ್ಯ ನಿಂತಿರುತ್ತಾನೆ ಆಗ ನಾಯಿಯು ಶಕುನಿ ಮನುಷ್ಯನನ್ನು ದಯವಿಟ್ಟು ನನಗೆ ಹಿಡಿಯಲು ಬರುತ್ತಿದ್ದಾರೆ ಸ್ವಲ್ಪ ಸಮಯ ನಾನು ಮನೆಯ ಅಂಗಳದಲ್ಲಿ ಅವಿತುಕೊಳ್ಳುತ್ತೇನೆ ಅವರು ಹೋದ ನಂತರ ನಾನು ಹೋಗುತ್ತೇನೆ ದಯಮಾಡಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತದೆ.

 ಆ ಶಕುನಿ ಮನುಷ್ಯನ್ನು ನಾಯಿಯಲ್ಲಿ ತುಂಬಾ ನಿಯತ್ತು ಜಾಸ್ತಿ ಇರುತ್ತದೆ ನಾನು ಇಷ್ಟು ಮಾಡದಿದ್ದರೆ ಭಗವಂತ ಮೆಚ್ಚುವುದಿಲ್ಲ ಹೋಗಿ ಒಳಗೆ ಅವಿತುಕೋ ಎಂದು ಭರವಸೆ ನೀಡುತ್ತಾನೆ. ನಂತರ ನಾಯಿ ಹಿಡಿಯುವವರು ಬರುತ್ತಾರೆ ಶಕುನಿ ಮನುಷ್ಯನನ್ನು ಕೇಳುತ್ತಾರೆ ಇಲ್ಲಿ ಯಾವುದಾದರೂ ನಾಯಿ ಬಂದಿದೆಯೇ ಆಗ ಮನುಷ್ಯನು ಬಾಯಿಯಿಂದ ಯಾವುದೇ ನಾಯಿ ಬಂದಿಲ್ಲ ಕೈಯಿಂದ ನಾಯಿ ಒಳಗಡೆ ಇದೆ ಎಂದು ಕೈಯಿಂದ ಸನ್ನೆ ಮಾಡಿ ತೋರಿಸುತ್ತಿರುತ್ತಾನೆ.

  ನಾಯಿ ಹಿಡಿಯುವವರು ಶಕುನಿ ಮನುಷ್ಯ ಮಾಡಿದ ಸನ್ನೆಯನ್ನು ಅರ್ಥಮಾಡಿಕೊಳ್ಳದೆ ಹೊರಟು ಹೋಗುತ್ತಾರೆ ನಾಯಿ ಹಿಡಿಯುವವರು ಹೊರಟು ಹೋದ ಮೇಲೆ ನಾಯಿ ಈಚೆ ಬರುತ್ತದೆ ಸುಮ್ಮನೆ ತನ್ನ ಪಾಡಿಗೆ ಹೋಗುತ್ತಿರುತ್ತದೆ ಆಗ ನಿಂತಿದ್ದ ಶಕುನಿ ಮನುಷ್ಯ ನೀನು ನನಗೆ ಧನ್ಯವಾದ ಹೇಳುತ್ತಿಲ್ಲವಲ್ಲ ಎಂದು ಹೇಳುತ್ತಾನೆ.

 ಆಗ ನಾಯಿಯು ನೀನು ಬಾಯಿಯಿಂದ ನಾಯಿ ಇಲ್ಲ ಎಂದು ಹೇಳುತ್ತಿದೆ ಕೈಯಿಂದ ಸನ್ನೆ ಮಾಡಿ ತೋರಿಸುತ್ತಿದೆ ಇದನ್ನು ನಾನು ಒಳಗಡೆಯಿಂದ ನೋಡುತ್ತಿದ್ದೆ ಹೇಗೋ ನಾನು ಪಾರಾದೆ ನಿನ್ನಲ್ಲಿ ನೀಚ ಬುದ್ಧಿ ಇರುವುದರಿಂದ ನಿನಗೆ ನಾನು ಕೃತಜ್ಞತೆ ಆಗಲಿ ಧನ್ಯವಾದ ವಾಗಲಿ ಹೇಳುವುದಿಲ್ಲ ಎಂದು ಹೇಳಿ ಹೋಯಿತು.

 ಕೆಲವು ಮನುಷ್ಯರು ಇರುತ್ತಾರೆ ತುಟಿಗೆ ಸಿಹಿಯನ್ನು ಅಂಟಿಸುತ್ತಾರೆ ತುತ್ತಿನಲ್ಲಿ ವಿಷ ತುಂಬಿರುತ್ತದೆ ಎಚ್ಚರಿಕೆಯಿಂದ ಇರೋಣ.

]]>
https://babakategalu.com/%e0%b2%87%e0%b2%a8%e0%b3%8d%e0%b2%a8%e0%b3%82-%e0%b2%95%e0%b2%b3%e0%b3%86%e0%b2%a6%e0%b3%81%e0%b2%95%e0%b3%8a%e0%b2%b3%e0%b3%8d%e0%b2%b3%e0%b2%ac%e0%b3%87%e0%b2%95%e0%b2%be%e0%b2%97%e0%b3%81%e0%b2%a4/feed/ 0