ನಾನು ಎಲ್ಲೆಲ್ಲೂ ಹುಡುಕಿದೆ

ಪ್ರಖ್ಯಾತ ಮನೋರಂಜನ್ ಚಿತ್ರಕಾರನ್ನು ತನ್ನದೇ ಆದ ಒಂದು ಚಿತ್ರವನ್ನು ಬರೆಯಬೇಕು ಅದು ಎಲ್ಲರಿಗೂ ನೆಮ್ಮದಿ ತರಬೇಕು ಎಂದು ಚಿಂತನೆ ಮಾಡಿದನು ಅದಕ್ಕಾಗಿ ಮುಂದೆ ಒಬ್ಬ ಯುವಕ ಹೋಗುತ್ತಿದ್ದನು ಯುವಕನಿಗೆ ಕೇಳಿದನು ಯಾವುದನ್ನು ನೋಡಿದರೆ ನೆಮ್ಮದಿ ಸಿಗುತ್ತದೆ ಎಂದು ಕೇಳಿದನು.

ಯುವಕ ಯುಗ ಯುಗ  ಗಳೇ ಸಾಗಿದರು ಪ್ರೀತಿ ಮಾತ್ರ ಶಾಶ್ವತವಾಗಿರುತ್ತದೆ ಪ್ರೀತಿಗೆ ಸಾವಿಲ್ಲ ಪ್ರೀತಿಯನ್ನು  ನೆನೆಸಿಕೊಂಡರು ತೃಪ್ತಿ ಸಿಗುತ್ತದೆ ಎಂದು ಹೇಳಿದ ಈ ಮಾತು ಚಿತ್ರಕಾರನಿಗೆ ಹಿಡಿಸಲಿಲ್ಲ ನಂತರ  ವಿಶ್ರಾಂತಿಯಲ್ಲಿ ಕುಳಿತಿದ್ದ ಸೈನಿಕ ನಿಗೆ ಇದೇ ಪ್ರಶ್ನೆಯನ್ನು ಚಿತ್ರಕಾರ ಕೇಳಿದನು.

ಸೈನಿಕ ಜಗತ್ತಿನಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಶಾಂತಿ ಶಾಂತಿ ಇಲ್ಲದೆ ಮನುಷ್ಯ ಬದುಕಲಾರ ಶಾಂತಿಯೇ ಸರ್ವಸ್ವ ಎಂದು ಹೇಳಿದನು ಇದು ಚಿತ್ರಕಾರನಿಗೆ ಸರಿ ಎನಿಸಲಿಲ್ಲ ಇನ್ನು ಮುಂದೆ ಹೋಗುತ್ತಿದ್ದಾಗ ಋಷಿಗಳು ಹೋಗುತ್ತಿದ್ದರು ಅವರನ್ನು ಕೂಡ ಇದೇ ಪ್ರಶ್ನೆಯನ್ನು ಕೇಳಿದನು ಆಗ ಋಷಿಗಳು ಶ್ರದ್ಧೆ ಅಭಿವೃದ್ಧಿಯ ಬುನಾದಿ ಶ್ರದ್ಧೆ ಗಿಂತಲೂ ಸೌಂದರ್ಯವಾದುದು ಯಾವುದು ಇಲ್ಲ ಎಂದು ಹೇಳಿದರು.

   ಯುವಕ, ಸೈನಿಕ, ಋಷಿಗಳು ಹೇಳಿದ ಮಾತುಗಳನ್ನು  ನೆನಪಿಸಿಕೊಳ್ಳುತ್ತಿದ್ದನು ನಂತರ ಚಿತ್ರಕಾರ ಮನೆಗೆ ಬಂದ ಆಗ ಹೆಂಡತಿಯು ಗಂಡನ ಬರುವಿಕೆಗಾಗಿ ಪ್ರೀತಿಯಿಂದ ಕಾಯುತ್ತಿದ್ದಳು ಮಕ್ಕಳು ಶ್ರದ್ಧೆ ಭಕ್ತಿಯಿಂದ ಓದುತ್ತಿದ್ದರು ತಂದೆ ತಾಯಿ ಅಂಗಳದಲ್ಲಿ ಶಾಂತಿಯಾಗಿ ಕುಳಿತಿದ್ದರು.

ಈ ದೃಶ್ಯವನ್ನು ನೋಡಿ ಚಿತ್ರಕಾರನು ನಾನು ಎಲ್ಲೆಲ್ಲೂ ಹುಡುಕಿದೆ ಆದರೆ ಮನೆಯ ಒಂದು ಚಿತ್ರ ಬರೆದರೆ ಸಾಕು ನೆಮ್ಮದಿ ಸಿಗುತ್ತದೆ ಎಂದು ಸುಂದರವಾದ ಮನೆಯ ಚಿತ್ರವನ್ನು ಚಿತ್ರಿಸಿದನು ನಾವು ನೆಮ್ಮದಿಗಾಗಿ ಬೇರೆ ಬೇರೆ ಕಡೆ ಹುಡುಕುವುದಕ್ಕಿಂತ ನಮ್ಮ ಮನೆಯಲ್ಲಿಯೇ ನೆಮ್ಮದಿ ಇದೆ ಸರಿಯಾಗಿ ಗುರುತಿಸೋಣ.

ಎಲ್ಲರಿಗೂ ಬುದ್ಧಿ ಇದ್ದೇ ಇದೆ

ಒಂದು ಹಳ್ಳಿಯಲ್ಲಿ ನಾಲ್ಕು ಸ್ನೇಹಿತರು ಇದ್ದರು ಇವರು ಜೊತೆಯಲ್ಲೆ ಓದಿದವರು ನಂತರ ಇವರು ಊರಿಗೆ ಹೋಗಿ ಕೆಲಸವನ್ನು ಮಾಡಿದರು ಊರಿನ ವೈಭವ ಆಕರ್ಷಣೆಗಳು ಸೆಳೆದವು ಹಲವು ವರ್ಷಗಳ ನಂತರ ಅವರಿಗೆ ಊರಿನ ಜೀವನ ಸಾಕಾಯಿತು ನಂತರ ನಾಲ್ಕು ಸ್ನೇಹಿತರು ಮಾತನಾಡಿಕೊಂಡರು.

 ನಮ್ಮೂರೇ ನಮಗೆ ಮೇಲು ಎಂದು ತಮ್ಮ ಊರಿಗೆ ಬಂದರು ಊರಿನಲ್ಲಿ ಏನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದರು ಹಿರಿಯರು ಹೇಳಿದರು ನೀವು ರೈತರ ಮಕ್ಕಳು ಭೂಮಿ ಯಾವತ್ತೂ ಕೈಬಿಡುವುದಿಲ್ಲ ಊರಿಗೆ ಹೋಗಿ ಬೇರೆಯವರ ಹತ್ತಿರ ಗುಲಾಮರಾಗಿ ಬದುಕುವುದಕ್ಕಿಂತ ನಮ್ಮ ಊರಿನಲ್ಲಿಯೇ ಕೃಷಿ ಮಾಡಿ ಸ್ವತಂತ್ರವಾಗಿ ಬೆಳೆಯಬಹುದು ಎಂದು ವಿವರಿಸಿದರು.

ಈ ಮಾತು ನಾಲ್ಕು ಸ್ನೇಹಿತರಿಗೂ ಹಿಡಿಸಿತು ಅದರಂತೆ ತಮಗೆ ಇರುವ ಜಮೀನಿನಲ್ಲಿ ಬಿತ್ತನೆ ಮಾಡೋಣ ಎಂದು ಬಿತ್ತನೆ ಚೆನ್ನಾಗಿ ಮಾಡಿದರು ಆದರೆ ಆ ವರ್ಷ ಮಳೆಯೇ ಬರಲಿಲ್ಲ.

  ಮೊದಲನೆಯವನು ನದಿಯ ಬಳಿ ಕುಳಿತು ಯೋಚಿಸಿದ ನಮ್ಮ ಭೂಮಿ ನದಿಯ ಮೇಲೆ ಇದೆ ನೀರು ಬರುವುದೇ ಕಷ್ಟ ಎಂದು ಚಿಂತಿಸಿದನು ಅದೇ ಎರಡನೆಯವನು ಯೋಚಿಸಿದನು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನದಿಯ ನೀರನ್ನು ತೆಗೆದುಕೊಂಡು ಹೋಗಿ ನನ್ನ ಹೊಲಕ್ಕೆ ದಿನನಿತ್ಯ ಹಾಕುತ್ತೇನೆ.

ಮೂರನೇಯವನ್ನು ಆಲೋಚಿಸಿದ ನದಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನೀರು ಧಾರಾಕಾರವಾಗಿ ಬರುತ್ತಿದೆ  ನಾನು ಪಟ್ಟಣದಲ್ಲಿ ಕೆಲಸ ಮಾಡಿದ ಅನುಭವವಿದೆ ನಾನು ಪಟ್ಟಣದಿಂದ ನೀರಿನ ಪಂಪ್ ಸೆಟ್ ಅನ್ನು ಖರೀದಿ ಮಾಡಿ ತನಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಂಡನು ಹಾಗಾಗಿ ಒಳ್ಳೆಯ ಬೆಳೆ ಬೆಳೆಸಿದನು 

ನಾಲ್ಕನೇವನು ಚಾಣಾಕ್ಷ  ಅದ್ಭುತವಾಗಿ ಯೋಚಿಸಿದನು ನಾನು  ಬೋರ್ವೆಲ್ ಕೊರೆಸಿದರೆ ನೀರು ಯಾವಾಗಲೂ ಬರುತ್ತದೆ ಎಂದು ಚಿಂತನೆ ಮಾಡಿ ಬೋರ್ವೆಲ್ ಅನ್ನು ಕೊರೆಸಿದನು ಕರೆಂಟ್ ಇದ್ದಾಗ ನೀರನ್ನು ಶೇಖರಣೆ ಮಾಡಿ ಇಡುತ್ತಿದ್ದನು ತನಗೆ ಬೇಕಾದಾಗ ಬಳಸಿಕೊಳ್ಳುತ್ತಿದ್ದನು ಇದರಿಂದಾಗಿ ಸಮೃದ್ಧವಾಗಿ  ಬೆಳೆ ಕಂಡನು.

ಬೆಳೆಯೂ ಚೆನ್ನಾಗಿ ಬಂತು ಮತ್ತೆ ಇವನು ತುಂಬಾ ಶ್ರೀಮಂತನಾದನು ಎಲ್ಲರಿಗೂ ಬುದ್ಧಿ ಇದ್ದೇ ಇದೆ ಆದರೆ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ.  ನಾನು ಬುದ್ಧಿವಂತಿಕೆಯನ್ನು ಹೇಗೆ ಬಳಸಿಕೊಳ್ಳುತ್ತೇನೆಯೋ ಹಾಗೆಯೇ ನಾನು ಅಭಿವೃದ್ಧಿಯಾಗುತ್ತೇನೆ. ನಾನು ವಿಭಿನ್ನವಾಗಿ ಯೋಚಿಸಿ ಯಾವ ಸಾಧನೆ ಮಾಡಿದ್ದೇನೆ?

ಮಿತಿಯನ್ನು ದಾಟುವ ಹಾಗಿಲ್ಲ

ಯಾವುದೇ ಕೆಲಸ ಮಾಡಬೇಕಾದರೂ ಒಂದು ಇತಿ ಮಿತಿ ಅನ್ನೋದು ಇದ್ದೇ ಇರುತ್ತದೆ ಆದರೂ ಆ ಇತಿಮಿತಿಯನ್ನು ಮುರಿದು ಹಾಕಿ ಸಾಧನೆ ಮಾಡಿದವರು ಕೂಡ ಇದ್ದಾರೆ ವೈದ್ಯಕೀಯ ಶಾಸ್ತ್ರದ ಪ್ರಕಾರ ಒಂದು ಮೈಲಿಯನ್ನು 4ನಿಮಿಷದ ಒಳಗೆ ಓಡುವುದು ಅಸಾಧ್ಯ ಎಂದು ಹೇಳಿದ್ದರು.

 ಇದನ್ನು ಮೀರಿದರೆ ಮನುಷ್ಯನ ಮೇಲೆ ಒತ್ತಡ ಬೀಳುತ್ತದೆ ಇದರಿಂದಾಗಿ ಆರೋಗ್ಯ ಸ್ಥಿತಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು ಈ ಮಿತಿಯನ್ನು ದಾಟುವ ಹಾಗಿಲ್ಲ ಎಂದು ಓಟಗಾರರ ಕೋಚ್ ಗಳು ಈ ನಿಯಮವನ್ನು ಪಾಲಿಸುತ್ತಿದ್ದರು.

 ಆದರೆ ರೋಜರ್ ಬ್ಯಾರಿಸ್ಟರ್ ಈ ಮಿತಿಯನ್ನು ಮೀರಿ ಒಂದು ಮೈಲಿ ದೂರವನ್ನು 4ನಿಮಿಷದ ಒಳಗೆ ಓಡಿ ವಿಶ್ವದಾಖಲೆ ಮಾಡಿದರು

ನಂತರ ಪತ್ರಕರ್ತರ ಇವರನ್ನು ಬಂದು ಕೇಳಿದರು ವೇಗವಾಗಿ ಓಡಬಾರದು ಎನ್ನುವ ಮಿತಿಯನ್ನು ಇದ್ದರೂ ಕೂಡ ನೀವು ಹೇಗೆ ಓಡಿದ್ದೀರಿ ಎಂದು ಕೇಳಿದರು ಬ್ಯಾರಿಸ್ಟರ್ ಅವರು ಹೇಳಿದರು ಓಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಮನಸ್ಥಿತಿ ಅವ್ರಿಗೆ ಇರಬಹುದು.

 ನನ್ನ ಪ್ರಕಾರ ಇಲ್ಲ ಮನಸ್ಥಿತಿ ಹೇಗೆ ಇರುತ್ತೋ ಹಾಗೆ ಉದಾಹರಣೆಗೆ ನೋಡಿ ಎಷ್ಟೋ ಜನ ವಿಶೇಷ ಚೇತನರು ಅಂದರೆ ಕೈಯಿಲ್ಲ ಕಾಲುಗಳು ಇಲ್ಲ ಕಣ್ಣು ಇಲ್ಲ ಆದರೂ ಅವರೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ ಅದೇ ಇನ್ನೊಂದು ಕಡೆ ನೋಡಿದಾಗ ಗಟ್ಟಿ ಮುಟ್ಟಾಗಿದ್ದು ಕೂಡ ಅವರು ಭಿಕ್ಷೆ ಬೇಡುತ್ತಿದ್ದಾರೆ.

ನಾನು ಇಬ್ಬರಿಗೂ ಇದು ಸರಿ ಅದು ತಪ್ಪು ಎಂದು ಹೇಳಲಿಕ್ಕೆ ಸಾಧ್ಯವಿಲ್ಲ ಆದರೆ ಅವರ ಮನಸ್ಥಿತಿ ಹೇಗೆ ಇದೆಯೋ ಹಾಗೆ ಅವರ ಭವಿಷ್ಯವನ್ನು ಅವರು ಮಾತ್ರ ನಿರ್ಮಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ನಾನು ಮಿತಿಯನ್ನು ಮೀರಿ ನಾನು ಯಾವ ಸಾಧನೆ ಮಾಡಿದ್ದೇನೆ?

 

ಎಣ್ಣೆ ನೀರಿನ ಮೇಲೆ ತೇಲುತ್ತದೆ

ಒಬ್ಬ ಮನ್ಸೀಜ್ ಯುವಕ ಹಳ್ಳಿಯಲ್ಲಿ ಕಷ್ಟಪಟ್ಟು ದುಡಿಯುತ್ತಾನೆ ನಂತರ ನಾನು ಇನ್ನೂ ಹೆಚ್ಚು ಸಾಧನೆ ಮಾಡಬೇಕು ಎಂದು ಮಾರ್ಗದರ್ಶನಕ್ಕಾಗಿ ಬಾಬಾ ಅವರನ್ನು ಹುಡುಕಿಕೊಂಡು ಹೋಗುತ್ತಾನೆ.

 ಬಾಬಾ ಅವರು ಆಶ್ರಮದಲ್ಲಿ ಇರುತ್ತಾರೆ ಯುವಕ ನಾನು ಆಳವಾದ ಸಾಧನೆ ಮಾಡಬೇಕು ಎಂದು ಹೇಳುತ್ತಾನೆ ಅದಕ್ಕೆ ಬಾಬಾ ಅವರು ಅಡಿಗೆ ಮನೆಯಿಂದ ಎಣ್ಣೆ ಹಾಗೂ ನೀರನ್ನು ಸಮಪ್ರಮಾಣದಲ್ಲಿ ತಂದು ಯಾವುದೂ ತೂಕ ಇದೆ ಹೇಳು ಎಂದು ಕೇಳುತ್ತಾರೆ.

 ಯುವಕನು ಎಣ್ಣೆಯನ್ನು ಕೈಯಲ್ಲಿ ಹಿಡಿದು ಎಣ್ಣೆಯ ತೂಕ ಜಾಸ್ತಿ ಇದೆ ಎಂದು ಹೇಳುತ್ತಾನೆ ಆಗ ಬಾಬಾ ಅವರು ನೀರಿನ ಮೇಲೆ ಎಣ್ಣೆಯನ್ನು ಹಾಕುತ್ತಾರೆ ಎಣ್ಣೆ ನೀರಿನ ಮೇಲೆ ತೇಲುತ್ತದೆ ಇದರ ಅರ್ಥವೇನು? ಎಂದು ಕೇಳುತ್ತಾರೆ.

 ಯುವಕನಿಗೆ ಅರ್ಥವಾಗುವುದಿಲ್ಲ ಆಗ ಬಾಬಾ ಅವರು ವಿವರಿಸುತ್ತಾರೆ ಎಣ್ಣೆ ನಿನ್ನ ಪ್ರಕಾರ ತೂಕವಾಗಿ ತೂಕವಾಗಿ ಇರಬಹುದು ಆದರೂ ಎಣ್ಣೆ ಮೇಲೆ ತೇಲುತ್ತದೆ ಏಕೆಂದರೆ ನೀರಿಗಿಂತ ಎಣ್ಣೆ ತುಂಬಾ ಕಷ್ಟ ಪಟ್ಟಿದೆ. ಒಂದು ಬೀಜವಾಗಿ ಹೋಗಿ ಮಣ್ಣಿನಲ್ಲಿ ಇದ್ದು ನಂತರ ಗಿಡವಾಗಿ ಮರವಾಗಿ ನಂತರ ಬೀಜಗಳಾಗಿ ಆ ಬೀಜಗಳು ಬಿಸಿಲಿನಲ್ಲಿ ಒಣಗಿ ನಂತರ ಆ ಬೀಜಗಳಿಗೆ ಗಾಣದಲ್ಲಿ ಹಾಕಿದರಿಂದ ಎಣ್ಣೆ ಬರುತ್ತದೆ.

 ಹೆಚ್ಚು ಕಷ್ಟಪಟ್ಟಿದೆ ಆದುದರಿಂದ ಎಣ್ಣೆ ಮೇಲೆ ತೇಲುತ್ತದೆ ಎಂದು ಯುವಕನಿಗೆ ತಿಳಿಸುತ್ತಾರೆ ಸಾಧನೆ ಮಾಡಬೇಕು ಎನ್ನುವವರು ಕಷ್ಟಗಳು ನಷ್ಟಗಳು ಚಳಿ ಬಿಸಿಲು ಮಳೆ ಬಾಯಾರಿಕೆ ಹಸಿವು ನಿದ್ರೆ ಎಲ್ಲವೂ ಮೀರಿ ಮುಂದೆ ಸಾಗಬೇಕು ಆಗ ಮಾತ್ರ ಸಾಧನೆ ಸಾಧ್ಯ ಎಂದು ಹೇಳುತ್ತಾರೆ. ಆಗ ಯುವಕನಿಗೆ ಅರ್ಥವಾಗುತ್ತದೆ.

ಕೋಪ ಬಂದಾಗ ಏನಾಗುತ್ತದೆ?

ಒಂದು ಊರಿನಲ್ಲಿ ಒಬ್ಬ ಸಜ್ಜನ ಯಶಸ್ಕರ್ ಮಾಲೀಕ ಇದ್ದನು ಅವನಿಗೆ ಒಬ್ಬನೇ ಮಗ ರಣಂಜೈ ಕೋಪಿಷ್ಟ 20 ವರ್ಷದವನಾಗಿದ್ದನು ಮನೆಯಲ್ಲಿ ಚೆನ್ನಾಗಿ ಬೆಳೆಸಿದ್ದರಿಂದ ಯಾವುದಕ್ಕೂ ಕಿರಿಕಿರಿ ಮುಂಗೋಪಿಯಾಗಿರುತ್ತಿದ್ದನು ತಂದೆಯವರು ಯಾವುದೋ ಕೆಲಸಕ್ಕೆ ಊರಿಗೆ ಹೋಗಿದ್ದರು ಆದುದರಿಂದ ಈ ಯುವಕ ಏನೋ ಯೋಚಿಸಿಕೊಂಡು ಆಕಡೆ ಈಕಡೆ ಕೂಪದಿಂದ ಸುತ್ತಾಡುತ್ತಿದ್ದನು.

 ಸುಮ್ಮನೆ ಯಾರೋ ಒಬ್ಬರು ಕೆಲಸಗಾರರು ನಿಮ್ಮ ಹೆಂಡತಿಗೆ ಯಾರೋ ಹೊಡೆದಿದ್ದಾರೆ. ಎಂದು ಹೇಳಿದನು ಈ ಮಾತನ್ನು ಕೇಳಿದ ಯುವಕ ತಕ್ಷಣ ಮನೆಯಲ್ಲಿದ್ದ ಬಂದೂಕವನ್ನು ತೆಗೆದುಕೊಂಡು ಆ ಕೆಲಸಗಾರ ಹೇಳಿದ ಸ್ಥಳದಲ್ಲಿ ಹೋಗಿ ಹುಡುಕುತ್ತಿದ್ದನು ಆ ಕಡೆಯಿಂದ ವಯಸ್ಸಾದ ಹಿರಿಯರು ಬರುತ್ತಿದ್ದರು.

 ಇವನ ಚಲನ ವಲನವನ್ನು ಗುರುತಿಸಿ ಯಾರನ್ನೂ ಹುಡುಕುತ್ತಿದ್ದೀರಿ ಎಂದು ಕೇಳಿದರು ನನ್ನ ಹೆಂಡತಿಯನ್ನು ಯಾರೂ ಹೊಡೆದಿದ್ದಾರೆ ಎಂದು ಕೇಳಿದೆ ಎಂದು ಹೇಳಿದನು ಆಗ ಹಿರಿಯರು ಹೇಳಿದರು ನಾನು ನೋಡಿದ ಹಾಗೆ ನೀನು ಮದುವೆಯೇ ಆಗಿಲ್ಲವಲ್ಲ ಯಾವಾಗ ಮದುವೆಯಾಯಿತು ಎಂದು ಪ್ರಶ್ನಿಸಿದರು.

ಯುವಕನಿಗೆ ಅರಿವಾಯಿತು ನಾನು ಮದುವೆಯೇ ಆಗಿಲ್ಲವಲ್ಲ ಕೋಪ ಬಂದಾಗ ಏನಾಗುತ್ತದೆ? ನಮ್ಮ ಪ್ರಜ್ಞೆ ಕಳೆದುಕೊಳ್ಳುವುದು ಸಹಜ ಆದ್ದರಿಂದ ನಮ್ಮ ಕೋಪವನ್ನು ನಾವೇ ನಿಯಂತ್ರಿಸಿಕೊಳ್ಳೋಣ.

Leave a Comment