ವೀರಾಜಿತ್ ಮತ್ತು ಶೈಲ್ ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕಾಡಿನ ಹತ್ತಿರ ಪವಾಸ ಹೋಗುತ್ತಿರುತ್ತಾರೆ ಸ್ವಲ್ಪ ದಾರಿ ಸಾಗಿದ ನಂತರ ಒಂದು ಶಬ್ದ ಬರುತ್ತದೆ ಒಬ್ಬ ಸ್ನೇಹಿತ ನೋಡುತ್ತಾನೆ ಕರಡಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಇದನ್ನು ನೋಡಿ ಗಾಬರಿಯಾಗಿ ತನ್ನ ಆತ್ಮೀಯ ಮಿತ್ರನಿಗೂ ಹೇಳದೆ ತಾನು ಒಬ್ಬನೇ ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ.
ಸ್ನೇಹಿತ ಮರ ಏಕೆ ಹತ್ತಿದನು ಎಂದು ಹಿಂದೆ ತಿರುಗಿ ನೋಡಿದರೆ ಕರಡಿಯು ಬರುತ್ತಿರುತ್ತದೆ ಆಗ ನಿಂತಿರುವನು ಹಾಗೆ ನಿಧಾನವಾಗಿ ಮಲಗಿ ಸತ್ತಂತೆ ನಟನೆ ಮಾಡುತ್ತಾನೆ ಕರಡಿಯು ಬಂದು ಬದುಕಿದ್ದಾನೆ ಎಂದು ಕೈ ಕಾಲು ಮುಖ ಕಿವಿ ನೆಕ್ಕುತ್ತದೆ ಆದರೂ ಇವನು ಸತ್ತಂತೆಯೇ ಮಲಗಿರುತ್ತಾನೆ.
ಕರಡಿಗೆ ಮನುಷ್ಯ ಸತ್ತಿದ್ದಾನೆ ಎಂದು ತಿಳಿಯುತ್ತದೆ ನಂತರ ಕರಡಿಯು ಹೊರಟುಹೋಗುತ್ತದೆ ನಂತರ ಮರದ ಮೇಲೆ ಇದ್ದ ಸ್ನೇಹಿತ ನಿಧಾನವಾಗಿ ಕೆಳಗೆ ಇಳಿಯುತ್ತಾನೆ ಬಂದು ಕೇಳುತ್ತಾನೆ ನಿನ್ನ ಜೊತೆ ಕರಡಿ ಏನು ಮಾತನಾಡಿತು ಏನು ಹೇಳಿತು ಎಂದು ಕೇಳುತ್ತಾನೆ.
ಸ್ನೇಹಿತ ಹೇಳುತ್ತಾನೆ ಕರಡಿ ನನಗೆ ನೀನು ಯಾರನ್ನೂ ನಂಬಬೇಡ ಕೆಲವರು ಆತ್ಮೀಯ ಸ್ನೇಹಿತರು ಇರುತ್ತಾರೆ ಆದರೆ ಆಪತ್ತು ಬಂದಾಗ ಬಿಟ್ಟು ಹೋಗುತ್ತಾರೆ ಇನ್ನು ಮುಂದೆ ಎಚ್ಚರಿಕೆಯಾಗಿ ಇರು ಎಂದು ಹೇಳಿತು ಎಂದು ಹೇಳಿದನು ಆಗ ಮಿತ್ರನಿಗೆ ಅರ್ಥವಾಯ್ತು.
ಮಿತ್ರ ಕ್ಷಮೆ ಕೇಳಿದನು ಕೆಲವರು ಆತ್ಮೀಯ ಸ್ನೇಹಿತರು ಇದ್ದೇ ಇರುತ್ತಾರೆ ಆದರೆ ಅವರ ಮಿತ್ರತ್ವ ಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತಾರೋ ಇಲ್ಲವೋ ಎಂಬುದರ ಮೇಲೆ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಬೆಕ್ಕಿನ ನ್ಯಾಯ
ಕೋತಿ ಮತ್ತು ನಾಯಿ ಯಾವುದೋ ವಿಷಯದ ಬಗ್ಗೆ ಜಗಳವಾಡಿಕೊಂಡು ಬೆಕ್ಕಿನ ಹತ್ತಿರ ನ್ಯಾಯ ಕೇಳಲು ಬರುತ್ತವೆ ಮೊದಲಿಗೆ ನಾಯಿ ಹೇಳುತ್ತದೆ ನಾನು ಒಂದು ಕಡೆ ಇಟ್ಟ ವಸ್ತುಗಳನ್ನು ಕೋತಿ ಕಳ್ಳತನ ಮಾಡಿದೆ ಕೋತಿ ಹೇಳುತ್ತದೆ ನಾನು ಕಷ್ಟಪಟ್ಟು ವಸ್ತುವನ್ನು ಸಂಪಾದನೆ ಮಾಡಿದ್ದೇನೆ ನಾನು ಕಳ್ಳತನ ಮಾಡಿಲ್ಲ ಎಂದು ಸಾಬೀತುಪಡಿಸುತ್ತದೆ.
ಬೆಕ್ಕು ಒಬ್ಬೊಬ್ಬರಾಗಿ ಕರೆದು ಕೇಳುತ್ತದೆ ಕೋತಿ ಒಂದು ರೀತಿ ಹೇಳುತ್ತದೆ ನಾಯಿ ಒಂದು ರೀತಿ ಹೇಳುತ್ತದೆ ಎರಡನ್ನು ಕೇಳಿಸಿ ಕೊಂಡು ಬೆಕ್ಕಿಗೆ ತಲೆಕೆಟ್ಟು ಹೋಗುತ್ತದೆ ಇಬ್ಬರಲ್ಲಿ ಯಾರು ಸರಿ ಎಂದು ತೀರ್ಮಾನ ಮಾಡುವುದೇ ಕಷ್ಟವಾಗುತ್ತದೆ ಆಗ ಬೆಕ್ಕು ಇಬ್ಬರು ಕೂಡ ತಪ್ಪು ಮಾಡಿದ್ದಿರಾ ಹಾಗಾಗಿ ಇಬ್ಬರಿಗೂ ಶಿಕ್ಷೆ ಆಗಲೇಬೇಕು ಎಂದು ಇಬ್ಬರಿಗೂ ಶಿಕ್ಷೆ ನೀಡುತ್ತದೆ.
ಕೆಲವು ಸಾರಿ ಬೇರೆಯವರ ಮೇಲೆ ಆಪಾದನೆ ಹೇಳಲಿಕ್ಕೆ ಹೋದಾಗ ಕೆಲವೊಂದು ಸಾರಿ ಆ ಶಿಕ್ಷೆ ನಾವು ಅನುಭವಿಸಬೇಕಾದ ಸ್ಥಿತಿ ಬರಬಹುದು ಆದುದರಿಂದ ಎಚ್ಚರಿಕೆಯಾಗಿ ಇರೋಣ.
ದೇಶಕ್ಕಾಗಿ ಹೋರಾಟ
ತಾರಾಸು ಕನ್ನಡದ ಹೆಸರಾಂತ ಕಾದಂಬರಿಕಾರರು ಇವರು ಸ್ವಾತಂತ್ರ ಹೋರಾಟದಲ್ಲೂ ಮುಖ್ಯವಾಗಿ ಭಾಗವಹಿಸಿದ್ದರು ನಂತರ ಹಲವಾರು ಗೆಳೆಯರು ಸರ್ಕಾರದಲ್ಲಿ ಒಳ್ಳೆಯ ಹುದ್ದೆಗಳನ್ನು ಪಡೆದರು ಆದರೆ ತಾರಾಸು ಅವರು ಮಾತ್ರ ಜೀವನ ಪರ್ಯಂತ ಲೇಖಕರಾಗಿಯೇ ಉಳಿದರು.
ತಾರಾಸು ಅವರು ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದಾರೆ ಬಹಳಷ್ಟು ಕಾದಂಬರಿಗಳು ಹೆಸರುವಾಸಿಯಾಗಿವೆ ಆದರೆ ಸಾಕಷ್ಟು ಹಣ ಗಳಿಸಲಿಲ್ಲ ಅದಕ್ಕಾಗಿ ಸ್ನೇಹಿತರಲ್ಲಿ ಒಬ್ಬ ಸ್ನೇಹಿತ ಉನ್ನತ ಹುದ್ದೆಯಲ್ಲಿ ಇದ್ದರು ಪರಸು ಅವರ ಆಪ್ತಮಿತ್ರ ಸಚಿವರನ್ನು ಮಾತನಾಡಿಸಿ ತರಸು ಅವರ ಯೋಗ ಕ್ಷೇಮವನ್ನು ವಿಚಾರಿಸಿ ಮನೆಯ ವಿಷಯ ಎಲ್ಲವನ್ನೂ ಚರ್ಚಿಸಿ ನಂತರ ಅವರು ಹೇಳಿದರು.
ನೀವು ನಿಮ್ಮ ದಿನನಿತ್ಯದ ಖರ್ಚಿಗೆ ಸಹಾಯವಾಗುತ್ತದೆ ಏಕೆ ನೀವು ಸ್ವಲ್ಪ ಜಮೀನನ್ನು ಖರೀದಿಸಬಾರದು ಎಂದು ಹೇಳಿದರು ಆಗ ತರಾಸು ಅವರು ಹೇಳಿದರು ನನ್ನ ಹತ್ತಿರ ಅಷ್ಟು ಹಣ ಎಲ್ಲಿಂದ ಬರಬೇಕು ಎಂದು ಕೇಳಿದರು.
ತನ್ನ ಸ್ನೇಹಿತ ಸಚಿವರು ನೀವು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಂದು ಅರ್ಜಿ ಬರೆದು ಸರ್ಕಾರಕ್ಕೆ ಸಲ್ಲಿಸಿದರೆ ಸಾಕು ನಿಮಗೆ ಜಮೀನು ಸಿಗುತ್ತದೆ ಎಂದು ತಿಳಿಸಿ ಒಂದು ಅರ್ಜಿಯನ್ನು ತಂದು ಕೊಟ್ಟರು ಮನೆಗೆ ಹೋಗಿ ತಮ್ಮ ಪತ್ನಿಗೆ ಹೇಳಿದರು.
ತಾರಾಸು ಅವರ ಪತ್ನಿ ಕೇಳಿದರು ನೀವು ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಟ ಮಾಡಿದ್ದು ದೇಶಕ್ಕಾಗಿಯೋ ಅಥವಾ ಜಮೀನು ಪಡೆಯುವುದಕ್ಕಾಗಿಯೂ ಎಂದು ಕೇಳಿದರು ತರಾಸು ದೇಶಕ್ಕಾಗಿ ಹೋರಾಟ ಮಾಡಿದ್ದು ಎಂದು ಉತ್ತರಿಸಿದಾಗ ಅರ್ಜಿಯನ್ನು ಹರಿದು ಬಿಸಾಕಿದರು ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ಹಾಗೆ ಬದುಕು ಸಾಗಿಸಿದರಂತೆ.
ನಾವು ಹುಡುಕಿದರೆ ಮಾತ್ರ ಸಿಗುತ್ತದೆ
ಒಬ್ಬ ಸುಜ್ಞಾನ್ ಯುವಕ ಬಹಳಷ್ಟು ದಿನಗಳ ನಂತರ ಜಾತ್ರೆಗೆ ಹೋಗುತ್ತಾನೆ ನಂತರ ವಿಶ್ರಾಂತಿ ಪಡೆಯಲು ಒಂದು ಕಡೆ ಹೋಗಿ ಕುಳಿತುಕೊಂಡನು ಅಲ್ಲಿ ಒಬ್ಬರು ವಯಸ್ಸಾದ ಹಿರಣ್ಣಯ್ ವ್ಯಕ್ತಿ ಕುಳಿತಿರುತ್ತಾರೆ ಆಗ ಈ ಯುವಕನು ವಯಸ್ಸಾದವರ ಜೊತೆ ಮಾತಾಡುತ್ತಾನೆ ನಂತರ ವಯಸ್ಸಾದವರಿಗೆ ಹೇಳುತ್ತಾನೆ.
ಏನೇ ಹೇಳಿ ದೇವರು ಮಾತ್ರ ಇಲ್ಲ ಎಂದು ಹೇಳುತ್ತಾನೆ ನೀವು ಹೇಗೆ ಖಚಿತವಾಗಿ ಹೇಳುತ್ತೀರಿ ಎಂದು ಹಿರಿಯರು ಹೇಳುತ್ತಾರೆ ಅದಕ್ಕೆ ಸಾಕ್ಷಿ ಇದೆಯೇ ಎಂದು ಕೇಳುತ್ತಾರೆ ನಿಜವಾಗಿ ದೇವರು ಇದ್ದಿದ್ದರೆ ದುಃಖಗಳು ಇರಬಾರದು ರೋಗಿಗಳು ಏಕೆ ಇದ್ದಾರೆ ಅನಾಥರು ಏಕೆ ಆಗಬೇಕು ನೋವು ಸಾವುಗಳು ಕಷ್ಟಗಳು ಏಕೆ ಬರುತ್ತವೆ.
ದೇವರ ಪ್ರೀತಿ ಅನ್ನುವುದು ಇದ್ದಿದ್ದರೆ ಇಂತಹ ಸಮಸ್ಯೆಗಳು ಇರುತ್ತಿರಲಿಲ್ಲ ಆದುದರಿಂದ ನಾನು ದೇವರು ಇಲ್ಲ ಎಂದು ಖಂಡಿತವಾಗಿ ಹೇಳುತ್ತೇನೆ ಎಂದು ಹೇಳುತ್ತಾನೆ ಹಿರಿಯರಾದವರು ಕೇಳಿದ ನಂತರ ಹೇಗೆ ಇವನನ್ನು ಹೇಳಬೇಕು ಎಂದು ಆಲೋಚನೆ ಮಾಡುತ್ತಿರುತ್ತಾರೆ.
ಅಷ್ಟರಲ್ಲಿ ಒಬ್ಬ ವ್ಯಕ್ತಿ ಹರಿದ ಬಟ್ಟೆಗಳನ್ನು ಧರಿಸಿದನು ತಲೆ ಕೆದರಿಕೊಂಡು ತಲೆ ಬಾಚಿರುವುದಿಲ್ಲ ತಲೆ ಕೂದಲುಗಳು ಮುಳ್ಳಿನಂತೆ ಕಾಣುತ್ತಿರುತ್ತದೆ. ಕೂದಲು ತುಂಬಾ ಉದ್ದವಾಗಿ ಇರುತ್ತವೆ ತಲೆ ಕೂಡ ಬಾಚಿರುವುದಿಲ್ಲ ಗಡ್ಡವೂ ಕೂಡ ತುಂಬಾ ಆಲದ ಮರದ ಬೇಲಿಗಳಂತೆ ಬೆಳೆದು ವಿಚಿತ್ರವಾಗಿ ಒಬ್ಬ ಭಿಕ್ಷೆ ಬೇಡುವನಂತೆ ಕಾಣುತ್ತಿರುತ್ತಾನೆ.
ಈ ವ್ಯಕ್ತಿಯನ್ನು ನೋಡಿದ ತಕ್ಷಣ ಇವರಿಗೆ ಒಂದು ಉಪಾಯ ಹೊಳೆಯುತ್ತದೆ ಆಗ ಆ ಯುವಕನನ್ನು ಹಿರಿಯರು ಕ್ಷೌರಿಕ ಇಲ್ಲ ಎಂದು ನಾನು ಹೇಳುತ್ತೇನೆ ಆಗ ಆ ಯುವಕ ಏಕೆ ಇಲ್ಲ ಕ್ಷೌರಿಕ ಇದ್ದೇ ಇದಾನೆ ಬೇಕಾದರೆ ನಾನು ನಿಮಗೆ ಸಾಕ್ಷಿ ಸಮೇತ ತೋರಿಸುತ್ತೇನೆ ಎಂದು ಮುಂದೆ ಇರುವ ಕ್ಷೌರಿಕನ ಒಂದು ಅಂಗಡಿ ತೋರಿಸುತ್ತಾನೆ.
ಹಿರಿಯರು ಆ ಭಿಕ್ಷುಕ ಕ್ಷೌರಿಕ ಅಂಗಡಿ ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದು ತಿಳಿದಿದ್ದಾನೆ ಭಿಕ್ಷುಕನು ಕ್ಷೌರಿಕನ ಅಂಗಡಿಗೆ ಹೋದರೆ ಅವನಿಗೂ ಕ್ಷೌರ ಮಾಡಿ ಅವನು ನೀಟಾಗಿ ಕಾಣುತ್ತಾನೆ ಅವನು ಹೋಗಲಿಲ್ಲ ವೆಂದರೆ ಅವನಿಗೆ ಅದೇ ರೀತಿ ಭಿಕ್ಷುಕನಂತೆಯೇ ಇರುತ್ತಾನೆ ಎಂದು ಹೇಳಿದರು.
ಹಾಗೆಯೇ ನಾವು ಹುಡುಕಿದರೆ ಸಿಗುತ್ತದೆ ಹುಡುಕದೆಯೇ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹಿರಿಯರು ಉದಾಹರಣೆ ಸಮೇತ ತಿಳಿಸುತ್ತಾರೆ.
ಶಾಂತಿಯಿಂದ ಇರಬಹುದು
ಮುಸ್ಸಂಜೆಯ ವಾತಾವರಣವಿತ್ತು ಒಬ್ಬ ಸವರತ್ ಶ್ರೀಮಂತ ವಾಯು ವಿಹಾರಕ್ಕೆ ಬಂದು ನದಿಯ ಒಂದು ದಡದಲ್ಲಿ ಕುಳಿತು ಧ್ಯಾನವನ್ನು ಮಾಡುತ್ತಿದ್ದನು ನಂತರ ಒಬ್ಬ ವಯಸ್ಸಾದ ಬಾಬಾ ಅವರು ಬಂದರು ನದಿಯಲ್ಲಿ ಇಳಿದರು ಸ್ನಾನ ಮಾಡಿದರು ಬಟ್ಟೆಯನ್ನು ಒಗೆಯುತ್ತಿದ್ದರು.
ಬಟ್ಟೆ ಒಗೆಯುತ್ತಿದ್ದಾಗ ಸ್ವಲ್ಪ ನೀರು ಆ ಶ್ರೀಮಂತನ ಮೇಲೇ ಬಿತ್ತು ಆಗ ಶ್ರೀಮಂತನು ವಯಸ್ಸಾದವರನ್ನು ನಿಮಗೆ ಕಣ್ಣು ಕಾಣುವುದಿಲ್ಲವೇ ನಾನು ಧ್ಯಾನ ಮಾಡುತ್ತಿದ್ದೇನೆ ಎಂದು ಸಿಟ್ಟಿನಿಂದ ಹೇಳಿದನು ಆಗ ವಯಸ್ಸಾದ ಬಾಬಾ ಹೇಳಿದರು ನೀವು ಧ್ಯಾನ ಧ್ಯಾನ ಮಾಡುತ್ತಿದ್ದೀರೋ ಅಥವಾ ಸಂತೆಯಲ್ಲಿ ಯಾವ ಬಟ್ಟೆ ಖರೀದಿ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದು ಯೋಚಿಸುತ್ತಿದ್ದೀರಾ ಎಂದು ಹೇಳಿದರು.
ಈ ಮಾತನ್ನು ಕೇಳಿದ ತಕ್ಷಣ ಶ್ರೀಮಂತನ ಆಶ್ಚರ್ಯಚಕಿತನಾದ ಅವರು ಹೇಳಿದ್ದು ಸರಿಯಾಗಿಯೇ ಇತ್ತು ಆಗ ಶ್ರೀಮಂತನು ನನ್ನ ಮನಸ್ಸಿನಲ್ಲಿ ಇರುವುದನ್ನು ಹೇಳುವವರು ಸಾಮಾನ್ಯ ವ್ಯಕ್ತಿಯಲ್ಲ ಎಂದು ಅರಿತುಕೊಂಡನು ನಂತರ ಬಾಬಾ ಅವರಿಗೆ ನಮಸ್ಕಾರ ಮಾಡಿದನು ನಂತರ ಬಾಬಾ ಅವರು ಹೇಳಿದರು.
ಕೆಲವರಿಗೆ ಧ್ಯಾನ, ಜಪ, ಪ್ರಾರ್ಥನೆ ಮಾಡುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಅದರ ಮೇಲೆ ಮಾತ್ರ ಗಮನ ಇರಬೇಕು ಇಲ್ಲದಿದ್ದರೆ ಏನೇ ಮಾಡಿದರೂ ಪ್ರಯೋಜನವಿಲ್ಲ.
ನಮ್ಮ ಮನಸ್ಸಿನ ಉದ್ವೇಗಗಳನ್ನು ಕಡಿಮೆ ಮಾಡಿಕೊಂಡಾಗ ಮಾತ್ರ ಶಾಂತಿ ದೊರೆಯುತ್ತದೆ ಮೊದಲು ಮನಸ್ಸಿಗೆ ಶಾಂತಿ ಬೇಕು ಮನಸ್ಸಿನಲ್ಲಿ ಸಾತ್ವಿಕ ವಿಚಾರಗಳನ್ನು ನೆಲೆಸಿದರೆ ಮಾಡಿದರೆ ಮಾತ್ರ ಶಾಂತಿಯಿಂದ ಇರಬಹುದು ಇದಕ್ಕಾಗಿ ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಡಬೇಕು ಎಂದು ಹೇಳಿದರು ಆಗ ಶ್ರೀಮಂತನು ಅರ್ಥಮಾಡಿಕೊಂಡನು.