ನನ್ನನ್ನು ತಿರಸ್ಕರಿಸುತ್ತಾರೆ

ಹಲವಾರು ವರ್ಷಗಳ ಹಿಂದೆ ಒಬ್ಬ ಕಪೀಶ್ ವ್ಯಕ್ತಿಯನ್ನು ಸೆರೆ ಹಿಡಿದು ರಾಜನ ಮುಂದೆ ನಿಲ್ಲಿಸುತ್ತಾರೆ ಈ ವ್ಯಕ್ತಿಯನ್ನು ನೋಡಿದ ರಾಜ ಕೇಳುತ್ತಾನೆ ನನ್ನ ಸಿಪಾಯಿಗಳಿಗೆ ಕೊಂದು ಹಾಕಿದ್ದೀಯಾ ಲೂಟಿ ಮಾಡಿದ್ದೀಯಾ ಎಷ್ಟು ಧೈರ್ಯ ನಿನಗೆ ಇದಕ್ಕೆ ಯಾವ ಶಿಕ್ಷೆ ಇದೆ ಎಂದು ನಿನಗೆ ಗೊತ್ತಿದೆಯೇ ಎಂದು ಕೇಳುತ್ತಾನೆ.

 ಆಗ ಬಂಧಿಯಾಗಿದ್ದ ವ್ಯಕ್ತಿ ಹೇಳುತ್ತಾನೆ ನನಗೂ ನಿಮಗೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲ ನನ್ನ ಬಳಿ ಚಿಕ್ಕ ಒಂದು ಮನೆ ಇದೆ ಅದರಲ್ಲಿ ಚಿನ್ನದ ಆಭರಣಗಳು ವಜ್ರ ವೈಡೂರ್ಯಗಳ ಇದೆ ಇದಕ್ಕೆ ಅಡ್ಡ ಬಂದವರನ್ನು ನಿರ್ಧಾಕ್ಷಿಣ್ಯವಾಗಿ ಕೊಂದು ಹಾಕಿದ್ದೇನೆ ಎಂದು ಧೈರ್ಯದಿಂದ ಹೇಳಿದನು.

 ನಿಮ್ಮ ಬಳಿ ಅರಮನೆ ಇದೆ ನೀವು ಹಲವಾರು ಹಳ್ಳಿಗಳನ್ನು ಊರುಗಳನ್ನು ಕಳ್ಳತನ ಮಾಡಿದ್ದೀರಿ ನೀವು ಲೆಕ್ಕ ಇಲ್ಲದಷ್ಟು ವ್ಯಕ್ತಿಗಳನ್ನು ಸಾಯಿಸಿದ್ದೀರಿ ನನ್ನ ಕೆಲಸ ನಿಮ್ಮ ಕೆಲಸ ಎರಡೂ ಒಂದೇ ಆದರೆ ನಾನು ಚಿಕ್ಕ ಕಳ್ಳ ಅದಕ್ಕೆ ನನ್ನನ್ನು ತಿರಸ್ಕರಿಸುತ್ತಾರೆ ನೀವು ರಾಜರು ಎಂದು ನಿಮ್ಮನ್ನು ಪುರಸ್ಕರಿಸುತ್ತಾರೆ ಎಂದು ಹೇಳಿದನು.

 ಇವನು ಹೇಳುತ್ತಿರುವ ಮಾತಿನಲ್ಲಿ ನ್ಯಾಯವಿದೆ ಅನಿಸಿತು ನಂತರ ಅವನನ್ನು ರಾಜ ಕ್ಷಮಿಸಿದ ನಂತೆ ಈಗಲೂ ಕೂಡ ಅದೇ ರೀತಿ ನಡೆಯುತ್ತಿದೆ ಚಿಕ್ಕದಾಗಿ ಏನೇ ಕಳ್ಳತನ ಮಾಡಿದರು ಅವರು ಪಡಬಾರದ ಯಾತನೆ ಅನುಭವಿಸುತ್ತಾರೆ ಅದೇ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಿದರೆ ಅವರು ನಿಶ್ಚಿಂತೆಯಾಗಿ ಇರುತ್ತಾರೆ.

ನನ್ನನ್ನು ಬಯ್ಯುತ್ತಿದ್ದಾರೆ

ಹಲವಾರು ವರ್ಷಗಳ ಹಿಂದೆ ಯಾರ ಮನೆಯಲ್ಲಿ ಟಿವಿ ಇದೆ ಎಂಬುದು ಹೊರಗೆ ನೋಡಿದರೆ ತಿಳಿಯುತ್ತಿತ್ತು ಏಕೆಂದರೆ ಯಾರ ಮನೆಯಲ್ಲಿ ಟಿವಿ ಇದೆಯೋ ಅವರ ಮನೆಯ ಮೇಲೆ ಒಂದು ಆಂಟೆನಾ ಇದ್ದೇ ಇರುತ್ತಿತ್ತು ಅದರಲ್ಲಿ ಎರಡು ರೀತಿಯ ಆಂಟೆನಾಗಳು ಇರುತ್ತಿತ್ತು.

 ಒಂದು ಚಿಕ್ಕ ಅಂಟೆನಾ ಇನ್ನೊಂದು ಲಂಬವಾದ ಆಂಟೆನಾ ಅಲುಮಿನಿಯಂ ನಲ್ಲಿ ಇರುತ್ತಿತ್ತು ಕೆಲವು ಸಾರಿ ಜೋರಾಗಿ ಮಳೆ ಬಂದಾಗ ಅಥವಾ ಗಾಳಿ ಬಂದಾಗ ಆಂಟೆನಾ ಗಾಳಿಗೆ ತಿರುಗಿ ಬಿಡುತ್ತಿತ್ತು ಆಗ ಮತ್ತೆ ಆಂಟೆನಾ ಸರಿ ಮಾಡಿದಾಗ ಚಿತ್ರ ಚೆನ್ನಾಗಿ ಮೂಡಿ ಬರುತ್ತಿತ್ತು.

ಮೊದಲ ಸಾರಿ ಜೋಡಿಸಬೇಕಾದರೆ ಅದರದೇ ಆದ ಒಂದು ಪ್ರಕಾರದಲ್ಲಿ ಜೋಡಿಸಬೇಕು ಇಲ್ಲದಿದ್ದರೆ ಟಿವಿಯಲ್ಲಿ ದೃಶ್ಯ ಕಾಣುತ್ತಿರಲಿಲ್ಲ ಆಗ ಟಿವಿ ತಂತ್ರಜ್ಞರಿಗೆ ತೋರಿಸಿದಾಗ ಅವರು ಕೆಲವೇ ಸಮಯದಲ್ಲಿ ಸರಿಯಾಗಿ ಜೋಡಿಸಿ ಹೋಗುತ್ತಿದ್ದರು ಅದೇ ಕೆಲಸ ಬೇರೆಯವರು ಮಾಡಿದರೆ ಆಗುತ್ತಿರಲಿಲ್ಲ.

  ಟಿವಿ ತಂತ್ರಜ್ಞರಿಗೆ ಹೆಚ್ಚು ಕೆಲಸ ಇತ್ತು ಅವರ ಮನೆಯಲ್ಲಿಯೂ ಒಂದು ಟಿವಿ ಇತ್ತು ಆಂಟೆನಾ ಇತ್ತು ಅವರ ಪಕ್ಕದ ಮನೆಗೆ ಇನ್ನೊಬ್ಬ ಇಂಜಿನಿಯರ್ ಬಾಡಿಗೆಗೆ ಬಂದನು ಇಂಜಿನಿಯರ್ ಟಿವಿ ತಂತ್ರಜ್ಞರಿಗೆ ನಮ್ಮ ಮನೆಯಲ್ಲೂ ಆಂಟೆನಾ ಜೋಡಣೆ ಮಾಡಿ ಎಂದು ಹೇಳಿದನು ಟಿವಿ ತಂತ್ರಜ್ಞರು ನನಗೆ ಸ್ವಲ್ಪ ಕೆಲಸವಿದೆ ಎರಡು ದಿನ ಬಿಟ್ಟು ಮಾಡುತ್ತೇನೆ ಎಂದು ಹೇಳಿದರು.

ಇಂಜಿನಿಯರ್ ನಾನು ಏನು ಕಡಿಮೆಯೇ ನಾನೇ ಏಕೆ ಮಾಡಬಾರದು ಎಂದು ಚಿಂತನೆ ಮಾಡಿದನು ನಂತರ ಮನೆಯ ಮೇಲೆ ಹತ್ತಿದನು ಅವರ ಮನೆಯ ಮೇಲೆ ಆಂಟೆನಾ ಇದೆಯಲ್ಲ ಅದೇ ರೀತಿ ಇವನೂ ಕೂಡ ಜೋಡಿಸಿದನು ನಂತರ ಅವರ ಆಂಟೆನಾ ದಲ್ಲಿ ಒಂದು ಕಡ್ಡಿಯೂ ಮುರಿದಿತ್ತು.

ಇಂಜಿನಿಯರ್ ಆ ಕಡ್ಡಿಯನ್ನು ಮುರಿದು ಜೋಡಿಸಿದನು ನಂತರ ಟಿವಿ ಆನ್ ಮಾಡಿದಾಗ ದೃಶ್ಯ ಬರಲಿಲ್ಲ ಅದಕ್ಕಾಗಿ ಏನೋನೋ ಕಸರತ್ತುಗಳು ಮಾಡಿದನು ಆದರೂ ದೃಶ್ಯ ಬರಲಿಲ್ಲ ನಂತರ ತಂತ್ರಜ್ಞರಿಗೆ ಹೇಳಿದನು ಆಗ ತಂತ್ರಜ್ಞರು ಆಂಟೆನಾ ನೋಡಿ ನೀವು ಏಕೆ ಈ ಕಡ್ಡಿಯನ್ನು ಮುರಿದಿದ್ದೀರಿ ಎಂದು ಕೇಳಿದರು.

 ನಿಮ್ಮ ಆಂಟೆನಾ ನೋಡಿದೆ ಅದೇ ರೀತಿ ನಾನು ಜೋಡಿಸಿದೆ ಆ ಕಡ್ಡಿಯನ್ನು ನಾನು ಮುರಿದೆ ಎಂದು ಪ್ರಾಮಾಣಿಕವಾಗಿ ಹೇಳಿದನು ಆಗ ತಂತ್ರಜ್ಞರು ಹೇಳಿದರು ನಮ್ಮ ಮನೆಯಲ್ಲಿ ಆಂಟೆನ ಮುರಿದು ಹಲವಾರು ದಿನಗಳಾಗಿದೆ ಮನೆಯಲ್ಲಿ ದಿನನಿತ್ಯವೂ ನನ್ನನ್ನು ಬೈಯುತ್ತಿದ್ದಾರೆ ಸರಿ ಮಾಡಲು ನನಗೆ ಸಮಯವಿಲ್ಲ ಅದೇ ಮುಖ್ಯ ಕಡ್ಡಿ ಎಂದು ಹೇಳಿದರು.

 ಮತ್ತೆ ಹೊಸ ಕಡ್ಡಿಯನ್ನು ಖರೀದಿಸಿ  ಜೋಡಿಸಿದರು ನಂತರ ಟಿವಿಯಲ್ಲಿ ದೃಶ್ಯ ಮೂಡಿಬಂತು ಸರಿಯಾಗಿ ಮಾಡುತ್ತಿದ್ದಾರೆಯೇ ಇಲ್ಲವೇ ಎಂದು ಅರಿತು ಅವರ ಅನುಕರಣೆ ಮಾಡುವುದು ಒಳ್ಳೆಯದು.

  ಈಗಲೂ ಕೂಡ ಅಷ್ಟೆ ಸೆಟಪ್ ಬಾಕ್ಸ್ ಅನ್ನು ಫಿಕ್ಸ್ ಮಾಡಲು ಬಂದವರು ಕೆಲವೇ ಕ್ಷಣಗಳಲ್ಲಿ ಜೋಡಿಸಿ ಹೋಗುತ್ತಾರೆ. ಅನುಭವ ಇದ್ದರೆ ಮಾಡುವುದು ಒಳ್ಳೆಯದು ಅನುಭವ ಇಲ್ಲದಿದ್ದರೆ ಪರಿಣಿತಿ ಪಡೆದವರಿಂದ ಮಾಡಿಸುವುದು ಉತ್ತಮ. ಅನುಕರಣೆ ಮಾಡಿ ಏನಾದರೂ ನಷ್ಟ ಮಾಡಿಕೊಂಡಿದ್ದೇನೆಯೇ ಅಥವಾ ಸಮಯ ವ್ಯರ್ಥಮಾಡಿಕೊಂಡಿದ್ದೇನೆಯೇ?

ತಳಮಳ ಉಂಟಾಯಿತು

ಒಂದು ಶಾಲೆಯಲ್ಲಿ ತರಬೇತಿ ನೀಡಲು ಪ್ರಜ್ಞಾನ್ ಒಂದು ಚಟುವಟಿಕೆಗಾಗಿ ಶಾಲೆಯ 4 ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಯಿತು ಶಿಕ್ಷಕರಿಗೆ ಆಟದ ಬಗ್ಗೆ ಏನು ತಿಳಿದರಬಾರದು ಆಗಲೇ ಈ ಆಟ ಆಡಿದರೆ ಸರಿ ಎಂದು ಹೇಳಿದರು ಶಿಕ್ಷಕರು ಎಂದಿನಂತೆ ಶಿಸ್ತಾಗಿ ಒಳ್ಳೆಯ ಬಟ್ಟೆ ಹಾಕಿಕೊಂಡು ಶಾಲೆಗೆ ಬಂದರು.

 ಮೊದಲನೇ ವಿದ್ಯಾರ್ಥಿ ಗುಡ್ ಮಾರ್ನಿಂಗ್ ಸರ್ ಎಂದು ಹೇಳಿದ ನಂತರ ಸರ್ ನೀವು ಇವತ್ತು ನಿಮ್ಮ ಮುಖ ಇಳಿದಿದೆ ನಿಮಗೇನಾದ್ರೂ ಹೊಟ್ಟೆನೋವು ಇದೆಯೇ ಎಂದು ಕೇಳಿದನು ಅದಕ್ಕೆ ಶಿಕ್ಷಕರು ಇಲ್ಲ ನನಗೇನು ಆಗಿಲ್ಲ ನಾನು ಚೆನ್ನಾಗಿದ್ದೇನೆ ಎಂದು ಹೇಳಿ ಮುಂದೆ ಹೋದರು.

ಸ್ವಲ್ಪ ದೂರ ಹೋದ ಎರಡನೇ ವಿದ್ಯಾರ್ಥಿಯು ಗುಡ್ ಮಾರ್ನಿಂಗ್ ಸರ್ ಎಂದು ಹೇಳಿ ಇವತ್ತು ನೀವು ಸುಸ್ತಾಗಿ ಇದ್ದೀರಾ ಎಂದು ಕಾಣಿಸುತ್ತಿದೆ ನಿಮಗೆ ಹೊಟ್ಟೆ ತಳಮಳವೇ ಎಂದು ಕೇಳಿದನು ಶಿಕ್ಷಕರಿಗೆ ಸ್ವಲ್ಪ ತಳಮಳ ಉಂಟಾಯಿತು.

 ನನ್ನ ಹೊಟ್ಟೆ ಚೆನ್ನಾಗಿದೆ ಎಂದು ಹೋಗಿ ಕೊಠಡಿಯಲ್ಲಿ ಕುಳಿತರು ನಂತರ ಮೂರನೆಯ ವಿದ್ಯಾರ್ಥಿ ಆ ಕೊಠಡಿಗೆ ಹೋದನು ಗುಡ್ ಮಾರ್ನಿಂಗ್ ಸರ್ ಎಂದು ಹೇಳಿ ಸರ್ ಏಕೋ ಏನೋ ಇವತ್ತು ನಿಮ್ಮ ಮುಖ  ಬಾಡಿಹೋಗಿದೆ ಕಣ್ಣುಗಳು ಮಂಜಾಗಿವೆ ಹೊಟ್ಟೆಯಲ್ಲಿ ಏನಾದರೂ ತಳಮಳ ಇರಬೇಕು ಎಂದನು.

 ಶಿಕ್ಷಕರು ಇಲ್ಲ ಎಂದು ಹೇಳಿ ಕಳಿಸಿದರು ಆಗ ಶಿಕ್ಷಕರಿಗೆ ಸ್ವಲ್ಪ ಅನುಮಾನ ಬಂತು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡರೂ ಆಗಲೇ ಸ್ವಲ್ಪ ಸುಸ್ತಾದಂತೆ ಅನಿಸುತ್ತಿತ್ತು. ಕೊಠಡಿಯಿಂದ ಹೊರಗೆ ಹೋಗುತ್ತಿದ್ದಾಗ ಇನ್ನೊಂದು ವಿದ್ಯಾರ್ಥಿ ಗುಡ್ ಮಾರ್ನಿಂಗ್ ಸರ್ ಎಂದು ಹೇಳಿ ಸರ್ ಏಕೋ ಏನೋ ಇವತ್ತು ನೀವು ತುಂಬಾ ಸುಸ್ತಾದಂತೆ ಕಾಣಿಸುತ್ತಿದ್ದೀರಿ.

 ಮುಖದ ಮೇಲೆ ಕಳೆಯ ಇಲ್ಲ ನೆನ್ನೆ ಎಲ್ಲಾ ಜಾಗರಣೆ ಮಾಡಿರಬಹುದು ಇಂದು ಉಪವಾಸ ಇದ್ದೀರಾ ಏಕೆಂದರೆ ನಿಮ್ಮ ಮುಖದ ಭಾವನೆ ಹೇಳುತ್ತಿದೆ ಹೊಟ್ಟೆಯಲ್ಲಿ ತಳಮಳವಾದರೆ ಹೀಗೆ ಆಗುತ್ತೆ ಸರ್ ನಿಮಗೆ ಆಗಲಿಲ್ಲವೆಂದರೆ ಇವತ್ತು ತರಗತಿಗೆ ಬರಬೇಡಿ ಇನ್ನೂ ನಿಮಗೆ ಕಷ್ಟವಾಗುತ್ತದೆ ಎಂದನು.

 ಆಗ ಶಿಕ್ಷಕರಿಗೆ ಸಂಪೂರ್ಣವಾಗಿ ಹೇಳಿದ್ದೆಲ್ಲವೂ ದೇಹಸ್ಥಿತಿಯಲ್ಲಿ ಕಾಣತೊಡಗಿತು ಅದಕ್ಕೆ ಶಿಕ್ಷಕರು ಶಾಲೆಯ ಮುಖ್ಯೋಪಾಧ್ಯಾಯರ ಬಳಿಗೆ ಹೋದರು ನನಗೆ ಇವತ್ತು ಆರೋಗ್ಯ ಸರಿ ಇಲ್ಲ ಆದುದರಿಂದ ನಾನು ಇವತ್ತು ರಜೆ ಹಾಕುತ್ತೇನೆ ಎಂದು ಹೊರಡಲು ಸಿದ್ಧವಾದರು ಇದನ್ನೆಲ್ಲವು ತರಬೇತಿ ಶಿಬಿರದ ಮುಖ್ಯಸ್ಥರು ನೋಡುತ್ತಿದ್ದರು.

  ನಂತರ ಶಿಕ್ಷಕರನ್ನು ತಾವು ನಮ್ಮ ತರಗತಿಗೆ ಬರಬೇಕು ಎಂದು ಬೇಡಿಕೊಂಡರು ಆಗ ಶಿಕ್ಷಕರು ಮನಸ್ಸಿಲ್ಲದೆ ಒಪ್ಪಿ ಬಂದರು ನಿಮಗೆ ಏನಾಯಿತು ಎಂದು ಕೇಳಿದಾಗ ಅವರು ನಾಲ್ಕು ವಿದ್ಯಾರ್ಥಿಗಳು ಹೇಳಿದ್ದನ್ನು ವಿವರಿಸಿದರು.

 ಶಿಕ್ಷಕರು ನಿಜವಾಗಿ ಆರೋಗ್ಯ ಸರಿ ಇಲ್ಲದೆ ಬಳಲುತ್ತಿರುವುದನ್ನು ಹೇಳಿದರು ಆಗ ಶಿಬಿರದ ಮುಖ್ಯಸ್ಥರು ಚಟುವಟಿಕೆಯ ಬಗ್ಗೆ ವಿವರಿಸಿದರು ನಂತರ ಶಿಕ್ಷಕರಿಗೆ ಕ್ಷಮೆ ಕೇಳಿದರು.

ಶಿಕ್ಷಕರು ಕೂಡ ಆ ಶಿಬಿರದಲ್ಲಿ ಪಾಲ್ಗೊಂಡು ಸಂತಸಪಟ್ಟರು. ನಮ್ಮ ಮನಸ್ಸಿಗೆ ಏನು ಹಾಕುತ್ತೇವೆಯೋ ಅದೇ ಬರುತ್ತದೆ ಆದುದರಿಂದ ನಕರಾತ್ಮಕ ಅಥವಾ ಸಕಾರಾತ್ಮಕ ಏನು ಯೋಚಿಸುತ್ತೇವೆ ಎನ್ನುವುದೇ ಮುಖ್ಯ ಆದುದರಿಂದ ನಾವು ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸೋಣ ಇತರರಲ್ಲಿ ಹೊಸ ಚೈತನ್ಯ ಉತ್ಸಾಹ ಅರಳಿಸೋಣ.

ಅದೇ ಪ್ರತ್ಯಕ್ಷವಾಗುತ್ತದೆ

ಬಹಳಷ್ಟು ವರ್ಷಗಳ ಹಿಂದೆ ಒಂದು ರೈಲಿನಲ್ಲಿ ರಿಸರ್ವೆಷನ್ ಮಾಡಿಸಿಕೊಂಡು ಗಂಡ ಪ್ರಾಂಕೇಶ್  ಹೆಂಡತಿ ಅಂಶುಲಾ ಇಬ್ಬರು ಪ್ರವಾಸ ಮುಗಿಸಿ ಬರುತ್ತಿದ್ದರು ಇನ್ನೇನು ಸ್ವಲ್ಪ ದೂರದಲ್ಲಿಯೇ ರೈಲ್ವೆ ಸ್ಟೇಷನ್ ಇರುತ್ತದೆ ಆಗ ಟ್ರೈನ್ ನಿಂತು ನಿಂತು ಹೋಗುತ್ತಿತ್ತು ಗಂಡನಾದವನು ತನಗೆ ಇಷ್ಟವಾದ ಹಾಡನ್ನು ಹಾಡುತ್ತಿದ್ದನು.

  ಹೆಂಡತಿಯಾದವಳು ತಾನು ಜತೆಗೆ ತಂದಿದ್ದ ಒಂದು ನಾಯಿ ಮರಿಯನ್ನು ಮುದ್ದಿಸುತ್ತಾ ಅದರ ಜೊತೆ ಆಟ ಆಡುತ್ತಾ ಸಮಯ ಕಳೆಯುತ್ತಿದ್ದಾರೆ ನಂತರ ಗಂಡನಾದವನು ಜೇಬಿನಿಂದ ಒಂದು ಸಿಗರೇಟ್ ತೆಗೆದು ಹಚ್ಚಿ ಸೇದಲಿಕ್ಕೆ ಆರಂಭಿಸಿದರು ಆಗ ಹೆಂಡತಿ ಮತ್ತೆ ನಾಯಿಮರಿಗೆ ಕೆಮ್ಮು ಶುರುವಾಯಿತು.

 ಹೆಂಡತಿಯಾದವಳು ಸಿಗರೇಟನ್ನು ಹಚ್ಚಬೇಡಿ ಎಂದು ಹೇಳಿದಳು ಗಂಡ ಕೇಳುತ್ತಾನೆಯೇ ಇಲ್ಲವೇ ಇಲ್ಲ ಹೆಂಡತಿಗೆ ಕೋಪ ಬಂದು ಆ ಸಿಗರೇಟನ್ನು ತೆಗೆದು ಕಿಟಕಿಯಿಂದ ಆಚೆ ಎಸೆದಳು ಗಂಡನಾದವನು ಮತ್ತೆ ಇನ್ನೊಂದು ಸಿಗರೇಟನ್ನು ಹಚ್ಚಿದನು.

 ಮತ್ತೆ ಇಬ್ಬರಿಗೂ ಕೆಮ್ಮು ಬಂತು ಕೊನೆಗೆ ಹೆಂಡತಿಗೆ ಕೋಪ ಬಂದು ಸಿಗರೇಟಿನ ಪ್ಯಾಕನ್ನು ಹೊರಗೆ ಎಸೆದು ಬಿಟ್ಟಳು ಗಂಡ ಸುಮ್ಮನೆ ಇರುತ್ತಾನೆಯೇ ಗಂಡನಿಗೆ ಕೋಪ ಉಕ್ಕಿ ಬಂತು ಗಂಡನು ನಾಯಿಮರಿಯನ್ನು ತೆಗೆದು ಆಚೆಗೆ ಬಿಸಾಕಿದನು.

ಹೆಂಡತಿಯು ವಿಶ್ವರೂಪ ತಾಳಿದಳು ಕೋಪದಿಂದ ಕಲ್ಲು ಹೃದಯ ನಿಮಗೆ ಸ್ವಲ್ಪವೂ ಕರುಣೆ ಇಲ್ಲ ಎಂದು ಏನೇನೋ ಬಡಬಡಿಸುತ್ತಿದ್ದಳು ಅಳುತ್ತಿದ್ದಳು ಅಷ್ಟರಲ್ಲಿ ರೈಲ್ವೆ ಸ್ಟೇಷನ್ ಬಂದಿತು ಇಬ್ಬರೂ ಕೆಳಗೆ ಇಳಿದರು.

 ಮುಂದೆ ನೋಡಿದರೆ ಮುದ್ದಿನ ನಾಯಿ ಮರಿ ಅಲ್ಲೇ ನಿಂತಿದೆ ಹೆಂಡತಿಗೆ ಸಂತೋಷವೇ ಸಂತೋಷ ಗಂಡನಿಗೆ ಆಶ್ಚರ್ಯ ಗಂಡ ಬೇಡ ಎಂದು ನಾಯಿ ಮರಿಯನ್ನು ಎಸೆದಿದ್ದ ಆದರೆ ನಾಯಿಮರಿ ಇವರಿಗಿಂತ ಮುಂಚಿತವಾಗಿ ಬಂದು ನಿಂತಿದೆ.

 ಹೆಂಡತಿಯಾದವಳು ನನ್ನನಾಯಿಮರಿ ಎಂದು ಎತ್ತಿಕೊಳ್ಳಲು ಹೋದಳು ನಾಯಿಮರಿ ಬೇಡ ಎಂದು ಅವಳೇ ವಾಪಸ್ ಬಂದಳು ಏಕೆ ಎಂದರೆ ನಾಯಿಮರಿ ಬಾಯಲ್ಲಿ ಸಿಗರೇಟಿನ ತುಂಡು ಇತ್ತು.

ಗಂಡನಿಗೆ ನಾಯಿ ಬೇಡ ಹೆಂಡತಿಗೆ ಸಿಗರೇಟ್ ಬೇಡ ಬೇಡ ಎಂದರು ಕಣ್ಣಿನ ಮುಂದೆಯೇ ಇದೆ ನಾವು ಇಷ್ಟಪಟ್ಟಿದ್ದು ಸಿಗುತ್ತದೋ ಇಲ್ಲವೋ ಆದರೆ ಬೇಡ ಬೇಡ ಎಂದರು ಅದೇ ಪ್ರತ್ಯಕ್ಷವಾಗುತ್ತದೆ. ನನಗೆ ಬೇಡ ಬೇಡ ಎಂದು ತಿರಸ್ಕರಿಸಿದ್ದರು ಮತ್ತೆ ಮತ್ತೆ ಏನು ಪ್ರತ್ಯಕ್ಷವಾಗುತ್ತಿದೆ?

ವಿಧಿಯ ಆಟ ಯಾರು ಬಲ್ಲರು?

ಒಂದು ಸಾರಿ ಅಂಜತ್ ತಂದೆ ಕಾದಂಬನಿ ಮಗಳನ್ನು ಕಾಲೇಜಿನಿಂದ ಕರೆದುಕೊಂಡು ಬರುತ್ತಿರಬೇಕಾದರೆ ತಂದೆಯೂ ದೂರದಲ್ಲಿ ಬರುತ್ತಿರುವ ಒಬ್ಬ ವ್ಯಕ್ತಿಯನ್ನು ನೋಡಿದರು ನಂತರ ಮಗಳಿಗೆ ಹೇಳಿದರು ನಾವು ಈ ದಾರಿಯಲ್ಲಿ ಹೋಗುವುದು ಬೇಡ ಪಕ್ಕದ ದಾರಿಯಲ್ಲಿ ಹೋಗೋಣ ಎಂದು ಹೇಳಿದರು.

 ಮಗಳು ಕೇಳಿದಳು ಅಪ್ಪಾ ನಾವು ದಿನನಿತ್ಯ ಇದೇ ದಾರೀಲಿ ಹೋಗುತ್ತಿರುತ್ತೇವೆ ಇವತ್ತು ಏಕೆ ಬೇಡ ಎಂದು ಕೇಳಿದಳು ತಂದೆಯಾದವರು ಹೇಳಿದರು ಮುಂದೆ ಒಬ್ಬ ವ್ಯಕ್ತಿ ಬರುತ್ತಿದ್ದಾನೆ ಅವನು ನನಗೆ ಸಾಲ ಕೊಡಬೇಕು ಇನ್ನೂ ಹಣ ಕೊಟ್ಟಿಲ್ಲ ಪಾಪ ಅವನಿಗೆ ಕಷ್ಟವಿರಬಹುದು ಮತ್ತೆ ನನ್ನನ್ನು ನೋಡಿದರೆ ಅವನ ಮನಸ್ಸಿಗೆ ಮುಜುಗರವಾಗುತ್ತದೆ ಎಂದರು ಮಗಳು ಹೇಳಿದಳು.

 ಅಪ್ಪಾ ನಮಗೆ ಬೇಕಾದಷ್ಟು ಸಾಲ ಇದೆ ಇದೇ ಸರಿಯಾದ ಸಮಯ ಹಣ ಕೇಳಿ ಎಂದು ಒತ್ತಾಯಿಸಿದಳು ಆಗ ತಂದೆಯವರು ಹೇಳಿದರು ಎಲ್ಲ ಮನುಷ್ಯರು ಒಂದೇ ರೀತಿ ಇರುವುದಿಲ್ಲ ಸ್ವಾಭಿಮಾನಿ, ಪ್ರಾಮಾಣಿಕ, ಆತ್ಮಅಭಿಮಾನಿ ಉಳ್ಳ ವ್ಯಕ್ತಿ ಇವರು ಇತರರ ಹಣ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ ವಿಧಿ ಅವರನ್ನು ಹಾಗೆ ಮಾಡಿದೆ.

 ವಿಧಿಯ ಆಟ ಯಾರು ಬಲ್ಲರು? ಅವರು ಏನೇ ಕಷ್ಟವಾದರೂ ಕೊಡಲಿಕ್ಕೆ ಯೋಚನೆ ಮಾಡುತ್ತಾರೆ ಆಗ ಮಗಳು ಅರ್ಥ ಮಾಡಿಕೊಳ್ಳುತ್ತಾಳೆ ಕೆಲವರು ಸಾಲ ಕೊಟ್ಟು ಹೆದರುತ್ತಾರೆ ಕೆಲವರು ಸಾಲ ಪಡೆದು ಹೆದರುತ್ತಾರೆ. ನಾನು ಸಾಲ ನೀಡಿ ಅಥವಾ ಸಾಲ ಪಡೆದು ಹೆದರಿದ್ದೇನೆಯೇ?

Leave a Comment