ಹಣವು ತಾನಾಗಿಯೇ ಹರಿದು ಬರುತ್ತದೆ

ಸಾಕ್ಷಿನ್ ವಿದ್ಯಾರ್ಥಿಯು ಇಂಜಿನಿಯರಿಂಗ್ ಪಾಸ್ ಆಗಿದ್ದು ಒಂದು ದೊಡ್ಡ ಕಂಪೆನಿಗೆ ಅರ್ಜಿ ಹಾಕುತ್ತಾನೆ ನಂತರ ಸಂದರ್ಶನಕ್ಕೆ ಕರೆಯುತ್ತಾರೆ ಅದರಲ್ಲಿ ಮೂರು ಸಾರಿ ಸಂದರ್ಶನವಿರುತ್ತದೆ ಸಂದರ್ಶನಕ್ಕೆ ಹಾಜರಾದ 3 ಸುತ್ತು ಪಾಸಾಗಬೇಕು ಮೊದಲನೇ ಸುತ್ತು ಎರಡನೇ ಸುತ್ತು ಕೊನೆಯ ಸುತ್ತು  ಸ್ವರೂಪ್ ಮಾಲೀಕರೇ ಸಂದರ್ಶನವನ್ನು ತೆಗೆದುಕೊಳ್ಳುತ್ತಾರೆ.

ಅಂಕಪಟ್ಟಿಯನ್ನು ನೋಡಿ ನೀನು ಕಷ್ಟಪಟ್ಟು ಪಾಸಾಗಿದ್ದೀಯಾ ನಿನ್ನ ಬದುಕಿನ ಧ್ಯೇಯವೇನು ಎಂದು ಕೇಳುತ್ತಾರೆ ಆಗ ಮಾಲೀಕರು  ವಿದ್ಯಾರ್ಥಿಯು ನಾನು ಹಣ ಮಾಡಬೇಕು ಎಂದು ಹೇಳುತ್ತಾನೆ ಆಗ ನೀನು ನಾಳೆ ಬಾ ಎಂದು ಕಳುಹಿಸುತ್ತಾರೆ.

 ಮಾರನೆಯ ದಿನ ಬಂದಾಗ ಅವನಿಗೆ ಒಂದು ಕನ್ನಡಕವನ್ನು ಕೊಡುತ್ತಾರೆ ಆ ಕನ್ನಡಕದಲ್ಲಿ ಗಾಜಿನ ಬದಲು ನಾಣ್ಯಗಳು ಇಡುತ್ತಾರೆ ಆಗ ಇದನ್ನು ಹಾಕಿಕೊಂಡು ನೋಡು ಏನು ಕಾಣುತ್ತದೆ ಎಂದು ಕೇಳುತ್ತಾರೆ ನನ್ನ ದೃಷ್ಟಿ ಮುಚ್ಚಿಹೋಗಿದೆ ಎಂದು ಹೇಳುತ್ತಾನೆ.

 ನಮ್ಮ ಬದುಕಿನಲ್ಲಿಯೂ ಅಷ್ಟೇ ಬರೀ ಹಣ ಮಾಡಬೇಕು ಎಂದರೆ ಹಣ ಬಿಟ್ಟರೆ ನನಗೆ ಬೇರೇನೂ ಕಾಣುವುದಿಲ್ಲ ಸೇವೆಯ ಮನೋಭಾವನೆ ಇದ್ದು ನಾವು ಕೆಲಸ ಮಾಡಿದೆ ಆದರೆ ಹಣವು ತಾನಾಗಿಯೇ ಹರಿದು ಬರುತ್ತದೆ ಎಂದು ಹೇಳುತ್ತಾರೆ ನಂತರ ಕೆಲವು ವರ್ಷಗಳು ಕೆಲಸ ಮಾಡಿ ನಂತರ ತನ್ನದೇ ಆದ ಒಂದು ಕಂಪೆನಿಯನ್ನು ನಿರ್ಮಾಣ ಮಾಡುತ್ತಾನೆ.

ಕಾಡಿನ ನ್ಯಾಯವೇ ಬೇರೆ

ಒಂದು ದೊಡ್ಡ ಅರಣ್ಯದಲ್ಲಿ ಸಮದರ್ಶಿ ಮನುಷ್ಯ ಹುಲ್ಲನ್ನು ಕೊಯ್ದು ಗಾಡಿಯಲ್ಲಿ ಹಾಕಿಕೊಂಡುಕೊಂಡು ಬರುತ್ತಿರುತ್ತಾನೆ ಆಗ ಮುಂದೆ ನೋಡಿದರೆ ಸಿಂಹ ನೋಡುತ್ತೆ ಆಗ ಈ ಮನುಷ್ಯನು ಹೆದರಿ ಗಾಬರಿಯಾಗುತ್ತಾನೆ ಏನು ಮಾಡಬೇಕೆಂದು ತೋಚುವುದಿಲ್ಲ ನಾನಂತೂ ಈಗ ಸಾಯುತ್ತಿರುವುದು ಖಂಡಿತ ಎಂದು ಸುಮ್ಮನೆ ನಿಲ್ಲುತ್ತಾನೆ.

 ನಯವಾಗಿ ಸಿಂಹವು ಮಾತನಾಡುತ್ತದೆ ಏಕೆ ನನ್ನನ್ನು ನೋಡಿ ಹೆದರಿ ಕೊಂಡಿದ್ದೀಯಾ ಮನುಷ್ಯ ನೀವು ನನ್ನನ್ನು ತಿನ್ನುತ್ತೀಯಾ ಅದಕ್ಕೆ ಹೆದರಿದ್ದೇನೆ ಎಂದಾಗ ಸಿಂಹವು ಇಲ್ಲ ಇಲ್ಲ ನಾನು ಒಳ್ಳೆಯ ಸಿಂಹ ಈ ರೀತಿ ನಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳುತ್ತದೆ ಸಿಂಹ ಈ ಮನುಷ್ಯನಿಗೆ ಆಶ್ಚರ್ಯವಾಗುತ್ತದೆ ಆಗ ಸಿಂಹ ಹೇಳುತ್ತದೆ.

 ನೀನು ನನ್ನನ್ನು ಇಲ್ಲಿಂದ ನಿನ್ನ ಊರಿನವರೆಗೆ ಕಾಪಾಡಬೇಕು ಹಾಗಾದರೆ ಮಾತ್ರ ನಾನು ನಿನಗೆ ತಿನ್ನುವುದಿಲ್ಲ ಎಂದು ಮಾತು ಕೊಡುತ್ತದೆ ಅಷ್ಟೇ ತಾನೆ ಎಂದು ಹೇಳಿ ಮನುಷ್ಯ ಯೋಚಿಸಿದ ನಂತರ ತಾನು ತಂದಿರುವ ಹುಲ್ಲಿನಲ್ಲಿ ಒಳಗೆ ಸಿಂಹವನ್ನು ಹಾಕಿ ಹುಲ್ಲನ್ನು ಮೇಲೆ ಹಾಕಿ ನಿಧಾನವಾಗಿ ಕಟ್ಟಿಕೊಂಡು ಬರುತ್ತಾನೆ.

 ಅಷ್ಟರಲ್ಲಿ ಕಾಡಿನಲ್ಲಿರುವ ಒಬ್ಬ ರೇಂಜರ್ ಬರುತ್ತಾನೆ ಬಂದೂಕು ಹಿಡಿದು ತೆಗೆದುಕೊಂಡು ಇಲ್ಲಿ ಒಂದು ಸಿಂಹವನ್ನು ನೋಡಿದ್ದೀಯಾ ಎಂದು ಕೇಳುತ್ತಾನೆ ಆಗ ಈ ಮನುಷ್ಯನು ಯಾವ ಪ್ರಾಣಿಗೂ ನಾನು ನೋಡಲಿಲ್ಲ ಸ್ವಾಮಿ ಎಂದು ವಿನಯವಾಗಿ ಹೇಳುತ್ತಾನೆ.

 ನಂತರ ಆ ಬಂದೂಕಿನ ಮನುಷ್ಯ ಹೊರಟು ಹೋಗುತ್ತಾನೆ ನಂತರ ನಿಧಾನವಾಗಿ ಸಿಂಹವು ಗಾಡಿಯಿಂದ ಆಚೆ ಬರುತ್ತದೆ ಆಗ ಸಿಂಹವು ಹೇಳುತ್ತದೆ ನೀನು ಸುಳ್ಳುಗಾರ ಆದುದರಿಂದ ನಾನು ನಿನ್ನನ್ನು ತಿನ್ನುತ್ತೇನೆ ಎಂದಾಗ ಮನುಷ್ಯನಾದವನು ಹೇಳುತ್ತಾನೆ ನಾನು ನಿನಗೆ ಮಾತು ಕೊಟ್ಟಿದ್ದೆ ಅದಕ್ಕಾಗಿ ನಾನು ಸುಳ್ಳು ಹೇಳಿದೆ ಎಂದು ಹೇಳುತ್ತಾನೆ.

 ಆಗ ಸಿಂಹವು ಹೇಳುತ್ತದೆ ಕಾಡಿನ ನ್ಯಾಯವೇ ಬೇರೆ ನಾಡಿನ ನ್ಯಾಯವೇ ಬೇರೆ ಕಾಡಿನ ನ್ಯಾಯ ಇದೇ ರೀತಿ ಯಾರಿಗೆ ಬೇಕಾದರೂ ಕೇಳು ಎಂದು ಸಿಂಹ ಹೇಳುತ್ತದೆ ಕಾಡಿನ ಎಲ್ಲ ಪ್ರಾಣಿಗಳು ಹೌದು ಎಂದು ಹೇಳುತ್ತವೆ ಆಗ ಈ ಮನುಷ್ಯನು ಹೇಗೆ ನಾನು ಕಾಪಾಡಿಕೊಳ್ಳಬಹುದು ಎಂದು ಒಂದು ಚಿಂತನೆ ಮಾಡಿ ಹೇಳುತ್ತಾನೆ.

 ಹೇಗಾದರೂ ಆಗಲಿ ನಿನಗೆ ಈ ಹುಲ್ಲಿನಲ್ಲಿ ಇದ್ದುದ್ದರಿಂದ ಕೊಳೆ ಆಗಿದ್ದೀಯಾ ಸ್ನಾನಮಾಡಿ ನಾನು ಕೂಡ ಒಂದು ಸಾರಿ ಸ್ನಾನವನ್ನು ಮಾಡುತ್ತೇನೆ ಎನ್ನುತ್ತಾನೆ ಅದಕ್ಕೆ ಸಿಂಹವು ಒಪ್ಪುತ್ತದೆ ಇಬ್ಬರು ಸ್ನಾನ ಮಾಡಿ ಬರೋಣ ಎಂದು ನದಿಗೆ ಹೋಗುತ್ತಾರೆ ಮನುಷ್ಯನಾದವನು ನಿಧಾನವಾಗಿ ಇಳಿದು ಈಜಲು ಶುರು ಮಾಡುತ್ತಾನೆ.

 ಸಿಂಹವು ಅಷ್ಟು ಬೇಗ ಈಜಲು ಸಾಧ್ಯವಾಗುವುದಿಲ್ಲ ಆಗ ಸಿಂಹ ಹೇಳುತ್ತದೆ ಇದು ಅನ್ಯಾಯ ಇದು ಅನ್ಯಾಯ ಎಂದಾಗ ಮನುಷ್ಯನಾದವನು ಹೇಳುತ್ತಾನೆ ನಾನು ನಿನಗೆ ಒಂದು ಸಾರಿ ಕಾಪಾಡಿದ್ದೇನೆ ನನ್ನ ಕೆಲಸ ಮಾಡಿದ್ದೇನೆ ಇದು ನಾಡಿನ ನ್ಯಾಯ ಇನ್ನೂ ನಿನ್ನ ನ್ಯಾಯ ನಿನಗೆ ಇರಲಿ ಎಂದು ಅಲ್ಲಿಂದ ಬೇಗ ಈಜಿಕೊಂಡು ಮನೆಗೆ ಬಂದು ಸೇರುತ್ತಾನೆ.

ದಯವಿಟ್ಟು ಒಳಗೆ ಬನ್ನಿ

ಒಂದು ದಿನ ಸಂಜೆ ಆದ ಮೇಲೆ ಮನೆಯ ಕನಕಾಂಗಿ ಯಜಮಾನಿ ಹೊರಗೆ ಬಂದಳು ಆಗ ಜಗುಲಿಯ ಮೇಲೆ ಮೂವರು ವೃದ್ಧರು ಕುಳಿತಿದ್ದಾರೆ ಇವರ ಮುಖ ನೋಡಿದರೆ ಚೆನ್ನಾಗಿ ಶೋಭಿಸುತ್ತಿದೆ ಇವರು ತುಂಬಾ ದಣಿದಿದ್ದಾರೆ ಅದಕ್ಕೆ ಆ ಮನೆ ಯಜಮಾನಿ ಒಳಗೆ ಬನ್ನಿ ಎಂದು ವಿನಂತಿಸಿಕೊಂಡಳು.

ವೃದ್ಧರು  ನಿಮ್ಮ ಯಜಮಾನರು ಎಲ್ಲಿ ಎಂದು ಕೇಳಿದರು ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬರುತ್ತಾರೆ ಎಂದು ಹೇಳಿದಳು ಬಂದ ಮೇಲೆ ನಮಗೆ ಕೂಗಿ ನಾವು ಬರುತ್ತೇವೆ ಎಂದು ವೃದ್ಧರು ಹೇಳಿದರು ಹಿಮಕರ್ ಯಜಮಾನರು ಬಂದರು ತನ್ನ ಯಜಮಾನರಿಗೆ ಹೆಂಡತಿ ಹೇಳಿದಳು ಯಜಮಾನರು ವೃದ್ಧರಿಗೆ ಒಳಗೆ ಕರೆಯಿರಿ ಎಂದು ಹೇಳಿದರು.

  ಯಜಮಾನಿ ಆಚೆ ಬಂದು ದಯವಿಟ್ಟು ಒಳಗೆ ಬನ್ನಿ ಎಂದು ಕರೆದಳು  ಆಗ ಮೂರರಲ್ಲಿ ಒಬ್ಬರು ಹೇಳಿದರು ನಾವು ಮೂವರು ಬರಲಿಕ್ಕೆ ಸಾಧ್ಯವಿಲ್ಲ ಒಬ್ಬರು ಮಾತ್ರ ಬರುತ್ತವೆ ಮೊದಲನೆಯವರು ನನ್ನ ಹೆಸರು ಶ್ರೀಮಂತಿಕೆ ಎರಡನೆಯವರ ಹೆಸರು ಯಶಸ್ಸು ಮೂರನೇಯವರ ಹೆಸರು ಪ್ರೀತಿ ನೀವು ಮನೆಯಲ್ಲಿ ಹೋಗಿ ವಿಚಾರಿಸಿ ಯಾರು ಬರಬೇಕು ಎಂದು ಕೇಳಿ ಆಗ ನಾವು ಬರುತ್ತೇವೆ ಎಂದು ಹೇಳಿದರು.

 ಈ ವಿಷಯವನ್ನು ತಮ್ಮ ಯಜಮಾನರಿಗೆ ತಿಳಿಸಿದಳು ಹೆಂಡತಿಯಾದವಳು ಶ್ರೀಮಂತಿಕೆಗೆ ಕರೆಯೋಣ ಗಂಡನಾದವನು ಯಶಸ್ಸು ತುಂಬಾ ದೊಡ್ಡದು ಎಲ್ಲರೂ ನೆನಪಿನಲ್ಲಿ ಇಡುತ್ತಾರೆ ಎಂದು ಹೇಳಿದರು ಈ ಮಾತನ್ನು ಕೇಳುತ್ತಿದ್ದಾಗ ಚಿಕ್ಕ ಹುಡುಗಿಯ ಪೋಷಕರನ್ನು ಹೇಳಿತು ನಮಗೆ ಪ್ರೀತಿ ಇದ್ದರೆ ಸಾಕು ಎಂದು ಹೇಳಿದಳು.

 ಈ ಮಾತನ್ನು ಗಂಡ ಹೆಂಡತಿ ಇಬ್ಬರೂ ಯೋಚಿಸಿ ಮನೆ ಯಜಮಾನಿ ಹೋಗಿ ಪ್ರೀತಿ ಯಾರು ಅವರು ದಯವಿಟ್ಟು ಒಳಗೆ ಬನ್ನಿ ಎಂದು ಕರೆದಳು ಪ್ರೀತಿ ಎಂಬುವರು ಎದ್ದು ನಿಂತಾಗ ಇನ್ನಿಬ್ಬರು ಅವರನ್ನು ಹಿಂಬಾಲಿಸಿಕೊಂಡು ಬಂದರು ಮನೆ ಯಜಮಾನಿಗೆ ಆಶ್ಚರ್ಯವಾಯ್ತು.

 ನಾನು ಕರೆದುದು ಒಬ್ಬರಿಗೆ ಮಾತ್ರ ಎಂದು ಹೇಳಿದಾಗ ಯಶಸ್ಸನ್ನು ಶ್ರೀಮಂತಿಕೆಯನ್ನು ಕರೆದಿದ್ದರೆ ಅವರು ಒಬ್ಬರೇ ಬರುತ್ತಿದ್ದರೂ ನೀವು ಪ್ರೀತಿಯನ್ನು ಕರೆದಿದ್ದೀರಾ ಪ್ರೀತಿ ಎಲ್ಲಿ ಇರುತ್ತದೋ ಅಲ್ಲಿ ಶ್ರೀಮಂತಿಕೆ ಮತ್ತು ಯಶಸ್ಸು ಅಲ್ಲೇ ಇರುತ್ತದೆ ಎಂದು ಹೇಳಿದರು.

ಜಗಳ ಆಡುವುದಿಲ್ಲ

ವಟಾರದಲ್ಲಿ ಹಲವಾರು ಸಂಸಾರಗಳು ಇದ್ದವು ಅದರಲ್ಲಿ ಹಲವು ಸಂಸಾರಗಳು ದಿನನಿತ್ಯ ಜಗಳ ಮಾಡಿಕೊಂಡು ಇರುತ್ತಿದ್ದರು ಅದರಲ್ಲಿ ಒಂದು ಮನೆಯವರು ಮಾತ್ರ ಜಗಳ ಆಡದೆ ಸಂತೋಷವಾಗಿ ಇದ್ದರು ಎಲ್ಲರೂ ಯೋಚನೆ ಮಾಡಿದರು ಇವರು ಜಗಳ ಆಡುವುದಿಲ್ಲ ಕಾರಣ ಏನೂ ಇರಬಹುದು ಎಂಬ ಎಂದು ಕುತೂಹಲ ಮೂಡಿತು.

 ಇತರರು ಅವರು ಹೇಗೆ ಇರುತ್ತಾರೆ ಗಮನಿಸೋಣ ಎಂದು ಗಂಡ ಸರ್ವಜಿತ್  ಹೆಂಡತಿ ನಿಶಾಂತಿನಿಗೆ ತಿಳಿಯದಂತೆ ಗಮನಿಸುತ್ತಿದ್ದರು ಗಂಡ ಮನೆಗೆ ಬಂದನು ಬಾಗಿಲ ಮುಂದೆ ನೀರು ತುಂಬಿದ ಬಿಂದಿಗೆ ಇತ್ತು ಬಿಂದಿಗೆಯನ್ನು ನೋಡದೆ ಗಂಡ ಬೀಳಿಸಿದನು.

 ಬಿದ್ದ ಬಿಂದಿಗೆಯನ್ನು ಗಮನಿಸಿದ ಹೆಂಡತಿ ಅಡುಗೆ ಮನೆಯಿಂದ ಬಂದು ನೀರು ಬಿದ್ದು ಹೋಗಿದೆ ಇರಲಿ ನೀರನ್ನು ಎತ್ತಿ ಹಾಕೋಣ ನಾನು ಇಲ್ಲಿ ಇಡಬಾರದಾಗಿತ್ತು ಎಂದು ಹೇಳಿದಳು ನಂತರ ಗಂಡ ಆದವನು ಹೇಳಿದ ನಾನು ನೀನು ಇಟ್ಟಿದ್ದ ಬಿಂದಿಗೆಯನ್ನು ಗಮನಿಸಲಿಲ್ಲ.

 ಇರಲಿ ನಾನು ನೀನು ಸೇರಿ ನೀರನ್ನು ತೆಗೆದು ಹಾಕೋಣ ಎಂದು ಗಂಡ ಹೆಂಡತಿ ಇಬ್ಬರೂ ಸೇರಿ ನೀರನ್ನು ಆಚೆಗೆ ಹಾಕಿದರು ಇದನ್ನು ಗಮನಿಸಿದ ಎಲ್ಲರೂ ಅರ್ಥಮಾಡಿಕೊಂಡು ಅನುಸರಿಸಿಕೊಂಡು ಹೋಗಬೇಕು ಎಂದು ತಿಳಿದರು.

ನಿಮ್ಮ ಜೊತೆಯಲ್ಲೇ ಇರುತ್ತೇನೆ

ಹಲವಾರು ವರ್ಷಗಳ ಹಿಂದೆ ನಾಯಿ ಕೂಡ ಬೇಟೆಯಾಡಿ ಜೀವನ ಸಾಗಿಸುತ್ತಿತ್ತು ಎಂದು ಹೇಳುತ್ತಾರೆ ನಾಯಿಯು ಅಲೆದಾಡಿ ಅಲೆದಾಡಿ ಏನೂ ಸಿಗಲಿಲ್ಲ ಆಗ ಏನು ಮಾಡುವುದು ಎಂದು ಯೋಚಿಸುತ್ತಾ ಸುತ್ತಲೂ ನೋಡಿದರೂ ಕತ್ತಲು ಕತ್ತಲೆಯಾಗಿತ್ತು.

ದೂರದಲ್ಲಿ ಬೆಂಕಿ ಕಂಡಿತು ಆಗ ಬೆಂಕಿ ಇದ್ದರೆ ಜನ ಇದ್ದೇ ಇರುತ್ತಾರೆ ಅಲ್ಲಿ ನನಗೆ ಏನಾದರೂ ತಿನ್ನಲಿಕ್ಕೆ ಸಿಗಬಹುದು ಎಂದು ಆ ಬೆಂಕಿಯ ಬಳಿ ಬಂತು ಆಗ ಅಷ್ಟರಲ್ಲಿ ಕಾಡುಮನುಷ್ಯರು ಬಂದರು.

 ಒಬ್ಬ ಬಂದು ನಾಯಿ ಬಂದಿದೆ ನಮ್ಮ ಕೋಳಿಗಳನ್ನು ಹಿಡಿಯುತ್ತದೆ ಎಂದು ಹೇಳಿ ಈಟಿಯಿಂದ ಚುಚ್ಚಲು ಬಂದನು ಆಗ ನಾಯಿ ಹೇಳಿತು ನಾನು ಯಾವುದೇ ರೀತಿ ನಿಮಗೆ ತೊಂದರೆ ಮಾಡುವುದಿಲ್ಲ ತುಂಬಾ ಚಳಿ ಇದೆ ಆದುದರಿಂದ ಇಲ್ಲಿ ಬೆಂಕಿ ಇರುವುದರಿಂದ ಸ್ವಲ್ಪಹೊತ್ತು ಇದ್ದು ನಾನು ಹೊರಟು ಹೋಗುತ್ತೇನೆ ಎಂದು ಹೇಳಿತು.

 ಆ ಕಾಡಿನ ಮನುಷ್ಯನಿಗೆ ನಾಯಿಯ ಮೇಲೆ ಸ್ವಲ್ಪ ದಯೆ ಬಂತು ನಾಯಿ ಅಲ್ಲಿ ಇಲ್ಲಿ ನೋಡಿತು ಒಂದು ಮೂಳೆ ಸಿಕ್ಕಿತು ಆ ಮೂಳೆ ತಿನ್ನುತ್ತಾ ತನ್ನ ಸಮಯವನ್ನು ಕಳೆಯಿತು ನಂತರ ಬೆಳಿಗ್ಗೆ ನೋಡಿದಾಗ ನಾಯಿ ಅಲ್ಲಿಯೇ ಮಲಗಿತ್ತು ಆಗ ಮನುಷ್ಯನ ಕೇಳಿದ ಇನ್ನೂ ಏಕೆ ಹೋಗಿಲ್ಲ ಎಂದಾಗ ರಾತ್ರಿ ಆಗಿತ್ತು ಬೇರೆ ಜಾತಿಯ ಪ್ರಾಣಿಗಳು ಬರುತ್ತಿದ್ದವು.

 ನೀವು ನಿದ್ದೆ ಮಾಡುತ್ತಿದ್ದೀರಾ ಆದುದರಿಂದ ನಿಮ್ಮ ನಿದ್ದೆ ಎಚ್ಚರ ವಾಗಬಾರದು ಎಂದು ನಾನು ಕಾಯುತ್ತಿದ್ದೆ ನಂತರ ಈಗ ನಾನು ಮಲಗಿದೆ ಎಂದು ಹೇಳಿತು ನಂತರ ನಾಯಿ ಹೇಳಿತು ನನಗೆ ಜೀವನ ಸಾಕಾಗಿದೆ ಅಲ್ಲಿ ಹೆಚ್ಚು ಆಹಾರವೂ ಸಿಗುತ್ತಿಲ್ಲ ಚಳಿ ಜಾಸ್ತಿಯಾಗುತ್ತಿದೆ ಇನ್ನು ಮುಂದೆ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ ನಿಮಗೆ ಸಹಾಯ ಮಾಡುತ್ತೇನೆ ಎಂದು ನಾಯಿ ಹೇಳಿತು.

 ಆ ಮನುಷ್ಯನಿಗೆ ದಯೆ ಬಂತು ನನ್ನ ಜೊತೆ ಇರು ಎಂದನು ಅದರಂತೆಯೇ ನಾಯಿ ಮತ್ತೆ ಮನುಷ್ಯರು ಬದುಕಿದರು ನಾಯಿ ರಾತ್ರಿಯೆಲ್ಲಾ ಕಾಯುತ್ತದೆ ಬೆಳಿಗ್ಗೆ ಮನುಷ್ಯನಾದವನು ಎಚ್ಚರವಾಗಿರುತ್ತಾನೆ ಅಂದಿನಿಂದ ನಾಯಿಯ ನಂಟು ಮನುಷ್ಯನಿಗೆ ಸೇರಿಕೊಂಡಿದೆ ಎಂದು ಹೇಳುತ್ತಾರೆ ಅಲ್ಪಸ್ವಲ್ಪ ಆಹಾರ ಕೊಟ್ಟರು ನಾಯಿಗೆ ನಿಯತ್ತಾಗಿ ನಾಯಿ ಇರುತ್ತದೆ.

Leave a Comment