ಒಂದು ಸಾರಿ ಹದ್ದು ಅವಕಾಶವನ್ನು ನೋಡಿ ಒಂದು ಕೋಳಿ ಮರಿಯನ್ನು ಹಿಡಿದುಕೊಂಡು ಹೋಯಿತು ಇದನ್ನು ನೋಡಿದ ಕಾಗೆಗೆ ತುಂಬಾ ಬೇಸರವಾಯಿತು.
ಹದ್ದು ಸುಲಭವಾಗಿ ಹಿಡಿದುಕೊಂಡು ಹೋಯಿತು ನಾನು ಅದಕ್ಕಿಂತ ಕಡಿಮೆಯೇ ಎಂದು ನಾನು ಏಕೆ ಹಿಡಿಯಬಾರದು ಎಂದು ಯೋಚಿಸಿತು ನಂತರ ಕಾಗೆ ಕೋಳಿ ಮರಿಯನ್ನು ಹಿಡಿಯುವುದಕ್ಕಿಂತ ಕೋಳಿಯನ್ನೇ ಹಿಡಿಯುತ್ತೇನೆ ಎಂದು ದೊಡ್ಡದಾಗಿ ಹುಡುಕಿ ತಿನ್ನುತ್ತಿದ್ದ ಕೋಳಿಯನ್ನೇ ಹಿಡಿಯಲಿಕ್ಕೆ ಹೋಯಿತು.
ಕಾಗೆ ಇರೋದು ಸ್ವಲ್ಪ ಕೋಳಿ ಭಾರವನ್ನು ಎತ್ತಲು ಆಗಲಿಲ್ಲ ಆಗ ಕೋಳಿ ಸರಿಯಾಗಿ ಕಾಗೆಗೆ ಕುಕ್ಕಿತು ನಂತರ ಗಲಿಬಿಲಿಯಾಗಿ ಹಾರಿ ಜೀವ ಉಳಿಸಿಕೊಂಡಿತು ನಂತರ ಎಲ್ಲಾ ಹದ್ದುಗಳು ನೋಡಿ ನಕ್ಕವು ಹದ್ದು ಶಕ್ತಿಶಾಲಿಯಾದುದು.
ಹದ್ದಿಗೆ ಭಾರ ಎತ್ತುವ ಶಕ್ತಿ ಇದೆ ಚಾಣಾಕ್ಷತೆ ಇದೆ ಕಾಗೆ ಚಿಕ್ಕದು ಮತ್ತು ಅಷ್ಟೊಂದು ಭಾರ ಎತ್ತಲು ಸಾಧ್ಯವಿಲ್ಲ ಇದನ್ನು ಅರಿಯದ ಕಾಗೆ ದುರಾಸೆಪಟ್ಟು ಹೋಗಿ ಎಡವಟ್ಟು ಮಾಡಿಕೊಂಡಿತು.
ನಮ್ಮನ್ನು ನಾವು ಸ್ವಯಂ ವಿಶ್ಲೇಷಣೆ ಮಾಡಿಕೊಂಡು ನಮ್ಮ ಶಕ್ತಿ ಸಾಮರ್ಥ್ಯವನ್ನು ಅರಿತು ಸಾಧ್ಯವಾದುದನ್ನು ಮಾಡೋಣ. ಮಿತಿಮೀರಿದ ನಂಬಿಕೆಯಿಂದ ಸಾಧ್ಯವಾಗದೇ ಇರುವುದನ್ನು ಮಾಡಲು ಹೋಗಿ ನಷ್ಟ ಅನುಭವಿಸಿದ್ದೇನೆ?
ಸ್ವಭಾವ ಬದಲಿಸಿಕೊಂಡಿತು
ಮುದ್ಗಲ್ ಬುದ್ಧಿವಂತ ರಾಜ ಇದ್ದನು ರಾಜ್ಯವು ತುಂಬ ಚೆನ್ನಾಗಿ ನಡೆಯುತ್ತಿತ್ತು ಹಾಗೆ ಒಂದು ಆನೆ ಇತ್ತು ಆನೆಯು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಆದರೆ ಒಂದು ದಿನ ಇದ್ದಕ್ಕಿದ್ದಂತೆಯೇ ಆನೆಯು ಕೋಪದಿಂದ ಮಾವುತನನ್ನು ಸೊಂಡಲಿನಲ್ಲಿ ಸುತ್ತಿ ಬಿಸಾಕಿತು.
ಬೇರೆ ಪರಿಣಿತಿ ಪಡೆದ ಮಾವುತನು ಹೋದನು ಅವನಿಗೂ ತುಳಿದು ಬಿಟ್ಟಿತು ಪರಿಸ್ಥಿತಿ ಯಾವ ರೀತಿ ಇತ್ತು ಎಂದರೆ ಯಾರೇ ಹೋಗಲಿ ಸಾವಿನ ಮನೆಗೆ ಹೋದಂತೆ ಈ ರೀತಿಯಾಗಿ ಆನೆಯ ಹತ್ತಿರ ಯಾರೂ ಹೋಗುತ್ತಿರಲಿಲ್ಲ ರಾಜನು ಇದೆ ಚಿಂತೆಯಲ್ಲಿ ಮುಳುಗಿದನು.
ಶಾಂತಿ ಸ್ವಭಾವದಿಂದ ಇದ್ದ ಆನೆ ಈ ರೀತಿ ಸಿಟ್ಟಾಗಲು ಕಾರಣವೇನು ಇದಕ್ಕೆ ಬಾಬಾ ಅವರೇ ಪರಿಹಾರ ಸೂಚಿಸಬೇಕೆಂದು ಬಾಬಾ ಅವರಿಗೆ ಕೇಳಿದರು ಬಾಬಾ ಅವರು ಆನೆಯನ್ನು ಹೋಗಿ ನೋಡಿದಾಗ ಆನೆಯ ಕಣ್ಣುಗಳು ತುಂಬಾ ಕೆಂಪಾಗಿ ಇವೆ ತುಂಬಾ ಕೋಪವಿದೆ ಆನೆಯನ್ನು ಕಟ್ಟಿದ ಸ್ಥಳವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು.
ಆನೆಯ ಸ್ವಲ್ಪ ದೂರದಲ್ಲಿ ಯಾರೋ ಬಂದು ರಾತ್ರಿ ಕುಳಿತು ಮಾತಾಡಿ ಕೊಂಡು ಹೋಗುತ್ತಿದ್ದಾರೆ ಎನ್ನುವ ಸಂದೇಹ ಬಂತು ಅದನ್ನು ಮಾವುತರಿಗೆ ಕೇಳಿದಾಗ ಸಂಜೆ ಆದ ಮೇಲೆ ಯಾರೂ ಇರುವುದಿಲ್ಲ ಎಂದು ಹೇಳಿದರು ನಂತರ ರಾತ್ರಿ ಯಾರೂ ಬರುತ್ತಾರೆ ಎಂದು ಅವಿತುಕೊಂಡು ನೋಡಿದರೂ ರಾತ್ರಿ ಆಗುತ್ತಿದ್ದಂತೆಯೇ ಕೆಲವು ಕಳ್ಳರು ದರೋಡೆಕೋರರು ಬಂದರು ಅವರು ಕುಳಿತುಕೊಂಡು ಮಾತನಾಡುತ್ತಿದ್ದರು.
ನಾವು ಇಂತಿಂಥವರಿಗೆ ಶಿಕ್ಷೆಯನ್ನು ಕೊಟ್ಟಿದ್ದೀವಿ ಹಿಂಸೆ ಮಾಡಿದ್ದೇವೆ ದರೋಡೆ ಮಾಡಿದ್ದೇವೆ ಅನ್ಯಾಯ ಮಾಡಿದ್ದೇವೆ ಇತರರಿಗೆ ಹಿಂಸೆ ಕೊಡಬೇಕು ಎಂದು ನಕರಾತ್ಮಕವಾಗಿ ಮಾತನಾಡಿಕೊಂಡು ಹೊರಟು ಹೋಗುತ್ತಿದ್ದರು.
ನಕರಾತ್ಮಕ ಮಾತುಗಳನ್ನು ಅನೆಯು ದಿನನಿತ್ಯ ಕೇಳುತ್ತಿತ್ತು ಆದುದರಿಂದ ಆನೆಯು ಈ ರೂಪ ತಾಳುತ್ತಿತ್ತು ನಂತರ ಆ ಕಳ್ಳರು ದರೋಡೆಕೋರರನ್ನು ಹಿಡಿಸಿದರು ಮತ್ತೆ ಅದೇ ಸ್ಥಳಕ್ಕೆ ಒಳ್ಳೆಯ ಪಂಡಿತರು ಸಾಧುಗಳು ಋಷಿಗಳು ಕುಳಿತು ಅಲ್ಲಿ ಒಳ್ಳೆಯ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟರು.
ಸಕಾರಾತ್ಮಕವಾದ ಮಾತುಗಳನ್ನು ಕೇಳಿದ ಸ್ವಲ್ಪ ದಿನದಲ್ಲಿಯೇ ಆನೆಯು ಕೂಡ ಸರಿದಾರಿಗೆ ಬಂತು ಇವರು ಮಾತನಾಡುತ್ತಿದ್ದ ಮಾತುಗಳು ಎಲ್ಲರಿಗೂ ಒಳ್ಳೆಯದಾಗಲಿ ಸಕರಾತ್ಮಕ ಚಿಂತನೆ ಇತರರಿಗೆ ಸಹಾಯ ಮಾಡುವ ಯೋಜನೆಗಳು ರೂಪಿಸುತ್ತಿದ್ದರು ಸಕಾರಾತ್ಮಕವಾದ ಮಾತುಗಳನ್ನು ಕೇಳಿ ಅನೆಯು ಕೂಡ ತನ್ನ ಸ್ವಭಾವವನ್ನು ಬದಲಿಸಿ ಕೊಂಡಿತು. ನಾನು ವಾತಾವರಣ ಬದಲಿಸಿಕೊಂಡು ನನ್ನ ಸ್ವಭಾವ ಬದಲಾಯಿಸಿಕೊಂಡಿದ್ದೇನೆಯೇ?
ನಕಲು ಶಾಶ್ವತವಾಗಿ ಇರುವುದಿಲ್ಲ
ಜಿ. ವಿ. ಅತ್ರಿ ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡರಲ್ಲೂ ಹೆಚ್ಚು ಸಾಧನೆ ಮಾಡಿದವರು ಒಳ್ಳೆಯ ಕಂಠವಿದೆ ಹಾಡುವ ಮೂಲಕ ಇವರು ತನ್ನ ಹೆಸರನ್ನು ಪ್ರಸಿದ್ಧಿಗೊಳಿಸಿದ್ದಾರೆ ಇವರು ಹಳೆಯ ಚಲನಚಿತ್ರ ಗೀತೆಗಳು ತುಂಬ ಇಂಪಾಗಿ ಹಾಡುತ್ತಿದ್ದರು.
ಇವರ ಕಂಠ ಹಾಗೂ ಪಿಬಿ ಶ್ರೀನಿವಾಸ್ ಅವರ ಕಂಠ ತುಂಬಾ ಹತ್ತಿರವಿತ್ತು ಇವರು ಹಾಡುತ್ತಿದ್ದರೆ ಪಿ ಬಿ ಶ್ರೀನಿವಾಸ್ ರವರೆ ಹಾಡುತ್ತಿದ್ದಾರೆ ಎಂದು ಹಾಡು ಕೇಳುವವರು ಹೇಳುತ್ತಿದ್ದರು ನಂತರ ಅತ್ರಿಯವರು ಹೋದರೆ ಜೂನಿಯರ್ ಪಿ ಬಿ ಶ್ರೀನಿವಾಸ್ ಎಂದು ಕರೆಯುತ್ತಿದ್ದರು.
ಅತ್ರಿಯವರು ತುಂಬಾ ಸಂತೋಷ ಪಡುತ್ತಿದ್ದರು ಇವರ ಕಾರ್ಯಕ್ರಮಗಳಿಗೆ ಜನರು ಹೆಚ್ಚಾಗಿ ಸೇರುತ್ತಿದ್ದರು ಒಂದು ದೊಡ್ಡ ಸಮಾರಂಭದಲ್ಲಿ ಅತ್ರಿಯವರು ಹಾಡುವಾಗ ಕನ್ನಡದ ಹೆಸರಾಂತ ಕವಿ ಲಕ್ಷ್ಮೀ ನಾರಾಯಣ ಭಟ್ಟರು ಮುಖ್ಯ ಅತಿಥಿಯಾಗಿ ಬಂದಿದ್ದರು ಅತ್ರಿಯವರ ಹಾಡು ಕೇಳಿ ತುಂಬ ಸಂತೋಷಪಟ್ಟರು ನಂತರ ಅತ್ರಿಯವರಿಗೆ ಹೇಳಿದರು.
ನಿಮಗೆ ಒಳ್ಳೆಯ ಕಂಠ ಇದೆ ಶಾಸ್ತ್ರೀಯ ಸಂಗೀತ ಸುಗಮ ಸಂಗೀತ ಭಕ್ತಿ ಸಂಗೀತ ಎಲ್ಲವೂ ಚೆನ್ನಾಗಿ ಹಾಡುತ್ತೀರಿ ಜ್ಯೂನಿಯರ್ ಎಂದು ನೀವು ಏಕೆ ಗುರುತಿಸಲು ಇಷ್ಟಪಡುತ್ತೀರಿ ಪಿಬಿ ಶ್ರೀನಿವಾಸ್ ಅವರ ಬಗ್ಗೆ ಗೌರವ ಇರಬೇಕು ನಿಜ ಆದರೆ ಅವರ ಹೆಸರು ನಕಲು ಮಾಡಿ ಕರೆಸಿಕೊಳ್ಳುವುದು ಒಳ್ಳೆಯದಲ್ಲ.
ನಿಮ್ಮ ಪ್ರತಿಭೆಗೆ ನೀವೇ ಅವಮಾನ ಮಾಡಿಕೊಂಡಂತೆ ಜಗತ್ತಿನಲ್ಲಿ ಯಾರೂ ಒಬ್ಬರಂತೆ ಒಬ್ಬರಿಲ್ಲ ಎಲ್ಲರ ಹೆಬ್ಬೆರಳ ಗುರುತು ಒಂದೇ ರೀತಿ ಇರುವುದಿಲ್ಲ ನಿಮ್ಮಲ್ಲಿ ಇರುವ ಶ್ರೇಷ್ಠತೆಯನ್ನು ಪ್ರದರ್ಶಿಸಿ ಕೊಳ್ಳಿ ಎಂದು ಹೇಳಿದರು ಇವರು ಹೇಳಿದ ಮಾತು ಅವರ ಮನಸ್ಸಿಗೆ ನಾಟಿತು ನಂತರ ಇತರರು ಜೂನಿಯರ್ ಪಿ ಬಿ ಶ್ರೀನಿವಾಸ್ ಎಂದು ಕರೆಯುವುದನ್ನು ನಿಲ್ಲಿಸಿದರು.
ತಮ್ಮ ಹೆಸರಿನಿಂದಲೇ ಕಾರ್ಯಕ್ರಮಗಳು ಕೊಡಲು ಮುಂದಾದರು ನಂತರ ತಮ್ಮದೇ ಆದ ಒಂದು ಸಂಗೀತ ಶಾಲೆಯನ್ನು ಆರಂಭಿಸಿದರು ಹಲವಾರು ಧ್ವನಿ ಸುರುಳಿಗಳನ್ನು ಹೊರ ತಂದರು ಹೊಸ ಹೊಸ ಪ್ರಯೋಗಗಳನ್ನು ಮಾಡಿದರು.
ಕನ್ನಡ ಸಂಗೀತ ಸಮ್ಮೇಳನಗಳನ್ನು ಸಂಘಟಿಸಿ ನಡೆಸಿಕೊಂಡು ಬಂದರು ನಂತರ ಇವರಿಗೆ ಗಾನರತ್ನ ಹಾಡಿನ ಕೋಗಿಲೆ ಎಂದು ಕರೆಸಿಕೊಂಡರು ಪ್ರತಿಯೊಬ್ಬರಿಗೂ ಒಂದೊಂದು ಕಲೆ ಇದ್ದೇ ಇರುತ್ತದೆ ಅದನ್ನು ಕಂಡು ಹಿಡಿದು ನಮ್ಮದೇ ಆದ ಸಾಧನೆ ಮಾಡೋಣ. ನಾನು ನನ್ನ ವಿಶೇಷತೆಯನ್ನು ಗುರುತಿಸಿಕೊಂಡು ಯಾವ ಸಾಧನೆ ಮಾಡಿದ್ದೇನೆ?
524. ಟೀಕೆ ಮಾಡಿದರೆ
ಒಂದು ಸಾರಿ ನಾಟಕದ ಕಂಪೆನಿಯವರು ಬೇರೆ ಊರಿಗೆ ಯಾವುದೋ ಕೆಲಸಕ್ಕೆ ಹೋಗಿರುತ್ತಾರೆ ಅಲ್ಲಿ ಒಂದು ನಾಟಕ ಪ್ರದರ್ಶನ ವಾಗುತ್ತಿರುತ್ತದೆ ಆ ನಾಟಕ ಹೊಸದಾಗಿ ಅಭಿನಯ ಮಾಡುತ್ತಿರುವ ಕಲಾವಿದರು ನಡೆಸುತ್ತಿರುತ್ತಾರೆ ನಾಟಕ ನೋಡೋಣ ಎಂದು ಎಲ್ಲರೂ ಹೋಗುತ್ತಾರೆ.
ನಾಟಕ ನೋಡಿದರೆ ಹೊಸ ಕಲಾವಿದರು ನಾಟಕದಲ್ಲಿ ಸರಿಯಾಗಿ ನಟನೆ ಮಾಡುತ್ತಿರುವುದಿಲ್ಲ ಅದಕ್ಕೆ ಬೇಸತ್ತು ಹೋಗೋಣವೇ ಎಂದು ಕೇಳಿದರು ಅದರಲ್ಲಿ ಹಿರಿಯರಾದ ಕಲಾವಿದರು ಇಲ್ಲ ಸ್ವಲ್ಪ ಹೊತ್ತು ನೋಡೋಣ ಎಂದು ಹೇಳಿ ಕೊನೆಯವರೆಗೂ ನಾಟಕವನ್ನು ತಾಳ್ಮೆಯಿಂದ ನೋಡಿದರು.
ನಾಟಕ ನೋಡಿ ಬರಬೇಕಾದರೆ ನಮ್ಮ ಸಮಯ ನಷ್ಟವಾಯ್ತು ಏಕೆಂದರೆ ಇಂಥ ಕಳಪೆ ನಾಟಕ ನೋಡಬಾರದು ಎಂದು ಹೇಳಿದರು ಆಗ ನಾಟಕದ ಮುಖ್ಯ ಕಲಾವಿದರು ಹೇಳಿದರು.
ನಾವು ಕಿರಿಯರನ್ನು ಪ್ರೋತ್ಸಾಹಿಸಬೇಕು ಈಗ ಅವರು ತಪ್ಪು ಮಾಡುತ್ತಿದ್ದಾರೆ ಇದು ಸಹಜ ನಾವೇ ಇವರಿಗೆ ಟೀಕೆ ಮಾಡಿದರೆ ಮುಂದೆ ಬೆಳೆಯುವುದಿಲ್ಲ ಇವರನ್ನು ಪ್ರೋತ್ಸಾಹ ಕೊಟ್ಟು ಸರಿಯಾದ ಸಲಹೆ ನೀಡಿದರೆ ಹೊಸ ಕಲಾವಿದರು ಅರ್ಥಮಾಡಿಕೊಂಡು ಮುಂದೆ ಒಳ್ಳೆಯ ಕಲಾವಿದರಾಗುತ್ತಾರೆ ಎಂದು ಹೇಳಿದರು.
ಅನುಭವ ಇಲ್ಲದೆ ಯಾವುದೇ ಕೆಲಸ ಮಾಡಿದರೂ ಎಡವುದು ಸಹಜ ಆದುದರಿಂದ ಅವರನ್ನು ಪ್ರೋತ್ಸಾಹಿಸಿದರೆ ಒಂದಲ್ಲ ಒಂದು ದಿನ ಅವರು ಕೂಡ ಬೆಳೆಯುತ್ತಾರೆ ಇತರರಿಗೂ ಬೆಳೆಯುವುದಕ್ಕೆ ಅವಕಾಶ ಕಲ್ಪಿಸೋಣ.
ತಲೆನೋವು ಹೇಗೆ ಕಡಿಮೆ ಆಯಿತು
ಶಂಸನ್ ವೈದ್ಯರ ಮನೆಗೆ ನೆಂಟರು ಬರುತ್ತಾರೆ ಆಗ ಎಲ್ಲರೂ ಟಿಕೆಟ್ ಪಡೆದು ಸಿನಿಮಾಗೆ ಹೋಗುತ್ತಾರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಸಿನಿಮಾ ಆರಂಭವಾಗಬೇಕು ಆಗ ವೈದ್ಯರನ್ನು ಹಿಂದೆ ಒಬ್ಬ ಸಬಲ್ ವ್ಯಕ್ತಿ ವೈದ್ಯರೇ ನನಗೆ ತುಂಬಾ ತಲೆ ನೋಯುತ್ತಿದೆ ಮಾತ್ರೆ ಕೊಡಿ ಎಂದು ಕೇಳುತ್ತಾನೆ.
ವೈದ್ಯರು ಗಮನಿಸುವುದಿಲ್ಲ ನಂತರ ಹಿಂದೆ ಇರುವ ವ್ಯಕ್ತಿ ಹೆಗಲ ಮೇಲೆ ಕೈ ಹಾಕಿ ಹೇಳುತ್ತಾನೆ ಆಗ ವೈದ್ಯರು ಹಿಂತಿರುಗಿ ನೋಡಿದಾಗ ಇವರ ಹಳೆಯ ರೋಗಿ (ಪೇಷಂಟ್) ಆಗಿರುತ್ತಾನೆ ಆಗ ವೈದ್ಯರು ಏನು ಮಾಡಬಹುದು ಎಂದು ಯೋಚನೆ ಮಾಡುತ್ತಾರೆ.
ತಕ್ಷಣ ವೈದ್ಯರು ಈಗ ನಾನು ನಿನಗೆ ಒಂದು ಮಾತ್ರೆಯನ್ನು ಕೊಡುತ್ತೇನೆ ಆದರೆ ಆ ಮಾತ್ರೆಯನ್ನು ನೀನು ನುಂಗಬಾರದು ಬರಿ ಚೀಪಬೇಕು ನಂತರ ಕಸದ ಬುಟ್ಟಿಗೆ ಉಗಿಯಬೇಕು ಎಂದು ಹೇಳಿ ತಮ್ಮ ಶರ್ಟಿನ ಒಂದು (ಬಟನ್) ಗುಂಡಿಯನ್ನು ಕಿತ್ತು ಕೊಡುತ್ತಾರೆ ಸಿನಿಮಾ ಮುಗಿಯುತ್ತದೆ.
ನಂತರ ಈಚೆ ಬಂದಾಗ ಆ ಪೇಷಂಟ್ ನ ನೆನಪಾಗುತ್ತದೆ ಮತ್ತೆ ಪಕ್ಕದಲ್ಲಿ ಬಂದಿರುವ ನೆಂಟರು ಕೇಳುತ್ತಾರೆ ಅದು ಸರಿ ನೀವು ಅವನಿಗೆ ಯಾವ ಮಾತ್ರೆ ಕೊಟ್ಟಿರಿ ಎಂದು ಕೇಳಿದಾಗ ವೈದ್ಯರು ನಗುತ್ತಾ ಹೇಳುತ್ತಾರೆ.
ನಾನು ಸಿನಿಮಾಗೆ ಬಂದಿದ್ದೆ ನಾನು ಯಾವುದೇ ರೀತಿಯ ಮಾತ್ರೆ ತಂದಿರಲಿಲ್ಲ ಆದರೆ ನಾನು ಒಂದು ಉಪಾಯ ಮಾಡಿ ಶರ್ಟಿನ ಒಂದು ಬಟನ್ ಅನ್ನು ಕೊಟ್ಟೆ ಇದನ್ನು ಚೀಪು ಎಂದು ಹೇಳಿದೆ
ಆದ್ದರಿಂದ ಅವನಿಗೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ ತಲೆನೋವು ಹೇಗೆ ಕಡಿಮೆ ಆಯಿತು ಎಂದರೆ ವೈದ್ಯರ ಮೇಲೆ ಇರುವ ನಂಬಿಕೆ ವಿಶ್ವಾಸದಿಂದಾಗಿ ಕಡಿಮೆ ಆಗಿದೆ. ಅಚಲವಾಗಿ ನಂಬಿದಾಗ ಸಕಲವು ಸಾಧ್ಯವಿದೆ.