ಒಂದು ಊರಿನಲ್ಲಿ ಒಬ್ಬ ಬಹದ್ದೂರ್ ಆಕ್ರಾಂತ್ ರಾಜ ಇದ್ದನು ರಾಜನ ಬಳಿ ಒಳ್ಳೆಯ ಸೈನ್ಯ ಇತ್ತು ಅದರಲ್ಲಿ ಒಂದು ಆಕರ್ಷಕ ಬಿಳಿ ಕುದುರೆಯೂ ಇತ್ತು ಕಾರಣ ಗೊತ್ತಿಲ್ಲ ಆ ಕುದುರೆಯು ಒಂದು ವಾರವಾದರೂ ಎದ್ದು ನಿಲ್ಲುತ್ತಲೇ ಇಲ್ಲ ಕಷ್ಟಪಟ್ಟು ನಿಲ್ಲಿಸಿದರೂ ಕೂಡ 3 ಕಾಲುಗಳಲ್ಲಿ ಮಾತ್ರ ನಿಲ್ಲುತ್ತಿದೆ.
ಒಂದು ಕಾಲನ್ನು ಭೂಮಿಯ ಮೇಲೆ ಇಡುವುದೇ ಇಲ್ಲ ಕುಸಿದು ಬೀಳುತ್ತಿತ್ತು ಆಗ ರಾಜನು ಕುದುರೆಯ ಚಿಂತೆಯಲ್ಲಿ ಮುಳುಗಿದನು ಮತ್ತೆ ಕುದುರೆ ನೋಡಿಕೊಳ್ಳುವವನು ಕರೆದನು ಈ ಕುದುರೆ ಹೀಗೆ ಇರಲು ಕಾರಣವೇನು? ಎಂದು ವಿಚಾರಿಸಿದನು ಕುದುರೆ ನೋಡಿಕೊಳ್ಳುವವನಿಗೂ ತಿಳಿಯಲಿಲ್ಲ ನಂತರ ಊರಿನ ಆಚೆ ಬಾಬಾ ಅವರು ಇದ್ದರು ಬಾಬಾ ಅವರಿಗೆ ಈ ವಿಷಯವನ್ನು ತಿಳಿಸಿದಾಗ ಬಾಬಾ ಅವರು ಬಂದರು.
ಕುದುರೆಯನ್ನು ನೋಡಿದ ತಕ್ಷಣ ಅವರಿಗೆ ಅರಿವಾಯ್ತು. ಏನಾಗಿದೆಯೆಂದು ಸೂಕ್ಷ್ಮವಾಗಿ ಗಮನಿಸಿದರು ನಂತರ ಈ ಕುದುರೆಯನ್ನು ಒಂದು ದೊಡ್ಡ ಮೈದಾನಕ್ಕೆ ಕರೆದುಕೊಂಡು ಹೋದರು ನಂತರ ಮೂವತ್ತು ಗುಂಪು ಇರುವ ಕುದುರೆಗಳನ್ನು ನಿಲ್ಲಿಸಿದರು ಇದಕ್ಕೂ ಆ ಸಾಲಿನಲ್ಲಿ ನಿಂತುಕೊಳ್ಳುವಂತೆ ಹೇಳಿದರು.
ಈ ಕುದುರೆ ಕುಸಿದು ಬಿದ್ದಿತು ನಂತರ ಜೋರಾಗಿ ನಗಾರಿ ಶಬ್ದವನ್ನು ಬಾರಿಸಲಾಯಿತು ಮತ್ತೆ ತೋಪುಗಳು ಫಿರಂಗಿಗಳಿಂದ ಜೋರಾದ ಶಬ್ದವನ್ನು ಮಾಡಿದರು ಈ ಶಬ್ದವನ್ನು ಕೇಳಿದ ತಕ್ಷಣ ಎಲ್ಲಾ ಕುದುರೆಗಳುಓಡಿದವು ಆದರೆ ಈ ಕುದುರೆ ಮಾತ್ರ ಎಲ್ಲರಿಗಿಂತ ಮುಂದೆ ಬಂದಿತು.
ಕುದುರೆ ಕುಂಟುತ್ತಿರಲಿಲ್ಲ ಮತ್ತೆ ಎಲ್ಲಾ ಕುದುರೆಗಳಿಗಿಂತ ಮುಂಚೆ ಇದೇ ಕುದುರೆ ಇತ್ತು ಇದನ್ನು ಕಂಡ ರಾಜನಿಗೆ ಬಹಳ ಸಂತೋಷವಾಯ್ತು ಕುದುರೆ ಈ ರೀತಿ ಮಾಡಲು ಕಾರಣವೇನು ಎಂದಾಗ ಬಾಬಾ ಅವರು ವಿವರಿಸಿದರು.
ಕುದುರೆ ಯಾವುದೋ ಕನಸು ಕಂಡಿರಬೇಕು ಅಥವಾ ನನಗೆ ಒಡಲು ಸಾಮರ್ಥ್ಯವಿಲ್ಲ ಎಂದು ತಿಳಿದಿತ್ತು ಯಾವಾಗ ನಾವು ನಗಾರಿಯನ್ನು ಬಾರಿಸಲಾಯಿತು ಆಗ ಅದು ಮರೆತು ಓಡಲಾರಂಭಿಸಿತು ಎಂದರು.
ಯಾವುದೋ ಕಾರಣಕ್ಕೆ ಹೆದರಿಕೆಯಿಂದ ಇರುತ್ತೇವೆ ಆಗ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಹೆದರಿಕೆಯನ್ನು ಮೆಟ್ಟಿನಿಂತಾಗ ಏನು ಬೇಕಾದರೂ ಮಾಡಬಹುದು ಎಂದು ಹೇಳಿದರು. ನಾವು ಕೂಡ ಕೆಲವುಗಳಲ್ಲಿ ಹೆದರಿಕೊಂಡು ಇರುತ್ತೇವೆ ಅದನ್ನು ಮೆಟ್ಟಿ ನಿಂತಾಗ ಮಾತ್ರ ನಾವು ಗೆಲ್ಲಬಹುದು. ನಾನು ಹೆದರಿಕೆಯನ್ನು ಹಿಮ್ಮೆಟ್ಟಿಸಿ ಯಾವ ಸಾಧನೆ ಮಾಡಿದ್ದೇನೆ?
ನಾನೇ ಸರಿಯಾಗಿ ನಡೆಯುತ್ತಿಲ್ಲ
ಏಡಿಯು ನಡೆಯಬೇಕಾದರೆ ದೇಹದ ಅರ್ಧಭಾಗ. ಒಂದು ಕಡೆ ಬಗ್ಗಿದಂತೆ ನಡೆಯುತ್ತದೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ನೋಡಬಹುದಾಗಿದೆ ಚಿಕ್ಕ ಚಿಕ್ಕ ಏಡಿಗಳು ಎಲ್ಲವೂ ಸೇರಿ ಆಟ ಆಡುತ್ತಿರುತ್ತವೆ ತಂದೆ ಏಡಿಯು ನೋಡಿ ಖುಷಿಪಡುತ್ತದೆ ಆಟ ಮುಗಿದ ಮೇಲೆ ಎಲ್ಲಾ ಚಿಕ್ಕ ಏಡಿಗಳು ಹೋದ ಮೇಲೆ ನಿಧಾನವಾಗಿ ತಂದೆ ಏಡಿ ಹೋಗುತ್ತಿರುತ್ತದೆ.
ಸ್ವಲ್ಪ ಇಕ್ಕಟ್ಟಾದ ಮಾರ್ಗ ಬರುತ್ತದೆ ಆಗ ಏಡಿಯು ಒಂದು ಕಡೆ ಬಗ್ಗಿದಂತೆ ನಡೆಯುತ್ತದೆ ನಂತರವೂ ಹಾಗೆ ನಡೆಯುತ್ತದೆ ಆಗ ತಂದೆ ಏಡಿಯು ನೀನು ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳುತ್ತದೆ ಮರಿಏಡಿಯು ಹೇಗೆ ನಡೆಯಬೇಕೆಂದು ನಡೆದು ತೋರಿಸಿ ಅದೇ ರೀತಿ ನಾನು ನಡೆಯುತ್ತೇನೆ ಎಂದು ವಿನಂತಿಸಿಕೊಳ್ಳುತ್ತದೆ.
ತಂದೆ ಏಡಿಯೂ ಅರ್ಧ ಬಗ್ಗಿದಂತೆಯೇ ನಡೆಯುತ್ತದೆ ಆಗ ಮರಿಏಡಿಯು ನೀವು ಹೇಗೆ ನಡೆಯುತ್ತಿದ್ದೀರೋ ಅದೇ ರೀತಿ ನಾನು ನಡೆಯುತ್ತಿದ್ದೇವೆ ಎಂದು ಹೇಳುತ್ತದೆ ತಂದೆ ಏಡಿಯೂ ತನ್ನನ್ನು ತಾನು ಸೂಕ್ಷ್ಮವಾಗಿ ಗಮನಿಸುತ್ತದೆ ನಂತರ ತಂದೆ ಏಡಿಗೆ ನಾನೇ ಸರಿಯಾಗಿ ನಡೆಯುತ್ತಿಲ್ಲ ಎಂದು ಅರ್ಥವಾಗುತ್ತದೆ.
ಯಾವುದರಲ್ಲಿ ಸಂತೋಷವಿದೆ?
ಹಲವಾರು ದಿನಗಳ ನಂತರ ನಾವು ಗೆಳೆಯರೆಲ್ಲರೂ ಸೇರಿದವು ಆಗ ಮಾತಾಡುತ್ತಿದ್ದಂತೆಯೇ ಒಬ್ಬ ಸ್ನೇಹಿತ ಹೇಳಿದ ನೋಡಿ ನಾನು ತುಂಬ ಚೆನ್ನಾಗಿ ಹಣವನ್ನು ಗಳಿಸಿದ್ದೇನೆ ಇದರಿಂದ ನಾನು ತುಂಬಾ ಸಂತೋಷವಾಗಿದ್ದೀನೆ ನೀವುಗಳೆಲ್ಲ ಅಷ್ಟು ಹಣಗಳಿಸಿಲ್ಲ ಎಂದು ಹೇಳಿದನು.
ಇದಕ್ಕೆ ಏನು ಹೇಳಬೇಕು ಎಂದು ನಾನು ಯೋಚಿಸುತ್ತಿದ್ದೆ ಅಷ್ಟರಲ್ಲಿ ನನ್ನ ಸ್ನೇಹಿತನ ಹೇಳಿದ ನೀನು ಹೆಚ್ಚಿನ ಹಣವನ್ನು ಗಳಿಸಿದ್ದೀಯಾ ನಾನು ಹೆಚ್ಚಿನ ಸ್ನೇಹಿತರನ್ನು ಮನುಷ್ಯರನ್ನು ಗಳಿಸಿದ್ದೇನೆ ಇದರಲ್ಲಿಯೇ ನಮಗೆ ತುಂಬಾ ತೃಪ್ತಿ ಇದೆ ಎಂದು ಹೇಳಿದನು. ಸಂತೋಷಕ್ಕೆ ಹಲವಾರು ಮಾರ್ಗಗಳಿವೆ:-ಹಣ ಗಳಿಸುವುದರಿಂದ, ಕುಟುಂಬದೊಂದಿಗೆ ಬೆರೆತು ಚರ್ಚೆ ಮಾಡುವುದರಿಂದ,
ಸ್ನೇಹಿತರೊಂದಿಗೆ ಸೇರಿ ಕಾಲ ಕಳೆಯುತ್ತಿದ್ದಾಗ, ಪ್ರೇಯಸಿಯ ಜೊತೆ ಸುತ್ತಾಡುವುದರಿಂದ.
ಮಕ್ಕಳೊಂದಿಗೆ ಆಟ ಆಡುತ್ತಾ, ದಿನನಿತ್ಯ ವ್ಯಾಯಾಮ ಮಾಡುವುದರಿಂದ, ನನಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣಗೊಳಿಸುವುದರಿಂದ, ಕೆಲಸವನ್ನು ಇಷ್ಟಪಟ್ಟು ಮಾಡುವುದರಿಂದ, ಮುಂದಿನ ಭವಿಷ್ಯದ ಸಿದ್ಧತೆಗಾಗಿ ಆಲೋಚಿಸುತ್ತಿದ್ದಾಗ, ಪ್ರಕೃತಿ ಸೌಂದರ್ಯವನ್ನು ಆನಂದಿಸುವುದರಿಂದ, ಪ್ರವಾಸಗಳಿಗೆ ಭೇಟಿ ನೀಡುವುದರಿಂದ, ಇತರರಿಗೆ ಸಹಾಯ ಮಾಡುವುದರಿಂದ, ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವುದರಿಂದ, ನಾನು ಕಲಿತಿದ್ದು ಇತರರಿಗೆ ಕಲಿಸುವುದರಿಂದ,ಹೊಸ ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ರುಚಿ ರುಚಿಯಾದ ತಿಂಡಿ ತಿನಿಸು ಆಹಾರಗಳನ್ನು ತಿನ್ನುವುದರಿಂದ, ಬಹುಮಾನ ಸಿಕ್ಕಿದಾಗ, ಇತರರು ಗೌರವಿಸಿದಾಗ, ಪ್ರಶಸ್ತಿ ಸಿಕ್ಕಿದಾಗ, ಸಮಾಜ ಸೇವೆ ಮಾಡಿದಾಗ, ಪ್ರಾರ್ಥನೆ ಮಾಡುತ್ತಿದ್ದಾಗ, ಸಂತೋಷವೆನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನನಗೆ ಯಾವುದರಲ್ಲಿ ಸಂತೋಷವಿದೆ?
ಸುಲಭ ಪರಿಹಾರ
ನಯಾಗರದ ತೂಗು ಸೇತುವೆ ಅತ್ಯಂತ ವಿಸ್ಮಯವಾದುದು ಸೇತುವೆ ಹೇಗೆ ಕಟ್ಟಿದ್ದಾರೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ ಕೆನಡಾ ಮತ್ತು ಅಮೆರಿಕಾ ದೇಶಗಳಿಗೆ ಮಧ್ಯೆ ಇರುವ ಎರಡೂ ದೇಶಗಳಿಗೂ ಒಂದು ನದಿ ಸಾಗಿದೆ ಅದೇ ನಯಾಗರ ಅದು ತುಂಬಾ ದೊಡ್ಡ ಜಲಪಾತ ಈ ಜಲಪಾತ ಮಾತ್ರ ಎರಡೂ ದೇಶಗಳಿಗೆ ಸೇರಿದೆ.
ಅಮೇರಿಕಾ ಮತ್ತು ಕೆನಡಾದ ಪ್ರವಾಸಿಗಳು ವ್ಯಾಪಾರಿಗಳು ರೈತರು ನಯಾಗರ ನದಿಯ ಮೇಲೆ ಒಂದು ಸೇತುವೆ ಇದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಕನಸು ಕಂಡರು.
ಸುತ್ತಿ ಬಳಸಿ ಹೋಗುವುದಕ್ಕಿಂತ ನೇರವಾಗಿ ಹೋಗಬಹುದು ಎಲ್ಲರಿಗೂ ಸುಲಭವಾಗುತ್ತದೆ ಎಂದು ಯೋಚಿಸುತ್ತಿದ್ದರು ಆದರೆ ಸೇತುವೆ ನಿರ್ಮಿಸುವುದು ಮಾತ್ರ ತುಂಬ ಕಷ್ಟದ ಕೆಲಸ ಏಕೆಂದರೆ ಈ ನದಿಗೆ ಒಂದು ವ್ಯವಸ್ಥಿತ ದಡ ಎನ್ನುವುದೇ ಇಲ್ಲ ಬಂಡೆಗಳು ಇರುವಂತಹ ಪ್ರಪಾತ ಈ ದಡದಿಂದ ಆ ದಡಕ್ಕೆ ಹಗ್ಗ ಕಟ್ಟುವುದಕ್ಕೂ ಸಾಧ್ಯವಿರಲಿಲ್ಲ.
ಹಗ್ಗವೇ ಕಟ್ಟಲಿಕ್ಕೆ ಸಾಧ್ಯವಿಲ್ಲ ಎಂದರೆ ಸೇತುವೆ ಹೇಗೆ ಕಟ್ಟುವುದು ಆಗ ಎಲಿಯೇಟ್ ಎಂಬ ಇಂಜಿನಿಯರ್ ಸೇತುವೆ ನಿರ್ಮಿಸಿ ತೋರಿಸಬೇಕೆಂದು ಯೋಚಿಸಿದನು ಆದರೆ ನಿರ್ಮಿಸುವುದು ಹೇಗೆ ಇದು ತುಂಬಾ ದೊಡ್ಡ ಸಮಸ್ಯೆಯಾಯಿತು ಎಲಿಯೇಟ್ ಗೆ ಸವಾಲಾಯಿತು.
ಸೇತುವೆಯನ್ನು ನಿರ್ಮಾಣ ಮಾಡುವ ಯೋಚನೆಯಲ್ಲಿ ಕೆಲವು ದಿನ ಕಳೆದ ನಂತರ ಅವನಿಗೆ ಒಂದು ಯೋಚನೆ ಬಂತು ಎಲಿಯೇಟ್ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸಿದನು ಈ ತುದಿಯಿಂದ ಆ ತುದಿಯವರೆಗೂ ಯಾರೂ ಗಾಳಿಪಟ ಹಾರಿಸುತ್ತಾರೆ ಅವನಿಗೆ ಬಹುಮಾನವನ್ನು ಕೊಡುತ್ತೇನೆ ಎಂದು ಪ್ರಕಟಣೆ ಪ್ರಕಟಿಸಿದನು.
ಪ್ರಕಟಣೆಯನ್ನು ಓದಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಗಾಳಿಪಟ ಹಾರಿಸಿದರು ಆ ದೃಶ್ಯ ಮನೋಹಕರವಾಗಿ ಕಂಡಿತು ಏಕೆಂದರೆ ಬಣ್ಣಬಣ್ಣದ ಪಟಗಳು ಹಾರಾಡುತ್ತಿವೆ ಆದರೆ ಒಂದು ಪಟ ಕೂಡ ಆ ದಡಕ್ಕೆ ಸೇರಲಿಲ್ಲ ಅದರಲ್ಲಿ ಒಬ್ಬ ಹನ್ನೊಂದು ವರ್ಷದ ಹುಡುಗ ಇವನು ಒಳ್ಳೆಯ ಬುದ್ಧಿವಂತ ಆದರೆ ಅವನು ಎಲ್ಲಾ ಗಾಳಿ ಪಟವನ್ನು ಗಮನಿಸಿದನು ಒಂದು ವಿಶೇಷವಾದಪಟ ತಯಾರಿಸಿಕೊಂಡನು.
ಬುದ್ಧಿವಂತ ಹುಡುಗ ಜೋರಾಗಿ ಗಾಳಿ ಯಾವಾಗ ಬರುತ್ತದೆ ಎಂದು ಕಾದನು ಒಂದು ಸಾರಿ ಈ ಕಡೆಯಿಂದ ಗಾಳಿ ತೀವ್ರ ಜೋರಾಗಿ ಬಂತು ಆಗ ತಾನು ತಯಾರು ಮಾಡಿ ಇಟ್ಟಿದ್ದ ಪಟವನ್ನು ಹಾರಿಸಿದನು ಅದು ಹಾರಿ ಸರಿಯಾಗಿ ಆ ದಡಕ್ಕೆ ತಲುಪಿತು ಆಗ ಎಲ್ಲರೂ ಸಂತೋಷಪಟ್ಟರು ಎಲಿಯಟ್ ಗೆ ರೋಮಾಂಚನವಾಯಿತು.
ಎಲಿಯೇಟ್ ಅಲ್ಲಿಯ ಒಂದು ಮರಕ್ಕೆ ಆ ಪಟದ ದಾರವನ್ನು ಕಟ್ಟಿದನು ನಂತರ ಆ ಸಣ್ಣ ದಾರಕ್ಕೆ ಸ್ವಲ್ಪ ದಪ್ಪನಾದ ದಾರವನ್ನು ಕಟ್ಟಿ ಆ ತುದಿಗೆ ಎಳೆದುಕೊಂಡನು ನಂತರ ಇನ್ನಷ್ಟು ದಪ್ಪವಾದ ದಾರವನ್ನು ಕಟ್ಟಿ ಎಳೆದನು ನಂತರ ಕಬ್ಬಿಣದ ತೆಳುವಾದ ತಂತಿಯನ್ನು ಎಳೆದನು.
ನಂತರ ದಪ್ಪವಾದ ಹಗ್ಗ ಹಾಗೂ ಕಬ್ಬಿಣದ ಹಗ್ಗಗಳನ್ನು ಎಳಸಿದನು ನಂತರ ಇತರ ಯಂತ್ರಗಳನ್ನು ಬಳಸಿ ಕಬ್ಬಿಣದ ಹಗ್ಗದ ಮೇಲೆ ಕಟ್ಟಲಿಕ್ಕೆ ಏನೇನು ಬೇಕೋ ಅದನ್ನು ಬುಟ್ಟಿಯಲ್ಲಿ ಹಾಕಿ ಈ ಕಡೆಯಿಂದ ಆ ಕಡೆಗೆ ಹೋಗುವಂತೆ ಮಾಡಿದನು.
ಕಬ್ಬಿಣದ ಹಗ್ಗಗಳಿಂದ ತೂಗು ಸೇತುವೆಯನ್ನು ನಿರ್ಮಿಸಿದನು ಅದು ಇಂದಿಗೂ ವಿಸ್ಮಯವಾಗಿ ಕಾಣುತ್ತದೆ. ಕೆಲವು ಸಾರಿ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎನ್ನುತ್ತವೆ ಆದರೆ ಅಷ್ಟು ದೊಡ್ಡ ಸೇತುವೆ ಕಟ್ಟಲು ಗಾಳಿ ಪಟದ ದಾರವೇ ಪರಿಹಾರ ನೀಡಿತು. ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದೆ ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಗುತ್ತದೆ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಜ್ಜಾಗೋಣ.
ಇಲಿಯನ್ನು ಬಿಟ್ಟಿತು
ಒಂದು ಪಕ್ಷಿಯು ತನ್ನ ಕಾಲಿನಲ್ಲಿ ಒಂದು ಇಲಿಯನ್ನು ಹಿಡಿದು ಕೊಂಡು ಹಾರುತ್ತಿತ್ತು ಇಲಿಗಾಗಿ ಒಂದು ದೊಡ್ಡ ಹದ್ದು ಬೆನ್ನಟ್ಟಿ ಬರುತ್ತಿತ್ತು ಪಕ್ಷಿಯು ತಾನು ಇನ್ನೂ ವೇಗದಿಂದ ಹಾರಿತು ಆದರೆ ಅದರ ಹಿಂದೆ ಹದ್ದು ಇನ್ನೂ ವೇಗವಾಗಿ ಹಿಂಬಾಲಿಸುತ್ತಿತ್ತು.
ಕೊನೆಗೆ ಆ ಪಕ್ಷಿಯು ತನ್ನ ಕಾಲಿನಲ್ಲಿರುವ ಇಲಿಯನ್ನು ಬಿಟ್ಟಿತು ಆಗ ಹದ್ದು ಪಕ್ಷಿಯನ್ನು ಬಿಟ್ಟು ಬಿದ್ದ ಇಲಿಯ ಕಡೆಗೆ ಗಮನ ಹರಿಸಿತು ಪಕ್ಷಿಯು ಹದ್ದಿನಿಂದ ಬಿಡುಗಡೆ ಹೊಂದಿತು ಹೀಗೆಯೇ ನಮ್ಮ ಬದುಕಿನಲ್ಲಿ ನಾವು ಕೆಲವು ಪರಿಸ್ಥಿತಿಗಳಲ್ಲಿ ಎಷ್ಟು ಗಟ್ಟಿಯಾಗಿ ಸಿಕ್ಕಿ ಹಾಕಿಕೊಂಡಿರುತ್ತೇವೆ ಎಂದರೆ ಆ ವಿಷಯ ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ.
ನಾವು ಕೆಲವೊಂದು ಹವ್ಯಾಸ ಚಟ ಬಿಡುವುದೇ ಇಲ್ಲ ಇಂತಹ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವೇ ಏನನ್ನು ಬಿಟ್ಟರೆ ನಾವು ಮುಂದುವರಿಯುತ್ತೇವೆ ಎನ್ನುವುದನ್ನು ನಾವೇ ಸ್ವಯಂ ವಿಶ್ಲೇಷಣೆ ಮಾಡಿಕೊಳ್ಳೋಣ. ನಾನು ಏನು ಬಿಟ್ಟರೆ ಸಂತೋಷವಾಗಿರುತ್ತೇನೆ?