ಒಂದು ಸಾರಿ ಎಲ್ಲ ನಾಯಿಗಳನ್ನು ಸಭೆ ಸೇರಿದವು ನಮ್ಮಲ್ಲಿ ಎಲ್ಲಾ ಒಳ್ಳೆಯ ಗುಣಗಳು ಇವೆ ಆದುದರಿಂದ ಮನುಷ್ಯರು ನಮಗೆ ಹೆಚ್ಚು ಪ್ರೀತಿಸುತ್ತಾರೆ ನಮ್ಮ 2 ಗುಣಗಳಿಗೆ ಯಾರೂ ಇಷ್ಟಪಡುತ್ತಿಲ್ಲ.
ಮೊದಲನೇ ಗುಣ ದಾರಿಯಲ್ಲಿ ಹೊಸ ವಾಹನ ಹೋದರೂ ಬೊಗಳಿಕೊಂಡು ಅದರ ಹಿಂದೆ ಹೋಗುವುದು ಎರಡನೆಯದು ಸುಮ್ಮನೆ ಸುಮ್ಮನೆ ಬೊಗಳುವುದು ಈ ಗುಣಗಳು ತೆಗೆದುಬಿಟ್ಟರೆ ನಮ್ಮ ಗೌರವ ಹೆಚ್ಚುತ್ತದೆ ಎಂದು ಹೇಳಿದವು ಎಲ್ಲಾ ನಾಯಿಗಳು ಇನ್ನು ಮುಂದೆ ಬೊಗಳಬಾರದು ಎಂದು ಪ್ರಮಾಣ ಮಾಡಿದವು ಅದಕ್ಕೆ ಎಲ್ಲಾ ನಾಯಿಗಳು ಒಪ್ಪಿದವು.
ಸ್ವಲ್ಪ ಸಮಯ ಕಳೆಯಿತು ಆದರೆ ನಾಯಿಗಳಿಗೆ ಏನೋ ಒಂದು ರೀತಿಯ ಕೆರೆತ ಶುರುವಾಯ್ತು ಆದರೆ ಇದು ಎಲ್ಲಾ ನಾಯಿಗಳ ಆಜ್ಞೆ ಆದುದರಿಂದ ಪಾಲನೆ ಮಾಡಿದರು ಕೆರೆತ ಎಷ್ಟು ಆಗಿದೆಯೆಂದರೆ ಬೊಗಳದೆ ಇರಲು ಸಾಧ್ಯವೇ ಆಗುತ್ತಿಲ್ಲ ಸಂಕಟವಾಗುತ್ತಿದೆ ತುಂಬಾ ಚಿಂತೆಯಾಗುತ್ತಿದೆ.
ಎಲ್ಲಾ ನಾಯಿಗಳಲ್ಲಿ ಒಂದು ನಾಯಿಗೆ ಏನೇ ಮಾಡಿದರೂ ನಾಯಿಗೆ ತಡೆ ಹಿಡಿಯುವ ಶಕ್ತಿ ಇರಲಿಲ್ಲ ಆದುದರಿಂದ ದೂರ ಹೋಗಿ ಯಾರಿಗೂ ಕಾಣದಂತೆ ಬೊಗಳಿತು ನಂತರ ಇತರ ನಾಯಿಗಳು ಬೊಗಳಲು ಶುರು ಮಾಡಿದವು ನಂತರ ಮತ್ತೆ ಮೊದಲ ಸ್ಥಿತಿಯಲ್ಲೇ ಬದುಕಿದವು.
ಕೆಲವರು ಇನ್ನೊಬ್ಬರು ತಪ್ಪು ಮಾಡಲಿ ಎಂದು ಕಾಯುತ್ತಿರುತ್ತಾರೆ ಒಬ್ಬರು ತಪ್ಪು ಮಾಡಿದರೆ ಸಾಕು ಇನ್ನೆಲ್ಲರೂ ತಪ್ಪನ್ನು ಮಾಡಲು ಶುರು ಮಾಡುತ್ತಾರೆ.
ತೋರಿಕೆಯ ಪ್ರಾರ್ಥನೆ
ಒಂದು ಕಾಡಿನಲ್ಲಿ ಕುತಂತ್ರ ಬೆಕ್ಕು ವಾಸವಾಗಿತ್ತು ಒಂದು ಸಾರಿ ಕಾಡಿನಲ್ಲಿ ಬೆಂಕಿ ಬಿದ್ದಾಗ ಬೆಕ್ಕು ಸಿಕ್ಕಿಕೊಂಡಿತ್ತು ಬೆಂಕಿಯಿಂದ ಹೇಗೋ ಪಾರಾಗಬೇಕೆಂದು ಕಷ್ಟಪಟ್ಟು ಪಾರಾಯಿತು ಆದರೆ ಮೈಮೇಲೆ ಇರುವ ಕೂದಲುಗಳು ಸ್ವಲ್ಪ ಸುಟ್ಟು ಹೋಯ್ತು ನಂತರ ಹೇಗೋ ಬದುಕಿ ಉಳಿಯಿತು.
ನೀರು ಕುಡಿಯಲು ಬಾವಿಗೆ ಹೋದಾಗ ನೀರಿನಲ್ಲಿ ತನ್ನ ಪ್ರತಿಬಿಂಬ ನೋಡಿ ಗಾಬರಿಯಾಯಿತು ಏಕೆಂದರೆ ಇದು ವಿಚಿತ್ರ ಪ್ರಾಣಿಯಂತೆ ಕಾಣುತ್ತಿತ್ತು ಆದರೆ ಬೆಕ್ಕಿನ ಕುತಂತ್ರ ಬುದ್ಧಿ ಮಾತ್ರ ಬಿಡಲಿಲ್ಲ ಹೊಸ ಒಂದು ಕುತಂತ್ರ ಯೋಜನೆ ಮಾಡಿತು.
ಸೂರ್ಯನ ಕಡೆ ತಿರುಗಿ ಒಂದೇ ಕಾಲಿನ ಮೇಲೆ ನಿಂತು ತೋರಿಕೆಯ ಪ್ರಾರ್ಥನೆ ಮಾಡುತ್ತಿತ್ತು ಇಲಿಗಳ ರಾಜ ಬಂದು ನೋಡಿತು ಮತ್ತೆ ಕೇಳಿತು ನೀವು ಯಾರು? ಮತ್ತೆ ನೀವೇಕೆ ಒಂದೇ ಕಾಲಿನಲ್ಲಿ ನಿಂತುಕೊಂಡಿದ್ದೀರಿ? ಆಗ ಬೆಕ್ಕು ವೇದಾಂತದ ಮಾತುಗಳು ಹೇಳಲು ಶುರುಮಾಡಿತು.
ನಾನು ಸೂರ್ಯನ ಕಡೆ ತಿರುಗಿ ಪ್ರಾರ್ಥನೆ ಮಾಡುತ್ತೇನೆ ನಾನು ಏನೂ ತಿನ್ನುವುದಿಲ್ಲ ಗಾಳಿ ಮಾತ್ರ ಕುಡಿಯುತ್ತೇನೆ ಇಷ್ಟು ಹೇಳಿದ ಮೇಲೆ ಇಲಿಗಳ ರಾಜನಿಗೆ ನಂಬಿಕೆ ಬಂತು ಆದುದರಿಂದ ಇಲಿಗಳ ರಾಜ ಎಲ್ಲಾ ಇಲಿಗಳಿಗೂ ಇವರ ದರ್ಶನ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದನು.
ಎಲ್ಲಾ ಇಲಿಗಳು ಬೆಕ್ಕಿನ ದರ್ಶನಕ್ಕೆ ಬಂದು ಹೋಗುತ್ತಿದ್ದವು ಆದರೆ ಬೆಕ್ಕು ಮಾತ್ರ ಕೊನೆಯಲ್ಲಿ ಹೋಗುತ್ತಿದ್ದ ಇಲಿಯನ್ನು ತಿಂದು ಹಾಕುತ್ತಿತ್ತು ಸಮಯ ಕಳೆದಂತೆ ಇಲಿಗಳ ಸಂಖ್ಯೆ ಕಡಮೆಯಾಗುತ್ತಾ ಬಂತು.
ಇಲಿಗಳ ರಾಜನಿಗೆ ಬೆಕ್ಕಿನ ಮೇಲೆ ಸಂದೇಹ ಬಂತು ಅದಕ್ಕಾಗಿ ಆ ಪ್ರಾಣಿ ಏನು ಮಾಡುತ್ತಿರಬಹುದು ಎಂದು ಗಮನಿಸಿದನು ಕೊನೆಯ ಇಲಿಯನ್ನು ತಿಂದು ಹಾಕುತ್ತಿತ್ತು ಇದನ್ನು ಗಮನಿಸಿದ ಇಲ್ಲಿಯ ರಾಜ ನಂತರ ಎಲ್ಲಾ ಇಲಿಗಳನ್ನು ಸೇರಿಸಿಕೊಂಡು.
ಬೆಕ್ಕು ಸದಾ ಮರದ ಕೆಳಗೆ ಕುಳಿತಿರುತ್ತದೆ ಅದಕ್ಕಾಗಿ ಸರಿಯಾದ ಕೊಂಬೆಯನ್ನು ಆಯ್ಕೆ ಮಾಡಿಕೊಂಡು ಕೊಂಬೆಯನ್ನು ಕೊರೆಯುತ್ತಾ ಬಂದವು ಬೆಕ್ಕಿನ ಮೇಲೆ ಬೀಳುವಂತೆ ಮಾಡಿದವು ನಂತರ ಬೆಕ್ಕು ಸತ್ತಿತು ಇಂದಿಗೂ ಕೆಲವರು ಮೋಸ ಮಾಡುವ ಜನರೂ ಇದ್ದಾರೆ ಆದರೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ ಆಪ್ತರಂತೆ ವರ್ತಿಸುತ್ತಾರೆ ಆದುದರಿಂದ ಜಾಗೃತೆಯಿಂದ ಇರೋಣ.
ನನಗಿಂತ ದೊಡ್ಡ ಬೆಳಕು ಇದೆ
ಒಂದು ಊರಿನಲ್ಲಿ ಒಂದು ಹೊಸ ಮನೆ ಕಟ್ಟುತ್ತಾರೆ ಆ ಮನೆಯ ಗೃಹಪ್ರವೇಶಕ್ಕಾಗಿ ಒಂದು ಹೊಸ ದೀಪವನ್ನು ತರುತ್ತಾರೆ ಸಂಜೆಯಾದ ನಂತರ ಮನೆಯ ಜಗಲಿಯ ಮೇಲೆ ಇಟ್ಟು ದೀಪವನ್ನು ಹಚ್ಚುತ್ತಾರೆ ಹೊಸ ದೀಪಕ್ಕೆ ಚೆನ್ನಾಗಿರುವ ಬತ್ತಿಯನ್ನು ಹಾಕಿ ಹೆಚ್ಚು ಎಣ್ಣೆ ಹಾಕಿರುವುದರಿಂದ ದೀಪವು ತುಂಬಾ ಚೆನ್ನಾಗಿ ಉರಿಯುತ್ತಿರುತ್ತದೆ ದೀಪವು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ.
ಜನಗಳು ಬಂದು ದೀಪವನ್ನು ನೋಡಿ ದೀಪ ಚೆನ್ನಾಗಿ ಬೆಳಗುತ್ತಿದೆ ಬೆಳಕು ತುಂಬಾ ಹೆಚ್ಚಾಗಿ ನೀಡುತ್ತಿದೆ ಇದರಿಂದಾಗಿ ಬಹಳಷ್ಟು ಕೆಲಸಗಳು ಸುಲಭವಾಗುತ್ತಿವೆ ಎಂದು ಉತ್ತೇಜನ ನೀಡುತ್ತಾರೆ.
ಎಲ್ಲಾ ಮಾತುಗಳನ್ನು ಕೇಳಿದ ಬೆಳಕಿಗೆ ಅಹಂಕಾರ ಬಂತು ನಾನು ಇದ್ದರೆ ಮಾತ್ರ ಬೆಳಕು ಇಲ್ಲದಿದ್ದರೆ ಇಲ್ಲ ಯಾರ ಕೆಲಸವು ಆಗುವುದಿಲ್ಲ ಎಂದು ದೀಪವು ತಾನೆ ಹಾರಿ ಹೋಯಿತು ಆಗ ಮತ್ತೆ ದೀಪವನ್ನು ಹತ್ತಿಸುತ್ತಾರೆ ಮತ್ತೆ ದೀಪ ಬೆಳಗುತ್ತದೆ ಮತ್ತೆ ದೀಪಕ್ಕೆ ಅಹಂಕಾರ ಇನ್ನೂ ಜಾಸ್ತಿಯಾಗುತ್ತದೆ.
ಅಲ್ಲೇ ಇದ್ದ ಜಗಲಿ ಹೇಳುತ್ತದೆ ನೋಡು ನೀನು ಹೆಚ್ಚಾಗಿ ಅಹಂಕಾರ ಪಡಬೇಡ ನೀನೇ ಹೆಚ್ಚಲ್ಲ ನಿನಗಿಂತ ಹೆಚ್ಚಾಗಿ ಇನ್ನೊಬ್ಬರು ಇದ್ದೇ ಇರುತ್ತಾರೆ ಎಂದು ಹೇಳುತ್ತದೆ ಸ್ವಲ್ಪ ಸಮಯದ ನಂತರ ಜೋರಾಗಿ ಗಾಳಿ ಬಂದು ದೀಪವು ಹಾರಿ ಹೋಗುತ್ತದೆ ಆಗ ದೀಪಕ್ಕೆ ಸ್ವಲ್ಪ ಅರಿವಾಗುತ್ತದೆ ನಂತರ ಚೆನ್ನಾಗಿ ಬೆಳಗುತ್ತದೆ.
ಬೆಳಿಗ್ಗೆ 5 ಗಂಟೆಯಾದ ನಂತರ ನಿಧಾನವಾಗಿ ಬೆಳಕು ಬರಲು ಆರಂಭವಾಗುತ್ತದೆ ನಂತರ ಸೂರ್ಯನು ಬೆಳಗುತ್ತಾನೆ ಆಗ ದೀಪದ ಬೆಳಕು ನೋಡಿ ನನಗಿಂತ ದೊಡ್ಡ ಬೆಳಕು ಇದೆ ಇನ್ನು ಮುಂದೆ ನಾನು ಅಹಂಕಾರ ಪಡಬಾರದು ಎಂದು ತಾನೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತದೆ. ನನಗಿಂತ ಹೆಚ್ಚಾಗಿ ಇತರರು ಸಾಧಿಸಿದ್ದಾರೆ ಎಂದು ಮನವರಿಕೆ ಆಗಿದ್ದೆಯೇ?
ಜ್ಞಾನಕ್ಕಾಗಿ ನಾನು ಬಂದಿದ್ದೇನೆ
ಒಂದು ದೊಡ್ಡ ಹಳ್ಳಿ ಹಳ್ಳಿಯಲ್ಲಿ ಒಂದು ಸುದ್ದಿ ಬಂತು ಶುಭ ಶುಕ್ರವಾರ ಪ್ರಸಿದ್ಧ ಋತುಸ್ಮಿತ್ ಜ್ಞಾನಿಗಳು ಬಂದು ಭಾಷಣವನ್ನು ನೀಡುತ್ತಾರೆ ಇದಕ್ಕೆ ಎಲ್ಲರೂ ಬರಬೇಕು ಎಂದು ಪ್ರಚಾರ ಮಾಡಿದರು ಅದರಂತೆಯೇ ಭಾಷಣಕ್ಕಾಗಿ ಊರಿನ ಮುಖ್ಯ ದೊಡ್ಡ ಒಂದು ಮೈದಾನವನ್ನು ಆಯ್ಕೆ ಮಾಡಿಕೊಂಡರು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು.
ಹಳ್ಳಿಯ ಎಲ್ಲಾ ಜನರು ಸೇರುತ್ತಾರೆ ಎನ್ನುವ ಮನಸ್ಸು ಸ್ವಾಮೀಜಿಯವರದು ಆದರೆ ಸಂಜೆ ಬಂದು ನೋಡುತ್ತಿದ್ದಂತೆ ಯಾರೂ ಇಲ್ಲವೇ ಇಲ್ಲ ಎಲ್ಲಾ ಖಾಲಿ ಖಾಲಿ ಇದನ್ನು ನೋಡಿ ಸ್ವಾಮೀಜಿಗೆ ದಿಗ್ ಭ್ರಮೆಯಾಯಿತು ನಂತರ ಇಲ್ಲಿ ಭಾಷಣ ಮಾಡುವುದು ಬೇಡ ಎಂದು ನಿರಾಶರಾಗಿ ಹೊರಡಲು ಸಿದ್ಧರಾದರು.
ಒಬ್ಬ ಮಾತ್ರ ವ್ಯಕ್ತಿ ಬಂದು ನಾನು ಭಾಷಣ ಕೇಳಲಿಕ್ಕೆ ಬಂದಿದ್ದೇನೆ ಎಂದನು ಬರೀ ಒಬ್ಬರಿಗೆ ಭಾಷಣ ಮಾಡುವುದೇ ಅದು ಹೇಗೆ ಸಾಧ್ಯ ಎಂದು ಕೋಪದಿಂದ ಹೇಳಿದರು ಆ ವ್ಯಕ್ತಿಯು ವಿನಯದಿಂದ ಹೇಳಿದನು ನಾನು ಹಳ್ಳಿಯ ಸಾಮಾನ್ಯ ಮನುಷ್ಯ ನನಗೆ ಯಾವ ಜ್ಞಾನವೂ ಇಲ್ಲ ಜ್ಞಾನಕ್ಕಾಗಿ ನಾನು ಬಂದಿದ್ದೇನೆ ಎಂದು ಅಂಗಲಾಚಿದನು ಮತ್ತೆ ಹೇಳಿದನು ನಾನು ಹಲವಾರು ಎತ್ತುಗಳನ್ನು ಸಾಕಿದ್ದೇನೆ.
ಒಂದು ಎತ್ತು ಕೂಡ ಆರೋಗ್ಯ ವಿಲ್ಲದಿದ್ದರೆ ಅಥವಾ ಏನೂ ತಿನ್ನದಿದ್ದರೆ ನನಗೆ ತುಂಬಾ ಸಂಕಟವಾಗುತ್ತದೆ ಅದಕ್ಕೆ ಏನಾದರೂ ಮಾಡಿ ನೀರು ಹುಲ್ಲು ತಿನ್ನಿಸುತ್ತೇನೆ ಎಂದನು ಈ ಮಾತು ಸ್ವಾಮೀಜಿಯವರ ಮನಸ್ಸಿಗೆ ನಾಟಿತು.
ಒಬ್ಬನಿಗೆ ಭಾಷಣ ನೀಡುತ್ತೇನೆ ಎಂದು ಸುಮಾರು 3 ಗಂಟೆಯವರೆಗೆ ತಮ್ಮ ಭಾಷಣ ಹೇಳಿದರು ಭಾಷಣ ಹೇಗಿತ್ತು ಎಂದು ಕೇಳಿದರು ಭಾಷಣ ಮಾತ್ರ ತುಂಬಾ ಚೆನ್ನಾಗಿದೆ ಎಂದು ವಿನಯದಿಂದ ಹೇಳಿ ಮತ್ತೊಂದು ಮಾತನ್ನು ಸಾಮಾನ್ಯ ವ್ಯಕ್ತಿ ಹೇಳಿದನು.
ನಿಮ್ಮಷ್ಟು ನನಗೆ ಜ್ಞಾನ ಇಲ್ಲ ಆದರೆ ಒಂದು ಮಾತು ತಾವು ನೀಡಿದ ಭಾಷಣ ಒಂದೇ ಎತ್ತಿಗೆ ಹಲವಾರು ಎತ್ತುಗಳ ಹುಲ್ಲು ನೀಡಿದ್ದೀರಿ ಎಂದನು ಇದನ್ನು ಕೇಳಿ ಸ್ವಾಮೀಜಿಗೆ ಸ್ವಲ್ಪ ಕಸಿವಿಸಿ ಆಯಿತು ಯಾವಾಗ ಎಷ್ಟು ಏಕೆ ಹೇಳಬೇಕು ಎನ್ನುವುದು ಅರ್ಥಮಾಡಿಕೊಂಡು ಅಷ್ಟು ಮಾತ್ರ ಹೇಳಿದರೆ ಅದಕ್ಕೆ ತುಂಬಾ ಬೆಲೆ ಇರುತ್ತದೆ ಎಂದು ಜ್ಞಾನಿಗಳು ಅರಿತರು.
ನಿಜವಾದ ವೈರಾಗ್ಯ
ಕಪಿಂಜಲ್ ತುಂಬ ಶ್ರೀಮಂತರಾಗಿದ್ದಾಗ ಅವರಿಗೆ ಯಾವುದೋ ಒಂದು ಘಟನೆಯಿಂದ ಜ್ಞಾನೋದಯ ವಾಗುತ್ತದೆ ನಂತರ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ ಮೊದಲು ಜಿಪುಣ ಆಗಿದ್ದವರು ಕೊಡಲು ಆರಂಭಿಸಿ ಕೊನೆಗೆ ಇರುವುದೆಲ್ಲವೂ ಕೊಟ್ಟು ತಮ್ಮ ಉಳಿವಿಗಾಗಿ ಮನೆಮನೆಗೆ ಭಿಕ್ಷೆ ಬೇಡಿ ಬದುಕುತ್ತಿದ್ದರು.
ಭಿಕ್ಷೆ ಬೇಡಲು ಹೋದಾಗ ಎಲ್ಲರೂ ಒಂದೇ ರೀತಿ ಇರುವುದಿಲ್ಲ ಕೆಲವರು ತುಂಬಾ ಗೌರವದಿಂದ ಭಿಕ್ಷೆ ನೀಡಿದರೆ ಇನ್ನು ಕೆಲವರು ಮನೆ ಮುಂದೆ ಕೆಲವು ಸಮಯ ಕಾಯಿಸಿ ನಂತರ ನೀಡುತ್ತಾರೆ ಇನ್ನು ಕೆಲವರು ಬೈಯ್ದು ಕಳಿಸುತ್ತಾರೆ ಕೆಲವರು ನೋಡುತ್ತಿದ್ದಂತೆಯೇ ಬಾಗಿಲು ಜೋರಾಗಿ ಹಾಕಿಕೊಳ್ಳುತ್ತಾರೆ.
ಕೆಲವರು ಬಾಯಿಗೆ ಬಂದಂತೆ ಬಯ್ಯುತ್ತಾರೆ ಆದರೆ ಇವೆಲ್ಲವನ್ನು ಇವರು ಸರಿ ಸಮಾನವಾಗಿ ನೋಡುತ್ತಿದ್ದರು ಈ ದೃಶ್ಯಗಳನ್ನು ಎಲ್ಲವೂ ನೋಡಿ ತಮ್ಮ ಮನಸ್ಸಿನಲ್ಲಿಯೇ ನಗುತ್ತಿದ್ದರು ನಂತರ ಮನೆಗೆ ಬಂದ ಮೇಲೆ ಯಾವ ಯಾವ ವ್ಯಕ್ತಿ ಹೇಗೆ ವರ್ತಿಸುತ್ತಾನೆ ಎಂದು ಅವರು ಅರ್ಥಮಾಡಿಕೊಳ್ಳುತ್ತಿದ್ದರು.
ಪಕ್ಕದ ಊರಿನಲ್ಲಿ ಒಬ್ಬ ಶ್ರೀಮಂತನ ಇದ್ದನು ಈ ವ್ಯಕ್ತಿಗೆ ಅನುಮಾನ ಆದ್ದರಿಂದ ಇವನು ಪರೀಕ್ಷೆ ಮಾಡಬೇಕು ಏಕೆಂದರೆ ನಾನು ನೋಡಿದ ಹಾಗೆ ಅವನು ತುಂಬ ಜಿಪುಣ ವ್ಯಕ್ತಿ ಹೇಗೆ ದಾನಿಯಾದ ಎಂದು ನಂಬುವುದು ಕಷ್ಟ ಭಕ್ತಿ ವೈರಾಗ್ಯ ನಿಜವೇ ಕಂಡು ಹಿಡಿಯೋಣ ಎಂದು ಚಿಂತಿಸಿ ನಂತರ ಭಿಕ್ಷೆ ಬೇಡಲು ಬರುತ್ತಿದ್ದಾಗ ಹೆಂಡತಿಗೆ ಹೇಳಿದನು.
ಅಕ್ಕಿಯಲ್ಲಿ ಕೆಲವು ಮುತ್ತು ರತ್ನಗಳನ್ನು ಹಾಕಿ ನೀಡು ಎಂದು ಹೇಳಿದನು ಅದೇ ರೀತಿ ಒಂದು ವಾರದ ವರೆಗೂ ಮುತ್ತು ರತ್ನಗಳು ಹಾಕಿಯೇ ಕೊಟ್ಟರು ಶ್ರೀಮಂತನಿಗೆ ಕುತೂಹಲ ಅವರು ನೋಡಿಯೇ ಇರುತ್ತಾರೆ ಮುತ್ತು ರತ್ನಗಳು ಮಾರಿದನು ಮತ್ತೆ ಶ್ರೀಮಂತವಾಗಬಹುದು ಎಂದು ಮನಸ್ಸಿನಲ್ಲೇ ಅಂದುಕೊಂಡನು.
ಅದೇ ಶ್ರೀಮಂತ ಈ ವ್ಯಕ್ತಿಯ ಮನೆಗೆ ಹೋದನು ಆಗ ಆ ವ್ಯಕ್ತಿಯು ಪ್ರಾರ್ಥನೆ ಮಾಡುತ್ತಿದ್ದರು ನಂತರ ಬಂದು ಶ್ರೀಮಂತನಿಗೆ ಒಳ್ಳೆಯ ರೀತಿಯಿಂದ ಮಾತನಾಡಿದನು ನಂತರ ಹೇಗೋ ಊಟದ ಸಮಯವಾಗಿದೆ ಊಟವನ್ನು ತಯಾರಿಸುತ್ತೇನೆ ದಯವಿಟ್ಟು ಊಟವನ್ನು ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ.
ಶ್ರೀಮಂತನು ಒಪ್ಪುತ್ತಾನೆ ಆದರೆ ಅಡುಗೆ ಮಾತ್ರ ತುಂಬಾ ನಿಧಾನವಾಗಿ ಆಗುತ್ತದೆ ಆಗ ಮಧ್ಯದಲ್ಲಿ ಬಂದು ಹೇಳುತ್ತಾರೆ ಶ್ರೀಮಂತರೇ ದಯವಿಟ್ಟು ಬೇಸರಿಸಿಕೊಳ್ಳಬೇಡಿ ಈಗ ಕೆಲವು ದಿನಗಳಿಂದ ಭಿಕ್ಷೆ ತರುತ್ತಿದ್ದೇನೆ ಅದರಲ್ಲಿ ತುಂಬಾ ಕಲ್ಲುಗಳಿವೆ ಅದನ್ನು ಆಯ್ದು ಅನ್ನವನ್ನು ಮಾಡಬೇಕು ಅದು ತುಂಬಾ ನಿಧಾನವಾಗಿ ಆಗುತ್ತಿದೆ ಎಂದರು ನಂತರ ಇವರು ಹೋಗಿ ತಿಪ್ಪೆಗುಂಡಿಯಲ್ಲಿ ನೋಡಿದರೆ ನೀಡಿದ ಅಷ್ಟು ಮುತ್ತು ರತ್ನಗಳು ಅವೆಲ್ಲವೂ ಅಲ್ಲಿಯೇ ಇತ್ತು.
ಶ್ರೀಮಂತನಿಗೆ ತುಂಬಾ ಬೇಸರವಾಯ್ತು. ನಿಜವಾದ ವೈರಾಗ್ಯ ಬಂದರೆ ಸಂಪತ್ತು ತುಚ್ಛ ಎನಿಸಿಬಿಡುತ್ತದೆ ಮನಸ್ಸು ಹೇಗೆ ಪರಿವರ್ತನೆಯಾಗುತ್ತದೆ ಎಂದರೆ ಮುತ್ತು, ರತ್ನ, ಕಲ್ಲು. ಎಲ್ಲವೂ ಒಂದೇ ಆಗಿಬಿಡುತ್ತವೆ ಎಂದು ಅರಿತುಕೊಂಡನು.