ಎಲ್ಲಿ ಕಳೆದುಕೊಂಡೆ

ಒಂದು ಸಾರಿ ಒಬ್ಬ ಮರೆಯುವ ಸ್ವಭಾವದ ಮೌಲಿಂದ್ರ ದಿನನಿತ್ಯದಂತೆ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಬಂದನು ನಂತರ ಅವನಿಗೆ ನನ್ನ ಕನ್ನಡಕ ಕಳೆದುಕೊಂಡಿದ್ದೇನೆ ಎಂದು ಯೋಚನೆ ಮಾಡಿದ ಆಗ ನಾನು ಕನ್ನಡಕ ಓದುವಾಗ ಎಲ್ಲಿಯಾದರೂ ಬಿಟ್ಟಿದ್ದೇನೆಯೇ ನಂತರ ಹೋಟೆಲ್ ನಲ್ಲಿ ತಿಂಡಿ ತಿಂದೆ ಅಲ್ಲಿ ಏನಾದರೂ ಬಿಟ್ಟಿದ್ದೇನೆಯೇ  ಎಂದು ಮತ್ತೆ ಮಂದಿರಕ್ಕೆ ಹೋಗಿ ಎಲ್ಲಾ ಕಡೆಯೂ ಹುಡುಕಿದನು.

 ಕನ್ನಡಕ ಸಿಗಲಿಲ್ಲ ನಂತರ ಹೋಟೆಲ್ಗೆ ಹೋದನು ಅಲ್ಲಿಯೂ ಕೂಡ ಕನ್ನಡಕ ಸಿಗಲಿಲ್ಲ ನಂತರ ಯೋಚನೆ ಮಾಡಿದನು ಮನೆಯಲ್ಲಿಯೇ ಎಲ್ಲಾದರೂ ಇಟ್ಟಿದ್ದೇನೆಯೇ ಎಂದು ಯೋಚನೆ ಮಾಡಿ ಮನೆಯಲ್ಲ ನಿಧಾನವಾಗಿ ಒಂದು ಕಡೆಯಿಂದ ಹುಡುಕಿದನು ಆದರು ಕನ್ನಡಕ ಸಿಗಲಿಲ್ಲ ಆಗ ಈ ವ್ಯಕ್ತಿ ಯೋಚನೆ ಮಾಡಿದನು.

 ಈ ಕನ್ನಡಕ ಯಾರು ತೆಗೆದುಕೊಂಡಿರಬಹುದು ಇದು ಯಾರಿಗೆ ಉಪಯೋಗವಾಗುತ್ತದೆ ನಾನು ಎಲ್ಲಿ ಬಿಟ್ಟೆ ಎಂದು ಕಣ್ಣುಮುಚ್ಚಿ ಯೋಚಿಸೋಣ ಎಂದು ಯೋಚಿಸುತ್ತಾ ಕುಳಿತನು ಆದರೂ ಸರಿಯಾದ ಪರಿಹಾರ ಸಿಗುತ್ತಿಲ್ಲ ಇದರಿಂದಾಗಿ ಆ ವ್ಯಕ್ತಿಗೆ ಸ್ವಲ್ಪ ತಲೆ ನೋವು ಬರಲು ಆರಂಭವಾಯಿತು ಅದಕ್ಕೆ ಕಣ್ಣನ್ನು ಮುಚ್ಚಿ ಕೊಳ್ಳೋಣ ಎಂದು ಕೈ ಇಟ್ಟಾಗ ಕನ್ನಡಕ ಹಾಕಿಕೊಂಡಿದ್ದಾನೆ ಆಗ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು ತನ್ನನ್ನೇ ತಾನು ನೋಡಿ ನಕ್ಕನು. ನನ್ನ ವಸ್ತು ನನ್ನ ಹತ್ತಿರವೇ ಇದು ಬಹಳಷ್ಟು ಹುಡುಕಿ ನಂತರ ನನ್ನ ಹತ್ತಿರವೇ ಇದ್ದುದ್ದನ್ನು ನೋಡಿ ನಾನು ನಿಕ್ಕಿದ್ದೇನೆಯೇ?

ಎಷ್ಟು ನಿಮಿಷ ಹಿಡಿದುಕೊಳ್ಳಲು ಸಾಧ್ಯ

ನಾನು ಒಂದು ಸಾರಿ ವ್ಯಕ್ತಿತ್ವ ವಿಕಸನಕ್ಕೆ ಹೋದಾಗ ಈ ಒಂದು ಚಟುವಟಿಕೆ ನೀಡಿದ್ದರು ಒಂದು ಪೇಪರ್ ಗ್ಲಾಸ್ ಕೈಯ್ಯಲ್ಲಿ ಇಟ್ಟರು ಇದು ಹಿಡಿದುಕೊಳ್ಳ ಬಹುದಲ್ಲವೇ ಎಂದು ಕೇಳಿದರು ನಾನು ಹೌದು ಎಂದು ಉತ್ಸಾಹ ಭರಿತನಾಗಿ ಹೇಳಿದೆ ಇದನ್ನು ಎಷ್ಟು ನಿಮಿಷ ಹಿಡಿದುಕೊಳ್ಳಲು ಸಾಧ್ಯ ಎಂದರು.

 5 ನಿಮಿಷ ಹತ್ತು ನಿಮಿಷ ಹಿಡಿದುಕೊಳ್ಳಬಹುದು ಎಂದು ಹೇಳಿದೆ ನಂತರ ಅವರು ಇದೇ ಪೇಪರ್ ಗ್ಲಾಸ್ 2 ಗಂಟೆ ಒಂದು ಗಂಟೆ ಹಿಡಿದು ಕೊಳ್ಳಬಹುದೇ ಎಂದು ಪ್ರಶ್ನೆ ಕೇಳಿದರು ಅದಕ್ಕೆ ಸಾಧ್ಯವಿಲ್ಲ ಎಂದೆ ಇದರ ಅರ್ಥವೇನು ಎಂದು ಕೇಳಿದರು.

 ಆಗ ನನಗೆ ಇದು ಗೊತ್ತಾಗಲಿಲ್ಲ ಎಂದು ಹೇಳಿದೆ ನಂತರ ಅವರು ವಿವರವಾಗಿ ತಿಳಿಸಿದರು ಪೇಪರ್ ಗ್ಲಾಸ್ ಇರಬಹುದು ನೀವು ಹೆಚ್ಚು ಸಮಯ ಹಿಡಿದುಕೊಂಡರೆ ಅದು ತುಂಬಾ ಭಾರವಾಗುತ್ತದೆ ಅಲ್ಲವೇ ಎಂದರು ಹಾಗೆಯೇ ನಮಗೆ ಬಂದ ಸಮಸ್ಯೆಗಳು ಕೂಡ ತುಂಬಾ ಹೆಚ್ಚು ಹೊತ್ತು ಇಟ್ಟುಕೊಂಡರೆ ಮನಸಿಗೆ ನೋವಾಗುತ್ತದೆ ಎಂದು ತಿಳಿಸಿದರು.

ಮಗುವಿಗೆ ಉಡುಗೊರೆಯಾಗಿ

ಮಗು  ಶಮಿತ್ ದಿನನಿತ್ಯ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತದೆ ಇದಕ್ಕೆ ಏನು ಮಾಡಬೇಕೆಂದು ತಿಳಿಯುವುದಿಲ್ಲ ಇದಕ್ಕೆ ಹಲವಾರು ಉಪಾಯಗಳು ಸಕ್ಸಸ್ ಆಗುವುದಿಲ್ಲ ಕೊನೆಗೆ ಇಬ್ಬರು ತಂದೆ ತಾಯಿ ಯೋಚನೆ ಮಾಡುತ್ತಾರೆ.

 ಮಗು ಏತಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದೆ ಮಗುವಿಗೆ ಕೂಲಂಕುಶವಾಗಿ ತಂದೆಯವರು ಕೇಳುತ್ತಾರೆ ನಿನಗೆ ಏನೇನು ಇಷ್ಟವಿದೆ ಎಂದಾಗ ಮಗು ಹೇಳುತ್ತದೆ ನಾನು ರಾತ್ರಿ ನೀವು ಹಾಕಿಕೊಳ್ಳುವ ಬಟ್ಟೆಯಂತೆ ಹಾಕಿಕೊಂಡು ಮಲಗಬೇಕು ಹಾಗೆ ಒಳ್ಳೆಯ ಹಾಸಿಗೆ ಬೇಕು ಇದನ್ನು ಅರ್ಥಮಾಡಿಕೊಂಡು ತಕ್ಷಣ ನಾಳೆಗೆ ಮಾರನೆಯ ದಿನವೇ ಒಳ್ಳೆಯ ಹಾಸಿಗೆಯನ್ನು ತರುತ್ತಾರೆ ಹಾಗೆ ಒಳ್ಳೆಯ ಟೀ ಶರ್ಟ್ ಪ್ಯಾಂಟನ್ನು ತಂದೆ ಹಾಕುವ ರೀತಿಯಲ್ಲಿ ತರುತ್ತಾರೆ ಮಗುವಿಗೆ ಮಗುವಿಗೆ ಉಡುಗೊರೆಯಾಗಿ ನೀಡುತ್ತಾರೆ.

 ಆಗ ಮಗು ಟೀ ಶರ್ಟ್ ಪ್ಯಾಂಟ್ ಹಾಕಿಕೊಂಡು ಸಂತೋಷ ಪಡುತ್ತದೆ ತಂದೆ ಬಂದ ತಕ್ಷಣ ತೋರಿಸುತ್ತದೆ ನಾನು ನಿಮ್ಮಂತೆ ಬಟ್ಟೆ ಹಾಕಿದ್ದೇನೆ ನನಗೆ ಒಂದು ಹಾಸಿಗೆಯು ಇದೆ ಎಂದು ಉತ್ಸಾಹದಿಂದ ತೋರಿಸುತ್ತದೆ ಆಗ ಹಾಸಿಗೆಯ ಮೇಲೆ ಮಲಗಲು ಹೋದಾಗ ತಂದೆಯವರು ಹೇಳುತ್ತಾರೆ.

 ನೀನು ಈ ಹಾಸಿಗೆಯ ಮೇಲೆ ಮಲಗಿದರೆ ಮೂತ್ರ ವಿಸರ್ಜನೆ ಮಾಡುವುದರಿಂದ ಇದು ಹಾಳಾಗುತ್ತದೆ ಎಂದು ಹೇಳಿದಾಗ ಮಗು ಹೇಳುತ್ತದೆ ಇಲ್ಲ ಇಷ್ಟು ಚೆನ್ನಾಗಿ ಇರುವ ಹಾಸಿಗೆ ನಾನು ಹಾಳು ಮಾಡುವುದಿಲ್ಲ ನಾನು ಮೂತ್ರ ವಿಸರ್ಜನೆ ಮಾಡುವುದಿಲ್ಲ ಎಂದು ಹೇಳಿ ಮಲಗುವುದಕ್ಕಿಂತ ಮುಂಚೆ ಮೂತ್ರ ವಿಸರ್ಜನೆ ಮಾಡಿ ಮಲಗುತ್ತದೆ.

 ಅಂದಿನಿಂದ ಈ ಕಾಯಿಲೆ ಕಡಿಮೆ ಯಾಗುತ್ತದೆ ಹೀಗೆಯೇ ಹಲವಾರು ಸಮಸ್ಯೆಗಳು ಇರುತ್ತವೆ, ಅದಕ್ಕೆ ಸರಿಯಾಗಿ ಅರ್ಥಮಾಡಿಕೊಂಡಾಗ ಅದಕ್ಕೆ ಉತ್ತರ ಸಿಗುತ್ತದೆ.

ನೀವೇ ವಿಚಾರವಂತರಾಗಬೇಕು

ಒಂದು ಊರಿನಲ್ಲಿ ಒಂದು ಬಾವಿ ಇರುತ್ತದೆ ಆ ಬಾವಿಯ ನೀರು ಎಲ್ಲಾ ಧರ್ಮದವರು  ಉಪಯೋಗಿಸುತ್ತಿರುತ್ತಾರೆ ಒಂದು ಸಾರಿ ಒಂದು ನಾಯಿ ಬಾವಿಯಲ್ಲಿ ಹೋಗಿ ಬಿದ್ದು ಸತ್ತು ಹೋಗುತ್ತದೆ ಇದರಿಂದಾಗಿ ನೀರಿನಲ್ಲಿ ದುರ್ನಾತ ಬರುತ್ತಿರುತ್ತದೆ.

ಬಾವಿಯ ನೀರು ಹಿಂದೂ ಮುಸಲ್ಮಾನರು ಇತರರು ಬಳಸುತ್ತಿರುತ್ತಾರೆ ಹಿಂದೂ ಆದವರು ಅವರ ಗುರುವಿನ ಬಳಿಗೆ ಹೋಗಿ ಬಾವಿಯಲ್ಲಿ ನಾಯಿ ಬಿದ್ದಿದೆ ಏನು ಮಾಡಬೇಕು ಎಂದು ಕೇಳಿದಾಗ ನಾನು ಗಂಗಾ ನದಿಗೆ ಹೋಗಿದೆ ಅಲ್ಲಿಂದ ಸ್ವಲ್ಪ ನೀರು ತಂದಿದ್ದೇನೆ ಆ ನೀರು ಬಾವಿಯಲ್ಲಿ ಹಾಕಿ ಎಲ್ಲವೂ ಶುದ್ಧವಾಗುತ್ತದೆ ಎಂದು ಹೇಳಿ ನೀರು ನೀಡಿ ಕಳುಹಿಸುತ್ತಾರೆ.

 ಮುಸ್ಲಿಂ ಆದವರು ಹಜರತ್ ನ ಬಳಿ ಹೋಗಿ ಬಾವಿಯಲ್ಲಿ ನಾಯಿ ಸತ್ತು ಹೋಗಿದೆ ಏನು ಮಾಡಬೇಕು ಎಂದು ಕೇಳುತ್ತಾರೆ ಹಜರತ್ ಆದವರು ನಾನು ಮೆಕ್ಕಾಗೆ ಹೋಗಿದ್ದೆ ಅಲ್ಲಿಂದ ಜಮ್ ಜಮ್ ನೀರನ್ನು ತಂದಿದ್ದೇನೆ ಅದನ್ನು ಹಾಕಿ ನಂತರ ನೀರನ್ನು ಬಳಿಸಿ ಎಂದು ಹೇಳಿದರು.

 ಅದರಂತೆಯೇ ಹಿಂದೂ ಹಾಗೂ ಮುಸ್ಲಿಂ ಜನರು ಗುರುಗಳು ಹಾಗೂ ಹಜರತ್ ಕೊಟ್ಟ ನೀರನ್ನು ಬಾವಿಗೆ ಹಾಕಿದರು ಆದರೂ ಬಾವಿಯಿಂದ ದುರ್ನಾತ ಬರುತ್ತಲೇ ಇದೆ ಆಗ ಹಿಂದೂ ಮುಸ್ಲಿಮರು ಸೇರಿ ಇಬ್ಬರು ಗುರು ಒಂದೇ ಕಡೆ ಇದ್ದಾಗ ಹೇಳಿದರು.

 ನೀವು ಹೇಳಿದ ಹಾಗೆಯೇ ಮಾಡಿದ್ದೇವೆ ಆದರೆ ದುರ್ನಾತ ಕಡಿಮೆ ಆಗಿಲ್ಲ ಎಂದಾಗ ಹಜರತ್ ಹಾಗೂ ಗುರುಗಳು ಇಬ್ಬರೂ ಮಾತನಾಡಿಕೊಂಡರು ಏಕೆ ಶುದ್ಧವಾಗಿಲ್ಲ ದೀರ್ಘವಾಗಿ ಯೋಚಿಸಿದರು ನಂತರ ಹೇಳಿದರು ನಾವು ಹೇಳಿದ ರೀತಿಯಲ್ಲಿ ನೀವು ನೀರು ಹಾಕಿದ್ದೀರಾ ಹೌದು ಆದರೆ ಅದರಲ್ಲಿ ಇದ್ದ ನಾಯಿಯನ್ನು ನೀವು ತೆಗೆದಿದ್ದೀರಾ? ಎಂದಾಗ ಎರಡೂ ಗುಂಪಿನವರು ಇಲ್ಲ ಎಂದು ಹೇಳುತ್ತಾರೆ.

ಗುರುಗಳು ಹಜರತ್ ಇಬ್ಬರು ಹೇಳುತ್ತಾರೆ ಮೊದಲು ಬಾವಿಯಿಂದ ನಾಯಿಯನ್ನು ತೆಗೆಯಿರಿ ನಂತರ ದುರ್ನಾತ ಹೋಗುತ್ತದೆ ಕುಡಿಯಲಿಕ್ಕೆ ಉಪಯೋಗವಾಗುತ್ತದೆ ಎಂದು ಹೇಳಿದರು ಮತ್ತೆ ಕೆಲವು ಸಾರಿ ನಾಯಿ ಗೊತ್ತಿಲ್ಲದೆ ಬಿದ್ದು ಸತ್ತು ಹೋಗಿರುತ್ತದೆ ಕೆಲವು ಸಾರಿ ಬೇರೆಯವರು ಬೇಕು ಎಂದೆ ನಾಯಿಯನ್ನು ಸಾಯಿಸಿ ನೀರಿನಲ್ಲಿ ಹಾಕಿರುತ್ತಾರೆ.

 ನೀವೇ ಕಂಡುಹಿಡಿಯಬೇಕು ನೀವೇ ವಿಚಾರವಂತರಾಗಬೇಕು ಯಾವುದು ಸರಿ ಯಾವುದು ತಪ್ಪು ಎಂದು ವಿವೇಚನೆಯಿಂದ ತಿಳಿದುಕೊಳ್ಳಬೇಕು ಇದು ತಿಳಿದುಕೊಳ್ಳಲಿಲ್ಲ ಎಂದರೆ ನಮ್ಮಲ್ಲಿಯೇ ಭೇದ ಭಾವ ಸಂದೇಹ ಬರಲು ಆರಂಭಿಸುತ್ತದೆ ಇದನ್ನು ನೀವು ನಿರ್ಮೂಲನೆ ಮಾಡಬೇಕು ಎಂದು ಅರ್ಥವಾಗುವಂತೆ ಹೇಳಿದರು.

 ಈ ಜಗತ್ತಿನಲ್ಲಿ ಗೊತ್ತಿಲ್ಲದೆ ತಪ್ಪು ಮಾಡಿ ಹಾಳಾದವರಿಗಿಂತ ಹೇಳಿಕೆ ಮಾತು ಕೇಳಿ ಹಾಳಾಗುವವರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ   ಆದ್ದರಿಂದ ನೀವು ಯಾವುದನ್ನು ನೋಡದೆ ನಂಬಬೇಡಿ ಎಂದು ತಿಳಿಸಿದರು ಸಾಮಾನ್ಯವಾಗಿ ನಾಯಕರು ಮಾಲೀಕರು ಮನುಷ್ಯರನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಇಚ್ಛೆಪಡುತ್ತಾರೆ.

 ತಮ್ಮ ಕಂಟ್ರೋಲ್ನಲ್ಲಿ ಬರದಿದ್ದರೆ ಕನ್ ಫ್ಯೂಸ್ ಮಾಡಿ ಬಿಡುತ್ತಾರೆ ಆಗ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಾಗುವುದಿಲ್ಲ ಇದನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡು ಚಕ್ರವ್ಯೂಹದಿಂದ ಹೊರಗೆ ಬರಬೇಕು ಇಲ್ಲದಿದ್ದರೆ ಆ ಚಕ್ರವ್ಯೂಹದಲ್ಲಿಯೇ ಬದುಕು ಕೊನೆಗೊಳ್ಳುತ್ತದೆ ಎಂದು ಹೇಳಿದರು ಎರಡು ಗುಂಪಿನವರು ಅರ್ಥಮಾಡಿಕೊಂಡರು. ನಾನು ಜಗತ್ತನ್ನು ಎಷ್ಟು ಅರ್ಥಮಾಡಿಕೊಂಡಿದ್ದೇನೆ?

ಕೋತಿಗಳು ಕುಣಿದು ಕುಪ್ಪಳಿಸಿದವು

ಒಂದು ಸಮೃದ್ಧವಾಗಿ ಬೆಳೆದಿದ್ದ ತೋಟದಲ್ಲಿ ತೆಂಗಿನ ಮರ ಹಾಗೂ ಬಾಳೆಹಣ್ಣಿನ ಮರಗಳು ಇದ್ದವು ಕೆಲವು ಕೋತಿಗಳು ಆಗಾಗ ಬಂದು ಎಳನೀರು ಕುಡಿದು ಬಾಳೆಹಣ್ಣು ತಿನ್ನುತ್ತಿದ್ದವು ಇದನ್ನು ನೋಡುತ್ತಿದ್ದ ಸುಪ್ರಜ್ ಮಾಲೀಕ ಆಗಾಗ ಬಂದು ಕೋತಿಗಳನ್ನು ಓಡಿಸುತ್ತಿದ್ದನು ಕೆಲವು ದಿನಗಳ ನಂತರ ಮಾಲೀಕನು ಸತ್ತು ಹೋದನು.

 ಮಾಲೀಕನು ಸತ್ತು ನಂತರ ಕೋತಿಗಳು ಕುಣಿದು ಕುಪ್ಪಳಿಸಿದವು ಏಕೆಂದರೆ ಇನ್ನು ಮುಂದೆ ನಮ್ಮನ್ನು ಯಾರು ಓಡಿಸುವುದಿಲ್ಲ ಎಂದು ಆನಂದದಲ್ಲಿ ತೇಲಿದವು ಕೆಲವು ದಿನಗಳ ನಂತರ ಮಾಲೀಕನ ಮಕ್ಕಳು ಬಂದರು ಮಕ್ಕಳಿಗೆ ಆಸ್ತಿಯಲ್ಲಿ ಭಾಗವಾಯಿತು ಆಗ ಎಲ್ಲಾ ಮಕ್ಕಳು ಆ ತೋಟದ ಮರಗಳನ್ನೆಲ್ಲ ಕಡಿದರು.

 ತಮ್ಮ ತಮ್ಮ ಆಸ್ತಿ ಹಂಚಿಕೊಂಡರು ಆಗ ಕೋತಿಗಳಿಗೆ ಅರ್ಥವಾಯಿತು ನಮ್ಮ ಮಾಲೀಕ ಸತ್ತಿದ್ದು ನಮಗೆ ನಷ್ಟವಾಯಿತು ಎಂದು ಕೋತಿಗಳು ಅರಿತವು ಹೀಗೆಯೇ ಕೆಲವರು ಕಂಪನಿಯಲ್ಲಿ ಫ್ಯಾಕ್ಟರಿಯಲ್ಲಿ ಎಲ್ಲೋ ಒಂದು ಕಡೆ ಕೆಲಸ ಮಾಡಿಕೊಂಡು ಇರುತ್ತಾರೆ.

ಕೆಲಸಗಾರರು ಯೋಚಿಸುತ್ತಾರೆ ನಮ್ಮ ಮೇಲೆ ಆಡಳಿತ ನಡೆಸುವವರು ಸತ್ತರೆ ಸಾಕು ಎಂಬ ಆಲೋಚನೆ ಕೆಲವರಿಗೆ ಇರುತ್ತದೆ ಆದರೆ ಅವರಿಗೆ ತಿಳಿದಿಲ್ಲ ಆಡಳಿತ ನಡೆಸುವವರು ಸತ್ತರೆ ಕೋತಿಗಳ ಸ್ಥಿತಿಯೇ ಬರುತ್ತದೆ ಎಂದು ಕೆಲವರು ಯೋಚಿಸಲಾರರು.

Leave a Comment