ನನಗೆ ನಾನೇ ಅವಮಾನ ಮಾಡಿಕೊಂಡಂತೆ

ಒಂದು ಊರಿನಲ್ಲಿ ಈ ಸಾರಿ ಹೊಸದಾದ ಒಂದು ಕಾರ್ಯಕ್ರಮ ಮಾಡಬೇಕು ಎಂದು ಎಲ್ಲರೂ ಚಿಂತನೆ ಮಾಡಿ ಸಾಕಿರುವ ಪ್ರಾಣಿಗಳ ಸ್ಪರ್ಧೆ ಇಟ್ಟು ಅದರಲ್ಲಿ ಯಾವ ಪ್ರಾಣಿ ವೇಗವಾಗಿ ಓಡುತ್ತೋ ಅದಕ್ಕೆ ಪ್ರಶಸ್ತಿ ನೀಡೋಣ ಎಂದು ಡಂಗೂರ ಸಾರುತ್ತಾರೆ.

ಈ ವಿಷಯ ಊರಿಗೆಲ್ಲ ತಿಳಿಯುತ್ತದೆ ನಂತರ ಸ್ಪರ್ಧೆ ನಡೆಯುವ ದಿನ ಎಲ್ಲರೂ ಸಾಕಿರುವ ಪ್ರಾಣಿಗಳು ತರುತ್ತಾರೆ ಕೆಲವರು ಕುರಿಗಳು, ನಾಯಿಗಳು,, ಆಡುಗಳು ಎತ್ತುಗಳು, ಹಸುಗಳು, ಎಮ್ಮೆಗಳು, ಕತ್ತೆಗಳು, ಹಾಗೆ ಕುದುರೆಯು ಬರುತ್ತದೆ.

ಎಲ್ಲಾ ಸಾಕು ಪ್ರಾಣಿಗಳನ್ನು ನೋಡಿ ಹೇಗೆ ಸ್ಪರ್ಧೆ ಮಾಡುವುದು ಎಂದು ಕಕ್ಕಾಬಿಕ್ಕಿಯಾಗುತ್ತಾರೆ ನಂತರ ಸ್ಪರ್ಧೆ ನಡೆಸಲೇಬೇಕು ಎಲ್ಲರೂ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುತ್ತಾರೆ ನಂತರ ಒಂದೊಂದೇ ವರ್ಗದ ಪ್ರಾಣಿಗಳಿಗೆ ಅಂದರ ಎತ್ತುಗಳ ಸ್ಪರ್ಧೆ, ಕುರಿಗಳ ಸ್ಪರ್ಧೆ, ಕತ್ತೆಗಳ ಸ್ಪರ್ಧೆ ಹೀಗೆ ನಾಯಿಗಳಲ್ಲಿ ಹಲವಾರು ರೀತಿಯ ನಾಯಿಗಳು  ಬಂದಿರುತ್ತವೆ.

ಬಂದಿರುವ ಎಲ್ಲಾ ಪ್ರಾಣಿಗಳಿಗೂ ಬೇರೆ ಬೇರೆ ವರ್ಗ ಮಾಡಿ ಸ್ಪರ್ಧೆ ನಡೆಸುತ್ತಾರ ಕೊನಗೆ ಕತ್ತೆಗಳ ಸ್ಪರ್ಧೆ ಇರುತ್ತದೆ ಕುದುರೆಗಳ ಸ್ಪರ್ಧೆಗೆ ಒಂದೇ ಒಂದು ಕುದುರೆ ಬಂದಿರುತ್ತದೆ ಆಗ ಕತ್ತೆಗಳ ಜೊತೆಯಲ್ಲಿಯೇ ಕುದುರೆಗೂ ನಿಲ್ಲಿಸುತ್ತಾರೆ ಸ್ಪರ್ಧೆ ಆರಂಭವಾಗುತ್ತದೆ.

ಕುದುರೆ ಮಾತ್ರ ಓಡುವುದಿಲ್ಲ ಮಾಲಿಕ ಏಕೆ ಎಂದು ಕೇಳುತ್ತಾನೆ ನಾನು ಓಡಿದರೆ ಕುದುರೆಗಳ ಜೊತೆಯಲ್ಲೇ ಒಡುತ್ತೇನೆ ಕತ್ತೆಗಳ ಜೊತೆ ಓಡಿದರೆ ನನಗೆ ನಾನೇ ಅವಮಾನ ಮಾಡಿಕೊಂಡಂತೆ ಆಗುತ್ತದೆ ಎಂದು ಕುದುರೆ ಹೇಳುತ್ತದೆ. ನಮ್ಮ ಅವಶ್ಯಕತೆ ಎಲ್ಲಿದೆಯೋ ಅಲ್ಲಿ ಮಾತ್ರ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಆಗಲೇ ನಮಗೆ ಗೌರವ.

 ನೆನಪಾಗುತ್ತಿಲ್ಲ

ಒಬ್ಬ ಯುವಕ ಹಲವಾರು ವರ್ಷ ಏಕಾಂಗಿ ಜೀವನ ನಡೆಸುತ್ತಾನೆ ನಂತರ ಅವನ ಮನಸ್ಸಿನಲ್ಲಿ  ನಾನು  ಏಕೆ ಮದುವೆಯಾಗಬಾರದು ಮತ್ತೆ ಅದೇ ರೀತಿ ನಮ್ಮ ಸಂಬಂಧಿಕರಲ್ಲಿ ಯುವಕಿ ಇದ್ದಾಳೆ. ಇವಳು ಕೂಡ ಹಲವಾರು ವರ್ಷಗಳಿಂದ ಮದುವೆ ಆಗಿಲ್ಲ ಎಂದು ಮನಸ್ಸಿನಲ್ಲಿ ಯೋಚನೆ ಮಾಡುತ್ತಾನೆ.

ಸಂಬಂಧಿಕರಲ್ಲಿ ಮದುವೆ ಇರುತ್ತದೆ ಅದಕ್ಕೆ ಈ ಯುವಕ ಆ ಯುವಕಿ ಇಬ್ಬರು ಬರುತ್ತಾರೆ ನಂತರ  ಯುವಕನೇ ಯುವತಿಯನ್ನು ಮಾತನಾಡಿಸೋಣ ಎಂದು ಯುವಕ ಹೋಗಿ ತನ್ನಲ್ಲಿ ಕಾಡುತ್ತಿದ್ದ ಪ್ರಶ್ನೆಗಳೆಲ್ಲವೂ ಕೇಳುತ್ತಾನೆ.

ಆಗ ಯುವಕಿಯು ಹಾಗೆ ತನ್ನ ಮನಸ್ಸಿನಲ್ಲಿ ಇರುವುದನ್ನು ಬಿಚ್ಚು ಮನಸ್ಸಿಂದ ಹೇಳುತ್ತಾಳೆ ಹೆಚ್ಚು ಸಮಯ ಮಾತನಾಡುತ್ತಾರೆ ಆಗ ಕೊನೆಗೆ ಯುವಕ ಆದವನು ನೇರವಾಗಿ ಮದುವೆಯಾಗೋಣ ಎಂದು ಹೇಳುತ್ತಾನೆ ನಂತರ ಯುವಕಿಯಾದವಳು ಆಗಲಿ ಎಂದು ಹೇಳುತ್ತಾಳೆ.

ನಂತರ ಯುವಕ ಮನೆಗೆ ಸಂತೋಷದಿಂದ ಬರುತ್ತಾನೆ ನಂತರ ಯುವಕನಿಗೆ ಒಂದು ಪ್ರಶ್ನೆ ಕಾಡುತ್ತದೆ ನಾನು ಈ ಯುವಕಿಗೆ ಕೇಳಿದೆ ಅವಳೇ ಮದುವೆಗೆ ಹೌದು ಎಂದು ಹೇಳಿದಳು ಅಥವಾ ಇಲ್ಲ ಎಂದು ಹೇಳಿದ್ದಾಳೋ ನೆನಪಾಗುತ್ತಿಲ್ಲ ಎಂದು ತುಂಬಾ ಗಲಿಬಿಲಿಯಾಗುತ್ತಾನೆ.

ಕೊನೆಗೆ ಯೋಚನೆ ಮಾಡುತ್ತಾನೆ ಚಿಂತೆ ಮಾಡುವುದಕ್ಕಿಂತ ಒಂದು ಸಾರಿ ಮಾತನಾಡಿ ಬಗ್ಗೆ ಹರಿಸಿಕೊಳ್ಳೋಣ ಎಂದು ಯೋಚಿಸಿ ಮಾರನೆಯ ದಿನ  ನೇರವಾಗಿ ಮತ್ತೆ ಯುವಕಿಗೆ ಹೇಳುತ್ತಾನೆ ದಯವಿಟ್ಟು ಒಂದು ಸಂದೇಹಕಾಣುತ್ತಿದೆ.

ನಾವು ನೆನ್ನೆ  ಮದುವೆಯ ಬಗ್ಗೆ ತುಂಬಾ ಚರ್ಚೆ ಮಾಡಿದವು ಒಂದು ಮಾತು ಮಾತ್ರ ನನಗೆ ಅರ್ಥವಾಗುತ್ತಿಲ್ಲ  ನೀವು ಮದುವೆ ಆಗುವುದಕ್ಕೆ ಒಪ್ಪಿದಿರೋ ಇಲ್ಲವೋ ಎಂದು ನನಗೆ ನೆನಪಾಗುತ್ತಿಲ್ಲ ಎಂದು ಹೇಳಿದಾಗ ಆ ಕಡೆಯಿಂದ ಯುವಕಿಯು ಹೌದು ನನ್ನೆಯಿಂದ ಇದೇ ಸಮಸ್ಯೆ ನನಗೂ ತುಂಬಾ ಕಾಡುತ್ತಿದೆ  ಯಾರಿಗೆ ಹೌದು ಎಂದು ಹೇಳಿದೆ ಎಂದು ನೆನಪಾಗುತ್ತಿಲ್ಲ ಎಂದು ಯುವಕಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಯುವಕ ಮನದಲ್ಲೇ ಕುಸಿಯುತ್ತಾನೆ.

ಕುದುರೆ ಗಾಡಿ ಹಾರುತಿದೆ

ಒಂದು ಹಳ್ಳಿ ಆ ಹಳ್ಳಿಯಲ್ಲಿ ಒಬ್ಬ ಕುದುರೆ ಗಾಡಿ ಓಡಿಸಿಕೊಂಡು ತನ್ನ ಬದುಕು ಸಾಗಿಸುತ್ತಿರುತ್ತಾನೆ ಹಳ್ಳಿಯಿಂದ ಊರಿಗೆ ಹೋಗಬೇಕಾದರೆ ಕುದುರೆಗಾಡಿಯಲ್ಲಿ ಹೋಗಬೇಕಾಗುತ್ತದೆ ಹೀಗಿರುವಾಗ ಆ ಕುದುರೆ ಗಾಡಿಯವನು ಊರಿನ ಆಚೆ ಬಂದಾಗ ಒಂದು ವಿಚಿತ್ರ ರೀತಿಯ ವಸ್ತು ಕಾಣಿಸುತ್ತದೆ.

ಅದಕ್ಕೆ ಚಕ್ರಗಳು ಕೂಡ ಇರುತ್ತದೆ ಇದನ್ನು ಕಷ್ಟಪಟ್ಟು ಎಳೆದುಕೊಂಡು ಬಂದು ಊರಿನಲ್ಲಿ ಅದಕ್ಕೆ ಕುದುರೆಯನ್ನು ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡುತ್ತಾನೆ ಇದರಲ್ಲಿ ಎಲ್ಲರೂ ಕುಳಿತುಕೊಳ್ಳಬಹುದು ಇದರಲ್ಲಿ ಕುಳಿತು ಊರೆಲ್ಲ ಸುತ್ತಬಹುದು ಎಂದು ಹೇಳುತ್ತಾನೆ ಅದು ಚಿಕ್ಕ ವಿಮಾನ ಆದರೆ ಯಾರಿಗೂ ವಿಮಾನ ಎಂದು ತಿಳಿದಿರುವುದಿಲ್ಲ.

 ಒಂದು ಸಾರಿ ಆ ಊರಿಗೆ ಪೈಲೆಟ್ ಆಗಿದ್ದವನು ಬರುತ್ತಾನೆ ಈ ವಿಮಾನವನ್ನು ನೋಡಿ ಆಶ್ಚರ್ಯ ವಡುತ್ತಾನ ಈ ವಿಮಾನ ಇಲ್ಲಿಗೆ ಹೇಗೆ ಬಂತು ಇರಲಿ ಏನು ಆಗಿದೆ ಎಂದು ನೋಡೋಣ ಎಂದ ನಂತರ ಎಲ್ಲವೂ ಒಂದು ಕಡೆಯಿಂದ ಸರಿ ಮಾಡುತ್ತಾನೆ.

ಪೈಲೆಟ್ ಗೆ ತಿಳಿಯುತ್ತದೆ ಸ್ವಲ್ಪ ದೋಷ ಮಾತ್ರ ಸರಿಪಡಿಸಬೇಕು ಮತ್ತೆ ಇಂಧನವನ್ನು ಹಾಕಬೇಕು ಆಗ ವಿಮಾನವು ಹಾರುತ್ತದೆ ಎಂದು ಹೇಳುತ್ತಾನೆ ಆಗ ಆ ಊರಿನವರು ಯಾರೂ ಕೂಡ ಒಪ್ಪುವುದಿಲ್ಲ ನಂತರ ಪೈಲೆಟ್ ಆಕಾಶದಲ್ಲಿ ಹಾರಿಸಿದಾಗ ಎಲ್ಲರೂ ಸಂತೋಷಪಡುತ್ತಾರೆ.

ಕುದುರೆಗಾಡಿ ಹಾರುತಿದೆ ಎಂದು ಹೇಳುತ್ತಾರೆ ಮೊದಲು ಇದು ಏಕೆ ಬರಲಿಲ್ಲ ಎಂದರೆ ಮೊಟ್ಟ ಮೊದಲನೆಯದಾಗಿ ಇಂಜಿನ್ ನಲ್ಲಿ ಸ್ವಲ್ಪ ದೋಷವಿತ್ತು ನಂತರ ಇದರಲ್ಲಿ ಇಂಧನ ಇರಲಿಲ್ಲ. ಮತ್ತೆ ಸರಿಯಾದ ಚಾಲಕನು ಇರಲಿಲ್ಲ ಆದುದರಿಂದ ಇದು ಹಾರಲಿಲ್ಲ.

ಸರಿಯಾದ ವ್ಯಕ್ತಿ ಬಂದು ಎಲ್ಲವನ್ನೂ ಸರಿಪಡಿಸಿದಾಗ ಆಕಾಶದಲ್ಲಿ ಹಾರಿತು ಅದೇ ರೀತಿ ಎಲ್ಲರಲ್ಲಿಯೂ ಕೂಡ ಶಕ್ತಿ ಇದೆ  ಚೈತನ್ಯವಿದೆ ಆತ್ಮವಿಶ್ವಾಸವಿದೆ ಅದಕ್ಕೆ ಸರಿಯಾದ ಗುರುಗಳು ಸಿಕ್ಕಿ ಸರಿಯಾದ ಯೋಜನೆಯನ್ನು ರೂಪಿಸಿ ಮಾರ್ಗದರ್ಶನ ನೀಡಿದರೆ ಯಾವ  ಸಾಧನೆ ಬೇಕಾದರೂ ಮಾಡಬಹುದಾಗಿದೆ.

ಅನುಭವಿಸಿದವರಿಗೆ  ಅರ್ಥವಾಗುತ್ತದೆ

 

ಜೀವನದಲ್ಲಿ ಈ ಸಂದರ್ಭ ಎಲ್ಲರಿಗೂ ಬರಬಹುದು ಮದುವೆಯಾದ ಹೊಸದರಲ್ಲಿ ಸಂಸಾರ ತುಂಬ ಚೆನ್ನಾಗಿ ನಡೆಯುತ್ತಿತ್ತು ಆ ಸಂಸಾರಕ್ಕೆ ಎಷ್ಟು ಹಣ ಬೇಕೋ ಅಷ್ಟು ಹಣವೂ ಸಹಜವಾಗಿ ಬರುತ್ತದೆ.

ಗಂಡ ಹೆಂಡತಿ ಇಬ್ಬರಿಗೂ ಕೆಲಸ ಇರುವುದರಿಂದ  ಸಂಸಾರಕ್ಕೆ ಯಾವುದೇ ರೀತಿಯ ತೊಂದರೆ ಇರಲಿಲ್ಲ ಹೀಗೆ ಇರಬೇಕಾದರೆ ಆಕಸ್ಮಿಕ  ಕಾರಣದಿಂದಾಗಿ ಗಂಡನ ಕೆಲಸ  ಹೋಗುತ್ತದೆ ಮನೆಯಲ್ಲಿ ದುಡಿಯುವವನ . ದುಡಿಮೆ ಬರಲಿಲ್ಲ. ಅಂದರೆ ಮನೆ ಹೇಗೆ ನಡೆಯುತ್ತದೆ  ಇದನ್ನು ಅನುಭವಿಸಿದವರಿಗೇ ಗೊತ್ತು.

 ಹೀಗೆ ಮುಂದುವರೆದಂತೆ ಮನೆಯ ಮಾಲೀಕರು ಬಾಡಿಗೆಯನ್ನು ಕೇಳುತ್ತಾರೆ. ಮನೆಯ ಮಾಲೀಕರಿಗೆ ಬಾಡಿಗೆ ಕಟ್ಟಲು ಆಗುತ್ತಿರಲಿಲ್ಲ. ನಂತರ ಮನೆಯ ಮಾಲೀಕರು ಹೇಗೆ ಕಷ್ಟ ಕೊಡುತ್ತಾರೆಂದರ ಬಾಡಿಗೆ ಕೊಡುತ್ತಿಲ್ಲವೆಂದು ಸಂಜೆಯಾದ ಮೇಲೆ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತಾರೆ.

 ಕರೆಂಟಿನಲ್ಲಿ ಆಗುವಂತಹ ಕೆಲಸ ಮಿಕ್ಕಿಯನ್ನು ಉಪಯೋಗ ಮಾಡುವ ಹಾಗೆ ಕಿರುಕುಳದಲ್ಲಿ ಬದುಕುತ್ತಾರೆ ನಂತರ ಬರುತ್ತಾ ಬರುತ್ತಾ ಕಷ್ಟ ತುಂಬ ಹೆಚ್ಚಾಗಿ  ಬರತೊಡಗಿತು ಬದುಕು ಚಿಂತಾ ಜನಕವಾಯಿತು. ನಂತರ ಗಂಡ ಹೆಂಡತಿ ಇಬ್ಬರು ಕುಳಿತುಕೊಂಡು ಯೋಚನೆ ರೂಪಿಸಿದರು.

 ಈಗ ನಮಗೆ ಈ ರೀತಿಯ ಸಂದರ್ಭ ಬಂದಿದೆ ಈ ಸಂದರ್ಭದಿಂದ ಹೇಗೆ ನಾವು  ಪಾರಾಗಬೇಕು ಎಂದು ಚಿಂತಿಸಿ  ನಿಧಾನವಾಗಿ ಹೆಂಡತಿಯೂ  ಯಾವುದೋ ಒಂದು ಚಿಕ್ಕ, ಕೆಲಸಕ್ಕೆ ಸೇರುತ್ತಾಳೆ. ನಂತರ ಗಂಡನ್ನು ಕೂಡ ಬೇರೆ ಕೆಲಸಕ್ಕೆ ಸೇರಿ ಸ್ವಲ್ಪ ಸಂಪಾದನೆಯನ್ನು ಮಾಡುತ್ತಾನೆ ಮೊದಲು ಐಷಾರಾಮಿಯಾಗಿ ಬದುಕುತ್ತಿದ್ದರು ಅದನ್ನು ಬಿಟ್ಟು ಸಹಜವಾಗಿ ಬದುಕಲು ಶುರು ಮಾಡುತ್ತಾರೆ ಆಗ ಸ್ವಲ್ಪ ಸ್ವಲ್ಪವಾಗಿ ಇವರ ಜೀವನ ಸರಿದಾರಿಗೆ ಬರುತ್ತದೆ.

ನಂತರ ಸಹಜ ಸ್ಥಿತಿಗೆ ಬಂದು ತಲುಪುತ್ತಾರೆ  ಜೀವನದಲ್ಲಿ 2 ಹಾದಿಗಳು ಬರುತ್ತವೆ ನಮ್ಮ ಅಗತ್ಯತೆಗಳು ಕಡಿಮೆ ಮಾಡಿಕೊಳ್ಳುತ್ತಾ ಸರಿಯಾಗಿ ಬ್ಯಾಲೆನ್ಸ್ ಮಾಡುವುದು ನಮ್ಮ ಅವಶ್ಯಕತೆಗಳು ಹೆಚ್ಚಾಗಿ ಇಟ್ಟುಕೊಳ್ಳದೆ ಸದ್ಯಕ್ಕೆ ಏನು ಬೇಕು ಅಷ್ಟರಲ್ಲಿ ಬದುಕುವುದು ಇದೆರಡನ್ನು ಅರ್ಥ ಮಾಡಿಕೊಂಡು ಬದುಕಿದರು ನಮಗೂ ಈ ರೀತಿಯ ಸಂದರ್ಭ ಬರಬಹುದು ಆಗ ನಾವೇ ವಿಶ್ಲೇಷಣೆ ಮಾಡಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಬದುಕೋಣ.

ತೋರಿಕೆಯ ಕಲ್ಲಾಗಿರಲು ಇಷ್ಟವಿಲ್ಲ

ಒಬ್ಬ ಪ್ರಾಮಾಣಿಕ ವ್ಯಕ್ತಿ ಸಾಧ್ಯವಾದಾಗ ಇತರರಿಗೆ ಫಲಪೇಕ್ಷೆ ಇಲ್ಲದೆ ತನು ಮನ ಧನದಿಂದ ಸಹಾಯ ಮಾಡುತ್ತಿರುತ್ತಾರೆ ಪ್ರಾಮಾಣಿಕ ವ್ಯಕ್ತಿ ಒಂದು ಸಮಾರಂಭಕ್ಕೆ ಬರುತ್ತಾರೆ.

ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರ ಮುಂದೆ ಅಭಿನಂದಿಸುತ್ತಾರೆ ನಂತರ ಎಲ್ಲರ ಪರವಾಗಿ ಎರಡು ಮಾತುಗಳನ್ನು ಹೇಳಿ ಎಂದಾಗ ಪ್ರಾಮಾಣಿಕ   ನೀವು ಇಷ್ಟೊಂದು ಗೌರವಿಸುವುದು ಒಳ್ಳೆಯದಲ್ಲ ಏಕೆಂದರೆ ಒಂದು ದೊಡ್ಡ ಬಿಲ್ಡಿಂಗ್ ಅನ್ನು ಕಟ್ಟಬೇಕಾದರೆ ಅದಕ್ಕೆ ಎರಡು ಬಗೆಯ ಕಲ್ಲುಗಳು ಇರುತ್ತವೆ.

ಹೆಚ್ಚು ಬೆಲೆಬಾಳುವ ಅಮೃತಶಿಲೆ ಕಲ್ಲು ಇನ್ನೊಂದು ಸಾಧಾರಣವಾಗಿರುವ ಕಲ್ಲು ಸಾಧಾರಣವಾದ ಕಲ್ಲು ಅಡಿಪಾಯಕ್ಕೆ ಉಪಯೋಗಿಸುತ್ತಾರೆ ಆ ಕಲ್ಲುಗಳು ಮಾತ್ರ ಎಲ್ಲಾ ಭಾರವನ್ನು ಹೊತ್ತಿವೆ ಮತ್ತೆ ಅದು ಕಣ್ಣಿಗೆ ಕಾಣಿಸುವುದಿಲ್ಲ.

ನಮ್ಮ ಕಣ್ಣಿಗೆ ಕಾಣಿಸುವುದು ಅಮೃತಶಿಲೆಯ ಕಲ್ಲುಗಳು ಮಾತ್ರ ಅದೇ ರೀತಿ ನನಗೆ ತೋರಿಕೆಯ ಕಲ್ಲಾಗಿರಲು ಇಷ್ಟವಿಲ್ಲ ಉಪಯೋಗಕ್ಕಾಗಿ ಇರುವ ಕಲ್ಲಾಗಿರಲು ಯೋಚಿಸುತ್ತೇನೆ ಎಂದು ಹೇಳಿದರು

Leave a Comment