ಮಗುವಿಗೆ ಹಿಂಸೆಯಾದರೆ

ಒಂದು ಸಾರಿ ಕರುಣಾಮಯಿ ರಾಜನ ಆಸ್ಥಾನಕ್ಕೆ ಇಬ್ಬರು ಹೆಂಗಸರು ಒಂದು ಮಗುವನ್ನು ತರುತ್ತಾರೆ. ಮಗುವು ತನ್ನದು ಎಂದು ಇಬ್ಬರು ಹೆಂಗಸರು ಹೇಳುತ್ತಾರೆ ಆದರೆ ಅದಕ್ಕೆ ಸಾಕ್ಷಿ ಆಧಾರಗಳು ಇರುವುದಿಲ್ಲ ಇದನ್ನು ಗಮನಿಸಿದ ರಾಜನಿಗೆ ಗಲಿಬಿಲಿಯಾಯಿತು.

ರಾಜ ಇಬ್ಬರೂ ಹೆಂಗಸರನ್ನು ಕರೆದು ಅವರ ಹೇಳಿಕೆಗಳನ್ನು ಕೇಳಿದನು ನಂತರ ಇಬ್ಬರೂ ಹೆಂಗಸರನ್ನು ಗ್ರಹಿಸಿದ ನಂತರ ಸಂಜೆಯವರೆಗೂ ಇಲ್ಲೇ ಇರಿ ಸಂಜೆಗೆ ತೀರ್ಮಾನವಾಗುತ್ತದೆ ಎಂದು ಹೆಂಗಸಿರಿಗೆ ಹೇಳಿದನು. ರಾಜನು ಈ ಸಮಸ್ಯೆಗೆ ಪರಿಹಾರ ಬಾಬಾ ಅವರೇ ತಿಳಿಸುತ್ತಾರೆ ಎಂದು ಬಾಬಾ ಅವರನ್ನು ಕರೆದನು ಬಾಬಾ ಅವರು ಇಬ್ಬರನ್ನು ನೋಡಿದ ನಂತರ ಬಾಬಾ ಅವರು ರಾಜನಿಗೆ ಹೇಳಿದರು.

 ನಿಮ್ಮ ಕತ್ತಿಯನ್ನು ತೆಗೆದು ಮಗುವನ್ನು ಇಟ್ಟು ಎರಡು ಭಾಗ ಮಾಡಿ ಎಂದು ಹೇಳಿದರು. ರಾಜನಿಗೆ ಗೊಂದಲವಾಯಿತು ಬಾಬಾ ಅವರು ನೀವು ಎರಡು ಭಾಗ ಮಾಡಲೇಬೇಕು ಎಂದಾಗ ರಾಜನು ಕತ್ತಿಯನ್ನು ತೆಗೆದನು ಆಗ ಒಂದು ಹೆಂಗಸು ಕಣ್ಣೀರಿಡುತ್ತಾ ಈ ಮಗು ನನ್ನದಲ್ಲ ಎಂದು ಹೇಳಿದಳು.

ಆಗ ಬಾಬಾ ಅವರು ತಗೋ ಈ ಮಗು ನಿನ್ನದೇ ಎಂದು ಅಳುತ್ತಿರುವ ಹೆಂಗಸಿಗೆ ಮಗುವನ್ನು ನೀಡಿದರು  ಆಗ ರಾಜನಿಗೆ ದಿಗ್ ಭ್ರಮೆಯಾಯಿತು. ಇದನ್ನು ಗಮನಿಸಿದ ಬಾಬಾ ಅವರು ಯಾವುದೇ ಕಾರಣಕ್ಕೂ  ತಾಯಿ ತನ್ನ ಮಗುವಿಗೆ ಹಿಂಸೆಯಾದರೆ ಸಹಿಸಲಾರಳು ಅಂತಹದರಲ್ಲಿ ತನ್ನ ಮಗುವನ್ನು ಕತ್ತರಿಸುವುದನ್ನು ಹೇಗೆ ನೋಡುತ್ತಾಳೆ ಆದ್ದರಿಂದ ಆ ಮಗು ನನ್ನದಲ್ಲ ಎಂದು ತ್ಯಾಗ ಮಾಡಿದ್ದಾಳೆ. ಬೇರೆ ಹೆಂಗಸಿಗೆ ಇದ್ದರೇನು ಹೋದರೇನು ಮಗು ತನ್ನದಲ್ಲ ಎಂದು ವಿವರವಾಗಿ ತಿಳಿಸಿದರು ಆಗ ರಾಜನಿಗೆ ಅರ್ಥವಾಯಿತು.

ಭಿಕ್ಷೆ ಬೇಡಿ ಬದುಕುತ್ತಿಲ್ಲ

ಒಂದು ಊರಿನಲ್ಲಿ ದಯಾಮಯಿ ರಾಜ ಇದ್ದನು ಅವನು ಆಗಾಗ ಊರಿನ ಹೊರಗೆ ಹೋಗಿ ಬರುತ್ತಿದ್ದನು. ಒಂದು ಸಾರಿ ರಾಜನು ಒಂದು ಭಿಕ್ಷುಕನನ್ನು ನೋಡಿದನು ರಾಜನಿಗೆ ಕನಿಕರವೂ ಬಂತು ದುಡಿದು ತಿನ್ನುವ ವಯಸ್ಸಿನಲ್ಲಿ ಭಿಕ್ಷೆ ಬೇಡುತ್ತಾರಲ್ಲ ಎಂದು ಯೋಚಿಸಿ ನಂತರ ಅವರು ಹೇಗಾದರೂ ಬದುಕಲಿ ಎಂದು ಮನಸ್ಸಿನಲ್ಲಿ ಅಂದುಕೊಂಡನು.

ಸ್ವಲ್ಪ ಸಮಯದ ನಂತರ ಭಿಕ್ಷುಕ ಬಂದು ಭಿಕ್ಷೆ ಕೊಡಿ ಎಂದು ಕೇಳಿದ ಅದಕ್ಕೆ ರಾಜನಾದವನು ದೀರ್ಘವಾಗಿ ಯೋಚಿಸಿ ಚಿನ್ನದ ಒಂದು ನಾಣ್ಯವನ್ನು ನೀಡಿದನು. ಮತ್ತೆ ಮರುದಿನ ನೋಡಿದಾಗ ಮತ್ತೆ ಭಿಕ್ಷುಕ  ಕಾಣಿಸಿಕೊಂಡನು ಆಗ ರಾಜನು ಚಿನ್ನದ ನಾಣ್ಯವನ್ನು ಗಲೀಜು ನೀರಿನಲ್ಲಿ ಹಾಕಿದನು. ಬಿಕ್ಷುಕನು ಆ ನಾಣ್ಯವನ್ನು ತೆಗೆದುಕೊಂಡು ಹೋದನು.

ನಾಲ್ಕು ದಿನದ ನಂತರ ಮತ್ತೆ ಭಿಕ್ಷುಕ ಕಾಣಿಸಿಕೊಂಡನು ಆಗ ರಾಜನು ಯೋಚನೆ ಮಾಡಿ ಒಂದು ಚಿನ್ನದ ನಾಣ್ಯವನ್ನು ಕೆಸರು ತುಂಬಿರುವ ಹಳ್ಳದಲ್ಲಿ ಹಾಕಿದನು. ಕೆಸರು ತುಂಬಿದ್ದರಿಂದ ದುರ್ನಾಥ ವಾಸನೆ ಬರುತ್ತಿತ್ತು. ಬಿಕ್ಷುಕನು ದುರ್ನಾಥವನ್ನು ಲೆಕ್ಕಿಸದೆ ಮತ್ತೆ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡನು.

ಕೆಲವು ದಿನಗಳ ನಂತರ ರಾಜ ಮತ್ತೆ ಬಂದು ನೋಡಿದರೆ ಭಿಕ್ಷುಕ ಕಾಣಲಿಲ್ಲ ಭಿಕ್ಷುಕ ಎಲ್ಲಿರಬಹುದು ಎಂದು ಯೋಚಿಸಿದನು ಕೆಲವು ದಿನಗಳ ನಂತರ ಭಿಕ್ಷುಕ ಸೌದೆಯನ್ನು ಸಂಗ್ರಹಿಸಿ ಊರಿಗೆ ಹೋಗಿ ಮಾರಿ ತನ್ನ ಜೀವನ ನಡೆಸುತ್ತಿದ್ದನು. ಇದನ್ನು ಕಂಡ ರಾಜನಿಗೆ ತುಂಬಾ ಸಂತೋಷವಾಯಿತು.

ಒಂದು ಚೀಲ ಚಿನ್ನದ ನಾಣ್ಯವನ್ನು ಕೊಡಲು ರಾಜ ಮುಂದಾದನು. ಆಗ ಭಿಕ್ಷುಕ ಹೇಳಿದ ಮಹಾರಾಜರೇ ನಾನು ಭಿಕ್ಷೆ ಬೇಡಿ ಬದುಕುತ್ತಿಲ್ಲ ನೀವು ನನಗೆ ಹೇಗೆ ದುಡಿದು ಬದುಕಬೇಕು ಎಂದು ಕಲಿಸಿದ್ದೀರಾ ಈಗ ನಾನೇ ದುಡಿದು ತಿನ್ನುತ್ತೇನೆ. ನಾನು ಸ್ವಾಭಿಮಾನಿ ನನಗೆ ಏನೋ ತೊಂದರೆ ಇತ್ತು ಆದ್ದರಿಂದ ನಾನು ಭಿಕ್ಷೆ ಪಡೆದೆ ಈಗ ನಾನು ಸ್ವಂತವಾಗಿ ಬದುಕುತ್ತೇನೆ ಎಂದು ಗೌರವದಿಂದ ಕೃತಜ್ಞತೆ ಸಲ್ಲಿಸಿದನು.

ಸಾಧಕನ ಮೊದಲ ಹೆಜ್ಜೆ

ಒಂದು ಅಕ್ಕೇರಿಯಂ ಸೆಂಟರ್‌ ಇತ್ತು ಅಲ್ಲಿ ಹೋಗಿ ನೋಡಿದಾಗ ನಮಗೆ ನಿಜವಾಗಲೂ ಆಶ್ಚರ್ಯವಾಯಿತು ಒಂದೊಂದು ಅಕ್ಕೇರಿಯಂ ಒಂದೊಂದು ಕೊಠಡಿ ಎಷ್ಟು ದೊಡ್ಡದ್ದಾಗಿದೆ ಒಂದೊಂದು ಮೀನು ಕೂಡ ತುಂಬ ದೊಡ್ಡದಾಗಿದೆ.

 ಬಣ್ಣ ಬಣ್ಣದ ಮೀನುಗಳಿವೆ ಒಂದೊಂದು ಅಕ್ವೇರಿಯಂ ನಲ್ಲಿ  ವಿಧವಿಧವಾದ ಮೀನುಗಳಿವೆ. ಮೊದಲನೇ ಸಾರಿ ಈ  ದೊಡ್ಡ ಗಾತ್ರದ ಅಕ್ವೇರಿಯಂ ಹಾಗೂ ವಿಶೇಷ ಮೀನುಗಳನ್ನು ನೋಡಿ ಕುತೂಹಲ ಹೆಚ್ಚಾಯಿತು ಎಲ್ಲವೂ ಗಮನಿಸಿದೆವು.

ಒಂದು ಚಿಕ್ಕ ಹುಡುಗ ಒಂದು ಪ್ರಶ್ನೆ ಕೇಳಿದ ಅಷ್ಟು ದೊಡ್ಡದಾಗಿ ಮೀನು ಬೆಳೆಯುತ್ತದೆಯೇ? ಆಗ ಆ ಅಕ್ಕೇರಿಯಂ ಅಂಗಡಿವನು ಹೇಳಿದ ನಾವು ಮನೆಯಲ್ಲಿ ಚಿಕ್ಕ ಚಿಕ್ಕ ಅಕ್ಕೇರಿಯಂಗಳು ಇಟ್ಟಿರುತ್ತೇವೆ ಅದರಲ್ಲಿ ಚಿಕ್ಕದಾಗಿಯೇ ಮೀನುಗಳು ಬೆಳೆಯುತ್ತವೆ.

ನೀವು ಎಷ್ಟು ದೊಡ್ಡ ಅಕ್ಕೇರಿಯಂ ಮಾಡುತ್ತೀರೋ ಅಷ್ಟು ದೊಡ್ಡದಾಗಿ ಮೀನು ಬೆಳೆಯುತ್ತದೆ ನದಿ ಕೆರೆಗಳಲ್ಲಿ ಚಿಕ್ಕದಾಗಿ, ಸಾಧಾರಣ, ಮೀನು ಸಿಗುತ್ತದೆ ಅದೇ ನೀವು ಸಮುದ್ರದಲ್ಲಿ ಸಾಗರದಲ್ಲಿ ನೋಡಿದಾಗ ತುಂಬಾ ದೊಡ್ಡದಾಗಿ ಇರುವ ಮೀನುಗಳೂ, ತಿಮಿಂಗಲಗಳು ಇರುತ್ತವೆ ಎಂದು ತಿಳಿಸಿದರು.

ಅಕ್ಕೇರಿಯಂ ಎಷ್ಟು ದೊಡ್ಡದಾಗಿ ಇರುತ್ತದೆಯೋ ಮೀನು ಅಷ್ಟು ಬೆಳೆಯುತ್ತದೆ ಹಾಗೆಯೇ ನಮ್ಮ ಆಲೋಚನೆಗಳು, ನಮ್ಮ ಗುರಿಗಳು, ಚಿಕ್ಕದಿದ್ದರೆ ಅದು ಚಿಕ್ಕದಾಗಿಯೇ ಬೆಳೆಯುತ್ತದೆ. ಅದೇ ಆಲೋಚನೆಗಳು ದೊಡ್ಡದಾಗಿದ್ದರೆ ಆಲೋಚನೆಯಂತೆಯೇ ನಾವು  ಬೃಹದಾಕಾರವಾಗಿ ಬೆಳೆಯುತ್ತೇವೆ.

ಸಾಧಕನ ಮೊದಲ ಹೆಜ್ಜೆ ಮನಸ್ಸು ತುಂಬ ವಿಶಾಲತೆಯಿಂದ ಇರಬೇಕು. ಆಲದ ಮರದ ಬೀಜ ತುಂಬಾ ಚಿಕ್ಕದಾಗಿರುತ್ತದೆ ಅದನ್ನು ನಾವು ಚಿಕ್ಕದಾಗಿ ಬೆಳೆಸಿದರೆ ಚಿಕ್ಕದಾಗಿ ಬೆಳೆಯುತ್ತದೆ ಅದೇ ನಾವು ಕಾಡಿನಲ್ಲಿ ಬೆಳೆಸಿದರೆ ಬೃಹತ್ ಕಾರವಾಗಿ ಬೆಳೆಯುತ್ತದೆ ಅದೇ ರೀತಿ ನಮ್ಮ ಆಲೋಚನೆಗಳು ಯಾವ ಮಟ್ಟದಲ್ಲಿ ನಾವು ರೂಪಿಸಿಕೊಳ್ಳುತ್ತವೆ ಎನ್ನುವುದು ನಮಗೆ ಸೇರಿದ್ದು.

 

ಮಧ್ಯವನ್ನು ಏಕೆ ಕುಡಿಯಬಾರದು?

ಒಬ್ಬ ಧೈರ್ಯವಂತ ಮನುಷ್ಯ ಬಾಬಾ ಅವರ ಬಳಿಗೆ ಹೋಗಿ ಕಪ್ಪು ದ್ರಾಕ್ಷಿ ತಿನ್ನಬಹುದೇ ಎಂದನು ಅದಕ್ಕೆ ಬಾಬಾ ಅವರು ಧಾರಾಳವಾಗಿ ತಿನ್ನಬಹುದು ಎಂದರು ನಂತರ ನೀರು ಕುಡಿಯಬಹುದೇ ಎಂದು ಪ್ರಶ್ನೆ ಕೇಳಿದನು. ಅದಕ್ಕೂ ಬಾಬಾ ಅವರು ಕುಡಿಯಬಹುದು ಎಂದರು ನಂತರ ಸಕ್ಕರೆ ಬೆಲ್ಲ ತಿನ್ನಬಹುದಲ್ಲವೇ ಎಂದನು ಹೌದು ಎಂದು ಹೇಳಿದಾಗ ಈ ಮೂರನ್ನು ಸೇರಿಸಿ ಮಾಡಿರುವ ಮತ್ತು ಬರಿಸುವ ಮಧ್ಯವನ್ನು ಏಕೆ ಕುಡಿಯಬಾರದು ಮಲಗಿದ ಹಾವಿಗೆ ಕೆರಳಿಸಿದಂತೆ ಕೇಳಿದನು.

ಬಾಬಾ ಅವರು ಯುವಕನನ್ನು ಮುಂದೆ ಕುಳಿತುಕೋ ಎಂದು ಹೇಳಿ ತಲೆಯ ಮೇಲೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿದರು ಈಗ ನಿನಗೆ ಏನಾದರೂ ಆಗುತ್ತದೆಯೇ ಎಂದು ಕೇಳಿದರು. ಮನುಷ್ಯನು ಏನೂ ಇಲ್ಲ ಎಂದನು ನಂತರ ತಲೆಯ ಮೇಲೆ ಒಂದು ಬಟ್ಟೆಯನ್ನು ಹಾಕಿ ಸೀಮೆಎಣ್ಣೆ ಸುರಿದರು ಆಗ ಏನಾದರೂ ನಿನಗೆ ತೊಂದರೆ ಆಯಿತೇ ಎಂದು ಮೃದುವಾಗಿ ಕೇಳಿದರು.

 ಮನುಷ್ಯ ಎದೆ ಹುಬ್ಬಿಸಿ ಏನೂ ಇಲ್ಲ ಎಂದು ಹೇಳಿದನು ನಂತರ ಬಾಬಾ ಅವರು ದೂರದಿಂದ ಬೆಂಕಿ ಕಡ್ಡಿಯನ್ನು ಹಚ್ಚಿ ಈ ಬೆಂಕಿಯನ್ನು ತಲೆಯ ಮೇಲೆ ಇಟ್ಟರೆ ಏನಾಗುತ್ತದೆ ಎಂದು ಕೇಳುತ್ತಾರೆ ಆಗ ಬಾಬಾ ಅವರು ಈ ರೀತಿ ಉದಾಹರಣೆ ಕೊಟ್ಟಾಗ ದಿಕ್ಕು ತೋಚದೆ ಕಕ್ಕಾಬಿಕ್ಕಿಯಾಗಿ ಕ್ಷಮೆ ಕೇಳುತ್ತಾನೆ.

ಇಲ್ಲದೆ ಇರುವುದನ್ನು ನಂಬುತ್ತೇವೆ

ಒಬ್ಬ ಮನುಷ್ಯ ಹಳ್ಳಿಗೆ ಹೋದನು ಅಲ್ಲಿ ದೊಡ್ಡದಾದ ಹಕ್ಕಿಗಳ ಅಂಗಡಿ ಇತ್ತು ಹಲವಾರು ವಿಧವಾದ ಹಕ್ಕಿಗಳನ್ನು ನೋಡಿ ಆನಂದ ಪಟ್ಟನು ಹಲವಾರು ರೀತಿಯ ಬಣ್ಣ ಬಣ್ಣದ ಹಕ್ಕಿಗಳು ಚಿಲಿಪಿಲಿ ಎಂದು ಶಬ್ದ ಮಾಡುತ್ತಿದ್ದವು. ಈ ಶಬ್ದ ಇವನಿಗೆ ತುಂಬಾ ಸಂತಸ ಉಂಟು ಮಾಡಿತು ಎಲ್ಲಾ ಹಕ್ಕಿಗಳನ್ನು ನೋಡಿದ ಮೇಲೆ ನಾಳೆ ಬಂದು ಖರೀದಿಸೋಣ ಎಂದು ಮನೆಗೆ ಬಂದನು.

ರಾತ್ರಿ ಮಲಗಿದಾಗ ಅವನಿಗೆ ಅದೇ ಹಕ್ಕಿಗಳ ಕನಸು ಕಾಣುತ್ತಾನೆ. ಆ ಹಕ್ಕಿಯು ಇವನು ಖರೀದಿಸಿಕೊಂಡು ಬಂದಿದ್ದಾನೆ ಆ ಹಕ್ಕಿಯು ಮನುಷ್ಯರಂತೆ ಮುದ್ದು ಮುದ್ದಾಗಿ ಮಾತನಾಡುತ್ತಿದೆ ಇದನ್ನು ನೋಡಿದ ಇವನಿಗೆ ತುಂಬಾ ಆಶ್ಚರ್ಯವಾಯಿತು.

ಹಕ್ಕಿಯು ನನ್ನನ್ನು ಬಂದಮುಕ್ತನನ್ನಾಗಿ ಮಾಡು ನಿನಗೆ ನಾನು ಮೂರು ಅಮೂಲ್ಯವಾದ ಮಾತುಗಳನ್ನು ಹೇಳುತ್ತೇನೆ ಎಂದಾಗ ಮನುಷ್ಯ ಪ್ರಶ್ನಿಸುತ್ತಾನೆ ಇದರಿಂದ ನನಗೇನು ಲಾಭ ಆಗ ಹಕ್ಕಿಯು ಇದರಿಂದ ನಿನಗೆ ಅತ್ಯ ಅಮೂಲ್ಯ ವಿಷಯಗಳು ತಿಳಿಯಬಹುದಾಗಿದೆ ಎಂದು ಹಕ್ಕಿ ಹೇಳುತ್ತದೆ.

ಮನುಷ್ಯ ನಾನು ನಿನ್ನನ್ನು ಹೇಗೆ ನಂಬಬೇಕು ಎಂದು ಪ್ರಶ್ನೆ ಕೇಳುತ್ತಾನೆ ಆಗ ಹಕ್ಕಿಯು ಮೊದಲನೆಯ ಮಾತು ನಾನು ಪಂಜರದಲ್ಲಿ ಇರುವಾಗಲೇ ಹೇಳುತ್ತೇನೆ.

ಎರಡನೆಯ ಮಾತು ಮರದ ಕೊಂಬೆಯ ಮೇಲೆ ಕುಳಿತುಕೊಂಡು ಹೇಳುತ್ತೇನೆ. ಮೂರನೆಯ ಮಾತು ಆಕಾಶದಲ್ಲಿ ಹಾರುತ್ತಾ ಹೇಳುತ್ತೇನೆ ಎಂದು ನಂಬಿಕೆ ಹುಟ್ಟಿಸಿತು. ಮನುಷ್ಯ ಈ ಮಾತನ್ನು ಕೇಳಿದಾಗ ಆಗಲಿ ಎಂದು ಹಕ್ಕಿ ಪಂಜರದಲ್ಲಿಯೇ ಇದ್ದು ಮೊದಲನೇ ಮಾತು ಹೇಳುತ್ತದೆ.

 1) ಕಳೆದುಕೊಂಡ ವಸ್ತು ಅದು ಎಷ್ಟೇ ಅತ್ಯಂತ ಅಮೂಲ್ಯವಾಗಿರಬಹುದು ಕಳೆದುಕೊಂಡಿದ್ದರೆ ಅದರ ಬಗ್ಗೆ ಎಷ್ಟೇ ಚಿಂತೆ ಮಾಡಿದ್ದರು ಅದು ಪುನಃ ಸಿಗುವುದಿಲ್ಲ ಇರುವ ಸಮಯವನ್ನು ಯಾವುದೇ ಕಾರಣಕ್ಕೂ ವ್ಯರ್ಥ ಗೊಳಿಸಬಾರದು. ನಿನ್ನ ಅನುಭವಕ್ಕೆ ಬಂದಿದ್ದು ಮಾತ್ರ ಸತ್ಯ ಈ ಮಾತನ್ನು ಕೇಳಿ ಸಂತೋಷವಾಯಿತು.

 ಮನುಷ್ಯನು ಪಂಜರದ ಬಾಗಿಲನ್ನು ತೆಗೆದನು ಹಕ್ಕಿಯು ಮರದ ಕೊಂಬೆಯ ಮೇಲೆ ಕುಳಿತು ಎರಡನೆಯ ಮಾತು ನೀನು ಏನು ಅನುಭವಿಸುತ್ತಿದ್ದೆಯೋ ಅದೇ ಸತ್ಯ ಪರೀಕ್ಷಿಸದೆ ಯಾವುದನ್ನು ಅನುಸರಿಸಬೇಡ ಎಂದು ಹೇಳಿತು.

ಹಕ್ಕಿಯು ಅಗಸದಲ್ಲಿ ಹಾರತೊಡಗಿತು ಹಾರುತ್ತಲೇ ಹೇಳಿತು ಎಂಥ ಮೂರ್ಖ ನೀನು ನನ್ನ ಹೊಟ್ಟೆಯಲ್ಲಿ ಒಂದು ವಜ್ರವಿತ್ತು ನನಗೆ ಕುಯ್ದಿದ್ದರೆ ದೊಡ್ಡ ಶ್ರೀಮಂತನಾಗುತ್ತಿದ್ದೆ ಎಂದಾಗ ಮನುಷ್ಯನು ಸಿಕ್ಕಿದ್ದು ಕಳೆದುಕೊಂಡೆ ಎಂದು ಕೊರಗಿದನು.

 ನಂತರ ಮೂರನೇ ಮಾತನ್ನು ಹೇಳು ಎಂದು ಕಳಕಳಿಯಿಂದ ಕೇಳಿದನು ಹಕ್ಕಿಯು ಆಕಾಶದಲ್ಲಿ ಹಾರುತ್ತಾ ನನ್ನ ಎರಡು ಮಾತುಗಳನ್ನೇ ನೀನು ಉಪಯೋಗಿಸಿಕೊಳ್ಳಲಿಲ್ಲ ಮೂರನೆಯ ಮಾತು ವ್ಯರ್ಥ ನನ್ನ ಹೊಟ್ಟೆಯಲ್ಲಿ  ವಜ್ರವಿದೆ  ಎಂದರು ನೀನು ಹೇಗೆ ನಂಬುತ್ತೀಯ ನಾನು ಸುಳ್ಳು ಹೇಳಿದೆ.

ನಾನು ಈಗ ಆಕಾಶದಲ್ಲಿ ಹಾರುತಿದ್ದೇನೆ ಇಲ್ಲದೆ ಇರುವುದನ್ನು ನಂಬಿ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಬೇಡ ಎಂದು ಹೇಳಿ ಮಾಯವಾಯಿತು ಈ ಸತ್ಯವನ್ನು ನಾವು ಕೂಡ ಅರ್ಥಮಾಡಿಕೊಳ್ಳೋಣ.

Leave a Comment