ಹೋದ ಜೀವ ಬಂತು

ದೂರದ ಪ್ರಯಾಣ ಮಾಡಬೇಕಾಗಿದ್ದರೆ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು ದೊಡ್ಡ ಹಡಗಿನಲ್ಲಿ ಎಲ್ಲಾ ಸೌಲಭ್ಯವೂ ಇರುತ್ತಿತ್ತು ಸಾಮಾನ್ಯವಾಗಿ ಹಡಗಿಗೆ ಮೂರು ಅಥವಾ ನಾಲ್ಕು ಇಂಜಿನ್ ಗಳು ಇರುತ್ತವೆ.

 ಒಂದು ಕೆಟ್ಟು ಹೋದರೆ ಇನ್ನೊಂದು ಬದಲಿಗಾಗಿ ಇಟ್ಟಿರುತ್ತಾರೆ ಹೀಗೆ ಊರಿನಿಂದ ಸ್ವಲ್ಪ ದೂರ ಹೊರಟಿದ ನಂತರ ಮುಖ್ಯವಾದ ಇಂಜಿನಿನಲ್ಲಿ ಸ್ವಲ್ಪ ದೋಷ ಕಂಡು ಬಂತು.

  ನಾವಿಕನಿಗೆ ಗಾಬರಿಯಾಯಿತು ಹೇಗಾದರೂ ಮಾಡಿ ಬೇಗ ರಿಪೇರಿ ಮಾಡಬೇಕು ಇಲ್ಲದಿದ್ದರೆ ಮುಂದೆ ತೊಂದರೆಯಾಗಬಹುದು ಎಂದು ತಿಳಿದು ಹಡಗಿನ ಮಾಲೀಕನಿಗೆ ವಿಷಯವನ್ನು ತಿಳಿಸಿದನು ಅದಕ್ಕಾಗಿ ಗೊತ್ತಿರುವ ಸಣ್ಣಪುಟ್ಟ ಮೆಕ್ಯಾನಿಕ್ ಗಳನ್ನು ಕೇಳಿದನು.

 ಅವರೆಲ್ಲರೂ ಇಂಜಿನ್ ನ ದೋಷದ ಬಗ್ಗೆ ಪರಿಶೀಲನೆ ಮಾಡ ತೊಡಗಿದನು ಆದರೂ ಇವರಿಗೆ ಅದರ ದೋಷ ಏನೆಂದು ತಿಳಿಯಲಿಲ್ಲ ಕೊನೆಗೆ ಮಾಲೀಕನು ಹೇಳಿದನು ಇಲ್ಲಿ ಹತ್ತಿರದಲ್ಲಿ ಉತ್ತಮವಾದ ಮೆಕಾನಿಕ್ ಯಾರಾದರೂ ಇದ್ದಾರೆಯೇ ಎಂದು ಕೇಳಿದಾಗ ಒಬ್ಬರು ಸೂಚಿಸಿದರು.

 ಸ್ವಲ್ಪ ದೂರದಲ್ಲಿಯೇ ಒಬ್ಬ ವಯಸ್ಸಾದ ಮೆಕಾನಿಕ್ ಇದ್ದಾರೆ ಅವರು ಈ ದೋಷವನ್ನು ಸರಿ ಮಾಡಬಲ್ಲರು ಅವರನ್ನು ಕರೆಯುವುದೇ ಉತ್ತಮ ಎಂದರು ಆಗ ಅವರನ್ನು ಸುದ್ದಿ ಮುಟ್ಟಿಸಿ ಚಿಕ್ಕದಾಗಿ ಇರುವ ವೇಗವಾಗಿ ಹೋಗುವ ಹಡಗಿನಲ್ಲಿ ಅವರೂ ಬಂದರು.

 ನಾವಿಕನಿಗೆ ಮತ್ತೆ ಹಡಗಿನ ಸಿಬ್ಬಂದಿಯವರಿಗೆ ಇರುವ ದೋಷದ ಬಗ್ಗೆ ಕೇಳಿದರು ನಂತರ ಎಲ್ಲಿ ಎಲ್ಲಿ ಏನೇನು ದೋಷವಿದೆ ಎಂದು ಪರಿಶೀಲಿಸಿದರು ಅವರು ಮಾಡಿದ ಕೆಲಸಗಳನ್ನೆಲ್ಲಾ ವಿವರಿಸಿದರು ನಂತರ ವಯಸ್ಸಾದ ಮೆಕಾನಿಕ್ ಸೂಕ್ಷ್ಮವಾಗಿ ಗಮನಿಸಿ ಇಂಜಿನಿನ ತಲೆಯ ಮೇಲೆ ಒಂದು ಚಿಕ್ಕ ಸುತ್ತಿಗೆಯಿಂದ ಪಟಾರ್ ಎಂದು ಹೊಡೆದರು.

ಇಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು ಆಗ ಸಿಬ್ಬಂದಿಯವರಿಗೆ ಹೋದ ಜೀವ ಬಂತು ನಂತರ ಮೆಕಾನಿಕ್ ಆಗ ಹೊರಡಲಿಕ್ಕೆ ಸಿದ್ಧವಾದರು ಹಣ ಎಷ್ಟು ಎಂದು ಕೇಳಿದರು ಮೆಕಾನಿಕ್ ಇಪ್ಪತ್ತೈದು ಸಾವಿರ ಎಂದು ಹೇಳಿದರು.

ಮಾಲೀಕರು  ಅತಿ ಬುದ್ದಿವಂತರು ಮಾಡಿದ ಕೆಲಸಕ್ಕೆ ರಶೀದಿ ಬರೆದು ಕೊಡಿ ಎಂದು ಕೇಳಿದರು ಅದಕ್ಕೆ

ಕಿಲಾಡಿ ಹಿರಿಯ ಮೆಕಾನಿಕ್  ರಶೀದಿಯಲ್ಲಿ ಹೀಗೆ ಬರೆದಿದ್ದನು 10 ರೂಪಾಯಿ ಹೊಡೆದದ್ದಕ್ಕೆ ಮಾತ್ರ ಮತ್ತೆ ಎಲ್ಲಿ ಹೊಡೆಯಬೇಕು ಹೇಗೆ ಹೊಡೆಯಬೇಕು ಯಾವ ಪ್ರಮಾಣದಲ್ಲಿ ಹೊಡೆಯಬೇಕು ಎಂಬ ಜ್ಞಾನಕ್ಕೆ 24490 ರೂಪಾಯಿ ಎಂದು ಬರೆದಿದ್ದರು.

ಮಾಲೀಕರು ಮರು ಮಾತನಾಡದೆ ಹಣ ನೀಡಿ ಕಳಿಸಿದರು ಕೆಲಸಕ್ಕೆ ಕೌಶಲ್ಯಕ್ಕೆ ಬೆಲೆ ಇದ್ದೇ ಇದೆ. ನಾನು ಯಾವ ಕೌಶಲ್ಯಗಳಲ್ಲಿ ಪರಿಣಿತಿ ಪಡೆದಿದ್ದೇನೆ?

ದಾರಿ ತಪ್ಪಿದವರು ಅವರು

ಮೈಸೂರಿನಲ್ಲಿ ಪ್ರತಿವರ್ಷವೂ ವಸ್ತುಪ್ರದರ್ಶನ ನಡೆಯುತ್ತದೆ ಬಂದು ಸಾರಿ ನಡೆದ ಘಟನೆ ಹಲವಾರು ಕಡೆ ಹಲವಾರು ಪ್ರದರ್ಶನಗಳು ಇರುತ್ತವೆ ತಂದೆ ತಾಯಿ ಒಂದು ಮಗು ವಸ್ತು ಪ್ರದರ್ಶನವನ್ನು ನೋಡಲು ಬರುತ್ತಾರೆ.

ಹಲವು ಉಯ್ಯಾಲೆಗಳು ಹಲವು ಪಾರ್ಕು ಅಂಗಡಿಗಳು ಎಲ್ಲವೂ ನೋಡಿ ಹುಡುಗನು ಸ್ವಲ್ಪ ಸುಸ್ತಾಗಿರುತ್ತಾನೆ ಇದನ್ನು ನೋಡಿ ತಂದೆ ತಾಯಿಯರು ನೀನು ಇಲ್ಲೇ ಕುಳಿತಿರು ಎಂದು ಬಂದು ಕಡೆ ಕೂರಿಸಿ ಸ್ವಲ್ಪ ಸಮಯದಲ್ಲಿಯೇ ನಾವು ಬರುತ್ತೇವೆ ಎಂದು ಹೇಳಿ ಇನ್ನು ಮುಂದೆ ಹೋಗುತ್ತಾರೆ ನಂತರ ಮೈಕಿನಲ್ಲಿ ಹೇಳುತ್ತಿರುತ್ತಾರೆ.

ರಾಜು ಎನ್ನುವ ಹುಡುಗ ಕಾಣೆಯಾಗಿದ್ದಾನೆ ಹತ್ತು ವರ್ಷದ ಹುಡುಗ ಕೆಂಪು ಶರಟು ಬಿಳಿ ಪ್ಯಾಂಟು ಹಾಕಿದ್ದಾನೆ ಇದನ್ನು ಕೇಳಿದ ಒಬ್ಬ ವ್ಯಕ್ತಿ ಹುಡುಗನನ್ನು  ನೋಡಿ ನಿನ್ನ ಹೆಸರು ರಾಜು ಅಲ್ಲವೇ ನಿಮ್ಮ ತಂದೆ ತಾಯಿ ಹೆಸರು ಇದಲ್ಲವೇ ನಿನ್ನನ್ನು ಮೈಕಿನಲ್ಲಿ ಕಳೆದು ಹೋಗಿದ್ದೀಯಾ ಎಂದು ಹೇಳುತ್ತಿದ್ದಾರಲ್ಲ ನೀನು ಇಲ್ಲೇ ಕುಳಿತಿದ್ದೀಯಾ ಎಂದು ಕೇಳುತ್ತಾರೆ.

 ಹುಡುಗ ನಗುತ್ತಾನೆ ದಾರಿ ತಪ್ಪಿದವರು ಅವರು ನಾನು ಇಲ್ಲೇ ಸರಿಯಾಗಿ ಕುಳಿತಿದ್ದೇನೆ ಅವರು ಮಾತ್ರ ದಾರಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳುತ್ತಾನೆ.

ಈ ವ್ಯಕ್ತಿ ಏನಾದರೂ ಆಗಲಿ ಬಾ ಮಗು ನಾನು ಅಲ್ಲಿಗೆ ಬರುತ್ತೇನೆ ಎಂದು ಕರೆದುಕೊಂಡು ಹೋಗಿ ಕಂಟ್ರೋಲ್ ರೂಮಿನ ಹತ್ತಿರ ಬಿಡುತ್ತಾರೆ ಆಗ ತಂದೆ ತಾಯಿಯರು ಅಳುತ್ತಾ ಎಲ್ಲಿ ತಪ್ಪಿಸಿಕೊಂಡಿದ್ದೇ ಎಂದು ಕೇಳುತ್ತಾರೆ.

 ಆಗ ಹುಡುಗ ವಿನಯವಾಗಿ ಹೇಳುತ್ತಾನೆ ತಪ್ಪಿಸಿಕೊಂಡವರು ನೀವೇ ಅಲ್ಲವೇ ಎನ್ನುತ್ತಾನೆ ನೀವು ನನಗೆ ಎಲ್ಲಿ ಕುಳಿತಿರು ಎಂದು ಹೇಳಿದ್ದೀರೋ ನಾನು ಅಲ್ಲಿಯೇ ಕುಳಿತಿದ್ದೇನೆ ನಿಮ್ಮ ಬರುವಿಕೆಗೆ ನಾನು ಕಾಯುತ್ತಿದ್ದೇನೆ ಎಂದನು .

ಎಡವಟ್ಟು ಆಗಿದ್ದು ಎಲ್ಲಿ ಎಂದರೆ ತಂದೆ ತಾಯಿ ಆಚೆ ಹೋದವರು ಮಗುವನ್ನು ಎಲ್ಲಿ ಕೂರಿಸಿದ್ದೆವು ಎನ್ನುವುದನ್ನು ಮರೆತು ಬಿಟ್ಟು ಬೇರೆ ಕಡೆ ಎಲ್ಲ ಅಲೆದಾಡಿದರು ನಂತರ ಗಾಬರಿಯಾದರು. ನಾನು ದಾರಿ ಮರೆತು ಪಡಬಾರದ ಯಾತನೆ ಅನುಭವಿಸಿದ್ದೇನೆಯೇ?

ನಾನೇ ಮೀರಿಸುತ್ತೇನೆ

ಒಬ್ಬ ಬಡ ಹುಡುಗ ಇರುತ್ತಾನೆ ತಂದೆಯಂತೂ ಇರಲ್ಲ ತಾಯಿಗೆ ಇತರರ ಮನೆಯಲ್ಲಿ ಕೆಲಸ ಮಾಡಿಕೊಂಡು ಬಂದರೆ ಆ ಹಣದಲ್ಲಿ ಮನೆಯಲ್ಲಿ ಊಟ ದೊರೆಯುತ್ತಿತ್ತು ಈ ಹುಡುಗನಿಗೆ ಒಂದು ಕಾಯಿಲೆ ಆ ಕಾಯಿಲೆಯ ಲಕ್ಷಣಗಳು ಏನೆಂದರೆ ಕೈಕಾಲು ಕಡ್ಡಿಯ ಥರ ಇರುತ್ತವೆ ಹೊಟ್ಟೆ ಮಾತ್ರ ಊದಿಕೊಂಡು ಇರುತ್ತದೆ.

 ಅಷ್ಟಲ್ಲದೆ ಆ ಹುಡುಗನಿಗೆ ಯಾವಾಗಲೂ ಹಸಿವು ಆಗುತ್ತಲೇ ಇರುತ್ತದೆ ಆದರೆ ಆ ಹುಡುಗನಿಗೆ ಒಂದೇ ಒಂದು ಹುಚ್ಚು ಏನಂದ್ರೆ ಫುಟ್ಬಾಲ್ ಆಡುವ ಹುಚ್ಚು ನಂತರ ಒಂದು ಸುದ್ದಿಯನ್ನು ಕೇಳುತ್ತಾನೆ.

 ಅಲ್ಲಿಯ ತುಂಬಾ ಪ್ರಖ್ಯಾತ ಆಟಗಾರ ಬಂದು ಆಡುತ್ತಿದ್ದಾರೆ ಈ ಸುದ್ದಿಯನ್ನು ಕೇಳಿದ ತಕ್ಷಣ ಹುಡುಗ ಏನಾದರೂ ಮಾಡಿ ಆ ಆಟವನ್ನು ನೋಡಲೇ ಬೇಕು ಎಂದು ತೆವಳಿಕೊಂಡು ಹೋಗಿ ಗ್ಯಾಲರಿಯ ಮೇಲೆ ಕುಳಿತು ಆಟವನ್ನು ಚೆನ್ನಾಗಿ ವೀಕ್ಷಿಸಿದನು.

 ಆಟವು ಮುಗಿಯಿತು ನಂತರ ಎಲ್ಲರೂ ಆಟಗಾರನಿಗಾಗಿ ಕಾದು ಆಟಗಾರನಿಗೆ ಮಾತಾಡಿಸಬೇಕು ಎಂದು ಹಲವಾರು ಜನರು ನಿಂತರು ಆಗ ಈ ಹುಡುಗನು ಕೂಡ ನಿಂತನು ಎಲ್ಲರೂ ಒಳ್ಳೆಯ ಬಟ್ಟೆ ಹಾಕಿದ್ದಾರೆ ಚೆನ್ನಾಗಿದ್ದಾರೆ ಆದರೆ ಈ ಕಾಯಿಲೆ ಇರುವ ಈ ಹುಡುಗ ಸ್ವಲ್ಪ ಸಮಯದ ಬಳಿಕ ಆ ಪ್ರಖ್ಯಾತ ಆಟಗಾರನು ಉತ್ಸಾಹದಿಂದ ನೀವು ಒಳ್ಳೆಯ ಆಟಗಾರರು ಸಾರ್ ನೀವು ತುಂಬಾ ಚೆನ್ನಾಗಿ ಆಡಿದಿರಿ ಎಂದು ಹೇಳಿದ ಅದಕ್ಕೆ ಆಟಗಾರ ಧನ್ಯವಾದ ಎಂದು ಹೇಳಿದನು.

ಸ್ವಲ್ಪ ಸಮಯದ ನಂತರ ಮತ್ತೆ ಹುಡುಗ ಮಾತನಾಡಿಸಲು ಬಂದನು ಮತ್ತೆ ಹುಡುಗ ಸರ್ ನೀವು ಆಟದ ಕೊನೆಯವರೆಗೂ ನೀವು ಚೆನ್ನಾಗಿ ಆಡಿದ್ದೀರಿ ಎಂದನು ಅದಕ್ಕೆ ಮತ್ತೆ ಆಟಗಾರ ಹೌದು ಎಂದು ನಕ್ಕನು ಮತ್ತೆ ಹುಡುಗ ನಿಮ್ಮ ಸಾಧನೆಗಳು ಎಲ್ಲವೂ ನಾನು ಓದಿದ್ದೇನೆ ಎಂದು ಹೇಳಿದನು.

 ಪ್ರಖ್ಯಾತ ಆಟಗಾರ ಒಳ್ಳೆಯದು ಎಂದನು ಅಷ್ಟರಲ್ಲಿ ಆಟಗಾರನಿಗೆ ಕೋಪವೂ ಕೂಡ ಬಂತು ಮತ್ತೆ ಸ್ವಲ್ಪ ಹೊತ್ತಿನಲ್ಲಿಯೆ ಮತ್ತೆ ಬಾಲಕ ಮಾತನಾಡಲು ಬಂದನು ಆಗ ಆಟಗಾರನಿಗೆ ಕೋಪ ಬಂದು ಏನು ಹೇಳಬೇಕೋ ಬೊಗಳು ಎಂದು ಗದರಿಸಿ ಕೇಳಿದನು.

 ಆ ಚಿಕ್ಕ ಹುಡುಗನು ಸ್ವಲ್ಪ ಹಿಂದೆ ಹೋಗಿ ಹೇಳಿದ ಒಂದಲ್ಲ ಒಂದು ದಿನ ನಿಮ್ಮ ಈ ಎಲ್ಲಾ ದಾಖಲೆಗಳನ್ನು ನಾನೇ ಮೀರಿಸುತ್ತೇನೆ ಪ್ರಖ್ಯಾತ ಆಟಗಾರ ಆಶ್ಚರ್ಯಚಕಿತನಾದ ಈ ಕಾಯಿಲೆ ಇರುವ ಹುಡುಗ ಇದನ್ನು ಮಾಡುತ್ತಾನೆಯೇ ಎಂದು ಮನಸ್ಸಿನಲ್ಲಿಯೆ ಅಂದುಕೊಂಡನು ಇದೇ ಬಾಲಕ ಸುಮಾರು ಹದಿನಾರು ವರ್ಷಗಳ ನಂತರದಲ್ಲಿ ಎಲ್ಲಾ ಸಾಧನೆಗಳನ್ನು ಮೀರಿಸಿ ಪ್ರಖ್ಯಾತ ಆಟಗಾರನಾದನು.

 ಇವರ ಹೆಸರು ಓ ಜೆ ಸಿಂಪ್ಸನ್ ಇಷ್ಟು ಸಾಧನೆಗಳು ಮಾಡಲು ಹೇಗೆ ಆಯಿತು ಎಂದು ಕೇಳಿದಾಗ ಅವರು ಹೇಳಿದರು ನಾನು ತುಂಬಾ ದೊಡ್ಡ ಗುರಿಯನ್ನು ಇಟ್ಟುಕೊಂಡು ಗುರಿಯನ್ನು ನಂಬಿ ನಾನು ದಿನವೂ ಸಾಧನೆ ಮಾಡುತ್ತಿದೆ ಎಂದರು. ನಾನು ಚಾಲೆಂಜ್ ಸ್ವೀಕರಿಸಿ ಯಾವ ಸಾಧನೆ ಮಾಡಿದ್ದೇನೆ?

  ಅಪ್ಪ ನಿಮ್ಮ ನೆನಪುಗಳು

ಅಪ್ಪ ನಾನು ಚಿಕ್ಕವನು ಇದ್ದಾಗ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೆ ಏಕೆಂದರೆ ನೀವು ಏನಾದರೂ ತರುತ್ತಿದ್ದೀರಿ ಹಾಗೂ ನಂತರ ಬಂದಾಗ ನನ್ನ ಕಷ್ಟಗಳನ್ನು ಕೇಳುತ್ತಿದ್ದೀರಿ ಆಗ ನನಗೆ ಮನಸ್ಸು ಹಗುರವಾಗುತ್ತಿತ್ತು ನಿಮ್ಮ ಜೊತೆ ಮುಕ್ತವಾಗಿ ಭಾವನೆಗಳನ್ನು ಹಂಚಿ ಕೊಳ್ಳುತ್ತಿದ್ದೆ ಹಾಗೆಯೇ ನಾನು ದೊಡ್ಡವನಾಗುತ್ತಿದ್ದಂತೆಯೇ ನಿಮಗೆ ಕೆಲಸದ ಒತ್ತಡಗಳು ಹೆಚ್ಚಾಗುತ್ತಿದ್ದವು.

  ನೀವು ತಡವಾಗಿ ಬರುತ್ತಿದ್ದೀರಿ ಆಗ ನನಗೆ ಬೇಸರವಾಗುತ್ತಿತ್ತು ನೀವು ಬರುತ್ತಿಲ್ಲ ನನಗೆ ಸಮಯ ನೀಡುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದೆ ನಂತರ ನೀವು ಬಂದಾಗ ಕುಣಿದು ನಲಿಯುತ್ತಿದ್ದೆ ನಾನು ಯುವಕನಾದಾಗ ಸ್ವಲ್ಪ ಅರ್ಥಮಾಡಿಕೊಂಡೆ ಆಗ ಕೆಲವೊಂದು ನಾನು ನಿಮಗೆ ಹೇಳುವುದು ಬೇಡ ಮಾಡಿ ತೋರಿಸೋಣವೆಂದು ನಾನು ನನ್ನದೇ ಆದ ಕೆಲಸಗಳಲ್ಲಿ ಮುಳುಗಿದೆ ಆಗ ನಿಮಗೆ ಇತರರು ಕೀಳಾಗಿ ಮಾತನಾಡುತ್ತಿದ್ದರು ನೋಡುತ್ತಿದ್ದರು ಮತ್ತೆ ಎಲ್ಲದರಲ್ಲೂ ಸೋತಿದ್ದೀಯಾ ಎಂದು ಹೀಯಾಳಿಸುತ್ತಿದ್ದರು.

 ಕೆಲವರು ನೀವು ಬಹಳಷ್ಟು ಸಾಧನೆ ಮಾಡಿದ್ದೀರಿ ಆದರೆ ಸರಿಯಾದ ವೇದಿಕೆ ಸಿಗಲಿಲ್ಲ ಅಪಹಾಸ್ಯ ಮಾಡುತ್ತಿದ್ದರು ನನಗೆ ಭರವಸೆ ಇತ್ತು ನೀವು ಗೆದ್ದೆ ಗೆಲ್ಲುತ್ತೀರಾ ಆದರೆ ವಿಧಿ ಬರಹ ಏನೋ ತಿಳಿಯದು ನೀವು ಸಂಪೂರ್ಣವಾಗಿ ದೀರ್ಘ ನಿದ್ರೆಗೆ ಜಾರಿದಿರಿ ನೀವು ಗೆದ್ದೆ ಗೆಲ್ಲುತ್ತೀರಿ ಎನ್ನುವ ಭರವಸೆ ನನಗೆ ಇತ್ತು ನೀವು ನನಗಾಗಿ ಬದುಕಿರ ಬೇಕಾಗಿತ್ತು.

 ಇಂದು ನಾನು ನನ್ನದೇ ಆದ ಸಾಮ್ರಾಜ್ಯ ಕಟ್ಟಿದ್ದೇನೆ ಆದರೆ ಅಲ್ಲಿ ನೀವು ಇಲ್ಲ ಬರೀ ಅಪ್ಪ ನಿಮ್ಮ ನೆನಪುಗಳು ಮಾತ್ರ ಇದೆ ಬುದ್ಧಿ ಬರುವುದಕ್ಕಿಂತ ಮುಂಚೆ ಏನು ತಪ್ಪು ಮಾಡಿದ್ದೇನು ತಿಳಿಯದು ಆದರೆ ಬುದ್ಧಿ ಬಂದ ಮೇಲೆ ನಿಮಗೆ ಬೇಸರವಾದಂತೆ ನಡೆದುಕೊಂಡಿಲ್ಲ ಎನ್ನುವ ನಂಬಿಕೆ ನನಗೆ ಇದೆ ಆದರೂ ಏನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಂದೆಯ ಭಾವಚಿತ್ರ ನೋಡುತ್ತಿದ್ದಂತೆಯೇ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ನನ್ನ ಪೋಷಕರು ನನ್ನ ಮಗ ನನ್ನ ಮಗಳು ಎಂದು ಹೆಮ್ಮೆಯಿಂದ ಇತರರಿಗೆ ಹೇಳುವಂತೆ ಬದುಕುತ್ತಿದ್ದೇನೆಯೇ?

  ಎಲ್ಲಿ ಎಡವಿದ್ದೇವೆ

ತಂದೆ ಕೆಲಸದಿಂದ ಸುಸ್ತಾಗಿ ಮನೆಗೆ ಬಂದಾಗ ಹೆಂಡತಿ ಯಾದವಳು ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದರು ಗಂಡ ಬರುತ್ತಾನೆ ಎಂದು ಪ್ಲೇಟ್ ನಲ್ಲಿ ಆತನಿಗೆ ಊಟವನ್ನು ಇಟ್ಟು ಹಾಸಿಗೆ ಮೇಲೆ ಮಲಗಿದ್ದರು.

 ಇಷ್ಟೆಲ್ಲಾ ಕಷ್ಟ ಪಡುತ್ತಿದ್ದಾಳೆ ಎಂದು ತಂದೆ ತಾಯಿಗೆ ಹೋಗಿ ನೋಡಿ ನಂತರ ಊಟಕ್ಕೆ ಕುಳಿತರು ಊಟಕ್ಕೆ ಸ್ವಲ್ಪ ಉಪ್ಪು ಕಡಿಮೆಯಾಗಿತ್ತು ಮಗಳಿಗೆ ಹೇಳಿದರು ಸ್ವಲ್ಪ ಉಪ್ಪು ತೆಗೆದುಕೊಂಡು ಬಾ ಎಂದಾಗ ಕೋಪದಿಂದ ಬಂದು ಉಪ್ಪಿನ ಡಬ್ಬ ಕೊಟ್ಟಳು.

 ಊಟ ಮುಗಿಸಿ ತನ್ನ ಪ್ಲೇಟನ್ನು ಬೇರೆ ಕಡೆ ಇಟ್ಟು ಹೆಂಡತಿ ಹತ್ತಿರ ಬಂದು ಕುಳಿತರು ನಂತರ ಮಗಳಿಗೆ ಹೇಳಿದರು ಸ್ವಲ್ಪ ಮಾತ್ರೆಗಳನ್ನು ಜೇಬಿನಲ್ಲಿ ಇಟ್ಟಿದ್ದೇನೆ ತೆಗೆದುಕೊಂಡು ಬಾ ಎಂದಾಗ ಅಲ್ಲಿಂದಲೇ ದಿನನಿತ್ಯ ನಿಮ್ಮದು ಇದೇ ಗೋಳು ಎಂದು ಸಿಟ್ಟಿನಿಂದ ಹೇಳಿದಳು ಈ ಮಾತನ್ನು ಕೇಳಿ ಸರಿ ಆಗಲಿಯೆಂದು ತಂದೆಯೇ ಮಾತ್ರೆಗಳನ್ನು ತೆಗೆದು ಹೆಂಡತಿಗೆ ಬಿಸಿನೀರು ಮಾಡಿ ಕೊಟ್ಟರು.

 ಕೆಲವು ವರ್ಷಗಳ ಹಿಂದೆ ಮಕ್ಕಳಿಗೆ ಸ್ವಾತಂತ್ರ್ಯ ಕೊಡುತ್ತಿರಲಿಲ್ಲ ಹೇಳಿದಂತೆ ಕೇಳಬೇಕಾಯಿತು ಆದರೆ ಇಂದು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುತ್ತಿದ್ದೇವೆ ಅವರ ಸಂತೋಷವೇ ನಮ್ಮ ಸಂತೋಷ ಎಂದು ತಂದೆ ತಾಯಿಗಳು ಅದಕ್ಕಾಗಿ ಬೆಳಿಗ್ಗೆ ಸಂಜೆ ದುಡಿಯುತ್ತಿದ್ದಾರೆ ತಮ್ಮ ಸಂತೋಷವನ್ನು ಮರೆತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಬದುಕನ್ನೇ ಸವಿಸುತ್ತಿದ್ದಾರೆ ಆದರೆ ಕೆಲವು ಮಕ್ಕಳು ಮಾತ್ರ ಸರಿಯಾಗಿ ವರ್ತಿಸುತ್ತಿಲ್ಲ ಏನಿರಬಹುದು ಎಲ್ಲಿ ಎಡವಿದ್ದೇವೆ ಎನ್ನುವುದೇ ತಿಳಿಯುತ್ತಿಲ್ಲ.

 ಇಂದು ತಂದೆ ತಾಯಿಗೆ ಎಷ್ಟೋ ಮಕ್ಕಳು ಗೌರವವೇ ಕೊಡುತ್ತಿಲ್ಲ ಮಕ್ಕಳು ಚೆನ್ನಾಗಿರಲಿ ಎಂದು ಮಕ್ಕಳಿಗೆ ಮದುವೆಗೆ ಅಥವಾ ಇತರ ಸಮಾರಂಭಕ್ಕೆ ಕರೆದುಕೊಂಡು ಹೋದಾಗ ತಂದೆ ತಾಯಿಯರಿಗೆ ಗೌರವ ಕೊಡುತ್ತಿಲ್ಲ ಇಂದಿನ ವಾತಾವರಣದಲ್ಲಿ ಪೋಷಕರು ಯಾವ ರೀತಿ ನಾವು ಸಾಕಬೇಕು ಎಂದು ಗೊಂದಲದಲ್ಲಿ ಸಿಲುಕಿಕೊಂಡಿದ್ದೇವೆಯೇ?

Leave a Comment