ಒಂದು ಸಂಸಾರ ಗಂಗಾ ನದಿಯ ಹತ್ತಿರಕ್ಕೆ ಹೋಗಿ ಸ್ನಾನ ಮಾಡುತ್ತಾರೆ ನಿರ್ಲಿಪ್ ಮಗು ಸ್ನಾನ ಏಕೆ ಮಾಡಬೇಕು ಎಂದು ಕೇಳಿದಾಗ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪವೂ ಕಳೆದುಹೋಗುತ್ತದೆ ಎಂದು ಮಿಲಿಂದ್ ಹಿರಿಯರು ಹೇಳುತ್ತಾರೆ.
ಮಗುವಿಗೆ ಒಂದು ಸಂದೇಹ ಬರುತ್ತದೆ ಎಲ್ಲಾ ಜನರು ತಮ್ಮ ಪಾಪವನ್ನು ಗಂಗಾನದಿಯಲ್ಲಿ ಶುದ್ಧಿಕರಿಸಿಕೊಂಡರೆ ಗಂಗಾ ನದಿ ಹೇಗೆ ತನ್ನ ಪಾಪವನ್ನು ಶುದ್ಧಿ ಕರೆಸಿಕೊಳ್ಳುತ್ತದೆ? ಅದಕ್ಕೆ ನೇರವಾಗಿ ಗಂಗಾಮಾತೆಯನ್ನು ಮಗು ಕೇಳುತ್ತದೆ ಅಮ್ಮ ಗಂಗಾಮಾತೆ ಎಲ್ಲಾ ಜನರು ತಮ್ಮ ಪಾಪವನ್ನು ನಿನ್ನಲ್ಲಿ (ಗಂಗಾ ನದಿಯಲ್ಲಿ) ಶುದ್ಧೀಕರಣ ಮಾಡಿಕೊಳ್ಳುತ್ತಾರೆ.
ಆದರೆ ಗಂಗಾಮಾತೆ ನಿಮ್ಮ ಪಾಪವನ್ನು ಹೇಗೆ ಶುದ್ಧೀಕರಣ ಮಾಡಿಕೊಳ್ಳುತ್ತೀರಾ? ಆಗ ಗಂಗಾಮಾತೆಯು ನಾನು ಸಮುದ್ರಕ್ಕೆ ಹೋಗಿ ಸೇರಿದಾಗ ನಾನು ಶುದ್ಧನಾಗುತ್ತೇನೆ ಎಂದು ಹೇಳುತ್ತದೆ ಆಗ ಮಗುವು ಮತ್ತೆ ನೇರವಾಗಿ ಇದೇ ಪ್ರಶ್ನೆಯನ್ನು ಸಮುದ್ರಕ್ಕೆ ಕೇಳುತ್ತದೆ.
ಸಮುದ್ರ ಹೇಳುತ್ತದೆ ನಾನು ಆವಿಯಾಗುವ ಮೂಲಕ ಶುದ್ಧೀ ಆಗುತ್ತೇನೆ ಇದೇ ಪ್ರಶ್ನೆಯನ್ನು ಆವಿಗೆ ಕೇಳಿದಾಗ ಆವಿಯೂ ಹೇಳುತ್ತದೆ ನಾನು ಮೋಡವಾಗಿ ಶುದ್ಧಿ ಆಗುತ್ತೇನೆ ಎಂದು ಹೇಳುತ್ತದೆ ಇದೇ ಪ್ರಶ್ನೆಯನ್ನು ಮೋಡಕ್ಕೆ ಕೇಳಿದಾಗ ಮೋಡವು ವಿನಯವಾಗಿ ಹೇಳುತ್ತದೆ.
ನನ್ನಲ್ಲಿ ಏನೋ ಅಡಗಿದೆಯೋ ಅದೆಲ್ಲವೂ ಮಳೆಯ ಮೂಲಕ ಮತ್ತೆ ಹೊರ ಚೆಲ್ಲುತ್ತೇನೆ ನಾನು ಏನು ಇಟ್ಟುಕೊಳ್ಳುವುದಿಲ್ಲ ಬಂದಿದ್ದನ್ನು ವರ್ಗಾವಣೆ ಮಾಡುತ್ತೇನೆ ಮನುಷ್ಯರ ಮೇಲೆ ನದಿ ಮೇಲೆ ಸಮುದ್ರ ಮೇಲೆ ಎಲ್ಲಾ ಕಡೆಯೂ ಬೀಳುತ್ತೇನೆ ಅಂದರೆ ನಾನು ಅವರದ್ದು ಅವರಿಗೆ ಹಿಂತಿರುಗಿಸುತ್ತೇನೆ ಎಂದು ಹೇಳುತ್ತದೆ.
ನಾವು ಮಾಡಿದ ಪಾಪ ನಮಗೆ ಹಿಂತಿರುಗುತ್ತದೆ ಎಂದು ಮಗು ಅರ್ಥಮಾಡಿಕೊಳ್ಳುತ್ತದೆ ಇದು ಒಂದು ಕಥೆಯಾಗಿರಬಹುದು ಆದ್ರೆ ಎಷ್ಟು ಸತ್ಯ ಅಡಗಿದೆ ಅಲ್ಲವೆ ನಾವು ಮಾಡಿದ್ದು ಎಲ್ಲೂ ಹೋಗುವುದಿಲ್ಲ ಸ್ವಲ್ಪ ಸಮಯದ ನಂತರ ಮತ್ತೆ ಹಿಂತಿರುಗಿ ಬಂದೆ ಬರುತ್ತದೆ ಆದುದರಿಂದ ನಾವು ಒಳ್ಳೆಯದನ್ನೇ ಮಾಡೋಣ.
ಒಳ್ಳೆಯ ಸಮಯ ಯಾವುದು?
ಒಂದು ಊರಿನಲ್ಲಿ ಒಬ್ಬ ಮನ್ಮಂತರ್ ಸುಸಂಸ್ಕೃತ ರಾಜ ಇರುತ್ತಾನೆ, ಒಳ್ಳೆಯ ರಾಜ್ಯಭಾರ ಮಾಡುತ್ತಿರುತ್ತಾನೆ ಇವನಿಗೆ ಒಂದು ಪ್ರಶ್ನೆ ಕಾಡುತ್ತದೆ ಕೆಲಸ ಯಾವಾಗ ಆರಂಭಿಸಬೇಕು ಒಳ್ಳೆಯ ಸಮಯ ಯಾವುದು ವಾರದ ಯಾವ ದಿನ ಸೂಕ್ತವಾದದ್ದು ಇದಕ್ಕೆ ಉತ್ತರ ನೀಡಿದರೆ ಒಳ್ಳೆಯ ಬಹುಮಾನ ಕೊಡುತ್ತೇನೆ ಎಂದು ಹೇಳುತ್ತಾನೆ.
ಬಹಳಷ್ಟು ಊರಿನ ಚಾಣಾಕ್ಷ ಪ್ರಜೆಗಳು ರಾಜನ ಹತ್ತಿರ ಬಂದು ತಮಗೆ ಗೊತ್ತಿರುವುದನ್ನು ತಿಳಿಸುತ್ತಾರೆ ರಾಜನು ಎಲ್ಲಾ ಸಲಹೆಗಳನ್ನು ಕೇಳಿಸಿಕೊಳ್ಳುತ್ತಾನೆ ಆದರೆ ಚಾಣಾಕ್ಷ ಪ್ರಜೆಗಳ ಮಾತುಗಳು ರಾಜನಿಗೆ ಇಷ್ಟವಾಗುವುದಿಲ್ಲ ಆಗ ರಾಜನು ನಿರಾಶನಾಗಿ ರಾತ್ರಿಯೆಲ್ಲ ಯೋಚಿಸಿ ಊರಿನ ಆಚೆ ಇರುವ ಬಾಬಾ ಅವರೊಂದಿಗೆ ಚರ್ಚಿಸಿದರೆ ನನ್ನ ಮನದಲ್ಲಿ ಕಾಡುತ್ತಿರುವ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ಯೋಚಿಸಿ ರಾಜ ವೇಷವನ್ನು ಬದಲಿಸಿಕೊಂಡು ಸಾಮಾನ್ಯ ವ್ಯಕ್ತಿಯಂತೆ ಹೋಗುತ್ತಾನೆ.
ಆಗ ಬಾಬಾ ಅವರು ಗಿಡಗಳಿಗೆ ನೀರು ಹಾಕುತ್ತಿರುತ್ತಾರೆ ಆಗ ನನ್ನ ಮೂರು ಪ್ರಶ್ನೆಗಳಿಗೆ ಉತ್ತರ ಬೇಕು ಎಂದು ಹೇಳುತ್ತಾನೆ ಆಗ ಬಾಬಾ ಅವರು ವ್ಯಕ್ತಿಯನ್ನು ಗಮನಿಸಿ ತನ್ನ ಕೆಲಸ ತಾವು ಮಾಡುತ್ತಿರುತ್ತಾರೆ ರಾಜನು ಇವರ ಹತ್ತಿರ ತಗ್ಗಿ ಬಗ್ಗಿ ಇರಬೇಕು ಎಂದು ಅವರು ಮಾಡುತ್ತಿದ್ದ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.
ಕೆಲಸ ಮಾಡಿದರು ಬಾಬಾ ಅವರು ಇವನ ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಸಂಜೆ ಆಗುತ್ತದೆ ನಂತರ ವಾಯುವಿಹಾರಕ್ಕೆ ಎಂದು ಬಾಬಾ ಹಾಗೂ ರಾಜ ಇಬ್ಬರು ಹೊರಡುತ್ತಾರೆ ಆಗ ಊರಿನ ಒಬ್ಬ ವ್ಯಕ್ತಿಯನ್ನು ಡಕಾಯಿತರು ಇರುವ ಹಣವನ್ನು ಕಿತ್ತುಕೊಂಡು ಕೈಗೆ ಚಾಕುವಿನಿಂದ ಚುಚ್ಚಿರುತ್ತಾರೆ ಆ ವ್ಯಕ್ತಿ ಕಾಪಾಡಿ ಕಾಪಾಡಿ ಎಂದು ಬರುತ್ತಿರುತ್ತಾನೆ.
ಬಾಬಾ ಹಾಗೂ ರಾಜ ಸಹಾಯಕ್ಕೆ ಬರುತ್ತಾರೆ ತಕ್ಷಣ ತಾನು ಹಾಕಿದ್ದ ಟವಲ್ ಅನ್ನು ಹರಿದು ಕಟ್ಟುತ್ತಾನೆ ನಂತರ ನಿಧಾನವಾಗಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಗಿಡಮೂಲಿಕೆಯಿಂದ ಚಿಕಿತ್ಸೆ ನೀಡುತ್ತಾರೆ ನಂತರ ನಿಧಾನವಾಗಿ ಅವನ ಮನೆಗೆ ಬಿಡುತ್ತಾರೆ ಆಗ ಆ ವ್ಯಕ್ತಿಯು ಬಾಬಾ ಅವರಿಗೆ ಹಾಗೂ ಈ ರಾಜನಿಗೆ ನಮ್ಮಿಂದ ನನಗೆ ತುಂಬಾ ಸಹಾಯವಾಯಿತು ನೀವು ನನ್ನ ಪ್ರಾಣವನ್ನು ಉಳಿಸಿದ್ದೀರಿ ಎಂದು ಮನದಾಳದಿಂದ ಧನ್ಯವಾದಗಳು ಅರ್ಪಿಸಿ ಹೋಗುತ್ತಾನೆ.
ರಾಜನಿಗೂ ಸಂತೋಷವಾಗುತ್ತದೆ ಮತ್ತೆ ಬೆಳಿಗ್ಗೆ ಎದ್ದು ಬಾಬಾ ಅವರ ಜೊತೆ ಕೆಲಸಕ್ಕೆ ಕೈಜೋಡಿಸುತ್ತಾನೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಾನೆ ಆದರೂ ಬಾಬಾ ಉತ್ತರಿಸುವುದಿಲ್ಲ ಮಧ್ಯಾಹ್ನ ಆಗುತ್ತದೆ ಆವಾಗ ಮರದ ಕೆಳಗೆ ಕುಳಿತುಕೊಂಡು ಬಾಬಾ ಅವರು ಹೇಳುತ್ತಾರೆ.
ಮೊದಲ ನಿನ್ನ ಪ್ರಶ್ನೆ ಏನು ಎಂದು ಕೇಳುತ್ತಾರೆ ರಾಜನು ಉತ್ಸಾಹಭರಿತನಾಗಿ ಕೆಲಸ ಯಾವಾಗ ಆರಂಭಿಸಬೇಕು ನೀನು ನೆನ್ನೆ ಬಂದಾಗ ನೀನು ಏನು ಮಾಡಿದೆ ಎಂದು ರಾಜನಿಗೆ ಕೇಳುತ್ತಾರೆ ನೀವು ಕೆಲಸ ಮಾಡುತ್ತಿದ್ದೀರಿ ನಾನು ನಿಮ್ಮ ಜೊತೆ ಕೈ ಜೋಡಿಸಿದೆ ನೀನು ಬಂದ ತಕ್ಷಣವೇ ಕೆಲಸ ಆರಂಭಿಸಿದೆ ಅದೇ ನೀನು ಸ್ವಲ್ಪ ಸಮಯದ ನಂತರವೂ ಬೇಕಾದರೆ ಆರಂಭಿಸಬಹುದಾಗಿತ್ತು ಎಂದು ಕೇಳಿದಾಗ ಹೌದು ಎನ್ನುತ್ತಾನೆ.
. ಹಾಗೆಯೇ ಕೆಲಸ ಯಾವಾಗ ಬೇಕಾದರೂ ಆರಂಭಿಸಬಹುದು ಯಾವುದೇ ಕ್ಷಣದಲ್ಲಿಯೂ ಆರಂಭಿಸಬಹುದು ಎರಡನೆಯ ಪ್ರಶ್ನೆ ಒಳ್ಳೆಯ ಸಮಯ ಯಾವುದು ನೀನು ನೆನ್ನೆ ವ್ಯಕ್ತಿಗೆ ರಕ್ತ ಬರುತ್ತಿದ್ದಾಗ ಏನು ಮಾಡಿದೆ ನೋಡಿದ್ ತಕ್ಷಣ ಟವಲಿನಿಂದ ರಕ್ತ ಬರದಂತೆ ಕಟ್ಟಿದೆ.
ಯಾವ ಸಂದರ್ಭ ಇರುತ್ತದೆ ಆ ಸಂದರ್ಭದಲ್ಲಿ ಆ ಕೆಲಸವನ್ನು ಮಾಡಬೇಕು ಅದೇ ಒಳ್ಳೆಯ ಸಮಯ ನೀನು ಆ ಸಮಯ ಬಿಟ್ಟು ಆಮೇಲೆ ಮಾಡುತ್ತಿದ್ದರೆ ವ್ಯಕ್ತಿ ಏನಾಗುತ್ತಿದ್ದನು? ಎಲ್ಲಾ ಸಮಯವು ಒಳ್ಳೆಯದೇ ಎಂದು ಹೇಳಿದರು ರಾಜ ಹೌದು ಎಂದು ತಲೆ ಅಲ್ಲಾಡಿಸಿದ್ದನು.
ವಾರದಲ್ಲಿ ಯಾವ ದಿನ ಸೂಕ್ತ ಅಂದರೆ ಎಲ್ಲಾ ದಿನವೂ ಸೂಕ್ತವೇ ನೀನು ಇಲ್ಲಿಗೆ ಬರಬೇಕಾದರೆ ಇದೇ ದಿನ ಬರಬೇಕು ಎಂದು ಏನಾದರೂ ಯೋಚನೆ ಮಾಡಿದ್ದೀಯಾ ಇಲ್ಲ ನಿನ್ನ ಮನಸ್ಸಿನಲ್ಲಿ ಬಂತು ಹೋಗಬೇಕು ಎಂದು ಬಂದೆ ಅದೇ ರೀತಿ ಎಲ್ಲಾ ದಿನವೂ ಸೂಕ್ತವೇ ಎಂದು ತಿಳಿಸಿ ಹೇಳಿದರು.
ನನ್ನ ಪ್ರಶ್ನೆಗೆ ನೀವು ಸರಿಯಾಗಿ ಉದಾಹರಣೆ ಸಮೇತ ತಿಳಿಸಿದ್ದೀರಿ ನಾನು ಈ ಊರಿನ ರಾಜ ಎಂದು ತನ್ನ ಪರಿಚಯ ಮಾಡಿಕೊಂಡನು ಬಾಬಾ ಅವರಿಂದ ಆಶೀರ್ವಾದ ಪಡೆದು ಹೊರಟನು ಒಳ್ಳೆಯ ಮನಸ್ಸಿನಿಂದ ಕೆಲಸ ಆರಂಭಿಸೋಣ.
ನನಗೆ ಗೌರವಿಸುತ್ತಿರಬೇಕು
ಒಂದು ಹಳ್ಳಿಯಲ್ಲಿ ದೊಡ್ಡಣ್ಣ ಎಂಬುವವನು ಇದ್ದನು ಇವನಿಗೆ ಹಲವಾರು ಹೊಲ ಗದ್ದೆಗಳು ಮನೆಗಳು ತೋಟ ಜಮೀನು ಎಲ್ಲವೂ ಇತ್ತು, ಆದರೆ ಇದು ದೊಡ್ಡಣ್ಣ ದುಡಿದು ಅಲ್ಲಿ ವಂಶ ಪಾರಂಪರೆಯಾಗಿ ಉಳಿಸಿಕೊಂಡು ಬಂದಿದ್ದು ದೊಡ್ಡಣ್ಣನ ತಾತ ಅರಮನೆಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದರು.
ತಾತನವರಿಗೆ ಒಳ್ಳೆಯ ಗೌರವವು ಇತ್ತು ನಂತರ ತಂದೆಯವರು ಕೂಡ ಅರಮನೆಯಲ್ಲಿಯೇ ಇನ್ನೊಂದು ಹುದ್ದೆಯಲ್ಲಿ ಸೇವೆ ಸಲ್ಲಿಸಿದರು ಆದರೆ ದೊಡ್ಡಣ್ಣ ಅದೇ ರೀತಿ ಬದುಕಲು ಪ್ರಯತ್ನಿಸಿದನು ಆದರೆ ಸಾಧ್ಯವಾಗಲಿಲ್ಲ ಇರುವ ಜಮೀನಿನಲ್ಲೆ ವ್ಯವಸಾಯ ಮಾಡಿಕೊಂಡು ಕಾಲ ಕಳೆಯುತ್ತಿದ್ದನು.
ದೊಡ್ಡಣ್ಣನಿಗೆ ಒಂದು ದುರಭ್ಯಾಸ ಏನು ಎಂದರೆ ಏನೇ ಹೇಳಿದರು ನಾನು ಅದನ್ನು ಮಾಡಿದ್ದೇನೆ ನನ್ನದೇ ಸರಿ ಎಂದು ಹೇಳುವ ದುರಭ್ಯಾಸ ಯಾರಾದರೂ ಬಂದು ಈ ಸಾರಿ ಬೆಳೆ ಚೆನ್ನಾಗಿ ಆಯಿತು ಚೆನ್ನಾಗಿ ಸಂಪಾದನೆ ಮಾಡಿದೆ ಎಂದು ಹೇಳಿದರೆ ದೊಡ್ಡಣ್ಣ ನಾನು ನಿನಗಿಂತ ಚೆನ್ನಾಗಿ ಸಂಪಾದನೆ ಮಾಡಿದೆ ಎಂದು ಹೇಳುತ್ತಿದ್ದನು.
ಯಾವುದೇ ಕಾರ್ಯಕ್ರಮಕ್ಕೆ ಸಮಾರಂಭಕ್ಕೆ ಹೋಗಬೇಕಾದರೆ ಸೂಟು ಬೂಟು ಹಾಕಿಕೊಂಡು ನಾವು ದೊಡ್ಡ ಕುಟುಂಬದವರು ಎಂದು ಹೇಳಿಕೊಳ್ಳುತ್ತಿದ್ದನು ಹಾಗೆಯೇ ದೊಡ್ಡ ದೊಡ್ಡ ವ್ಯಕ್ತಿಯ ಜೊತೆಯಲ್ಲಿಯೇ ಮಾತನಾಡಿಕೊಂಡು ಇರುತ್ತಿದ್ದನು.
ನಾನು ಹೋದ ಕಡೆ ನನಗೆ ಗೌರವಿಸುತ್ತಿರಬೇಕು ಎನ್ನುವ ಭಾವನೆ ಸೂಕ್ತ ಮನಸ್ಸಿನಲ್ಲಿ ಅಡಗಿರುತ್ತದೆ ಯಾವ ವಿಷಯ ಹೇಳಿದರು ಆ ವಿಷಯ ನನಗೆ ಮೊದಲೇ ತಿಳಿದಿದೆ ನನಗಿಂತ ಬುದ್ದಿವಂತರು ಯಾರು ಇಲ್ಲ ಎಂದು ಜಂಬದಿಂದ ಹೇಳುತ್ತಿದ್ದನು ಹಳ್ಳಿಯ ಕೆಲವು ರೈತರು ನೀವು ಕೂಡ ಅರಮನೆಯಲ್ಲಿಯೇ ಇರಬೇಕಾಗಿತ್ತು ಎಂದಾಗ ನಾನು ಸ್ವಾಭಿಮಾನಿಯಾಗಿ ಬದುಕಬೇಕು ಎದೆ ಉಬ್ಬಿಸಿ ಹೇಳುತ್ತಿದ್ದನು
ಒಂದು ಸಾರಿ ಹಳ್ಳಿಯ ಒಬ್ಬ. ರೈತ ನಾನು ಇವತ್ತು ಅರಮನೆಗೆ ಹೋಗುತ್ತಿದ್ದೇನೆ ಇವತ್ತು ಅಲ್ಲಿ ಕಾರ್ಯಕ್ರಮವಿದೆ ಎಂದು ಹೇಳುತ್ತಾನೆ ಕಾರ್ಯಕ್ರಮದ ನಂತರ ಪ್ರಸಾದವನ್ನು ಹಂಚುತ್ತಾರೆ ಅದನ್ನು ಪಡೆದು ಬರಲು ಹೋಗುತ್ತಿದ್ದೇನೆ ಎಂದಾಗ ದೊಡ್ಡಣ್ಣ ಹೇಳಿದ ಹೌದು ನನಗೂ ಅಲ್ಲಿಂದ ಆಹ್ವಾನ ಪತ್ರಿಕೆ ಬಂದಿದೆ.
ನಾನು ಹೋಗುವುದು ಬೇಡವೋ ಎಂದು ಯೋಚಿಸುತ್ತಿದೆ ನೀನು ಹೋಗುತ್ತಿದ್ದೀಯಾ ಅಂದಮೇಲೆ ನಾನು ನಿನ್ನ ಜೊತೆ ಬರುತ್ತೇನೆ ಎಂದು ಸೂಟು ಬೂಟು ಹಾಕಿಕೊಂಡು ಬಂದನು ಇಬ್ಬರು ಅರಮನೆಯ ದ್ವಾರದ ಬಳಿಗೆ ಬಂದರು ಅಲ್ಲಿ ಎರಡು ದ್ವಾರಗಳಿದ್ದವು ಒಂದು ಸಾಮಾನ್ಯ ಜನರಿಗೆ ಇನ್ನೊಂದು ವಿಶೇಷ ವ್ಯಕ್ತಿಗಳಿಗೆ ಎರಡನ್ನು ಗಮನಿಸಿದ ದೊಡ್ಡಣ್ಣ ನನಗೆ ಎಷ್ಟು ಮರ್ಯಾದೆ ನೀಡುತ್ತಾರೆ.
ಬಾ ನನ್ನ ಜೊತೆ ಎಂದು ವಿಶೇಷ ವ್ಯಕ್ತಿಗಳು ಹೋಗುವ ದ್ವಾರದಲ್ಲಿ ಹೋಗುತ್ತಾನೆ ಆಗ ಎಲ್ಲರೂ ಇವರನ್ನು ನಮಸ್ಕರಿಸಿ ಒಳಗೆ ಕಳುಹಿಸುತ್ತಾರೆ ಆಗ ದೊಡ್ಡಣ್ಣ ಹೇಳುತ್ತಾನೆ ನೋಡು ನನಗೆ ಹೇಗೆ ಗೌರವಿಸುತ್ತಿದ್ದಾರೆ ಆಗ ರೈತನಿಗೆ ಆಶ್ಚರ್ಯವಾಗುತ್ತದೆ ನಂತರ ಮುಂದೆ ಒಂದು ಸಭೆ ನಡೆಯುತ್ತಿರುತ್ತದೆ.
ಆ ಸಭೆಗೆ ಇವನು ಹೋಗಿ ಕುಳಿತುಕೊಳ್ಳುತ್ತಾನೆ ಆ ಸಭೇ ಏತಕ್ಕಾಗಿ ನಡೆಯುತ್ತಿದೆ ಎಂದು ಗೊತ್ತಿರುವುದಿಲ್ಲ ನಂತರ ಮಂತ್ರಿಗಳು ಬಂದು ಸಭೆಯಲ್ಲಿ ಕುಳಿತಿರುವ ಎಲ್ಲಾ ವಿಶೇಷ ವ್ಯಕ್ತಿಗಳನ್ನು ಕೇಳುತ್ತಾರೆ.
ಈ ಸಾರಿ ನೀವು ಎಷ್ಟು ಮನೆಗಳು ಕೊಡಲಿಕ್ಕೆ ಸಾಧ್ಯವೊ ಅಷ್ಟನ್ನು ನಾವು ಬರೆಯುತ್ತೇವೆ ಎಂದು ಹೇಳುತ್ತಾರೆ ಆಗ ಕೆಲವರು ಎರಡು ಮನೆ ನಾಲ್ಕು ಮನೆ 5 ಮನೆ ಹೀಗೆ ಹೇಳುತ್ತಾರೆ ಇವನ ಸರದಿ ಬಂದಾಗ 5 ಮನೆ ಎಂದು ಹೇಳುತ್ತಾನೆ.
ಅವರು ಬರೆದುಕೊಳ್ಳುತ್ತಾರೆ ನಂತರ ಒಂದು ನೆನಪಿನ ಕಾಣಿಕೆಯನ್ನು ಕೊಟ್ಟು ಶಾಲು ಹಾರ ಹಾಕಿ ಗೌರವಿಸಿ ಕಳುಹಿಸುತ್ತಾರೆ ಆಗ ದೊಡ್ಡಣ್ಣ ನನಗೆ ಎಷ್ಟು ಗೌರಿಸುತ್ತಾರೆ ಎಂದು ಹೇಳುತ್ತಾನೆ ನಂತರ ಮನೆಗೆ ಬರುತ್ತಾರೆ ಅರಮನೆಯಿಂದ ಮಾರನೆಯ ದಿನವೇ ಬಂದು 5 ಮನೆಯನ್ನು ವಶಪಡಿಸಿಕೊಳ್ಳುತ್ತಾರೆ.
ದೊಡ್ಡಣ್ಣ ವಶಪಡಿಸಿ ಕೊಂಡುವವರನ್ನು ಕೇಳುತ್ತಾನೆ ಆಗ ನೀವೇ ಐದು ಮನೆ ಕೊಡುತ್ತೇನೆ ಎಂದು ಹೇಳಿದರಲ್ಲ ಆದುದರಿಂದ ನಿಮ್ಮ ಐದು ಮನೆಗಳನ್ನು ನಾವು ನಿರಾಶ್ರಿತರಾಗಾಗಿ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ ವಿಶೇಷ ಸಭೆ ಏತಕ್ಕಾಗಿ ಏರ್ಪಡಿಸಿರುತ್ತಾರೆ ಎಂದರೆ ಬರಗಾಲ ಬಂದಿರುವುದರಿಂದ ಕೆಲವು ನಿರಾಶ್ರಿತ ವ್ಯಕ್ತಿಗಳು ಬಂದಿರುತ್ತಾರೆ.
ಅವರಿಗೆ ಅರಮನೆಯಲ್ಲಿ ಅಷ್ಟು ಸ್ಥಳ ಇರುವುದಿಲ್ಲ ಅದಕ್ಕಾಗಿ ರಾಜರು ಒಂದು ಪ್ರಕಟಣೆಯನ್ನು ಹೊರಡಿಸುತ್ತಾರೆ ಯಾರು ಮಾಲೀಕರಿದ್ದೀರಿ ಹಾಗೂ ಹೆಚ್ಚು ಮನೆಗಳು ಇದೆಯೋ ಅವರು ನಿರಾಶ್ರಿತರಿಯಾಗಿ ನಿಮ್ಮಗೆ ಸಾಧ್ಯವಾದಷ್ಟು ಮನೆಗಳನ್ನು ನೀಡಬಹುದು ಎಂದು ಹೇಳಿರುತ್ತಾರೆ.
ಅದೇ ಸಭೆಗೆ ದೊಡ್ಡಣ್ಣ ಹೋಗಿರುತ್ತಾನೆ ಇವನು 5 ಎಂದು ಹೇಳಿರುತ್ತಾನೆ, ಅದಕ್ಕಾಗಿ ಐದು ಮನೆಯನ್ನು ವಶಪಡಿಸಿಕೊಳ್ಳುತ್ತಾರೆ ಆಗ ದೊಡ್ಡಣ್ಣನ್ನು ಇನ್ನು ಮುಂದೆ ನಾನು ದೊಡ್ಡಸ್ತಿಕೆ ತೋರಿಸಿಕೊಳ್ಳುವುದಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಾನೆ.
ಮಾತಿನಿಂದಲೇ ಕೊಂದುಬಿಟ್ಟೆ
ಭಗವಾನ್ ಬುದ್ಧನವರು ಒಂದು ಹಳ್ಳಿಯಲ್ಲಿ ತಮ್ಮ ಉಪನ್ಯಾಸವನ್ನು ಮುಗಿಸಿ ಬೇರೆ ಊರಿಗೆ ಹೋಗಬೇಕಾಗಿತ್ತು ಆ ಊರಿಗೆ ಹೋಗಬೇಕಾದರೆ ಒಂದು ಚಿಕ್ಕದಾದ ಕಾಡು ಸಿಕ್ಕೇ ಸಿಗುತ್ತದೆ ಅದನ್ನು ಪಾರು ಮಾಡಿ ಹೋಗಬೇಕು ಬೇರೆ ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿದಾಗ ಆ ಹಳ್ಳಿಯವರು ನೀವು ಹೋಗುವುದು ಬೇಡ ಏಕೆಂದರೆ ನೀವು ಹೋಗುವ ದಾರಿಯ ಮಧ್ಯದಲ್ಲಿ ಒಬ್ಬ ಅಂಗುಲಿ ಮಾಲ ಎಂಬುವವನೂ ಇದ್ದಾನೆ.
ಅವನು ದೊಡ್ಡ ಕ್ರೂರಿ ಈಗಾಗಲೇ 99 ಜನರನ್ನು ಕೊಂದು ಅದರ ಲೆಕ್ಕಕ್ಕಾಗಿ ಅವನು ಒಂದೊಂದು ಬೆರಳನ್ನೂ ಹಾರ ಮಾಡಿಕೊಂಡು ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದಾನೆ ಈಗಾಗಲೇ ತೊಂಭತ್ತೊಂಭತ್ತು ಜನರನ್ನು ಕೊಂದಿದ್ದಾನೆ ಒಬ್ಬ ಮಾತ್ರ ಅವನಿಗೆ ಬೇಕಾಗಿದೆ ಅದರಲ್ಲಿ ನೀವು ಹೋದರೆ ಅವನು ಬಿಡುವುದಿಲ್ಲ ಅದಕ್ಕಾಗಿ ನೀವು ಹೋಗದೆ ಇರುವುದು ಒಳ್ಳೆಯದು ಎಂದು ಹೇಳುತ್ತಾರೆ.
ಬುದ್ಧರು ಮುಗುಳ್ನಗುತ್ತಾ ಹಾಗಾದರೆ ನಾನು ಕಾಡಿಗೆ ಹೋಗಲೇ ಬೇಕು ಎಂದು ತೀರ್ಮಾನ ಮಾಡುತ್ತಾರೆ ಬೇರೆ ಎಲ್ಲರೂ ಹೇಳುತ್ತಾರೆ ಬೇಡ ಬೇಡ ಎಂದರು ಬುದ್ಧರು ನಾನು ಹೋಗಿ ಅವನನ್ನು ನೋಡಿ ಅವನ ಕೋಪವನ್ನು ಕಡಿಮೆ ಮಾಡುತ್ತೀನಿ ಎಂದು ಹೇಳಿ ಹೊರಡುತ್ತಾರೆ.
ನಿಧಾನವಾಗಿ ಬುದ್ಧರು ಬರುತ್ತಿದ್ದಂತೆಯೇ ಖಡ್ಗ ಹಿಡಿದು ಮುಂದೆ ನಿಂತು ನಗುತ್ತಾ ಹೇಳುತ್ತಾನೆ ಎಷ್ಟು ಧೈರ್ಯ ನಿನಗೆ ನೀನು ಬರುತ್ತಿದ್ದೀಯಲ್ಲಾ ಬೇರೆ ಇತರರು ಯಾರು ನಿನಗೆ ಹೇಳಲಿಲ್ಲವೇ ಎಂದು ಅಂಗುಲಿಮಾಲ ಹೇಳುತ್ತಾನೆ ಅದಕ್ಕೆ ಬುದ್ಧ ನಗುತ್ತಾ ಹೇಳುತ್ತಾರೆ.
ನನಗೆ ಎಲ್ಲವೂ ಗೊತ್ತು ನೀನು ನನ್ನನ್ನು ಕೊಲ್ಲಬೇಕು ಎಂದು ಕಾಯುತ್ತಿದ್ದೀಯಾ ಎಂದು ಕೇಳುತ್ತಾರೆ ಆಗ ಅಂಗುಲಿಮಾಲ ಇಲ್ಲಿಯವರೆಗೆ 99 ಜನರನ್ನು ಕೊಂದಿದ್ದೇನೆ ಈಗ ನಿನ್ನನ್ನು ಕೊಂದರೆ ನಾನು ನೂರು ಜನರ ಕೊಂದಂತೆ ಆಗುತ್ತದೆ ನನ್ನ ಪ್ರತಿಜ್ಞೆ ಪೂರ್ಣವಾಗುತ್ತದೆ ಎಂದು ಹೇಳಿ ನಗುತ್ತಾನೆ.
ಭಗವಾನ್ ಬುದ್ಧರು ಕೂಡ ನಗುತ್ತಾರೆ ಅಂಗುಲಿಮಾಲನಿಗೆ ಆಶ್ಚರ್ಯವಾಗುತ್ತದೆ ಮತ್ತೆ ಕೇಳುತ್ತಾನೆ ನಿನಗೆ ಹೆದರಿಕೆ ಆಗುವುದಿಲ್ಲವೇ ಎಂದಾಗ ನಗುತ್ತಾ ನನಗೆ ಯಾವುದೇ ರೀತಿಯ ಭಯ ಇಲ್ಲ ಎಂದು ಹೇಳುತ್ತಾರೆ. ಆಗ ಅಂಗುಲಿಮಾಲ ಬುದ್ಧರ ಧೈರ್ಯ ನೋಡಿ ನೀನು ಮುಂದೆ ಬರಬೇಡ ಓಡಿ ಹೋಗು ನಿನ್ನ ಪ್ರಾಣ ಉಳಿಸಿಕೊ ಎಂದು ಕರುಣೆಯಿಂದ ಹೇಳಿದನು.
ಹೋಗಲಿಲ್ಲವೆಂದರೆ ನಾನು ನಿನ್ನನ್ನು ಸಾಯಿಸುತ್ತೇನೆ ಎಂದಾಗ ತಕ್ಷಣ ನನ್ನನ್ನು ಸಾಯಿಸುವುದಕ್ಕಿಂತ ಮುಂಚೆ ನನ್ನ ಮಾತನ್ನು ಒಂದು ನಡೆಸು ಕೊಡುವೆಯಾ ಎಂದು ಅಂಗುಲಿಮಾಲನಿಗೆ ಕೇಳುತ್ತಾರೆ ಅದಕ್ಕೆ ಅಂಗುಲಿಮಾಲ ಆಗಲಿ ಎನ್ನುತ್ತಾನೆ. ಆಗ ನೀನು ನಿಂತಿರುವ ಪಕ್ಕದಲ್ಲಿ ಇರುವ ಮರದ ಒಂದು ಕೊಂಬೆಯನ್ನು ಕತ್ತರಿಸು ಎಂದು ಹೇಳುತ್ತಾರೆ ಮರದ ಕೊಂಬೆಯನ್ನು ಕತ್ತರಿಸುತ್ತಾನೆ.
ಕತ್ತರಿಸಿದ ಮರದ ಕೊಂಬೆಯನ್ನು ಮತ್ತೆ ಜೋಡಿಸು ಎಂದು ಹೇಳಿದರು ಆಗ ಅಂಗುಲಿಮಾಲ ಜೋಡಿಸಲು ಹೇಗೆ ಸಾಧ್ಯ ಎನ್ನುತ್ತಾನೆ ಆಗ ಈ ಸೃಷ್ಟಿಯಲ್ಲಿರುವ ಯಾವುದೇ ವಸ್ತುವನ್ನು ನಾವು ಸೃಷ್ಟಿ ಮಾಡಲು ಸಾಧ್ಯವಿಲ್ಲದಿದ್ದರೆ ಅದನ್ನು ನಾಶ ಗೊಳಿಸುವ ಹಕ್ಕು ಕೂಡ ನಮಗೆ ಇಲ್ಲ ಎಂದು ಹೇಳುತ್ತಾರೆ.
ಅಂಗುಲಿಮಾಲನಿಗೆ ಇವರ ಮಾತುಗಳನ್ನು ಕೇಳಿ ದಂಗು ಬಡಿದಂತೆ ನಿಂತುಕೊಳ್ಳುತ್ತಾನೆ ನೀನು ನಿನ್ನ ರಕ್ಷಣೆಗೆ ಕತ್ತಿಯ ಸಹಾಯ ಪಡೆಯುತ್ತಿದ್ದೀಯ ನಿನ್ನ ಮನದಲ್ಲಿ ಭಯವಿದೆ ನನ್ನ ಹತ್ತಿರ ಧೈರ್ಯ ಎನ್ನುವ ಶಕ್ತಿಶಾಲಿಯಾದ ಆಯುಧವಿದೆ ಎಂದು ಹೇಳುತ್ತಾರೆ ಈ ಮಾತು ಕೇಳಿ ತನ್ನಲ್ಲಿರುವ ಕೋಪ ಸಿಟ್ಟು ದ್ವೇಷ ನಕರಾತ್ಮಕ ಭಾವನೆಗಳು ಆ ಕ್ಷಣದಲ್ಲೇ ಬೆಣ್ಣೆಯಂತೆ ಕರಗಿತು.
ಮೊದಲು ನಿನ್ನ ಕೋಪವನ್ನು ನೀನು ಗೆಲ್ಲು ಎಂದಾಗ ಅಂಗುಲಿಮಾಲನ ಮನಸು ಪರಿವರ್ತನೆಯಾಗುತ್ತದೆ. ಅಂಗುಲಿಮಾಲ ನಾನು ಬೇರೆಯವರನ್ನು ಆಯುಧದಿಂದ ಕೊಲ್ಲುತ್ತಿದೆ ಆದರೆ ನೀನು ನನ್ನನ್ನು ಮಾತಿನಿಂದಲೇ ಕೊಂದುಬಿಟ್ಟೆ ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಒಳ್ಳೆಯ ಮನುಷ್ಯನಾಗುತ್ತಾನೆ. ಈಗಲೂ ಶಾಂತಿಯಿಂದ ಬದುಕಿದವರು ನಮ್ಮ ಮನಸ್ಸಿನಲ್ಲಿ ಉಳಿದಿದ್ದಾರೆ.
ನೀನು ಧೈರ್ಯವಂತ
ತಾಯಿಗೆ ಮಗ ನನಗೆ ಏನಾದರೂ ಕೊಡಿಸಿ ಎಂದು ಕೇಳುತ್ತಿದ್ದನು ಅದಕ್ಕೆ ತಾಯಿಯು ಯೋಚನೆ ಮಾಡಿ ಸಂತೆಗೆ ಹೋಗಿ ಒಂದು ಜೀವಂತ ಗಿಳಿಯನ್ನು ತಂದು ಕೊಟ್ಟರು ಮತ್ತೆ ಹೇಳಿದರು ಇದನ್ನು ಚೆನ್ನಾಗಿ ನೋಡಿಕೊಳ್ಳಬೇಕು ಸಮಯಕ್ಕೆ ಸರಿಯಾಗಿ ಆಹಾರ ಹಾಕಬೇಕು ಏಕೆಂದರೆ ನಮ್ಮ ಮನೆಯಲ್ಲಿ ಒಂದು ಬೆಕ್ಕು ಇದೆ ಆಗ ಹುಡುಗ ಶರ್ಲಿನ್ ಸಂತೋಷಪಟ್ಟನು.
ಶರ್ಲಿನ್ ತಾಯಿ ಹೇಳಿದ ಎಲ್ಲಾ ಮಾತಿಗೂ ಹೌದು ಎಂದು ಒಪ್ಪಿಕೊಂಡನು ನೋಡುವುದಕ್ಕೂ ಗಿಣಿ ಆಕರ್ಷಕವಾಗಿತ್ತು ಆಗಾಗ ಪಂಜರದಿಂದ ಆಚೆ ಬರುತ್ತಿತ್ತು ನೋಡುತ್ತಿತ್ತು ಮತ್ತೆ ಪಂಜರದ ಒಳಗೆ ಹಾಕುತ್ತಿದ್ದನು ಎಲ್ಲರೂ ಬಂದಾಗ ಇದನ್ನು ಪ್ರೀತಿಯಿಂದ ಮಾತನಾಡುತ್ತಿದ್ದರು ನಂತರ ಶರ್ಲಿನ್ ಗೆ ಗಿಳಿಯ ಮೇಲೆ ಆಸಕ್ತಿ ಹೊರಟು ಹೋಯಿತು.
ಸದಾ ಬೆಕ್ಕು ಗಿಳಿ ತಿನ್ನುವುದಕ್ಕೆ ಕಾಯುತ್ತಲೇ ಇತ್ತು ರಕ್ಷಣೆ ಮಾಡಲು ಶರ್ಲಿನ್ ಗೆ ಬೇಸರವಾಯಿತು ಇತ್ತು ಇದನ್ನು ಅರಿತ ತಾಯಿ ಬೆಕ್ಕಿನಿಂದ ಎಚ್ಚರಿಕೆಯಾಗಿ ಇರಬೇಕು ಎಂದು ಶರ್ಲಿನ್ ಗೆ ಆಗಾಗ ಎಚ್ಚರಿಸುತ್ತಿದ್ದರು ಗಗನ್ ಹೇಳಿದನು ನೀವೇನು ಯೋಚನೆ ಮಾಡಬೇಡಿ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದನು ತಾಯಿ ಸಂತೆಗೆ ಹೋದಾಗ ಶರ್ಲಿನ್ ಸ್ನೇಹಿತ ಬಂದು ಗಿಳಿಯನ್ನು ನೋಡಿದನು.
ಸ್ನೇಹಿತ ಗಿಳಿಯನ್ನು ನೋಡಿ ತುಂಬಾ ಸಂತೋಷ ಪಟ್ಟನು ಎಷ್ಟು ಚೆನ್ನಾಗಿದೆ ಗಿಳಿ ಯಾರು ಕೊಟ್ಟರು ಎಲ್ಲಿಂದ ತಂದರು ಎಂದು ಎಲ್ಲಾ ವಿಷಯವನ್ನು ಕೇಳಿದನು ಶರ್ಲಿನ್ ಸ್ನೇಹಿತ ಅರುಣನಾದವನು ಈ ರೀತಿ ಗಿಳಿ ನನಗಿದ್ದರೆ ನಾನು ತುಂಬಾ ಸಂತೋಷ ಪಡುತ್ತಿದ್ದೆ ಹಾಗೆಯೇ ನೋಡು ನನ್ನ ಹತ್ತಿರ ಒಂದು ವಿಶೇಷವಾದ ಬುಗುರಿ ಇದೆ ನೋಡು ಎಂದು ಬುಗುರಿಯನ್ನು ತಿರುಗಿಸಿದನು.
ಶರ್ಲಿನ್ ಗೆ ದಿನನಿತ್ಯ ಗಿಳಿ ನೋಡಿದ್ದರಿಂದ ಬುಗುರಿ ತುಂಬಾ ಇಷ್ಟವಾಯಿತು ಅದಕ್ಕೆ ಅರುಣ ಕೇಳಿದನು ನೀನು ನನಗೆ ಗಿಣಿ ಕೊಡು ನಾನು ನಿನಗೆ ಬುಗುರಿಯನ್ನು ಕೊಡುತ್ತೇನೆ ಎಂದು ಹೇಳಿದನು ಮೊದಲು ಶರ್ಲಿನ್ ಒಪ್ಪಲಿಲ್ಲ ನಂತರ ಅರುಣ ಹಾಗೆ ಹೀಗೆ ಏನೇನೋ ಸುಳ್ಳು ಹೇಳಿ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಪುಸಲಾಯಿಸಿ ಗಿಣಿಯನ್ನು ಪಡೆದುಕೊಂಡನು.
ನಮ್ಮ ತಾಯಿಗೆ ಏನು ಹೇಳಬೇಕು ಎಂದಾಗ ಅರುಣ ಉಪಾಯ ಹೇಳಿದನು ನೀನೇನು ಯೋಚನೆ ಮಾಡಬೇಡ ಬುಗುರಿಯನ್ನು ಇಟ್ಟುಕೋ ಮತ್ತೆ ತಾಯಿಗೆ ಹೇಳು ಬೆಕ್ಕು ಗಿಳಿಯನ್ನು ತಿಂದಿದೆ ಆಗ ಅವರು ಸುಮ್ಮನಾಗುತ್ತಾರೆ ಎಂದನು ಶರ್ಲಿನ್ ನಾನು ಒಂದು ಸಾರಿ ಬುಗುರಿಯನ್ನು ತಿರುಗಿಸುತ್ತೇನೆ ಎಂದು ಕೇಳಿದಾಗ ಅರುಣ ಇಲ್ಲ ನೀನು ನನಗೆ ಗಿಳಿ ಕೊಟ್ಟರೆ ಮಾತ್ರ ನಾನು ಕೊಡುತ್ತೇನೆ ಎಂದು ಹೇಳಿದನು.
ಮತ್ತೆ ನಾನು ನಿನಗೆ ಗಿಳಿಯನ್ನು ನೀಡಿದರೆ ನೀನು ಎಲ್ಲಿ ಸಾಗುತ್ತಿಯಾ ಎಂದು ಪ್ರಶ್ನಿಸಿದನು ಆಗ ಅರುಣ ತಕ್ಷಣ ಬುದ್ಧಿವಂತಿಕೆಯಿಂದ ನಮ್ಮ ಮನೆಯ ಹಿಂಭಾಗದಲ್ಲಿ ಬಹಳಷ್ಟು ಸ್ಥಳ ಇದೆ ಅಲ್ಲಿ ನಾನು ಸಾಕುತ್ತೇನೆ ನಾನು ಮಾತ್ರ ಅಲ್ಲಿಗೆ ಹೋಗುತ್ತೇನೆ ಬೇರೆಯವರು ಬರುವುದಿಲ್ಲ ಎಂದು ಭರವಸೆ ನೀಡಿದನು ಕೊನೆಗೆ ಶರ್ಲಿನ್ ಗಿಳಿಯನ್ನು ಕೊಡಲು ಒಪ್ಪಿದನು ನಂತರ ಗಿಳಿಯನ್ನು ಕೊಟ್ಟನು ನಂತರ ಮನಸ್ಸಿನಲ್ಲಿ ಭಯ ಏಕೆಂದರೆ ತಾಯಿ ಪ್ರೀತಿಯಿಂದ ಕೊಡಿಸಿದ್ದಾರೆ.
ತಾಯಿ ಮನಸ್ಸಿಗೆ ಹೇಗೆ ಆಗಬಹುದು ಎಂದು ಯೋಚಿಸಿದನು ನಾನು ಕೊಡ ಬಾರದಾಗಿತ್ತು ಎಂದು ಚಿಂತೆ ಮಾಡಿದನು ಸ್ವಲ್ಪ ಸಮಯದ ನಂತರ ತಾಯಿ ಬಂದರು ಎಲ್ಲವೂ ಪರಿಶೀಲಿಸಿ ಗಿಳಿ ಎಲ್ಲಿ ಎಂದು ಕೇಳಿದರು ನಾನು ಆಟ ಆಡಿಕೊಂಡಿದ್ದೆ ನನಗೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದನು ಆಗ ಅಮ್ಮ ಎಲ್ಲಾ ಕಡೆಯೂ ನೋಡಿದರೂ ಮತ್ತೆ ಶರ್ಲಿನ್ ಗೆ ಹೇಳಿದರು.
ಆಚೆ ಅಂಗಳದಲ್ಲಿ ಎಲ್ಲಾ ಕಡೆ ನೋಡು ಎಂದು ಹೇಳಿದರು ಎಲ್ಲಾ ಕಡೆ ನೋಡಿದ ನಂತರ ಇದು ಬೆಕ್ಕೆ ತಿಂದಿದೆ ಅದಕ್ಕೆ ಬೆಕ್ಕು ಸಿಕ್ಕರೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಕೋಪದಿಂದ ಇದ್ದರು ತಾಯಿಗೆ ಬೆಕ್ಕಿನ ಮೇಲೆ ಅನುಮಾನ ಇತ್ತು ಆದ್ದರಿಂದ ತಾಯಿಗೆ ಬೆಕ್ಕೆ ತಿಂದಿದೆ ಎಂದು ಸಂದೇಹ ಬಂತು.
ಶರ್ಲಿನ್ ಬೆಕ್ಕಿಗೆ ಸರಿಯಾದ ಶಿಕ್ಷೆ ಸಿಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಂಡನು ಅದಕ್ಕೆ ಬೆಕ್ಕು ಬರುತ್ತಿದಂತೆ ದೂರ ಓಡಿಸಿದನು ಆದರೆ ಬೆಕ್ಕಿಗೆ ಅರ್ಥ ಆಗುತ್ತದೆಯೇ ಇಲ್ಲ ಅದು ಮಿಯಾಂ ಮಿಯಾವ್ ಎಂದು ಒಳಗಡೆ ಬಂತು ನಿಧಾನವಾಗಿ ಕೊಠಡಿಯಲ್ಲಿ ಹಾಕಿ ಮುಚ್ಚಿದನು.
ಇದು ತಾಯಿ ನೋಡಲಿಲ್ಲ ನಂತರ ಶರ್ಲಿನ್ ಗೆ ತಿಂಡಿಯನ್ನು ಇಟ್ಟು ತಿಂಡಿ ತಿನ್ನು ಎಂದು ತಾಯಿ ಆ ಕಡೆ ಹೋದರು ಆದರೆ ಶರ್ಲಿನ್ ಗೆ ಊಟ ಮಾಡಲು ಮನಸ್ಸು ಬರುತ್ತಿಲ್ಲ ಮತ್ತೆ ತಾಯಿ ಬಂದು ಸಮಾಧಾನ ಮಾಡಿದರು ಬೇಸರಿಸಿಕೊಳ್ಳಬೇಡ ತಿಂಡಿ ತಿನ್ನು ಎಂದು ಸಮಾಧಾನದಿಂದ ಹೇಳಿದಾಗ ಶರ್ಲಿನ್ ನೊಂದುಕೊಂಡನು ಏಕೆಂದರೆ ನನ್ನ ತಪ್ಪಿನಿಂದ ಬೆಕ್ಕಿಗೆ ಹೊಡೆಯುತ್ತಾರಲ್ಲ ಎಂದು ಆತಂಕದಲ್ಲಿ ಮುಳುಗಿದನು ನಂತರ ಕಣ್ಣಿನಲ್ಲಿ ನೀರು ಬಂತು ತಾಯಿ ಬಂದು ಕೇಳಿದರು.
ಏಕೆ ಅಳುತ್ತಿದೆಯಾ ಇರಲಿ ಬಿಡು ಇನ್ನೊಂದು ಗಿಳಿ ತರೋಣ ಎಂದು ಸಮಾಧಾನ ಪಡಿಸಿದರು ನಂತರ ನಿಧಾನವಾಗಿ ಬೆಕ್ಕು ಬಂತು ತಾಯಿ ಹೊಡೆಯಲು ಹೋದರೂ ಮೇಲಿಂದ ಬಿದ್ದು ಸ್ವಲ್ಪ ಏಟಾಯ್ತು ಆಗ ಶರ್ಲಿನ್ ಗೆ ಬೇಸರವಾಯಿತು ಅಮ್ಮನಿಗೆ ಹೇಳಿದ ಅಮ್ಮ ಬೆಕ್ಕಿಗೆ ಹೊಡೆಯಬೇಡಿ ಏಕೆ ಎಂದು ಕೇಳಿದಾಗ ನಿಜವನ್ನು ಹೇಳಿದನು.
ಆಗ ಬೆಕ್ಕಿಗೆ ಹೊಡೆಯಲಿಲ್ಲ ನಂತರ ಗಿಳಿ ಎಲ್ಲಿ ಎಂದು ಕೇಳಿದಾಗ ಗಿಳಿ ನನ್ನ ಸ್ನೇಹಿತ ತೆಗೆದುಕೊಂಡು ಹೋಗಿದ್ದಾನೆ ಎಂದು ಸತ್ಯ ಹೇಳಿದನು ಆಗ ತಾಯಿಯು ಎಂದಿಗೂ ಇತರರ ಮೇಲೆ ಅಪವಾದ ಹೊರಿಸಬಾರದು ಉದಾಹರಣೆಗೆ ನೀನು ಹೇಳದಿದ್ದರೆ ನಾನು ಬೆಕ್ಕಿಗೆ ಚೆನ್ನಾಗಿ ಹೊಡೆಯುತ್ತಿದ್ದೆ ಎಂದು ಹೇಳಿದರು.
ನಿನ್ನ ತಪ್ಪಿನಿಂದ ಬೆಕ್ಕು ಏಟು ತಿನ್ನ ಬೇಕಾಗಿತ್ತು ಎಂದು ಹೇಳಿದಾಗ ಶರ್ಲಿನ್ ಗೆ ಅರ್ಥವಾಯಿತು ಮತ್ತೆ ತಾಯಿ ಹೇಳಿದರು ನೀನು ಸತ್ಯ ಹೇಳಿದ್ದೀಯಾ ಅಂದರೆ ನೀನು ಧೈರ್ಯವಂತ ಎಂದು ಹೊಗಳಿದರು.
ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದರು ಆಗ ಶರ್ಲಿನ್ ಗೆ ಮನಸ್ಸಿನಲ್ಲಿದ್ದ ತಳಮಳ ಕಡಿಮೆ ಆಯಿತು ನೆಮ್ಮದಿ ಸಿಕ್ಕಿತು.