ಸ್ಫೂರ್ತಿ ತುಂಬಲೇಬೇಕು

ಒಂದು ಸಂಪ್ರದಾಯಸ್ಥ ರಾಜ ಇರುತ್ತಾನೆ ಅವನ ರಾಜ್ಯದಲ್ಲಿ ಹಲವಾರು ಕುದುರೆಗಳು ಆನೆಗಳು ಒಂಟೆಗಳು ಹಾಗೂ ಸೈನಿಕರು ಕೂಡ ಇರುತ್ತಾರೆ ಅದರಲ್ಲಿ ಒಂದು ಕುದುರೆ ಅವನಿಗೆ ತುಂಬ ಪ್ರೀತಿ ಮತ್ತೆ ಯುದ್ಧಕ್ಕೆ ಹೋಗಬೇಕಾದರೆ ಅದೇ ಕುದುರೆಯಲ್ಲಿ ಹೋಗುತ್ತಾನೆ.

ಆ ಕುದುರೆಯು ಹೇಳಿದಂತೆ ಕೇಳುತ್ತಿತ್ತು ಮತ್ತು ಕುದುರೆಯೂ ಸ್ವಲ್ಪ ವಯಸ್ಸಾಗುತ್ತ ಬಂತು ನಂತರ ಒಂದು ಸಾರಿ ಕುದುರೆಯು ಊರಿನಿಂದ ಆಚೆ ಹೋಯಿತು ತಿರುಗಾಡಿಕೊಂಡು ಬರೋಣವೆಂದು ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಕ್ಕಿ ಕೊಂಡಿತು ಎಷ್ಟೇ ಪ್ರಯತ್ನಪಟ್ಟರೂ ಕುದುರೆ ಈಚೆ ಬರಲಿಲ್ಲ.

 ಆಗ ರಾಜನು ಬಂದು ನೋಡಿದನು ಆಗ ರಾಜನಿಗೆ ತುಂಬಾ ಬೇಸರವಾಯಿತು ಇದನ್ನು ತಿಳಿದ ಕುದುರೆಯ ತರಬೇತುದಾರ ಬಂದನು ಕುದುರೆಯ ಸ್ಥಿತಿಯನ್ನು ನೋಡಿದನು ಆಗ ತರಬೇತುದಾರನಿಗೆ ಅರಿವಾಯಿತು ಕುದುರೆಯು ಕೆಸರಿನಲ್ಲಿ ಸಿಕ್ಕಿಕೊಂಡಿದೆ ಕುದುರೆ ಮಾತ್ರ ಬರಬಹುದು ಎಂದು ಅರಿತನು.

 ಮೊದಲಿಗೆ ಒಂದು ಎರಡು ಕುದುರೆಗಳು ಬಂದವು ನಂತರ 4 ನಂತರ 8 ಹೀಗೆ ಕುದುರೆಗಳು ಜಾಸ್ತಿಯಾದವು ಆ ಕುದುರೆಯ ಸುತ್ತ ಸುತ್ತುತ್ತಾ ಬಂದವು ಕುದುರೆಗಳ ಶಬ್ದ ಕೇಳುತ್ತಿದ್ದಂತೆ ಈ ಕುದುರೆಗೂ ಸ್ವಲ್ಪ ಶಕ್ತಿ ಬರುತ್ತಿತ್ತು ನಂತರ ಕಹಳೆಯ ಧ್ವನಿಯನ್ನು ಮೊಳಗಿಸಿದರು.

 ಧ್ವನಿಯನ್ನು ಕೇಳಿದ ಕುದುರೆ ಎಲ್ಲ ಕುದುರೆಗಳೂ ಇತ್ತು ಅದನ್ನು ನೋಡಿ ತನ್ನ ಶಕ್ತಿಯಿಂದ ಮೇಲೆ ಬಂತು ಆಗ ಎಲ್ಲರೂ ಸಂತೋಷಪಟ್ಟರು ತರಬೇತುದಾರನಿಗೆ ರಾಜಾ ಕೇಳಿದನು ಹೇಗೆ ಈ ಕುದುರೆ ಬಂತು ಎಂದಾಗ ತರಬೇತುದಾರ ದೇಹದ ಬಲವೊಂದೇ ಸಾಕಾಗುವುದಿಲ್ಲ ಅದಕ್ಕೆ ಒಳಗಿನಿಂದ ಆತ್ಮವಿಶ್ವಾಸ ಸ್ಫೂರ್ತಿ ಬೇಕು ಎಂದನು.

 ನನ್ನ ಅವಶ್ಯಕತೆ ಈ ಪ್ರಪಂಚಕ್ಕೆ ಬೇಕಾಗಿದೆ ಎಂದು ಸ್ಫೂರ್ತಿ ಪ್ರೇರೇಪಿಸಿದಾಗ ಮಾತ್ರ ಬದುಕಲು ಧೈರ್ಯ ಬರುತ್ತದೆ ಅದಕ್ಕೆ ನಾವು ಸ್ಫೂರ್ತಿ ತುಂಬಲೇಬೇಕು ಎಂದನು. ನಮ್ಮವರು ಮಾತ್ರ ನಮ್ಮನ್ನು ಸ್ಫೂರ್ತಿ ತುಂಬಬಲ್ಲರು ಅದಕ್ಕೆ ಪ್ರೀತಿಯಿಂದ ನೋಡಿಕೊಳ್ಳೋಣ ಪ್ರೀತಿಯಿಂದ ಮಾತನಾಡಿಸೋಣ ಇತರರಿಗೆ ಸ್ಪೂರ್ತಿ ತುಂಬೋಣ. ನಾನು ಇತರರಿಗೆ ಸ್ಪೂರ್ತಿ ತುಂಬಿದ್ದೇನೆಯೇ?

ನಾನು ಪರೀಕ್ಷೆ ಮಾಡಿಕೊಂಡೆ

ಹಲವಾರು ವರ್ಷಗಳ ಹಿಂದೆ ನಡೆದ ಘಟನೆ ಆಗ ನಾವು ಯಾರಿಗಾದರೂ ಕರೆ ಮಾಡಬೇಕಾದರೆ ಒಂದು ರೂಪಾಯಿಯ ನಾಣ್ಯ ಕಾಯಿನ್ ಬೂತ್ ಗೆ ಹಾಕಿ ಕರೆ ಮಾಡುತ್ತಿದ್ದೆವು ಒಬ್ಬ ನೀತಿವಂತ ಯುವಕ ಅಂಗಡಿಗೆ ಹೋಗಿ ನಾನು ಕರೆ ಮಾಡಬೇಕಾಗಿದೆ ಎಂದನು ಆಗ ಆ ಅಂಗಡಿಯವನು ಕರೆ ಮಾಡಿ ಎಂದನು.

ಒಂದು ರೂಪಾಯಿಯ ನಾಣ್ಯ ಹಾಕಿ ಜೇಬಿನಲ್ಲಿ ಚೀಟಿಯನ್ನು ತೆಗೆದು ಆ ಸಂಖ್ಯೆಗೆ ದೂರವಾಣಿ ಕರೆ ಮಾಡಿದನು ಆ ಕಡೆಯಿಂದ ಹಲೋ ಎಂದಾಗ ಹಿರಿಯರ ಶಬ್ದ ಬಂತು ಹೇಳಿ ಎಂದಾಗ ನಾನು ಒಬ್ಬ ಯುವಕ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೇನೆ ದಯವಿಟ್ಟು ನಿಮ್ಮ ಮನೆಯಲ್ಲಿ ಕೆಲಸಕ್ಕೆ ಸೇರಿಸಿ ಕೊಳ್ಳಿ ಎಂದು ಗೋಗರೆದನು.

 ಅಂಗಡಿಯವನು ಏನಿರಬಹುದು ಎಂದು ಒಳಗಡೆ ಹೋಗಿ ಇನ್ನೊಂದು ಫೋನನ್ನು ತೆಗೆದುಕೊಂಡು ಇಬ್ಬರ ಸಂಭಾಷಣೆಯನ್ನು ಕೇಳಲು ಶುರು ಮಾಡಿದನು ಆ ಕಡೆಯಿಂದ ಇಲ್ಲ ಈಗಾಗಲೇ ಒಬ್ಬ ಯುವಕ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ.

 ನೀವು ಎಷ್ಟು ಸಂಬಳ ಕುಡಿತಿರೋ ಅದಕ್ಕಿಂತ ಮುಕ್ಕಾಲು ಸಂಬಳ ನನಗೆ ಕೊಟ್ಟರೂ ಸಾಕು ನಾನು ಕೆಲಸ ಮಾಡುತ್ತೇನೆ ಈ ಮಾತನ್ನು ಕೇಳಿ ಹಿರಿಯರು ಕೆಲಸ ಮಾಡುತ್ತಿರುವ ಯುವಕನು ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು ನಂತರ ನಮಗೆ ಕೆಲಸಕ್ಕೆ ಬೇಕಾದರೆ ನಿನ್ನ ದೂರವಾಣಿ  ಸಂಖ್ಯೆಯನ್ನು ಕೊಟ್ಟಿರೋ ನಾನು ನಿನಗೆ ಕರೆ ಮಾಡುತ್ತೇನೆ ಎಂದು ವಿನಯದಿಂದ ಹೇಳಿದರು.

 ಈ ಎಲ್ಲ ಮಾತನು ಕೇಳಿದ ಅಂಗಡಿಯವನ ಮನಸು ಐಸ್ ಕ್ರೀಮ್ ನಂತೆ ಕರಗಿತು ಯುವಕನಿಗೆ ಬಂದು ಅಂಗಡಿಯವನು ಹೇಳಿದನು ಕೆಲಸ ಬೇಕೆ ನಾನು ನಿನಗೆ ಕೆಲಸ ನಾನು ಕೊಡುತ್ತೇನೆ ಬಾ ಎಂದನು ಆಗ ಆ ಯುವಕ ನಗುತ್ತಾ ಹೇಳಿದನು ನನಗೆ ಕೆಲಸ ಬೇಕಾಗಿಲ್ಲ.

 ಈಗಷ್ಟೇ ನೀನು ಕೆಲಸ ಬೇಕು ಎಂದು ಅಂಗಲಾಚಿದೆ ಅಲ್ಲವೇ? ಎಂದಾಗ ಆ ಯುವಕ ನಾನೇ ನನ್ನ ಕೆಲಸ ಹೇಗಿದೆ ಎಂದು ನಾನು ಪರೀಕ್ಷೆ ಮಾಡಿಕೊಂಡೆ ಎಂದನು ಈಗ ನನಗೆ ತುಂಬ ಖುಷಿ ಆಗುತ್ತಿದೆ ಎಂದು ಹೇಳಿ ಹೋದನು. ನಾನು ಮಾಡಿದ ಕೆಲಸವನ್ನು ನಾನೇ ಪರೀಕ್ಷೆ  ಮಾಡಿಕೊಂಡಿದ್ದೇನೆಯೇ?

ಕೆಲಸಗಾರರಲ್ಲಿ ಕೆಲವು ವ್ಯತ್ಯಾಸಗಳು

ಒಬ್ಬ ಯುವಕ ಬಾಬಾ ಅವರ ಉಪನ್ಯಾಸ ಮುಗಿದ ನಂತರ ಕೆಲಸಕ್ಕೆ ಸೇರಿದಾಗ ಕೆಲವರು ತುಂಬಾ ಅಭಿವೃದ್ಧಿಯಾಗುತ್ತಾರೆ ಕೆಲವರು ಅಭಿವೃದ್ಧಿಯಾಗುವುದಿಲ್ಲ ಕಾರಣವೇನು ಎಂದು ಕೇಳುತ್ತಾನೆ ಆಗ ಬಾಬಾ ಅವರು ಕೆಲಸಗಾರರಲ್ಲಿ ಎರಡು ಗುಂಪುಗಳಿವೆ ಒಂದು ಸಾಮಾನ್ಯ ಕೆಲಸಗಾರರು ಇನ್ನೊಂದು ಅಸಾಮಾನ್ಯ ಕೆಲಸಗಾರರು ಎರಡು ಗುಂಪಿನಲ್ಲೂ ನಾವು ಬಹಳಷ್ಟು ವ್ಯತ್ಯಾಸವನ್ನು ನೋಡಬಹುದಾಗಿದೆ 

ಸಾಮಾನ್ಯ ಕೆಲಸಗಾರರು

ಕೊಟ್ಟ ಕೆಲಸ ಮಾಡುವುದಕ್ಕೆ ಕಷ್ಟಪಡುತ್ತಾರೆ ಮತ್ತು ಕೆಲಸ ಮಾಡದೆ ಇರುವುದಕ್ಕೆ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾರೆ.

ಯಾವುದೇ ಕೆಲಸ ಹೇಳಿದರೂ ಕೆಲಸದಿಂದ ಹೇಗೆ ಬಚಾವ್ ಆಗಬೇಕು ಎಂದು ಸದಾ ಯೋಚನೆ ಮಾಡುತ್ತಿರುತ್ತಾರೆ.

ಯಾವುದೇ ಅವಕಾಶ ಸಿಕ್ಕಿದರೂ ಅದನ್ನು ತುಂಬ ದೊಡ್ಡ ಸಮಸ್ಯೆ ಎಂದು ತಿಳಿಯುತ್ತಾರೆ

ಕೆಲಸ ಮಾಡಬೇಕಾದರೆ ಅಷ್ಟು ಚೆನ್ನಾಗಿ ಕೆಲಸ ಮಾಡುವುದಿಲ್ಲ ಹೇಗೋ ಕೆಲಸ ಮುಗಿದರೆ ಸಾಕು ಎನ್ನುವವರು.

ಯಾವುದೇ ಒಳ್ಳೆಯ ಸಲಹೆಗಳನ್ನು ಹೇಳಿದರೆ ಆ ಸಲಹೆಗಳನ್ನು ಒಪ್ಪದೆ ಸಂದೇಹ ಪಡುತ್ತಾರೆ.

ಹೊಸದಾಗಿ ಕಲಿಯಲು ಇಷ್ಟಪಡುವುದಿಲ್ಲ

 ಆ ಸಾಮಾನ್ಯ ಕೆಲಸಗಾರರು

ಯಾವುದೇ ಕೆಲಸ ಕೊಟ್ಟರೂ ತುಂಬ ಚೆನ್ನಾಗಿ ಮಾಡುತ್ತಾರೆ ಮತ್ತೆ ಬೇಗ ಮುಗಿಸುವುದಕ್ಕೆ ಹೊಸ ದಾರಿಗಳನ್ನು ಹುಡುಕುತ್ತಾರೆ.

ಕೊಟ್ಟಿರುವ ಕೆಲಸಲ್ಲಿ ಸಮಸ್ಯೆ ಅಡ್ಡಿಗಳು ಬಂದರೂ ಅವರು ಅದನ್ನು ಅದನ್ನು ಹೊಸದಾಗಿ ಏನಾದರೂ ಕಲಿಯಬಹುದು ಎಂದು ಪೂರ್ಣಗೊಳಿಸುತ್ತಾರೆ.

ಯಾವುದೇ ಕೆಲಸ ಕೊಟ್ಟರೂ ನನ್ನಿಂದ ಸಾಧ್ಯ ಎಂದು ಹೇಳುತ್ತಾರೆ.

ಕೆಲಸ ಮೊದಲು ಮುಗಿಸಿ ನಂತರ ಇವರ ಕೆಲಸಗಳನ್ನು ಮಾಡುತ್ತಾರೆ.

ಯಾವಾಗಲೂ ಹಸನ್ಮುಖಿ ಹಾಗೂ ಆತ್ಮ ವಿಶ್ವಾಸ ಇರುತ್ತದೆ.

ಹೊಸದಾಗಿ ಕಲಿಯಲು ಉತ್ಸಾಹಿಗಳಾಗಿರುತ್ತಾರೆ.

ನಾನು ಸಾಮಾನ್ಯ ಕೆಲಸಗಾರನೇ ಅಥವಾ ಅಸಾಮಾನ್ಯ ಕೆಲಸಗಾರನೇ? ನಾನು ಕೆಲಸದಲ್ಲಿ ಎಷ್ಟು ಪ್ರಾವೀಣ್ಯತೆ ಪಡೆದಿದ್ದೇನೆ?

ಕೆಲಸಗಾರರನ ಶೈಲಿ ಹೇಗಿರಬೇಕು

ಒಬ್ಬ ಗುಣವಂತ ಯುವಕ ಕೌಶಲ್ಯ ತರಬೇತಿ ಶಿಬಿರವನ್ನು ಮುಗಿಸಿದ ನಂತರ ಗುರುಗಳಿಗೆ ಕೆಲಸಗಾರನ ಶೈಲಿ ಹೇಗಿರಬೇಕು ಎಂದು ಕೇಳುತ್ತಾನೆ ಆಗ ಗುರುಗಳು ನಗುತ್ತಾ ಕೆಲಸ ಮಾಡುವ ವಾತಾವರಣದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಇರಬೇಕು ಕೆಲವು ನಿಯಮಗಳನ್ನು ಪಾಲಿಸಲೇಬೇಕು ಎಂದು ಹೇಳುತ್ತಾರೆ

ನಿಯಮಗಳು

೧ ಸಮಯಕ್ಕೆ ಸರಿಯಾಗಿ ಹೋಗಿ ನಿಮ್ಮ ಕೆಲಸವನ್ನು ಆವತ್ತೇ ಆದಷ್ಟು ಮುಗಿಸಿಬಿಡಿ.

೨ ತಮ್ಮ ಸಹಪಾಠಿಗಳ ಜೊತೆ ಆದಷ್ಟು ಅವರ ವ್ಯಕ್ತಿತ್ವ ನೋಡಿ ಸಂಬಂಧವನ್ನು ಬೆಳೆಸಿಕೊಳ್ಳಿ.

೩ ಕೆಲಸದ ವಿಷಯವನ್ನು ಮನೆಗೆ ತರಬೇಡಿರಿ ಹಾಗೆಯೇ ಮನೆಯ ವಿಷಯಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಕೆಲಸದವರ ಜೊತೆ ಹಂಚಿಕೊಳ್ಳಬೇಡಿ.

೪ ಯಾರಿಂದಲೂ ಏನನ್ನೂ ನಿರೀಕ್ಷೆ ಮಾಡಬೇಡಿ ಇತರರು ಸಹಾಯ ಮಾಡಿದರೆ ಅವರಿಗೆ ನೀವು ಕೂಡ ಸಾಧ್ಯವಾದಷ್ಟು ಸಹಾಯ ಮಾಡಿ ಇತರರಿಗೆ ಪ್ರೋತ್ಸಾಹ ನೀಡಿ.

೫ ಎಲ್ಲರನ್ನೂ ಗೌರವ ಕೊಡಿ ಆದರೆ ಯಾರನ್ನೂ ಹೆಚ್ಚು ನಂಬಬೇಡಿ.

೬ ಬರೀ ಕೆಲಸದ ಬಗ್ಗೆಯೇ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ಸಂಸಾರದ ಬಗ್ಗೆಯೂ ಕೆಲವು ಕೆಲಸಗಳು ಮಾಡಿ ತಾಳ್ಮೆ ಇರಲೇಬೇಕು ಕೆಲವು ಸಾರಿ ಮೌನವಾಗಿ ಇರಲೇಬೇಕು.

 ೭ ಇತರರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಒಳ್ಳೆಯದಲ್ಲ ನಿಮ್ಮ ನಡುವಳಿಕೆ ನಯವಾಗಿರಲಿ.

೮ ನೀವು ಕೆಲಸ ಮಾಡುವ ವಾತಾವರಣದಲ್ಲಿ ನಿಮ್ಮ ಸ್ಥಾನ ಮಾನ ವೇತನ ಹೆಚ್ಚಾಗಿ ಇರಬಹುದು ಆದರೆ ಅದರ ಬಗ್ಗೆ ಅಹಂಕಾರ ಬೇಡ ನೀವು ಮಾಡಿದ ಕೆಲಸಕ್ಕೆ ನಿಮಗೆ ಸಂಬಳ ಬರುತ್ತಿದೆ ಅಷ್ಟೇ.

೯ ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಾ ಹಾಗಾಗಿ ನಿಮಗೆ ಬಡ್ತಿ ಬರದೆ ಇರಬಹುದು ಬಂದರೆ ಸಂತೋಷ ಇಲ್ಲದಿದ್ದರೂ ಚಿಂತೆ ಮಾಡಲಿಕ್ಕೆ ಹೋಗಬೇಡಿ ನಿಮ್ಮ ಜ್ಞಾನ ಕೌಶಲ್ಯಕ್ಕೆ ಅಲ್ಲಿ ಬೆಲೆ ಇಲ್ಲದಿದ್ದರೆ ಅದಕ್ಕೆ ಬೇಸರಪಟ್ಟುಕೊಳ್ಳಬೇಡಿ ಅದೇ ಜ್ಞಾನ ಕೌಶಲ್ಯಗಳು ಇತರರು ಗುರುತಿಸುತ್ತಾರೆ

೧೦ ಮುಖ್ಯವಾಗಿ ನಮಗೆ ನೆಮ್ಮದಿ ಮನಶಾಂತಿ ಬೇಕು ಹಾಗಾಗಿ ಹೆಚ್ಚಾಗಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು ಯಶಸ್ವಿಯಾಗುವುದರ ಬಗ್ಗೆ ಚಿಂತನೆ ಮಾಡುತ್ತಿರಬೇಕು ಹೊಸ ಹೊಸ ಕೌಶಲ್ಯಗಳು ಕಲಿಯುತ್ತಿರಲೇಬೇಕು. ನಾನು ಎಷ್ಟು ನಿಯಮಗಳನ್ನು ಪಾಲಿಸುತ್ತಿದ್ದೇನೆ?

 ಈ ಕೆಲಸ ಸಿಕ್ಕಿರುವುದು ನನಗೆ ಅದೃಷ್ಟ

ಒಂದು ಊರಿನ ಮಧ್ಯದಲ್ಲಿ ಒಂದು ದೊಡ್ಡದಾದ ಬಸ್ ನಿಲ್ದಾಣವನ್ನು ಕಟ್ಟುತ್ತಿರುತ್ತಾರೆ ಅದರಲ್ಲಿ ಹಲವಾರು ಜನ ಕೆಲಸ ಮಾಡುತ್ತಿರುತ್ತಾರೆ ಇಂಜಿನಿಯರ್ ಆದವನು ಕೆಲಸ ಹೇಗೆ ನಡೆಯುತ್ತಿದೆ ಎಂದು ನೋಡಲು ಹೋಗುತ್ತಾನೆ.

 ಒಬ್ಬ ಕೆಲಸ ಮಾಡುತ್ತಿರುವುದನ್ನು ನೋಡಿ ಅವನಿಗೆ ಕೇಳುತ್ತಾನೆ ಏನಪ್ಪ ಈ ಕೆಲಸ ಮಾಡುತ್ತಿದೆಯಲ್ಲಾ ಹೇಗಿದೆ ಎಂದಾಗ ಏನ್ಮಾಡೋದು ಸ್ವಾಮೀ ದರಿದ್ರ ಹೊಟ್ಟೆಪಾಡು ಕೂಲಿಗಾಗಿ ಕೆಲಸ ಮಾಡುತ್ತಿದ್ದೇನೆ.

 ಹಾಗೆ ಇನ್ನೂ ಸ್ವಲ್ಪ ಮುಂದೆ ಹೋಗಿ ಇನ್ನೊಬ್ಬನಿಗೆ ಅದೇ ಪ್ರಶ್ನೆಯನ್ನು ಕೇಳಿದನು ಮಾಡುತ್ತಿರುವ ಕೆಲಸವಂತೂ ಒಳ್ಳೆಯದೆ ನನಗೆ ಎಷ್ಟು ಕೂಲಿ ಕೊಡುತ್ತಿದ್ದಾರೋ ಅಷ್ಟು ಮಾತ್ರ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದೇನೆ ಎಂದನು.

 ಇದೇ ಪ್ರಶ್ನೆ ಮೂರನೇಯವನಿಗೆ ಕೇಳಿದಾಗ ಅವನು ಉತ್ತರಿಸಿದನು ಈ ಕೆಲಸ ಸಿಕ್ಕಿರುವುದು ನನಗೆ ಅದೃಷ್ಟ ಏಕೆಂದರೆ ಈ ಊರಿನಲ್ಲಿ ಒಂದು ಬಸ್ ನಿಲ್ದಾಣ ಇರಲಿಲ್ಲ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದನು ಅದಕ್ಕೆ ನಾನು ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ ಎಂದು ಮಂದಹಾಸದಿಂದ ಹೇಳಿದ.

 ಇದರಲ್ಲಿ ನಾವು ನೋಡಿದ ಹಾಗೆ 3ರೀತಿಯ ಕೆಲಸಗಾರರು ಇರುತ್ತಾರೆ ನಾನು ಯಾವ ರೀತಿಯ ಕೆಲಸಗಾರ?

Leave a Comment