ಒಂದು ಊರಿನಲ್ಲಿ ಒಬ್ಬ ಸಹಾನುಭೂತಿಯುಳ್ಳ ರಾಜ ಇರುತ್ತಾನೆ ಅವನು ಪ್ರತಿಸಾರಿ ಊರಿಂದ ಹೊರಗೆ ಬರಬೇಕಾದರೆ ಒಂದು ಆಶ್ರಮವನ್ನು ಭೇಟಿ ಮಾಡಿ ಬರುತ್ತಾನೆ ಆ ಆಶ್ರಮದಲ್ಲಿ ಬಾಬಾ ಅವರು ಯಾವತ್ತು ನೋಡಿದರು ಮಂದಹಾಸದಿಂದ ಸಂತೋಷದಿಂದಲೇ ಇರುತ್ತಾರೆ.
ಹಲವಾರು ಸಾರಿ ನೋಡಿದ ನಂತರ ಒಂದು ಸಾರಿ ಬಾಬಾ ಅವರ ಹತ್ತಿರ ಬಂದು ನೀವು ಯಾವಾಗಲೂ ಸಂತೋಷವಾಗಿಯೇ ಇರುತ್ತೀರಾ ನಿಮಗೆ ಜ್ಞಾನೋದಯವಾಗಿದೆ ಅದೇ ರೀತಿ ನನಗೂ ಜ್ಞಾನೋದಯ ಆಗಬೇಕು ಅದಕ್ಕೆ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದನು.
ಬಾಬಾ ಅವರು ತನ್ನ ಶಿಷ್ಯರಿಂದ ಒಂದು ದೊಡ್ಡ ಪಾತ್ರೆಯನ್ನು ತರಿಸಿದರು ಅದರಲ್ಲಿ ಭಸ್ಮವನ್ನು ಹಾಕಿ ನೀರನ್ನು ಚೆನ್ನಾಗಿ ಅಲುಗಾಡಿಸಿದರೂ ನೀರು ರಾಡಿಯಾಯ್ತು ನಂತರ ರಾಜರಿಗೆ ಹೇಳಿದರು ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಹೇಳಿದರು ರಾಜರು ಈ ನೀರಿನಲ್ಲಿ ಮುಖ ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದರು.
ಆ ಬಟ್ಟಲಿನಲ್ಲಿ ಇರುವ ನೀರನ್ನು ಚೆಲ್ಲಿ ಶುದ್ಧವಾದ ನೀರನ್ನು ತಂದು ಇಟ್ಟರು ನಂತರ ಆ ನೀರನ್ನು ಚೆನ್ನಾಗಿ ಅಲುಗಾಡುವಂತೆ ಕಡ್ಡಿಯಿಂದ ತಿರುಗಿಸಿದರು ತಿರುಗುತ್ತಿರುವ ನೀರಿನಲ್ಲಿ ನಿಮ್ಮ ಮುಖ ನೋಡಿಕೊಳ್ಳಿ ಎಂದರು ಇದರಲ್ಲಿ ಸ್ಪಷ್ಟವಾಗಿ ಮುಖ ಕಾಣುತ್ತಿಲ್ಲ ಎಂದು ಹೇಳಿದನು.
ಹತ್ತು ನಿಮಿಷ ಆ ನೀರನ್ನು ಹಾಗೆಯೇ ಬಿಟ್ಟರು ನಂತರ ನಿಮ್ಮ ಮುಖವನ್ನು ನೋಡಿ ಎಂದಾಗ ಮುಖ ಸ್ಪಷ್ಟವಾಗಿ ಕಾಣಿತು ಆಗ ಬಾಬಾ ಅವರು ನಿಮಗೆ ಜ್ಞಾನೋದಯವಾಗಿದೆ ಎಂದು ಹೇಳಿದರು ಇದು ಹೇಗೆ ಸಾಧ್ಯ ಎಂದು ರಾಜನು ಕೇಳಿದಾಗ ಬಾಬಾ ಅವರು ವಿವರವಾಗಿ ಹೇಳಿದರು.
ನೀರು ಭಸ್ಮದಿಂದ ಕೂಡಿ ಕಲುಷಿತಗೊಂಡಾಗ ನಮ್ಮ ಮುಖ ಕಾಣಲಿಲ್ಲ ಅಂದರೆ ವಾಸನೆಗಳಿಂದ ಆಸೆಗಳಿಂದ ಚಿತ್ತ ಮಲಿನವಾದಾಗ ತನ್ನನ್ನು ತಾನು ನೋಡಿಕೊಳ್ಳಲು ಸಾಧ್ಯವಿಲ್ಲ ನಂತರದಲ್ಲಿ ನೀವು ಸಿದ್ದವಾಗಿದ್ದರೂ ಕೂಡ ಚಂಚಲತೆ ಇದ್ದರೆ ನಮ್ಮ ಮುಖ ನಮಗೆ ಕಾಣುವುದಿಲ್ಲ.
ನೀರು ಸ್ಥಿರವಾದಾಗ ಮಾತ್ರ ನಮ್ಮ ಮುಖ ನಮಗೆ ಕಾಣುತ್ತದೆ ಹಾಗೆ ನಮ್ಮ ಮನಸ್ಸು ಪರಿಶುದ್ಧವಾಗಬೇಕು ಆಧ್ಯಾತ್ಮ ಜ್ಞಾನ ಅರ್ಥಮಾಡಿಕೊಂಡು ಸಾಧನೆ ಮಾಡಬೇಕು ಎಂದು ಬಿಡಿಸಿ ಹೇಳಿದರು ಆಗ ರಾಜನಿಗೆ ಜ್ಞಾನೋದಯವಾಯಿತು. ನನ್ನನ್ನು ನಾನು ಎಷ್ಟು ಅರ್ಥಮಾಡಿಕೊಂಡಿದ್ದೇನೆ?
ತಿವಿಯಲು ಅಟ್ಟಿಸಿಕೊಂಡು ಬಂತು
ಒಂದು ಊರಿನಲ್ಲಿ ದುಡಿಯಣ್ಣ ಸೋಮಾರಿಯಣ್ಣ ಎಂಬುವರು ಇಬ್ಬರು ವಾಸ ಮಾಡಿಕೊಂಡಿರುತ್ತಾರೆ ದುಡಿಯಣ್ಣನಿಗೆ ಕುರಿಗಳು, ಮೇಕೆಗಳು, ಟಗರುಗಳು ಸಾಕಿರುತ್ತಾನೆ ಸೋಮಾರಿಯಣ್ಣ ಮೇಕೆಗಳು ಕುರಿಗಳು ಮಾತ್ರ ಸಾಕಿರುತ್ತಾನೆ ದುಡಿಯಣ್ಣ ಸಾಕಷ್ಟು ದುಡಿಯುತ್ತಾನೆ ಮತ್ತು ತನ್ನ ಕುರಿಗಳಿಗೆ ಮೇಕೆಗಳಿಗೆ ಟಗರಿಗೆ ಒಳ್ಳೆಯ ಹುಲ್ಲು ಆಹಾರ ಹಾಕುತ್ತಿದ್ದನು ಆದ್ದರಿಂದ ಅಭಿವೃದ್ಧಿಯಾಗುತ್ತಿದ್ದನು.
ಸೋಮಾರಿಯಣ್ಣ ಹೆಚ್ಚಾಗಿ ದುಡಿಯುತ್ತಿರಲಿಲ್ಲ ಕುರಿ ಮೇಕೆಗಳಿಗೆ ಸರಿಯಾದ ಆಹಾರವು ನೀಡುತ್ತಿರಲಿಲ್ಲ ಇದರಿಂದ ಸಾಮಾನ್ಯ ಸ್ಥಿತಿಯಲ್ಲಿ ಇದ್ದನು ಸೋಮಾರಿಯಣ್ಣನಿಗೆ ದುಡಿಯಣ್ಣನ ಮೇಲೆ ದ್ವೇಷ ಮತ್ಸರ ಉಂಟಾಯಿತು.
ಹೇಗಾದರೂ ಮಾಡಿ ದುಡಿಯಣ್ಣನಿಗೆ ನಷ್ಟ ಮಾಡಬೇಕೆಂಬ ದುರಲೋಚನೆ ಬಂತು ದುಡಿಯಣ್ಣಸಂತೆಗೆ ಹೋಗುವುದನ್ನೇ ಕಾಯುತ್ತಿದ್ದ ಹೋಗುತ್ತಿದ್ದಂತೆಯೇ ಮೇಕೆಗಳು ಟಗರನ್ನು ಬಿಚ್ಚಿ ಬಿಡುತ್ತಾನೆ ಸ್ವಲ್ಪ ಸಮಯದ ನಂತರ ದುಡಿಯಣ್ಣ ಬರುತ್ತಾನೆ ನೋಡಿದರೆ ಟಗರು ಮೇಕೆಗಳು ಇರುವುದಿಲ್ಲ ಗಾಬರಿಯಾಗುತ್ತಾನೆ ಎಲ್ಲಾ ಕಡೆ ಹುಡುಕುತ್ತಿರುತ್ತಾನೆ.
ಮೊದಲು ಟಗರು ಕುರಿಗಳು ನಾಪತ್ತೆಯಾಗಿರುತ್ತವೆ ತಕ್ಷಣ ಹುಡುಕಲು ಆಚೆ ಬಂದು ಎಲ್ಲಾ ಕಡೆ ಹುಡುಕುತ್ತಿರುತ್ತಾನೆ ಕೊನೆಗೆ ಒಂದು ಮರದ ಹತ್ತಿರ ಬಂದಾಗ ಅಲ್ಲಿ ಟಗರು ಮೇಕೆಗಳು ನಿಂತಿರುತ್ತವೆ ನಂತರ ಸೋಮಾರಿಯಣ್ಣ ಮರದ ಮೇಲಿಂದ ಹೇಳುತ್ತಾನೆ.
ಮೊದಲು ನಿನ್ನ ಟಗರು ಮೇಕೆಗಳನ್ನು ಹಿಡಿದುಕೊಂಡು ಹೋಗು ಎಂದು ಹೇಳುತ್ತಾನೆ ಆಗ ದುಡಿಯಣ್ಣನಿಗೆ ಅನುಮಾನ ಬರುತ್ತದೆ ಅದು ಸರಿ ನನ್ನ ಟಗರು ಮೇಕೆಗಳನ್ನು ಬಿಟ್ಟವರು ಯಾರು ಎಂದು ಕೇಳುತ್ತಾನೆ ಆಗ ಸೋಮಾರಿಯಣ್ಣ ನಾನೇ ನಿನ್ನ ಟಗರು ಮೇಕೆಗಳನ್ನು ಬಿಟ್ಟಿದ್ದು ಏಕೆಂದರೆ ಟಗರು ಮೇಕೆಗಳು ಓಡಿ ಹೋಗಬೇಕು.
ಅಕ್ಕ ಪಕ್ಕದಲ್ಲಿರುವ ಹೊಲಗದ್ದೆಗಳನ್ನು ನಾಶ ಮಾಡಲಿ ಎಂದು ನಾನೆ ಬಿಟ್ಟೆ ಆದರೆ ಈ ಟಗರು ನನ್ನನ್ನೇ ತಿವಿಯಲು ಅಟ್ಟಿಸಿಕೊಂಡು ಬಂತು ಹೇಗೋ ತಪ್ಪಿಸಿಕೊಂಡು ಮರದ ಮೇಲೆ ಕುಳಿತಿದ್ದೇನೆ ಪ್ರಾಣಿಗಳಿಗೆ ಇಷ್ಟೊಂದು ಬುದ್ಧಿ ಇದೆ ಎಂದು ತಿಳಿದಿರಲಿಲ್ಲ ಆಶ್ಚರ್ಯ ವ್ಯಕ್ತಪಡಿಸಿದನು.
ದುಡಿಯಣ್ಣ ನೀನು ಮಾಡಿದ್ದು ನಿನಗೆ ಮರಳಿ ಬರುತ್ತದೆ ಎಂದು ಹೇಳಿ ತನ್ನ ಟಗರು ಮೇಕೆಗಳನ್ನು ಹಿಡಿದುಕೊಂಡು ಮನೆಗೆ ಹೋದನು.
ಸ್ವರ್ಗದ ಮಣ್ಣು ತೆಗೆದುಕೊಂಡು ಬನ್ನಿ
ಒಂದು ಶಾಲೆಗೆ ಹೊಸದಾಗಿ ಶಿಕ್ಷಕರು ಬಂದರು ಅವರು ಮಕ್ಕಳಿಗೆ ಹೇಳಿದರು ನೀವು ನಾಳೆ ಬರಬೇಕಾದರೆ ಸ್ವರ್ಗದ ಮಣ್ಣು ತೆಗೆದುಕೊಂಡು ಬನ್ನಿ ಎಂದರು ಆಗ ಮಕ್ಕಳು ಮನೆಗೆ ಹೋಗಿ ಹೇಳಿದರು ಶಿಕ್ಷಕರು ಸ್ವರ್ಗದ ಮಣ್ಣು ತರಲಿಕ್ಕೆ ಹೇಳಿದ್ದಾರೆ ಎಂದಾಗ ಹಲವಾರು ಪೋಷಕರು ಗಲಿಬಿಲಿಯಾದರು ಕೆಲವರು ಶಿಕ್ಷಕರನ್ನು ಬೈದರು.
ಸ್ವರ್ಗ ಎಂದರೆ ಏನು ಎಂದು ಶಿಕ್ಷಕರಿಗೆ ಗೊತ್ತಿಲ್ಲ ಅದಕ್ಕಾಗಿ ಅವರು ಹೀಗೆ ಹೇಳಿದ್ದಾರೆ ಎಂದು ಹೇಳಿದರು ಇನ್ನು ಕೆಲವರು ಶಿಕ್ಷಕರಿಗೆ ಬುದ್ಧಿಭ್ರಮಣೆ ಆಗಿದೆ ಅದಕ್ಕೆ ಹೀಗೆ ಹೇಳಿದ್ದಾರೆ ಎಂದು ಉಡಾಫೆಯಿಂದ ಹೇಳಿದರು ಕೆಲವು ಮಕ್ಕಳು ಹಠ ಹಿಡಿದರು ನಾವು ಸ್ವರ್ಗದ ಮಣ್ಣು ತೆಗೆದುಕೊಂಡು ಹೋಗಲೇಬೇಕು ಇಲ್ಲದಿದ್ದರೆ ನೀವು ಜೊತೆಗೆ ಬನ್ನಿ ಎಂದು ಮಕ್ಕಳು ಬೇಡಿಕೊಂಡವು ಮಕ್ಕಳ ಮಾತಿಗೆ ಮಣಿದು ಪೋಷಕರು ನಾವು ಬರುತ್ತೇವೆ ಎಂದು ಒಪ್ಪಿಕೊಂಡರು.
ಕೆಲವು ಪೋಷಕರು ಶಿಕ್ಷಕರಿಗೆ ಸರಿಯಾಗಿ ಪಾಠ ಕಲಿಸೋಣ ಎಂದು ಶಾಲೆಗೆ ಬಂದರು ಶಿಕ್ಷಕರನ್ನು ಕರೆದು ಎಲ್ಲಾ ಮಕ್ಕಳ ಮುಂದೆ ಹೇಳಿದ ರು ನಿಮಗೆ ಬುದ್ಧಿ ಇದೆಯೇ ನೀವು ಸ್ವರ್ಗದ ಮಣ್ಣು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದೀರಲ್ಲ ಎಂದು ಬಯ್ಯ ತೊಡಗಿದರು. ಅಷ್ಟರಲ್ಲಿ ಒಬ್ಬ ಹುಡುಗ ನಾನು ಸ್ವರ್ಗದ ಮಣ್ಣು ತಂದಿದ್ದೇನೆ ಎಂದು ಹೇಳಿದನು ಇದನ್ನು ಕೇಳಿದ ಪೋಷಕರಿಗೆ ಮತ್ತಷ್ಟು ರೋಸಿ ಹೋಯಿತು ನೋಡಿದರೆ ಅದು ಸಾಧಾರಣ ಮಣ್ಣೇ ಆಗಿತ್ತು ಆಗ ಬಯ್ಯುತ್ತಿದ್ದ ಪೋಷಕರು ಕೇಳಿದರು ನಿನಗೂ ತಲೆ ಕೆಟ್ಟಿದೆಯೇ ಎಂದರು ಆಗ ಒಂದು ಮಗು ವಿನಯವಾಗಿ ಹೇಳಿತು.
ನನಗೆ ಗೊತ್ತಿರುವ ಹಾಗೆ ನನ್ನ ತಂದೆ ತಾಯಿಯೇ ಸ್ವರ್ಗ ನಮ್ಮ ತಂದೆ ತಾಯಿ ಇಬ್ಬರು ಹೊಂದಿಕೊಂಡು ಇರುತ್ತಾರೆ ತಂದೆ ತಾಯಿ ಓಡಾಡುವ ನೆಲದ ಮಣ್ಣನ್ನು ತಂದಿದ್ದೇನೆ ಎಂದು ಹೇಳುತ್ತಾನೆ.
ಇತರರಿಗೆ ಅರ್ಥವಾಗುತ್ತದೆ ಶಿಕ್ಷಕರು ಹೇಳುತ್ತಾರೆ ನಿಮ್ಮ ಮನೆಯಲ್ಲಿ ಎಷ್ಟು ಜನ ತಂದೆ ತಾಯಿ ಅನುಸರಿಸಿಕೊಂಡು ಹೋಗುತ್ತಿದ್ದೀರಿ ಎಂದಾಗ ಎಲ್ಲರೂ ಸುಮ್ಮನಾಗುತ್ತಾರೆ ನಂತರ ಬರಿ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ ಬರಬೇಕು ಅದಕ್ಕೆ ಹೀಗೆ ಮಾಡಿದೆ ಎಂದು ಶಿಕ್ಷಕರು ಹೇಳುತ್ತಾರೆ. ನಾನು ನನ್ನ ಮನೆಯಲ್ಲಿ ಇರುವವರನ್ನು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದೇನೆಯೇ?
ಅನ್ಯಾಯದ ಮಾರ್ಗದಲ್ಲಿ ನಡೆದಾಗ
ಒಂದು ಊರಿನಲ್ಲಿ ಒಬ್ಬ ಸಾಮಾನ್ಯ ಕಳ್ಳನಿದ್ದನು ಇವನು ಹೆಚ್ಚಾಗಿ ಕಳ್ಳತನ ಮಾಡುತ್ತಿರಲಿಲ್ಲ ತನ್ನ ಜೀವನಕ್ಕಾಗಿ ಎಷ್ಟು ಬೇಕೋ ಅಷ್ಟೇ ಕಳ್ಳತನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು ಹೀಗೆ ಹಲವಾರು ವರ್ಷಗಳು ಜೀವನ ಸಾಗಿಸಿದನು ನಂತರದಲ್ಲಿ ತನ್ನ ಹೆಂಡತಿ ಸತ್ತಳು ಆದರೆ ಕಳ್ಳನಿಗೆ ಪ್ರಿಯವಾಗಿದ್ದ ಒಂದೇ ಒಂದು ಮಗಳು ಮಾತ್ರ ಇದ್ದಳು.
ಆ ಹೆಣ್ಣು ಮಗುವನ್ನು ಚೆನ್ನಾಗಿ ಓದಿಸುತ್ತಿದ್ದನು ಮಗಳು ಬೆಳೆಯುತ್ತಿದ್ದಂತೆಯೇ ತನ್ನ ತಂದೆಯ ಕೆಲಸವನ್ನು ಕೇಳಿದಳು ನಂತರ ಅರ್ಥಮಾಡಿಕೊಂಡಳು ಕೊನೆಗೆ ಮಗಳು ಒಂದು ಸಾರಿ ಬುದ್ದಿ ಮಾತು ಹೇಳಿದಳು ಅಪ್ಪಾ ಇನ್ನು ಮುಂದೆ ಕಳ್ಳತನ ಮಾಡುವುದು ಬೇಡ ನಾನು ಬೇಕಾದರೆ ನಿನಗೆ ಸಹಾಯ ಮಾಡುತ್ತೇನೆ ನಾನು ನೀನು ಸೇರಿ ಏನಾದರೂ ವ್ಯಾಪಾರ ಮಾಡೋಣ ಎಂದು ಹೇಳಿದಳು.
ಕಳ್ಳನಾದವನನ್ನು ಕೂಡ ಯೋಚಿಸಿದನು ಇದು ಸರಿಯೇ ಇನ್ನು ಮುಂದೆ ಕಳ್ಳತನ ಮಾಡುವುದು ಬೇಡ ಎಂದು ಅರ್ಥ ಮಾಡಿಕೊಂಡನು ಆದರೆ ವಿಧಿ ಲಿಖಿತವೇ ಬೇರೆ ಇತ್ತು ಮಗಳಿಗೆ ಒಂದು ಕಾಯಿಲೆ ಬಂತು ಆ ಕಾಯಿಲೆಗೆ ಒಂದು ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ಆಸ್ಪತ್ರೆಯವರು ಹೇಳಿದರು.
ಕಳ್ಳನು ತುಂಬ ಚಿಂತಿತನಾದನು ಒಂದು ಸಾವಿರ ರೂಪಾಯಿ ಹೇಗೆ ಜೋಡಿಸುವುದು ಅದಕ್ಕೆ ಕಳ್ಳ ಚಿಂತೆ ಮಾಡಿದನು ನಂತರ ಒಂದು ನಿರ್ಧಾರಕ್ಕೆ ಬಂದನು ಈ ಒಂದು ಸಾರಿ ಕಳ್ಳತನ ಮಾಡಿ ನನ್ನ ಮಗಳನ್ನು ಉಳಿಸಿಕೊಂಡು ನಂತರ ನಾನು ಕಳ್ಳತನ ಮಾಡಬಾರದು ಎಂದು ಯೋಚಿಸಿದನು.
ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಮನೆ ಇತ್ತು ಆ ಮನೆಗೆ ಹೋಗಿ ಕಳ್ಳತನ ಮಾಡೋಣ ಎಂದು ಹೋದನು ಎಲ್ಲಾ ಕಳ್ಳತನ ಮಾಡಿದ ನಂತರ ಮನೆಯ ಮಾಲೀಕ ಓಡಿಸಿಕೊಂಡು ಬಂದನು ಇವನು ಓಡಿ ಬಂದನು.
ಓಡುವ ಭರದಲ್ಲಿ ಆ ಮಾಲೀಕ ಕೆಳಗೆ ಬಿದ್ದನು ಕಳ್ಳ ಹೇಗೋ ತಪ್ಪಿಸಿ ಓಡಿ ಬಂದು ನಂತರ ಹಣವೆಲ್ಲವೂ ತಂದು ಆಸ್ಪತ್ರೆಗೆ ಕಟ್ಟಿದನು. ಕಳ್ಳನು ಡಾಕ್ಟರ್ ಗೆ ಫೋನ್ ಮಾಡಿದರೆ ಡಾಕ್ಟರ್ ಬರಲಿಲ್ಲ ಇಲ್ಲಿ ಮಗುವಿಗೆ ನೋಡಿದರೆ ಆಯಾಸ ಹೆಚ್ಚಾಗುತ್ತಿದೆ ಹೇಗಾದರೂ ಮಾಡಿ ಆಪರೇಷನ್ ಮಾಡಲೇಬೇಕು ವೈದ್ಯರು ಬರಲಿಲ್ಲವಾದ್ದರಿಂದ ತನ್ನ ಮಗಳು ತೀರಿಹೋದಳು ಒಂದು ದಿನದ ನಂತರ ವೈದ್ಯರು ಬಂದರು.
ಆ ವೈದ್ಯರು ಯಾರು ಎಂದರೆ ಇವನು ಕಳ್ಳತನ ಮಾಡಿದನಲ್ಲ ಅವರೇ ವೈದ್ಯರು ಹುಡುಗಿಯ ತಂದೆಯನ್ನು ನೋಡಿ ವೈದ್ಯರು ಅರ್ಥಮಾಡಿಕೊಂಡರು ಆಗ ಕಳ್ಳನೆ ಹೋಗಿ ಅವರ ಕಾಲಿಗೆ ಬಿದ್ದು ನಾನು ಈ ರೀತಿ ಮಾಡಿದ್ದು ಮೋಸವೇ ನನಗೆ ಮೋಸವಾಗಿದೆ ನಿಮ್ಮ ದುಡ್ಡನ್ನು ನಾನು ಮರಳಿಸಿ ಬಿಡುತ್ತೇನೆ ಎಂದು ತಾನು ದೋಚಿದ ಎಲ್ಲವೂ ಮರಳಿ ಕೊಟ್ಟುಬಿಟ್ಟ.
ಆಗ ವೈದ್ಯರು ಹೇಳಿದರು ಒಂದು ಮಾತು ನೀನು ನನಗೆ ಹೇಳಿದ್ದಿದ್ದರೆ ನಾನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿದೆ ನಿನ್ನ ಭಾಗ್ಯ ನೀನೆ ಕಳೆದುಕೊಂಡು ಬಿಟ್ಟೆ ಎಂದು ಹೇಳಿದರು ಕೆಲವು ಸಾರಿ ಅನ್ಯಾಯದ ಮಾರ್ಗದಲ್ಲಿ ನಡೆದಾಗ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತೇವೆ. ತಕ್ಷಣಕ್ಕೆ ಗೊತ್ತಾಗದೆ ಇರಬಹುದು ಆದರೆ ನಂತರ ಅದರ ಶಿಕ್ಷೆಯಂತೂ ಹುಡುಕಿಕೊಂಡು ಬಂದೇ ಬರುತ್ತದೆ.
ಹೆಚ್ಚಾಗಿ ಖರೀದಿಸಿದರು
ಒಂದು ಹಳ್ಳಿಯಲ್ಲಿ ದೂರು ನೀಡುತ್ತಿದ್ದರು ಹಸುಗಳು ಚೆನ್ನಾಗಿ ಹುಲ್ಲು ಆಹಾರ ತಿನ್ನುತ್ತಿದ್ದೆ ಆದರೆ ಹಾಲು ಮಾತ್ರ ಕಡಿಮೆ ನೀಡುತ್ತಿದೆ ಎಂದರು ಆದ್ದರಿಂದ ಮುಖ್ಯ ಅಧಿಕಾರಿಗಳು ಒಂದು ಸಭೆಯನ್ನು ನಡೆಸಿದರು.
ಹಸುಗಳಿಗಾಗಿ ಬೇರೆ ಆಹಾರವನ್ನು ಸಿದ್ಧಪಡಿಸಬೇಕು ಎಂದು ಹೇಳಿ ಅದಕ್ಕೆ ಸಂಶೋಧನೆ ಮಾಡಿ ಬೇರೆ ರೀತಿಯ ಆಹಾರವನ್ನು ಸಿದ್ಧಪಡಿಸಿದರು ಅವು ಮಾತ್ರೆಯ ರೂಪದಲ್ಲಿ ಮಾಡಿದರು ನಂತರ ಈ ಮಾತ್ರೆಗಳನ್ನು ಹಸುವಿನ ಮಾಲೀಕರಿಗೆ ಮಾರಿದರು.
ಮೊದಲು ಹೆಚ್ಚು ಹೆಚ್ಚಾಗಿ ಖರೀದಿಸಿದರು ನಂತರ ಯಾರು ಖರೀದಿಸಲಿಲ್ಲ ಈ ಒಂದು ಸಂಶೋಧನೆಗಾಗಿ ಅತಿ ಹೆಚ್ಚು ಹಣವನ್ನು ಸುರಿದಿದ್ದರು ನಂತರ ಮತ್ತೆ ಕುಳಿತು ಸಭೆಯಲ್ಲಿ ಕೇಳಿದರು ಮಾರಾಟ ಏಕೆ ಆಗುತ್ತಿಲ್ಲ ಎಂದಾಗ ಸಂಶೋಧಕರು ಯಾರು ಏನು ಹೇಳಲಿಲ್ಲ ನಂತರ ಇನ್ನೊಂದು ಸಭೆಯನ್ನು ಏರ್ಪಡಿಸಿದರು.
ಹಸುವಿನ ಮಾಲೀಕರನ್ನು ಕರೆದರು ಹಸುವಿನ ಆಹಾರ ಏಕೆ ಇಷ್ಟವಾಗುತ್ತಿಲ್ಲ ಎಂದು ಕೇಳಿದಾಗ ಒಬ್ಬ ರೈತನು ಮಾತ್ರ ಹೇಳಿದನು ನೀವು ಮಾಡಿರುವ ಔಷಧವೂ ತುಂಬಾ ಚೆನ್ನಾಗಿದೆ ಆದರೆ ಅದು ಯಾವುದೇ ಕಾರಣಕ್ಕೂ ಹಸುಗಳು ಮಾತ್ರ ತಿನ್ನುತ್ತಿಲ್ಲ ಬಲವಂತದಿಂದ ತಿನ್ನಿಸಲು ಸಾಧ್ಯವಿಲ್ಲ ಆದ್ದರಿಂದ ಖರೀದಿಸುತ್ತಿಲ್ಲ ಖರೀದಿಸಿದರೆ ನಾವೇ ತಿನ್ನಬೇಕು ಎಂದನು.
ಇದು ಒಂದು ಘಟನೆ ಇರಬಹುದು ಆದರೆ ಹಲವಾರು ಯೋಜನೆಗಳನ್ನು ಮಾಡುತ್ತಾರೆ ಅದಕ್ಕಾಗಿ ಮಿತಿಮೀರಿ ಹಣವನ್ನು ಸುರಿಯುತ್ತಾರೆ ಆದರೆ ಯೋಜನೆಯು ಅವರಿಗೆ ಬೇಕೋ ಬೇಡವೋ ಎಂದು ಅರ್ಥಮಾಡಿಕೊಳ್ಳುವುದೇ ಇಲ್ಲ ಹಲವಾರು ಯೋಜನೆಗಳು ನೆಲ ಕಚ್ಚುತ್ತವೆ ಯಾರಿಗೆ ಮುಖ್ಯವಾಗಿ ಬೇಕಾಗಿರುತ್ತವೆ ಅವರಿಗೆ ತಲುಪುವುದೇ ಇಲ್ಲ. ಯಾವುದೇ ಯೋಜನೆ ರೂಪಿಸಿದರೆ ಎಲ್ಲರಿಗೂ ಉಪಯೋಗವಾಗುವ ಯೋಜನೆಯನ್ನು ರೂಪಿಸೋಣ. ನಾನು ಯಾವುದಾದರೂ ಎಲ್ಲರಿಗೂ ಉಪಯೋಗವಾಗುವಂತಹ ಯೋಜನೆ ರೂಪಿಸಿದ್ದೇನೆಯೇ?