ಸಿಕ್ಕೇ ಸಿಗುತ್ತದೆ

ಒಂದು ಊರಿನಲ್ಲಿ ಒಬ್ಬ ಅಮನ್ ವ್ಯಕ್ತಿ ಹಜರತ್ ಬಳಿ ಬಂದು ಕೇಳುತ್ತಾನೆ ಈಗೀಗ ನನಗೆ ತುಂಬಾ ಸಮಸ್ಯೆಗಳು ಕಷ್ಟಗಳು ದುಃಖಗಳು ಬರುತ್ತಿದೆ ನಾನು ತುಂಬಾ ಕಂಗಾಲಾಗಿ ಹೋಗಿದ್ದೇನೆ ದಾರಿ ಕಾಣದಂತಾಗಿದೆ ಬಹಳ ನೊಂದಿಕೊಂಡು ಹೇಳುತ್ತಾನೆ.

ಹಜರತ್ ಅವರು ಸಮಾಧಾನದಿಂದ ಹೇಳುತ್ತಾರೆ ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡಬಾರದು ಇತರರು ನಿನಗೆ ಎಷ್ಟೇ ಒಳ್ಳೆಯದನ್ನು ಮಾಡಲಿಕ್ಕೆ ಯೋಚಿಸಿದರೂ ಒಳ್ಳೆಯದು ಆಗುವುದಿಲ್ಲ ನಿನ್ನ ಹಣೆಬರಹದಲ್ಲಿ ಏನು ಇದೆಯೋ ಅದು ಮಾತ್ರ ಸಿಗುತ್ತದೆ.

 ಇತರರು ನಿಮ್ಮ ಕೇಡನ್ನು ಬಯಸಿದರೂ ಕೂಡ ಅದು ತಟ್ಟುವುದಿಲ್ಲ ಅಲ್ಲಾ ನಿನಗೆ ಎಷ್ಟು ಕೊಟ್ಟಿರುವವನು ಅಷ್ಟೆ ಸಿಗುತ್ತದೆ ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡದೆ ಪ್ರಾರ್ಥನೆ ಮಾಡು ಆದರೆ ನೀನು ಹಿಡಿದಿರುವ ಕೆಲಸವನ್ನು ಮಾಡುತ್ತಲೇ ಇರು ಹಾಗೂ ಏನೇ ಕೇಳಬೇಕಾದರು ಅಲ್ಲ ನ ಬಳಿ ಕೇಳು ಅದು ನಿನಗೆ ನಿಧಾನವಾಗಿಯಾದರೂ ಹಜರತ್ ರವರು ನಿನ್ನ ಋಣದಲ್ಲಿ ಇದ್ದರೆ ನಿನಗೆ ಸಿಕ್ಕೆ ಸಿಕ್ಕೇ ಸಿಗುತ್ತದೆ ಎಂದು ಹೇಳಿ ಕಳುಹಿಸಿದರು.

ಹಜರತ್ ಅವರ ಮಾತಿನ ಮೇಲೆ ವಿಶ್ವಾಸ ಬಂತು ಹಾಗೆ ಮಾರನೆಯ ದಿನ ಸಂಜೆ ಮನೆಗೆ ಬರುತ್ತಿರಬೇಕಾದರೆ ಊರಿನ ಆಚೆ ಒಂದು ಹಿತ್ತಾಳೆಯ ಬಿಂದಿಗೆಯಲ್ಲಿ ನೋಡುತ್ತಾನೆ ಬಿಂದಿಗೆಯಲ್ಲಿ ಚಿನ್ನದ ನಾಣ್ಯಗಳು ತುಂಬಿರುತ್ತದೆ ನಂತರ ಬಾಬಾ ಅವರ ಮಾತು ನೆನಪಿಗೆ ಬರುತ್ತದೆ.

ನನ್ನ ಋಣದಲ್ಲಿ ನಾಣ್ಯಗಳು ಸಿಗಬೇಕಾದರೆ ನನ್ನ ಮನೆಯಲ್ಲಿಯೇ ಸಿಗುತ್ತದೆ ಎಂದು ನೇರವಾಗಿ ಮನೆಗೆ ಬಂದು ಹೆಂಡತಿಗೆ ನಾನು ಮನೆಗೆ ಬರಬೇಕಾದರೆ ಊರಿನ ಆಚೆ ಒಂದು ಹಿತ್ತಾಳೆಯ ಬಿಂದಿಗೆಯಲ್ಲಿ ಚಿನ್ನದ ನಾಣ್ಯಗಳು ಇದ್ದವು ಅದನ್ನು ನೋಡಿ ನಾನು ನನ್ನ ಋಣದಲ್ಲಿ ಇದ್ದರೆ ನನಗೆ ಮನೆಯಲ್ಲಿಯೇ ಸಿಗುತ್ತದೆ ಎಂದು ಬಂದೆ ಎಂದು ಹೇಳಿದನು ಆಗ ಹೆಂಡತಿಯು ಎಂಥ ಮೂರ್ಖರು ನೀವು ನಮಗೆ ಸಿಕ್ಕಿದ್ದು ನಾವು ತೆಗೆದುಕೊಂಡು ಬರಬೇಕು ಎಂದು ಹೇಳಿದಳು.

 ಗಂಡ ನೋಡೋಣ ನಮ್ಮ ಋಣದಲ್ಲಿ ಇದ್ದರೆ ಬಂದೆ ಬರುತ್ತದೆ ಎಂದು ಹೇಳಿದನು ಈ ಮಾತನ್ನು ಪಕ್ಕದ ಮನೆಯವನು ಕೇಳಿಸಿಕೊಂಡು ನಂತರ ನಿಧಾನವಾಗಿ ಊರಿನ ಆಚೆ ಹೋಗಿ ನೋಡಿದರೆ ವ್ಯಕ್ತಿ ಹೇಳಿದಂತೆಯೇ ಒಂದು ಹಿತ್ತಾಳೆಯ ಬಿಂದಿಗೆ ಇದೆ ನಿಧಾನವಾಗಿ ಬಿಂದಿಗೆಯ ಒಳಗಡೆ ನೋಡಿದಾಗ ಚೇಳುಗಳು ಕಾಣಿಸುತ್ತವೆ.

 ಪಕ್ಕದ ಮನೆಯವನಿಗೆ ಕೋಪ ಬಂದು ನನಗೆ ಸಾಯಿಸಲು ಈ ರೀತಿಯ ಉಪಾಯ ಮಾಡಿದ್ದಾನೆ ಹಾಗಾಗಿ ಇವನೇ ಸಾಯಬೇಕು ಎಂದು ಹಿತ್ತಾಳೆಯ ಬಿಂದಿಗೆಯನ್ನು ತೆಗೆದುಕೊಂಡು ಬಂದು ಅರ್ಧರಾತ್ರಿಯ ಸಮಯದಲ್ಲಿ ಪಕ್ಕದ ಮನೆಯವನ ಮೇಲೆ ಹತ್ತಿ ನಾಲ್ಕು ಹಂಚುಗಳನ್ನು ತೆಗೆದು ನಿಧಾನವಾಗಿ ಹಿತ್ತಾಳೆಯ ಬಿಂದಿಗೆಯಲ್ಲಿ ಇದ್ದ ಎಲ್ಲಾ ಚೇಳುಗಳನ್ನು ಬೀಳಿಸಿದನು.

 ವ್ಯಕ್ತಿ ಎದ್ದು ನೋಡಿದರೆ ಮನೆಯಲ್ಲ ಚಿನ್ನದ ನಾಣ್ಯಗಳಿಂದ ತುಂಬಿದೆ ಆಗ ವ್ಯಕ್ತಿಗೆ ನಂಬಿಕೆಯಾಯಿತು ನನ್ನ ಋಣದಲ್ಲಿ ಇದ್ದರೆ ನನಗೆ ಸಿಕ್ಕೇ ಸಿಗುತ್ತದೆ ಎಂದು ನಂಬಿದನು ಇದನ್ನು ನಾವು ಕೂಡ ಪ್ರಾಯೋಗಿಕವಾಗಿ ನೋಡಬಹುದಾಗಿದೆ ಕೆಲವರು ಹೆಚ್ಚಾಗಿ ಓದಿರುವುದಿಲ್ಲ ಒಳ್ಳೆಯ ಹುದ್ದೆಯಲ್ಲಿ ಇರುತ್ತಾರೆ ಕೆಲವರು ಬಹಳಷ್ಟು ಓದಿರುತ್ತಾರೆ ಆದರೂ ಅವರು ಬೇರೆ ಚಿಕ್ಕ ಕೆಲಸದಲ್ಲಿ ಇರುತ್ತಾರೆ ಋಣ ಇದ್ದರೆ ಮಾತ್ರ ಸಿಗುತ್ತದೆ ನಮ್ಮ ಸಮಯ ಬರೆಯುವವರೆಗೂ ತಾಳ್ಮೆಯಿಂದ ಸಹಿಸಿಕೊಳ್ಳೋಣ.

ಬರಿ ಕೈ ಮಾತ್ರ ಕಾಣುತ್ತಿದೆ

ಒಬ್ಬ ಧಾರ್ಮಿಕ ಸಾರ್ಥಕ್ ಮನುಷ್ಯ ಹಲವಾರು ದಿನಗಳ ನಂತರ ಒಂದು ಭಾಷಣವನ್ನು ಕೇಳಿದನು ಅದರಲ್ಲಿ ಸ್ವರ್ಗ ನರಕದ ಬಗ್ಗೆ ಚೆನ್ನಾಗಿ ವಿವರಣೆ ನೀಡಿದರು ಇವನು ಈ ಭಾಷಣ ಕೇಳಿದ ನಂತರ ಮನೆಗೆ ಬಂದು ಮಲಗಿದನು ಧಾರ್ಮಿಕ ಮನುಷ್ಯನಿಗೆ ಒಂದು ಕನಸು ಬಿತ್ತು ಇವನು ಕೂಡ ಸತ್ತು ಹೋಗಿದ್ದಾನೆ.

 ಸ್ವರ್ಗದಲ್ಲಿ ಇದ್ದಾನೆ ಯಾರ್ಯಾರು ಏನೇನು ಕರ್ಮ ಮಾಡಿದ್ದರು ಅದರ ಫಲವಾಗಿ ಸ್ವರ್ಗ ನರಕವನ್ನು ಅನುಭವಿಸುತ್ತಿದ್ದಾರೆ ಹೀಗೆ ಮುಂದೆ ಹೋದಾಗ ಬರಿ ಕೈ ಮಾತ್ರ ಕಾಣುತ್ತಿತ್ತು ಇದೇನಿದು ಸ್ವರ್ಗದಲ್ಲಿ ಬರಿ ಕೈ ಮಾತ್ರ ಕಾಣುತ್ತಿದೆ ದೇಹ ಕಾಣುತ್ತಿಲ್ಲವಲ್ಲ ಎಂದು ಅಲ್ಲಿಯ ರಕ್ಷಕರಿಗೆ ಕೇಳಿದನು.

ಅಲ್ಲಿಯ ರಕ್ಷಕರು ಇವನು ಮಾಡಬಾರದ ಕೆಲಸಗಳನ್ನು ಮಾಡಿದ್ದಾನೆ ಆದರೆ ಇವನ ಜೀವನದಲ್ಲಿ ಒಂದೇ ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾನೆ ಒಂದು ನಾಯಿಯೂ ಬಾಯಾರಿಕೆಯಿಂದ ತುಂಬ ಒದ್ದಾಡುತ್ತಿತ್ತು ಆಗ ಇದನ್ನು ನೋಡಿದ ಕೈಯಿಂದ ಮಾತ್ರ ನಾಯಿಗೆ  ಮುಂದೆ ತಳ್ಳಿದ ಅದು ನೀರು ಕುಡಿದು ಬಾಯಾರಿಕೆ ನೀಗಿಸಿ ಗೊಂಡಿತು.

 ಆದುದರಿಂದ ಕೈ ಮಾತ್ರ ಸ್ವರ್ಗದಲ್ಲಿದೆ ಇತರ ಎಲ್ಲಾ ದೇಹವು ನರಕದಲ್ಲಿ ಶಿಕ್ಷೆ ಅನುಭವಿಸುತ್ತಿದೆ ಎಂದು ಹೇಳಿದನು ನಾವು ಒಳ್ಳೆಯದನ್ನು ಮಾಡಿದರೆ ಮಾತ್ರ ನಮಗೆ ಹಿಂತಿರುಗಿ ಬರುತ್ತದೆ ಎಂದು ಅರ್ಥಮಾಡಿಕೊಂಡನು ನಂತರ ಎಚ್ಚರವಾಯಿತು.

ಯಾರಿಗೂ ಗೊತ್ತಾಗುವುದಿಲ್ಲ

ಒಂದು ಊರಿನಲ್ಲಿ ಮುಲ್ಲಾ ಅವರ ಆಶ್ರಮದಲ್ಲಿ ಹಲವಾರು ಶಿಷ್ಯರು ಇರ್ತಾರೆ ಬಹಳ ವರ್ಷಗಳ ನಂತರ ಮುಲ್ಲಾರವರು ಹಜ್ ಯಾತ್ರೆಗೆ ಹೋಗಲು ನಿರ್ಧಾರ ಮಾಡುತ್ತಾರೆ ಈ ಸಂದೇಶವನ್ನು ಕೇಳಿ ಅವರ ಶಿಷ್ಯರು ಇವರಿಗಾಗಿ ಬಟ್ಟೆ, ಹಣ್ಣು ಅವರಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ತಂದು ಕೊಡುತ್ತಾರೆ.

 ಮುಲ್ಲಾರವರು ಇದು ಯಾವುದೂ ನನಗೆ ಬೇಡ ಎಂದು ನಗುತ್ತಾ ಹೇಳುತ್ತಾರೆ ಕೊನೆಗೆ ಒಬ್ಬ ಶಿಷ್ಯ ಮಾತ್ರ ಬಂದು ನಿಮ್ಮ ಮೇಲೆ ನನಗೆ ತುಂಬಾ ಅಭಿಮಾನವಿದೆ ನೀವು ಹಣವಾದರೂ ಇಡಲೇಬೇಕು ಎಂದು ಸಾವಿರ ನಾಣ್ಯಗಳನ್ನು ನೀಡಿದನು ಇದು ನೀವು ಇಟ್ಟುಕೊಂಡರೆ ನಿಮಗೆ ಅವಶ್ಯಕತೆ ಬಂದಾಗ ಮಾತ್ರ ಖರ್ಚುಮಾಡಿ ಮಿಕ್ಕಿದ ಹಣವನ್ನು ದಾನ ಧರ್ಮ ಮಾಡಿ ಎಂದು ಬೇಡಿಕೊಂಡನು.

 ಆಗ ಮುಲ್ಲಾರವರು ನೂರು ನಾಣ್ಯಗಳನ್ನು ತೆಗೆದುಕೊಂಡು ಇದು ಒಂದು ವಾರದ ವರೆಗೆ ಅಂದರೆ ನನಗೆ ಹೋಗಲಿಕ್ಕೆ ಸಾಕು ಎಂದು ಇಟ್ಟುಕೊಂಡರು ಇನ್ನೂ ಸ್ವಲ್ಪ ಮುಂದೆ ಹೋದಾಗ ಅಲ್ಲೇ ಒಬ್ಬ ಫಕೀರರು ಕುಳಿತಿದ್ದರು ಅವರ ಬಟ್ಟೆಯು ಹರುಕು ಮುರುಕು ಆಗಿತ್ತು ಕೇಶ ವಿನ್ಯಾಸವು ಚೆನ್ನಾಗಿ ಇರಲಿಲ್ಲ.

 ನೋಡಲಿಕ್ಕೆ ಒಬ್ಬ ಗೆಳೆಯನಂತೆ ಕಾಣುತ್ತಿದ್ದರು ಈ ಘಟನೆಯನ್ನು ನೋಡಿ ಮುಲ್ಲಾ ರವರಿಗೆ ಹೇಳಿದರು ನೀನು ಒಂದು ವಾರ ಬದುಕುತ್ತೀನಿ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದೀಯಾ ಎಂದಾಗ ಮುಲ್ಲಾ ಅವರಿಗೆ ಅರಿವಾಯಿತು.

  ಮುಲ್ಲಾ ಅವರಿಗೆ ವಂದನೆಗಳನ್ನು ತಿಳಿಸಿದರು ಯಾವ ಕ್ಷಣ ಏನು ಆಗುತ್ತದೋ ಯಾರಿಗೂ ತಿಳಿಯುವುದಿಲ್ಲ ನಂತರ ತೆಗೆದುಕೊಂಡಿದ್ದ ನಾಣ್ಯಗಳನ್ನು ಮತ್ತೆ ಹಿಂತಿರುಗಿಸಿದರು ಹಾಗೆ ಬರಿಗೈಯಲ್ಲಿ ಅಲ್ಲಾನ ಮೇಲೆ ನಂಬಿಕೆ ಇಟ್ಟು ಹೋದರು ಯಾವ ಕ್ಷಣದಲ್ಲಿ ಏನು ಆಗುತ್ತದೋ ಯಾರಿಗೂ ಗೊತ್ತಾಗುವುದಿಲ್ಲ ಇರುವ ಕ್ಷಣವನ್ನೇ ಆನಂದವಾಗಿ ಬದುಕೋಣ.

ನಾವೇ ಬಲಿಯಾಗಬಾರದು

ಹರ್ಜಿತ್ ಯುವಕ ಕಾಡಿನ ದಾರಿಯಲ್ಲಿ ಹೋಗುತ್ತಿರುತ್ತಾನೆ ಆಗ ಒಂದು ಬೆಕ್ಕು ಬಲೆಯಲ್ಲಿ ಸಿಲುಕಿಕೊಂಡಿರುತ್ತದೆ ನಿಧಾನವಾಗಿ ಒಂದು ಇಲಿ ಬರುತ್ತದೆ ಬೆಕ್ಕನ್ನು ನೋಡಿದ ತಕ್ಷಣ ಇಲಿ ಹೆದರಿ ಓಡಿ ಹೋಗುತ್ತಿರುತ್ತದೆ ಆಗ ಬೆಕ್ಕು ಇಲಿಗೆ ಅಂಗಲಾಚಿ ಬೇಡಿಕೊಳ್ಳುತ್ತದೆ.

 ನೀನು ನನ್ನನ್ನು ಬಿಡಿಸು ಇಲಿ ಮುಂದೆ ಬಂದು ಬಿಡುಗಡೆಯಾದ ಮೇಲೆ ನೀನೆ ನನ್ನನ್ನು ತಿಂದರೆ ಏನು ಮಾಡುವುದು ನನಗೆ ಹೆದರಿಕೆಯಾಗುತ್ತಿದೆ ಎಂದು ಇಲಿ ಹೇಳುತ್ತದೆ ಕಷ್ಟ ಕಾಲದಲ್ಲಿ ಯಾರೂ ನಮ್ಮನ್ನು ಸಹಾಯ ಮಾಡುತ್ತಾರೋ ಅವರನ್ನು ನಾವು ಮರೆಯಬಾರದು.

 ನಾನು ನಿನ್ನನ್ನು ತಿನ್ನಲಾರೆ ದಯವಿಟ್ಟು ನನ್ನನ್ನು ಬಲೆಯಿಂದ ಬಿಡುಗಡೆಗೊಳಿಸಬೇಕು ಎಂದು ಬೇಡಿಕೊಳ್ಳುತ್ತದೆ ಇಲಿಯೂ ಬಲೆಯನ್ನು ತನ್ನ ಹುಲ್ಲುಗಳಿಂದ ಕತ್ತರಿಸುತ್ತದೆ ನಂತರ ಬೆಕ್ಕು ಆಚೆ ಬಂದು ಮೊದಲಿನ ಬೇಟೆಯೇ ಇಲಿಯನ್ನು ಹಿಡಿದು ತಿನ್ನುತ್ತದೆ.

 ನಾನು ನಿನ್ನನ್ನು ಕಾಪಾಡಿದ್ದೀನಿ ಎಂದು ಹೇಳಿದರು ಕೇಳುವುದಿಲ್ಲಇದೇ ಪ್ರಕೃತಿ ನಿಯಮ ಎಂದು ಹೇಳುತ್ತದೆ ಇಲಿಯನ್ನು ತಿನ್ನುತ್ತದೆ ನಂತರ ನಿಧಾನವಾಗಿ ಬೆಕ್ಕು ಹೋಗುತ್ತಿರಬೇಕಾದರೆ ಒಂದು ನಾಯಿ ಬೇಲಿಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತದೆ ಆಗ ನಾಯಿಯೂ ಬೆಕ್ಕಿಗೆ ದಯವಿಟ್ಟು ನನ್ನನ್ನು ಉಳಿಸು ಎಂದು ಗೋಗರೆಯುತ್ತದೆ.

 ನೀನು ಬಿಡುಗಡೆಯಾದ ನಂತರ ನನ್ನನ್ನೇ ನೀನು ಬೇಟೆಯಾಡಿದರೆ ಏನು ಮಾಡುವುದು ನನಗೆ ಭಯವಾಗುತ್ತದೆ ಎಂದು ಬೆಕ್ಕು ಹೇಳುತ್ತದೆ ಸಹಾಯ ಮಾಡಿದವರನ್ನು ಯಾವತ್ತೂ ಮರೆಯಬಾರದು ಎಂದು ಹೇಳುತ್ತದೆ ಆಗ ನಂತರ ನಿಧಾನವಾಗಿ ಬೇಲಿಯನ್ನು ನಿಧಾನವಾಗಿ ಬಿಚ್ಚುತ್ತದೆ.

 ಆಗ ನಾಯಿಯೂ ಈಚೆ ಬಂದು ಬೆಕ್ಕಿನ ಕತ್ತು ಹಿಡಿಯುತ್ತದೆ ಆಗ ಬೆಕ್ಕು ಹೇಳುತ್ತದೆ ಏಕೆ ಹೀಗೆ ಮಾಡುತ್ತಿದ್ದೀಯಾ ಎಂದು ಬೆಕ್ಕು ಕೇಳುತ್ತದೆ ನನಗೆ ಹೊಟ್ಟೆ ಹಸಿದಿದೆ ನೀನೆ ನನಗೆ ಗತಿ ಇದೇ ಪ್ರಕೃತಿ ನಿಯಮ ಎಂದು ನಾಯಿ ಹೇಳುತ್ತದೆ.

 ನಾಯಿ ಮುಂದೆ ಹೋಗುತ್ತಿದ್ದಾಗ ಒಂದು ಚಿರತೆ ಅಳುತ್ತಿರುತ್ತದೆ ಚಿರತೆ ಏಕೆ ಅಳುತ್ತಿದೆ ಎಂದು ದೂರದಿಂದ ನಾಯಿ ನೋಡುತ್ತದೆ ಆಗ ವಿನಮ್ರವಾಗಿ ಚಿರತೆಯು ಹೇಳುತ್ತದೆ ಗೆಳೆಯ ನನ್ನ ಬಾಲ ಸಿಕ್ಕಿಹಾಕಿಕೊಂಡಿದೆ ನನಗೆ ಹಿಂದೆ ಕಾಣುವುದಿಲ್ಲ.

 ದಯವಿಟ್ಟು ನನ್ನನ್ನು ರಕ್ಷಣೆ ಮಾಡು ಎಂದು ಕೇಳುತ್ತದೆ ಚಿರತೆ ನಾನು ಎರಡೂ ದಿನದಿಂದ ಬೇಟೆ ಆಡಿಲ್ಲ ಸಹಾಯ ಮಾಡು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತದೆ ನಾಯಿಯು ಹಿಂದೆ ಹೋಗಿ ಬಾಲವನ್ನು ನಿಧಾನವಾಗಿ ಬಿಡಿಸುತ್ತದೆ ಬಿಡಿಸಿದ ತಕ್ಷಣ ನಾಯಿಯನ್ನೇ ಹಿಡಿದುಕೊಳ್ಳುತ್ತದೆ.

 ಗೆಳೆಯ ನನ್ನನ್ನು ಕ್ಷಮಿಸು ಈಗಾಗಲೇ ನಾನು ಆಯಾಸವಾಗಿದ್ದೇನೆ ನಡೆಯಲು ಆಗುತ್ತಿಲ್ಲ ನಿನ್ನನ್ನು ತಿಂದರೆ ಸ್ವಲ್ಪ ಶಕ್ತಿ ಬರುತ್ತದೆ ಎಂದು ಚಿರತೆ ಹೇಳುತ್ತದೆ ನಾಯಿ ನಾನು ನಿನಗೆ ಪ್ರಾಣ ಉಳಿಸಿದ್ದೇನೆ ಎಂದು ಹೇಳಿದಾಗ ಇದೇ ಪ್ರಕೃತಿ ನಿಯಮ ಎಂದು ಚಿರತೆ ಹೇಳುತ್ತದೆ.

 ಈ ಮೂರು ಘಟನೆಗಳನ್ನು ಯುವಕ ನೋಡಿ ಬರುತ್ತಿರುತ್ತಾನೆ ಇನ್ನೇನು ಊರಿಗೆ ಸೇರಬೇಕು ಆಗ ಒಂದು ಹುಲಿಯು ಬಲೆಯಲ್ಲಿ ಬಿದ್ದು ಒದ್ದಾಡುತ್ತಿರುತ್ತದೆ ಯುವಕನನ್ನು ಹೇಳುತ್ತದೆ ದಯವಿಟ್ಟು ನನ್ನನ್ನು ಬಿಡಿಸು ಆಗ ಯುವಕನು ಯೋಚನೆ ಮಾಡುತ್ತಾನೆ ನಂತರ ಮತ್ತೆ ಯೋಚನೆ ಮಾಡಿ ಅರಣ್ಯ ಇಲಾಖೆ ಅವರಿಗೆ ಹೇಳುತ್ತಾನೆ ಉಪಕಾರ ಮಾಡುವುದು ಒಳ್ಳೆಯ ಗುಣವೇ ಆದರೆ ಉಪಕಾರ ಮಾಡಲು ಹೋಗಿ ನಾವೇ ಬಲಿಯಾಗಬಾರದು ಎಂದು ಹುಲಿಗೆ ಹೇಳುತ್ತಾನೆ.

ಎಲ್ಲರು ಒಂದಾಗಿ ಸೇರಿಕೊಂಡರೆ

ಒಂದು ಊರಿನಲ್ಲಿ ಒಬ್ಬ ಕಲ್ಮಶ್ ಬುದ್ಧಿವಂತ ಪ್ರಾಮಾಣಿಕನಾದ ಮನುಷ್ಯ ನಿದ್ದನು ಅವನಿಗೆ 6 ಆರು ಜನ ಗಂಡು ಮಕ್ಕಳು ಮಕ್ಕಳಲ್ಲಿ ಹೊಂದಾಣಿಕೆ ಇರಲಿಲ್ಲ ಯಾರಿಗೆ ಯಾರು ಸಹಕರಿಸುತ್ತಿರಲಿಲ್ಲ ಯಾವಾಗಲೂ ಜಗಳವಾಡುತ್ತಿದ್ದರು ಅಣ್ಣ ತಮ್ಮಂದಿರಲ್ಲಿ ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಬೇಸರ ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆಗೆ ತುಂಬಾ ಬೇಸರವಾಯಿತು ಚಿಂತೆಯಲ್ಲಿ ಮುಳುಗಿದರು ತಂದೆಯವರಿಗೆ ಇದ್ದಕ್ಕಿದ್ದ ಹಾಗೆ ಒಂದು ಉಪಾಯ ಹೊಳೆಯಿತು.

ಎಲ್ಲಾ ಮಕ್ಕಳಿಗೂ ಒಂದೊಂದು ಕಡ್ಡಿಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದನು ಅದರಂತೆ ಮಕ್ಕಳು ಎಲ್ಲರೂ ಒಂದೊಂದು ಕಡ್ಡಿಯನ್ನು ತಂದರು ಆಗ ಎಲ್ಲಾ ಕಡ್ಡಿಗಳನ್ನು ಜೋಡಿಸಿ ಸೇರಿಸಿ ಕಟ್ಟಿದ ಕಡ್ಡಿಯ ಕಟ್ಟನ್ನು ಕೊಟ್ಟರು ಇದನ್ನು ಮುರಿಯಿರಿ ಎಂದು ಒಬ್ಬನಿಗೆ ಕೊಟ್ಟು ನಂತರ ಮತ್ತೊಬ್ಬನಿಗೆ ಹೀಗೆ ಎಲ್ಲಾ ಮಕ್ಕಳಿಗೂ ಕೊಟ್ಟರು ಎಲ್ಲಾ ಮಕ್ಕಳು ಪ್ರಯತ್ನಿಸಿದರು.

ಮಕ್ಕಳು ಎಲ್ಲಾ ಸೇರಿದ ಕಡ್ಡಿಗಳು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಗ ಮತ್ತೆ ಆ ಎಲ್ಲಾ ಕಡ್ಡಿಗಳನ್ನು ಬಿಚ್ಚಿ ಮತ್ತೆ ಒಂದೊಂದಾಗಿ ಬೇರ್ಪಡಿಸಿ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಕಡ್ಡಿಯನ್ನು ಕೊಟ್ಟರು ನಂತರ ಆ ಕಡ್ಡಿಯನ್ನು ಮುರಿಯಿರಿ ಎಂದಾಗ ಸುಲಭವಾಗಿ ಆ ಕಡ್ಡಿಯನ್ನು ಮುರಿದರು.

ತಂದೆಯವರು ಏನು ಅರ್ಥವಾಯಿತು ಎಂದು ಕೇಳಿದರು ಮಕ್ಕಳು ಗೊತ್ತಿಲ್ಲ ಎಂದಾಗ ನೋಡಿ ನೀವು ಕೂಡ ಎಲ್ಲರೂ ಸೇರಿದರೆ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಆದರೆ ನೀವು ಒಬ್ಬರೇ ಇದ್ದರೆ ನಿಮ್ಮನ್ನು ತುಂಬಾ ಬೇಗ ಸೋಲಿಸಬಹುದಾಗಿದೆ ಒಂಟಿಯಲ್ಲಿ ಬಲವು ಕಡಿಮೆ ಇರುತ್ತದೆ ಎಲ್ಲರು ಒಂದಾಗಿ ಸೇರಿಕೊಂಡರೆ ಬಲವು ಮತ್ತಷ್ಟು ಹೆಚ್ಚಾಗುತ್ತದೆ ಇದು ನಮ್ಮ ಜೀವನಕ್ಕೆ ಅತಿ ಮುಖ್ಯ ಪಾಠ ಎಂದು ಹೇಳುತ್ತಾರೆ ನಂತರ ಅವರ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ.

Leave a Comment