ಸರಿಯಾಗಿ ಕಾಲ ತೊಳದಿಲ್ಲ

ಒಂದು ಊರಿನಲ್ಲಿ 2 ಮಹಿಳೆಯರು ಬರುತ್ತಾರೆ ಮೊದಲ ಮಹಿಳೆ ದೂರನ್ನು ಹೇಳುತ್ತಾಳೆ ಇನ್ನೊಂದು ಮಹಿಳೆ ನನಗೆ ನೂರು ಬಂಗಾರದ ನಾಣ್ಯಗಳನ್ನು ಕೊಡಬೇಕು ಎಂದು ಆ ಮಹಿಳೆ ಹೇಳುತ್ತಾಳೆ.

 ನಾನು ಇವರಿಗೆ ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ ಆಗ ಮೊದಲನೇ ಮಹಿಳೆ ಹೇಳುತ್ತಾಳೆ ಈ ರೀತಿ ಆಗುತ್ತದೆ ಎಂದರೆ ನಾನು ಏನಾದರೂ ಬರೆಸಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ   ಇಬ್ಬರ ಮಾತುಗಳನ್ನು ಕೇಳಿದಾಗ ಯಾವ ಮಹಿಳೆ ಒಳ್ಳೆಯವಳು ಯಾರೂ ಮೋಸಗಾರಳು ಎಂದು ತಿಳಿಯುವುದು ಬಹಳ ಕಷ್ಟವಾಯಿತು.

 ಈ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ಎಂದು ರಾಜನು ಯೋಚಿಸಿದ ನಂತರ ರಾಜನು ಬಾಬಾ ಅವರನ್ನು ಕರೆಸಿದ ಬಾಬಾ ಅವರು ಇಬ್ಬರನ್ನು ಕೂಲಂಕುಷವಾಗಿ ಪರೀಕ್ಷಿಸಿ ನಾಳೆ ನಿಮಗೆ ನಿಮ್ಮ ನಾಣ್ಯಗಳು ಸಿಗುತ್ತದೆ ಹೇಳಿ ಕಳಿಸಿದರು ನಂತರ ನಾಲ್ಕು ಕಾವಲುಗಾರರನ್ನು ಕಳುಹಿಸಿ ಇವರು ಎಲ್ಲಿ ಹೋಗುತ್ತಾರೆ ನೋಡಿ ಎಂದು ಇಬ್ಬರು ಕೂಡ ಒಂದೇ ಹಳ್ಳಿಗೆ ಹೋದರು.

 ಇದನ್ನು ಗುರುತಿಸಿಕೊಂಡು ಬಂದರು ಬಾಬಾ ಅವರು ಹೇಳಿದರು ಇವರು ಬರುವ ದಾರಿಯಲ್ಲಿ ಕೆಸರು ಇರುವಂತೆ ಮಾಡಿ ನೀರು ಹಾಕಿ ನಂತರ ಹೆಂಗಸರು ಸಭೆಗೆ ಬರಬೇಕಾದರೆ ಕಾಲು ತೊಳೆದುಕೊಂಡೇ ಬರಬೇಕು ಈ ರೀತಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

 ಅದೇ ರೀತಿ ಇಬ್ಬರ ಕಾಲುಗಳು ಕೆಸರಾಯಿತು ಇಬ್ಬರೂ ಕೂಡ ನೀರಿನಿಂದ ಕಾಲು ತೊಳೆದುಕೊಂಡು ಬಂದರು ಬಾಬಾ ಅವರು ಗಮನಿಸಿ ಮೊದಲನೇ ಅವಳನನ್ನು ಕೇಳಿದರೂ ನೀನೇ ನೂರು ವರಹಗಳನ್ನು ಕೊಟ್ಟಿಲ್ಲ ಸರಿಯಾಗಿ ಹೇಳು ಇಲ್ಲದಿದ್ದರೆ ಜೈಲಿಗೆ ಕಳಿಸುತ್ತೇನೆಂದು ಹೇಳಿದಾಗ ಸತ್ಯವನ್ನು ಒಪ್ಪಿಕೊಂಡಳು.

 ಆಗ ರಾಜನಿಗೆ ಆಶ್ಚರ್ಯವಾಯಿತು ನೀವು ಹೇಗೆ ಇದನ್ನು ಕಂಡು ಹಿಡಿದಿದ್ದೀರಿ ಎಂದಾಗ ಬಾಬಾ ಅವರು ಹೇಳಿದರು ಮೊದಲನೆಯವಳು ಬರಬೇಕಾದರೆ ಕಾಲು ಕೆಸರಾಗಿತ್ತು ಅವಳು ಸರಿಯಾಗಿ ಕಾಲು ತೊಳೆದಿಲ್ಲ ಮತ್ತೆ ಇರೋ ಎಲ್ಲಾ ನೀರನ್ನು ಖರ್ಚುಮಾಡಿದ್ದಾಳೆ.

 ಎರಡನೆಯವಳು ಕಾಲು ಕೂಡ ಚೆನ್ನಾಗಿ ತೊಳೆದು ಕೊಂಡಿದ್ದಾಳೆ ನೀರನ್ನು ಕೂಡ ಸ್ವಲ್ಪವೇ ಖರ್ಚು ಮಾಡಿದ್ದಾಳೆ ಮೊದಲನೆಯವಳು ಅಂದಗಾತಿ ಮೋಸಗಾತಿ ಎರಡನೆಯವಳು ಅವಳು ಅವಳ ದುಡಿಮೆಯಲ್ಲಿ ಮಾತ್ರ ಬದುಕುವವಳು ಆದುದರಿಂದ ನಾನು ಹೀಗೆ ಕಂಡು ಹಿಡಿದೆನು ಎಂದು ಹೇಳಿದರು.

 ಆಗ ರಾಜನಿಗೆ ಸಂತೋಷವಾಗುತ್ತದೆ ಕೆಲವೊಂದು ಸಾರಿ ಕೆಲವು ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟ ನಿಧಾನವಾಗಿ ಕೂಲಂಕುಶವಾಗಿ ನೋಡಿದಾಗ ಆ ಸಮಸ್ಯೆ ಏನೆಂದು ಅರಿಯಬಹುದು.

ಗ್ರಾಹಕರಿಗೆ ಇಷ್ಟವಾಗುವಂತಹ

ಒಬ್ಬ ಯುವಕ ಬಾಬಾ ಅವರ ಆಶ್ರಮಕ್ಕೆ ಹೋಗಿ ಬಾಬಾ ಅವರಿಗೆ ಹೇಳಿದನು ಬಾಬಾ ಅವರೇ ನಾನು ಕೆಲಸ ಹುಡುಕುತ್ತಿದ್ದೇನೆ ನಿಮಗೆ ಗೊತ್ತಿರುವವರು ಯಾರಾದರೂ ಇದ್ದರೆ ಹೇಳಿ ನಾನು ಕೆಲಸ ಮಾಡುತ್ತೇನೆ ಎಂದಾಗ ಬಾಬಾ ಅವರು ಊರಿನ ಮಧ್ಯೆ ದೊಡ್ಡ ಅಂಗಡಿ ಇದೆಯಲ್ಲ ಅಲ್ಲಿ ಹೋಗಿ ಕೆಲಸ ಕೇಳು ನಿನಗೆ ಕೆಲಸ ಸಿಗುತ್ತದೆ ಎನ್ನುತ್ತಾರೆ ಆಗ ಯುವಕ ಹೇಳುತ್ತಾನೆ.

 ನಾನು ಹೋದ ವಾರದಲ್ಲಿ ನೋಡಿದ್ದೀನಿ ಅಲ್ಲಿ ಒಬ್ಬ ಒಳ್ಳೆಯ ಆಕರ್ಷಕ ವ್ಯಕ್ತಿತ್ವ ಇರುವ ಯುವಕ ಅಲ್ಲಿ ಕೆಲಸ ಮಾಡಿಕೊಂಡು ಇದ್ದಾನೆ ನೋಡುವುದಕ್ಕೆ ಚೆನ್ನಾಗಿದ್ದಾನೆ ಮಾತು ಕೂಡ ಚೆನ್ನಾಗಿ ಆಡುತ್ತಾನೆ ಅವನನ್ನು ತೆಗಿಯುತ್ತಾರೆಯೇ ಎಂದು ಹೇಳಿದನು ಆಗ ಬಾಬಾ ಅವರು ನೀನು ಹೇಳಿದ ಹಾಗೆ ಅವನು ತುಂಬಾ ಸುಂದರವಾಗಿದ್ದಾನೆ ಚೆನ್ನಾಗಿ ಮಾತನಾಡುತ್ತಾನೆ ಆದರೆ ಅವನು ಗ್ರಾಹಕರಿಗೆ ಇಷ್ಟವಾಗುವಂತಹ ವಸ್ತುಗಳನ್ನು ತರುತ್ತಿಲ್ಲ.

 ಅ ಯುವಕ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ   ತನ್ನ ಮಟ್ಟದಲ್ಲಿಯೇ ಆಲೋಚನೆ ಮಾಡುತ್ತಾನೆ ಗ್ರಾಹಕರ ಮಟ್ಟದಲ್ಲಿ ಆಲೋಚನೆ ಮಾಡುತ್ತಿಲ್ಲ ಇದರಿಂದಾಗಿ ಆ ಅಂಗಡಿಯೂ ಲಾಭದಲ್ಲಿ ನಡೆಯುತ್ತಿಲ್ಲ ನೀನು ಅಲ್ಲಿಗೆ ಹೋದ ಮೇಲೆ ಗ್ರಾಹಕರು ಇಷ್ಟಪಡುವಂತಹ ವಸ್ತುಗಳನ್ನು ಇಡಬೇಕು ಆಗ ವ್ಯಾಪಾರವು ಚೆನ್ನಾಗಿ ನಡೆಯುತ್ತದೆ ಎಂದು ಹೇಳುತ್ತಾರೆ.

 ಈ ಯುವಕನು ಹೋಗಿ ಗ್ರಾಹಕರಿಗೆ ಇಷ್ಟವಾಗುವಂತಹ ವಸ್ತುಗಳನ್ನೇ ತರುತ್ತಾನೆ ಹೆಚ್ಚಾಗಿ ಮಾರಾಟವಾಗುತ್ತದೆ ಲಾಭವು ಬರುತ್ತದೆ.

ಅದೇ ವಾಣಿ ಕೇಳಿಸಿತು

ಒಂದು ತುಂಬಾ ಹಳೆಯ ಊರು ಅದರಲ್ಲಿ ಮೂರು ಗುರುಗಳು ಇದ್ದರು ಒಬ್ಬೊಬ್ಬರು ಅವರದೇ ಆದ ಮಾರ್ಗವನ್ನು ಅನುಸರಿಸುತ್ತಿದ್ದರು. ಈ ಮೂರೂ ಗುರುಗಳಲ್ಲಿಯೂ ಕರುಣೆ ವಿದ್ಯೆ ಜ್ಞಾನ ಎಲ್ಲವೂ ಇತ್ತು ಆದರೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ದ್ವೇಷ ಹೀಗೆ ಬಹಳಷ್ಟು ಕಾಲ ಹೀಗೆ ಬದುಕಿದರು.

ಗುರುಗಳಿಂದ ಎಲ್ಲಾ ಜನರು ಸುಖ ಸಂತೋಷ ನೆಮ್ಮದಿ ಪಡುತ್ತಿದ್ದರು ಈ ಗುರುಗಳಿಗೆ ಎಲ್ಲರೂ ಸನ್ಮಾನಗಳನ್ನು ಮಾಡುತ್ತಿದ್ದರು ಇವರು ಯಾವುದೇ ಕಾರಣಕ್ಕೂ ಒಬ್ಬರು ಇನ್ನೊಬ್ಬರೊಂದಿಗೆ ಭೇಟಿಯಾಗಲೇ ಇಲ್ಲ ಹೀಗೆ ಕಾಲ ಕಳೆದಂತೆ ಗುರುಗಳಿಗೂ ತುಂಬಾ ವಯಸ್ಸಾಯಿತು.

 ಏನೋ ಕಾರಣದಿಂದ ಊರಿನ ಹೊರಗೆ ಬರಬೇಕಾದರೆ ಮಳೆ ಜೋರಾಗಿ ಬರುತಿತ್ತು ಆಗ ಒಬ್ಬ ಗುರುಗಳು ಬಂದು ಅಲ್ಲೇ ನಿಂತರು ನಂತರ ಇನ್ನೊಬ್ಬರು ನೋಡಿದಾಗ ಅವರು ಮಳೆಯಲ್ಲಿ ನೆನೆಯುತ್ತಾರಲ್ಲ ಎಂದು ಬರಮಾಡಿಕೊಂಡರು.

 ಸ್ವಲ್ಪ ಸಮಯದ ನಂತರ ಇನ್ನೊಬ್ಬರು ಗುರುಗಳು ಬಂದರು ಇಬ್ಬರೂ ಇನ್ನೊಬ್ಬರಿಗೆ ನೋಡಿದರು ಮಳೆಯಲ್ಲಿ ನೆನೆಯುತ್ತಾರೆ ಎಂದು ಇಬ್ಬರೂ ಆದರದಿಂದ ಬರಮಾಡಿಕೊಂಡರು ಇವರಿಬ್ಬರೂ ಕೂಡ ಇನ್ನೊಬ್ಬರಿಗೆ ಸ್ಥಳವನ್ನು ಮಾಡಿಕೊಟ್ಟರು.

 ಗುರುಗಳಲ್ಲಿ ದಯಾಗುಣ ಕರುಣೆ ಇದೆ ಆದರೆ ಮೂರು ಗುರುಗಳಿಗೂ ಗೊತ್ತಿಲ್ಲ ಪಕ್ಕದವನು ಯಾರು ಎಂದು ತಿಳಿಯಲಿಲ್ಲ  ಒಂದು ಸಾರಿ ಜೋರಾಗಿ ಸಿಡಿಲು ಬಡಿದಾಗ ಬೆಳಕು ಬಂತು ಆಗ ನೋಡಿದರೆ ಮೂವರು ಗುರುಗಳು ಒಂದೇ ಕಡೆ ಇದ್ದಾರೆ.

 ಇದು ಪ್ರಕೃತಿಯ ವಿಸ್ಮಯವಿರಬಹುದು ನಂತರ ಇನ್ನೊಂದು ಸಿಡಿಲು ಬಂದಾಗ ಇವರು ಯಾರನ್ನು ದೇವರು ಎಂದು ನಂಬಿದ್ದರು ಅದೇ ವಾಣಿ ಕೇಳಿಸಿತು ಸೂರ್ಯ ಒಂದೇ, ಚಂದ್ರ ಒಂದೇ, ಹಾಗೆ ಜಗತ್ತಿನಲ್ಲಿ ದೇವರು ಕೂಡ ಒಬ್ಬನೇ ಆದರೆ ನಾವು ಹಲವಾರು ಮಾರ್ಗಗಳಿಂದ ನೋಡುತ್ತೇವೆ ಅಷ್ಟೆ ಎಂದು ಕೇಳಿಸಿತು.

 ನಂತರ ಮೂವರು ಕೂಡ ಆಲಂಗಿಸಿಕೊಂಡರು ಸೂರ್ಯ ಚಂದ್ರ ಒಬ್ಬನೇ ಇರುವ ಹಾಗೆ ದೇವರು ಒಬ್ಬನೇ ಹೆಸರುಗಳು ಮಾತ್ರ ಬೇರೆ ಬೇರೆಯಾಗಿಯೇ ಇರುತ್ತವೆ ಎಂದು ಅರ್ಥಮಾಡಿಕೊಂಡರು.

 ನನ್ನ ಪ್ರಶಸ್ತಿಗೆ ಕಾರಣ

ಒಂದು ಕಂಪನಿಯಲ್ಲಿ ಇಬ್ಬರು ಯುವಕರು ಅಜಯ್ ವಿಜಯ್ ಎಂಬುವರು ಕೆಲಸಕ್ಕೆ ನಾಯಕರಾಗಿ ಸೇರುತ್ತಾರೆ ಇಬ್ಬರೂ ಕೂಡ ತುಂಬಾ ಚೆನ್ನಾಗಿ ಹಗಲು ರಾತ್ರಿ ಎನ್ನದೆ ಊಟ ತಿಂಡಿ ಮರೆತು  ಶ್ರಮಪಟ್ಟು ಕೆಲಸ ಮಾಡುತ್ತಾರೆ ಶ್ರಮ ಪಟ್ಟಿದ್ದರಿಂದ ಕಂಪನಿಗೆ ಹೆಚ್ಚು ಲಾಭ ಬರುತ್ತದೆ ಆಗ ಇಬ್ಬರನ್ನು ಕರೆದು ಪ್ರಶಸ್ತಿ ಪತ್ರ ನೀಡುತ್ತಾರೆ.

ನಾಯಕರಿಗೆ ಹೇಳುತ್ತಾರೆ ನೀವು ಯಾವ ರೀತಿ ಸಾಧನೆ ಮಾಡಿದ್ದೀರಿ ಎಂದು ಹೇಳಿ ಎಂದಾಗ ಅಜಯ್ ಎಂಬ ನಾಯಕನು ಹೇಳುತ್ತಾನೆ ನಾನು ಈ ಕಂಪನಿಗೆ ಬಂದು ಸೇರಿದಾಗ ಸೇಲ್ಸ್ ಮ್ಯಾನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ನಾನು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದೆ ಕಂಪನಿಯ ವ್ಯವಸ್ಥೆಯನ್ನು ನಾನು ಸರಿಪಡಿಸಿದೆ ಇದರಿಂದ ಹೆಚ್ಚು ವಸ್ತುಗಳು ವ್ಯಾಪಾರ ಆದವು ಪ್ರತಿಯೊಂದು ಹಂತದಲ್ಲಿಯೂ ನಾನು ಸರಿಪಡಿಸಿದೆ ನಾನು ನಾನು ಎಂದು ಹೇಳಿದನು.

 ನಂತರ ವಿಜಯ್ ಗೆ ಕರೆದರು ವಿಜಯ್ ಎದ್ದುನಿಂತು ನನಗೆ ಪ್ರಶಸ್ತಿ ಬಂದದ್ದಕ್ಕೆ ಕಾರಣ ನನ್ನ ತಂಡದವರು ದಯಮಾಡಿ ನನ್ನ ತಂಡದವರರು ಎಲ್ಲರೂ ನಿಲ್ಲಬೇಕು ಎಂದು ಹೇಳಿ ಎಲ್ಲರನ್ನೂ ನಿಲ್ಲಿಸಿ ಇಂದು ನಾನು ಈ ಪ್ರಶಸ್ತಿಗೆ ಕಾರಣ ನನ್ನ ತಂಡದವರು ಇವರು ಕಷ್ಟಪಟ್ಟಿದ್ದಕ್ಕೆ ನಾನು ಈ ಪ್ರಶಸ್ತಿ ಪಡೆದಿದ್ದೇನೆ.

 ಈ ಪ್ರಶಸ್ತಿ ಸೇರಬೇಕಾದದ್ದು ನನ್ನ ತಂಡದವರಿಗೆ ಎಂದು ಹೇಳುತ್ತಾನೆ ನಾನು ಒಬ್ಬನೇ ಕಾರಣವಾಗಲು ಸಾಧ್ಯವಿಲ್ಲ ನನ್ನ ನೆರವಿಗೆ ಬಹುತೇಕ ಜನರು ಬಂದಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದು ಹೇಳುತ್ತಾನೆ ಆಗ ವಿಜಯ್ ತಂಡದವರು ಎಲ್ಲರೂ ಸಂತೋಷ ಪಡುತ್ತಾರೆ.

 ಇನ್ನು ಹೆಚ್ಚಾಗಿ ಎಲ್ಲರೂ ಸೇರಿ ಕಷ್ಟಪಡುತ್ತಾರೆ ನಾವು ಇನ್ನೂ ಹೆಚ್ಚಾಗಿ ಬೆಳೆಯಬೇಕಾದರೆ ನಮ್ಮ ತಂಡದವರುೊಂದಿಗೆ ಸೇರಿ ಇನ್ನಷ್ಟು ಬೆಳೆಯಬಹುದು ಅವರಿಗೂ ಗೌರವಿಸಬೇಕು ಆಗ ಇನ್ನಷ್ಟು ಬೆಳೆಯಬಹುದಾಗಿದೆ. ಎಲ್ಲರಿಗೂ ನಾನು ಗೌರವಿಸುತ್ತೇನೆಯೇ?

ತನ್ನ ಯೋಚನೆಯನ್ನು ಬದಲಿಸಿದ

ಪರಿಶ್ರಮಿ ರೈತನು ಈರುಳ್ಳಿಯನ್ನು ಬೆಳೆಯುತ್ತಿದ್ದನು ಊರಿನಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದನು  ವ್ಯಾಪಾರಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದನು ಮಾರುಕಟ್ಟೆಗೆ ಯಾರು ಬೇಗ ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.

 ಈರುಳ್ಳಿಯಲ್ಲಿ ಒಂದು ಸಮಸ್ಯೆ ಏನು ಎಂದರೆ ಚಿಕ್ಕ ಈರುಳ್ಳಿಗಳನ್ನು ವಿಂಗಡಿಸಬೇಕು ಬೇರೆ ಮಾಡಬೇಕು ಮೀಡಿಯಂ ಆಗಿ ಇರುವಂತದ್ದು ಬೇರೆ ಮತ್ತೆ ದಪ್ಪವಾಗಿ ಇರುವುದನ್ನು ಬೇರೆಯೇ ಇಡಬೇಕು ಇದು ತುಂಬಾ ಕಷ್ಟದ ಕೆಲಸ ಏಕೆಂದರೆ ಸ್ವಲ್ಪವಾಗಿ ಇರುವುದಿಲ್ಲ ಟನ್ನುಗಟ್ಟಲೆ ಇರುತ್ತದೆ.

ಈರುಳ್ಳಿಗಳನ್ನು ವಿಂಗಡಿಸುವುದಕ್ಕೆ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಿರುತ್ತಾರೆ ಏನೇ ಆದರೂ ಈ ರೈತ ಎಲ್ಲರಿಗಿಂತ ಮೊದಲು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದ ಇದು ಹೇಗೆ ಸಾಧ್ಯವಾಯಿತು ಎಂದು ಬೇರೆ ರೈತರು ಗಮನಿಸುತ್ತಿದ್ದರು ಆದರೆ ಇವನು ವಿಂಗಡನೆ ಮಾಡುತ್ತಿರಲಿಲ್ಲ ಎಲ್ಲರೂ ವಿಂಗಡನೆ ಮಾಡುತ್ತಿದ್ದರು.

ಮಾರಬೇಕಾದರೆ ಮಾತ್ರ ರೈತನದು  ಈರುಳ್ಳಿ ವಿಂಗಡನೆ ಆಗಿ ಇರುತ್ತಿತ್ತು ಇದರ ಗುಟ್ಟು ಏನೆಂದು ಹಿಂಬಾಲಿಸಿ ನೋಡಿದಾಗ ರೈತನು ಎಲ್ಲಾಈರುಳ್ಳಿ ಲಾರಿಯಲ್ಲಿ ಹಾಕುತ್ತಿದ್ದಾಗ ಎಲ್ಲವೂ ಸೇರಿಸಿ ಹಾಕುತ್ತಿದ್ದ ಮಾರುಕಟ್ಟೆಗೆ ಬರುವವರೆಗೆ ಎಲ್ಲಾ ವಿಂಗಡಣೆಯಾಗಿ ಇರುತ್ತಿತ್ತು.

ಕೆಲವು ರಸ್ತೆಗಳು ಅಷ್ಟೊಂದು ಚೆನ್ನಾಗಿ ಇರುವುದಿಲ್ಲ ಆದುದರಿಂದ ಹೆಚ್ಚಾಗಿ ಹಂಪ್ ಹಳ್ಳಗಳು ಜಾಸ್ತಿ ಇರುತ್ತದೆ ಲಾರಿಯೂ ಜಂಪ್ ಆಗುತ್ತದೆ ಆಗ ಈರುಳ್ಳಿಗಳು ತಾವಾಗಿಯೇ ದೊಡ್ಡದು ಚಿಕ್ಕದು ಬೇರೆಬೇರೆಯಾಗುತ್ತದೆ ರೈತನು ಈರುಳ್ಳಿಯನ್ನು ಮೂಟೆಯಲ್ಲಿ ತುಂಬಿಸುತ್ತಿದ್ದನು

ಚಿಕ್ಕ ಈರುಳ್ಳಿಗಳೆಲ್ಲವೂ ಬೇಗ ಬೇಗ ಮೇಲಕ್ಕೆ ಬರುತ್ತಿದ್ದವು ದೊಡ್ಡ ದೊಡ್ಡ ಈರುಳ್ಳಿಗಳು ಹಾಗೆ ಮೂಲೆಯಲ್ಲಿ ಸೇರುತಿದವು ರೈತನಿಗೆ ಈರುಳ್ಳಿ ವಿಂಗಡಣೆಯ ಖರ್ಚು ಕೂಡ ಉಳಿಯುತ್ತಿತ್ತು ಹಾಗೆಯೇ ಸಮಯವು ಉಳಿಯುತ್ತಿತ್ತು.

 ರೈತನು ಮಾಡಿದ್ದು ಇಷ್ಟೇ ತನ್ನ ಯೋಚನೆಯನ್ನು ಬದಲಿಸಿದ ವಿಮರ್ಶಾತ್ಮಕವಾಗಿ ಚಿಂತಿಸಿದನು ಕೆಲವು ಕ್ಷೇತ್ರಗಳಲ್ಲಿ ಕೆಲವು ಸಮಸ್ಯೆಗಳು ಬಂದಾಗ ವಿಮರ್ಶಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳೋಣ. ನಾನು ಯೋಚನೆ ಬದಲಿಸಿ ನನ್ನ ಕಷ್ಟವಾಗಿರುವ ಕೆಲಸವನ್ನು ಸುಲಭ ಮಾಡಿಕೊಂಡಿದ್ದೇನೆಯೇ?

Leave a Comment