ಒಂದು ಊರಿನಲ್ಲಿ ಒಬ್ಬ ತಮೀಶ್ ಪ್ರತಿಭಾವಂತ ವ್ಯಕ್ತಿ ಇರುತ್ತಾನೆ ನನ್ನಲ್ಲಿ ತುಂಬಾ ಸಮಸ್ಯೆಗಳು ಇದೆ ದಿನ ನಿತ್ಯ ಪ್ರಾರ್ಥನೆ ಮಾಡುತ್ತಾನೆ ಭಗವಂತ ನನ್ನನ್ನು ನನ್ನ ಸಮಸ್ಯೆಗಳಿಂದ ಪಾರು ಮಾಡಿ ಎಂದು ಬೇಡಿಕೊಂಡು ಅಳುತ್ತಾ ಮಲಗಿದನು.
ಮಧ್ಯ ರಾತ್ರಿಯಲ್ಲಿ ಒಂದು ಕನಸು ಬಿತ್ತು ಕನಸಿನಲ್ಲಿ ಭಗವಂತನು ಪ್ರತ್ಯಕ್ಷನಾಗಿ ನಿನ್ನ ಸಮಸ್ಯೆಗಳು ತೊಂದರೆಗಳು ನನಗೆ ತಿಳಿದಿದೆ ಆದುದರಿಂದ ನಿನ್ನ ಎಲ್ಲಾ ಸಮಸ್ಯೆಗಳು ತೊಂದರೆಗಳನ್ನು ಒಂದು ಚೀಟಿಯಲ್ಲಿ ಬರೆದು ಒಂದು ಚೀಲದಲ್ಲಿ ಹಾಕಿ ನಾಳೆ ಸರಿಯಾಗಿ ಹನ್ನೆರಡು ಗಂಟೆಗೆ ಊರಿನ ಆಚೆ ಒಂದು ದೊಡ್ಡ ಮರವಿದೆ ಆ ಮರದ ಹತ್ತಿರ ಚೀಲವನ್ನು ತೆಗೆದುಕೊಂಡು ಬಾ ನಿನ್ನ ಸಮಸ್ಯೆ ತೊಂದರೆಗಳೆಲ್ಲವೂ ಪರಿಹಾರವಾಗುತ್ತದೆ ಎಂದು ಹೇಳಿ ಭಗವಂತ ಮಾಯವಾದರು.
ಈ ಮನುಷ್ಯನಿಗೆ ಎಲ್ಲಿಲ್ಲದ ಸಂತೋಷ ತಕ್ಷಣವೇ ಎದ್ದು ತನ್ನ ತೊಂದರೆಗಳು ಸಮಸ್ಯೆಗಳು ಎಲ್ಲವೂ ಪಟ್ಟಿ ಮಾಡಿದನು ಒಂದೊಂದು ಸಮಸ್ಯೆಯನ್ನು ಒಂದೊಂದು ಚೀಟಿಯಲ್ಲಿ ಬರೆದನು. ಒಂದು ಬಿಡದಂತೆ ಎಲ್ಲವೂ ಚೀಲದಲ್ಲಿ ಹಾಕಿಕೊಂಡು ಊರಿನ ಮರದ ಕಡೆಗೆ ಹೋಗುತ್ತಿದ್ದಾನೆ ಅದೇ ರೀತಿ ಊರಿನಲ್ಲಿ ಇರುವವರು ಕೂಡ ಒಂದೊಂದು ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಇವನಿಗೆ ಆಶ್ಚರ್ಯವಾಗುತ್ತದೆ.
ಎಲ್ಲರ ಕೈಯಲ್ಲಿ ಚೀಲಗಳು ಇರುತ್ತದೆ ಮರದ ಹತ್ತಿರ ಹೋಗಿ ಎಲ್ಲರೂ ತನ್ನ ಚೀಲಗಳನ್ನು ಇಡುತ್ತಾರೆ ಇವನು ಎಲ್ಲರನ್ನೂ ಗಮನಿಸಿದಾಗ ಊರಿನಲ್ಲಿ ಇರುವವರು ಎಲ್ಲರೂ ಬಡವ ಶ್ರೀಮಂತ ಭಿಕ್ಷುಕ ಸಾಮಾನ್ಯರು ಎಲ್ಲರೂ ಕೂಡ ತಮ್ಮ ಚೀಲಗಳನ್ನು ತೆಗೆದು ಕೊಂಡು ಬಂದು ಎಲ್ಲರೂ ಮರದ ಹತ್ತಿರ ಇಟ್ಟಿದ್ದಾರೆ.
ಎಲ್ಲರೂ ಭಗವಂತನ ಧ್ವನಿಗಾಗಿ ಕಾಯುತ್ತಿದ್ದಾರೆ ಸರಿಯಾಗಿ ಹನ್ನೆರಡು ಗಂಟೆ ಆಯ್ತು ನಂತರ ಒಂದು ಧ್ವನಿ ಬಂತು ನೀವು ಯಾವ ಚೀಲವನ್ನು ಬೇಕಾದರೂ ತೆಗೆದುಕೊಂಡು ಹೋಗಬಹುದು ಮತ್ತೆ 2ದಿನದ ನಂತರ ಆ ಚೀಲಗಳನ್ನು ಇಲ್ಲೇ ತರಬೇಕು ನಂತರ ಬೇಕಾದರೆ ಬದಲಾಯಿಸಿ ಕೊಳ್ಳಬಹುದು ಎಂದು ಶಬ್ದ ಬಂತು ಈ ಮನುಷ್ಯ ಇದ್ದವನು ಮೊದಲು ಶ್ರೀಮಂತನ ಚೀಲವನ್ನು ಎತ್ತಿಕೊಂಡು ಮನೆಗೆ ಬಂದನು.
ಹೋಗುತ್ತಿರಬೇಕಾದರೆ ತುಂಬ ಸಂತೋಷ ಏಕೆಂದರೆ ಇದು ಶ್ರೀಮಂತನ ಚೀಲ ಮನೆಗೆ ಬಂದು ಚೀಲವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಸಮಸ್ಯೆಗಳ ಸಾಗರವೇ ಇದೆ ಶ್ರೀಮಂತನ ಹೆಸರಿನಲ್ಲಿ ಕಂಪೆನಿ ಆಸ್ತಿ ಫ್ಯಾಕ್ಟರಿಗಳು ಇದೆ ಬಹಳಷ್ಟು ಮನೆಗಳು ಇದೆ ಇವನ ತೊಂದರೆ ಏನೂ ಇರಬಹುದು ಎಂದು ಓದಿದಾಗ ತಿಳಿಯಿತು.
ಮನೆ ಕಟ್ಟಿದ್ದಕ್ಕೆ ತೆಗೆದುಕೊಂಡಿದ್ದ ಸಾಲ ಬಾಕಿ ಇದೆ ಸ್ವಲ್ಪ ದಿನದಲ್ಲಿ ಮನೆ ಸಾಲ ಕಟ್ಟಲಿಲ್ಲ ಎಂದರೆ ಮನೆ ಹರಾಜಾಗುತ್ತದೆ ನಂತರ ಮನೆಯಲ್ಲಿ ಇರುವ ಕಾರು ಕೆಟ್ಟು ನಿಂತಿದೆ ತನ್ನ ಫ್ಯಾಕ್ಟರಿಗೆ ದಿನನಿತ್ಯ ನಡೆದುಕೊಂಡು ಹೋಗುತ್ತಿದ್ದಾನೆ ಕೆಲಸಗಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ವ್ಯಾಪಾರದಲ್ಲಿ ನಷ್ಟವಾಗಿದೆ.
ಮನೆಯಲ್ಲಿ ನೆಮ್ಮದಿಯೇ ಇಲ್ಲ ಹೆಂಡತಿಯ ಕಿರಿಕಿರಿ ಮಕ್ಕಳು ಬೆಳೆಯುತ್ತಿದ್ದಾರೆ ಅವರ ಆಗುಹೋಗುಗಳನ್ನು ನೋಡಬೇಕು ತಂದೆ ತಾಯಿಯರ ಆರೋಗ್ಯ ಸರಿ ಇಲ್ಲ ತಂದೆ ತಾಯಿಯನ್ನು ನೋಡುವುದು ಅಥವಾ ಮಕ್ಕಳ ಭವಿಷ್ಯವನ್ನು ನೋಡುವುದು ತಿಳಿಯಲಾಗುತ್ತಿಲ್ಲ ಬಿಸಿ ತುಪ್ಪ ನುಂಗಲೂ ಆಗದೆ ಉಗಿಯಲೂ ಆಗುತ್ತಿಲ್ಲ ಈ ಸ್ಥಿತಿಯಲ್ಲಿ ಇದ್ದಾನೆ ಇನ್ನು ಬಹಳಷ್ಟು ಸಮಸ್ಯೆಗಳು ಇತ್ತು.
ಸಮಸ್ಯೆಗಳು ಓದಿದ ವ್ಯಕ್ತಿಗೆ ನನಗಿಂತ ಶ್ರೀಮಂತನಿಗೆ ಹೆಚ್ಚು ಸಮಸ್ಯೆ ಇದೆಯೆಂದು ಅರಿತುಕೊಂಡನು ಎರಡು ದಿನ ಆದ ನಂತರ ತನ್ನ ಚೀಲವನ್ನು ಮರದ ಕೆಳಗೆ ಇಟ್ಟನು ಅದೇ ರೀತಿ ಊರಿನವರು ಕೂಡ ಅವರವರ ಚೀಲವನ್ನು ಇಟ್ಟರು ನಂತರ ಎಲ್ಲರೂ ಅವರ ಅವರ ಚೀಲವನ್ನು ತೆಗೆದುಕೊಂಡು ಮನೆಗೆ ಬಂದರು.
ಎಲ್ಲರೂ ಬೇರೆಯವರ ಸಮಸ್ಯೆಯನ್ನು ತಿಳಿದಾಗ ಎಲ್ಲರ ದುಃಖಗಳು ಕಡಿಮೆಯಾಯಿತು ಏಕೆಂದರೆ ಇವರು ಇವರ ಸಮಸ್ಯೆ ತೊಂದರೆಗಳೇ ಹಿಮಾಲಯ ಪರ್ವತದಂತೆ ಜಾಸ್ತಿ ಇದೆ ಎಂದು ಭಾವಿಸಿದ್ದರು ಆದರೆ ಇವರಿಗಿಂತ ಬೇರೆಯವರ ಸಮಸ್ಯೆಯನ್ನು ನೋಡಿದಾಗ ಇವರಿಗೆ ಅರ್ಥವಾಯಿತು.
ನಮಗಿಂತ ಹೆಚ್ಚು ಸಮಸ್ಯೆಗಳು ತೊಂದರೆಗಳು ಇದೆ ಎಂದು ಅರಿತರು ನಂತರ ಎಚ್ಚರವಾಯಿತು ಇದು ಕನಸು ಎಂದು ಅರ್ಥವಾಯಿತು ನಮ್ಮ ಸಮಸ್ಯೆಯೇ ದೊಡ್ಡದು ಎನಿಸುತ್ತದೆ ನಂತರ ನಾವು ಬೇರೆಯವರ ಸಮಸ್ಯೆಯನ್ನು ನೋಡಿದಾಗ ಮಾತ್ರ ನಮಗೆ ಅರಿವಾಗುತ್ತದೆ.
ಕೊಂಬೆ ಕೆಳಗೆ ಬಿದ್ದಿತು
ಒಂದು ಕಾಡಿನಲ್ಲಿ ಹಲವಾರು ಪಕ್ಷಿಗಳು ವಾಸಮಾಡಿಕೊಂಡಿದ್ದವು ಪಕ್ಷಿಗಳಲ್ಲಿ ಒಂದು ಗಿಡುಗ ಹಕ್ಕಿಯು ರಾಜನಾಗಿತ್ತು ಆದರೆ ಈ ಗಿಡುಗ ಹಕ್ಕಿಯು ಆಗಾಗ ತೊಂದರೆ ಕೊಡುತ್ತಿತ್ತು ನಾನೇ ಬಲಶಾಲಿ ಎಂದು ಹಿಗ್ಗುತ್ತಿತ್ತು ಆದರೆ ಇದಕ್ಕೆ ಧೈರ್ಯವಾಗಿ ಎದುರಿಸುವುದು ಕಷ್ಟ ಎಂದು ಚಿಕ್ಕ ಚಿಕ್ಕ ಪಕ್ಷಿಗಳು ಹೆದರುತ್ತಿದ್ದವು.
ಒಂದು ಸಾರಿ ಎಲ್ಲಾ ಪಕ್ಷಿಗಳು ಸೇರಿ ಹೇಗಾದರೂ ಮಾಡಿ ಬೇರೆ ಪಕ್ಷಿಯನ್ನು ನಾವು ರಾಜನಾಗಿ ಮಾಡಬೇಕು ಎಂದು ಎಲ್ಲಾ ಪಕ್ಷಿಗಳು ಚಿಂತನೆ ಮಾಡಿದವು ನಂತರ ಎಲ್ಲಾ ಪಕ್ಷಿಗಳು ಸೇರಿ ಕೋಗಿಲೆ ಪಕ್ಷಿಗೆ ರಾಜನಾಗಿ ಮಾಡೋಣ ಆದರೆ ಇದಕ್ಕಾಗಿ ಒಂದು ಪಂದ್ಯವನ್ನು ರಚಿಸಬೇಕು ಎಂದು ಗಿಳಿ ಹೇಳಿತು.
ಒಂದು ಕೊಂಬೆಯನ್ನು ಮುರಿಯುವುದು ಈ ಮಾತನ್ನು ಎಲ್ಲಾ ಪಕ್ಷಿಗಳು ಸೇರಿ ಗಿಡುಗ ಹಕ್ಕಿಗೆ ಹೇಳಿ ಕಳುಹಿಸಿದವು ಆಗ ಗಿಡುಗ ಹಕ್ಕಿಯು ಗಹಗಹಿಸಿ ನಕ್ಕು ಇಷ್ಟು ಚಿಕ್ಕ ಕೆಲಸ ನನಗೆ ಮಾಡುವುದಕ್ಕೆ ಆಗುವುದಿಲ್ಲವೇ ಎಂದು ದುರಹಂಕಾರದಿಂದ ಹೇಳಿತ್ತು.
ಕೊಂಬೆಯನ್ನು ಮುರಿಯದೆ ಹೋದರೆ ರಾಜನ ಸ್ಥಾನವನ್ನು ಕಳೆದುಕೊಳ್ಳುವಿರಿ ಎಂದಾಗ ನಾನೇ ರಾಜನಾಗುವುದು ನಡೀರಿ ನಾನು ಪಂದ್ಯಕ್ಕೆ ಬರುತ್ತೇನೆ ಎಂದು ಪಂದ್ಯಕ್ಕೆ ಬರುತ್ತದೆ ಈ ಕೊಂಬೆಯನ್ನು ಮುರಿಯಬೇಕು ಎಂದು ಹೇಳಿದಾಗ ಗಿಡುಗ ಸಾಕಷ್ಟು ಸಾರಿ ಪ್ರಯತ್ನ ಪಡುತ್ತದೆ ಆದರೆ ಸ್ವಲ್ಪವೂ ಕೊಂಬೆ ಮುರಿಯುವುದಿಲ್ಲ.
ಗಿಡುಗ ಹಕ್ಕಿಗೆ ತನ್ನ ಅಹಂಕಾರ ಕಡಿಮೆಯಾಗುತ್ತದೆ ನಂತರ ಕೋಗಿಲೆ ಮರದ ಮೇಲೆ ಕುಳಿತು ಒಂದೇ ಸಾರಿ ಕೊಕ್ಕಿನಿಂದ ಕುಕ್ಕಿತು ಕೊಂಬೆ ಕೆಳಗೆ ಬಿದ್ದಿತು ಇದನ್ನು ನೋಡಿದ ಗಿಡುಗ ಹಕ್ಕಿಗೆ ಅಹಂಕಾರವೆಲ್ಲವೂ ಇಳಿಯಿತು.
ಇದು ಮುರಿದಿದ್ದು ಹೇಗೆ ಎಂದರೆ ಮೊದಲೇ ಮರಕುಟಿಗ ಕೊಂಬೆಯನ್ನು ಕುಕ್ಕಿ ಕುಕ್ಕಿ ಬೀಳುವಂತೆ ಮಾಡಿತು ಕೋಗಿಲೆ ಯಾವಾಗ ಹೋಗಿ ಕುಕ್ಕಿತೋ ಆಗ ಕೊಂಬೆ ಬಿದ್ದಿತು ನಂತರ ಕೋಗಿಲೆಗೆ ರಾಜನಾಗಿ ಮಾಡಿದವು ಕೆಲವು ಸಾರಿ ಒಬ್ಬರೇ ಕೆಲಸ ಮಾಡಲಿಕ್ಕೆ ಆಗುವುದಿಲ್ಲ ಇತರರ ಸಹಾಯ ಪಡೆಯುವುದು ಒಳ್ಳೆಯದು.
ಅನಾಹುತ ಮಾಡಿಕೊಂಡಿದ್ದಾರೆ
ಒಂದು ಊರಿನಲ್ಲಿ ಕೆಲವು ಜೂಜುಗಾರರು ಇರುತ್ತಾರೆ ಎಲ್ಲೆಲ್ಲಿ ಜೂಜು ನಡೆಯುತ್ತದೆ ಅಲ್ಲಿ ಹೋಗಿ ಜೂಜಾಡುವುದು ಹಳ್ಳಿಗೆ ಒಬ್ಬರು ಇಬ್ಬರು ಪ್ರಸಿದ್ಧ ಜೂಜುಗಾರರು ಇರುತ್ತಾರೆ ಪ್ರಸಿದ್ಧ ಜೂಜುಗಾರರು ಎಲ್ಲೇ ಹೋದರು ಗೆಲ್ಲುತ್ತಿರುತ್ತಾರೆ.
ಒಂದು ಸಾರಿ ದೊಡ್ಡ ಜಾತ್ರೆ ಅಲ್ಲಿ ಹಳ್ಳಿಯಿಂದ ಊರಿನಿಂದ ಎಲ್ಲಾ ಜೂಜುಗಾರರು ಜೂಜಾಡುವುದಕ್ಕೆ ಬರುತ್ತಾರೆ ಸಾಮಾನ್ಯ ಜೂಜುಗಾರರು ಸೋಲುತ್ತಾರೆ ಪ್ರಸಿದ್ಧಿ ಪಡೆದ ಜೂಜುಗಾರರು ಗೆಲ್ಲುತ್ತಾರೆ ನಂತರ ಗೆದ್ದ ಎಲ್ಲಾ ಪ್ರಸಿದ್ಧ ಜೂಜುಗಾರರು ಸೇರಿ ಒಂದು ಸಭೆ ಏರ್ಪಾಟು ಮಾಡಿ ಪ್ರಸಿದ್ಧ ಜುಜುಗಾರರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಸಭೆಯಲ್ಲಿ ಸೇರಿದ ಜುಜುಗಾರರು ಪ್ರತಿಸಾರಿಯು ನಾನೇ ಗೆದ್ದಿದ್ದೇನೆ ಸೋತಿರುವುದು ತುಂಬಾ ಕಡಿಮೆ ಎಂದು ಹೇಳುತ್ತಾರೆ ನಂತರ ಜೂಜುಗಾರರು ಮಾತನಾಡಿಕೊಳ್ಳುತ್ತಾರೆ ನಾವೆಲ್ಲರೂ ಒಂದೇ ಕಡೆ ಜೂಜಿಗೆ ಹೋಗುವುದು ಬೇಡ ನೀವು ಹೋದರೆ ನಾನು ಹೋಗುವುದಿಲ್ಲ ನಾವು ಹೋದರೆ ನೀವು ಹೋಗಬೇಕಾಗಿಲ್ಲ ಎಂದು ಒಪ್ಪಂದ ಮಾಡಿಕೊಳ್ಳುತ್ತಾರೆ.
ಅಕ್ಕ ಪಕ್ಕದಲ್ಲಿ ಜೂಜು ನಡೆಯುತ್ತಿದ್ದರೆ ಒಬ್ಬರು ಹೋದರೆ ಇನ್ನೊಬ್ಬರು ಹೋಗುತ್ತಿರಲಿಲ್ಲ ನಂತರ ಅಂತರರಾಷ್ಟ್ರೀಯ ಮಟ್ಟದ ಜೂಜು ಏರ್ಪಾಡು ಆಗಿರುತ್ತದೆ ಆಗ ಎಲ್ಲಾ ಪ್ರಸಿದ್ಧ ಜೂಜುಗಾರರು ಸೇರಿ ನಾವೆಲ್ಲರೂ ಹೋಗಿ ಜೂಜಾಡೋಣ ಎಂದು ಮೂರು ದಿನದ ಜೂಜಾಟ ನಡೆಯುತ್ತದೆ.
ಮೊದಲನೆ ದಿನ ಎರಡನೆಯ ದಿನ ಚೆನ್ನಾಗಿ ಗೆಲ್ಲುತ್ತಾರೆ ಮೂರನೆಯ ದಿನವೇ ಅಂತಿಮ ದಿನ ಎಲ್ಲಾ ಪ್ರಸಿದ್ಧ ಜೂಜುಗಾರರು ಈ ಸಾರಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಹೇಳುತ್ತಾರೆ ಅದರಲ್ಲಿ ಇಬ್ಬರು ಜೂಜುಗಾರರು ಮಾತ್ರ ಇಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಾರೆ.
ಇಲ್ಲಿಯವರೆಗೂ ನಾವು ಗೆಲ್ಲುತ್ತಲೇ ಬಂದಿದ್ದೇವೆ ನಾಳೆಯ ಜೂಜು ಅಂತಿಮ ನಾಳೆ ನಾವು ನಮ್ಮ ಹತ್ತಿರ ಇರುವ ಅರ್ಧಹಣಕ್ಕೆ ಮಾತ್ರ ಜೂಜಾಡೋಣ ಬಂದರೆ ಬರಲಿ ಇಲ್ಲದಿದ್ದರೆ ಮನೆಗೆ ಮರಳಿ ಹೋಗೋಣ ಎಂದಾಗ ಅದಕ್ಕೆ ಇನ್ನೊಬ್ಬನು ಹೌದು ನೀವು ಹೇಳುತ್ತಿರುವುದು ಸರಿಯೇ ಪೂರ್ತಿ ಸೋತರೆ ನಾವು ಮರಳಿ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ.
ಜುವ ಕಿಸಿಕ ನಾ ಹೂವ (ಜೂಜಾಟ ಯಾರಿಗೂ ಆಗಿ ಬಂದಿಲ್ಲ) ಅದಕ್ಕೆ ಇನ್ನೊಬ್ಬ ಜೋಶ್ಮೆ ಆಕರ್ ಹೋಶ್ ಗವಾನ ನಹಿ (ಹುಮ್ಮಸ್ಸಿನಲ್ಲಿ ಪ್ರಜ್ಞೆ ಕಳೆದುಕೊಳ್ಳಬಾರದು) ಇಬ್ಬರು ಅರ್ಥಮಾಡಿಕೊಂಡರು ಇವರು ತಂದಿದ್ದ ಅರ್ಧ ಹಣದಲ್ಲಿ ಜೂಜಾಡುತ್ತಾರೆ ಇಬ್ಬರು ಸೋಲುತ್ತಾರೆ ಬೇಸರ ಮಾಡಿಕೊಳ್ಳದೆ ನಂತರ ಇಬ್ಬರೂ ನೇರವಾಗಿ ಹೋಟೆಲಿಗೆ ಬಂದು ನಾಳೆ ಊರಿಗೆ ಹೋಗೋಣ ಎಂದು ವಿಶ್ರಾಂತಿ ಪಡೆಯುತ್ತಾರೆ.
ಇವರ ಜೊತೆ ಬಂದ ಜುಜುಗಾರರು ಎಲ್ಲರೂ ಸೋಲುತ್ತಾರೆ ಪಾಪರಾಗುತ್ತಾರೆ ಸೋತ ಜುಜುಗಾರಲ್ಲಿ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಇನ್ನೊಬ್ಬ ಹೆಚ್ಚಾಗಿ ಕುಡಿದು ದಾರಿಯಲ್ಲಿ ಹೋಗುತ್ತಾ ಆಕ್ಸಿಡೆಂಟ್ ಆಗಿ ಸಾಯುತ್ತಾನೆ ಇನ್ನೊಬ್ಬ ಕುಡಿದು ಗಲಾಟೆ ಮಾಡಿ ಜೈಲಿಗೆ ಹೋಗುತ್ತಾನೆ.
ಇನ್ನೊಬ್ಬ ಜೂಜುಗಾರನಿಗೆ ಬುದ್ಧಿ ಭ್ರಮಣೆಯಾಗುತ್ತದೆ ಸೋತಿರುವವರು ವಿಚಿತ್ರವಾಗಿ ಅನಾಹುತ ಮಾಡಿಕೊಂಡಿರುತ್ತಾರೆ. ನಂತರ ರೇಡಿಯೋದಲ್ಲಿ ಸುದ್ದಿ ಪ್ರಸಾರವಾಗುತ್ತದೆ ಜೂಜಾಡಲು ಬಂದ ಜೂಜುಗಾರರು ಜೂಜಿನಲ್ಲಿ ಸೋತಿದ್ದರಿಂದ ಅನಾಹುತ ಮಾಡಿಕೊಂಡಿದ್ದಾರೆ ಈ ಸುದ್ದಿ ಕೇಳಿದ ಇಬ್ಬರ ಮನೆಯವರು ಅಳುತ್ತಿರುತ್ತಾರೆ ಹಾಗೂ ಪ್ರಾರ್ಥನೆ ಮಾಡುತ್ತಾರೆ.
ಇಬ್ಬರು ಮನೆಗೆ ಹೋಗುತ್ತಾರೆ ಹೆಂಡತಿ ಮಕ್ಕಳು ನೋಡಿ ತುಂಬಾ ಸಂತೋಷ ಪಡುತ್ತಾರೆ ಆಗ ಹೆಂಡತಿ ಕೇಳುತ್ತಾಳೆ ನಾವು ಸುದ್ದಿಯನ್ನು ಕೇಳಿದ್ದೇವೆ ಎಂದಾಗ ಗಂಡ ಅದು ಸತ್ಯವೇ ಬದುಕು ಹಾವು ಏಣಿ ಆಟ ಇದ್ದಂತೆ ಹಾಗೆಯೇ ಎಲ್ಲರು ಗೆದ್ದೆ ಗೆಲ್ಲುತ್ತಾರೆ ಎಂದು ಭರವಸೆ ಇಟ್ಟಿದ್ದರು.
ನನಗೆ ಮಾತ್ರ ಸೋಲಬಹುದು ಎನ್ನುವ ಸಂದೇಹವಿತ್ತು ಹಾಗೆಯೇ ನನಗೆ ಸೋಲಾಯಿತು ನಾನು ಅರ್ಧ ಹಣವನ್ನು ಮಾತ್ರ ಕಳೆದುಕೊಂಡಿದ್ದೇನೆ ಇನ್ನು ಮುಂದೆ ನಾನು ಒಂದು ವ್ಯಾಪಾರವನ್ನು ಮಾಡಿ ನೆಮ್ಮದಿಯಾಗಿ ಬದುಕುತ್ತೇನೆ ನಮಗೆ ಪ್ರೀತಿಸುವವರನ್ನು ನಾವು ಪ್ರೀತಿಸಬೇಕು ನಮ್ಮನ್ನು ಇಷ್ಟಪಡುವವರನ್ನು ನಾವು ಇಷ್ಟಪಡುವಬೇಕು ಇದೆ ಬದುಕಿನ ಲಕ್ಷಣ ಎಂದು ಅದೇ ರೀತಿ ಬದುಕುತ್ತಾರೆ.
ಸ್ವರ್ಗದ ಕರೆನ್ಸಿ
ಒಬ್ಬ ಜಮದಗ್ನಿ ಕೋಟ್ಯಾಧಿಪತಿ ತುಂಬಾ ಬೆಲೆಯುಳ್ಳ ಕಾರಿನಲ್ಲಿ ಹೋಗುತ್ತಿರುತ್ತಾನೆ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯುತ್ತಿರುತ್ತದೆ ಹಾಗಾಗಿ ಟ್ರಾಫಿಕ್ ಜಾಮ್ ಆಗಿರುತ್ತದೆ ಬಾಬಾ ಅವರು ಹೇಳುವ ಮಾತು ಕಿವಿಗೆ ಬೀಳುತ್ತದೆ.
ಈ ಪ್ರಪಂಚ ಶೂನ್ಯ ಈ ಪ್ರಪಂಚ ಮಾಯೆ ಪ್ರಪಂಚದಿಂದ ಮೇಲಕ್ಕೆ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಈ ಮಾತನ್ನು ಕೇಳುತ್ತಾ ಕೊಟ್ಯಾದಿಪತಿಗೆ ಒಂದು ಚಿಂತನೆ ಬರುತ್ತದೆ ಏನಾದರೂ ಆಗಲಿ ಈ ಬಾಬಾ ಅವರ ಮಾತನ್ನು ಮೀರಿಸಬೇಕು ಬಾಬಾ ಅವರನ್ನು ಸೋಲಿಸಬೇಕು.
ನಾನು ಹಣವನ್ನು ಮೇಲಕ್ಕೆ ತೆಗೆದುಕೊಂಡು ಹೋಗಲೇಬೇಕು ಎಂದು ಮನಸ್ಸಿನಲ್ಲಿ ಚಿಂತನೆ ಮಾಡಿ ನಾಳೆ ಇವನ ಎಲ್ಲಾ ಕಂಪನಿಯ ಕಾರ್ಮಿಕರನ್ನು ಕರೆಯುತ್ತಾನೆ ಕಾರ್ಮಿಕರಿಗೆ ನಾನು ನಿಮಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಕೊಡುತ್ತೇನೆ ನೀವು ನನಗೆ ಒಂದು (ಐಡಿಯಾ) ಉಪಾಯ ಹೇಳಬೇಕು.
ಉಪಾಯ ಏನೆಂದರೆ ದುಡ್ಡನ್ನು ಮೇಲಕ್ಕೆ ಹೇಗೆ ತೆಗೆದುಕೊಂಡು ಹೋಗಬಹುದು ಆಗ ಎಲ್ಲಾ ಕಾರ್ಮಿಕರು ಮಾಲೀಕನಿಗೆ ಬುದ್ಧಿ ಭ್ರಮಣೆ ಆಗಿದೆ ಆದ್ದರಿಂದ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾನೆ ಎಂದು ಮನಸ್ಸಿನಲ್ಲಿ ಅಂದುಕೊಂಡರು ಯಾರು ಐಡಿಯಾ ನೀಡಲಿಲ್ಲ ನಂತರ ಇನ್ನೊಂದು ಸಭೆ ಕರೆದನು.
ಆಗ 10 ಲಕ್ಷ ಕೊಡುತ್ತೇನೆ ಎಂದು ಹೇಳಿದನು ಆಗಲು ಯಾರು ಬರಲಿಲ್ಲ ಕೊಟ್ಯಾದಿಪತಿಗೆ ಇದೆ ಚಿಂತೆಯಲ್ಲಿ ನಿದ್ದೆಯೂ ಇಲ್ಲ ನಂತರ ಈ ಸುದ್ದಿ ಇಡಿ ಊರಿಗೆಲ್ಲ ಹರಡಿತು ಆಗ ಒಬ್ಬ ವಯಸ್ಸಾದ ವ್ಯಕ್ತಿ ಬಂದರು ನಾನು ನಿಮಗೆ ಐಡಿಯಾ ಕೊಡುತ್ತೇನೆ ಎಂದಾಗ ಕೋಟ್ಯಾಧಿಪತಿಗೆ ಸಂತೋಷ ಮತ್ತು ಕಣ್ಣಿನಲ್ಲಿ ಮಿಂಚು ಬಂತು.
ಕೋಟ್ಯಾಧಿಪತಿ ನನ್ನನ್ನು ಅರ್ಥಮಾಡಿಕೊಳ್ಳುವವರು ಇದ್ದಾರೆ ಒಬ್ಬರಾದರೂ ನನ್ನ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಆಗ ಹಿರಿಯ ವ್ಯಕ್ತಿ ಕೇಳಿದರು ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ ಅದಕ್ಕೆ ಉತ್ತರ ನೀಡಿ ಎಂದು ಹೇಳಿದರು ಕೋಟ್ಯಾಧಿಪತಿ ಉತ್ಸಾಹದಿಂದ ಆಗಲಿ ಎಂದನು.
ಹಿರಿಯರು ನೀವು ಹಲವಾರು ದೇಶಗಳಿಗೆ ಭೇಟಿ ನೀಡಿದ್ದೀರಾ ಅಲ್ಲವೇ ಎಂದು ಕೇಳಿದರು ಅದಕ್ಕೆ ನಾನು 18 ದೇಶಗಳು ಸುತ್ತಿದ್ದೇನೆ ಹಿರಿಯರು ಅಮೆರಿಕ ಹೋಗಿದ್ದೀರಿ ಅಲ್ಲವೇ ಎಂದಾಗ ಹೌದು ಅಮೇರಿಕಾಗೆ ಹೋಗಬೇಕಾದರೆ ನೀವು ಏನು ಮಾಡುತ್ತೀರಿ ಎಂದಾಗ ಕೋಟ್ಯಾಧಿಪತಿ ಹೇಳಿದ ಇಲ್ಲಿಯ ಹಣವನ್ನು ಡಾಲರ್ ಗೆ ಕನ್ವರ್ಟ್ ಮಾಡಿ ಹೋಗುತ್ತೇವೆ.
ಇಂಗ್ಲೆಂಡಿಗೆ ಹೋಗಿದ್ದೀರಾ ಎಂದು ಕೇಳುತ್ತಾರೆ ಹೌದು ಅಲ್ಲಿಗೂ ಹೋಗಿದ್ದೇನೆ ಹೋಗುವ ಮುಂಚೆ ಏನು ಮಾಡುತ್ತೀರಿ ಇಲ್ಲಿಯ ಹಣವನ್ನು ಪೌಂಡ್ ಆಗಿ ಕನ್ವರ್ಟ್ ಮಾಡುತ್ತೇವೆ ಮತ್ತೆಯ ಹಿರಿಯ ವ್ಯಕ್ತಿ ಇನ್ನು ಎರಡು ಮೂರು ದೇಶಗಳಿಗೆ ಭೇಟಿ ನೀಡಿದ್ದೀರಾ ಎಂದು ಹೇಳಿದಾಗ ಇದೇ ಮಾತನ್ನು ಹೇಳಿದರು ಕೋಟ್ಯಾಧಿಪತಿಗೆ ಏನು ಹಿರಿಯರೇ ನೀವು ನಮಗೆ ಹೀಗೆ ಹೇಳುತ್ತಿದ್ದೀರಾ.
ಇದು ಸಹಜವಾಗಿ ನಾವು ಮಾಡಲೇಬೇಕಾದ ಕೆಲಸ ಎಂದಾಗ ನಾನು ನಿಮ್ಮನ್ನು ಪದೇ ಪದೇ ಬಾರಿ ಏಕೆ ಕೇಳಿದೆ ಎಂದರೆ ಸ್ವರ್ಗದ ಕರೆನ್ಸಿ ಪುಣ್ಯ ಮಾತ್ರ ಇಲ್ಲಿಯ ಕರೆನ್ಸಿಯೇ ಬೇರೆ ಸ್ವರ್ಗದ ಕರೆನ್ಸಿಯೇ ಬೇರೆ ಅದು ಧಾನ ಧರ್ಮ ಮಾಡಿದರೆ ಪುಣ್ಯ ಪುಣ್ಯ ಸಿಗುತ್ತದೆ ಸ್ವರ್ಗದ ಕರೆನ್ಸಿ ಪುಣ್ಯ ಎಂದು ಹೇಳಿದರು.
ನೀವು ಇಲ್ಲಿಂದ ಪುಣ್ಯವನ್ನು ಮಾತ್ರ ಗಳಿಸಬಹುದು ಇದು (ಕನ್ವರ್ಟ್ಆಗಿ) ಪರಿವರ್ತನೆಯಾಗಿ ಮೇಲೆ ಸಿಗುತ್ತದೆ ಎಂದು ಹೇಳಿದರು. ಕೋಟ್ಯಾಧಿಪತಿ ಹಿರಿಯರಿಗೆ ಬಹುಮಾನ ನೀಡಿದನೊ ಇಲ್ಲವೋ ತಿಳಿಯದು.ಎಲ್ಲರಿಗೂ ಉಪಯೋಗವಾಗುವಂತಹ ಕೆಲಸಗಳನ್ನು ಮಾಡೋಣ.
ನೀರು ಕುಡಿಯಲೇ ಬೇಕು
ಅಲೆಕ್ಸಾಂಡರ್ ಚಕ್ರವರ್ತಿ ರಥದಲ್ಲಿ ಕುಳಿತು ಊರಿನ ಬದಿಯಲ್ಲಿ ಹೋಗುತ್ತಿರಬೇಕಾದರೆ ಎರಡೂ ಕಡೆಯಿಂದ ಜನರು ಅಲೆಗ್ಸಾಂಡರ್ ನ ದರ್ಶನಕ್ಕಾಗಿ ಕಾಯುತ್ತಿರುತ್ತಾರೆ ಹಾಗೆ ರಾಜನಿಗೆ ಜಯವಾಗಲಿ ಎಂದು ಹೇಳುತ್ತಿದ್ದರು ರಾಜನು ಎಲ್ಲರನ್ನೂ ಗಮನಿಸುತ್ತಿದ್ದನು ಹಾಗೆ ರಸ್ತೆಯ ಮೂಲೆಯಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯು ಕುಳಿತಿದ್ದನು ಅವನು ಬರಿ ಲಂಗೋಟಿ ಮಾತ್ರ ಹಾಕಿದ್ದಾನೆ.
ಇವನು ಬಡವ ಹಾಗೂ ತುಂಬ ದರಿದ್ರ ಕಾಡುತ್ತಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ರಾಜನು ಮಂತ್ರಿಗೆ ಹೇಳಿದ ಮೂಲೆಯಲ್ಲಿ ಕುಳಿತಿದ್ದವನಿಗೆ ಏನು ಬೇಕು ಕೇಳಿ ಅದನ್ನು ಕೊಟ್ಟು ಬನ್ನಿ ಎಂದು ಅಹಂಕಾರದಿಂದ ಹೇಳಿದನು
ಮಂತ್ರಿ ಓಡಿಹೋಗಿ ಆ ವಯಸ್ಸಾದ ವ್ಯಕ್ತಿಗೆ ಹೇಳಿದನು ನಿನ್ನ ಅದೃಷ್ಟ ತುಂಬಾ ಚನ್ನಾಗಿದೆ ರಾಜರೇ ನಿಮಗೆ ಏನು ಬೇಕು ಎಂದು ಕೇಳಿದ್ದಾರೆ ಏನು ಬೇಕು ಹೇಳಿ ಆಗ ವಯಸ್ಸಾದವರು ಯಾವ ರಾಜ ಯಾವ ಚಕ್ರವರ್ತಿ ಎಂದು ನಿಧಾನವಾಗಿ ಕೇಳಿದರು ಮಂತ್ರಿಯಾದವನು.
ರಾಜರ ಬಗ್ಗೆ ನಿನಗೇನು ಗೊತ್ತು ಇವರು ಇಡೀ ಜಗತ್ತಿನಲ್ಲಿ ಅರ್ಧ ಜಗತ್ತನ್ನು ಗೆದ್ದಿದ್ದಾರೆ ನಿನಗೇನು ಬೇಕು ಕೇಳು ಎಂದು ಹೇಳಿದ ವಯಸ್ಸಾದವರು ಓಹೋ ಅರ್ಥಪ್ರಪಂಚವನ್ನು ಗೆದ್ದಿದ್ದಾರೆ ಉಳಿದ ಅರ್ಧ ಗೆಲ್ಲುವುದು ಯಾವಾಗ ಎಂದು ಮಾತುಕತೆ ನಡೆಯುತ್ತಿತ್ತು ಆಗ ಅಲೆಕ್ಸಾಂಡರ್ ನೇರವಾಗಿ ಬಂದನು.
ಈ ಮಾತನ್ನು ಕೂಡ ಕೇಳಿಸಿಕೊಂಡನು ಅರ್ಧ ಜಗತ್ತನ್ನು ವಶಪಡಿಸಿಕೊಳ್ಳುವುದು ಸುಲಭದ ಕೆಲಸವಲ್ಲ ನನ್ನ ನಿಯಂತ್ರಣದಲ್ಲಿ 4ಲಕ್ಷ ಸೈನಿಕರು ಇದ್ದಾರೆ ಯಾರು ನನಗೆ ವಿರೋಧ ಮಾಡುತ್ತಾರೋ ಅವರನ್ನು ಕೊಂದು ಗೆದ್ದಿದ್ದೇನೆ ಆಗ ಆ ವಯಸ್ಸಾದವರು ಹೌದೆ ರಾಜ್ಯವನ್ನು ಗೆಲ್ಲಬೇಕಾದರೆ ಇಷ್ಟೊಂದು ಕಷ್ಟಪಡಬೇಕಾ ಎಂದು ವಯಸ್ಸಾದವರು ಮುಗ್ಧವಾಗಿ ರಾಜನಿಗೆ ಹೇಳುತ್ತಾರೆ.
ರಾಜರೇ ನೀವು ಕಾಡಿಗೆ ಬೇಟೆಗಾಗಿ ಬಂದಿದ್ದೀರಿ ಕಾರಣಾಂತರದಿಂದ ಎಲ್ಲರೂ ಬೇರೆಯಾಗಿ ನೀವು ಒಂಟಿಯಾಗಿದ್ದೀರಿ ದಾರಿಯೂ ತಿಳಿಯುತ್ತಿಲ್ಲ ನಂತರದಲ್ಲಿ ತುಂಬ ಬಾಯಾರಿಕೆಯಾಗುತ್ತಿದೆ ನೀರು ಕುಡಿಯದೆ ಹೋದರೆ ಸತ್ತೇ ಹೋಗುತ್ತೀರಾ ಆಗ ನಾನು ಒಂದು ಲೋಟ ನೀರು ಕೊಡುತ್ತೇನೆ ಆವಾಗ ನೀವು ನನಗೆ ಏನು ಕೊಡಬಹುದು ಸಾವಿರ ಚಿನ್ನದ ನಾಣ್ಯ ಕೊಡ್ತೇನೆ ಆಗ ನಾನು ಒಪ್ಪುವುದಿಲ್ಲ.
ನೀವು ನೀರು ಕುಡಿಯಲೇ ಬೇಕು ಇಲ್ಲದಿದ್ದರೆ ಸಾಯುತ್ತೀರಿ ಆಗ ನಾನು ಕೊಡುವುದಿಲ್ಲ ಎಂದು ಹೇಳುತ್ತಾನೆ ಆಗ ನೀವು ಅದಕ್ಕೆ ಎಷ್ಟು ಬೆಲೆ ಕಟ್ಟುತ್ತೀರಿ ನಾನು ಎಷ್ಟು ಗಳಿಸಿದ್ದೇನು ಅದರಲ್ಲಿ ಅರ್ಧದಷ್ಟು ಕೊಡುತ್ತೇನೆ ಎಂದು ಹೇಳಿದನು.
ಆಗ ನಾನು ನೀರು ಕೊಡುವುದಿಲ್ಲ ಎನ್ನುತ್ತೇನೆ ಆಗ ನೀವು ಏನು ಮಾಡುತ್ತೀರಿ ಇಡೀ ರಾಜ್ಯವನ್ನೇ ನಿಮ್ಮ ಕೈಗೆ ಕೊಡುತ್ತೇನೆ ಎಂದಾಗ ನೀವು ಕಷ್ಟಪಟ್ಟು ಗಳಿಸಿದ ಅರ್ಧ ಪ್ರಪಂಚದ ಬೆಲೆ ಎಷ್ಟು ಕೇವಲ ಒಂದು ಲೋಟ ನೀರು.
ಇದಕ್ಕೋಸ್ಕರವಾಗಿ ಎಷ್ಟೋ ಜನಕ್ಕೆ ಮೋಸ ಮಾಡಿದ್ದೀರಿ ಎಷ್ಟೋ ಜನಕ್ಕೆ ಹತ್ಯೆ ಮಾಡಿದ್ದೀರಿ ಶಿಕ್ಷೆ ಕೊಟ್ಟಿದ್ದೀರಿ ನಾನು ಮಾತ್ರ ಏನೂ ಮಾಡದೆ ಇಡೀ ಜಗತ್ತನ್ನೇ ಗೆದ್ದಿದ್ದೇನೆ ಜಗತ್ತು ನನ್ನದೇ ಎಂದು ತಿಳಿದುಕೊಂಡರೆ ಜಗತ್ತು ನನ್ನದೇ ಆಗುತ್ತದೆ ಅಲ್ಲವೇ ಎಂದು ಹೇಳಿದರು.
ಈ ಮಾತು ಕೇಳಿ ಮೆದುಳಲ್ಲಿ ಕರೆಂಟ್ ಹೊಡೆದ ಹಾಗೆ ಮೈ ಜುಮ್ ಎಂದಿತು ನಂತರ ನಮಸ್ಕಾರಮಾಡಿ ಅಲ್ಲಿಂದ ಹೊರಟನು.