ಒಂದು ಊರಿನಲ್ಲಿ ಒಬ್ಬ ಯೋಗಿನ್ ಯುವಕ ಸದಾ ಒಂದು ಮರದ ಕೆಳಗೆಯೇ ಇರುತ್ತಾನೆ ಅದೇ ಅವನ ವಾಸಸ್ಥಾನ ಎಂದು ಹೇಳಬಹುದು ಊರಿನವರು ಏನಾದರೂ ಕೊಟ್ಟರೆ ತಿನ್ನುತ್ತಾನೆ ಇಲ್ಲದಿದ್ದರೆ ಇಲ್ಲ ಅವನಾಗಿ ಭಿಕ್ಷೆ ಬೇಡಲು ಹೋಗುವುದಿಲ್ಲ ಆಗಾಗ ಉಪನ್ಯಾಸಗಳನ್ನು ನೀಡಿ ಬರುತ್ತಿರುತ್ತಾನೆ.
ದಿನನಿತ್ಯ ಎರಡು ಸಾರಿ ಯೋಗ ಅಭ್ಯಾಸವನ್ನು ಮಾಡುತ್ತಾನೆ ಒಂದು ಸಾರಿ ರಾಜರು ವಾಯು ವಿಹಾರಕ್ಕೆ ಬರುತ್ತಾರೆ ಆಗ ಯುವಕನನ್ನು ನೋಡುತ್ತಾರೆ ಯೋಗಿಯಂತೆ ಕಾಣುತ್ತಿದ್ದಾನೆ ಎಂದು ಯೋಗಿಗೆ ಹೋಗಿ ಮಾತನಾಡಿಸುತ್ತಾರೆ.
ಯೋಗಿಗಳೇ ನೀವು ದಿನನಿತ್ಯ ಯೋಗ ಅಭ್ಯಾಸ ಮಾಡುತಿದ್ದೀರಾ ಎಂದಾಗ ಯುವಕ ಯೋಗಿ ಹೌದು ಎನ್ನುತ್ತಾನೆ ನಂತರ ರಾಜನು ಬಹಳಷ್ಟು ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತಾರೆ ಯುವಕ ಯೋಗಿಯು ರಾಜರ ಪ್ರಶ್ನೆಗಳಿಗೆ ಕೆಲವು ಕ್ಷಣಗಳು ಯೋಚಿಸಿ ನಂತರ ನಿಖರವಾದ ಉತ್ತರವನ್ನು ಕೊಡುತ್ತಾನೆ ಆಗ ರಾಜನಿಗೆ ತುಂಬಾ ಸಂತೋಷವಾಗುತ್ತದೆ ಆಗ ರಾಜನು ಯೋಗಿಗೆ ಹೇಳುತ್ತಾನೆ.
ಯೋಗಿಯವರೇ ನೀವು ಇಲ್ಲಿ ಇರುವ ಬದಲು ನನ್ನ ಅರಮನೆಯಲ್ಲಿ ಇದ್ದರೆ ನಮ್ಮ ಅರಮನೆಯಲ್ಲಿಯೂ ಬಹಳಷ್ಟು ಜನ ಯೋಗಾಭ್ಯಾಸ ಮಾಡುತ್ತಾರೆ ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ರಾಜರು ಹೇಳಿದರು ಅದಕ್ಕೆ ಯೋಗಿಯು ಕೆಲವು ನಿಮಿಷಗಳು ಯೋಚನೆ ಮಾಡಿ ಆಗಲಿ ನಾನು ಬರುತ್ತೇನೆ ಎಂದು ಅರಮನೆಗೆ ಯೋಗಿಯು ಬಂದನು.
ಯೋಗಿಯ ಕೆಲಸ ಇಷ್ಟೇ ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಯೋಗ ಅಭ್ಯಾಸವನ್ನು ಎಲ್ಲರಿಗೂ ಹೇಳಿಕೊಡುತ್ತಿದ್ದನು ನಂತರ ತನಗೆ ಹೇಗೆ ಬೇಕೋ ಹಾಗೆ ಇರುತ್ತಿದ್ದನು ದಿನ ಕಳೆದಂತೆ ಎಲ್ಲರೂ ಯಾವ ರೀತಿ (ಎಂಜಾಯ್) ಸಂತೋಷ ಆನಂದದಿಂದ ಇರುತ್ತಾರೆ ಅದೇ ರೀತಿ ಯೋಗಿಯೂ ಕೂಡ ಎಂಜಾಯ್ ಮಾಡಿಕೊಂಡು ಇರುತ್ತಿದ್ದನು.
ಬಹಳಷ್ಟು ದಿನಗಳ ನಂತರ ರಾಜನಿಗೆ ಯೋಗಿ ಯಾವಾಗ ಹೋಗುತ್ತಾನೆ ಎಂದು ಯೋಚಿಸಿದರು ಏಕೆಂದರೆ ಯೋಗಿಯ ಚಲನ ವಲನ ಗಳಿಲ್ಲವೂ ಸಹಜ ರೀತಿಯಲ್ಲಿಯೇ ಇದೆ ಯೋಗಿ ಯಾಗಿ ಇರುವ ಬದಲು ಭೋಗಿಯಂತೆ ಚೆನ್ನಾಗಿ ತಿನ್ನುತ್ತಿದ್ದಾನೆ ಒಳ್ಳೆಯ ಬಟ್ಟೆಗಳು ಹಾಕಿಕೊಂಡು ಮಿಂಚುತ್ತಿದ್ದಾನೆ ನಂತರ ರಾಜನು ಯೋಗಿಗೆ ಕರೆದು ಯೋಗಿಯವರೇ ನೀವು ಯಾವಾಗ ಇಲ್ಲಿಂದ ಹೋಗುತ್ತೀರಿ ಎಂದು ಕೇಳುತ್ತಾರೆ.
ಯುವಕ ಯೋಗಿಯು ನಗುತ್ತಾ ರಾಜರೇ ಈ ಪ್ರಶ್ನೆಯನ್ನು ನೀವು ನಾನು ಬಂದ ಎರಡು ವಾರಕ್ಕೆ ಕೇಳಬೇಕಾಗಿತ್ತು ಆದರೆ ನೀವು ಐದು ತಿಂಗಳ ನಂತರ ಕೇಳುತ್ತಿದ್ದೀರಿ ಇರಲಿ ನಾನು ನಾಳೆ ಹೊರಡುತ್ತೇನೆ ಆದರೆ ನೀವೇ ನನಗೆ ಅರಮನೆಯಿಂದ ಆಚೆಯವರೆಗೂ ಬಿಡಲು ಬರಬೇಕು ಎಂದು ಕೇಳಿಕೊಳ್ಳುತ್ತಾನೆ ಆಗ ರಾಜರು ಆಗಲಿ ಎಂದು ಒಪ್ಪಿಕೊಳ್ಳುತ್ತಾರೆ.
ಮಾರನೆಯ ದಿನ ಯೋಗಿಯನ್ನು ಕರೆದುಕೊಂಡು ಅರಮನೆಯ ಆಚೆ ಬರುತ್ತಾರೆ ಯೋಗಿಯ ಮುಖದಲ್ಲಿ ಶಾಂತಿ ಸಂತೋಷ ದಿಂದ ಇರುತ್ತಾನೆ ಇದನ್ನು ನೋಡಿದ ರಾಜನು ಹೇಳುತ್ತಾನೆ ಯೋಗಿಯವರೇ ನೀವು ಯಾವಾಗಲೂ ಶಾಂತಿ ನೆಮ್ಮದಿಯಿಂದ ಇರುತ್ತೀರಿ ಇದರ ರಹಸ್ಯವೇನು ಎಂದು ಕೇಳುತ್ತಾರೆ ಆಗ ಯೋಗಿ ಹೇಳುತ್ತಾನೆ.
ರಾಜರೆ ಅದು ನಿಮಗೂ ಸಾಧ್ಯವಿದೆ ನಾನು ತುಂಬಾ ಶಾಂತಿ ನೆಮ್ಮದಿಯಿಂದ ಇದ್ದೇನೆ ಇದೆ ಶಾಂತಿ ನೆಮ್ಮದಿ ನಿಮಗೂ ಬೇಕಿದ್ದರೆ ಬನ್ನಿ ನನ್ನ ಜೊತೆ ಹೋಗೋಣ ಎಂದು ಕರೆಯುತ್ತಾನೆ ಆಗ ರಾಜರು ಇಲ್ಲ ನಾನು ಬರಲು ಸಾಧ್ಯವಿಲ್ಲ ಏಕೆಂದರೆ ನನಗೆ ಬಹಳಷ್ಟು ಜವಾಬ್ದಾರಿಗಳಿವೆ ಎಂದಾಗ ಯೋಗಿಯು ಹೇಳುತ್ತಾನೆ.
ರಾಜರೇ ಯೋಗಿಗೂ ಸಾಮಾನ್ಯರಿಗೂ ಇಷ್ಟೆ ವ್ಯತ್ಯಾಸ ನೋಡಿ ನಾನು ನಿಮ್ಮ ಅರಮನೆಯಲ್ಲಿ ಇಷ್ಟು ದಿನ ಸಂತೋಷವಾಗಿಯೇ ಇದ್ದೆ ಈಗಲೂ ನಾನು ಸಂತೋಷವಾಗಿದೆ ಇದ್ದೇನೆ ಮುಂದೆಯೂ ಕೂಡ ನಾನು ಸಂತೋಷವಾಗಿರುತ್ತೇನೆ ಸಾಮಾನ್ಯನಿಗೂ ಯೋಗಿಗೂ ಇಷ್ಟೇ ವ್ಯತ್ಯಾಸ ಎಲ್ಲಿ ಯಾವಾಗ ಹೇಗೆ ಇರಬೇಕು ಹಾಗೆಯೇ ಸಂತೋಷದಿಂದ ಕಾಲ ಕಳೆಯುತ್ತೇನೆ ಎಂದು ಹೇಳಿದನು. ಹಾಗೆಯೇ ನಾವು ಕೂಡ ಯಾವುದೇ ಸಂದರ್ಭ ಸನ್ನಿವೇಶವಿರಲಿ ತೃಪ್ತಿ ನೆಮ್ಮದಿಯಾಗಿ ಇರೋಣ.
ಕೆಲವರು ಪ್ರಾರ್ಥಿಸುತ್ತಲೆ ಕಾಲ ಕಳೆದರು
ಒಂದು ಹಳ್ಳಿಯಲ್ಲಿ ಬಿಲ್ವತೇಜ್ ಮತ್ತು ವಿಧೋತ್ ಇಬ್ಬರು ರೈತರು ವಾಸವಾಗಿದ್ದರು ಇವರು ತಮ್ಮ ಹೊಲಗದ್ದೆ ಕೆಲಸಗಳನ್ನು ತಾವೇ ಮಾಡುತ್ತಿದ್ದರು ಮತ್ತೆ ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು ಪ್ರತಿ ಸಾರಿಯಂತೆ ರೈತರು ಬೀಜಗಳನ್ನು ಹಾಕಿ ಪೈರು ಬಂದ ನಂತರ ಸಸಿಯನ್ನು ನೆಟ್ಟರು ಪೈರು ಬೆಳೆಯುತ್ತಾ ಬಂದಿತು.
ಪ್ರತಿ ವರ್ಷದಂತೆ ಬರಬೇಕಾಗಿದ್ದ ಮಳೆಯೂ ಬರಲಿಲ್ಲ ಆದ್ದರಿಂದ ಆ ಹಳ್ಳಿಯವರು ಎಲ್ಲರೂ ಕಂಗಾಲಾದರು ಏನು ಮಾಡುವುದು ಎಂದು ಚಿಂತೆಯಲ್ಲಿ ಮುಳುಗಿದರು ಹಳ್ಳಿಯವರು ಪೂಜೆ ಪ್ರಾರ್ಥನೆಗಳನ್ನು ಮಾಡಿದರು ಹೀಗೆ ಕೆಲವು ದಿನಗಳು ಕಳೆದವು.
ಬರಬೇಕಾಗಿದ್ದ ಮಳೆ ಬರಲೇಇಲ್ಲ ಒಬ್ಬ ಬುದ್ಧಿವಂತ ರೈತನು ಯೋಚಿಸಿದ ಅವನಿಗೆ ಒಂದು ಉಪಾಯ ಹೊಳೆಯಿತು ಏನೆಂದರೆ ತಾನು ಮತ್ತು ತನ್ನ ಸ್ನೇಹಿತರು ತನ್ನ ಸಂಬಂಧಿಕರು ಎಲ್ಲರೂ ಸೇರಿ ಬೆಳಗಿನ ಜಾವದಿಂದಲೇ ಒಂದು ಬಾವಿಯನ್ನು ತೋಡಲು ಶುರು ಮಾಡಿದರೂ.
ಕೊನೆಗೆ ನೀರು ಬಂತು ನೀರನ್ನು ಹೊಲ ಗದ್ದೆಗಳಿಗೆ ಹಾಕಿದರೂ ಅವರ ಬೆಳೆಯೂ ಚೆನ್ನಾಗಿ ಫಸಲು ಕಂಡಿತ್ತು ಮತ್ತೆ ಕೆಲವರು ಪ್ರಾರ್ಥಿಸುತ್ತಲೆ ಕಾಲ ಕಳೆದರು.
ಕೊಟ್ಟರೆ ಮತ್ತೆ ಮರಳಿ ಬರುತ್ತದೆ
ಹಲವಾರು ವರ್ಷಗಳ ಹಿಂದೆ ಹಳ್ಳಿಯ ಹೊರಗೆ ಒಬ್ಬ ದೈತ್ಯಾಕಾರದ ರಾಕ್ಷಸ ಇದ್ದನಂತೆ ಹಳ್ಳಿಯಿಂದ ಹೊರಗೆ ಹೋಗಬೇಕಾದರೆ ಜನ ಹೆದರುತ್ತಿದ್ದರು ಇದರಿಂದಾಗಿ ಹಳ್ಳಿಯಲ್ಲಿ ಪರಿಸ್ಥಿತಿ ತುಂಬ ಚಿಂತಾಜನಕವಾಯಿತು ಹಳ್ಳಿಯ ಒಬ್ಬ ವ್ಯಕ್ತಿ ರಾಕ್ಷಸನನ್ನು ಓಡಿಸುತ್ತೇನೆ ಎಂದು ಹೋದನು.
ಅವನೇ ಓಡಿಬಂದನು ಅದೇ ರೀತಿ ಇನ್ನೊಬ್ಬ ವ್ಯಕ್ತಿ ರಾಕ್ಷಸನಿಗೆ ಕಷ್ಟ ಕೊಡುತ್ತೇನೆ ಎಂದನು ಇವನೇ ಕಷ್ಟ ಕ್ಕೆ ಗುರಿಯಾದನು ಇನ್ನೊಬ್ಬ ಹಳ್ಳಿಯವನು ರಾಕ್ಷಸನ ಕಾಲು ಮುರಿಯುತ್ತೇನೆ ಎಂದು ಹೋದವನು ಕಾಲು ಮುರಿದುಕೊಂಡು ಬಂದನು ಇನ್ನೊಬ್ಬ ಯುವಕ ರಾಕ್ಷಸನನ್ನು ಸಾಯಿಸಿ ಬಿಡ್ತೀನಿ ಎಂದು ಹೋದನು ಆದರೆ ಇವನೇ ಸತ್ತನು.
ಕೆಲವು ದಿನಗಳ ನಂತರ ಹಳ್ಳಿಯ ಜನರು ತುಂಬಾ ಚಿಂತೆಯಲ್ಲಿ ಮುಳುಗಿದರು ರಾಕ್ಷಸನನ್ನು ಹೇಗೆ ಓಡಿಸುವುದು ಎಂದು ಚಿಂತಿಸುತ್ತಿದ್ದರು ನಂತರ ಬಾಬಾ ಅವರು ಆ ಹಳ್ಳಿಗೆ ಬರುತ್ತಾರೆ ಬಂದು ಇಲ್ಲಿನ ವಿಷಯವೆಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ನಂತರ ನಾನು ನೋಡಿ ಬರುತ್ತೇನೆ ಎಂದು ಹೋಗುತ್ತಾರೆ.
ಊರಿನವರು ಬಾಬಾ ಅವರಿಗೆ ಏನಾಗುತ್ತದೋ ಎಂದು ಹಿಂದೆ ಬರುತ್ತಾರೆ. ಬಾಬಾ ಅವರು ಆ ರಾಕ್ಷಸ ಇರುವ ಕಡೆಗೆ ಹೋಗುತ್ತಾರೆ ರಾಕ್ಷಸ ಮರದ ಮೇಲೆ ಕುಳಿತಿದ್ದಾನೆ ಆಗ ಬಾಬಾ ಅವರು ತುಂಬಾ ನಗು ಮುಖದಿಂದ ನೋಡಿದರು.
ತಮ್ಮ ಜೋಳಿಗೆಯಲ್ಲಿ ಕೈ ಹಾಕಿದರು 2 ಹಣ್ಣುಗಳು ಇತ್ತು ಅದನ್ನು ಆ ರಾಕ್ಷಸನಿಗೆ ಕೊಟ್ಟರು ಆ 2 ಹಣ್ಣುಗಳನ್ನು ರಾಕ್ಷಸ ಪಡೆದುಕೊಂಡು ತಿಂದು ಸಂತೋಷಪಟ್ಟಿತು ನಂತರ ಸ್ವಲ್ಪ ಸಮಯದಲ್ಲಿಯೇ ಆ ರಾಕ್ಷಸನು ಬೇರೆ ರೀತಿಯ ಹಣ್ಣುಗಳನ್ನು ತಂದು ಬಾಬಾ ಅವರ ಕೈಗೆ ಕೊಟ್ಟಿತು ಬಾಬಾ ಅವರಿಗೆ ಆಶ್ಚರ್ಯವಾಯ್ತು.
ಮರಳಿ ಬಂದರು ಇದನ್ನೆಲ್ಲ ಊರಿನವರು ಕೂಡ ದೂರದಿಂದ ನೋಡುತ್ತಿದ್ದರು ನಂತರ ಮಾರನೆಯ ದಿನ ಬೇರೆ ರೀತಿಯ ತಿಂಡಿಗಳನ್ನು ತೆಗೆದುಕೊಂಡು ಹೋಗಿ ರಾಕ್ಷಸನಿಗೆ ಕೊಟ್ಟರು ಆ ರಾಕ್ಷಸನ ಸ್ವಲ್ಪ ಸಮಯದಲ್ಲಿ ಬೇರೆ ಇತರ ಹಣ್ಣು ಹಂಪಲುಗಳನ್ನು ಕೊಟ್ಟಿತು ಬಾಬಾ ಅವರಿಗೆ ಮತ್ತೆ ಆಶ್ಚರ್ಯವಾಯ್ತು ಮತ್ತೆ ಮಾರನೇ ದಿನ ಅದ್ಬುತವಾದ ಊಟವನ್ನು ನೀಡಿದರು.
ರಾಕ್ಷಸನು ಕೂಡ ಸ್ವಲ್ಪ ಸಮಯದ ನಂತರ ಕೊಬ್ಬರಿ ಬಾದಾಮಿ ಏನೇನೋ ತಿನ್ನುವ ಆಹಾರ ಕೊಟ್ಟಿತು ನಂತರ ಬಾಬಾ ಅವರು ಅರ್ಥಮಾಡಿಕೊಂಡರು ನಾವು ಈ ರಾಕ್ಷಸನಿಗೆ ಏನು ನೀಡುತ್ತೇವೊ ಅದರ ಬದಲಿಗೆ ಬೇರೆಯದು ಮರಳಿ ನೀಡುತ್ತದೆ ನಂತರ ಹಳ್ಳಿಯವರು ಕೂಡ ಏನೇನೋ ಕೊಟ್ಟರು ಅದರಂತೆ ಅದು ಕೂಡ ಏನೇನೋ ನೀಡುತ್ತಿತ್ತು.
ಹಳ್ಳಿಯ ಜನರಿಂದ ರಾಕ್ಷಸ ಸ್ನೇಹ ಮಾಡಿಕೊಂಡಿತು ಇದು ಹಿಂದೆ ನಡೆದ ಕಥೆ ಆಗಿರಬಹುದು ಆದರೆ ನಾವು ಏನು ಕೊಡುತ್ತೇವೆ ಅದು ಮಾತ್ರ ಮರಳಿ ಬಂದೇ ಬರುತ್ತದೆ.
ಬದಲಾವಣೆ ಆಗಲೇಬೇಕು
ಒಬ್ಬ ವಯಸ್ಸಾದ ವಿದ್ಯಾಭರಣ್ ಹಿರಿಯರು ಕುಡಿದ ಮತ್ತಿನಲ್ಲಿ ಚಿಕಿತ್ಸೆಗೆ ಎಂದು ಬಂದರು ಇವರನ್ನು ನೋಡಿದ ಶಾಲಂಕ್ ವೈದ್ಯರು ನನ್ನ ಹತ್ತಿರ ಖಾಯಂ ಆಗಿ ಬರುವವರು ನೀವೊಬ್ಬರೇ ನನ್ನ ಹತ್ತಿರ ಚಿಕಿತ್ಸೆಗೆ ಎಂದು ಬಂದರೆ ಒಂದು ಇಂಜೆಕ್ಷನ್ 3 ದಿನದ ಮಾತ್ರೆ ಕೊಡುತ್ತೇನೆ ಅಷ್ಟೆ ಮತ್ತೆ ಯಾವುದೇ ಕಾರಣಕ್ಕೂ ಬರುವುದಿಲ್ಲ.
ನೀವು ಮಾತ್ರ ಆಗಾಗ ಬರುತ್ತೀರಾ ಸ್ವಲ್ಪವಾದರೂ ಬದಲಾವಣೆ ಆಗಲೇಬೇಕು ಎಂದು ಹೇಳಿದರು ಕುಡಿದ ಹಿರಿಯರು ನಾನು ಕುಡಿಯುವುದನ್ನು ಬಿಡಬೇಕು ಎಂದು ಮನಸ್ಸಿನಲ್ಲಿ ಬರುತ್ತದೆ ಆದರೆ ಕುಡಿತ ಮಾತ್ರ ನನ್ನನ್ನು ಬಿಡುವುದೇ ಇಲ್ಲ ಎಂದರು ಆಗ ವೈದ್ಯರು ನಿಮ್ಮಿಂದ ನನಗೆ ಒಂದು ಸಹಾಯ ಬೇಕಾಗಿದೆ ಎಂದರು.
ಏನು ಎಂದು ಕೇಳಿದಾಗ ಈಗ ಒಬ್ಬ ವಿಖ್ಯಾತ್ ತರುಣ ಕುಡಿದ ಅಮಲಿನಲ್ಲಿ ಬಂದಿದ್ದಾನೆ ಒಬ್ಬನೇ ಮಗ ತಂದೆ ತಾಯಿಯ ದುಃಖ ನೋಡಲು ಆಗುತ್ತಿಲ್ಲ ಆದುದರಿಂದ ನಿಮ್ಮ ಅವಸ್ಥೆಯನ್ನು ತಿಳಿಸಿದರೆ ಆತನಾದರೂ ಕುಡಿತದ ಚಟದಿಂದ ಬಿಡುಗಡೆ ಹೊಂದಬಹುದು ಎಂದು ವೈದ್ಯರು ಹೇಳಿದರು ಕುಡಿದ ಹಿರಿಯರು ತೂರಾಡುತ್ತಾ ಆಗಲಿ ಎಂದರು ಈಗ ಬಂದಿದ್ದ ತರುಣನ ಬಳಿಗೆ ಹೋಗಿ ಹೇಳಿದರು.
ಗೆಳೆಯ ಕುಡಿತ ಒಳ್ಳೆಯದಲ್ಲ ನಾನು ಬಹಳಷ್ಟು ವರ್ಷಗಳ ಹಿಂದೆಯೇ ಕುಡಿತವನ್ನು ಕಲಿತೆನು ಇದರಿಂದಾಗಿ ನನ್ನ ಕನಸುಗಳು ನುಚ್ಚು ನೂರಾಗಿದೆ ನನಗೂ ಕನಸುಗಳಿದ್ದವು ತಂದೆ ತಾಯಿಗೆ ಒಳ್ಳೆಯ ಮಗನಾಗಬೇಕು ಹೆಂಡತಿ ಜೊತೆ ಒಳ್ಳೆಯ ಗಂಡ ಅನ್ನಿಸಿಕೊಳ್ಳಬೇಕಾಯಿತು.
ಮಕ್ಕಳಿಂದ ಒಳ್ಳೆಯ ತಂದೆ ಎನ್ನಿಸಿಕೊಳ್ಳಬೇಕು ನಂತರ ಸಮಾಜದಲ್ಲಿ ಒಳ್ಳೆಯ ಗೌರವ ಇರಬೇಕು ಎಂದು ಕನಸು ಕಂಡಿದ್ದೆ ಆದರೆ ಈ ಕುಡಿತದಿಂದಾಗಿ ನನಗೆ ತಂದೆ ತಾಯಿಯೂ ಗೌರವಿಸುವುದಿಲ್ಲ ಹೆಂಡತಿಯೂ ಅಷ್ಟೇ ಮಕ್ಕಳೂ ಅಷ್ಟೆ ಸಮಾಜದಲ್ಲಿ ನನಗೆ ಗೌರವವಂತೂ ಇಲ್ಲವೇ ಇಲ್ಲ ಇದರಿಂದ ನನ್ನ ಬದುಕೇ ಹಾಳಾಗಿ ಹೋಗಿದೆ.
ನನ್ನವರು ಎನ್ನುವವರು ಯಾರೂ ಇಲ್ಲ ನೀನು ಇನ್ನೂ ತರುಣ ನಿನಗೆ ಭವಿಷ್ಯವಿದೆ ನಿನ್ನ ಭವಿಷ್ಯ ನೀನು ಏಕೆ ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳಿದರು ಹೇಳಿದಾಗ ಇವರಲ್ಲಿ ಒಂದು ಹೊಸ ಶಕ್ತಿ ಬಂತು ಮತ್ತೆ ಹಿರಿಯರು ಯೋಚನೆ ಮಾಡಿದರು ಇನ್ನು ಮುಂದೆ ನೀನು ಕುಡಿಯುವುದು ಬೇಡ ಕುಡಿಯುವ ಸಮಯದಲ್ಲಿ ಸ್ವಲ್ಪ ಹೊತ್ತು ಮಾತನಾಡೋಣ ಆಗ ತರುಣ ಹೌದು ಎಂದನು.
ಇಬ್ಬರೂ ಸ್ನೇಹಿತರಾದರು ಹಿರಿಯರು ನಾನೇ ಕುಡಿದರೆ ನನಗೂ ಗೌರವ ಇರುವುದಿಲ್ಲ ಎಂದು ವೃದ್ಧರು ಕುಡಿಯುವುದನ್ನು ಬಿಟ್ಟರೂ ಆ ತರುಣನು ಕುಡಿಯುವುದು ಬಿಟ್ಟನು ನಂತರ ಇಬ್ಬರೂ ಸೇರಿ ನಾವು ಇನ್ನು ಮುಂದೆ ಕುಡಿತದ ಚಟವನ್ನು ಬಿಡಿಸೋಣ ಎಂದು ಚಿಕ್ಕದಾಗಿ ಒಂದು ಆಫೀಸನ್ನು ತೆರೆದರು.
ನಂತರ ಇದೇ ಕೆಲಸದಲ್ಲಿ ತೊಡಗಿದರು ಇದರಿಂದಾಗಿ ಹಲವಾರು ಜನರು ಕುಡಿತ ಚಟದಿಂದ ಬಿಡುಗಡೆಗೊಂಡರು ಈಗಲೂ ನಮ್ಮ ಕಣ್ಣ ಮುಂದೆ ಯಾರಾದರೂ ಕುಡಿದು ಬಂದರೆ ನಾವು ಅವರನ್ನು ಕೀಳಾಗಿ ಮಾತನಾಡುವ ಬದಲು ಪ್ರೀತಿಯಿಂದ ಮಾತನಾಡೋಣ.
ಪ್ರೀತಿಯಿಂದ ಮಾತನಾಡಿಸುತ್ತಿದ್ದರು
ನಾನು ಮದುವೆಯಾದ ಮೇಲೆ ಬೆಂಗಳೂರಿನಲ್ಲಿ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದೆ ಆಗ ನಾನು ಒಂದು ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದೆ ತಿಂಗಳಿಗೆ ಸಂಬಳ ಬರುತ್ತಿತ್ತು ಹಾಗಾಗಿ ನಮ್ಮ ಮನೆಯ ಮುಂದೆ ಇರುವ ಅಂಗಡಿಯಲ್ಲಿ ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಿಕೊಂಡು ತಿಂಗಳಿಗೆ ಹಣ ಕೊಡುತ್ತಿದ್ದೆವು ಹೀಗೆ ಹಲವಾರು ವರ್ಷ ನಡೆಯಿತು.
ಆ ಅಂಗಡಿಯ ಮಾಲೀಕ ಮೊದಲು ಒಂದು ಅಂಗಡಿ ಮಾಡಿದನು ನಂತರ ಎರಡು ಅಂಗಡಿಗಳು ಹೀಗೆ ಎಂಟು ಅಂಗಡಿಗಳನ್ನು ಅಭಿವೃದ್ಧಿಪಡಿಸಿದನು ಸಾಕಷ್ಟು ಹಣ ಗಳಿಸಿದನು ಆದರೆ ಇವರು ಸ್ವತಂತ್ರವಾಗಿ ಇರಬೇಕು ಪರಿವಾರದ ಜೊತೆ ಹೆಚ್ಚು ಇರಬೇಕು ಹೆಚ್ಚು ಸ್ನೇಹಿತರು, ಸಂಬಂಧಿಕರೊಂದಿಗೆ ಇರುವುದು, ಪ್ರೀತಿ ಕೊಡುವುದು ಪ್ರೀತಿ ಪಡೆಯುವುದು ಸಂತೋಷವಾಗಿರುವುದು ಇವರಿಗೆ ಗೊತ್ತೇ ಇಲ್ಲವೇನೋ ಹಾಗೆ ಬದುಕಿದರು.
ಕೆಲವು ವರ್ಷಗಳ ನಂತರ ನಾನು ಮನೆಯನ್ನು ಬದಲಾಯಿಸಿ ಬೇರೆ ಕಡೆಗೆ ಹೋದೆ ಅಲ್ಲಿಯು ಕೂಡ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡಿದ್ದರು ಆಗ ನಾನು ಅವರ ಅಂಗಡಿಯಿಂದ ಸಾಮಾನುಗಳನ್ನು ಖರೀದಿಸುತ್ತಿದ್ದೇ ಅವರಲ್ಲಿ ನೋಡಿದ್ದು ಚಿಕ್ಕ ಅಂಗಡಿ ಎಷ್ಟು ಬೇಕೋ ಅಷ್ಟು ವ್ಯಾಪಾರ ಹೆಚ್ಚಾಗಿ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ.
ಯಾರೇ ಬಂದರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಇರುವುದರಲ್ಲಿ ಸಂತೋಷವಾಗಿ ತೃಪ್ತಿಯಿಂದ ಕಾಲ ಕಳೆಯುತ್ತಿದ್ದರು ಆಗ ನನಗೆ ಅರ್ಥವಾಯಿತು ಅವರವರ ಆಲೋಚನೆಯಂತೆ ಅವರು ಬದುಕುತ್ತಾರೆ ಯಾವ ರೀತಿ ಬದುಕಬೇಕು ಎನ್ನುವುದು ಆಯ್ಕೆ ನಮ್ಮದೇ.