ಊರಿನ ಆಚೆ ಒಂದು ಭವ್ಯವಾದ ಆಶ್ರಮ ಇರುತ್ತದೆ ಅಲ್ಲಿ ಹಲವಾರು ಜನರು ತರಬೇತಿಗಾಗಿ ಬರುತ್ತಾರೆ ತರಬೇತಿ ಪಡೆದು ಸಂಜೆ ವೇಳೆಗೆ ಆಶ್ರಮದಿಂದ ಕಳುಹಿಸಬೇಕಾದಾಗ ಚಿಕ್ಕ ಒಂದು ಹೂವಿನ ಬುಟ್ಟಿಯನ್ನು ತೆಳುದಾರದಿಂದ ಕಟ್ಟಿ ನೇತಾಡವ ಹಾಗೆ ತೆಗೆದುಕೊಂಡು ಹೋಗಬೇಕು.
ಎಲ್ಲರಿಗೂ ಒಂದೊಂದು ಬುಟ್ಟಿ ಕೊಟ್ಟು ಕಳುಹಿಸುತ್ತಾರೆ ಬೆಟ್ಟದ ಮೇಲೆ ಇರುವ ಬಂಡೆಯ ಹತ್ತಿರ ಇಡಬೇಕು ಇದು ಅಲ್ಲಿಯ ನಿಯಮ ಬುಟ್ಟಿ ತೆಗೆದುಕೊಂಡ ನಂತರ ಒಂದು ಉದ್ಯಾನವನ ಇರುತ್ತದೆ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಲ್ಲಿ ತುಂಬಾ ಶಾಂತಿ ತೃಪ್ತಿ ಸಿಗುತ್ತದೆ ನಂತರ ಹಾಗೆಯೇ ಮುಂದೆ ನೋಡಿದಾಗ ಒಂದು ದೊಡ್ಡ ಬಂಡೆ ಕಾಣುತ್ತದೆ.
ಬಂಡೆಯ ಹತ್ತಿರ ಹೋಗಬೇಕು ಎಂದು ನಿಧಾನವಾಗಿ ಎದ್ದು ಮುಂದೆ ಹೋದಾಗ ರಂಗು ರಂಗಿನ ಹೂವಿನಿಂದ ಅಲಂಕಾರ ಮಾಡಿರುವ ಒಂದು ಆಕರ್ಷಣೀಯವಾದ ಗಡಿಯಾರ ಇರುತ್ತದೆ ಇದು ಎಷ್ಟು ಚೆನ್ನಾಗಿ ಮಾಡಿದ್ದಾರಲ್ಲ ಎಂದು ಮುಟ್ಟುತ್ತಾನೆ ಅಷ್ಟೇ, ಹೂವಿನ ಅಲಂಕಾರದ ಗಡಿಯಾರ ಇವನ ಮೇಲೆ ಬೀಳುತ್ತದೆ ತಕ್ಷಣ ಗಾಬರಿಯಾಗುತ್ತಾನೆ.
ಗಡಿಯಾರ ಹೇಗೆ ಇತ್ತು ಹಾಗೆ ಜೋಡಿಸಿ ಕೈಯಲ್ಲಿ ಇದ್ದ ಹೂವಿನ ಬುಟ್ಟಿಯನ್ನು ಬಿಟ್ಟು ಹೊರಟು ಯಾವುದೋ ದಾರಿಯಿಂದ ಹೊರಟು ಹೋಗುತ್ತಾನೆ ಇದನ್ನು ನೋಡಿ ಎಲ್ಲರೂ ಸಂತೋಷಪಡುತ್ತಾರೆ ಒಬ್ಬ ಶಿಷ್ಯ ಮಾತ್ರ ಬಾಬಾ ಅವರಿಗೆ ಕೇಳುತ್ತಾನೆ.
ಬಾಬಾ ಅವರೇ ಎಲ್ಲರೂ ಬರುತ್ತಾರೆ ಹೀಗೆಯೇ ಹೋಗುತ್ತಾರೆ ಚಟುವಟಿಕೆಯ ಉದ್ದೇಶವೇನು ಎಂದು ಕೇಳುತ್ತಾನೆ ಆಗ ಬಾಬಾ ಅವರು ಆಶ್ರಮದಿಂದ ಹೊರಡಬೇಕಾದಾಗ ಹೂವಿನ ಬುಟ್ಟಿಯನ್ನು ಕೊಟ್ಟೆವು ಅವನು ತೆಗೆದುಕೊಂಡು ಹೋಗಿ ಬಂಡೆಯ ಮೇಲೆ ಇಡಬೇಕು ಇದು ಇವನ ಗುರಿ.
ಯಾರು ಈ ರೀತಿ ಇಡುವುದಿಲ್ಲ ಮೊದಲು ಉದ್ಯಾನವನದಲ್ಲಿ ಕುಳಿತುಕೊಳ್ಳುತ್ತಾರೆ ಅಂದರೆ ಅಲ್ಲಿ ಅವನಿಗೆ ಒಳ್ಳೆಯ ಗಿಡಗಳು ಹೂವುಗಳು ಹಿತಕರ ವಾತಾವರಣ ಕಾಣುತ್ತದೆ ಮತ್ತೆ ನೆಮ್ಮದಿ ಇರುತ್ತದೆ ಇನ್ನು ಸ್ವಲ್ಪ ಸಮಯ ಅಲ್ಲಿ ಕಳೆಯಬಹುದು ಆದರೆ ಬಂದವನು ಅಲ್ಲಿ ಹೆಚ್ಚು ಹೊತ್ತು ಇರದೇ ಮುಂದೆ ತನ್ನ ಗುರಿ ಮುಟ್ಟಬೇಕು ಎಂದು ಮುಂದೆ ಹೋಗುತ್ತಾನೆ.
ಹೂವಿನ ಅಲಂಕಾರದ ಗಡಿಯಾರ ನೋಡುತ್ತಾನೆ ಮೋಹಕೊಳ್ಳುತ್ತಾನೆ ಗಡಿಯಾರವನ್ನು ಮುಟ್ಟುತ್ತಾನೆ ಗಡಿಯಾರ ಇವನ ಮೇಲೆ ಬೀಳುತ್ತದೆ ಮತ್ತೆ ಜೋಡಿಸುತ್ತಾನೆ ಯಾವುದೋ ಆಕರ್ಷಣೆಗೆ ಒಳಗಾಗಿ ತನ್ನ ಸಮಯವನ್ನು ಸಂಪೂರ್ಣವಾಗಿ ವ್ಯರ್ಥಮಾಡುತ್ತಾನೆ ನಂತರ ಆತಂಕಕ್ಕೆ ಒಳಗಾಗುತ್ತಾನೆ.
ನನ್ನ ಸಮಯ ಕಳೆದು ಹೋಯಿತು ಎಂದು ತಾನು ತಂದಿರುವ ಹೂವನ್ನು ಬಿಟ್ಟು ತನ್ನಲ್ಲಿ ಇದ್ದದ್ದನ್ನು ಕಳೆದುಕೊಂಡು ಇವನು ಬಂಡೆಯ ಮೇಲೆ ಹೂವು ಇಡಬೇಕಾಗಿರುತ್ತದೆ ಗುರಿಯನ್ನು ಮರೆತು ಗಾಬರಿಯಾಗಿ ಸಿಕ್ಕಿದ ಒಂದು ಮಾರ್ಗದಲ್ಲಿ ಹೊರಟು ಹೋಗುತ್ತಾನೆ.
ತನ್ನ ಬದುಕಿನಲ್ಲಿಯೂ ಹಾಗೆಯೇ ಮಾಡುತ್ತಾನೆ ತನಗೆ ಸಮಯ ಇದ್ದಾಗ ಅಲ್ಲಿ ಶಾಂತಿಯಿಂದ ಇರದೆ ಮುಂದೆ ಹೋಗುತ್ತಾನೆ ಮೋಹದ ಪಾಶಕ್ಕೆ ಬಲಿಯಾಗಿ ಇರುವ ಸಮಯ ವ್ಯರ್ಥ ಮಾಡಿಕೊಳ್ಳುತ್ತಾನೆ ನಂತರ ತನ್ನ ಗುರಿ ಮುಟ್ಟುವ ಬದಲು ಎಲ್ಲೋ ಹೋಗಿ ಸೇರುತ್ತಾನೆ ಹೀಗೆ ಎಲ್ಲರೂ ಮಾಡುತ್ತಾರೆ ತುಂಬಾ ಕಡಿಮೆ ಜನರು ಮಾತ್ರ ತಮ್ಮ ಗುರಿಯನ್ನು ಮುಟ್ಟುತ್ತಾರೆ ಎಂದು ವಿವರವಾಗಿ ಹೇಳುತ್ತಾರೆ ಆಗ ಶಿಷ್ಯ ಅರ್ಥಮಾಡಿಕೊಳ್ಳುತ್ತಾನೆ. ನಾನು ಮೋಹದ ಪಾಶಕ್ಕೆ ಬಲಿಯಾಗಿದ್ದೇನೆಯೇ?
ಯಾರು ಪಾಪ ಮಾಡಿದ್ದಾರೆ?
ಒಂದು ಸಾರಿ ಕಾಡಿನಲ್ಲಿ ಒಂದು ಚಿರತೆ ಹುಲಿ ನಾಯಿ ಒಂದು ಕತ್ತೆ ಒಂದು ಮರದ ಕೆಳಗೆ ನಿಂತುಕೊಂಡಿದ್ದವು ಅಂದು ಪ್ರಾಣಿಗಳಿಗೆ ತಿನ್ನಲು ಏನೂ ಇರಲಿಲ್ಲ ಬಿಸಿಲು ಕಾಲವಾದ್ದರಿಂದ ಆಯಾಸವು ಜಾಸ್ತಿಯಾಗಿತ್ತು ಕುಡಿಯಲು ನೀರು ಸಹ ಸಿಗಲಿಲ್ಲ ಆಗ 4 ಪ್ರಾಣಿಗಳು ಮಾತನಾಡಿಕೊಂಡವು.
ಈ ನಡುವೆ ನಮಗೆ ಏನು ತಿನ್ನಲಿಕ್ಕೆ ಆಹಾರ ಸಿಗುತ್ತಿಲ್ಲ ಆದುದರಿಂದ ನಾವು 4 ಪ್ರಾಣಿಗಳಲ್ಲಿ ಏನಾದರೂ ತಪ್ಪು ಮಾಡಿರಬಹುದು ಆದುದರಿಂದ ನಮಗೆ ಏನೂ ಸಿಗುತ್ತಿಲ್ಲ ಎಂದು ಹುಲಿ ಹೇಳಿತು ಆಗ ಚಿರತೆ ಕೂಡ ಹೌದು ಹೌದು ನೀವು ಹೇಳುತ್ತಿರುವುದು ಸರಿ ಎಂದಿತು ನಾಯಿಯೂ ಕೂಡ ಇದರ ಜೊತೆಗೆ ಹೌದು ಎಂದಿತು.
ಕತ್ತೆ ಹೇಳಿತು ನಾವು ನಾಲ್ಕೂ ಪ್ರಾಣಿಗಳು ಏನು ತಪ್ಪು ಮಾಡಿದ್ದೀವಿ ಎಂದು ಧೈರ್ಯವಾಗಿ ಹೇಳಿಕೊಂಡರೆ ಆ ಭಗವಂತನಿಗೆ ನಮ್ಮ ಮೇಲೆ ಭರವಸೆ ಬರುತ್ತದೆ ಮಾಡಿದ ತಪ್ಪು ಕ್ಷಮೆ ಕೇಳೋಣ ಎನ್ನುತ್ತದೆ ಮೂರು ಪ್ರಾಣಿಗಳು ಹೌದು ಎಂದು ಮೊದಲಾಗಿ ಹುಲಿ ಹೇಳಿತು.
ಪಕ್ಕದ ಊರಿಗೆ ಹೋಗಿದ್ದಾಗ ರೈತನು ಹಸುಗಳು ಹಸುವಿನ ಮರಿಗಳು ಇದ್ದವು ಅದರಲ್ಲಿ ನಾನು ಒಂದು ಕರುವನ್ನು ಕೊಂದು ತಿಂದಿದ್ದೇನೆ ಎಂದಿತು ಇನ್ನು 3 ಪ್ರಾಣಿಗಳು ಇದು ಅಂಥ ದೊಡ್ಡ ತಪ್ಪು ಏನೂ ಇಲ್ಲ ಎಂದು ಹುಲಿಗೆ ಹೆದರಿ ಹೇಳಿದವು ನಂತರ ಚಿರತೆ ಹೇಳಿತು.
ಚಿರತೆ ನಾನು ಕೂಡ ಒಂದು ತಪ್ಪನ್ನು ಮಾಡಿದ್ದೇನೆ ಒಬ್ಬ ಮುದುಕ ಕುರಿಮರಿಗಳನ್ನು ಕುರಿಗಳನ್ನು ಮೇಯಿಸುವುದಕ್ಕೆ ಊರಿನ ಆಚೆ ಬಂದಿದ್ದನ್ನು ನನಗೆ ಹೊಟ್ಟೆ ಹಸಿವು ಜಾಸ್ತಿ ಆದುದರಿಂದ ಆ ರೈತನಿಗೆ ಹೆದರಿಸಿದೆ ರೈತನು ಹೆದರಿ ಹೋದ ಒಂದು ಕುರಿ ಮರಿಯನ್ನು ತಿಂದೆ ಇದೂ ಕೂಡ ತಪ್ಪಲ್ಲ ಎಂದು ಒಪ್ಪಿದರು.
ನಾಯಿ ಹೇಳಿತು ನಾನು ಕೂಡ ಒಂದು ತಪ್ಪನ್ನು ಮಾಡಿದ್ದೇನೆ ಒಂದು ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು ಆ ಬೆಕ್ಕನ್ನು ನಾನು ಕೊಂದು ತಿಂದಿದ್ದೇನೆ ಎಂದಿತು ಇದು ಅಂತಹ ದೊಡ್ಡ ತಪ್ಪು ಏನೂ ಇಲ್ಲ ಎಂದು ಹುಲಿ ಮತ್ತು ಚಿರತೆ ಒಪ್ಪಿಕೊಂಡವು ಇದು ಮಾಡುವಂಥ ತಪ್ಪೇ ಎಂದು ತೀರ್ಮಾನವಾಯಿತು.
ನಿಧಾನವಾಗಿ ಕತ್ತೆ ಹೇಳಿತು ನನ್ನ ಯಜಮಾನ ನನಗೆ ಊರಿನ ಆಚೆ ಕರೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಚೆನ್ನಾಗಿರುವ ಹುಲ್ಲನ್ನು ತಿಂದೆ ಎಂದು ಹೇಳಿತು ಆಗ ಹುಲಿ ನಾಯಿ ಚಿರತೆ ಒಂದರ ಮುಖ ನೋಡಿಕೊಂಡು ಹುಲಿ ಹೇಳಿತು.
ನಿನ್ನದೇ ದೊಡ್ಡ ತಪ್ಪು ಹುಲ್ಲನ್ನು ಕೇಳದೆಯೇ ತಿಂದಿದ್ದೀಯಾ ಇದರಿಂದ ಭಗವಂತನಿಗೆ ಕೋಪ ಬಂದಿದೆ ನಿನ್ನದೇ ತಪ್ಪು ನೀನು ಬದುಕಿರಬಾರದು ಎಂದು ಮೂರೂ ಪ್ರಾಣಿಗಳು ಸೇರಿ ಕೊಂದು ತಿಂದವು. ನಾವು ಯಾರೊಂದಿಗೆ ಸ್ನೇಹ ಮಾಡಿದ್ದೇವೆ ಎಂದು ಅರಿತಿದ್ದೇವೆಯೇ?
ಸಾಧನೆಯಿಂದ ಮತ್ತೊಂದು ಸಾಧನೆ
ಮಹಾನ್ ಸಾಧಕರು ಬಹಳಷ್ಟು ಸಾಧನೆ ಮಾಡಿದ್ದರು ಸಾಧಕರಿಗೆ ಪತ್ರಕರ್ತರು ಹೋಗಿ ಮಾತನಾಡಿದರು ಬಹಳಷ್ಟು ಸಾಧನೆ ಮಾಡಿದ್ದೀರಿ ಎಂದು ಅಭಿನಂದಿಸಿದರು ಮತ್ತೆ ನಿಮ್ಮ ಸಾಧನೆ ಏನು ಎಂದು ಕೇಳಿದಾಗ ಅವರು ವಿವರಿಸಿದರು.
ನನಗೆ ಬೆಟ್ಟ ಹತ್ತುವುದು ಎಂದರೆ ತುಂಬಾ ಇಷ್ಟ ಅದಕ್ಕಾಗಿ ನಾನು ಬೆಟ್ಟವನ್ನು ಹತ್ತಿದೆ ತುಟ್ಟ ತುದಿಯಲ್ಲಿ ಇದ್ದಾಗ ನಿಮಗೆ ಏನು ಅನಿಸಿತು ಮೊದಲು ನಾನು ಈ ಬೆಟ್ಟ ಹತ್ತಲು ಸಾಧ್ಯವೇ ಎಂದು ಅನಿಸಿತು ಈ ಬೆಟ್ಟ ಹತ್ತಿದ ಮೇಲೆ ನನಗೆ ಮತ್ತೆ ಇದಕ್ಕಿಂತ ಬೇರೆ ಎತ್ತರವಾಗಿರುವ ಬೆಟ್ಟ ಯಾವುದು ಎಂದು ಯೋಚಿಸುತ್ತಿದೆ ಎಂದರು.
ಪತ್ರಕರ್ತರು ಒಂದು ಮಾತು ಹೇಳಿದರು ಅಲ್ಲ ಸ್ವಾಮಿ ಎಷ್ಟು ಕಷ್ಟ ಪಟ್ಟಿ ನೀವು ಬೆಟ್ಟವನ್ನು ಹತ್ತಿ ದ್ದೀರಾ ಆದರೆ ಅಲ್ಲಿ ಸ್ವಲ್ಪ ಹೊತ್ತು ಇದ್ದು ಸಂತೋಷದ ಕ್ಷಣಗಳನ್ನು ಅನುಭವಿಸಬೇಕು ಅಲ್ಲವೇ ಎಂದರು ಆದರೆ ನಾನು ಹಾಗೆ ಮಾಡಲಿಲ್ಲ ಗುರಿ ತಲುಪಿದ ಮೇಲೆ ಆನಂದದ ಕ್ಷಣಗಳು ಅನುಭವಿಸಲಿಲ್ಲ ಎಂದು ಹೇಳಿದರು.
ಇದು ಸಹಜವಾಗಿ ಎಲ್ಲರೂ ಮಾಡುವಂಥದ್ದೇ ಏನೋ ಕಷ್ಟಪಟ್ಟಿ ಮನೆಯನ್ನು ಕಟ್ಟುತ್ತಾರೆ ಅಥವಾ ಖರೀದಿಸುತ್ತಾರೆ ಆದರೆ ಅಲ್ಲಿ ಸಂತೋಷವಾಗಿ ಇರಲ್ಲ ಇನ್ನೇನೋ ಸಮಸ್ಯೆ ಬರೀ ಸಮಸ್ಯೆಯ ಬಗ್ಗೆ ಯೋಚಿಸುತ್ತಿದ್ದರೆ ಸಂತೋಷ ಯಾವಾಗ ಬಾಡಿಗೆ ಮನೆಯಲ್ಲಿ ಇದ್ದಾಗ (ಲೀಸ್) ಭೋಗ್ಯದ ಮನೆಗೆ ಹೋಗಬೇಕು ಎಂದು ಇಷ್ಟಪಡುತ್ತವೆ.
ಅಲ್ಲಿಯೂ ಸಂತೋಷವಾಗಿ ಇರುವುದಿಲ್ಲ ಸ್ವಂತ ಮನೆ ಎಂದು ಸ್ವಂತವಾಗಿ ಕಟ್ಟುತ್ತೇವೆ ಅಲ್ಲಿಯೂ ಕೂಡ ಸಂತೋಷವಾಗಿ ಇರುವುದಿಲ್ಲ ಯಾವ ಸಮಯದಲ್ಲಿ ಏನು ಇರುತ್ತದೋ ಅಷ್ಟರಲ್ಲಿಯೇ ಸಂತಸ ಪಟ್ಟು ತೃಪ್ತಿಯಿಂದ ಬದುಕೋಣ.
ಒಂದು ಹಿಡಿ ಅಕ್ಕಿ
ಒಂದು ಊರಿನಲ್ಲಿ ಒಂದು ಸುಸಂಕೃತ ಸಂಸಾರ ಇರುತ್ತದೆ ಗಂಡ ಹೆಂಡತಿ ಅತ್ತೆ ಮಾವ ನಾಲ್ಕು ಜನರು ಇರುತ್ತಾರೆ ಅತ್ತೆಯವರು ಸೊಸೆಗೆ ತನ್ನ ಮಗಳಿನಂತೆ ನೋಡಿಕೊಳ್ಳುತ್ತಾರೆ ಹಾಗೆಯೇ ಮಾವನವರು ಕೂಡ ತನ್ನ ಮಗಳಿನಂತೆಯೇ ನೋಡಿಕೊಳ್ಳುತ್ತಾರೆ.
ಕೆಲವು ವರ್ಷದ ನಂತರ ಅತ್ತೆಯವರು ತೀರಿಕೊಳ್ಳುತ್ತಾರೆ ನಂತರ ಮಾವನವರು ಕೂಡ ತೀರಿಕೊಳ್ಳುತ್ತಾರೆ ಇದರಿಂದ ಸೊಸೆಗೆ ತುಂಬಾ ಬೇಸರವಾಗುತ್ತದೆ. ಅತ್ತೆ ಮಾವ ಇಬ್ಬರು ದಿನನಿತ್ಯ ಒಂದು ಪುಸ್ತಕವನ್ನು ಓದುತ್ತಿರುತ್ತಾರೆ ಆ ಪುಸ್ತಕವನ್ನು ಸೊಸೆ ತುಂಬಾ ಜೋಪಾನವಾಗಿ ಇಟ್ಟುಕೊಂಡು ದಿನನಿತ್ಯ ಓದುತ್ತಿರುತ್ತಾಳೆ.
ಪ್ರಾರ್ಥನೆ ಮಾಡುವುದಕ್ಕಿಂತ ಮುಂಚೆ ಮನೆಯಲ್ಲಿ ಇದ್ದ ಒಂದು ಹಿಡಿ ಅಕ್ಕಿಯನ್ನು ಮನೆಯ ಮುಂದೆ ಹಾಕುತ್ತಾಳೆ ಪ್ರಾರ್ಥನೆ ಸಲ್ಲಿಸಿ ಹೋಗುತ್ತಾಳೆ ಹೀಗೆ ದಿನನಿತ್ಯ ಶ್ರದ್ಧೆ ಭಕ್ತಿಯಿಂದ ತನ್ನ ಕಾಯಕ ಮಾಡುತ್ತಿರುತ್ತಾಳೆ ಇದು ಗಂಡನಿಗೆ ತಿಳಿಯುವುದಿಲ್ಲ.
ನಂತರದ ದಿನಗಳಲ್ಲಿ ವ್ಯಾಪಾರ ಕಡಿಮೆಯಾಗಿದ್ದು ಮನೆಯಲ್ಲಿರುವ ಅಕ್ಕಿಯು ಕಡಿಮೆಯಾಗುತ್ತದೆ ಹೇಗೆ ಕಡಿಮೆ ಆಯಿತು ಎಂದು ಹೆಂಡತಿಗೆ ಕೇಳಿದಾಗ ಹೆಂಡತಿ ಪ್ರಾಮಾಣಿಕ ನಾನು ದಿನನಿತ್ಯ ಅತ್ತೆ ಮಾವ ಓದುತ್ತಿದ್ದ ಪುಸ್ತಕವನ್ನು ನಾನು ದಿನನಿತ್ಯ ಓದುತ್ತಿದ್ದೇನೆ ಪ್ರಾರ್ಥನೆಗೆ ಮುಂಚೆ ಒಂದು ಹಿಡಿ ಅಕ್ಕಿಯನ್ನು ಹಾಕುತ್ತಿದ್ದೇನೆ ಎಂದು ಹೇಳುತ್ತಾಳೆ.
ಗಂಡನಿಗೆ ಕೋಪ ಬರುತ್ತದೆ ಇರುವ ಅಕ್ಕಿಯನ್ನು ಹಾಳು ಮಾಡಿದ್ದೀಯ ಇದರಿಂದ ಈ ಪುಸ್ತಕವನ್ನು ಬಿಸಾಕು ಎಂದು ಹೇಳುತ್ತಾನೆ ಆದರೆ ಹೆಂಡತಿಗೆ ಈ ಪುಸ್ತಕ ಬಿಸಾಕಲು ಮನಸ್ಸು ಒಪ್ಪುವುದಿಲ್ಲ ಗಂಡನು ಹೇಳುತ್ತಾನೆ ಈ ಪುಸ್ತಕ ಹಿಡಿದುಕೊಂಡು ಆಚೆಗೆ ಬಾ ಎಂದು ಪುಸಲಾಯಿಸಿ ಕರೆಯುತ್ತಾನೆ ನಂತರ ಹೇಳುತ್ತಾನೆ ಪುಸ್ತಕ ಬಿಸಾಕಿ ಬಂದರೆ ಮಾತ್ರ ನಿನ್ನನ್ನು ಮನೆಗೆ ಸೇರಿಸಿಕೊಳ್ಳುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಬಾಗಿಲು ಹಾಕಿಕೊಳ್ಳುತ್ತಾನೆ.
ಪುಸ್ತಕವನ್ನು ಹಿಡಿದುಕೊಂಡು ನಿಧಾನವಾಗಿ ಯೋಚನೆ ಮಾಡುತ್ತಾಳೆ. ನನ್ನ ತವರು ಮನೆ ಸ್ವಲ್ಪ ದೂರದಲ್ಲಿಯೇ ಇದೆ ಹೋಗೋಣ ಎಂದು ಯೋಚನೆ ಮಾಡುತ್ತಾಳೆ ನಂತರ ಹೊರಡುತ್ತಾಳೆ ಸ್ವಲ್ಪ ದೂರ ಹೋದ ನಂತರ ಮತ್ತೆ ಯೋಚನೆ ಮಾಡುತ್ತಾಳೆ.
ನಾನು ತವರು ಹೋಗುವುದು ಸರಿ ಇಲ್ಲ ಎಂದು ಯೋಚನೆ ಮಾಡುತ್ತಿರುತ್ತಾಳೆ ನಂತರ ಕತ್ತಲಾಗುತ್ತದೆ ಅದಕ್ಕೆ ನಿಧಾನವಾಗಿ ಒಂದು ಮರದ ಮೇಲೆ ಕುಳಿತುಕೊಳ್ಳುತ್ತಾಳೆ ಇದೇ ಯೋಚನೆಯಲ್ಲಿ ಎಷ್ಟು ಸಮಯ ಕಳೆಯುತ್ತದೆ ತಿಳಿಯುವುದೇ ಇಲ್ಲ.
ಹಾಗಾಗಿ ಸರಿಯಾಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಕೈಯಿಂದ ಪುಸ್ತಕ ಬೀಳುತ್ತದೆ ಆಗ ಮರದ ಕೆಳಗೆಇದ್ದ ಕಳ್ಳರು ಎಲ್ಲಾ ಒಡವೆಗಳನ್ನು ಬಿಟ್ಟು ಓಡಿ ಹೋಗುತ್ತಾರೆ ನನ್ನ ಪುಸ್ತಕ ಎಂದು ನಿಧಾನವಾಗಿ ಮರದಿಂದ ಇಳಿದು ನೋಡಿದರೆ ಬಹಳಷ್ಟು ಆಭರಣಗಳು ಹಣ ಇರುತ್ತದೆ.
ಆಭರಣಗಳನ್ನು ಹಣವನ್ನು ತೆಗೆದುಕೊಂಡು ನೇರವಾಗಿ ಬೆಳಿಗ್ಗೆ ಮನೆಗೆ ಬರುತ್ತಾಳೆ ಬಾಗಿಲನ್ನು ಬಡಿಯುತ್ತಾಳೆ ನಿಧಾನವಾಗಿ ಕಣ್ಣು ತೆರೆದು ನೋಡಿದಾಗ ಒಡವೆ ಬಂಗಾರ ಎಲ್ಲ ಇರುತ್ತದೆ ಇದನ್ನು ನೋಡಿ ಗಂಡ ಗಾಬರಿಯಾಗುತ್ತಾನೆ ಏನಾಯಿತು ಎಂದು ಕೇಳಿದಾಗ ನಡೆದ ಕಥೆ ಹೇಳುತ್ತಾಳೆ ಆಗ ಗಂಡನ್ನು ಸುಮ್ಮನಾಗುತ್ತಾನೆ.
ಈ ಪುಸ್ತಕದಿಂದಲೇ ನಮಗೆಷ್ಟು ಬಂದಿದೆ ಆದುದರಿಂದ ಈ ಪುಸ್ತಕಕ್ಕೆ ನಾನು ದಿನನಿತ್ಯ ಓದುತ್ತೇನೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದಾಗ ಗಂಡನಾದವನು ನಿನ್ನ ನಂಬಿಕೆ ನಿನಗೆ ಇರಲಿ ಎಂದು ಸುಮ್ಮನಾಗುತ್ತಾನೆ ಅಚಲವಾಗಿ ನಂಬಿದಾಗ ಚಮತ್ಕಾರವಾಗುತ್ತದೆ. ನಾನು ಯಾವುದನ್ನು ಅಚಲವಾಗಿ ನಂಬಿ ಗುರಿಯನ್ನು ಸಾಧಿಸಿದ್ದೇನೆ?
ನನಗೆ ಶಾಂತಿ ನೆಮ್ಮದಿ ಬೇಕು
ಹಲವಾರು ವರ್ಷಗಳ ಹಿಂದೆ ಒಂದು ಊರಿನಲ್ಲಿ ಒಂದು ಬೃಹತ್ತಾದ ಮಾವಿನ ಮರವಿತ್ತು ಆ ಮರದ ಕೆಳಗೆ ಒಂದು ಹುಡುಗ ದಿನನಿತ್ಯವೂ ಬಂದು ಆಟ ಆಡಿ ಸಮಯ ಕಳೆಯುತ್ತಿದ್ದ ಮತ್ತೆ ಹಸಿವಾದಾಗ ಮರದ ಮೇಲೆ ಹತ್ತಿ ಮಾವಿನ ಕಾಯಿಗಳನ್ನು ಮಾವಿನ ಹಣ್ಣುಗಳನ್ನು ಕಿತ್ತುಕೊಂಡು ತಿಂದು ಖುಷಿ ಪಡುತ್ತಿದ್ದನು.
ಮರವು ಕೂಡಾ ಹುಡುಗನಿಂದ ತುಂಬಾ ಸಂತೋಷ ಪಡುತ್ತಿತ್ತು ಹುಡುಗ ದೊಡ್ಡವನಾದ ಮೇಲೆ ಮರದ ಬಳಿ ಹೋಗುವುದಕ್ಕೂ ಅಷ್ಟು ಮನಸ್ಸಾಗುತ್ತಿರಲಿಲ್ಲ ಏಕೆಂದರೆ ಇವನ ಹವ್ಯಾಸಗಳೇ ಬೇರೆಯಾದವು ಆದರೆ ಮರದ ಕೆಳಗೆ ಹುಡುಗ ಬಂದಾಗ ಮರಕ್ಕೆ ತುಂಬಾ ಸಂತೋಷವಾಗುತ್ತಿತ್ತು.
ಹಲವಾರು ದಿನಗಳ ನಂತರ ಮತ್ತೆ ಹುಡುಗ ಬಂದನು ಬಂದಾಗ ಸ್ವಲ್ಪ ದುಃಖದಲ್ಲಿದ್ದಂತೆ ಮರಕ್ಕೆ ಕಂಡಿತು ಆಗ ಮರ ಕೇಳಿತು ಏಕೆ ದುಃಖವಾಗಿ ಇದ್ದೀಯಾ ಎಂದಾಗ ಹುಡುಗ ಹೇಳಿದ ನನಗೆ ಆಟ ಆಡಲಿಕ್ಕೆ ಬೇರೆ ಆಟದ ವಸ್ತುಗಳು ಬೇಕು ಅದಕ್ಕೆ ಹಣವಿಲ್ಲ ಆದುದರಿಂದ ನಾನು ದುಃಖದಲ್ಲಿದ್ದೇನೆ ಎಂದನು.
ಮರ ಹೇಳಿತು ಅಷ್ಟಕ್ಕೂ ಯಾಕೆ ಚಿಂತೆ ಮಾಡ್ತಿಯಾ ಮರದಲ್ಲಿರುವ ಹಣ್ಣುಗಳನ್ನು ಕಿತ್ತು ಬೇರೆಯವರಿಗೆ ಮಾರಿದರೆ ಹಣ ಬರುತ್ತದೆ ಆದ್ದರಿಂದ ನೀನು ಬೇಕಾದ್ದನ್ನು ಖರೀದಿಸಬಹುದು ಎಂದು ಮರ ಉಪಾಯ ಹೇಳಿತ್ತು ನಂತರ ಹುಡುಗನು ಹಣ್ಣುಗಳನ್ನು ಕಿತ್ತುಕೊಂಡು ಸಂತೋಷದಿಂದ ಹೊರಟನು.
ಮತ್ತೆ ಹಲವಾರು ವರ್ಷಗಳವರೆಗೆ ಹುಡುಗ ಮರದ ಹತ್ತಿರ ಬರಲೇ ಇಲ್ಲ ಈಗ ಅವನು ತರುಣನಾಗಿದ್ದ ಆಗ ಬಾ ಆಟ ಆಡು ಎಂದು ಹೇಳಿದಾಗ ಯುವಕ ಧಿಮಾಕಿನಿಂದ ಹೇಳಿದ ನಾನೇನು ಚಿಕ್ಕ ಹುಡುಗನೇ ಮರಹತ್ತಿ ಆಟವಾಡಲು ನನ್ನ ಕಷ್ಟಗಳು ನನಗೆ ಬೇಕಾದಷ್ಟು ಇದೆ ತುಂಬಾ ತೊಂದರೆಯಲ್ಲಿದ್ದೀನಿ ಎಂದು ಹೇಳಿದ.
ನಾನು ಈಗ ಮದುವೆ ಯಾಗಬೇಕು ಅದಕ್ಕಾಗಿ ಒಂದು ಮನೆ ಬೇಕು ಅದಕ್ಕಾಗಿ ಹಣ ಬೇಕು ಎಂದು ತನ್ನ ಸಂಕಟ ಹೇಳಿದನು ಆಗ ಮರ ಹೇಳಿತು ಯಾಕೆ ಚಿಂತೆ ಮಾಡ್ತಿಯಾ ನನ್ನ ಎಲ್ಲಾ ಕೊಂಬೆಗಳನ್ನು ಕಡಿದು ಮಾರಿದರೆ ಅದರಲ್ಲಿ ನಿನಗೆ ಬೇಕಾದಷ್ಟು ಹಣ ಸಿಗುತ್ತದೆ ಎಂದು ಹೇಳಿತ್ತು.
ಯುವಕನು ಕೊಂಬೆಗಳನ್ನು ಕತ್ತರಿಸಿ ಗಾಡಿಗಳಲ್ಲಿ ಹಾಕಿಕೊಂಡು ಸಂತೋಷದಿಂದ ಹೋದನು ಮರಕ್ಕೆ ಸಂತೋಷವಾಯ್ತು. ಮತ್ತೆ ಕೆಲವು ವರ್ಷಗಳು ಉರುಳಿದವು ಆ ಬೃಹತ್ ಮರ ಮಾತ್ರ ತನ್ನ ಕೊಂಬೆಗಳನ್ನು ಕಳೆದುಕೊಂಡು ಹುಡುಗನಿಗೆ ಕಾಯುತ್ತಲೇ ಇತ್ತು.
ಮತ್ತೆ ಹುಡುಗ ಈಗ ಮಧ್ಯ ವಯಸ್ಕನಾಗಿದ್ದನು ಮರವು ಸಂತೋಷದಿಂದ ಬರಮಾಡಿಕೊಂಡಿತು ನೀನು ಹೇಗಿದ್ದೀಯಾ ಎಂದು ಕುಶಲೊಪರಿ ವಿಚಾರಿಸಿ ಅಯ್ಯೋ ನಾನೇನು ಹೇಳಲಿ ನಾನು ಸಂಸಾರದಿಂದ ಬೇಸತ್ತು ಹೋಗಿದ್ದೇನೆ ನನ್ನ ಮಕ್ಕಳಿಗೆ ಸಾಕಬೇಕು ಹೆಂಡತಿಯನ್ನು ನೋಡಬೇಕು ನನ್ನ ಖರ್ಚು ಹೆಚ್ಚಾಗಿದೆ ಎಷ್ಟು ದುಡಿದರೂ ಹಣವೇ ಸಾಕಾಗುತ್ತಿಲ್ಲ ಬದುಕಿ ಬೇಸರವಾಗಿದೆ.
ಸದ್ಯಕ್ಕೆ ನನಗೆ ನಾನು ಮಾಡುತ್ತಿರುವ ಕೆಲಸ ಮಾಡಲು ಸಾಧ್ಯವಿಲ್ಲ ಬೇರೆ ಯಾವುದಾದರೂ ಉದ್ಯೋಗ ಮಾಡಬೇಕು ಅದಕ್ಕೆ ಹಣ ಬೇಕು ಎಂದನು ಆಗ ಆ ಬೃಹತ್ ಮರ ಹೇಳಿತು ಈಗ ನನ್ನ ಹತ್ರ ಏನೂ ಉಳಿದಿಲ್ಲ ಉಳಿದಿರುವುದು ನನ್ನ ಕಾಂಡ ಮಾತ್ರ ನನ್ನ ಕಾಂಡವನ್ನು ಪೂರ್ತಿಯಾಗಿ ಕತ್ತರಿಸಿ ಮಾರು ನಿನಗೆ ಅದರಲ್ಲಿ ಹಣ ಬರುತ್ತದೆ ಎಂದು ಹೇಳಿತು.
ಕಾಂಡವನ್ನು ಕತ್ತರಿಸಿಕೊಂಡು ಸಂತೋಷದಿಂದ ಹೋದ ಆದರೂ ಬೃಹತ್ ಮರ ಈಗ ಬರೀ ಬೇರುಗಳಾಗಿ ಇದೆ ಅಷ್ಟೆ ಆದರೂ ಹುಡುಗ ಬಂದರೆ ನೋಡಬಹುದು ಎನ್ನುವ ಆಸೆ ಮರಕ್ಕೆ ಹಲವಾರು ವರ್ಷಗಳ ನಂತರ ಮುದುಕನಾಗಿ ಬಂದ ಮರದ ಬೇರುಗಳು ತುಂಬಾ ಸಂಕಟ ಪಟ್ಟಿತು.
ಮರಕ್ಕೆ ಸಂಕಟವಾಯಿತು ಈಗ ನನ್ನ ಹತ್ತಿರ ಏನೂ ಇಲ್ಲ ನಿನಗೆ ಏನಾದರೂ ಕೊಡಲು ಮನಸ್ಸು ತವಕಿಸುತ್ತಿದೆ ಎಂದು ಹೇಳಿ ಮರ ಕಣ್ಣೀರು ಹಾಕಿತು ಆಗ ಮುದುಕನು ಹೇಳಿದ ಈಗ ನನಗೆ ಜೀವನ ಸಾಕಾಗಿ ಹೋಗಿದೆ ನನಗೆ ಶಾಂತಿ ನೆಮ್ಮದಿ ಬೇಕು ಅದಕ್ಕಾಗಿ ಬಂದಿದ್ದೇನೆ ಎನ್ನುತ್ತಾನೆ ಆಗ ಇರುವ ಬೇರುಗಳು ಹೇಳುತ್ತೆ ನಿನ್ನ ತಲೆಯನ್ನು ದಿಂಬಿನಂತೆ ಮಾಡಿ ಮಲಗು ನಾನು ನಿನ್ನ ತಲೆ ಸವರುತ್ತ ಇರುತ್ತೇನೆ.
ನೀನು ಹಾಯಾಗಿ ಮಲಗಬಹುದು ಎಂದಾಗ ಮುದುಕನು ಮಲಗಿದ ಮರ ಸಂತೋಷಪಟ್ಟಿತು ಇಷ್ಟಾದರೂ ನಾನು ಪ್ರಯೋಜನವಾಗಿದ್ದೇನೆ ಎಂದು ಮರವು ತೃಪ್ತಿಪಟ್ಟಿತು ಸಾಧಾರಣವಾಗಿ ನಮ್ಮ ಬದುಕು ಕೂಡ ಈ ರೀತಿಯಲ್ಲೇ ಸಾಗುತ್ತದೆ.
ನಮ್ಮ ಪೋಷಕರು ತಂದೆ ತಾಯಿಗಳು ನಮಗೆ ಚಿಕ್ಕವರಿದ್ದಾಗ ಆಟದ ವಸ್ತುಗಳನ್ನು ನಂತರ ಓದಬೇಕಾದರೆ ಫೀಸನ್ನು ಕಟ್ಟಿ ನಂತರ ನಮಗೆ ಏನೇನು ಬೇಕೋ ಅದೆಲ್ಲವನ್ನೂ ಧಾರೆಯೆರೆಯುತ್ತಾರೆ ನಾವು ಅವರಿಂದ ಪಡೆಯುತ್ತಲೇ ಇರುತ್ತೇವೆ ಆದರೆ ಪಡೆದುದು ಮರೆತು ಬಿಡುತ್ತೇವೆ ಆದರೆ ತಂದೆ ತಾಯಿಯರು ಮಾತ್ರ ಯಾವಾಗಲೂ ಕೊಡಲಿಕ್ಕೆ ಸಿದ್ಧವಾಗಿರುತ್ತಾರೆ. ನನಗಾಗಿ ಸಾಕಿದವರು ಇತರರು ಬಹಳಷ್ಟು ತ್ಯಾಗ ಮಾಡಿದ್ದಾರೆ ನಾನು ಅವರಿಗಾಗಿ ಎಷ್ಟು ತ್ಯಾಗ ಮಾಡಿದ್ದೇನೆ?