ನಿಲೋತ್ಕಲ್ ತರುಣನಿದ್ದನು ಅವನು ತುಂಬ ಶ್ರೀಮಂತ ವ್ಯಕ್ತಿಯ ಮಗ ಅವರ ಹಲವಾರು ವ್ಯಾಪಾರಗಳು ಇದ್ದವು ತರುಣನಿಗೆ ಯಾವುದೇ ಕೆಲಸ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಏನೇ ಹೇಳಿದರೂ ಎಲ್ಲರೂ ಕೆಲಸ ಮಾಡಿ ಕೊಡುತ್ತಿದ್ದರು ಬಹಳಷ್ಟು ಸೇವಕರು ಕೂಡಾ ಇದ್ದರು.
ಕೆಲವು ದಿನಗಳಲ್ಲಿ ತಂದೆ ತೀರಿಕೊಂಡರು ನಂತರ ಶ್ರೀಮಂತರ ವ್ಯವಹಾರ ತರುಣನೆ ಸಂಭಾಳಿಸಬೇಕಾಗಿತ್ತು ಆದರೆ ಬರ್ತಾ ಬರ್ತಾ ವ್ಯವಹಾರ ಸರಿಯಾಗಿ ನಡೆಯುತ್ತಿರಲಿಲ್ಲ ಮತ್ತೆ ಈ ತರುಣನಿಗೆ ಅಹಂಕಾರ ದರ್ಪ ಎಲ್ಲರನ್ನು ಕೀಳಾಗಿ ನೋಡುವ ಸ್ವಭಾವವಿತ್ತು ನಂತರ ತರುಣನು ಏನಾದರೂ ಮಾಡಿ ವ್ಯವಹಾರವನ್ನು ಸರಿಪಡಿಸಬೇಕು ಎಂದು ಚಿಂತಿಸುತ್ತಿದ್ದಾಗ ಯಾರೋ ಅವನಿಗೆ ಸಲಹೆ ನೀಡಿದರು.
ಊರಿನ ಆಚೆ ಒಂದು ಆಶ್ರಮ ಇದೆ ಅಲ್ಲಿ ಬಾಬಾ ಅವರು ಇದ್ದಾರೆ ಅವರನ್ನು ಭೇಟಿಯಾದರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಎಂದು ಸೂಚಿಸಿದರು ಅದಕ್ಕೆ ತರುಣನು ಅದೇ ರೀತಿ ಊರಿನಿಂದಾಚೆಗೆ ಹುಡುಕಿಕೊಂಡು ಹೋದನು ಸುಮಾರು ದೂರ ನಡೆದ ಮೇಲೆ ಒಂದು ಆಶ್ರಮ ಕಂಡಿತು ಇದೇ ಆಶ್ರಮವೆಂದು ಆಶ್ರಮದ ಹತ್ತಿರ ಹೋದನು ಅಲ್ಲಿ ಹಿರಿಯ ವ್ಯಕ್ತಿ ಕಸವನ್ನು ಗುಡಿಸುತ್ತಿದ್ದರು.
ಹಿರಿಯ ವ್ಯಕ್ತಿಯವರ ಬಟ್ಟೆ ಸಾಧಾರಣವಾಗಿತ್ತು ಆಗ ಆ ತರುಣನು ಏ ಕೆಲಸದವನೇ ಎಲ್ಲಿ ಮಹಾತ್ಮರು ಎಂದು ಗರ್ವದಿಂದ ಕೇಳಿದನು ಇದನ್ನು ಅರ್ಥಮಾಡಿಕೊಂಡು ಹಿರಿಯರು ಒಳಗೇ ಇದ್ದಾರೆ ಎಂದು ಹೇಳಿದರು ನಾನು ಅವರನ್ನು ಕಾಣಬೇಕು ಎಂದು ಮೆಲು ಧ್ವನಿಯಲ್ಲಿ ಹೇಳಿದನು.
ಹಿರಿಯ ವ್ಯಕ್ತಿ ಆಗಲಿ ಮಹಾಸ್ವಾಮಿಗಳೇ ಎಂದು ವಿನಯವಾಗಿ ಹೇಳಿದರು ಮತ್ತೆ ಆದಷ್ಟು ನಿಮ್ಮ ಕೋಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಎಂದು ಹಿರಿಯ ವ್ಯಕ್ತಿ ಹೇಳಿದರು ಆಶ್ರಮದ ಒಳಗೆ ಬಂದರು ನಿಮ್ಮ ವ್ಯವಹಾರ ಹೇಗೆ ನಡೆಯುತ್ತಿದೆ ಏನೇನು ಸಮಸ್ಯೆ ಇದೆ ಎಂದು ಎಲ್ಲವೂ ವಿಚಾರಿಸಿದರು ಆದರೆ ಈ ತರುಣನು ಎಲ್ಲಾ ವಿಚಾರಗಳನ್ನು ಗತ್ತಿನಿಂದ ಹೇಳುತ್ತಿದ್ದನು.
ಕೊನೆಗೆ ತರುಣನಿಗೆ ಕೋಪ ಬಂತು ದರ್ಶನ ಮಾಡಿಸು ನೀನೇ ಎಲ್ಲಾ ಕೇಳುತ್ತಿದ್ದೀಯಾ ಎಂದು ಗದರಿಸಿದನು ಅಷ್ಟರಲ್ಲಿ ಹಿರಿಯ ವ್ಯಕ್ತಿ ಆಶ್ರಮದ ಮುಖ್ಯ ಸಭಾಂಗಣಕ್ಕೆ ಬಂದರು ನಂತರ ಹೇಳಿದರು ಈಗ ನೀನು ಇಲ್ಲಿಂದ ಹೋಗಬಹುದು ಎಂದು ಹಿರಿಯ ವ್ಯಕ್ತಿ ಹೇಳಿದರು ಆಗ ತರುಣನು ನೀನು ಮಹಾತ್ಮರ ದರ್ಶನ ಮಾಡಿಸಲಿಲ್ಲ ಎಂದು ಕೇಳಿದನು.
ಎಲ್ಲರೂ ಮಹಾತ್ಮರೇ ಇರಬೇಕು ಎಂದು ಏನೂ ಇಲ್ಲ ವೇಷ ಧರಿಸಿ ಬಂದಿದ್ದರು ವೇಷ ಧರಿಸದೆ ಬಂದಿದ್ದರು ಸಾಮಾನ್ಯ ಜನರನ್ನು ಮಹಾತ್ಮರಂತೆ ನೋಡಿದರೆ ಸಾಕು ನಮ್ಮ ವ್ಯವಹಾರ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದರು.
ಈ ಆಶ್ರಮದಲ್ಲಿ ಇರುವವನು ನಾನೇ ಇತರರು ನನಗೆ ಬೇರೆ ಬೇರೆ ಗುರು, ಮಹಾತ್ಮ ಬಾಬಾ ಏನೇನೋ ಹೆಸರಿಂದ ಕರೆಯುತ್ತಾರೆ ಎಂದು ಹೇಳಿದರು ಆಗ ಹಿರಿಯ ವ್ಯಕ್ತಿ ಸಾಧ್ಯವಾದಷ್ಟು ನಿನ್ನ ಪ್ರಶ್ನೆಗಳಿಗೆ ನಾನು ಉತ್ತರವನ್ನು ಕೊಟ್ಟಿದ್ದೇನೆ ಆಗ ತರುಣ ಆಶ್ಚರ್ಯದಿಂದ ಕುಸಿದನು ನಿನಗೆ ಒಳ್ಳೆಯದಾಗಲಿ ಹೋಗಿ ಬಾ ಎಂದು ಆಶೀರ್ವದಿಸಿದರು.
ಯಾವುದೋ ಊರಿಗೆ ಹೋಗಬೇಕು ಎಂದರೆ ಮಹಾತ್ಮರೇ ದಾರಿ ತೋರಿಸಬೇಕು ಎಂದು ಏನೆಲ್ಲ ಯಾರು ಬೇಕಾದರೂ ದಾರಿ ತೋರಿಸಬಹುದಾಗಿದೆ ನಾವು ಕೂಡ ಯಾರನ್ನೇ ನೋಡಿದರೂ ಅವರನ್ನು ಗೌರವದಿಂದ ನೋಡುವ ಗುಣ ಬೆಳೆಸಿಕೊಳ್ಳೋಣ. ನಾನು ಇತರರಿಗೆ ಗೌರವಿಸುತ್ತೇನೆಯೇ?
ಕೆಲವು ಕ್ಷಣಗಳು ಬದುಕಿರುತ್ತೇನೆ
ಒಂದು ಊರಿನಲ್ಲಿ ಒಂದು ಶ್ರೀಮಂತರ ಮನೆ ಇತ್ತು ಆ ಮನೆಯಲ್ಲಿ ಕೋಹಲ್ ಚಿಕ್ಕಹುಡುಗನಿಗೆ ಯಾವುದೂ ಕಾಯಿಲೆಯಿಂದಾಗಿ ಬಲಗಾಲು ಸ್ವಾಧೀನದಲ್ಲಿ ಇರಲಿಲ್ಲ ಆದುದರಿಂದ ಅವನು ಅಲ್ಲಿ ಇಲ್ಲಿ ಓಡಾಡಬೇಕಾದರೆ ಗಾಲಿ ಕುರ್ಚಿಯ ಮೇಲೆ ಕುಳಿತು ಓಡಾಡುತ್ತಿದ್ದನು.
ಮನೆಯಲ್ಲಿ ಇವನಿಗಾಗಿ ನೋಡಿಕೊಳ್ಳುವವರು ಇದ್ದರು ಹಾಗೆಯೇ ತಂದೆ ತಾಯಿ ಇಬ್ಬರೂ ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಇವನಿಗೆ ಖುಷಿ ಕೊಡುವ ಸ್ಥಳವೆಂದರೆ ಮನೆಯ ಕೊನೆಯ ಕಿಟಕಿ ಬಳಿ ಕುಳಿತು ಮಕ್ಕಳು ಆಡುತ್ತಿರುವುದನ್ನು ನೋಡಿ ಸಂತೋಷಪಡುವುದು.
ಕೆಲವು ಸಾರಿ ನಾನು ಅದೇ ರೀತಿ ಆಡುವುದಕ್ಕೆ ನಡೆಯುವುದಕ್ಕೆ ಓಡುವುದಕ್ಕೆ ಆಗಲಿಲ್ಲವಲ್ಲ ಎಂದು ತನ್ನ ಬಗ್ಗೆ ಕೀಳರಿಮೆ, ಹತಾಶೆ, ಕೋಪ, ದುಃಖ. ಉಲ್ಬಣಗೊಳ್ಳುತ್ತಿತ್ತು ಒಂದು ದಿನ ಇವನು ನೋಡುತ್ತಿದ್ದಂತೆಯೇ ಕಾಮನಬಿಲ್ಲು ಬಂತು ಸ್ವಲ್ಪ ಸಮಯ ಇದ್ದು ಮಾಯವಾಯ್ತು.
ತಂದೆಗೆ ಕೇಳಿದನು ಕಾಮನಬಿಲ್ಲು ಬಂದದ್ದು ಹೇಗೆ ಎಲ್ಲಿ ಹೋಯಿತು ಎಂದಾಗ ತಂದೆಯವರು ಒಂದೇ ಸಮಯದಲ್ಲಿ ಮಳೆ ಮತ್ತು ಸೂರ್ಯನ ಬೆಳಕು ಸೇರಿದಾಗ ಕಾಮನಬಿಲ್ಲು ಉದ್ಭವವಾಗುತ್ತದೆ ಎಂದರು ನಂತರ ಹೀಗೆ ಮನೆ ಯವರೆಲ್ಲರೂ ಪ್ರವಾಸಕ್ಕೆ ಹೋಗಿದ್ದರು.
ಒಂದು ದೊಡ್ಡದಾದ ಮೈದಾನದಲ್ಲಿ ಇದ್ದರು ಆಗಲೂ ಇದೇ ರೀತಿಯ ಕಾಮನಬಿಲ್ಲು ನೋಡಿದನು ಆಗ ಇವನ ಸಂತೋಷ ಇಮ್ಮಡಿಯಾಯ್ತು ಹುಡುಗನು ವಿಸ್ಮಯ ವಾಗಿರುವ ಕಾಮನಬಿಲ್ಲೇ ನೀನು ಇಷ್ಟು ಸುಂದರವಾಗಿ ಹೊಳೆಯುತ್ತಿದ್ದೀಯಾ ಇದರ ರಹಸ್ಯವೇನು ಎಂದು ಕೇಳಿದನು.
ಕಾಮನಬಿಲ್ಲು ಹುಡುಗನಿಗೆ ಉತ್ತರ ಕೊಟ್ಟಿತು ನಾನು ಇರುವುದೇ ಕೆಲವು ನಿಮಿಷಗಳು ಅಥವಾ ಕೆಲವು ಕ್ಷಣಗಳು ಬದುಕಿರುತ್ತೇನೆ ಎಂಬ ಅರಿವು ನನಗೆ ಇದೆ ನಾನು ಹೆಚ್ಚಾಗಿ ಚಿಂತೆ ಮಾಡುವುದಿಲ್ಲ ಇದ್ದಷ್ಟು ಸಮಯ ನಾನು ಇತರರಿಗೆ ಹೆಚ್ಚು ಸಂತೋಷ ಸಂತೃಪ್ತಿ ನೀಡಲು ಬಯಸುತ್ತೇನೆ ಎಂದು ಮಾಯವಾಯಿತು.
ಆಗ ಹುಡುಗನಿಗೆ ಜ್ಞಾನೋದಯವಾಯ್ತು ನಾನು ಹೇಗಿದ್ದೇನೆ ಎಷ್ಟು ಕಾಲ ಇರುತ್ತೇನೆ ಎಂದು ಕೊರಗುವ ಬದಲು ಇರುವಷ್ಟು ದಿನ ನನ್ನ ಸುತ್ತಮುತ್ತ ಇರುವವರಿಗೆ ಖುಷಿ ನೀಡುತ್ತೇನೆ ಎಂದು ಬದುಕಿದನು. ಬದುಕಿರುವವರೆಗೂ ನಾವು ಖುಷಿಯಾಗಿದ್ದು ಇತರಿಗೂ ಖುಷಿ ನೀಡೋಣ.
ನಿನ್ನ ನೆರಳೇ ನಿನಗೆ
ಒಂದು ಊರಿನಲ್ಲಿ ಒಬ್ಬ ದಯಾಳು ದಿಲಾವರ್ ಶ್ರೀಮಂತ ಇದ್ದನು ಆದರೆ ಹೆಂಡತಿ ಅಂಗೂರಿ ಮಾತ್ರ ತುಂಬಾ ಜಿಪುಣಿ ಯಾಗಿದ್ದಳು.
ಹೆಂಡತಿ ಬೇರೆಯವರಿಗೆ ಯಾವುದೇ ರೀತಿಯ ಸಹಾಯ ಮಾಡಲು ಇಚ್ಛಿಸುತ್ತಿರಲಿಲ್ಲ ಗಂಡ ಹೇಗಾದರೂ ಮಾಡಿ ಇವಳಿಗೆ ಅರ್ಥಮಾಡಿಸಬೇಕು ಎಂದು ಯೋಚಿಸಿದನು. ಪಕ್ಕದ ಊರಿನಲ್ಲಿ ಯಾವುದೋ ಒಂದು ಸಮಾರಂಭಕ್ಕೆ ಆಮಂತ್ರಣ ನೀಡಿದ್ದರು ಆದುದರಿಂದ ಗಂಡ ಹೇಳಿದನು.
ನಾವು ನಡೆದುಕೊಂಡು ಹೋದರೆ ನಮಗೆ ಹಣ ಉಳಿತಾಯವಾಗುತ್ತದೆ ಎಂದನು ಆಗ ಹೆಂಡತಿ ಹೌದು ನಡೆಯುತ್ತಾ ಹೋಗೋಣ ಎಂದು ಉತ್ಸಾಹದಿಂದ ಹೇಳಿದಳು. ಸ್ವಲ್ಪ ದೂರ ನಡೆದಳು ಹಾಗೆಯೇ ಬಿಸಿಲಿನ ತಾಪ ಹೆಚ್ಚಾಗಿತ್ತು ಮುಂದೆ ಇವಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಸುಸ್ತಾಗಿ ಕುಳಿತಳು ಆಯಾಸವಾಗುತ್ತಿದೆ ಎಂದು ಹೇಳಿದಳು.
ಆಗ ಗಂಡ ಹೇಳಿದನು ನಿನ್ನ ನೆರಳಿನ ಸಹಾಯ ತೆಗೆದುಕೋ ಆಗ ಸುಡುವುದು ಕಡಿಮೆಯಾಗುತ್ತದೆ ಎಂದನು ನನ್ನ ನೆರಳಿನ ಮೇಲೆ ನಾನು ಹೇಗೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ಕೋಪದಿಂದ ಹೆಂಡತಿ ರೇಗಿದಳು.
ಗಂಡನು ವಿನಯವಾಗಿ ನಿನ್ನ ನೆರಳೆ ನಿನಗೆ ಸಹಾಯ ಮಾಡದಿದ್ದರೆ ನೀನು ಮನೆಯಲ್ಲಿ ಮಡಗಿರುವ ಹಣ ಯಾವ ರೀತಿ ನಿನಗೆ ಸಹಾಯವಾಗುತ್ತದೆ ಎಂದು ಕೇಳಿದನು ನಂತರ ಹೆಂಡತಿಗೆ ಅರ್ಥವಾಯಿತು ನಂತರ ಅವಳು ಕೂಡ ಗಂಡನಂತೆ ದಾನ ಧರ್ಮ ಮಾಡಲು ಮುಂದಾದಳು.
ಹೋರಾಟ ಮಾಡುವುದಿಲ್ಲ
ದೀಪಾಂಕರ್ ಸಂಸಾರದ ತಾಪತ್ರಯದಿಂದ ಬೇಸತ್ತು ಬಾಬಾ ಅವರಿಗೆ ಸಂಪರ್ಕಿಸುತ್ತಾನೆ ತನ್ನ ಕಷ್ಟಗಳೆಲ್ಲವೂ ಹೇಳಿಕೊಳ್ಳುತ್ತಾನೆ ಬಾಬಾ ಅವರು ಎಲ್ಲವನ್ನೂ ಕೇಳಿದ ನಂತರ ಹೇಳುತ್ತಾರೆ.
ನೀನು ಹೆಬ್ಬಾವು ನೋಡಿದ್ದೀಯಾ ಹೌದು ಎಂದು ಹೇಳುತ್ತಾನೆ ಹೆಬ್ಬಾವು ಜಾಸ್ತಿ ಹೋರಾಟ ಮಾಡುವುದಿಲ್ಲ ತನ್ನ ಬಳಿ ಯಾವ ಪ್ರಾಣಿಗಳು ಬಂದು ಸಿಕ್ಕಿಬೀಳುತ್ತವೆ ಅದನ್ನೇ ತಿಂದು ತೃಪ್ತಿಯಾಗಿರುತ್ತದೆ ಅದರಂತೆಯೇ ನಾವು ಕೂಡ ನಮ್ಮ ಪಾಲಿಗೆ ಬಂದದ್ದನ್ನು ಸ್ವೀಕರಿಸುತ್ತಾ ಮುನ್ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ.
ಸಂಸಾರಿಗೆ ಅರಿವಾಗುತ್ತದೆ ಕೆಲವೊಂದು ಸಾರಿ ನಾವು ಬಹಳಷ್ಟು ಶ್ರಮಪಟ್ಟರು ಅದು ಸಿಗುವುದಿಲ್ಲ ನಮಗೆ ಬೇಡ ಬೇಡ ಎಂದರೂ ಅದೇ ಸಿಗುತ್ತಿರುತ್ತದೆ.
ತಕ್ಷಣಕ್ಕೆ ನಮ್ಮ ಪಾಲಿಗೆ ಏನು ಬರುತ್ತದೋ ಅದನ್ನು ಇದ್ದಂತೆ ಅನುಭವಿಸುವುದು ಒಳ್ಳೆಯದು ಎಂದಾಗ ಸಂಸಾರಿಯೂ ಅರ್ಥಮಾಡಿಕೊಂಡನು.
ಇತರರನ್ನು ಟೀಕಿಸುವುದು ಸುಲಭ
ಬಲ್ಬೀರ್ ಯುವಕ ಹಳ್ಳಿಯಲ್ಲಿ ಇದ್ದನು ನಂತರ ಅವನಿಗೆ ನಾನು ಏನಾದರೂ ಸಾಧನೆ ಮಾಡಬೇಕು ಎಂದು ತಂದೆ ತಾಯಿಯರ ಆಶೀರ್ವಾದ ಪಡೆದು ನಗರಕ್ಕೆ ಬಂದನು ಅವನಿಗೆ ಆಸಕ್ತಿ ಇದ್ದಿತು ಚಿತ್ರ ಬರೆಯುವುದರಲ್ಲಿ ಹಾಗಾಗಿ ಯುವಕನು ಪ್ರಸಿದ್ಧ ಚಿತ್ರಕಾರರ ಬಳಿ ಹೋಗಿ ಕೆಲಸಕ್ಕೆ ಸೇರಿದನು 4 ವರ್ಷ ಕೆಲಸ ಮಾಡಿದ ಮೇಲೆ ಯುವಕನಿಗೆ ಅನಿಸಿತು ನಾನು ಕೂಡ ಒಂದು ಚಿತ್ರ ಬರೆಯಬಹುದಲ್ಲ ಎಂದು ಯೋಚಿಸಿದನು.
ಅದೇ ರೀತಿ ಯುವಕ ಗುರು ಹೀಗೆ ಬರೆಯುತ್ತಾರೆ ಹಾಗೆ ಒಂದು ಬಟ್ಟೆಯ ಮೇಲೆ ಸುಂದರವಾದ ಚಿತ್ರವನ್ನು ವಿಶೇಷವಾಗಿ ಚಿತ್ರಿಸಿದನು ಆ ಚಿತ್ರವನ್ನು ತನ್ನ ಊರಿನ ಕೊನೆಯಲ್ಲಿ ಯಾರು ಬಂದರೂ ಚಿತ್ರ ಕಾಣುವಂತೆ ಇಟ್ಟನು ಮತ್ತು ಶೀರ್ಷಿಕೆಯನ್ನು ಬರೆದನು ಮೊಟ್ಟ ಮೊದಲನೆಯ ಬಾರಿ ಈ ಚಿತ್ರವನ್ನು ನಾನು ಬರೆದಿದ್ದೇನೆ ಇದರಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ತಪ್ಪು ಎಂದು ಬರೆಯಿರಿ ಎಂದು ಬಣ್ಣದ ಬ್ರಷ್ ಗಳನ್ನು ಇಟ್ಟಿದ್ದನು.
ಯುವಕನು ಸಂಜೆ ಬಂದು ಚಿತ್ರ ನೋಡಿದರೆ ಯುವಕನಿಗೆ (ಶಾಕ್) ಆಘಾತವಾಯಿತು ಚಿತ್ರವೇ ಕಾಣಲಿಲ್ಲ ಅಷ್ಟು ತಪ್ಪುಗಳನ್ನು ಬರೆದಿದ್ದರು ಯುವಕನಿಗೆ ತುಂಬಾ ಬೇಸರವಾಯಿತು ಮತ್ತೆ ನಾನು ಏನೂ ಕಲಿತೇ ಇಲ್ಲ ಇಷ್ಟು ತಪ್ಪು ಮಾಡಿದ್ದೇನೆ ಎಂದು ಯುವಕನು ತುಂಬಾ ರೋಸಿಹೋದ ಮತ್ತೆ ನೊಂದುಕೊಂಡನು.
ಯುವಕನು ನಿರ್ಧರಿಸಿದ ನಾನು ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವುದು ಒಳ್ಳೆಯದು ಎಂದು ಗುರುಗಳಿಗೆ ಹೋಗಿ ಹೇಳಿದನು ಆಗ ಗುರುಗಳು ಹೇಳಿದರು ಇನ್ನೊಂದು ಚಿತ್ರವನ್ನು ಚಿತ್ರಿಸು ನೀನು ಒಳ್ಳೆಯ ಕಲಾವಿದ ನಿನ್ನಲ್ಲಿ ಆ ಎಲ್ಲ ಕೌಶಲ್ಯಗಳು ಇದೆ ಎಂದಾಗ ಏನು ಹೇಳಿದರು ಯುವಕನಿಗೆ ಅರ್ಥವಾಗುತ್ತಿಲ್ಲ.
ಗುರುಗಳು ಒಂದು ಸಾರಿ ಮಾತ್ರ ಒಂದು ಚಿತ್ರವನ್ನು ಬರೀ ಅದಕ್ಕೆ ನಾನು ಒಂದು ಶೀರ್ಷಿಕೆ ಹೇಳಿಕೊಡುತ್ತೇನೆ ಎಂದರು ಆಗಲಿ ಎಂದು ಯುವಕ ಒಂದು ಚಿತ್ರವನ್ನು ಬರೆದು ತಂದು ತೋರಿಸಿದನು ಆಗ ಗುರುಗಳು ಹೇಳಿದರು.
ಇದು ನಾನು ಬರೆದಿರುವ ಮೊದಲ ಚಿತ್ರ ಈ ಚಿತ್ರ ದಯವಿಟ್ಟು ವೀಕ್ಷಿಸಿ ಇದರಲ್ಲಿ ಏನಾದರೂ ತಪ್ಪು ಕಂಡುಬಂದಲ್ಲಿ ಕೆಳಗೆ 2 ಬಣ್ಣದ ಬ್ರಷ್ ಗಳನ್ನು ಇಟ್ಟಿದ್ದೇನೆ ನೀವು ಸರಿ ಮಾಡಬೇಕಾಗಿ ವಿನಂತಿ ಎಂದು ಬರೆದಿದ್ದನು ಮತ್ತೆ ಮುಸ್ಸಂಜೆ ಬಂದಾಗ ಚಿತ್ರ ಹೇಗಿದೆಯೋ ಹಾಗೆಯೇ ಇದೆ ಒಂದು ಗೆರೆಯೂ ಯಾರೂ ಕೂಡ ಬರೆದಿರಲಿಲ್ಲ.
ಯುವಕನಿಗೆ ಆಶ್ಚರ್ಯವೇ ಆಶ್ಚರ್ಯ ಇದರ ಮರ್ಮವೇನು ಎಂದು ಗುರುಗಳಿಗೆ ಕೇಳಿದನು ಜಗತ್ತಿನಲ್ಲಿ ಟೀಕೆ ಮಾಡಿ ಎಂದು ಹೇಳಿದರೆ ಸಾಕು ಎಲ್ಲರೂ ಟೀಕಿಸುತ್ತಾರೆ ಬೇರೆಯವರ ತಪ್ಪು ಕಂಡು ಹಿಡಿಯುವುದು ಎಂದರೆ ತುಂಬಾ ಸುಲಭ ಅದೇ ತಪ್ಪನ್ನು ಸರಿ ಮಾಡಿ ಎಂದರೆ ಯಾರೂ ಮುಂದೆ ಬರುವುದಿಲ್ಲ ಎಂಬ ರಹಸ್ಯ ಹೇಳಿದರು.
ನಾವು ಏನೇ ಸಾಧನೆ ಮಾಡಿದರು ಟೀಕೆ ಮಾಡುತ್ತಲೇ ಇರುತ್ತಾರೆ ಆದ್ದರಿಂದ ಅದನ್ನು ಕೇಳಿಸಿಕೊಳ್ಳದೆ ನಮ್ಮ ಸಾಧನೆಯನ್ನು ಮಾಡಿ ತೋರಿಸುವುದೇ ಉತ್ತಮ ದಾರಿಯಲ್ಲಿ ದೊಡ್ಡ ಆನೆ ಹೋಗುತ್ತಿದ್ದರೆ ನಾಯಿ ಬೊಗಳುವುದು ಸಹಜ ಆನೆ ಕಪ್ಪು ನಾಯಿ, ಬಿಳಿ ನಾಯಿ, ಬೊಗುಳಿದ ನಾಯಿ ಯಾವುದು ಎಂದು ನೋಡುವುದಿಲ್ಲ ಅದರ ಪಾಡಿಗೆ ನಡೆಯುತ್ತಿರುತ್ತದೆ ಹಾಗೆಯೇ ನಾವು ಕೂಡ ಹಿಡಿದ ಸಾಧನೆಯಲ್ಲಿ ಮುನ್ನುಗ್ಗುತ್ತಿರೋಣ.