ಮನಸ್ಸಿನ ಭಾರ ಕಡಿಮೆ ಯಾಗುತ್ತಿತ್ತು

ಶಾಲೆಯ ರಜಾ ದಿನಗಳಲ್ಲಿ ಅಣ್ಣಾ ತಂಗಿ ತನ್ನ ಊರಿನಲ್ಲಿ ಇರುವ ಅಜ್ಜಿಯ ಮನೆಗೆ ಹೋಗುತ್ತಾರೆ ಅಲ್ಲಿ ತುಂಬಾ ಚೆನ್ನಾಗಿ ಆಟ ಆಡಿ ನಲಿಯುತ್ತಾರೆ ಹೆಣ್ಣು ಮಕ್ಕಳಿಗೆ ಬೇರೆ ಆಟಗಳು ಗಂಡು ಮಕ್ಕಳಿಗೆ ಬೇರೆ ಆಟಗಳು ಅಣ್ಣನಾದವನಿಗೆ ಇಷ್ಟ ಏನೆಂದರೆ ಗುರಿಯಿಟ್ಟು ಹೊಡೆಯಬೇಕು ಎನ್ನುವ ಆಸೆ.

ಬಿದಿರಿನಿಂದ ಅಚ್ಚುಕಟ್ಟಾದ ಬಿಲ್ಲನ್ನು ತಯಾರಿಸಿ ಕೆಲವು ಬಾಣಗಳನ್ನು ಚೂಪಾಗಿ ತಯಾರು ಮಾಡಿಕೊಂಡು ಮರದಲ್ಲಿ ಇರುವ ಹಣ್ಣುಗಳಿಗೆ ಹೊಡೆಯುತ್ತಾನೆ ಸರಿಯಾಗಿ ಹಣ್ಣುಗಳಿಗೆ ತಾಗುತ್ತವೇ ಹಣ್ಣುಗಳು ಬೀಳುವುದಿಲ್ಲ ನಂತರ ಚಿಕ್ಕ ಪಕ್ಷಿಗಳು ಅಲ್ಲಿ ಇಲ್ಲಿ ಕುಳಿತರೆ ಅದಕ್ಕೂ ಕೂಡ ಇವನು ಪ್ರಯತ್ನ ಮಾಡುತ್ತಾನೆ ಅದು ಸಫಲವಾಗುವುದಿಲ್ಲ.

ಅಜ್ಜಿಯೂ ಸಾಕಿದ ಕೋಳಿಗಳು ಇರುತ್ತವೆ ಹೇಗೂ ನನಗೆ ಗುರಿ ಇಡಲು ಬರುತ್ತಿಲ್ಲ ನೋಡೋಣ ಎಂದು ಗುರಿ ಇಟ್ಟು ಬಾಣವನ್ನು ಬಿಡುತ್ತಾನೆ ಸರಿಯಾಗಿ ಕೋಳಿಗೆ ಸಿಲುಕಿ ಕೋಳಿ ಸಾಯುತ್ತದೆ. ನಂತರ ಗಾಬರಿಯಾಗಿ ಏನು ತೋಚದೆ ಆ ಕೋಳಿಯನ್ನು ಮರದ ಕೆಳಗೆ ಒಂದು ಹಳ್ಳವನ್ನು ತೆಗೆದು ಹಳ್ಳದಲ್ಲಿ ಹಾಕಿ ಮಣ್ಣನ್ನು ಮುಚ್ಚಿಬಿಡುತ್ತಾನೆ ನಂತರ ನೋಡಿದರೆ ಅಕ್ಕ ಇದನ್ನೆಲ್ಲವನ್ನು ನೋಡಿರುತ್ತಾಳೆ ಆಗ ಅಕ್ಕನಿಗೆ ಹೇಳುತ್ತಾನೆ ದಯವಿಟ್ಟು ನೀನು ಯಾರಿಗೂ ಹೇಳಬೇಡ ಎಂದಾಗ ಅಕ್ಕ ನಾನು ಹೇಳುವುದಿಲ್ಲ.

 ನೀನು ನನಗೆ ಸಹಾಯ ಮಾಡಬೇಕು ಎಂದು ಕೆಲವು ಕೆಲಸಗಳನ್ನು ಮಾಡಿಸುತ್ತಾಳೆ ಕೆಲಸ ಮಾಡುವುದಿಲ್ಲ ಎಂದರೆ ನಾನು ಹೇಳುತ್ತೇನೆ ಎಂದು ಹೆದರಿಸುತ್ತಾಳೆ ಅಜ್ಜಿ ಕೋಳಿಯಲ್ಲಿ ಎಂದು ಕೇಳುತ್ತಾರೆ ಯಾರಿಂದಲೂ ಉತ್ತರ ಬರುವುದಿಲ್ಲ 2 ದಿನ ಕೇಳುತ್ತಾಳೆ ಹೀಗೆ ಮೂರ್ನಾಲ್ಕು ದಿನ ಕಳೆಯುತ್ತದೆ ಹುಡುಗನಿಗೆ ಒತ್ತಡ ಆತಂಕ ಎಲ್ಲವೂ ಉಂಟಾಗುತ್ತದೆ ಏಕೆ ಎಂದು ಚಿಂತಿಸುತ್ತಾನೆ.

 ಮನಸ್ಸಿನಲ್ಲಿ ಒತ್ತಡ ತಾಳಲಾರದೆ ನಂತರ ನೇರವಾಗಿ ಅಜ್ಜಿಗೆ ಹೋಗಿ ಹೇಳುತ್ತಾನೆ ಅಜ್ಜಿ ನಾನು ಒಂದು ತಪ್ಪು ಮಾಡಿದ್ದೇನೆ ನಾನು ಬೇಕು ಬೇಕು ಎಂದು ತಪ್ಪು ಮಾಡಿಲ್ಲ ನಾನು ಗುರಿಯಿಟ್ಟು ಹೊಡೆದಾಗ ಕೋಳಿ ಸತ್ತು ಹೋಗಿದೆ ಅದನ್ನು ಹೂತು ಹಾಕಿದ್ದಾನೆ ಎಂದು ಸತ್ಯವನ್ನು ಹೇಳುತ್ತಾನೆ.

 ಆಗ ಅಜ್ಜಿಯು ಹೇಳುತ್ತಾಳೆ ನೀನು ಮಾಡಿದ್ದು ಎಲ್ಲವನ್ನೂ ನಾನು ನೋಡಿದ್ದೇನೆ ಮತ್ತೆ ಅದಕ್ಕಾಗಿ ಅಕ್ಕ ನಿನಗೆ ಹೆದರಿಸಿ ಕೆಲಸ ಮಾಡುತ್ತಿರುವುದು ಕೂಡ ನನಗೆ ಗೊತ್ತಿದೆ ಎಂದು ಹೇಳುತ್ತಾರೆ ನೋಡು ಇಲ್ಲಿಂದ ಸರಿಯಾಗಿ ಕಾಣುತ್ತಿದೆಯೆಂದು ಕಿಟಕಿಯಿಂದ ಎಲ್ಲವನ್ನೂ ತೋರಿಸುತ್ತಾರೆ.

 ಅಜ್ಜಿ ನೀನು ಏಕೆ ಆ ದಿನವೇ ಹೇಳಲಿಲ್ಲ ಆ ದಿನವೇ ಹೇಳಿದಿದ್ದರೆ ನಿನ್ನ ಮನಸ್ಸಿನ ಭಾರ ಕಡಿಮೆ ಯಾಗುತ್ತಿತ್ತು ಮತ್ತೆ ಅಕ್ಕನಿಗೆ ಹೆದರುವ ಅವಶ್ಯಕತೆಯೇ ಇರಲಿಲ್ಲ ತಪ್ಪನ್ನು ನಾವು ನಮ್ಮಲ್ಲೇ ಇಟ್ಟುಕೊಂಡಾಗ ಆತಂಕ ಹೆಚ್ಚಾಗುತ್ತದೆ.

 ತಪ್ಪು ಆಕಸ್ಮಿಕವಾಗಿ ಆಗಿರಬಹುದು ನಮ್ಮ ತಪ್ಪನ್ನು ಒಪ್ಪಿಕೊಂಡರೆ ನಮ್ಮ ಮನಸ್ಸು ನಿರಾಳವಾಗುತ್ತದೆ ಎಂದು ಅಜ್ಜಿ ಹೇಳಿದರು. ಗೊತ್ತಿಲ್ಲದೆ ಮಾಡಿದ ತಪ್ಪನ್ನು ಒಪ್ಪಿಕೊಂಡು ನನ್ನ ಆತಂಕವನ್ನು ಕಡಿಮೆ ಮಾಡಿಕೊಂಡಿದ್ದೇನೆಯೇ?

ಧೈರ್ಯ ಇದ್ದರೆ ಹೊರಗೆ ಬಾ

 

ಊರಿನ ಆಚೆ ಒಂದು ಹಳೆಯದಾದ ದೊಡ್ಡ ವಿಚಿತ್ರ ದೊಡ್ಡ ಬಂಗಲೆ ಇತ್ತು ಅದು ಒಂದು ದೊಡ್ಡ ಕಟ್ಟಡ ಅಲ್ಲಿ ತುಂಬಾ ಶ್ರೀಮಂತರು ಬದುಕಿ ಸತ್ತರಂತೆ ಮತ್ತೆ ಅಲ್ಲಿ ಹಲವಾರು ಭೂತಗಳು ಇವೆ ಮತ್ತೆ ಅಲ್ಲಿ ನಿಧಿಯೂ ಇದೆ ನಿಧಿ ಕಾಯಲಿಕ್ಕೆ ಹಲವಾರು ಭೂತಗಳು ದೆವ್ವಗಳು ಇದೆಯಂತೆ ಈ ರೀತಿ ಹೆಸರು ಪಡೆದಿತ್ತು.

ಯಾರೂ ಕೂಡ ಆ ಹಳೆಯ ವಿಚಿತ್ರ ಬಂಗಲೆಗೆ ಹೋಗುತ್ತಿರಲಿಲ್ಲ ಆ ಊರಿನ ಜನರಿಗೆ ಯಾರಿಗೆ ಕೇಳಿದರೂ ಸಹ ಅವರು ಹೋಗದಿರುವುದೇ ಒಳ್ಳೆಯದು ಎಂದು ಮುನ್ನೆಚ್ಚರಿಕೆ ನೀಡುತ್ತಿದ್ದರು ಪಕ್ಕದ ಊರಿನಲ್ಲಿ ಇದ್ದ 4 ಯುವಕರು ಕೆಲಸಕ್ಕಾಗಿ ಅಲೆಯುತ್ತಿದ್ದರು ಯುವಕರಿಗೆ ಯಾವುದೇ ಕೆಲಸ ಸಿಗಲಿಲ್ಲ.

 ಬೇರೆ ಊರಿನಲ್ಲಿ ಕೆಲಸ ಸಿಗಬಹುದು ಎಂಬ ಆಸೆಯಿಂದ ಬಂದರು ಯಾವುದೇ ಕೆಲಸ ಸಿಗಲಿಲ್ಲ ನಿರಾಶರಾಗಿ ಕುಳಿತಿದ್ದರು ಆಗ ಈ ಹಳೆಯ ವಿಚಿತ್ರ ಬಂಗಲೆ ಕಾಣಿಸಿತು ಇತರರಿಗೆ ಕೇಳಿದಾಗ ಅವರು ಕೂಡ ಹೆದರಿಸಿದರು 4 ಯುವಕರು ಧೈರ್ಯ ಮಾಡಿದರು.

 ನಿರುದ್ಯೋಗಿ ಜೀವನ ಸಾಕಾಗಿದೆ ಇದರಿಂದ ಸತ್ತರೂ ಒಳ್ಳೆಯದೆ ಎಂದು ನಿರ್ಧಾರ ಮಾಡಿದರು ಅದಕ್ಕೆ ಏನೇನು ಬೇಕು ಎಂದು ಯೋಚಿಸಿದರು 4 ಟಾರ್ಚುಗಳು ಸರಿಯಾದ 4 ದೊಣ್ಣೆಗಳು ತೆಗೆದುಕೊಂಡು ನಿಧಾನವಾಗಿ ಬಂಗಲೆಯ ಒಳಗೆ ಬಂದರು ಬರುತ್ತಿದ್ದಂತೆಯೇ ಒಂದು ಶಬ್ದ ಬಂತು ಇಲ್ಲಿ ಬಂದರೆ ಯಾರೂ ಉಳಿಯುವುದಿಲ್ಲ.

 ಇಲ್ಲಿಯ ವಸ್ತುಗಳು ತೆಗೆದುಕೊಂಡರೆ ರಕ್ತ ವಾಂತಿ ಮಾಡಿ ಸಾಯುತ್ತಾರೆ ಎನ್ನುವ ಶಬ್ದ ಕೇಳಿಸಿತು ಮತ್ತೆ 4 ಯುವಕರು ಈ ಶಬ್ದವನ್ನು ಕೇಳಿ ಆಚೆ ಬಂದರು ಅದರಲ್ಲಿ ಇಬ್ಬರು ಹೆದರಿದರು ಇಬ್ಬರು ಮಾತ್ರ ಹೆದರಲಿಲ್ಲ ಇಲ್ಲಿಂದ ಯಾರಾದರೂ ಬೇರೆ ಶಬ್ದ ಬಂದರೆ ಶಿಳ್ಳೆ ಹೊಡೀರಿ ಎಂದು ಹೇಳಿ ಇಬ್ಬರು ಮಾತ್ರ ಒಳಗೆ ಹೋದರು ಮುಂದೆ ನೋಡಿದರೆ ಹಲವಾರು ಆಭರಣಗಳು ಒಡವೆಗಳು ಬೇಕಾದಷ್ಟು ಇದೆ ಮತ್ತು ಒಳಗಡೆ ಹೋದಾಗ ಅದೇ ಧ್ವನಿ ಒಡವೆಗಳನ್ನು ತೆಗೆದುಕೊಂಡರೆ ರಕ್ತ ವಾಂತಿ ಮಾಡಿ ಸಾಯುತ್ತೀರಿ ಎಂದು ಹೇಳಿತ್ತು.

 ನಾವು ಕೂಡ ಸಾಯಲಿಕ್ಕೆ ಬಂದಿದ್ದೇವೆ ಅದು ಸರಿ ನಿನಗೆ ಈ ಭಾಷೆ ಹೇಗೆ ಗೊತ್ತು ನಮ್ಮ ಭಾಷೆಯೇ ಮಾತಾಡುತ್ತಿದ್ದೆಯಲ್ಲ ಎಂದು ಒಬ್ಬ ಕೇಳಿದನು ಮತ್ತೆ ಇನ್ನೊಬ್ಬ ಹೇಳಿದನು ನೀನು ನಮ್ಮತರ ಮನುಷ್ಯನೇ ಎಲ್ಲೋ ಅಡಗಿ ಕುಳಿತಿದ್ದೀಯಾ ಧೈರ್ಯ ಇದ್ದರೆ ಹೊರಗೆ ಬಾ ಎಂದು ಹೇಳಿದನು.

 ನನ್ನ ಕೈಯಲ್ಲಿ ಬಂದೂಕು ಇದೆ ಇದರಿಂದ ನಾನು ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಶಬ್ದ ಬಂತು ಹಾಗಾದರೆ ನಮ್ಮ ಕೈಯಲ್ಲಿ ಪಿಸ್ತೂಲ್ ಇದೆ ಎಂದು ಬಾಯಿಯಿಂದ ಶಬ್ದ ಮಾಡಿದನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದನು ಇದನ್ನು ಕೇಳಿದ ತಕ್ಷಣ ಯಾರೋ ಓಡುವ ಸದ್ದು ಕೇಳಿಸಿತು.

ಇಬ್ಬರಿಗೆ ತಿಳಿಯಿತು ಇವನು ಮನುಷ್ಯನೇ ಎಂದು ಓಡಿ ಹೋಗಿ ಇಬ್ಬರು ಹಿಡಿದರು ಅವನು ಒಬ್ಬ ದೊಡ್ಡ ಕಳ್ಳನಾಗಿದ್ದನು ಕಳ್ಳನನ್ನು ನೀನು ಏಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ಕಳ್ಳನು ಕೊಟ್ಟ ಉತ್ತರ ನನ್ನನ್ನು ಪೊಲೀಸರು ಹಿಡಿಯಲು ಹೊಂಚು ಹಾಕುತ್ತಿದ್ದಾರೆ.

ನಾನು ಉಳಿಯಬೇಕಾದರೆ ಇದೊಂದೇ ದಾರಿಯೆಂದು ಈ ರೀತಿ ನಟನೆ ಮಾಡಿಕೊಂಡು ಆರಾಮಾಗಿ ಇದ್ದೆ ಎಂದನು ನಂತರ 4 ಯುವಕರಿಗೂ ಒಳ್ಳೆಯ ಕೆಲಸ ಮತ್ತೆ ಬಹುಮಾನವು ಸಿಕ್ಕಿತಂತೆ ದೆವ್ವ ಭೂತಗಳನ್ನು ಯಾರು ನಂಬುತ್ತಾರೆ ಎಂದರೆ ಪುಕ್ಕಲು ಮನಸ್ಸಿನವರು ಮಾತ್ರ ಧೈರ್ಯವಾಗಿ ಇದ್ದರೆ ಎಂತಹ ದೆವ್ವವಾಗಲೀ ಭೂತವಾಗಲಿ ಕಾಡುವುದಿಲ್ಲ. ನಾನು ನಿರ್ಭಯದಿಂದ ಮುನ್ನುಗ್ಗಿ ಯಾವ ಸಾಧನೆ ಮಾಡಿದ್ದೇನೆ?

ಆದರ್ಶಗಳನ್ನು ನಂಬಿ ಬದುಕುತ್ತಾರೆ

ಒಂದು ಊರಿನಲ್ಲಿ ನಿಷ್ಠಾವಂತ ಹಿರಿಯರು ಇದ್ದರು ಅವರು ಶ್ರೀಮಂತರು ಕೂಡ ಆಗಿದ್ದರು ಆದರೆ ಊರಿನಲ್ಲಿ ಯಾವುದೇ ವ್ಯಕ್ತಿಗೆ ಮೋಸ ವಂಚನೆ ಯಾಗಲಿ ಮಾಡುತ್ತಿರಲಿಲ್ಲ ಊರಿನಲ್ಲಿ ಯಾವುದೇ ವ್ಯಕ್ತಿಯಿಂದ ಹೇಳಿದರು ಕೂಡ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಿದ್ದರು.

 ಮನೆಯಲ್ಲಿ ಆಗಲಿ ಸಂಬಂಧದಲ್ಲಿ ಆಗಲಿ ನೆರೆ ಹೊರೆಯವರಲ್ಲಿ ಇವರು ತುಂಬಾ ಚೆನ್ನಾಗಿ ಬಾಳಿ ಬದುಕಿದರು ಇವರ ವ್ಯಕ್ತಿತ್ವಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು ಇವರಿಗೂ ವಯಸ್ಸಾಯಿತು ಯಾರಿಗೂ ಏನೂ ಕಡಿಮೆ ಇಲ್ಲದಂತೆ ಎಲ್ಲಾ ಮಕ್ಕಳಿಗೂ ಸಮಪಾಲು ಹಂಚಿದ್ದರು.

ಯಾವುದೇ ರೀತಿಯ ತಕರಾರು ಇರಲಿಲ್ಲ ಕೊನೆಯ ಕ್ಷಣದಲ್ಲಿ ಮಗನಿಗೆ ಕರೆದು ಹೇಳಿದರು ನಾನು ಒಂದು ಇನ್ಶೂರೆನ್ಸ್ ಮಾಡಿಸಿದ್ದೀನಿ ಆದುದರಿಂದ ಇನ್ಶೂರೆನ್ಸ್ ಕಂಪೆನಿಯ ಮ್ಯಾನೇಜರನ್ನು ಕರೆಯಿರಿ ಎಂದು ಹೇಳಿದರು ಅದಕ್ಕೆ ಮಗನು ದೂರವಾಣಿಯ ಮೂಲಕ ಕರೆಸಿದನು.

 ವಿಮಾ ಕಂಪನಿಯವರು ಬಂದು ಮಾತನಾಡಿಸಿದರು ನಮ್ಮ ಕಂಪನಿಯಿಂದ ನಿಮಗೆ ಯಾವ ಸೇವೆ ಬೇಕಾಗಿತ್ತು ಎಂದು ಕೇಳಿದರು ಅದಕ್ಕೆ ನಿಷ್ಠಾವಂತ ಹಿರಿಯರು ನಾನು ಒಂದು ಪಾಲಿಸಿಯನ್ನು ಮಾಡಿಸಿದ್ದೇನೆ ಅದು ದಯವಿಟ್ಟು ಕ್ಯಾನ್ಸಲ್ ಮಾಡಿ ಮ್ಯಾನೇಜರ್ ವಿನಯವಾಗಿ ಹೇಳಿದರು ಏಕೆ ಹೀಗೆ ಹೇಳುತ್ತಿದ್ದೀರಿ ಎಂದಾಗ ಹಿರಿಯರು ಹೇಳಿದರು.

 ಇನ್ಶೂರೆನ್ಸ್ ಪಾಲಿಸಿ ಮಾಡ ಬೇಕಾದ ಸಮಯದಲ್ಲಿ ನನಗೆ ಒಂದು ಕಾಯಿಲೆ ಇತ್ತು ಅದನ್ನು ನಾನು ಪಾಲಿಸಿಯಲ್ಲಿ ಬರೆಸಲಿಲ್ಲ ಆದರೆ ಈಗ ಆ ಕಾಯಿಲೆ ಹೆಚ್ಚಾಗಿದೆ ಇಲ್ಲಿಯವರೆಗೂ ನಾನು ಯಾರಿಗೂ ಮೋಸ ಮಾಡಿಲ್ಲ ಯಾಕೋ ನನ್ನ ಮನಸ್ಸು ಕಾಡುತ್ತಿದೆ ಆದುದರಿಂದ ಇದನ್ನು ನೀವು ಕ್ಯಾನ್ಸಲ್ ಮಾಡಿ ಎಂದು ಹೇಳಿ ಕ್ಯಾನ್ಸಲ್ ಮಾಡಿಸಿದರು ಸಂತೋಷವಾಗಿ 3 ದಿನ ಬದುಕಿದ್ದರೂ ನಂತರ ವಿಧಿವಶವಾದರು.

ಕೆಲವು ವ್ಯಕ್ತಿಗಳು ಕೆಲವು ಆದರ್ಶಗಳನ್ನು ನಂಬಿ ಬದುಕುತ್ತಾರೆ ಕೊನೆಗೆ ಆದರ್ಶವಾಗಿ ಬದುಕಿದ ವ್ಯಕ್ತಿಗಳ ಹೆಸರು ಕೊನೆಯವರೆಗೂ ಉಳಿಯುತ್ತದೆ. ನಾನು ಯಾವ ಆದರ್ಶಗಳನ್ನು ನಂಬಿ ಬದುಕುತ್ತಿದ್ದೇನೆ?

 ಕೋತಿಯ ಸ್ವಭಾವ

ಎಲ್ಲಾ ಪ್ರಾಣಿಗಳು ಸೃಷ್ಟಿಯಾದ ಮೇಲೆ ಕೋತಿ ಸೃಷ್ಟಿ ಆಯಿತು ಎಂದು ಹೇಳುತ್ತಾರೆ ಎಲ್ಲಾ ಪ್ರಾಣಿಗಳು ಮಾಡಬೇಕಾದ ಕೆಲಸಗಳು ಮಾಡುತ್ತಿದ್ದವು ನಂತರ ವಿಶೇಷವಾಗಿ ಕೋತಿಯನ್ನು ಸೃಷ್ಟಿಸಿ ಕೋತಿಗೆ ಹೇಳಿದರಂತೆ.

 ನಿನಗೆ ಎಲ್ಲರಿಗಿಂತ ವಿಶೇಷ ಸ್ಥಾನವನ್ನು ಕೊಡುತ್ತೇನೆ ಹಾಗೆ ನೀನೂ ಮನುಷ್ಯರ ಹಾಗೆಯೇ ಇರಬೇಕು ಎಂದು ಯೋಚಿಸಿದ್ದೇನೆ ಎಂದು ಹೇಳಿದರಂತೆ  ಆಗ ಕೋತಿ ಇದನ್ನು ಕೇಳಿ ತನ್ನ ಸಂತೋಷ ತಾಳಲಾರದೆ ಕಾಡಿನಲ್ಲಿ ಇರುವ ಎಲ್ಲಾ ಪ್ರಾಣಿಗಳ ಬಳಿಗೂ ಹೋಗಿ ಹೇಳಿತು.

ನನಗೆ ವಿಶೇಷ ಸ್ಥಾನ ಇದೆಯಂತೆ ಮನುಷ್ಯನ ಜೊತೆಯೇ ಇರಬೇಕಂತೆ ಎಂದು ಎಲ್ಲರೊಡನೆ ಹೇಳಿಕೊಂಡು ತಿರುಗುತ್ತಿತ್ತು ಎಂದಿನಂತೆ ನಾಳೆ ಬಂದು ನೋಡಿದಾಗ ಎಲ್ಲಾ ಪ್ರಾಣಿಗಳು ಅಲ್ಪಸ್ವಲ್ಪ ಕೆಲಸ ಮಾಡಿದವು.

ಕೋತಿ ಮಾತ್ರ ಯಾವುದೇ ಕೆಲಸ ಮಾಡಿರಲಿಲ್ಲ ಬರೀ ಎಲ್ಲರಿಗೂ ಹೇಳುವದಕ್ಕಾಗಿಯೇ ಸಮಯ ಕಳೆದಿತ್ತು ಆದರೂ ತನ್ನ ಸಮಯವನ್ನು ವ್ಯರ್ಥ ಮಾಡುತ್ತಲೇ ಇತ್ತು ಇದನ್ನು ನೋಡಿ ಎಲ್ಲಾ ಪ್ರಾಣಿಗಳು ಸೇರಿ ನೀನು ಕೋತಿ ಎಂದು ನಾಮಕರಣ ಮಾಡಿ ಬಿಟ್ಟವು.

ಕೋತಿ ಯಾವಾಗಲೂ ಚಂಚಲ ಸ್ವಭಾವ ಸ್ವಭಾವದಿಂದ ಇರುವುದನ್ನು ನೋಡಿ ನೀನು ಹೀಗೆಯೇ ಇರು ಎಂದು ಹೇಳಿದರು ಅಂದಿನಿಂದ ಅದು ಕೋತಿಯಾಗಿ ಉಳಿದಿದೆ ನಂತರ ನೀನು ಬಹಳಷ್ಟು ಮಾಡುವ ಕೆಲಸಗಳು ಆದುದರಿಂದ ನೀನು ಕೋತಿಯಾಗಿ ಇರುವುದೇ ಒಳ್ಳೆಯದು ಎಂದು ಹೇಳುತ್ತಾರೆ.

ಈಗಲೂ ಸಹ ಕೋತಿ ಯಾವುದೇ ಒಂದು ಕೆಲಸವೂ ಪೂರ್ಣ ಮಾಡುವುದಿಲ್ಲ ಆ ಮರದಿಂದ ಮರಕ್ಕೆ ನೆಗೆಯುತ್ತಿರುತ್ತದೆ ಒಂದು ಮನೆಯನ್ನು ಕೂಡ ಕಟ್ಟುವುದಿಲ್ಲ ಸಮಯ ವ್ಯರ್ಥ ಮಾಡದೆ ಏನಾದರೂ ಸಾಧನೆ ಮಾಡೋಣ. ನಾನು ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದೇನೆಯೇ?

ಆಯ್ಕೆ ನಿನ್ನದೇ

ಒಬ್ಬ ಅಗರ್ಭ ಶ್ರೀಮಂತನು ಊರನ್ನು ನೋಡಿಕೊಂಡು ಬರೋಣ ಎಂದು ಆಚೆ ಬರುತ್ತಾನೆ ನಂತರ ಒಬ್ಬ ಯುವಕ ಬಂದು ಶ್ರೀಮಂತನು ಮಾತನಾಡಿಸುತ್ತಾನೆ ಮಾಲೀಕರೇ ನಾನು ಲಾಟರಿ ಟಿಕೆಟ್ ಮಾರುವವನು ನೀವು ಒಂದು ಲಾಟರಿ ಟಿಕೆಟ್ ಅನ್ನು ಖರೀದಿಸಿದರೆ ನಿಮಗೆ ಬಹುಮಾನ ಬರಬಹುದು ಎನ್ನುತ್ತಾನೆ.

ಶ್ರೀಮಂತ ಈಗಾಗಲೇ ನನಗೆ ಏನೂ ಕಡಿಮೆ ಇಲ್ಲ ನನಗೆ ಟಿಕೆಟ್ ಬೇಡ ಎಂದು ಹೇಳುತ್ತಾನೆ ಆಗ ಲಾಟರಿ ಮಾರುವವನು ಹೇಳುತ್ತಾನೆ ಇಲ್ಲ ಇಲ್ಲ ಹಳ್ಳಗಳು ಎಲ್ಲಿ ಇರುತ್ತದೆ ಅಲ್ಲಿ ನೀರು ಸೇರುತ್ತದೆ ಹಾಗೆ ನಿಮಗೆ ಐಶ್ವರ್ಯಾ ಜಾಸ್ತಿಯಿದೆ ನಿಮಗೆ ಬಂದೇ ಬರುತ್ತದೆ.

 ಖರೀದಿ ಮಾಡಿ ಮತ್ತೆ ನನಗೂ ಸ್ವಲ್ಪ ಕಮಿಷನ್ ಸಿಗುತ್ತದೆ ಎಂದನು ಐವತ್ತು ರೂಪಾಯಿ ಕೊಟ್ಟು ಲಾಟರಿಯನ್ನು ಪಡೆಯುತ್ತಾರೆ ಆ ನಂತರ ಲಾಟರಿ ಮಾರಿದವನು ಮತ್ತೆ ಶ್ರೀಮಂತನನ್ನು ಹುಡುಕಿಕೊಂಡು ಬರುತ್ತಾನೆ.

 ಸಾರ್ ನಾನು ನಿಮಗೆ ಹೇಳಿದಂತೆ ಐವತ್ತುಲಕ್ಷ ಬಹುಮಾನ ಬಂದಿದೆ ಸಾರ್ ಎಂದು ಹೇಳುತ್ತಾನೆ ಆಗ ಶ್ರೀಮಂತರು ನೀನು ಹೇಳಿದಂತೆಯೇ ಆಗಿದೆ ಎಂದು ಸಂತೋಷ ಪಡುತ್ತಾರೆ ನಿನಗೂ ಕಮಿಷನ್ ಕೊಡುತ್ತೇನೆ ನಿನಗೆ ಈಗಲೇ ಬೇಕು ಎಂದರೆ 5 ಲಕ್ಷ ರೂಪಾಯಿ ರೂಪಾಯಿಯನ್ನು ನಾನು ನಿನಗೆ ನೀಡುತ್ತೇನೆ ಇಲ್ಲದಿದ್ದರೆ ನಿನಗೆ ಪ್ರತಿ ತಿಂಗಳು ಐವತ್ತು ಸಾವಿರ ರೂಪಾಯಿಯಂತೆ ನೀಡುತ್ತೇನೆ.

 ನಿನಗೆ ಯಾವುದು ಇಷ್ಟ ಆಯ್ಕೆ ನಿನ್ನದೇ  ಎಂದು ಕೇಳುತ್ತಾರೆ ಆಗ ಲಾಟರಿ ಮಾರುವವನು ಈಗ ನನಗೆ ನೀವು 5 ಲಕ್ಷ ರೂಪಾಯಿ ಕೊಟ್ಟರೆ ಸಾಕು ಅದೇ ತೃಪ್ತಿ ಎನ್ನುತ್ತಾನೆ ಪ್ರತಿ ತಿಂಗಳು ಐವತ್ತು ಸಾವಿರ ರೂಪಾಯಿ ಬಂದರೆ ಬಂದರೆ ನಿನಗೆ ಒಳ್ಳೆಯದಾಗುತ್ತದೆ ಎಂದು ವಿವರಿಸಿ  ಶ್ರೀಮಂತರು ಹೇಳಿದರು.

 ಯುವಕ ನಾಳೆಯ ಬಗೆಗೆ ನನಗೆ ಭರವಸೆ ಇಲ್ಲ ಆದರೆ ಇಂದು ಏನಿದೆಯೋ ಅದಕ್ಕೆ ನಾನು ಹೆಚ್ಚು ನಂಬಿ ಬದುಕುತ್ತೇನೆ ಆದುದರಿಂದ ನನಗೆ 5 ಲಕ್ಷ ಕೊಡಿ ಇದರಲ್ಲಿ ನಾನು ನನ್ನದೇ ಆದ ಒಂದು ಸ್ವಂತ ಉದ್ಯಮವನ್ನು ಸ್ಥಾಪಿಸಿ ಇದರಿಂದ ನಾನು ಬೆಳೆಯುತ್ತೇನೆ ಎಂದನು ಹೇಳಿದನು.

 ಶ್ರೀಮಂತರು 5 ಲಕ್ಷ ರೂಪಾಯಿಯನ್ನು ಕೊಟ್ಟು ಕಳುಹಿಸಿದರು ಕೆಲವು ಸಾರಿ ಮುಂದಿನ ನಾಳೆಗಳ ಬಗ್ಗೆ ಚಿಂತೆ ಮಾಡದಿರುವುದು ಒಂದು ರೀತಿಯಲ್ಲಿ ಒಳ್ಳೆಯದು ಅದೇ ಇನ್ನೊಂದು ರೀತಿಯಲ್ಲಿ ನಾಳಿನ ಭರವಸೆಯಲ್ಲಿ ಬದುಕುವುದು ಕೂಡ ಒಳ್ಳೆಯದೆ ಅವರವರ ಅಭಿಪ್ರಾಯ. ನಾನು ಇಂದಿನ ಬಗ್ಗೆ  ಹೆಚ್ಚು ನಂಬುತ್ತೇನೆಯೇ ಅಥವಾ ನಾಳೆಯ ಬಗ್ಗೆ ಹೆಚ್ಚಾಗಿ ಆಲೋಚಿಸುತ್ತೇನೆಯೇ?

Leave a Comment