ಹಲವಾರು ವರ್ಷಗಳ ಹಿಂದೆ ಒಬ್ಬ ಬಹದ್ದೂರ್ ರಾಜನು ಯುದ್ಧಕ್ಕೆ ಹೊರಟನು ಅವನ ಜೊತೆ ಹಲವಾರು ಸಿಪಾಯಿಗಳು ಮಂತ್ರಿಗಳು ಎಲ್ಲರೂ ಇದ್ದರು ಯುದ್ಧ ಮಾಡುವ ಊರಿಗೆ ತಲುಪುತ್ತಿದ್ದಂತೆಯೇ ರಾಜನು ಆಕಸ್ಮಿಕವಾಗಿ ಕಾಲು ಎಡವಿ ಬಿದ್ದನು ರಾಜ ಬಿದ್ದಿದ್ದನ್ನು ಎಲ್ಲರೂ ನೋಡಿದರು.
ನೋಡಿದವರು ಊರಿಗೆ ಬಂದಾಗಲೇ ರಾಜರು ಬಿದ್ದು ಬಿಟ್ಟರು ಇದು ತುಂಬಾ ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದರು ರಾಜ ಇದನ್ನು ಗ್ರಹಿಸಿ ಬಿದ್ದ ನಂತರ ಆ ಮಣ್ಣನ್ನು ಕೈಗೆತ್ತಿಕೊಂಡು ಸಂತೋಷಪಟ್ಟನು ರಾಜಾ ಹೇಳಿದನು ಊರಿಗೆ ಬರುತ್ತಿದ್ದಂತೆಯೇ ಈ ಮಣ್ಣು ನನ್ನ ಕೈಗೆ ಸಿಕ್ಕಿದೆ ಎಂದರೆ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಕಾರಾತ್ಮಕವಾಗಿ ಹೇಳಿದನು.
ಎಲ್ಲರೂ ರಾಜರು ಹೇಳುತ್ತಿರುವುದು ಸರಿ ಎಂದು ರಾಜನಿಗೆ ಜೈಕಾರ ಹಾಕಿದರು ಹಾಗೆಯೇ ಯುದ್ಧವನ್ನು ಮಾಡಿ ತುಂಬ ಸುಲಭವಾಗಿ ಜಯವನ್ನು ಗಳಿಸಿದರು
ನಮ್ಮ ಬದುಕಿನಲ್ಲಿ ಹಲವಾರು ಅಡ್ಡಿ ಆತಂಕಗಳು ಸಮಸ್ಯೆಗಳು ಬಂದೇ ಬರುತ್ತವೆ ಅದನ್ನು ನಾವು ನೋಡುವ ರೀತಿ ಬದಲಿಸಿ ಕೊಳ್ಳಬೇಕು ಆಗ ಮಾತ್ರ ನಾವು ಗೆಲ್ಲಬಹುದಾಗಿದೆ. ಏನೇ ಎಡವಟ್ಟು ಸಂಭವಿಸಿದರು ಸಕರಾತ್ಮಕವಾಗಿ ಯೋಚಿಸುತ್ತೇನೆಯೇ?
ನನ್ನ ಅಂತಸ್ತು ಏನು
ಹಳ್ಳಿಯಲ್ಲಿ ಒಬ್ಬ ಮಾಲೀಕನು ಕುದುರೆಗಳು ಕತ್ತೆಗಳು ಹಸುಗಳು ಸಾಕಿದನು ಹೆಚ್ಚಾಗಿ ಕತ್ತೆಯೇ ಭಾರವು ಹೊರುತ್ತಿತ್ತು ಕುದುರೆ ಅಷ್ಟಾಗಿ ಭಾರ ಹೊರುತ್ತಿರಲಿಲ್ಲ ಕತ್ತೆಯು ಕುದುರೆಯನ್ನು ನೋಡಿ ವಿನಯವಾಗಿ ಹೇಳಿತು ನಾನು ನೀನು ಇಬ್ಬರು ಕೆಲಸದವರೇ ಕೆಲವು ಸಾರಿ ನನ್ನ ಕೆಲವು ವಸ್ತುಗಳನ್ನು ನೀನು ತರಬಹುದಲ್ಲ ಎಂದಾಗ ಕುದುರೆಯು ಜಂಭದಿಂದ ಹೇಳಿತು. ನಿನ್ನ ಅಂತಸ್ತು ಏನು ನನ್ನ ಅಂತಸ್ತು ಏನು ಅವರವರ ಭಾರ ಅವರೇ ಹೊರಬೇಕು ಎಂದು ಹೇಳಿತು ಇವತ್ತು ನನಗೆ ಭಾರ ಹೊರಲು ತೊಂದರೆಯಾಗುತ್ತಿದೆ ಸ್ವಲ್ಪ ತೆಗೆದುಕೊಂಡರೆ ವಿಶ್ರಮಿಸಿಕೊಳ್ಳಬಹುದು ಎಂದು ಪರಿಪರಿಯಾಗಿ ಬೇಡಿಕೊಂಡಿತು.
ಕುದುರೆಯು ಒಪ್ಪಲಿಲ್ಲ ಆಗ ಕತ್ತೆಯು ಒಂದು ಯೋಚನೆ ಬಂತು ಹೇಗಾದರೂ ಮಾಡಿ ಕುದುರೆಗೆ ಬುದ್ಧಿ ಕಲಿಸಬೇಕು ಎಂದು ಯೋಚಿಸಿತು ಮಾಲೀಕ ಇತರರು ನೋಡುತ್ತಿದಂತೆ ಗಟ್ಟಿಯಾಗಿ ಕೂಗಿ ಕತ್ತೆ ಬಿದ್ದುಹೋಯಿತು ನಡೆಯಲು ಆಗದೆ ಇರುವಂತೆ ನಾಟಕವಾಡಿತು.
ಮಾಲೀಕನು ಯೋಚನೆ ಮಾಡಿದ ಕತ್ತೆಗೆ ಏನು ತೊಂದರೆಯಾಗಿದೆ ಆದುದರಿಂದ ಎಲ್ಲಾ ವಸ್ತುಗಳು ಕುದುರೆಯ ಮೇಲೆ ಹಾಕಿದನು ಆಗ ಕುದುರೆಗೆ ಅರ್ಥವಾಯಿತು ಕತ್ತೆ ಹೇಳಿದಂತೆ ನಾನು ಕೇಳಿದರೆ ಸ್ವಲ್ಪ ವಸ್ತುಗಳು ಹೊರ ಬೇಕಾಗುತ್ತಿತ್ತು.
ಈಗ ಹೆಚ್ಚು ವಸ್ತುಗಳು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎಂದು ಕುದುರೆ ಅರ್ಥಮಾಡಿಕೊಂಡಿತು. ನಾನು ಇತರರ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತೇನೆಯೇ?
ಅನುಭವಿಸಲು ತಿಳಿದಿರಬೇಕು
ಒಂದು ಸಾರಿ ದಯಾಮಯಿ ರಾಜನು ನನ್ನ ರಾಜ್ಯ ಹೇಗಿದೆ ಎಂದು ನೋಡಿಕೊಂಡು ಬರಲು ಊರಿಗೆ ಬಂದನು ಹಾಗೆ ಕಾಡಿನ ಹತ್ತಿರ ಹೋದನು ಮಳೆ ಜೋರಾಗಿ ಬಂತು ಆಗ ಮುಂದೆ ನೋಡಿದರೆ ಒಂದು ಚಿಕ್ಕದಾದ ಗುಡಿಸಿಲು ಇತ್ತು ಅಲ್ಲಿ ಒಳಗೆ ಹೋದನು ರಾಜನು ರಾಜನ ವೇಷ ಹಾಕಿರಲಿಲ್ಲ.
ಆ ಗುಡಿಸಿನಲ್ಲಿ ವಾಸವಾಗಿರುವ ವ್ಯಕ್ತಿಯು ಸೌದೆ ಮಾರಿ ಜೀವನವನ್ನು ನಡೆಸುತ್ತಿದ್ದನು ಸೌದೆ ಮಾರುವವನಿಗೆ ರಾಜಾ ಎಂದು ತಿಳಿಯಲಿಲ್ಲ ಸೌದೆ ಮಾರುವ ವ್ಯಕ್ತಿ ತನ್ನ ಮನೆಯಲ್ಲಿ ಇದ್ದ ರೊಟ್ಟಿ ಚಟ್ನಿ ನೀಡಿದನು ಇದನ್ನು ರಾಜನು ತಿಂದು ಹೊಟ್ಟೆಯ ಹಸಿವು ತೀರಿಸಿಕೊಂಡನು.
ರಾಜನು ಸೌದೆ ಮಾರುವವನಿಗೆ ನಾನು ರಾಜ ಎಂದು ಹೇಳಲಿಲ್ಲ ಕೆಲವು ದಿನಗಳ ನಂತರ ರಾಜನು ತನ್ನ ಅರಮನೆಗೆ ಹೋದನು ನಂತರ ಒಂದು ಸಾರಿ ಆ ಸೌದೆ ಮಾರುವವನನ್ನು ಕರೆಸಿ ಗೌರವಿಸಿ ಒಳ್ಳೆಯ ಸಮಾರಂಭವನ್ನು ಏರ್ಪಡಿಸಿದ್ದ ನಂತರ ಇವನಿಗಾಗಿ ಒಂದು ಶ್ರೀಗಂಧದ ಒಂದು ಕಾಡನ್ನು ಇವನಿಗೆ ಬರೆದುಕೊಟ್ಟನು.
ಇನ್ನು ಮುಂದೆ ಸೌದೆ ಮಾರುವವನು ಚೆನ್ನಾಗಿ ಬಾಳಲಿ ಎನ್ನುವ ಉದ್ದೇಶ ರಾಜನಿಗಿತ್ತು ಮತ್ತೆ ಹಲವಾರು ದಿನಗಳ ನಂತರ ಸೌದೆ ಮಾರುವವನು ಹೇಗಿದ್ದಾನೆ ಎಂದು ನೋಡಲು ಹೋದರೆ ಸೌದೆ ಮಾರುವವನು ಅದೇ ರೀತಿ ಜೀವನ ಮಾಡಿಕೊಂಡು ಇದ್ದಾನೆ.
ರಾಜನಿಗೆ ಆಶ್ಚರ್ಯವಾಯಿತು ನಿಮಗೆ ನಾನು ಶ್ರೀಗಂಧದ ಕಾಡನ್ನು ಕೊಟ್ಟಿದ್ದೆನಲ್ಲ ಏನಾಯ್ತು ಎಂದು ಕೇಳಿದನು ನಾನು ಅದನ್ನು ಸ್ವಲ್ಪ ಸ್ವಲ್ಪ ಮಾರಿ ಹಣ ಬರುತ್ತಿತ್ತು ಸ್ವಲ್ಪ ದಿನ ಚೆನ್ನಾಗಿದೆ ನಂತರ ಇನ್ನೊಬ್ಬ ಸ್ನೇಹಿತ ಬಂದನು.
ಅವನು ಒಂದೇ ಸಾರಿ ಎಲ್ಲವನ್ನು ಮಾರಿ ಬಿಡು ನಿನಗೆ ಹೆಚ್ಚು ಹಣ ಬರುತ್ತದೆ ಅದರಲ್ಲಿ ನೀನು ಚೆನ್ನಾಗಿ ಬದುಕಬಹುದು ಎಂದು ಹೇಳಿದನು ಅದೇ ರೀತಿ ನಾನು ಮಾಡಿದೆ ಇರುವ ಹಣವೆಲ್ಲವೂ ಕರಗಿತು ನಂತರ ಇದೇ ಸ್ಥಿತಿಯಲ್ಲಿ ಇದ್ದೇನೆ ಎಂದು ಹೇಳಿದನು ಆಗ ರಾಜನು ಅದೃಷ್ಟ ಬಂದರು ಅನುಭವಿಸಲು ತಿಳಿದಿರಬೇಕು ಎಂದು ಅರ್ಥಮಾಡಿಕೊಂಡನು.
ಕೆಲವು ಸಾರಿ ಒಳ್ಳೆಯ ಅವಕಾಶ ಸಿಕ್ಕಿರುತ್ತದೆ ಆದರೂ ಆ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ನಂತರ ಪಶ್ಚತ್ತಾಪ ಪಡುತ್ತೇವೆ ಅವಕಾಶ ಸಿಕ್ಕಿದಾಗ ಸರಿಯಾಗಿ ಉಪಯೋಗಿಸಿಕೊಳ್ಳೋಣ. ನನಗೆ ಬಂದ ಅವಕಾಶವನ್ನು ನಾನು ಬಳಸಿಕೊಂಡಿದ್ದೇನೆ ಯೇ?
ನಮಗೆ ಕಾಣಿಕೆಯಾಗಿ ಬರುತ್ತವೆ
ಅಮರ್ ಎಂಬುವ ವ್ಯಕ್ತಿ ಇದ್ದನು ಅಷ್ಟು ಶ್ರೀಮಂತನೂ ಅಲ್ಲ ಅಷ್ಟು ಬಡವನು ಅಲ್ಲ ಮಾಧ್ಯಮ ವರ್ಗದವನು ಮತ್ತೆ ಪ್ರಾಮಾಣಿಕ ವ್ಯಕ್ತಿಯಾಗಿದ್ದನು ಬೇರೆ ಊರಿನಿಂದ ಪಕ್ಕದ ಮನೆಯಲ್ಲಿ ಬಾಡಿಗೆಗೆ ಬಂದರು ಅವರು ಕೂಡ ಒಳ್ಳೆಯವರೇ ಹಾಗಾಗಿ ಇಬ್ಬರೂ ಕೂಡ ತುಂಬಾ ಒಳ್ಳೆಯ ಸ್ನೇಹದಿಂದ ಇದ್ದರು.
6 ತಿಂಗಳು ಆದಮೇಲೆ ಪಕ್ಕದ ಮನೆಯವರಿಗೆ ಬೇರೆಯ ಒಂದು ಒಳ್ಳೆಯ ಕೆಲಸ ಸಿಕ್ಕಿತು ಮತ್ತೆ ಅದು ತಾತ್ಕಾಲಿಕವಾಗಿ ಮಾತ್ರ ಇತ್ತು ಆದುದರಿಂದ ಇವರು ಅಮರ್ ಅವರಿಗೆ ಸೈಕಲ್ ಅನ್ನು ನೀಡಿದರು ಮತ್ತೆ ಹೇಳಿದರು ನಮಗೆ ಅಲ್ಲಿ ಕೆಲಸ ಮುಗಿದ ನಂತರ ನಾವು ಬಂದು ಮತ್ತೆ ನಮ್ಮ ಸೈಕಲನ್ನು ಪಡೆಯುತ್ತೇವೆ.
ನೀವು ಇದನ್ನು ಉಪಯೋಗಿಸಿ ನಿಲ್ಲಿಸಬೇಡಿ ನಿಲ್ಲಿಸಿದರೆ ತುಕ್ಕು ಹಿಡಿದು ಹಾಳಾಗುತ್ತದೆ ಎಂದು ಹೇಳಿದರು ಇವರಿಗೂ ಕೂಡ ಅದೇ ಸಮಯಕ್ಕೆ ಸೈಕಲ್ ನ ತುಂಬಾ ಅವಶ್ಯಕತೆ ಇತ್ತು ಈ ಸೈಕಲ್ ಅನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ ಇವರದೇ ಸೈಕಲ್ ಎನ್ನುವ ರೀತಿಯಲ್ಲಿ ಚೆನ್ನಾಗಿ ಉಪಯೋಗಿಸುತ್ತಿದ್ದರು.
ಒಂದು ವರ್ಷವಾದ ನಂತರ ಬಾಡಿಗೆ ಮನೆಯವರು ಬಂದರು ನಮ್ಮ ಸೈಕಲ್ ಕೊಡಿ ಎಂದು ಕೇಳಿ ಪಡೆದುಕೊಂಡು ಹೋದರು ಸೈಕಲ್ಲನ್ನು ಕೊಡಬೇಕಾದರೆ ತುಂಬಾ ನೋವಾಯಿತು ಇದನ್ನು ಗಮನಿಸಿದ ತಾಯಿಯು ಹೇಳಿದರು.
ನೋಡು ಮಗನೇ ಯಾಕೆ ಕೊರಗುತ್ತಿದ್ದೀಯ ಇಷ್ಟು ದಿನ ನಮ್ಮ ಹತ್ತಿರ ಇತ್ತು ಎಂದು ಸಂತೋಷಪಡು ಅದು ಬೇರೆಯವರ ವಸ್ತು ಅವರಿಗೆ ಹೋಗಿದೆ ಅಷ್ಟೇ ಎಂದರು ಈ ಮಾತನ್ನು ಅವರು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡನು ನಂತರ ಇವರ ಒಬ್ಬ ಮಗನೂ ಯಾವುದೋ ಕಾಯಿಲೆಯಿಂದ ಸಾಯುತ್ತಾನೆ.
ಆಗಲೂ ಇವರು ಅಷ್ಟೊಂದು ದುಃಖ ಪಡುವುದಿಲ್ಲಇತರರು ಬಂದು ಕೇಳಿದಾಗ ಅವರು ಹೇಳುತ್ತಾರೆ ಯಾವುದೇ ವಸ್ತು ನಮಗೆ ಕಾಣಿಕೆಯಾಗಿ ಬರುತ್ತವೆ ಅದನ್ನು ಚೆನ್ನಾಗಿ ಉಪಯೋಗಿಸಬೇಕು ಅಷ್ಟೇ ಅದು ನಮ್ಮ ಹತ್ತಿರವೇ ಇರಬೇಕು ಎಂದು ಹೇಳುವುದು ತಪ್ಪು ಎಂದು ಹೇಳುತ್ತಾರೆ.
ಈ ಮಾತು ಹೇಳಲಿಕ್ಕೆ ಸುಲಭವಾಗಿರಬಹುದು ಈ ಪರಿಸ್ಥಿತಿಯನ್ನು ಅನುಭವಿಸಿದಾಗ ತುಂಬಾ ನೋವಾಗುತ್ತದೆ ಆದರೂ ಕೂಡ ವಿಧಿಯಿಲ್ಲದೆ ಇದನ್ನು ಅನುಭವಿಸಲೇಬೇಕು ನಮ್ಮ ಬದುಕಿನಲ್ಲಿ ಬಹಳಷ್ಟು ವಸ್ತುಗಳನ್ನು ನಾವು ಕಳೆದುಕೊಳ್ಳುತ್ತೇವೆ.
ಉದ್ಯೋಗ, ಆಸ್ತಿ, ಸಂಬಂಧಗಳು, ಗೆಳೆಯರು, ಮನೆ, ಊರು, ಪ್ರೀತಿ, ವಿಶ್ವಾಸ, ಸ್ವಾತಂತ್ರ, ನೆರೆಹೊರೆಯವರು, ಗೌರವ. ಇವುಗಳೆಲ್ಲವೂ ಬಂದಾಗ ಸ್ವಾಗತಿಸಿ ಅನುಭವಿಸಬೇಕು ಹೋದಾಗ ಅಗಲುವಾಗ ಪ್ರೀತಿಯಿಂದ ಬೀಳ್ಕೊಡೋಣ.
ಗುರಿ ತಪ್ಪಿದಾಗ ನಗುತ್ತಿದ್ದೆವು
ಒಂದು ವಟಾರದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಬರುತ್ತಾರೆ ಆ ವಟಾರದಲ್ಲಿ 9 ಮನೆಗಳು ಸೇರಿ ಇರುತ್ತವೆ ಮದುವೆಯಾಗಿ ಬಂದ ಹೊಸ ಜೋಡಿಗಳು ಯಾವಾಗ ನೋಡಿದರು ನಗುತ್ತಲೇ ಸಂತೋಷದಿಂದ ಇರುತ್ತಾರೆ ಇತರರು ನೋಡಿ ಕೆಲವು ದಿನವೂ ಮಾತ್ರ ಇವರು ನಗುತ್ತಾರೆ.
ನಂತರ ಇದ್ದೇ ಇದೆ ಸಂಸಾರದ ಗೋಳು ಎಂದು ಯೋಚನೆ ಮಾಡುತ್ತಾರೆ ಆದರೂ ಕೂಡ ಇವರು ವರ್ಷಗಳೇ ಉರುಳಿದರೂ ಕೂಡ ಸದಾ ನಗು ನಗುತ್ತಲೇ ಇರುತ್ತಾರೆ ಇದರಿಂದ ಎಲ್ಲರಿಗೂ ತುಂಬಾ ಆಶ್ಚರ್ಯವಾಗುತ್ತದೆ. ಸಂಸಾರ ಅಂದ ಮೇಲೆ ಜಗಳ ಇದ್ದೇ ಇರುತ್ತದೆ ಆದರೆ ಇವರು ಜಗಳವೂ ಆಡುತ್ತಿಲ್ಲ ಇದರಿಂದಾಗಿ ಹಲವು ವರ್ಷಗಳ ನಂತರ ಇವರನ್ನು ಆದರ್ಶ ಗಂಡ ಹೆಂಡತಿ ಎಂದೂ ಕರೆಯುತ್ತಾರೆ.
ಗಂಡ ಹೆಂಡತಿ ಅನೂನ್ಯವಾಗಿ ಬದುಕುತ್ತಿರುವುದು ಆ ವಠಾರ ಗಷ್ಟೇ ಅಲ್ಲದೆ ಊರಿನವರಿಗೂ ತಿಳಿಯುತ್ತದೆ. ಊರಿನವರು ಎಲ್ಲರೂ ಸೇರಿ ಒಂದು ದೊಡ್ಡ ಕಾರ್ಯಕ್ರಮ ಮಾಡಿ ಆದರ್ಶ ಗಂಡ ಹೆಂಡತಿಗೆ ಬಿರುದನ್ನು ಅದೇ ಊರಿನ ನ್ಯಾಯಾಧೀಶರಿಂದ ಕೊಡಿಸುತ್ತಾರೆ ನ್ಯಾಯಾಧೀಶರು ಕೂಡ ಸಂತೋಷದಿಂದ ಬಿರುದನ್ನು ಕೊಟ್ಟಿರುತ್ತಾರೆ.
ಹಲವಾರು ವರ್ಷಗಳ ನಂತರ ಒಂದು ವಿವಾಹ ವಿಚ್ಛೇದನೆಗೆ ಕೋರಿ ಒಂದು ಅರ್ಜಿ ಬಂದಿರುತ್ತದೆ ಈ ಕೋರಿಕೆಯನ್ನು ನೋಡಿದ ನ್ಯಾಯಧೀಶರಿಗೆ (ಶಾಕ್) ಆಘಾತವಾಗುತ್ತದೆ ಏಕೆಂದರೆ ಆದರ್ಶ ಗಂಡ ಹೆಂಡತಿ ಎಂದು ನ್ಯಾಯಾಧೀಶರು ಗಂಡ ಹೆಂಡತಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿರುತ್ತಾರೆ.
ಕೆಲವು ವರ್ಷಗಳ ನಂತರ ವಿಚ್ಛೇದನೆ ಕೋರಿ ಅರ್ಜಿ ಬಂದಿರುತ್ತದೆ ಇದು ಅರ್ಜಿ ಯಾರದ್ದು ಎಂದರೆ ಯಾರಿಗೆ ಆದರ್ಶ ದಂಪತಿ ಎಂದು ಸನ್ಮಾನ ನೀಡಿದ್ದರು ಅವರೇ ಈಗ ವಿಚ್ಛೇದನೆ ಕೇಳುತ್ತಿದ್ದಾರಲ್ಲ ಎಂದು ನ್ಯಾಯಾಧೀಶರು ಕಕ್ಕಾಬಿಕ್ಕಿಯಾಗಿ ಗಂಡ ಹೆಂಡತಿಗೆ ಸಮಾಧಾನವಾಗಿ ಕೇಳುತ್ತಾರೆ.
ನಾವು ನೋಡಿದ ಹಾಗೆ ನೀವು ಯಾವಾಗಲೂ ಜಗಳವೇ ಆಡಿಲ್ಲ ಮತ್ತೆ ಯಾವಾಗಲೂ ಹಸನ್ಮುಖಿಯಾಗಿ ಇರುತ್ತಿದ್ದೀರಿ ಅಲ್ಲವೇ ಎಂದಾಗ ಗಂಡನಾದವನು ಹೇಳುತ್ತಾನೆ ನ್ಯಾಯಾಧೀಶರೇ ನಾವು ಮದುವೆ ಆಗಿದ ನಂತರ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ನಿರ್ಧಾರ ಮಾಡಿದವು.
ನಿಯಮಗಳು ಎಂದರೆ ನಮ್ಮ ಇಬ್ಬರಲ್ಲಿ ಜಗಳ ಬೇಡ ನಿನಗೆ ಕೋಪ ಬಂದರೆ ನಿನಗೆ ಸಿಕ್ಕಿದ ವಸ್ತುವಿನಿಂದ ಹೊಡೆಯುವುದು ನನಗೆ ಕೋಪ ಬಂದರೆ ನನಗೆ ಸಿಕ್ಕಿದ ವಸ್ತುವಿನಿಂದ ಹೊಡೆಯುವುದು ಗುರಿ ತಪ್ಪಿದಾಗ ನಗುತ್ತಿದ್ದೆವು ಅವಳು ನನ್ನನ್ನು ಹೊಡೆದಾಗ ನಾನು ತಪ್ಪಿಸಿಕೊಳ್ಳುತ್ತಿದೆ.
ನಾನು ಅವಳನ್ನು ಒಡೆದಾಗ ಅವಳು ಕೂಡ ಗುರಿ ತಪ್ಪಿಸಿ ಕೊಳ್ಳುತ್ತಿದ್ದಳು ಆವಾಗ ಅವಳು ನಗುತ್ತಿದ್ದಳು ಆದರೆ ಈಗ ನನಗೆ ವಯಸ್ಸಾಗಿದೆ ತಪ್ಪಿಸಿಕೊಳ್ಳುವ ಶಕ್ತಿ ಕಡಿಮೆಯಾಗಿದೆ ಈಗೀಗ ಅವಳ ಗುರಿ ಯಾವುದೇ ಕಾರಣಕ್ಕೂ ಗುರಿ ತಪ್ಪುತ್ತಿಲ್ಲ.
ಆ ನೋವು ಈಗ ನನಗೆ ತಡೆದುಕೊಳ್ಳಲು ಶಕ್ತಿ ಇಲ್ಲ ಎಂದರು ಗಂಡ ಹೆಂಡತಿ ನಾಟಕವನ್ನು ಆಡುತ್ತಿದ್ದರು ಆದರೆ ಇಡೀ ಜೀವನ ನಾಟಕವಾಡಿ ಬದುಕಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅರ್ಥಮಾಡಿಕೊಂಡರು. ನಾನು ಗಂಡಾಗಿದ್ದರೆ ಹೆಣ್ಣಿನ ಬಗ್ಗೆ ಎಷ್ಟು ಅರ್ಥ ಮಾಡಿಕೊಂಡಿದ್ದೇನೆ? ನಾನು ಹೆಣ್ಣಾಗಿದ್ದರೆ ಗಂಡಿನ ಬಗ್ಗೆ ಎಷ್ಟು ಅರ್ಥ ಮಾಡಿಕೊಂಡಿದ್ದೇನೆ?