ಒಂದು ದೊಡ್ಡ ಕಂಪೆನಿ ಅಲ್ಲಿ ಇಂಟರ್ವ್ಯೂ ಇರುತ್ತದೆ ಅಲ್ಲಿ ಹಲವಾರು ಜನ ಆಯ್ಕೆಯಾಗುತ್ತಾರೆ ಅದರಲ್ಲಿ ರಾಮಣ್ಣ ಶಾಮಣ್ಣ ಎಂಬುವವರು ಇರುತ್ತಾರೆ ನಂತರ ಇಬ್ಬರು ಕೂಡ ಸ್ನೇಹಿತರಾಗುತ್ತಾರೆ ಹಾಗೆ ಕೆಲಸ ಮಾಡಿಕೊಂಡು ದಿನನಿತ್ಯವೂ ಜೊತೆಯಲ್ಲಿ ಬಂದು ಹೋಗುತ್ತಿರುತ್ತಾರೆ.
ರಾಜಣ್ಣನಾದವನಿಗೆ ಪ್ರೊಮೋಷನ್ ಸಿಗುತ್ತದೆ ಮತ್ತೆ ಎಲ್ಲರೂ ರಾಜಣ್ಣನನ್ನು ಗೌರವಿಸುತ್ತಾರೆ ಇದನ್ನೆಲ್ಲವನ್ನು ನೋಡಿ ಶಾಮಣ್ಣ ಒಂದು ನಿರ್ಧಾರಕ್ಕೆ ಬರುತ್ತಾನೆ ನಾನು ಈ ಕೆಲಸ ಬಿಟ್ಟು ಬಿಡುವುದೇ ಸರಿ ಎಂದು ನಂತರ ಮ್ಯಾನೇಜರ್ ನ ಬಳಿ ಹೋಗಿ ಹೇಳುತ್ತಾನೆ ನಾನು ಕೆಲಸವನ್ನು ಬಿಡಲು ಇಚ್ಛಿಸಿದ್ದೇನೆ ಕಾರಣವೇನು ಎಂದು ಕೇಳಿದಾಗ ಶಾಮಣ್ಣ ಹೇಳುವುದಿಲ್ಲ ಬಲವಂತ ಮಾಡಿದಾಗ ಕೊನೆಗೆ ಹೇಳುತ್ತಾನೆ.
ರಾಜಣ್ಣನಾದವನು ಪ್ರೊಮೋಷನ್ ಪಡೆಯುತ್ತಿದ್ದಾನೆ ನಾನು ಅಷ್ಟೆ ಓದಿದ್ದೀನಿ ಅಷ್ಟೇ ಸಂಬಳ ಆದರೆ ಅವನು ಮಾತ್ರ ಬೆಳೆಯುತ್ತಿದ್ದಾನೆ ನಾನು ಮಾತ್ರ ಅಲ್ಲೇ ಇದ್ದೀನಿ ಆದುದರಿಂದ ನನಗೆ ಬೇಸರವಾಗಿದೆ ಎಂದನು ಆಗ ಮ್ಯಾನೇಜರ್ ಆದವರು ಪ್ರೊಮೋಷನ್ ಹಾಗಿರಲಿ ಈಗ ನೀನು ನೇರವಾಗಿ ಮಾವಿನ ಹಣ್ಣು ಇದೆಯಾ ನೋಡಿಕೊಂಡು ಬಾ ಎಂದು ಹೇಳಿದರು.
ಮ್ಯಾನೇಜರ್ ಅವರು ಹೇಳಿದ್ದರಿಂದ ಬೇಸರವಾಗಿ ಹೋದನು ಸ್ವಲ್ಪ ಸಮಯದ ನಂತರ ಬಂದನು ಹೌದು ಇದೆ ಎಂದನು ನಂತರ ಮ್ಯಾನೇಜರ್ ಅವರು ಹೆಚ್ಚಾಗಿದೆಯೋ ಕಡಿಮೆಯಾಗಿದೆಯೋ ಎಂದು ಕೇಳಿದರು.
ಆಗ ಶಾಮಣ್ಣ ನಾನು ಅದನ್ನೆಲ್ಲ ನೋಡಲಿಲ್ಲ ಎಂದು ಹೇಳಿದನು ಮತ್ತೆ ಹೋಗಿ ನೋಡಿಕೊಂಡು ಬಾ ಎಂದು ಮ್ಯಾನೇಜರ್ ಹೇಳಿದರು ಮತ್ತೆ ಸ್ವಲ್ಪ ಸಮಯದಲ್ಲಿಯೇ ಬಂದನು 2 ಅಂಗಡಿಗಳಲ್ಲಿ ಮಾತ್ರ ಇದೆ ಎಂದನು ಮತ್ತೆ ಅದರ ಬೆಲೆ ಎಷ್ಟು ಎಂದು ಮ್ಯಾನೇಜರ್ ಕೇಳಿದರು ಅದನ್ನು ಕೇಳಲಿಲ್ಲ ಎಂದು ಹೇಳಿದನು.
ಮತ್ತೆ ಅಂಗಡಿಗೆ ಹೋಗಿ ಬೆಲೆಯನ್ನು ತಿಳಿದುಕೊಂಡು ಬಂದನು ಕೆಜಿಗೆ ಮೂವತ್ತು ರೂಪಾಯಿ ಎಂದನು ಮತ್ತೆ ಮ್ಯಾನೇಜರ್ ಇದು ಐನೂರು ಕೆಜಿ ಸಿಗಬಹುದೇ ಎಂದು ಕೇಳಿದರು ನಾನು ಕೇಳಲಿಲ್ಲ ಎಂದನು ನಂತರ ನೀವು ಇಲ್ಲೇ ಕುಳಿತುಕೊಳ್ಳಿ ಎಂದು ಕೂರಿಸಿದರು.
ರಾಜಣ್ಣನಿಗೆ ಮಾವಿನ ಹಣ್ಣು ಇದೆಯಾ ನೋಡಿಕೊಂಡು ಬಾ ಎಂದು ಕಳಿಸಿದರು ಸ್ವಲ್ಪ ಲೇಟಾಗಿ ರಾಜಣ್ಣ ಬಂದನು ರಾಜಣ್ಣ ಹೇಳಿದನು ಸರ್ ನಾನು ಮಾರುಕಟ್ಟೆಗೆ ಹೋಗಿದ್ದೆ ಅಲ್ಲಿ 2 ಅಂಗಡಿಗಳು ಮಾತ್ರ ಇದೆ ಅಲ್ಲಿ 4ರೀತಿಯ ಹಣ್ಣುಗಳು ಮಾತ್ರ ಇದ್ದು ಮತ್ತೆ ಹೆಚ್ಚಾಗಿ ಇಲ್ಲ ಅದಕ್ಕಾಗಿ ನಾನು ಇನ್ನೂ ಹೆಚ್ಚು ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದೆ ನಗರದಲ್ಲಿ ಸಿಗುತ್ತದೆ ಎಂದು ಹೇಳಿದರು.
ಆರ್ ಎಂ ಸಿ ಮಂಡಿಯಲ್ಲಿ ಮಾವಿನಮಂಡಿ ಇದೆ ಅಲ್ಲಿಗೆ ಹೋಗಿ ವಿಚಾರಿಸಿದೆ ಅಲ್ಲಿ ಸ್ಟಾಕ್ ಸ್ವಲ್ಪ ಇದೆ ಅಲ್ಲಿ ನಾನು ಕೇಳಿದೆ ಇನ್ನೂ ಹೆಚ್ಚಾಗಿ ಬೇಕಾಗಿತ್ತು ಎಲ್ಲಿ ಸಿಗುತ್ತದೆ ಮಾವಿನ ಮಂಡಿಯವರು ಸ್ವಲ್ಪ ದೂರದಲ್ಲಿ ಒಂದು ಊರಿದೆ ಅಲ್ಲಿಯ ಮಾವಿನ ಹಣ್ಣುಗಳು ತುಂಬಾ ಚೆನ್ನಾಗಿ ಇರುತ್ತದೆ ನೀವು ಅಲ್ಲಿ ಹೋಗಿ ವಿಚಾರಿಸಬಹುದು ಎಂದು ಹೇಳಿದರು.
ನೇರವಾಗಿ ನಾನು ಅಲ್ಲಿಗೆ ಹೋದೆ ಅವರನ್ನು ಭೇಟಿ ಮಾಡಿದೆ ಅವರು ಹೇಳಿದರು ನಾನು ನಿಮಗೆ ಹನ್ನೆರಡು ರೂಪಾಯಿಯಲ್ಲಿ ಕೊಡ್ತೇನೆ ಎಷ್ಟು ಬೇಕಾದರೂ ನಾನು ನೀಡುತ್ತೇನೆ ಎಂದರು ಅದಕ್ಕಾಗಿ ಅವರು 4ಹಣ್ಣುಗಳನ್ನು ಕೊಟ್ಟರು.
ಹಣ್ಣುಗಳನ್ನು ನೀವು ತಿಂದು ನೋಡಿ ಎರಡೂ ರೀತಿಯ ತೋತಾಪುರಿ ರಸಪುರಿ ಹಣ್ಣು ತುಂಬಾ ಚೆನ್ನಾಗಿದೆ ನಿಮಗೆ ಕೆಜಿ ಹಿಡಿಸಿದರೆ ನಾನು ನಿಮಗೆ ಕೊಡ್ತೀನಿ ಎಂದು ಸ್ಯಾಂಪಲ್ಲನ್ನು ಮ್ಯಾನೇಜರಿಗೆ ಕೊಟ್ಟನು ಆಗ ಶಾಮಣ್ಣನ್ನು ಮೂಕನಾಗಿ ನಿಂತನು.
ಪ್ರೊಮೋಷನ್ ಏಕೆ ಸಿಗುವುದಿಲ್ಲ ಎಂದರೆ ಕೆಲವು ಕೆಲಸಗಾರರು ಹೇಳಿದಷ್ಟನ್ನೇ ಮಾಡುತ್ತಾರೆ ಮುಂದಾಲೋಚನೆ ಮಾಡುವುದಿಲ್ಲ ಯಾವುದೇ ಕೆಲಸವನ್ನು ಉತ್ಸಾಹದಿಂದ ಶ್ರದ್ಧೆಯಿಂದ ಮಾಡಬೇಕು ನನ್ನ ಕೆಲಸ ಎಂದು ಮಾಡಬೇಕು ಇವರು ಮಾತ್ರ ನಾಯಕರಾಗುತ್ತಾರೆ. ನಾನು ಮಾಡಿದ ಕೆಲಸಗಳಿಂದ ನನಗೆ ಪ್ರಮೋಷನ್ ಸಿಕ್ಕಿದೆಯೇ?
ಓದುವುದರಿಂದ ಏನು ಪ್ರಯೋಜನ?
ಒಂದು ಮನೆಯಲ್ಲಿ ತತ್ವಜ್ಞಾನಿ ತಾತ ಮೊಮ್ಮಗ ಇರುತ್ತಾರೆ ತಾತನ ದಿನನಿತ್ಯದ ಅಭ್ಯಾಸ ಧರ್ಮಗ್ರಂಥವನ್ನು ಓದುವುದು ಚಿಕ್ಕ ಮೊಮ್ಮಗ ನಾದವನು ಕೇಳುತ್ತಾನೆ ನಾನೂ ಕೂಡ ಓದುವುದಕ್ಕೆ ಪ್ರಯತ್ನಿಸಿದೆ ಆದರೆ ಅರ್ಥವೇ ಆಗುವುದಿಲ್ಲ ಎಂದನು.
ಮತ್ತೆ ಹೇಳಿದನು ಈ ಧರ್ಮಗ್ರಂಥವನ್ನು ಓದುವುದರಿಂದ ಏನು ಪ್ರಯೋಜನ ಎಂದು ಕೇಳಿದನು ಆಗ ತಾತಾ ಅವರು ಏನೂ ಮಾತನಾಡದೆ ಇರಲಿ ನಿನಗೆ ಒಂದು ಕೆಲಸವನ್ನು ಕೊಡ್ತೇನೆ ಬಾ ಎಂದು ಒಂದು ಬಿದಿರಿನ ಬುಟ್ಟಿ ಆ ಬುಟ್ಟಿಯಲ್ಲಿ ಅವರು ಇದ್ದಿಲು ಹಾಕಿ ಇಡುತ್ತಿದ್ದರು.
ಇದ್ದಿಲನ್ನು ನೆಲಕ್ಕೆ ಹಾಕಿ ನಮ್ಮ ಮನೆಯ ಅಂಗಳದಲ್ಲಿ ಒಂದು ನೀರಿನ ತೊಟ್ಟಿಯಿದೆ ಅದರಿಂದ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದರು ಆ ಹುಡುಗ ಹೋದನು ನೀರನ್ನು ತುಂಬಿದನು ತೆಗೆದುಕೊಂಡು ಬರುತ್ತಿದ್ದಂತೆಯೇ ನೀರು ಸ್ವಲ್ಪವೂ ಉಳಿಯಲಿಲ್ಲ ಹೀಗೆ ಹುಡುಗನು ಐದಾರು ಸಾರಿ ನೀರು ತಂದನು.
ನೀರು ಮಾತ್ರ ತರಲಿಕ್ಕೆ ಆಗುತ್ತಿಲ್ಲ ಕೊನೆಗೆ ಹುಡುಗ ಹೇಳಿದನು ಇದರಲ್ಲಿ ನೀರು ತರಲು ಸಾಧ್ಯವಿಲ್ಲ ಬೇರೆ ಏನಾದರೂ ಇದ್ದರೆ ಅದರಲ್ಲಿ ನಾನು ನೀರು ತರುತ್ತೇನೆ ಎಂದನು ತಾತಾ ಅವರು ಇಲ್ಲ ಇಲ್ಲ ನೀನು ಇದರಲ್ಲೇ ನೀರು ತರಬೇಕು ಎಂದು ಹೇಳಿದರು.
ಸುಮಾರು ಹದಿನೈದರಿಂದ ಇಪ್ಪತ್ತು ಸಾರಿ ನೀರು ತಂದನು ನಂತರ ಮೊಮ್ಮಗ ಯಾವುದೇ ಕಾರಣಕ್ಕೂ ಇದರಲ್ಲಿ ನೀರು ತರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದನು ಆಗ ತಾತಾರವರು ಹೇಳಿದರು ಈ ಬುಟ್ಟಿ ನೋಡು ಆಗ ಹೇಗಿತ್ತು ಈಗ ಹೇಗಿದೆ ಎಂದಾಗ ಹುಡುಗನು ಹೇಳಿದ ಆವಾಗ ಬುಟ್ಟಿ ಕಪ್ಪಗೆ ಇತ್ತು ಈಗ ಆ ಕಪ್ಪು ಹೋಗಿದೆ ಎಂದು ಹೇಳಿದನು.
.
ಬುಟ್ಟಿ ಈಗ ಕೊಳೆ ಇಲ್ಲದಂತೆ ಆಗಿದೆ ಅಲ್ಲವೇ ಎಂದು ಕೇಳಿದರು ಹೌದು ಎಂದನು ಹೀಗೆ ಧರ್ಮ ಗ್ರಂಥಗಳು ಓದುತ್ತಿದ್ದರೆ ಮನಸ್ಸು ಬುದ್ದಿ ಶುದ್ಧವಾಗುತ್ತಿರುತ್ತದೆ ಅದಕ್ಕಾಗಿ ಧರ್ಮ ಗ್ರಂಥಗಳನ್ನು ಓದಬೇಕು ಎಂದು ಪ್ರಾಯೋಗಿಕವಾಗಿ ತೋರಿಸಿದರು. ನಾನು ದಿನನಿತ್ಯ ಪುಸ್ತಕಗಳು ದಿನಪತ್ರಿಕೆ ವಾರಪತ್ರಿಕೆಗಳು ಇತ್ಯಾದಿ ಓದುತ್ತಿದ್ದೇನೆಯೇ?
ಒಂದೇ ಮನೆಯಲ್ಲಿದ್ದರೂ
ಒಂದು ಮನೆಯಲ್ಲಿ ನಾಯಿ ಮತ್ತು ಬೆಕ್ಕು ಸಾಕಿಕೊಂಡಿರುತ್ತಾರೆ ನಾಯಿ ಮತ್ತು ಬೆಕ್ಕಿಗೆ ಒಳ್ಳೆಯ ಆಹಾರ ಸಿಗುತ್ತಿರುತ್ತದೆ ಮಾಲೀಕನಾದವನಿಗೆ ಯಾವುದೋ ಕಾರಣದಿಂದಾಗಿ ಕಷ್ಟಗಳು ಬರತೊಡಗುತ್ತವೆ ಆಗ ಅವರ ಮನೆಯಲ್ಲಿರುವ ಒಂದು ಉಂಗುರವನ್ನು ಕೂಡ ಮಾರಿಬಿಡುತ್ತಾರೆ ಆ ಉಂಗುರ ಮಾರಿದ ಮೇಲೆ ಮತ್ತಷ್ಟು ಕಷ್ಟ ಜಾಸ್ತಿಯಾಗುತ್ತದೆ.
ಆಗ ನಾಯಿ ಆಲೋಚನೆ ಮಾಡುತ್ತೆ ಹೇಗಾದರೂ ಮಾಡಿ ಆ ಉಂಗುರವನ್ನು ನಾವು ತಂದರೆ ಮತ್ತೆ ನಮ್ಮ ಮಾಲೀಕನು ಅಭಿವೃದ್ಧಿಯಾಗುತ್ತಾನೆ ಎಂದು ಬೆಕ್ಕಿಗೆ ಹೇಳುತ್ತದೆ.
ಬೆಕ್ಕು ಹಾಗೂ ಇಲಿ ಕೂಡ ಸ್ವಲ್ಪ ಹೊತ್ತು ಯೊಚಿಸಿ ಆಗಲಿ ಏನಾದರೂ ಮಾಡಿ ಆ ಉಂಗುರವನ್ನು ತರೋಣ ಎಂದು ಮಾತನಾಡಿಕೊಳ್ಳುತ್ತವೆ ನಂತರ ಉಂಗುರ ಖರೀದಿ ಮಾಡಿದ್ದ ಅವನ ಮನೆಗೆ ಹೋಗಿ ನೋಡುತ್ತಾರೆ ಬೆಕ್ಕು ಹೇಗೆ ಬೇಕಾದರೂ ಹೋಗಬಹುದು ಇಲ್ಲಿಯೂ ಕೂಡ ಬರುತ್ತದೆ.
ಇಲಿಯು ಬಂದು ಆ ಪೆಟ್ಟಿಗೆಯನ್ನು ಕೊರೆದು ಉಂಗುರ ಆಚೆಗೆ ತರುತ್ತದೆ ಆಗ ಬೆಕ್ಕು ನಿಧಾನವಾಗಿ ಆ ಉಂಗುರವನ್ನು ತೆಗೆದುಕೊಂಡು ಬರುತ್ತೆ ಆಗ ನಾಯಿ ಕೂಡ ಜೊತೆಯಲ್ಲಿಯೇ ಬರುತ್ತದೆ ಆದರೆ ನಾಯಿಯು ಸುತ್ತಿಬಳಸಿ ಬರುತ್ತದೆ ಆದರೆ ಬೆಕ್ಕು ಮರಗಳನ್ನು ಗೋಡೆಗಳನ್ನು ದಾಟಿ ಬೇಗ ಮಾಲೀಕನ ಬಳಿ ತಲಪುತ್ತದೆ.
ಆಗ ಮಾಲಿಕನು ತುಂಬಾ ಸಂತೋಷ ಪಡುತ್ತಾನೆ ನಾಯಿ ಲೇಟಾಗಿ ಬರುವುದರಿಂದ ಮಾಲಿಕನಾದನವನು ನಾಯಿಯನ್ನು ಎಲ್ಲಿ ಹೋಗಿದೆ ಎಂದು ಕೇಳುತ್ತಾನೆ ಆಗ ಬೆಕ್ಕು ಏನು ಕೂಡ ಮಾತನಾಡುವುದಿಲ್ಲ ಸುಮ್ಮನಿರುತ್ತದೆ ಆಗ ನಾಯಿಯನ್ನು ಚೆನ್ನಾಗಿ ಬಯ್ಯುತ್ತಾನೆ ಏಕೆಂದರೆ ಈ ಯೋಚನೆ ಮಾಡಿದ್ದು ನಾಯಿಯೇ ಅದಕ್ಕೆ ನಾಯಿಯು ನೋಡುತ್ತೆ ಏನೂ ಹೇಳುವುದಿಲ್ಲ.
ಮಾಲೀಕನು ಹೋದನಂತರ ಬೆಕ್ಕನ್ನು ಓಡಿಸಿಕೊಂಡು ಹೋಗುತ್ತದೆ ಹೀಗೆ ಕೆಲವು ಮನುಷ್ಯರು ಬೆಕ್ಕಿನ ಸ್ವಭಾವದವರು ಇರುತ್ತಾರೆ ಎಚ್ಚರಿಕೆಯಿಂದ ಇರೋಣ. ನಾನು ಬಹಳಷ್ಟು ಶ್ರಮ ಪಟ್ಟಿದ್ದ ಫಲವನ್ನು ಇತರರು ಅನುಭವಿಸುತ್ತಿದ್ದಾರೆಯೇ?
ಸಮಾಧಾನದಿಂದ ವರ್ತಿಸುತ್ತೀರಿ
ಒಂದು ಭಾನುವಾರದ ಸಂಜೆ ಹಲವಾರು ಮಕ್ಕಳು ಪಾರ್ಕಿನಲ್ಲಿ ಆಟವಾಡುತ್ತಿದ್ದರು ಅವರು ಅವರಷ್ಟಕ್ಕೆ ಆಟಗಳನ್ನು ಆಡುತ್ತಿದ್ದರು ತಂದೆತಾಯಿ ಹಾಗೆಯೇ ಇನ್ನೊಂದು ತಂದೆ ತಾಯಿ ಕೂಡ ಬಂದಿದ್ದರು ತಂದೆ ತಾಯಿಗೆ ಮಗು ಇನ್ನೊಂದು ತಂದೆ ತಾಯಿಗೂ ಹಾಗೆ ಒಂದು ಹೆಣ್ಣು ಮಗು ಹೇಗೋ ಆಟವಾಡುತ್ತಿದ್ದಂತೆ ಇಬ್ಬರು ಮಕ್ಕಳು ಸೇರಿ ಆಟವಾಡಲು ಶುರು ಮಾಡಿದರು.
ಇಬ್ಬರು ತಂದೆ ತಾಯಿಗಳು ಕೂಡ ನೋಡಿ ಸಂತೋಷಪಡುತ್ತಿದ್ದರು ಕೊನೆಗೆ ಹುಡುಗನ ತಂದೆ ಹೇಳಿದನು ರಾಜಾ ಮನೆಗೆ ಹೋಗೋಣ ಎಂದರು ಆಗ ಆಡುತ್ತಿದ್ದ ಹುಡುಗ ಹೇಳಿದನು ಇಲ್ಲ ಇಲ್ಲ ಇನ್ನೂ ಹತ್ತು ನಿಮಿಷ ನಾನು ಬರುತ್ತೇನೆ ಎಂದನು ಹತ್ತು ನಿಮಿಷವಾದರೂ ಬರಲಿಲ್ಲ ಇನ್ನೂ 5ನಿಮಿಷ ಆಡುತ್ತೇನೆ ಎಂದನು.
ಆಗ ಆ ಪುಟ್ಟ ಹುಡುಗಿಯು ಬಂದು ಹೇಳಿತು ಅಂಕಲ್ ನೀವು ತುಂಬಾ ಒಳ್ಳೆಯವರು ನಿಮಗೆ ತುಂಬಾ ತಾಳ್ಮೆ ಇದೆ ಸಮಾಧಾನದಿಂದ ವರ್ತಿಸುತ್ತೀರಿ ಎಂದು ಹೇಳಿದಳು ಆಗ ಹುಡುಗನು ಹೇಳಿದನು ಅವರಿಗೆ ಈಗ ಬುದ್ಧಿ ಬಂದಿದೆ ಎಂದನು ಏಕೆಂದರೆ ಇದೇ ರೀತಿ ನನ್ನ ಚಿಕ್ಕ ತಮ್ಮ ಆಟ ವಾಡುತ್ತಿದ್ದಾಗ ಹೀಗೆ ಬೇಗ ಬಾ ಎಂದು ಕರೆದರು ನಂತರ ಅವನು ಅಪಘಾತದಲ್ಲಿ ಸತ್ತನು ಇದರಿಂದಾಗಿ ಅವರು ಆಡು ಎಂದು ಹೇಳುತ್ತಾರೆ ಎಂದು ಹೇಳಿದನು.
ನೀವು ನಿಮ್ಮ ಮಕ್ಕಳೊಂದಿಗೆ ಎಲ್ಲಿಗಾದರೂ ಹೋದಾಗ ತೃಪ್ತಿಯಾಗಿ ನೆಮ್ಮದಿಯಾಗಿ ಆಟವಾಡಿ ಸಂತಸದ ಸಮಯ ಸಿಕ್ಕಾಗ ಯಾವುದೇ ಕಾರಣಕ್ಕೂ ಬಿಡಬೇಡಿ ಇವೆ ಕೊನೆಗೆ ಉಳಿಯುವುದು. ನಾನು ಮಕ್ಕಳಿಗಾಗಿ ಎಷ್ಟು ಸಮಯ ನೀಡುತ್ತಿದ್ದೇನೆ?
ನಾವೇ ಹುಡುಕಿಕೊಳ್ಳಬೇಕು
ಒಂದು ದೊಡ್ಡ ಆಲದ ಮರದಲ್ಲಿ ಪಾರಿವಾಳಗಳು ವಾಸವಾಗಿದ್ದವು ನಂತರ ಬೇಟೆಗಾರನು ಬಂದು ಪಾರಿವಾಳಗಳನ್ನು ಹಿಡಿದುಕೊಳ್ಳುವುದಕ್ಕೆ ಆರಂಭಿಸಿದನು ಹೀಗೆ ಪಾರಿವಾಳಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಹಿಡಿಯಬೇಕು ಇಲ್ಲದಿದ್ದರೆ ನಮ್ಮ ವಂಶವೇ ನಾಶವಾಗುತ್ತದೆ ಎಂದು ಎಲ್ಲಾ ಪಾರಿವಾಳಗಳು ಸಭೆ ಸೇರಿ ಮಾತನಾಡಿದವು.
ಏನು ಪರಿಹಾರ ಎಂದು ಎಲ್ಲರೂ ಚಿಂತಿಸುತ್ತಿರುವಾಗ ಒಂದು ಬುದ್ಧಿವಂತ ಪಾರಿವಾಳ ಹೇಳಿತು ಎಲ್ಲರನ್ನೂ ನಾನು ಕಾಪಾಡುತ್ತೇನೆ ಎಂದು ಹೇಳಿತು ಆಗ ಎಲ್ಲರೂ ಆಶ್ಚರ್ಯಚಕಿತರಾದರು ಆಗ ಆ ಪಾರಿವಾಳ ಬೇಕು ಅಂತಲೇ ಬೇಟೆಗಾರನ ಬಲೆಗೆ ಬಂದು ಬಿದ್ದಿತು.
ಬೇಟೆಗಾರನು ಆ ಪಾರಿವಾಳವನ್ನು ಹಿಡಿದುಕೊಂಡನು ಆಗ ಪಾರಿವಾಳ ಹೇಳಿತು ಬೇಟೆಗಾರ ನೀನು ನನ್ನನ್ನು ಏನು ಮಾಡುವೆ ನಾನು ನಿನ್ನನ್ನು ಮಾರುಕಟ್ಟೆಯಲ್ಲಿ ಮಾರಿ ಹಣ ಸಂಪಾದನೆ ಮಾಡುತ್ತಾನೆ ಎಷ್ಟು ಸಂಪಾದನೆ ಮಾಡುತ್ತೀಯಾ ಹತ್ತು ನಾಣ್ಯಗಳು ಎಂದು ಹೇಳಿದನು.
ಪಾರಿವಾಳ ಹೇಳಿತು ನೀನು ಇನ್ನೂ ಹೆಚ್ಚು ಹಣವನ್ನು ನನ್ನಿಂದ ದುಡಿಯಬಹುದು ಆದರೆ ಒಂದು ಷರತ್ತು ಇದೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾವುದೇ ಪಾರಿವಾಳಗಳಿಗೆ ಬಂದು ಬಲೆ ಹಾಕಬಾರದು ಇದಕ್ಕೆ ನೀನು ಒಪ್ಪಿದರೆ ಮಾತ್ರ ಎಂದು ಹೇಳಿತು.
ನನಗೆ ಒಳ್ಳೆಯ ಹಣ ಬಂದರೆ ನಾನು ಹಾಗೆ ಮಾಡುತ್ತೇನೆ ಎಂದನು ಆ ಬೇಟೆಗಾರನು ಮಾತು ಕೊಟ್ಟನು ಹಾಗೇ ಆಗಲಿ ಎಂದು ಪಾರಿವಾಳವನ್ನು ಮಾರಲು ಒಂದು ಚಿಕ್ಕ ಪಂಜರದಲ್ಲಿ ಹಾಕಿಕೊಂಡು ಹೋಗುತ್ತಿದ್ದನು ಆಗ ಪಾರಿವಾಳವೇ ಎದುರು ಬರುತ್ತಿರುವ ಒಬ್ಬನನ್ನು ನಮಸ್ಕಾರ ಯಜಮಾನರೆ ಎಂದು ಹೇಳಿತು ಇದನ್ನು ಕೇಳಿದ ಆ ಮನುಷ್ಯನು ಮಾತಾಡುವ ಪಾರಿವಾಳ ಇದೆಯೇ ಅದು ತುಂಬಾ ಬೆಲೆಯುಳ್ಳದ್ದು ಎಂದು ಹೇಳಿದನು.
ಈ ಸುದ್ದಿ ಹಬ್ಬಿ ಕೊನೆಗೆ ರಾಜರು ಮಾತ್ರ ತೆಗೆದುಕೊಳ್ಳಬಹುದು ದಾಗಿದೆ ಎಂದು ರಾಜನ ಅರಮನೆಗೆ ಹೋಗಿ ಪಾರಿವಾಳವನ್ನು ಮಾರಿದನು ಅವರು ಬೇಟೆಗಾರನಿಗೆ ಸಾಕಷ್ಟು ಚಿನ್ನದ ನಾಣ್ಯಗಳನ್ನು ಕೊಟ್ಟರು.
ಬೇಟೆಗಾರ ಸಂತೋಷದಿಂದ ನಾಣ್ಯಗಳನ್ನು ಪಡೆದುಕೊಂಡು ಹೋದನು ನಂತರ ಈ ಪಾರಿವಾಳವು ಮಾತನಾಡುವುದರಿಂದ ರಾಣಿಯು ಪಾರಿವಾಳವನ್ನು ಚೆನ್ನಾಗಿ ಮೆಚ್ಚಿಕೊಂಡಳು ಅದರಂತೆಯೇ 4 ದಿನ ಪಂಜರದಲ್ಲೇ ಬಿಟ್ಟಿದ್ದರು ನಂತರ ಪಂಜರದಿಂದ ಬಿಚ್ಚಿದರು ಆಗಲೂ ಕೂಡ ಪಾರಿವಾಳ ಹಾರಲಿಲ್ಲ 2ದಿನ ನೋಡಿದರೂ 4 ದಿನ ನೋಡಿದರು ಆದರೂ ಪಾರಿವಾಳ ಹಾರಲಿಲ್ಲ.
ರಾಜಕುಮಾರಿಗೆ ಭರವಸೆ ಬಂತು ಈ ಪಾರಿವಾಳವು ಹಾರುವುದಿಲ್ಲ ಇದನ್ನು ಕೂಡಿ ಹಾಕುವುದು ಬೇಡ ಎಂದು ಹಾಗೇ ಬಿಟ್ಟರು ಈ ಬುದ್ದಿವಂತ ಪಾರಿವಾಳ 6ದಿನಗಳ ನಂತರ ತನ್ನ ಹಳೆ ರೆಕ್ಕೆಗಳನ್ನು ಜೋಡಿಸಿಕೊಂಡು ಒಂದು ಕಡೆ ಹಾಕಿ ಅಲ್ಲಿಂದ ಹಾರಿ ತನ್ನ ಮನೆಗೆ ಬಂತು.
ಅರಮನೆಯಲ್ಲಿ ರಾಣಿಯು ಬೆಕ್ಕು ಪಾರಿವಾಳವನ್ನು ತಿಂದಿರಬಹುದು ಎಂದು ಯೋಚಿಸಿದಳು. ಬುದ್ಧಿವಂತಿಕೆಯನ್ನು ಉಪಯೋಗಿಸಿ ಮತ್ತೆ ತನ್ನ ವಾಸಸ್ಥಾನಕ್ಕೆ ಬಂದು ಪಾರಿವಾಳವು ಎಲ್ಲರೊಂದಿಗೆ ಬದುಕಿತು ಕೆಲವು ಸಾರಿ ನಮ್ಮ ಬುದ್ದಿವಂತಿಕೆ ಉಪಯೋಗಿಸಿ ನಮ್ಮ ಪರಿಹಾರವನ್ನು ನಾವೇ ಹುಡುಕಿ ಹುಡುಕಿಕೊಳ್ಳೋಣ. ಸಮಸ್ಯೆಯಲ್ಲಿ ಸಿಲುಕಿದಾಗ ಬುದ್ಧಿವಂತಿಕೆಯಿಂದ ಪಾರಾಗಿದ್ದೇನೆಯೇ?