ನಾನೇ ಹೆಚ್ಚು ಮಾತನಾಡುತ್ತಿದ್ದೆ

ಊರಿನಲ್ಲಿ ಒಬ್ಬ ವಜ್ರವೀರ್ ವಾಚಾಲಿ ವ್ಯಕ್ತಿ ಇದ್ದನು ದಿನನಿತ್ಯ ಪಕ್ಕದ ಮನೆಯವನ ಜೊತೆ ಜಗಳವಾಡುತ್ತಿದ್ದನು ಇದರಿಂದ ಬೇಸರಗೊಂಡು ವ್ಯಕ್ತಿ ಬಾಬಾ ಅವರ ಬಳಿಗೆ ಬಂದು ಹೇಳಿದನು ನನ್ನ ಪಕ್ಕದ ಮನೆಯವನು ದಿನನಿತ್ಯ ನನ್ನ ಜೊತೆ ಜಗಳವಾಡುತ್ತಾನೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಎಂದು ಬೇಡಿಕೊಂಡನು.

ಬಾಬಾ ಅವರು ನೀನು ಹೆದರುವ ಅವಶ್ಯಕತೆ ಇಲ್ಲ ನಾನು ನಿನಗೆ ಒಂದು ಔಷಧಿಯನ್ನು ಕೊಡುತ್ತೇನೆ ಯಾವಾಗ ಜಗಳ ಆಡಲಿಕ್ಕೆ ಬರುತ್ತಾನೋ ಆಗ ನೀನು ನಾನು ಕೊಟ್ಟ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡಿರು.

 ಆ ವ್ಯಕ್ತಿ ಮಾತು ನಿಲ್ಲಿಸಿದಾಗ ಬಾಯಲ್ಲಿ ಇರುವ ನೀರನ್ನು ಮುಕ್ಕಳಿಸಿ ಮರದ ಕೆಳಗೆ ಉಗಿದು ಬಿಡು ಎಂದು ಹೇಳಿದರು ಈ ವ್ಯಕ್ತಿ ಔಷಧಿಯನ್ನು ಪಡೆದುಕೊಂಡು ಹೋದನು ನಂತರ ಆ ವ್ಯಕ್ತಿ ಮಾತನಾಡಲಿಕ್ಕೆ ಬಂದಾಗ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡು ಇರುತ್ತಿದ್ದನು.

 ಪಕ್ಕದ ಮನೆಯವನು ಮಾತನಾಡಿ ಮಾತನಾಡಿ ಕೊನೆಗೆ ನಾನು ಮಾತನಾಡುವುದು ಒಳ್ಳೆಯದಲ್ಲ ಎಂದು ಅವನೇ ಸುಮ್ಮನಾಗಿ ಬಿಟ್ಟನು ಇದರಿಂದಾಗಿ ದಿನನಿತ್ಯದ ಜಗಳದ ಸಮಸ್ಯೆಯು ಪರಿಹಾರವಾಯಿತು ನಂತರ ಬಾಬಾ ಅವರಿಗೆ ಹೇಳಿದನು ನೀವು ಹೇಳಿದಂತೆ ನಾನು ಮಾಡಿದೆ ಈಗ ಜಗಳವಾಗುತ್ತಿಲ್ಲ ಎಂದು ಸಂತೋಷದಿಂದ ಹೇಳಿದನು.

ನನಗೆ ಇನ್ನೂ ಸ್ವಲ್ಪ ಔಷಧಿಯನ್ನು ಕೊಡಿ ಎಂದು ಕೇಳಿದನು. ಆಗ ಬಾಬಾ ಅವರು ನಗುತ್ತಾ ಹೇಳಿದರು ನಾನು ನಿನಗೆ ಕೊಟ್ಟಿದ್ದು ಉಪ್ಪಿನ ನೀರು ಮಾತ್ರ ನೀನು ಇದನ್ನು ಬಾಯಲ್ಲಿ ಹಾಕಿ ಮುಕ್ಕಳಿಸಿದರೆ ಬಾಯಲ್ಲಿ ಇರುವ ಕ್ರಿಮಿ ಕೀಟಗಳು ಸಾಯುತ್ತವೆ ಹಾಗೆಯೇ ನೀನು ಬಾಯಲ್ಲಿ ನೀರು ಹಾಕಿಕೊಂಡಿದ್ದರೆ ನೀನು ಮಾತನಾಡಲು ಸಾಧ್ಯವಿಲ್ಲ.

 ನೀನು ಕೂಡ ಹೆಚ್ಚಾಗಿ ಮಾತಿಗೆ ಮಾತು ಬೆಳೆಸಿಕೊಂಡು ಮಾತನಾಡುತ್ತಿದ್ದೆ ಇದರಿಂದ ಜಗಳವಾಗುತ್ತಿತ್ತು ಎಂದು ಹೇಳಿದರು ಆಗ ವಾಚಾಲಿಗೆ ಅರ್ಥವಾಯಿತು ನಾನೇ ಹೆಚ್ಚು ಮಾತನಾಡುತ್ತಿದ್ದೆ ಇದರಿಂದಾಗಿ ಜಗಳ ಆಗುತ್ತಿತ್ತು ಎಂದು ಅರ್ಥಮಾಡಿಕೊಂಡನು ಜಗಳ ಆದಾಗ ಯಾರಾದರೂ ಒಬ್ಬರು ಮೌನವಾಗಿದ್ದರೆ ಸಾಕು, ಜಗಳ ತಾನೇ ತಾನಾಗಿ ಕಡಿಮೆಯಾಗುತ್ತದೆ.

ನಿನ್ನ ಜೊತೆ ಬರಲಾರೆ

ಒಂದು ಆಶ್ರಮದಲ್ಲಿ ಮಂಥನ್ ಗುರು ಶಿಷ್ಯರು ಎಲ್ಲರೂ ಸೇರಿ ಚರ್ಚಿಸುತ್ತಿದ್ದರು ಆಗ ಮಂಥನ್ ಗುರುಗಳು ಒಂದು ಪ್ರಶ್ನೆಯನ್ನು ಕೇಳುತ್ತೇನೆ ಅದಕ್ಕೆ ಯಾರು ಸರಿಯಾದ ಉತ್ತರವನ್ನು ಹೇಳಬಲ್ಲಿರಾ ಎಂದು ಕೇಳಿದರು ಶಿಷ್ಯರು ಎಲ್ಲರೂ ನಾವು ಹೇಳುತ್ತೇವೆ ಎಂದು ಕೈಯೆತ್ತಿದರು.

 ಒಬ್ಬ ಮನುಷ್ಯ ಸ್ವಲ್ಪವೇ ದಿನ ಬದುಕುತ್ತಾನೆ ನಂತರ ಅವನು ಸಾಯುತ್ತಾನೆ ಅವನಿಗೆ ತುಂಬಾ ಭಯ ಆಗುತ್ತಿದೆ ಅದಕ್ಕಾಗಿ ಅವನು ನನ್ನ ಜೊತೆ ಯಾರು ಬರುತ್ತಾರೆ ಎಂದು ಮೊದಲಿಗೆ ಒಬ್ಬ ಸ್ನೇಹಿತನ ಬಳಿ ಹೋದ ಆಪ್ತಮಿತ್ರನೇ ನಾನು ಕೆಲವೇ ದಿನಗಳಲ್ಲಿ ಸಾಯುತ್ತಿದ್ದೇನೆ ಆದುದರಿಂದ ನನಗೆ ಭಯವಾಗುತ್ತಿದೆ ಎಂದು ಹೇಳಿದನು.

ಆಪ್ತಮಿತ್ರನ ಹೇಳಿದನು ನೀನು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ನಾನು ನಿನ್ನ ಜೊತೆಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದನು ಆಪ್ತಮಿತ್ರನೇ ಹಾಗಲ್ಲ ನಾನು ಸಾಯುವುದು ನಿಜ ನನ್ನ ಜೊತೆಯೇ ನೀನು ಇರಬೇಕು ನೀನು ನನ್ನ ಜೊತೆ ಸಾಯಬೇಕು ಎಂದು ಬೇಡಿಕೊಂಡನು.

 ಸ್ನೇಹಿತ ಹೆದರಿಕೊಂಡು ಹೇಳಿದನು ನಾನು ನಿನ್ನ ಆಪ್ತಮಿತ್ರನೇ ಸರಿ ಆದ್ರೆ ನಾನು ನಿನಗೆ ಸ್ಮಶಾನದವರೆಗೂ ಬರಬಹುದು ನಿನಗೆ ಒಳ್ಳೆಯ ಒಂದು ಸಮಾಧಿಯನ್ನು ಕೂಡ ಕಟ್ಟಬಹುದು ಒಳ್ಳೆಯ ಸುಂದರವಾದ ಬಟ್ಟೆಯನ್ನು ಬೇಕಾದರೆ ಕೊಡಬಲ್ಲೆ ಆದ್ರೆ ನಾನು ನಿನ್ನ ಜೊತೆ ಬರಲಾರೆ ಎಂದು ಹೇಳಿದ.

ಈತನಿಗೆ ತುಂಬ ದುಃಖವಾಯಿತು ನಂತರ ಎರಡನೆಯ ಸ್ನೇಹಿತನ ಹತ್ತಿರ ಹೋದನು ಇದೇ ರೀತಿ ಹೇಳಿದನು ಆಗ ಆ ಸ್ನೇಹಿತನ ಹೇಳಿದನು ನಾನು ನೀನು ಸ್ನೇಹಿತನೇ ನಿಜ ಆದರೆ ನಾನು ನಿನ್ನನ್ನು ಸತ್ತ ಮೇಲೆ ಹೆಗಲ ಮೇಲೆ ಹಾಕಿಕೊಂಡು ಹೊತ್ತಿಕೊಂಡು ಸ್ಮಶಾನದ ವರೆಗೂ ಬರಬಹುದು.

 ನಿನ್ನ ಜೊತೆ ನಾನು ಹೇಗೆ ಬರಲು ಸಾಧ್ಯ ಎಂದು ಹೇಳಿದನು ಇವನ ದುಃಖ ಇನ್ನಷ್ಟು ಇಮ್ಮಡಿಯಾಯ್ತು ನಂತರ ಮೂರನೆಯ ಮಿತ್ರನ ಹತ್ತಿರ ಹೋದನು ಇವನು ಇದೆ ಹೇಳುವವನೆಂಬ ನಂಬಿಕೆ ಇತ್ತು ಇರಲಿ ಹೇಳೋಣ ಎಂದು ಇದೇ ರೀತಿ ಅವನು ವಿವರಿಸಿದನು.

 ಮೂರನೆಯ ಮಿತ್ರ ಹೇಳಿದನು ನೀನು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ ನಾನು ನಿನ್ನ ಜೊತೆ ಜೊತೆಯಾಗಿ ಇರುತ್ತೀನಿ ಎಂದನು ಆಗ ಇವನಿಗೆ ತುಂಬ ಖುಷಿಯಾಯಿತು ಗುರುಗಳು ನಂತರ ಶಿಷ್ಯರಿಗೆ ಕೇಳಿದರು ಮೂರು ಸ್ನೇಹಿತರು ಯಾರು ಯಾರು ಎಂದು ಹೇಳಬಹುದೇ ಎಂದು ಕೇಳಿದರು ಶಿಷ್ಯರಿಗೆ ಅರ್ಥವಾಗಲಿಲ್ಲ ಗಡಿಬಿಡಿ ಆಯಿತು.

 ಯಾರು ನಿಜವಾದ ಸ್ನೇಹಿತರು ಇದ್ದಾರೆ? ಯಾರೂ ಉತ್ತರಿಸಲಿಲ್ಲ ಆಗ ಗುರುಗಳೇ ಇದಕ್ಕೆ ಉತ್ತರಿಸಿದರು ಮೊದಲನೆಯ ಸ್ನೇಹಿತ ಹಣ ನಿಮಗೋಸ್ಕರ ಸ್ಮಶಾನದಲ್ಲಿ ಒಳ್ಳೆಯ ಸ್ಥಳ ಬಟ್ಟೆ ಹೂವು ಕೊಡಿಸಬಹುದಾಗಿದೆ.

  ಎರಡನೆಯ ಸ್ನೇಹಿತ ಹೆಂಡತಿ ಮಕ್ಕಳು ಮತ್ತು ಸಂಸಾರ ಹಾಗೂ ಸಂಬಂಧಿಕರು ಇವರು ನೀವು ಸತ್ತಾಗ ಸ್ಮಶಾನದವರೆಗೆ ಹೊತ್ತುಕೊಂಡು ಬರಬಹುದು ಮೂರನೆಯ ಸ್ನೇಹಿತ ಯಾರು ಎಂದರೆ ನೀವು ಮಾಡಿದ ಕರ್ಮಗಳು ದಾನ ಧರ್ಮಗಳು ಪುಣ್ಯಗಳು ನೀವು ಸತ್ತ ನಂತರವೂ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದು ಹೇಳಿದರು.

ಎಲ್ಲೆಲ್ಲೋ ಓಡಿಹೋಗುತ್ತಿದೆ

ನನ್ನ ಸ್ನೇಹಿತ ಹೇಳಿದ ಒಂದು ಘಟನೆ ಪಾನಿಪುರಿ ತಿನ್ನಲಿಕ್ಕೆ ಹೋದಾಗ ಬಿಲ್ಲನ್ನು ಪಡೆದು ಇವರ ಸರದಿಗಾಗಿ ಕಾಯುತ್ತಿದ್ದರು ಅಷ್ಟರಲ್ಲಿ ಎಂಬತ್ತು ವರ್ಷ ಇರುವ ಸುನೇಹ್ ವೃದ್ಧರು ಬಂದರು.

 ಅವರು ಏನೂ ಮಾತನಾಡದೆ ಪೂರಿಗಳನ್ನು ತೆಗೆದುಕೊಂಡು ತಿನ್ನುತ್ತಿದ್ದಾರೆ ಇದನ್ನು ನೋಡಿದಾಗ ಸ್ನೇಹಿತನಿಗೆ ತುಂಬಾ ಬೇಜಾರಾಯ್ತು ನೋಡಿದರೆ ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದಾರೆ ಇಷ್ಟು ವಯಸ್ಸಾಗಿದೆ ಆದರೂ ಹೀಗೇಕೆ ಮಾಡುತ್ತಿದ್ದಾರೆ.

ಆ ಪಾನಿಪುರಿ ಮಾರುವವನನ್ನು ಕೇಳಿದರೆ ಅವನು ಸನ್ನೆಯಿಂದ ಹೇಳಿದ ಸುಮ್ಮನೆ ಇರಿ ಎಂದನು ನಮಗೆ ಏಕೆ ಬೇರೆಯವರ ವಿಚಾರ ಎಂದು ಸುಮ್ಮನಾದವು ನಂತರ ನಮ್ಮ ಸರದಿ ಬಂತು ಎಲ್ಲರೂ ಪಾನಿಪುರಿ ಮಸಾಲೆಪುರಿ ತೆಗೆದುಕೊಂಡು ತಿಂದು ಮುಗಿಸುತ್ತಿದ್ದೆವು.

 ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ಸುಚಿರಾಯಸ್  ಕಾರಿನಲ್ಲಿ ಬಂದನು ಆ ವ್ಯಕ್ತಿಯು ಪಾನಿಪುರಿ ಮಾಲೀಕನ ಬಳಿಹೋಗಿ ದುಡ್ಡು ಎಷ್ಟಾಯ್ತು ಎಂದು ದುಡ್ಡನ್ನು ಕೊಟ್ಟನು.

 ಈ ವ್ಯಕ್ತಿ ವೃದ್ಧರು ನಿಮಗೆ ಏನಾಗಬೇಕು ಎಂದಾಗ ವ್ಯಕ್ತಿ ಹೇಳಿದನು ಅವರು ನಮ್ಮ ತಂದೆ ಅವರಿಗೆ ಮಾನಸಿಕ ಕಾಯಿಲೆ ಇದೆ ಆಗಾಗ ಅವರು ಮರೆತು ಬಿಡುತ್ತಾರೆ ಅಲ್ಜಿಮರ್ ಇದೆ ಇದಕ್ಕೆ ಸರಿಯಾದ ಔಷಧಿ ಇಲ್ಲ ನಾನೂ ಕೂಡ ಕೆಲಸ ಮಾಡಿಕೊಂಡು ಇದ್ದೇನೆ.

 ಫುಲ್ ಟೈಮ್ ಇವರಿಗೆ ನೋಡಿಕೊಳ್ಳಲು ನನಗೆ ಸಾಧ್ಯವಿಲ್ಲ ಕೆಲವು ಸಾರಿ ಹೀಗೂ ಆಗುವುದುಂಟು ಎಂದು ಹೇಳಿದರು ನಂತರ ಅದು ಸರಿ ನಿಮ್ಮ ತಂದೆಯನ್ನು ನೀವು ಹೇಗೆ ಹುಡುಕಿಕೊಂಡು ಇಲ್ಲಿಗೆ ಸರಿಯಾಗಿ ಬಂದಿದ್ದೀರಿ ಎಂದು ಕೇಳಿದರು ಆಗ ಅವರು ಹೇಳಿದರು ನಾನು ಚಿಕ್ಕವನಾಗಿ ಇದ್ದಾಗ ನಾನು ಮನೆ ಬಿಟ್ಟು ಆಟ ಆಡಲಿಕ್ಕೆ ಎಲ್ಲೆಲ್ಲೋ ಓಡಿಹೋಗುತ್ತಿದೆ ತಂದೆ ಮನೆಗೆ ಬಂದರೂ ನಾನು ಬರುತ್ತಿರಲಿಲ್ಲ.

 ನಾನು ಬರಲಿಲ್ಲ ಎಂದರೆ ತಾಯಿ ಆತಂಕದಿಂದ ಇದ್ದು ತಂದೆಗೆ ಹೇಳುತ್ತಿದ್ದರು ಆಗ ನಮ್ಮ ತಂದೆ ಡ್ಯೂಟಿ ಮಾಡಿ ಸುಸ್ತಾಗಿದ್ದರೂ ಕೂಡ ತಾಯಿಯ ಅಳು ನೋಡಲಾರದೆ ನನ್ನನ್ನು ಹುಡುಕಿಕೊಂಡು ಬರುತ್ತಿದ್ದರು.

 ನಾನು ತುಂಬಾ ತುಂಟನಾಗಿದ್ದೆ ಒಂದು ಸರಿ ಬೀದಿಯಲ್ಲಿ ಒಂದು ಸಾರಿ ಮಾರ್ಕೆಟ್ ನಲ್ಲಿ ಇನ್ನೊಂದು ಸರಿ ಸಂತೆಯಲ್ಲಿ ಇರುತ್ತದೆ ನಮ್ಮ ತಂದೆ ಸರಿಯಾಗಿ ನನ್ನನ್ನು ಹುಡುಕಿಕೊಂಡು ಬರುತ್ತಿದ್ದರು.

 ಅವರು ನನಗೆ ತುಂಬಾ ಕಷ್ಟದಿಂದ ಹುಡುಕುತ್ತಿದ್ದರು ಆದರೆ ಈಗ ನಾನು ತುಂಬಾ ಸುಲಭವಾಗಿ ತಂದೆಯವರನ್ನು ಹುಡುಕುತ್ತೇನೆ ಈಗ ಹೊಸ ಟೆಕ್ನಾಲಜಿ ಇದೆ ಅವರ ಹತ್ತಿರ ಒಂದು ಮೊಬೈಲನ್ನು ಫುಲ್ ಚಾರ್ಜ್ ಮಾಡಿ ಇಟ್ಟಿದ್ದೇನೆ ಇವರು ಎಲ್ಲೇ ಹೋದರೂ ನನಗೆ ಗೊತ್ತಾಗುತ್ತದೆ ಅದರಂತೆ ನಾನು ಬಂದು ಇವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ತಂದೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋದನು.

ಮೊಬೈಲ್ ಕಳ್ಳ

ಒಂದು ಶಾಲೆಯಲ್ಲಿ ನಡೆದ ಘಟನೆ ಶಾಲೆಗೆ ವಿದ್ಯಾರ್ಥಿಗಳು ಮೊಬೈಲ್ ತರಬಾರದು ಈ ನಿಯಮವನ್ನು ಎಲ್ಲರೂ ಸಾಮಾನ್ಯವಾಗಿ ಪಾಲನೆ ಮಾಡುತ್ತಾರೆ ಸಾಕೇತ್ ವಿದ್ಯಾರ್ಥಿ ಮಾತ್ರ ಒಂದು ದಿನ ಅವರ ತಾಯಿ ಕೆಲಸಕ್ಕೆ ಹೋಗುತ್ತಾರೆ ಬರಬೇಕಾದರೆ ಸ್ವಲ್ಪ ತಡವಾಗಬಹುದು ಎಂದು ವಿದ್ಯಾರ್ಥಿಗೆ ಮೊಬೈಲನ್ನು ಕೊಟ್ಟು ಕಳುಹಿಸುತ್ತಾರೆ.

 ಆಗ ಆ ವಿದ್ಯಾರ್ಥಿಯು ಶಿಕ್ಷಕರಿಂದ ಅನುಮತಿ ಪಡೆದು ತನ್ನ ಬ್ಯಾಗಿನಲ್ಲಿ ಮೊಬೈಲ್ ಇಟ್ಟಿರುತ್ತಾನೆ ಬೇರೆ ಚಟುವಟಿಕೆ ಇರುವುದರಿಂದ ಎಲ್ಲ ಬ್ಯಾಗುಗಳನ್ನು ಮೈದಾನಕ್ಕೆ ತೆರಬೇಕಾಗಿರುತ್ತದೆ ಆಗ ಆ ಹುಡುಗನ ಮೊಬೈಲ್ ಕೆಳಗೆ ಬೀಳುತ್ತದೆ ನಂತರ ಒಬ್ಬ ವಿದ್ಯಾರ್ಥಿ ಮೊಬೈಲ್ ನೋಡಿ ಆ ಮೊಬೈಲನ್ನು ಪ್ರಿನ್ಸಿಪಾಲರಿಗೆ ಕೊಡುತ್ತಾನೆ ಪ್ರಿನ್ಸಿಪಾಲ್ ಅವರು ಇವನ ಪ್ರಾಮಾಣಿಕತೆ ನೋಡಿ ಒಂದು ಬುಕ್ಕನ್ನು ಬಹುಮಾನವಾಗಿ ನೀಡುತ್ತಾರೆ.

  ಇದನ್ನು ನೋಡಿದ ಒಬ್ಬ ಹುಡುಗ ಇವನನ್ನು ಮೊಬೈಲ್ ಕಳ್ಳ ಎಂದು ಹೇಳುತ್ತಾನೆ ಕೆಲವರ ಗುಣ ಬೇರೆಯವರನ್ನು ಸಿಕ್ಕಿಸಿ ಆನಂದ ಪಡುವುದು ಅಷ್ಟರಲ್ಲಿ ಸುದ್ದಿ ಹಬ್ಬಿ ಮೊಬೈಲ್ ಕಳ್ಳ ಎಂದು ಹೇಳುತ್ತಿರುತ್ತಾರೆ ನಂತರ ಶಾಲೆಗೆ ಬರುತ್ತಾನೆ ಆವಾಗ ಶಿಕ್ಷಕರು ಕೂಡ ಮೊಬೈಲ್ ಕಳ್ಳ ಎಂದು ಹೇಳುತ್ತಾರೆ ಆಗ ಹುಡುಗನಿಗೆ ಕೋಪ ಬಂದು ನೀನು ದೊಡ್ಡ ಕಳ್ಳ ಎಂದು ಏಕ ವಚನದಲ್ಲಿ ಹೇಳುತ್ತಾರೆ.

 ಅದೇ ಕೊನೆಯ ದಿನ ನಂತರ ಅವನು ಶಾಲೆಗೆ ಬರುವುದಿಲ್ಲ ಪ್ರಿನ್ಸಿಪಾಲರು ಹುಡುಗ ಏಕೆ ಶಾಲೆಗೆ ಬರುತ್ತಿಲ್ಲ ಎಂದು ವಿಚಾರಿಸಿದಾಗ ಈ ಘಟನೆ ತಿಳಿಯುತ್ತದೆ.

 ಶಾಲೆ ಬಿಡಲು ಯಾರು ಕಾರಣಕರ್ತರು ಕೆಲವು ಸಾರಿ ಕೂಲಂಕುಷವಾಗಿ ಪರೀಕ್ಷೆ ಮಾಡದೆ ನೇರವಾಗಿ ಹೇಳುವುದು ತಪ್ಪಲ್ಲವೇ ಯಾರನ್ನೇ ನಾವು ಏನೇ ಹೇಳಬೇಕಾದರೂ ಸರಿಯಾದ ಮಾಹಿತಿ ತಿಳಿದು ಹೇಳುವುದು ಒಳ್ಳೆಯದು ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತದೆ.

ಶಿಕ್ಷಕರೇ ಆಗಿರಬಹುದು ವಿದ್ಯಾರ್ಥಿ ಗಳೇ ಆಗಿರಬಹುದು ಇತರರು ಯಾರೇ ಆಗಿರಬಹುದು ಯಾವುದೇ ಕಾರಣಕ್ಕೂ ಬಯ್ಯುವ ಮೊದಲು ಆರೋಪಿಸುವ ಮೊದಲು ಸರಿಯಾದ ಮಾಹಿತಿಯನ್ನು ತಿಳಿದ ನಂತರವೇ ಹೇಳೋಣ. 

ಉತ್ತಮ ಮನುಷ್ಯ ಯಾರು?

ಒಂದು ಊರಿನಲ್ಲಿ ಒಂದು ದೊಡ್ಡ ಆಶ್ರಮ ಇರುತ್ತದೆ ಆ ಆಶ್ರಮದಲ್ಲಿ ಹೋಗಿ ಸೇರಬೇಕಾದರೆ ಶುಭಗಿಂದ್ರ ಗುರುಗಳು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು ಆ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಉತ್ತರ ಸರಿಯಾಗಿದ್ದರೆ ಅವರನ್ನು ಸೇರಿಸಿಕೊಳ್ಳುತ್ತಿದ್ದರು ಇಲ್ಲದಿದ್ದರೆ ಮತ್ತೆ ಬನ್ನಿ ಎಂದು ಕಳುಹಿಸುತ್ತಿದ್ದರು.

 ಚಾಣಾಕ್ಷ ಹಿರೇಂದ್ರ ವಿದ್ಯಾರ್ಥಿಗೆ ಉತ್ತಮ ಮನುಷ್ಯ ಯಾರು ಎಂದು ಕೇಳಿದರು ಉತ್ತಮ ಮನುಷ್ಯನು ತನ್ನ ಆತ್ಮವನ್ನು ಪ್ರೀತಿಸುತ್ತಾನೆ ಅಧಮನು ತನ್ನಲ್ಲಿ ಇರುವ ಐಶ್ವರ್ಯವನ್ನು ಸಂಪತ್ತನ್ನು ಪ್ರೀತಿಸುತ್ತಾನೆ ಹಾಗೆಯೇ ತನ್ನ ತಪ್ಪುಗಳಿಗೆ ತಾನೇ ಮಾಡಿದ್ದು ನಂತರ ಮಾಡುವುದಿಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳುತ್ತಾನೆ.

 ಅಧಮನು ತಾನು ಕೊಟ್ಟಿದ್ದು ಇವನಿಗೆ ಸಿಕ್ಕ ಚಿಕ್ಕ ಪ್ರಶಸ್ತಿಗಳು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ ಉತ್ತಮನು ಪ್ರಶಸ್ತಿ ಬಂದರೆ ಅದಕ್ಕೆ ನಾನು ಅರ್ಹನೆ ಎಂದು ಚಿಂತಿಸುತ್ತಾನೆ. ಉತ್ತಮನು ಬೇರೆಯವರಿಗೆ ಗೌರವಿಸುತ್ತಾನೆ ಅಧಮನು ಇತರರಿಗೆ ಹೀಯಾಳಿಸುತ್ತಾನೆ ಇದೆ ಇಬ್ಬರಿಗೂ ಇರುವ ವ್ಯತ್ಯಾಸ ಎಂದು ಹೇಳುತ್ತಾನೆ ಆಗ ಗುರುಗಳು ಸಂತೋಷದಿಂದ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳುತ್ತಾರೆ.

Leave a Comment