ಒಂದು ಸಾರಿ ಕಳಂದ್ ರಾಜ ತನ್ನ ಊರನ್ನು ಮೆರವಣಿಗೆ ಮಾಡಿಕೊಂಡು ಬರಬೇಕಾದರೆ ಒಬ್ಬ ಇಕ್ಷುಚಾಪ್ ವ್ಯಕ್ತಿ ಧ್ಯಾನಾಸಕ್ತನಾಗಿ ಊರಿನ ಆಚೆ ಕುಳಿತಿದ್ದನು ಆದರೆ ಇವನ ಬಟ್ಟೆ ಹರುಕು ಮುರುಕಾಗಿ ಇತ್ತು ರಾಜ ಮೆರವಣಿಗೆ ಬರುತ್ತಿದ್ದಾನೆ ಎಂದು ಎಲ್ಲರೂ ನಮಸ್ಕರಿಸುತ್ತಿದ್ದರು.
ಆ ವ್ಯಕ್ತಿ ಮಾತ್ರ ಧ್ಯಾನದಲ್ಲೇ ಇದ್ದನು ಇದನ್ನು ಗಮನಿಸಿದ ರಾಜನಿಗೆ ಸಿಟ್ಟು ಬಂತು ನಾನು ಬರುತ್ತಿರುವುದು ಗೊತ್ತಾದರೂ ಕೂಡ ಇವನು ಹೀಗೆಯೇ ಇದ್ದಾನಲ್ಲ ಎಷ್ಟು ಅಹಂಕಾರ ಇರಬೇಕು ಎಂದು ಮಂತ್ರಿಗೆ ಕಳಿಸಿದನು ಮಂತ್ರಿಯೂ ಇವನಿಗೆ ಸರಿಯಾದ ಶಿಕ್ಷೆ ನೀಡುತ್ತೇನೆ ಎಂದು ಹೋದನು.
ಮಂತ್ರಿ ಹೇಳಿದನು ರಾಜ ಬರುತ್ತಿದ್ದರೂ ಕೂಡ ಅವರಿಗೆ ಗೌರವಿಸದೆ ನೀನು ಹೀಗೆ ಕುಳಿತಿದ್ದೀಯಾ ಎಷ್ಟು ಅಹಂಕಾರ ಎಷ್ಟು ಅಹಂಕಾರವಿದೆ ನಿನಗೆ ಎಂದಾಗ ನಿಧಾನವಾಗಿ ಗುರುಗಳು ಕಣ್ಣು ಬಿಟ್ಟು ಯಾರು ಅಹಂಕಾರಿ ರಾಜನ ಎಂಜಲಿಗೆ ಕೈ ಒಡ್ಡಿ ಏನು ಕೊಡುತ್ತಾನೆ ಅದಕ್ಕೆ ಅವನಿಗೆ ಭಕ್ತಿ ವಿನಯ ತೋರಿಸುವವರು ಗುಲಾಮರು ನಾನು ಗುಲಾಮನಲ್ಲ ನನಗೆ ರಾಜನಿಂದ ಏನು ಬೇಕಾಗಿಲ್ಲ.
ನನ್ನಷ್ಟಕ್ಕೆ ನನಗೇ ಎಲ್ಲವೂ ಇದೆ ಆದರೆ ನಿಮ್ಮ ರಾಜ ಅಹಂಕಾರಿ ಏಕೆಂದರೆ ರಾಜನಾದರೆ ಅವನ ಕರ್ತವ್ಯ ಎಲ್ಲರ ರಕ್ಷಣೆ ಮಾಡುವುದು ಎಂದು ಹೇಳಿದರು ಮಂತ್ರಿಯು ಕೂಡ ಇದನ್ನು ಅರಿತು ಸುಮ್ಮನೆ ಹೊರಟು ಹೋದನು.
ಹಸಿದವರು ಊಟ ಮಾಡಲಿ
ಒಂದು ಊರಿನಲ್ಲಿ ಬರಗಾಲ ಬಂದು ತಿನ್ನಲಿಕ್ಕೆ ಅನ್ನವು ಕೂಡ ಸಿಗುತ್ತಿರುವುದಿಲ್ಲ ಎಲ್ಲರೂ ಭಯಭೀತರಾದರು ಆಗ ಅಲ್ಲಿಗೆ ಬಾಬಾ ಬಂದರು ಇಲ್ಲಿಯ ಪರಿಸ್ಥಿತಿ ನೋಡಿ ಏನು ಮಾಡಬಹುದು ಎಂದು ಚಿಂತಿಸಿದರು ಅದರಲ್ಲಿ ಒಬ್ಬ ಉದಾಲಕ್ ಊರಿನವನು ಹೇಳಿದನು.
ನಮ್ಮ ಊರಿನಲ್ಲಿ ಕೆಲವರು ಶ್ರೀಮಂತರಿದ್ದಾರೆ ಅವರು ನಮಗೆ ಸ್ವಲ್ಪ ಹಣ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದನು ಆದರೆ ಇದಕ್ಕೆ ಕೆಲವು ಶ್ರೀಮಂತರು ಒಪ್ಪಲಿಲ್ಲ ನಂತರ ಈ ಏನು ಮಾಡಬೇಕು ಎಂದು ಚಿಂತಿಸುತ್ತಿದ್ದಾಗ ಒಂದು ಹುಡುಗಿ ಬಂದು ನಾನೂ ಕೂಡ ಸಹಾಯ ಮಾಡುತ್ತೇನೆ ಎಂದು ಹೇಳಿದಳು.
ಆಗ ಎಲ್ಲರೂ ಆ ಹುಡುಗಿಯನ್ನು ನೋಡಿದರೆ ಈ ಚಿಕ್ಕ ಹುಡುಗಿ ಏನು ಸಹಾಯ ಮಾಡಬಲ್ಲಳು ಎಂದು ಯೋಚಿಸಿದರು ಆಗ ಆ ಹುಡುಗಿಯೂ ಮುಂದೆ ಬಂದು ಇಲ್ಲಿ ತೊಂದರೆ ಯಾಗಿರುವುದರಿಂದ ಮೊದಲು ನಾನು ಮನೆ ಮನೆಗೆ ಹೋಗಿ ಅನ್ನವನ್ನು ಭಿಕ್ಷೆ ಪಡೆದು ಬರುತ್ತೇನೆ ನಂತರ ಉಪವಾಸ ಇರುವವರಿಗೆ ನೀಡುತ್ತೇನೆ.
ಮೊದಲು ಹಸಿದವರು ಊಟ ಮಾಡಲಿ ನಂತರ ನಾವೆಲ್ಲರೂ ಕುಳಿತು ಯೋಚಿಸೋಣ ಎಂದು ಹೇಳಿದಳು ಆಗ ಈ ಮಾತಿಗೆ ಎಲ್ಲರೂ ಒಪ್ಪಿದರು ಈ ಹುಡುಗಿ ತುಂಬಾ ಶ್ರೀಮಂತನ ಮಗಳೆ ಆಗಿದ್ದಳು ಆದರೂ ಇವಳಿಗೆ ಹಸಿವು ಏನೆಂದು ತಿಳಿದಿತ್ತು ನಂತರ ಭಿಕ್ಷೆ ಬೇಡಲು ಮುಂದಾದಳು.
ನಂತರ ಇತರರು ಜೊತೆಗೆ ಬಂದರು ಕೆಲವು ತಿಂಗಳಲ್ಲೇ ಈ ಸಮಸ್ಯೆ ಬಗೆಹರಿಯಿತು ಹುಡುಗಿಯ ಸೃಜನಶೀಲತೆ ಒಪ್ಪುವಂತದ್ದು ಏಕೆಂದರೆ ತಕ್ಷಣಕ್ಕೆ ಏನು ಬೇಕೋ ಅದನ್ನು ಮಾಡಿ ತೋರಿಸಿದಳು.
ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ
ಹಲವಾರು ವರ್ಷಗಳ ಹಿಂದೆ ಒಬ್ಬ ಬಾಲಕ ಶಾಲೆಯಿಂದ ಬಂದು ನಡುಗುತ್ತಿದ್ದನು ತಾಯಿಯಾದವರು ಮಗ ಏಕೆ ನಡುಗುತ್ತಿದ್ದಾನೆ ಎಂದು ಇನ್ನೊಂದು ಕಂಬಳಿಯನ್ನು ಹಾಕಿದರು ಆದರೂ ಮಗ ನಡುಗುತ್ತಲೇ ಇದ್ದಾನೆ ಮನೆಯಲ್ಲಿ ಇದ್ದ ಎಲ್ಲ ಕಂಬಳಿಗಳು ಕೂಡ ಹಾಕಿದರು ಮಗನಿಗೆ ಚಳಿ ತಡೆಯಲು ಆಗುತ್ತಿಲ್ಲ ಆಗ ತಾಯಿಯು ಕೇಳಿದರೂ ಏಕೆ ಹೀಗೆ ನಡುಗುತಿದೆಯಾ ನಿನಗೆ ಏನು ಆಗುತ್ತಿದೆ ಎಂದು ಕೇಳಿದಾಗ ಆ ಹುಡುಗನು ಹೇಳಿದನು.
ನನಗೆ ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ ಇಂದು ನಾನು ದಾರಿಯಲ್ಲಿ ಬರಬೇಕಾದರೆ ದಾರಿಯ ಬದಿಯಲ್ಲಿ ಹಲವಾರು ನಿರ್ಗತಿಕರು ಇದ್ದರು ಅವರಿಗೆ ಸರಿಯಾಗಿ ಬಟ್ಟೆಯು ಇಲ್ಲ ಹಾಗೆ ಹಾಸಿಗೆಯು ಹೊದಿಕೆ ಕಂಬಳಿಯೂ ಇಲ್ಲ ಅವರೆಲ್ಲರೂ ಚಳಿಯಿಂದ ನಡುಗುತ್ತಿದ್ದಾರೆ.
ಈ ದೃಶ್ಯವನ್ನು ನಾನು ಕಣ್ಣಾರೆ ಕಂಡೆ ಅವರನ್ನು ಚಳಿಯಿಂದ ಹೇಗೆ ಪಾರು ಮಾಡುವುದು ಎಂದು ಚಿಂತಿಸುತ್ತಿದ್ದೇನೆ ಅದಕ್ಕಾಗಿ ನನಗೆ ನಿದ್ದೆ ಬರುತ್ತಿಲ್ಲ ದೈಹಿಕವಾಗಿ ಮಾನಸಿಕವಾಗಿ ಚಳಿಯಾಗುತ್ತಿದೆ ಎಂದು ಹೇಳಿದನು ಈ ಹುಡುಗನೇ ವಾಸ್ವಾನಿ ಎಂದು ಹೆಸರು ಪಡೆದು ಸಂತರಾದರು.
ಇವರು ಪುಣೆಯಲ್ಲಿ ಸಾಧು ವಾಸ್ವಾನಿ ಮಿಷನ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದರು ನಂತರ ಹಲವಾರು ಶಾಲೆಗಳನ್ನು ಹುಟ್ಟುಹಾಕಿದರು ಬದುಕಿನ ಕೊನೆಯವರೆಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದರು.
ಕಲ್ಲಿನಿಂದ ಹೊಡೆಯಲು
ಒಂದು ಕಾಡಿನಲ್ಲಿ ಕೋತಿ ಮತ್ತು ಮೊಲ ಎರಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಬರುತ್ತಿದ್ದವು ನಂತರ ಒಂದು ಕಡೆ ಮೊಲ ಕುಳಿತುಕೊಂಡಿತು ಕೋತಿ ಮಾತ್ರ ಪದೇ ಪದೇ ತನ್ನ ಕೈಗಳಿಂದ ತನ್ನ ಮೈಯನ್ನು ಕೆರೆದುಕೊಳ್ಳುತ್ತಿತ್ತು ಮೊಲ ಕೂಡ ತನ್ನ ಕತ್ತು ಈಕಡೆ ಆಕಡೆ ತಿರುಗಿಸುತ್ತಲೇ ಇತ್ತು ಅಷ್ಟರಲ್ಲಿ ಮೊಲ ಹೇಳಿತು.
ಕೋತಿ ಅಣ್ಣ ನೀನು ಸುಮ್ಮನೆ ಕೂರಲಿಕ್ಕೆ ಸಾಧ್ಯವಿಲ್ಲವೇ ಎಂದು ಹೇಳಿತು ಆಗ ಕೋತಿ ಹೇಳಿತು ಮೊಲಕ್ಕೆ ನೀನೂ ಕೂಡ ಆಗಾಗ ತಲೆ ಅಲ್ಲಾಡಿಸುತಿದ್ದೀಯಾ ತಲೆ ಅಲ್ಲಾಡಿಸದೆ ಇರಲು ಸಾಧ್ಯವಿಲ್ಲವೇ ಎಂದು ಕೋತಿ ಕೇಳಿತು ಆಗ ಎರಡು ಪ್ರಾಣಿಗಳು ಕೂಡ ಯಾರು ಹೆಚ್ಚು ಹೊತ್ತು ಸುಮ್ಮನಿರುತ್ತಾರೋ ಅವರೇ ಗೆದ್ದಂತೆ ಯಾರು ಮೊದಲು ಅಲುಗಾಡಿಸುತ್ತಾರೆ ಕೆರೆದುಕೊಳ್ಳುತ್ತಾರೆ ಅವರು ಸೋತಂತೆ ಎಂದು ಕೋತಿ ಮತ್ತು ಮೊಲ ಒಪ್ಪಿಕೊಂಡವು.
ಕೋತಿ ಮೊಲ ಸುಮ್ಮನೆ ನೋಡುತ್ತಿದ್ದವು ಅಬ್ಬಬ್ಬಾ ಎಂದರೆ ಒಂದು ನಿಮಿಷ ಕಳೆದಿರಬಹುದು ಅಷ್ಟೆ ಕೋತಿಗೆ ಕೆರೆದುಕೊಳ್ಳದೆ ಕಷ್ಟವಾಗುತ್ತಿದೆ ಅದೇ ರೀತಿ ಮೊಲಕ್ಕೂ ಕತ್ತು ಅಲ್ಲಾಡಿಸದೆ ಇರುವುದರಿಂದ ಅದಕ್ಕೂ ಅಷ್ಟೇ ಕಷ್ಟವಾಗುತ್ತಿದೆ. ಆಗ ಬುದ್ಧಿವಂತ ಮೊಲ ಹೇಳಿತು ಕೋತಿಯನ್ನು ನಾವು ಅಲುಗಾಡಬಾರದು ಎಂದು ಷರತ್ತು ಮಾಡಿಕೊಂಡಿದ್ದೇವೆ ಆದರೆ ಒಬ್ಬರಿಗೆ ಒಬ್ಬರು ಕಥೆ ಹೇಳಬಹುದು ಎಂದು ಹೇಳಿತು.
ಮೊಲ ಒಂದು ಕಥೆ ಹೇಳಲು ಶುರು ಮಾಡಿತು ನಾನು ಒಂದು ದಿನ ಊರಿನಿಂದ ಬರಬೇಕಾದರೆ ಶತ್ರುಗಳು ನಾಲ್ಕಾರು ಕಡೆಯಿಂದ ಅಟ್ಟಿಸಿಕೊಂಡು ಬರುತ್ತಿದ್ದರು ಎಂದು ಹೇಳುವಷ್ಟರಲ್ಲಿ ಕೋತಿಯು ಕೂಡ ಹೌದು ನನಗೆ ಒಂದು ಸರಿ ಹೀಗೆ ಆಯಿತು ಎಂದು ಹೇಳಿತು.
ಮೊಲ ಹೇಳಿತು ನಾನು ಬರುತ್ತಿರಬೇಕಾದರೆ ಯಾವ ಕಡೆಯಿಂದ ಶಬ್ದ ಬರುತ್ತಿದೆ ಎಂದು ನೋಡಲೆಂದು ನಾನು ಆ ಕಡೆ ಈ ಕಡೆ ಎಲ್ಲವೂ ತಿರುಗಿ ನೋಡಿದೆ ಎನ್ನುತ್ತಾ ತನ್ನ ಕುತ್ತಿಗೆಯನ್ನು ತಿರುಗಿಸಿ ಕೊಂಡಿತು ಹೌದಾ ಎಂದು ಕೋತಿಯು ಕೂಡ ಹೇಳಿತು.
ಕೋತಿಯು ನಾನು ಊರಿನಿಂದ ಬರಬೇಕಾದರೆ ಎಲ್ಲಾ ಹುಡುಗರೂ ಕೂಡ ನನಗೆ ಕಲ್ಲಿನಿಂದ ಹೊಡೆಯಲು ಶುರು ಮಾಡಿದರು ಬಹಳಷ್ಟು ಕಲ್ಲುಗಳು ತಪ್ಪಿಸಿಕೊಂಡೆ ಆದರೆ ಕೆಲವು ಕಲ್ಲುಗಳು ಮಾತ್ರ ಹೊಟ್ಟೆಗೆ ಬಂದು ಬಿತ್ತು ಎಂದು ಕೆರೆದು ಕೊಂಡಿತು ಮತ್ತೆ ಇಲ್ಲಿಯೂ ಬಿದ್ದಿತು ಎಂದು ತೃಪ್ತಿಯಾಗುವಷ್ಟು ಕೆರೆದುಕೊಂಡಿತು.
ಮೊಲಕ್ಕೆ ಮತ್ತು ಕೋತಿಗೆ ಪರಿಸ್ಥಿತಿಯು ಅರ್ಥವಾಯಿತು ಎರಡು ಪ್ರಾಣಿಗಳು ನಕ್ಕವು ಏನೇ ಮಾಡಿದರೂ ನಮಗೆ ಹುಟ್ಟಿನಿಂದ ಬಂದ ಸ್ವಭಾವಗಳು ಹೋಗುವುದಿಲ್ಲ ಎಂದು ಅರಿತುವು ಈ ಪಂದ್ಯದಲ್ಲಿ ಯಾರು ಸೋಲಲೂ ಇಲ್ಲ ಯಾರು ಗೆಲ್ಲಲೂ ಇಲ್ಲ ಹಾಗೆಯೇ ಕೆಲವು ಗುಣಗಳು ಮನುಷ್ಯರಲ್ಲಿ ಇವೆ ಅವು ಯಾವುದೇ ಕಾರಣಕ್ಕೆ ಬದಲಾಗಲಾರವು.
ಮಾರಲಿಕ್ಕೆ ಮನಸು ಬರಲಿಲ್ಲ
ಒಂದು ಊರಿನಲ್ಲಿ ತುಕಾರಾಂ ಎಂಬುವ ವ್ಯಾಪಾರಿ ಇದ್ದನು ದಿನ ಕಳೆದಂತೆ ಅವನ ವ್ಯಾಪಾರವು ಕಡಿಮೆಯಾಗುತ್ತಾ ಬಂತು ನಂತರ ತುಕಾರಾಂ ಯೋಚನೆ ಮಾಡಿದನು ಬೇರೆ ಊರಿನಲ್ಲಿ ನಾನು ವ್ಯಾಪಾರ ಮಾಡುತ್ತೇನೆ ಎಂದು ಕೆಲವು ವಸ್ತುಗಳನ್ನು ಮಾರಿದನು.
ಒಂದು ತಕ್ಕಡಿ ಇತ್ತು ಅದನ್ನು ಮಾರಲಿಕ್ಕೆ ಮನಸು ಬರಲಿಲ್ಲ ಏಕೆಂದರೆ ಮತ್ತೆ ನಾನು ಇಲ್ಲಿ ಬಂದರೆ ನನಗೆ ಉಪಯೋಗವಾಗುತ್ತದೆ ಎಂದು ಯೋಚನೆ ಮಾಡಿ ತನ್ನ ಮಿತ್ರನ ಬಳಿ ಹೋದ ನಾನು ಕೆಲವು ತಿಂಗಳುಗಳ ಕಾಲ ಬೇರೆ ಊರಿಗೆ ಹೋಗಿ ಸಂಪಾದನೆ ಮಾಡಿಕೊಂಡು ಬರುತ್ತೇನೆ ಈ ತಕ್ಕಡಿಯನ್ನು ಇಟ್ಟಿರು ಎಂದು ತಕ್ಕಡಿಯನ್ನು ಕೊಟ್ಟು ಹೊರಟು ಹೋದನು.
ತುಕಾರಾಂ ಬೇರೆ ಊರಿಗೆ ಹೋದನು ಚೆನ್ನಾಗಿ ಸಂಪಾದನೆ ಮಾಡಿದನು ನಂತರ ಬಂದನು ಮಿತ್ರ ನನ್ನ ತಕ್ಕಡಿ ಕೊಡು ಎಂದು ಕೇಳಿದನು ಆಗ ಮಿತ್ರನೂ ಹೇಳಿದನು ನಿನ್ನ ತಕ್ಕಡಿ ನಾನು ಅಟ್ಟದ ಮೇಲೆ ಇಟ್ಟಿದೆ ತಕ್ಕಡಿಗೆ ಇಲಿಗಳು ತಿಂದು ತುಕ್ಕು ಹಿಡಿದು ನಾಶವಾಗಿ ಹೋಗಿದೆ ನಾನು ಹೇಗೆ ಕೊಡಲಿ ಎಂದು ಸುಳ್ಳು ಹೇಳಿದನು.
ತುಕಾರಾಮ್ ಗೆ ತುಂಬಾ ಬೇಸರ ಬೇಸರವಾಯಿತು ಮನೆಗೆ ಹೋದನು ಮಾರನೆಯ ದಿನ ಆ ಮಿತ್ರನ ಮಗ ಶಾಲೆಗೆ ಬಂದಿದ್ದನು ಆಗ ಮಿತ್ರನ ಮಗನನ್ನು ಮಾತನಾಡಿಸಿ ನನ್ನ ಮನೆಗೆ ಬಂದು ಹೋಗು ಎಂದು ಹೇಳಿ ಮಗನನ್ನು ತನ್ನ ಮನೆಯ ಒಳಗೆ ಕೂರಿಸಿ ಬೀಗಹಾಕಿ ಬಂದನು ನಂತರ ಮಿತ್ರನ ಹತ್ತಿರ ಹೋದನು ನಾನು ಸಂತೆಯಿಂದ ಬರ ಬೇಕಾದರೆ ನಿನ್ನ ಮಗ ಸಿಕ್ಕಿದನು ಅಲ್ಲೇ ಪ್ರಸಾದ ಕೊಡುತ್ತಿದ್ದರೂ ಎಲ್ಲರೂ ಪ್ರಸಾದ ತಿನ್ನಬೇಕಾದರೆ ನಿನ್ನ ಮಗನನ್ನು ಹದ್ದು ಎತ್ತಿಕೊಂಡು ಹೋಯಿತು ಎಂದು ಹೇಳಿದನು.
ಈ ಮಾತನ್ನು ಕೇಳಿದ ಮಿತ್ರನೂ ಕೆಂಡಾಮಂಡಲವಾದ 8ವರ್ಷದ ಹುಡುಗನಿಗೆ ಹದ್ದು ಎತ್ತಿಕೊಂಡು ಹೋಗಲು ಸಾಧ್ಯವೇ? ನೀನು ಸುಳ್ಳು ಹೇಳುತ್ತಿದ್ದೀಯಾ ನನ್ನ ಮಗನನ್ನು ಕೊಡದಿದ್ದರೆ ನಿನ್ನನ್ನು ಸೆರೆಮನೆಗೆ ಕಳಿಸುತ್ತೇನೆ ಎಂದು ಹೆದರಿಸಿದನು. ಆಗ ತುಕಾರಾಮ್ ನನ್ನ ಕಬ್ಬಿಣದ ತಕ್ಕಡಿ ಇಲಿಗಳು ತಿನ್ನಬಹುದಾದರೆ ನಿನ್ನ ಮಗನನ್ನು ಹದ್ದು ಎತ್ತಿಕೊಂಡು ಹೋಗಲು ಸಾಧ್ಯವಾಗಬಹುದಲ್ಲವೆ ಎಂದನು.
ಆಗ ಮಿತ್ರನಿಗೆ ಅರ್ಥ ವಾಯಿತು ಮನೆಯಲ್ಲಿ ಇದ್ದ ತಕ್ಕಡಿಯನ್ನು ತಂದು ಕೊಟ್ಟ ಅದರಂತೆ ಅವನ ಮಗನಿಗೂ ತಂದುಬಿಟ್ಟನು ಯಾವುದೇ ಸಮಸ್ಯೆ ಬಂದರು ಅದನ್ನು ಕೂಲಂಕಷವಾಗಿ ವಿಮರ್ಶಿಸಿ ನಂತರ ನಿರ್ಧರಿಸೋಣ.