ನಮ್ಮ ಭವಿಷ್ಯವನ್ನು ಕಟ್ಟುತ್ತಿದ್ದೇವೆ

ಪ್ರಕೃತಿ ವಿಕೋಪಗಳು ಆಗಾಗ ಸಂಭವಿಸುತ್ತಿರುತ್ತದೆ ಕೆಲವೊಂದು ಕಡೆ ಕಡಿಮೆ ಕೆಲವೊಂದು ಕಡೆ ಜಾಸ್ತಿ ಹೀಗೆ ನಡೆಯುತ್ತಲೇ ಇರುತ್ತದೆ ಒಂದು ಸಾರಿ ಪ್ರಕೃತಿ ವಿಕೋಪ ಬಂದು ಒಂದು ಊರೇ ನಾಶವಾಗಿ ಹೋಯಿತು.

 ಅಲ್ಲಿ ಕೆಲವು ಕುಟುಂಬಗಳು ಮಾತ್ರ ಉಳಿದವು ಆ ಊರಿನಲ್ಲಿ ಇರಲು ಸಾಧ್ಯವಾಗಲಿಲ್ಲ ಅದಕ್ಕೆ ಊರಿನಿಂದ ಆಚೆ ಬಂದಾಗ ಬೇರೆಯ ಒಂದು ಊರಿನಲ್ಲಿ ಅವರಿಗೆ ನಿರಾಶ್ರಿತರು ಎಂದು ಅವರಿಗಾಗಿ ವಸತಿಯನ್ನು ಕೊಟ್ಟರು ಸಾಧ್ಯವಾದಷ್ಟು ಅವರಿಗೆ ಊಟ ಬಟ್ಟೆಗಳನ್ನು ಸಮಯಕ್ಕೆ ಸಾಧ್ಯವಾದಷ್ಟು ಕೊಡುತ್ತಿದ್ದರು.

 ಇದೇ ರೀತಿ ನಿರಾಶ್ರಿತರಿಗೆ ಸರ್ಕಾರವೂ ಕೂಡ ಒಂದು ಕಡೆ ಸಹಾಯ ಮಾಡುತ್ತಿತ್ತು ನಿರಾಶ್ರಿತರಾದಾಗ ಒತ್ತಡ ಆತಂಕ ನಿರಾಶೆ ಖಿನ್ನತೆಯಿಂದ ಇರುತ್ತಾರೆ ಹಾಗೋ ಹೀಗೋ ದಿನಗಳು ಕಳೆಯುತ್ತಿದ್ದವು ಅಷ್ಟೂ ಕುಟುಂಬಗಳಲ್ಲಿ ಒಬ್ಬ ಆಶಾವಾದಿಯಾದ ರಾಜಣ್ಣ ಇದ್ದನು.

ರಾಜಣ್ಣ ಎರಡು ದಿನ ಇದ್ದ ಅಷ್ಟೆ ನಂತರ ಊರಿನಿಂದ ಹೊರಗೆ ಹೋಗಿ ಏನಾದರೂ ಮಾಡಬೇಕೆಂದು ಸುಮ್ಮನಿರದೆ ತನ್ನ ಮಗನಿಗೂ ನದಿಯ ತೀರಕ್ಕೆ ಕರೆದುಕೊಂಡು ಹೋದ ಮಕ್ಕಳು ಆಟವಾಡಲಿ ಎಂದು ಅಲ್ಲಿಯೇ ಬಿಟ್ಟು ನಂತರ ಬೆಳೆದಿದ್ದ ಬಿದಿರುಗಳನ್ನು ಕತ್ತರಿಸಿ ಸಂಗ್ರಹಿಸಿದ ಸಂಜೆಯವರೆಗೂ ಹಲವಾರು ಬಿದಿರುಗಳನ್ನು ಸಂಗ್ರಹಿಸಿದ ನಂತರ ತಾನು ಹಾಗೂ ತನ್ನ ಮಕ್ಕಳೊಂದಿಗೆ ಸ್ವಲ್ಪಸ್ವಲ್ಪ ಹೊರೆಯನ್ನು ಹೊರಿಸಿ ತಾವು ಇರುವ ನಿರಾಶ್ರಿತ ಸ್ಥಳಕ್ಕೆ ಬಂದರು,

ಅಲ್ಲಿ ಇಲ್ಲಿ ಹುಡುಕಿ ಒಂದು ಕಬ್ಬಿಣದ ಸರಳನ್ನು ಬಂಡೆಗೆ ಉಜ್ಜಿ ಚೂಪಾದ ಚಾಕುವನ್ನಾಗಿ ಮಾಡಿದನು ತಂದಿದ್ದ ಬಿದಿರುಗಳನ್ನು ಸರಿಯಾಗಿ ಸೀಳಿ ಸಮತಟ್ಟಾಗಿ ಮಾಡಿ ಬುಟ್ಟಿ ಹಣಿಯಲು ಶುರುಮಾಡಿದನು.

 ಮಗ ಕೇಳಿದ ಏನು ಮಾಡುತ್ತಿದ್ದೀರಾ ಎಂದನು ನಮ್ಮ ಭವಿಷ್ಯವನ್ನು  ಕಟ್ಟುತ್ತಿದ್ದೇವೆ ಎಂದು ಅಪ್ಪ ಹೇಳಿದನು ಮಗನಿಗೆ ಆಶ್ಚರ್ಯ ನಂತರ ಕೆಲವೇ ಗಂಟೆಗಳಲ್ಲಿ ಅತಿ ಸುಂದರವಾದ ಬಿದಿರಿನ ಬುಟ್ಟಿಗಳು ಸಿದ್ಧಗೊಳಿಸಿದನು ಮಾರನೆಯ ದಿನ ಅದನ್ನು ಹೊತ್ತುಕೊಂಡು ಊರಿನಲ್ಲಿ ಮಾರಿದನು.

ಬುಟ್ಟಿ ಮಾರಿದ್ದರಿಂದ ಸ್ವಲ್ಪ ಹಣವೂ ಬಂತು ನಂತರ ಮಗನೂ ಆಗಾಗ ನನಗೆ ಬಿಡಿಸಲು ಪುಸ್ತಕಬೇಕು ಎನ್ನುತ್ತಿದ್ದನು ಒಂದೆರಡು ಪುಸ್ತಕಗಳು ಹಾಗೂ ರಂಗುರಂಗಿನ ಉಲ್ಲನ್ ದಾರಗಳ ಮತ್ತೆ ಹಣೆಯುವ ಕಡ್ಡಿಗಳು ಕೂಡ ತನ್ನ ಪತ್ನಿಗೆ ತಂದುಕೊಟ್ಟನು.

 ಈಗ ನಮಗೆ ಬೇಕಾದಷ್ಟು ಸಮಯವಿದೆ ಈ ಸಮಯದಲ್ಲಿ ಸ್ವೆಟರ್ ಗಳನ್ನು ಹಣೆಯಬಹುದು ಎಂದನು ಆದರೆ ಪತ್ನಿಗೆ ಅಷ್ಟು ಇಷ್ಟವಾಗಲಿಲ್ಲ ಸುಮ್ಮನೆ ಕುಳಿತಿದ್ದೇವೆ ಮಾಡೋಣ ಎಂದು ಬೇಸರದಿಂದ ಆರಂಭಿಸಿದಳು ನಂತರ ಇವನು ಮಾಡಿದ ಬುಟ್ಟಿಗಳು ಹಾಗೂ ವುಲ್ಲನ್ನಿನ ಸ್ವೆಟರುಗಳನ್ನು ಹೊರಗೆ ಹೋಗಿ ಮಾರಿಕೊಂಡು ಬಂದನು.

ಅಲ್ಪಸ್ವಲ್ಪ ಹಣವೂ ಬರುತ್ತಿತ್ತು ನಂತರ ಅಲ್ಲಿದ್ದ ನಿರಾಶ್ರಿತರು ಕೂಡ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದರು ನಂತರ ಅದೇ ರೀತಿ ಕೆಲಸ ಆರಂಭವಾಯಿತು ಒಬ್ಬೊಬ್ಬರದು ಒಂದೊಂದು ಕೆಲಸ ಹೀಗೆ ಬೆಳೆಯುತ್ತಾ ಬೆಳೆಯುತ್ತಾ ನಿರಾಶ್ರಿತರ ಬದಲು ಅದೊಂದು ಆಶ್ರಮವೇ ಆಗಿ ಹೋಯಿತು ಹಲವು ದಿನಗಳಲ್ಲಿ ತಮ್ಮ ಸ್ವಂತ ಭವಿಷ್ಯವನ್ನು ನಿರ್ಮಿಸಿಕೊಂಡರು.

  ನಿರಾಶ್ರಿತರೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ  ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಅವಕಾಶಗಳು ಯಾವುದೇ ಕಾರಣಕ್ಕೂ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ಆದರೆ ನಾವೇ ಅವಕಾಶಗಳನ್ನು ಹುಡುಕಿಕೊಳ್ಳೋಣ.

ಬಿಟ್ಟುಬಿಡಿ ಎಂದು ಅಂಗಲಾಚುತ್ತಾರೆ

 

ಒಬ್ಬ ವಿದ್ಯಾವಂತ  ಹುಡುಗನಿಗೆ ಸುಮಾರು ಹದಿನಾರು ವರ್ಷ ಇರುತ್ತದೆ ಇವನಿಗೆ ಓದುವುದು ಎಂದರೆ ತುಂಬ ಆಸಕ್ತಿ ಹಾಗೆ ಇವನಿಗೆ ವೇದಾಂತ ಶಾಸ್ತ್ರವನ್ನು ಓದಬೇಕು ಎಂಬ ಉತ್ಸಾಹ ಆದರೆ ಇವರ ತಂದೆಯವರಿಗೆ ಡಾಕ್ಟರ್ ಆಗಬೇಕು ಎನ್ನುವುದು ಇವರ ಇಚ್ಛೆ ಆಗ ತಂದೆಯಾದವರು ಎಷ್ಟೋ ಸರಿ ಮನವೊಲಿಸುತ್ತಾರೆ ನೀನು ಡಾಕ್ಟರ್ ಆಗಬೇಕು ಇಲ್ಲದಿದ್ದರೆ ನಾನು ನಿನಗೆ ಹಣವನ್ನು ಕೊಡುವುದಿಲ್ಲ ಎಂದು ಹೆದರಿಸುತ್ತಾರೆ.

 ಆ ಹುಡುಗನಾದವನು ನಾನು ಓದಿದರೆ ವೇದಾಂತ ಮಾತ್ರ ಓದುತ್ತೇನೆ ಇಲ್ಲದಿದ್ದರೆ ನಾನು ಓದುವುದಿಲ್ಲ ಎಂದು ಮನೆಯನ್ನು ಬಿಟ್ಟು ಹೊರಗೆ ಬರುತ್ತಾನೆ ಅವನ ಹತ್ತಿರ ಏನೂ ಇರುವುದಿಲ್ಲ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ ರೈಲನ್ನು ಹತ್ತುತ್ತಾನೆ ಆದರೆ ಟಿಕೆಟ್ ತಪಾಸಣೆ ಮಾಡುವವರು ಬಂದಾಗ ನೇರವಾಗಿ ಹೇಳುತ್ತಾನೆ.

 ಹುಡುಗ ನನ್ನ ಹತ್ತಿರ ನಯಾಪೈಸೆ ಇಲ್ಲ ನಾನು ವೇದಾಂತ ಓದಬೇಕು ವಿಶ್ವ ವಿದ್ಯಾಲಯಕ್ಕೆ ಹೋಗುತ್ತಿದ್ದೇನೆ ಈ ಮಾತನ್ನು ಕೇಳಿ ತಪಾಸಣೆ ಮಾಡುವವರು ಆಶ್ಚರ್ಯವಾದರೂ ಇಲ್ಲಿಯವರೆಗೂ ಹಲವಾರು ಜನ ಸುಳ್ಳು ಹೇಳುತ್ತಾರೆ ನಂತರ ಬಿಟ್ಟುಬಿಡಿ ಎಂದು ಅಂಗಲಾಚುತ್ತಾರೆ ಆದರೆ ಈ ಹುಡುಗನು ನೇರವಾಗಿ ಸತ್ಯವನ್ನು ಹೇಳಿದ್ದಾನೆ.

ನೀನು ಎಲ್ಲಿಗೆ ಹೋಗಬೇಕು ಅಲ್ಲಿಗೆ ನಾನು ತಲುಪಿಸುತ್ತೇನೆ ಎಂದು ಅವರು ಬೇರೆಯೇ ಒಂದು ಟಿಕೆಟ್ಟನ್ನು ತಮ್ಮ ಹಣದಿಂದ ನೀಡುತ್ತಾರೆ ನಂತರ ವಿಶ್ವ ವಿದ್ಯಾಲಯದ ಹತ್ತಿರ ಈ ದಾರಿಯಲ್ಲಿ ಹೋದರೆ ಸಿಗುತ್ತದೆ ಎಂದು ದಾರಿ ತೋರಿಸಿ ಹೊರಟು ಹೋಗುತ್ತಾರೆ.

 ಹುಡುಗನು ನೇರವಾಗಿ ವಿಶ್ವ ವಿದ್ಯಾಲಯಕ್ಕೆ ಹೋಗುತ್ತಾನೆ ನಾನು ವೇದಾಂತ ಶಾಸ್ತ್ರದಲ್ಲಿ ಡಿಗ್ರಿ ಮಾಡಬೇಕೆಂದು ಇಚ್ಛಿಸಿದ್ದೇನೆ ಆದರೆ ನಮ್ಮ ತಂದೆಯವರು ಅದಕ್ಕೆ ಒಪ್ಪುತ್ತಿಲ್ಲ ಮತ್ತೆ ನನ್ನನ್ನು ಮನೆಯಿಂದ ಹೊರಗೆ ಕಳಿಸಿ ಬಿಟ್ಟಿದ್ದಾರೆ.

 ನಾನು ಹೇಗಾದರೂ ಮಾಡಿ ಓದಲೇಬೇಕು ಇದಕ್ಕೆ ನೀವು ಅವಕಾಶ ಮಾಡಿಕೊಡಿ ಮತ್ತೆ ಇದಕ್ಕೆ ಇರುವ ವಿದ್ಯಾರ್ಥಿ ವೇತನಗಳನ್ನು ನೋಡಿ ಕೊಡಿ ಎಂದು ಕೇಳುತ್ತಾನೆ.

 ವಿದ್ಯಾರ್ಥಿ ವೇತನ ಇದ್ದರೆ ಮಾತ್ರ ನಾನು ಓದಬಹುದಾಗಿದೆ ಇಲ್ಲದಿದ್ದರೆ ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಾನೆ ಆಗ ಈ ಹುಡುಗನನ್ನು ಅರಿತು ನಂತರ ಅವನಿಗೆ ಸಮಾಧಾನ ಮಾಡಿ ಇರುವ ವಿದ್ಯಾರ್ಥಿ ವೇತನಗಳನ್ನು ನಾನು ಸಾಧ್ಯವಾದಷ್ಟು ಕೊಡಿಸುತ್ತೇನೆ ಎಂದು ಹೇಳಿ ಅವನಿಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಾರೆ.

 ಮೇಲ್ವಿಚಾರಕರು ಇವನನ್ನು ಸರಿಯಾಗಿ ಓದಿದ್ದಾನೋ ಇಲ್ಲವೋ ಎಂಬುದನ್ನು ಆಗಾಗ ಪರಿಶೀಲಿಸುತ್ತಾರೆ ಆದರೆ ಇವನು ತುಂಬ ಚೆನ್ನಾಗಿ ಓದುತ್ತಿರುತ್ತಾನೆ ಮತ್ತೆ ಬೇರೆಯವರ ಹತ್ತಿರ ಇರುವ ಪುಸ್ತಕಗಳನ್ನು ಎರವಲು ತೆಗೆದುಕೊಂಡು ಓದುತ್ತಿರುತ್ತಾನೆ.

 ಎಷ್ಟು ಪ್ರವೀಣ ನಾಗಿಬಿಡುತ್ತಾನೆ ಎಂದರೆ ಕೆಲವರು ಅವರ ಗುರುಗಳೇ ಬಂದು ಕೆಲವು ಪ್ರಶ್ನೆಗಳಿಗೆ ಉತ್ತರ ಕೇಳುವಷ್ಟು ಚೆನ್ನಾಗಿ ಕಲಿತಿರುತ್ತಾನೆ ಮತ್ತೆ ಮುಂದೆ ಇದೇ ಹುಡುಗ ದೊಡ್ಡವನಾಗಿ ಗುರುವಾಗುತ್ತಾನೆ ಬೇಕಾದಷ್ಟು ಉಪನ್ಯಾಸಗಳನ್ನು ಕೊಡುತ್ತಾರೆ ಹಲವಾರು ಪುಸ್ತಕಗಳನ್ನು ಬರೆಯುತ್ತಾರೆ ಇವರು ನಂತರ ಬೃಹತ್ತಾಗಿ ಬೆಳೆಯುತ್ತಾರೆ.

ನನ್ನ ತಾಯಿ ಅಕ್ಕನ ತ್ಯಾಗವೇ ಮುಖ್ಯ

ನೀರಾ ಎಂಬುವವರು ಸರ್ಕಾರಿ ಕೆಲಸದಲ್ಲಿ ಇರುವ ವ್ಯಕ್ತಿಗೆ ಮದುವೆಯಾಗುತ್ತಾರೆ ಸಾಮಾನ್ಯ ಕುಟುಂಬ ಅತ್ತೆ ಮಾವ ಎಲ್ಲರು ಇರುತ್ತಾರೆ ಆದರೆ ಗಂಡ ಅತ್ತೆಯ ಆಸೆ ಏನಂದರೆ ಗಂಡು ಮಗುವೇ ಆಗಬೇಕು ಎಂದು ಸ್ಪಷ್ಟವಾಗಿ ಹೇಳುತ್ತಾರೆ ಆದರೆ ಒಂದು ವರ್ಷದ ನಂತರ ಹೆಣ್ಣು ಮಗು ಜನ್ನವಾಗುತ್ತದೆ.

 ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರದಿಂದ ಕಿರುಕುಳ ಶುರುವಾಗುತ್ತದೆ ಮಾತು ಮಾತಿಗೂ ಬೈಯುತ್ತಿರುತ್ತಾರೆ ಅತ್ತೆ ಹೇಳಿದರೆ ಪರವಾಗಿಲ್ಲ ಗಂಡ ಆದವನು ಕೂಡ ಬೈಯುತ್ತಿರುತ್ತಾನೆ ಒಂದು ಸಾರಿ ನೀರಾ ಯೋಚನೆ ಮಾಡುತ್ತಾಳೆ ನಾನು ತವರು ಮನೆಗೆ ಹೋಗೋಣವೆ ಎಂದು ಯೋಚಿಸುತ್ತಾಳೆ ನಂತರ ಬೇಡ ಇಲ್ಲೇ ಇರೋಣ ಎಂದು ಹೊಂದಿಕೊಂಡು ಬದುಕುತ್ತಿರುತ್ತಾಳೆ.

  ದಿನನಿತ್ಯ ಕಿರುಕುಳ ತಪ್ಪಿದ್ದಲ್ಲ ನಂತರ ಇನ್ನೊಂದು ಮಗು ಆಗುತ್ತದೆ ಅದು ಕೂಡ ಹೆಣ್ಣು ಮಗು ನಂತರ ಗಂಡನಾದವನು ಇನ್ನೊಬ್ಬಳನ್ನು ಮದುವೆಯಾಗಿ ಬರುತ್ತಾನೆ ನೀರಾ ಮನಸು ಕಂಗಾಲಾಗುತ್ತದೆ ನಂತರ ಇವಳು ಹೇಳಿದಂತೆ ನೀನು ಕೇಳಬೇಕು ಎಂದು  ಹೇಳಿದಾಗ ನೀರಾಗೆ ದಿಕ್ಕು ತೋಚದಂತಾಗುತ್ತದೆ.

 ನೀರಾಗೆ ಮನಸ್ಸಿನಲ್ಲಿ ಒಂದು ಆಸೆ ಅಡಗಿರುತ್ತದೆ ಗಂಡು ಮಗ ಆದರೆ ನನ್ನ ಗಂಡ ನನ್ನನ್ನು ಪ್ರೀತಿಸಬಹುದು ಎಂದು ಯೋಚಿಸಿ ಬದುಕುತ್ತಾಳೆ ಆದರೆ ಮತ್ತೆ ಹೆಣ್ಣು ಮಗು ಆಗಿರುವುದರಿಂದ ಗಂಡ ಹಾಗೂ ಅವರ ಮನೆಯವರು ಯಾರು ನೋಡಲಿಕ್ಕೂ ಬರಲಿಲ್ಲ ಅಸಹಾಯಕ ಸ್ಥಿತಿಯಲ್ಲಿ ಇದ್ದಾಗ ಆಸ್ಪತ್ರೆಯಲ್ಲಿ ಇದ್ದ ಯಾರೋ ಒಬ್ಬರು ಇವರ ಖರ್ಚಿಗೆ ಹಣವನ್ನು ಕೊಟ್ಟರು.

  ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗಂಡನ ಮನೆಗೆ ಬಂದಾಗ ನೀರಾಗೆ ಅವಮಾನಿಸುತ್ತಾರೆ ಮಾಡಿಬಿಟ್ಟರು ಗಂಡ ಹೆಳಿದ ನಾನು ಮದುವೆಯಾಗಿದ್ದೇನೆ ಅವಳಿಗೂ ಸಾಕಬೇಕು ಈ ಹೆಣ್ಣು ಮಗು ನನಗೆ ಬೇಡವೇ ಬೇಡ ಬೇಕಾದರೆ ಈ ಮಗುವಿಗೆ ಸಾಯಿಸಿ ಬಿಡು ನೀರಾ ಸುಮ್ಮನೆ ಗಂಡ ಹೇಳುತ್ತಿರಬಹುದು ಎಂದು ಕೊಂಡಳು ಆದರೆ ಗಂಡ ನಿಜವಾಗಿಯೇ ಹೇಳುತ್ತಿದ್ದನು.

 ದಿನನಿತ್ಯ ಕಿರುಕುಳ ತೊಂದರೆ ಕೊಡುತ್ತಿದ್ದನು ನೀರಾಗೆ ಸಹಿಸಲು ಸಾಧ್ಯವಾಗದಿದ್ದಾಗ ತವರು ಮನೆಗೆ ಹೋಗಲು ಸಿದ್ಧವಾದಳು ಮತ್ತೆ ಗಂಡನಿಗೆ ಹೇಳಿದಳು ಮುಂದಿನ ದಿನಗಳಲ್ಲಿ ಈ ಮಗು ಒಳ್ಳೆಯ ಹೆಸರು ಮಾಡುತ್ತದೆ ಎಂದು ಹೇಳಿ ಹೊರಟಳು.

 ಒಂದು ಮಗು ಸುಮಾರು ಆರು ವರ್ಷದ್ದು ಚಿಕ್ಕ ಮಗುವಿಗೆ ಇನ್ನೂ ಒಂದು ತಿಂಗಳು ಕೂಡ ತುಂಬಿಲ್ಲ ನೇರವಾಗಿ ತವರು ಮನೆಗೆ ಬಂದಳು ಆದರೆ ತಂದೆಯವರು ತೀರಿಹೋಗಿದ್ದರು ಒಡಹುಟ್ಟಿದ ತಮ್ಮ ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಇದ್ದ ನಂತರ ಅಕ್ಕನಿಗೂ ಅಲ್ಲೇ ಕೆಲಸ ಕೊಡಿಸಿದನು.

 ಕೆಲವು ದಿನ ತಮ್ಮನ ಆಸರೆ ಪಡೆದು ನಂತರ ವಠಾರದಲ್ಲಿ ಬೇರೆ ಮನೆಯನ್ನು ಬಾಡಿಗೆಗೆ ಪಡೆದಳು ಮೀರಾ ಅವಳ ಒಂದೇ ಒಂದು ಆಸೆ ಎಂದರೆ ನನ್ನ ಮಕ್ಕಳನ್ನು ಶಿಸ್ತಿನಿಂದ ಚೆನ್ನಾಗಿ ಸಾಕಬೇಕು ಉತ್ತಮ ಬದುಕು ಕೊಡಬೇಕು ಎಂದು ನಿರ್ಧಾರ ಮಾಡಿದಳು.

ಮಕ್ಕಳನ್ನು ಕಾನ್ವೆಂಟ್ ಗೆ ಸೇರಿಸಿದಳು ಜೀವನ ತುಂಬಾ ಕಷ್ಟದಲ್ಲಿ ನಡೆಯುತ್ತಿತ್ತು ಅಕ್ಕ ತಾಯಿ ಬರುವವರೆಗೆ ತಂಗಿಗೆ ಚೆನ್ನಾಗಿ ಓದಿಸುತ್ತಿದ್ದಳು ಕೆಲವು ದಿನಗಳ ನಂತರ ಚಿಕ್ಕ ಮಗು ತಾಯಿಗೆ ಕೇಳಿದ್ದು ಅಮ್ಮ ಎಲ್ಲರ ಮನೆಯಲ್ಲಿಯೂ ಅಪ್ಪ ಇದ್ದಾರೆ ನಮ್ಮ ಮನೆಯಲ್ಲಿ ಇಲ್ಲವಲ್ಲ ಎಂದಾಗ ನೀರಾ ಮಗುವಿಗೆ ಅರ್ಥವಾಗುವಂತೆ ನೇರವಾಗಿ ಹೇಳಿದಳು ನಂತರ ತುಂಬಾ ಕಣ್ಣೀರು ಸುರಿಸಿದಳು.

ಅಮ್ಮನಿಗೆ  ಮಗಳೇ ಸಾಂತ್ವಾನ  ನೀಡಿದಳು ಅಮ್ಮ ನೀನು ಯೋಚನೆ ಮಾಡಬೇಡ ನಾವು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಮಾಡಿ ದುಡ್ಡನ್ನು ಸಂಪಾದನೆ ಮಾಡೋಣ ಎಂದು ಧೈರ್ಯ ಹೇಳಿ ಕಣ್ಣು ಒರೆಸಿದಳು ನಂತರ ಅಕ್ಕ ಕಾಲೇಜು ಮುಗಿಯುತ್ತಿದ್ದಂತೆಯೇ ತಂಗಿ, ಕಾಲೇಜಿಗೆ ಸೇರಿದಳು.

ನೀರಾ ಮಕ್ಕಳಿಗೆ ನೇರವಾಗಿ ತಿಳಿಸಿದರು ಕಾಲೇಜಿನ ಮುಂದೆ ಅಲ್ಲಿ ಇಲ್ಲಿ ಹುಡುಗರು ಇರುತ್ತಾರೆ ನಾವು ಎಚ್ಚರಿಕೆಯಿಂದ ಬದುಕಬೇಕು ಎಂದು ನೈಜ ಬದುಕಿನ ಬಗ್ಗೆ ಸತ್ಯವನ್ನು ತಿಳಿಸಿದರು ಅಮ್ಮ ನಮಗಾಗಿ ನೀವು ಇಷ್ಟು ತ್ಯಾಗ ಮಾಡಿದ್ದೀರಾ ನಾವು ಏನಾದರೂ ಸಾಧನೆ ಮಾಡೇ ಮಾಡುತ್ತೇವೆ ಎಂದು ಧೈರ್ಯ ಕೊಟ್ಟರು ಹೀಗೆಯೇ ಬದುಕಿದರು.

 ಅಕ್ಕ ಪದವಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಿದಳು ಇದರಿಂದ ಸಂಬಳವೂ ಬರಲು ಶುರುವಾಯಿತು  ಕಷ್ಟಗಳು ಕಡಿಮೆಯಾದವು ತಕ್ಕಮಟ್ಟಿಗೆ ಬದುಕು ಬ್ಯಾಲೆನ್ಸ್ ಆಯಿತು ತಂಗಿ ಕಾಲೇಜಿನಲ್ಲಿ ಇದ್ದಾಗಲೇ ಡ್ಯಾನ್ಸ್ ಮಾಡಿ ಪ್ರಶಸ್ತಿಯನ್ನು ಪಡೆದಳು.

 ನಂತರ ಮಿಸ್ ಇಂಡಿಯಾ ಆದಳು ಆಗ ತನ್ನ ತಾಯಿಗೆ ಅಕ್ಕನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾಳೆ ಇಂದು ನಾನು ಈ ಸ್ಥಿತಿಗೆ ಬರಲು ನನ್ನ ತಾಯಿ ಹಾಗೂ ನನ್ನ ಅಕ್ಕನ ತ್ಯಾಗವೇ ಮುಖ್ಯ ಎಂದು ಹೇಳಿದಳು ಇವರು ಯಾರಿರಬಹುದು? ಇವರೇ ಪೂಜಾ ಚೋಪ್ರಾ

ಈಗ ಮರಳಿ ಬಂದಿದ್ದೇನೆ

ಭಾರತಕ್ಕೆ ಮೊಟ್ಟ ಮೊದಲನೆಯ ನೋಬಲ್ ಪ್ರಶಸ್ತಿ ಗಿಟ್ಟಿಸಿಕೊಂಡರು ಚಿಕ್ಕ ಹುಡುಗನಿರುವಾಗಲೇ ಕವನಗಳನ್ನು ರಚಿಸಿ ಹದಿನಾರನೇ ವಯಸ್ಸಿಗೇ ದೊಡ್ಡ ಕಾವ್ಯಗಳನ್ನು ಬರೆದು ಪ್ರಕಟಣೆಮಾಡಿದ್ದರು ಮತ್ತೆ 2 ದೇಶಕ್ಕೆ ರಾಷ್ಟ್ರ ಗೀತೆಯನ್ನು ಬರೆದಿದ್ದಾರೆ.

 ಒಂದು ಭಾರತ ಇನ್ನೊಂದು ಬಾಂಗ್ಲಾದೇಶ ಇವರನ್ನು ಮಹಾನ್ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿದ್ದಾರೆ ಇವರು ಏಕೆ ಮಹಾನ್ ಆದರೂ ಎಂದರೆ ಇವರಲ್ಲಿ ಕೆಲವು ಮಾನವೀಯ ಗುಣಗಳು ಇದ್ದೇ ಇರುತ್ತವೆ ಇವರೇ ರವೀಂದ್ರನಾಥ ಟ್ಯಾಗೂರ್ ಒಂದು ಘಟನೆಯನ್ನು ತಿಳಿದುಕೊಳ್ಳೋಣ.

  ಟಾಗೋರ್ ರವರು ಮನೆಯಲ್ಲಿ ಇರಬೇಕಾದರೆ ಒಂದು ದಿನ ಅವರ ಕೆಲಸದಾತನು ಕೆಲಸಕ್ಕೆ ಬರಲಿಲ್ಲ ಮತ್ತೆ ರಾತ್ರಿ ಮನೆಯಲ್ಲೂ ಇರಲಿಲ್ಲ ಯಾವುದೇ ಕೆಲಸವನ್ನು ಮಾಡಿರಲಿಲ್ಲ ಬೆಳಗಿನ ತಿಂಡಿ ಹಾಗೂ ಅವರ ಉಡುಪುಗಳು ತೆಗೆದು ಇಟ್ಟಿರಲಿಲ್ಲ ಅಂದು ಬೆಳಿಗ್ಗೆ ಎದ್ದು ನೋಡಿದಾಗ ಯಾವ ಕೆಲಸವೂ ಆಗಲಿಲ್ಲ.

 ಬೆಳಿಗ್ಗೆ ಅಲ್ಪ ಸ್ವಲ್ಪ ಅಡಚಣೆಯಾದರೂ ಅಂದಿನ ದಿನವೆಲ್ಲವು ಉಲ್ಟಾಪಲ್ಟವಾಗುತ್ತದೆ ಹಾಗೆ ಟಾಗೋರ್ ಅವರಿಗೂ ಉಲ್ಟಾಪಲ್ಟವಾಯಿತು ಟ್ಯಾಗೂರ್ ರಿಗೆ ಭಯಂಕರ ಸಿಟ್ಟು ಬಂತು ತನ್ನ ಕೆಲಸದಾತನ ಮೇಲೆ ಕೆಲಸದಾತನು ಬಂದರೆ ಅವನಿಗೆ ಸರಿಯಾದ ಶಿಕ್ಷೆ ನೀಡಲೇಬೇಕು ಎಂದು ಯೋಚಿಸಿದರು ಸಂಜೆಯಾಗುತ್ತಿದ್ದಂತೆಯೇ ಕೆಲಸದಾತನು ಬಂದು ಟ್ಯಾಗೂರ್ ಅವರ ಮುಂದೆ ಕೈಕಟ್ಟಿಕೊಂಡು ತಲೆಬಾಗಿ ನಿಂತನು.

 ಟ್ಯಾಗೋರರು ಚೆನ್ನಾಗಿ ಕೆಲಸದಾತನನ್ನು ಬೈದು ಕೆಲಸದಿಂದ ತೆಗೆದು ಹಾಕಿದ್ದೇನೆ ಹೋಗು ಎಂದರು ಹಾಗೆ ಕೆಲಸದವನು ನಿಂತಿದ್ದನು ಇನ್ನೂ ಇವರಿಗೆ ಸಿಟ್ಟು ಹೆಚ್ಚಾಯಿತು ಏಕೆ ಹಾಗೆ ನಿಂತಿದ್ದೀಯಾ ಎಲ್ಲಿ ಸಾಯಕ್ಕೆ ಹೋಗಿದೆಯಾ ಎಂದು ಕೇಳಿದರು ಆಗ ಕೆಲಸದವನು ನಿಧಾನವಾಗಿ ಹೇಳಿದ ನಿನ್ನೆ ರಾತ್ರಿ ನನ್ನ ಮಗು ತೀರಿ ಹೋಯಿತು ಎಂದು ನನಗೆ ಸುದ್ದಿ ಬಂದ ತಕ್ಷಣ ನನಗೆ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ ಗೊಂದಲದಲ್ಲಿ ಸಿಲುಕಿದೆ.

 ನೀವು ಬೆಳಿಗ್ಗೆಯಿಂದ ಕೆಲಸ ಮಾಡಿದ್ದು ಆಯಾಸವಾಗಿ ಮಲಗಿದ್ದೀರಿ ನಿಮ್ಮನ್ನು ಎಬ್ಬಿಸಲು ನನ್ನ ಮನಸ್ಸು ಒಪ್ಪಲಿಲ್ಲ ನಾನು ನನ್ನ ಹಳ್ಳಿಗೆ ಹೋಗಿ ನನ್ನ ಮಗುವಿನ ಅಂತ್ಯಕ್ರಿಯೆ ಮುಗಿಸಿ ಈಗ ಮರಳಿ ಬಂದಿದ್ದೇನೆ ನನ್ನ ತಪ್ಪನ್ನು ಕ್ಷಮಿಸಿ ಎಂದು ಕೇಳಿದನು.

  ಆಗ ಠಾಗೂರರಿಗೆ ತುಂಬಾ ಸಂಕಟವಾಯಿತು ಮನಸು ಅಲ್ಲೋಲಕಲ್ಲೋಲವಾಯಿತು ಏನು ಹೇಳಬೇಕು ಎಂದು ತಿಳಿಯಲಿಲ್ಲ ನಂತರ ನಾನು ವಿಚಾರಿಸದೆ ಕೆಲಸಗಾರನಿಗೆ ಬೈಯಬಾರದಾಗಿತ್ತುಎಂದು ಪಶ್ಚಾತ್ತಾಪ ಪಟ್ಟರು ಅದೇ ಟ್ಯಾಗೋರರು ಕೊನೆಯ ಬಾರಿ ಬೈದಿದ್ದು ನಂತರ ಬಯ್ಯುವುದಕ್ಕಿಂತ ಮುಂಚೆ ಏನಾಗಿದೆಯೆಂದು ಕೂಲಂಕುಷವಾಗಿ ವಿಚಾರಿಸಿ ನಂತರ ಬಯ್ಯುವ ಬದಲು ಸಮಾಧಾನವಾಗಿ ಹೇಳುತ್ತಿದ್ದರು.

   ಇದೇ ರೀತಿ ನಮ್ಮ ಕೆಲಸದವರನ್ನು ಕೆಲವು ತಪ್ಪುಗಳು ಆದಾಗ ನಾವು ಕೂಡ ಕುಲಂಕುಶವಾಗಿ ಯೋಚಿಸಬಹುದೇ? ಮತ್ತೆ ಹಲವಾರು ವ್ಯಕ್ತಿಗಳು ತಮ್ಮ ಮೇಲಿನವರನ್ನು ಚೆನ್ನಾಗಿ ಮಾತನಾಡಿಸುತ್ತಾರೆ ಆದರೆ ತಮ್ಮ ಕೈಕೆಳಗೆ ಇರುವವರನ್ನು ಅಷ್ಟಾಗಿ ಬೆಲೆ ಕೊಡುವುದಿಲ್ಲ ನಮ್ಮ ಕೈ ಕೆಳಗೆ ಇರುವವರನ್ನು ಕೂಡ ದೊಡ್ಡವರನ್ನಾಗಿ ಮಾತನಾಡಿಸುವುದು ಮಹಾನ್ ವ್ಯಕ್ತಿಗಳ ಲಕ್ಷಣ.

 ನಾನು ಗೆದ್ದಿದ್ದೇನೆ

ಒಬ್ಬ ರೈತನು ತನ್ನ ಹೊಲ ಗದ್ದೆಗಳಲ್ಲಿ ಗುದ್ದಲಿಯಿಂದ ಕೆಲಸಮಾಡಿಕೊಂಡು ಇದ್ದನು ಮತ್ತೆ ತರಕಾರಿಗಳನ್ನು ಬೆಳೆಯುತ್ತಿದ್ದನು ಇದೆ ಇವನ ಕೆಲಸವಾಗಿತ್ತು ಹೀಗೆ ಪರಿಶ್ರಮದಿಂದ ತರಕಾರಿಗಳನ್ನು ಬೆಳೆದು ಎಲ್ಲರಿಗೂ ಮಾರುತ್ತಿದ್ದನು ಆದರೆ ರೈತನಿಗೆ ಗುದ್ದಲಿಯ ರಾಜ ಎಂದು ಎಂದು ಕರೆಯುತ್ತಿದ್ದರು.

 ಸಾಕಷ್ಟು ದಿನ ಇದೇ ಕೆಲಸ ಮಾಡಿದ ನಂತರ ಒಬ್ಬ ಸಂನ್ಯಾಸಿಯವರನ್ನು ನೋಡುತ್ತಾನೆ ಅವರ ಮಾತುಗಳಿಂದ ರೈತನು ಸಾಕಷ್ಟು ಪರಿವರ್ತನೆಯಾಗುತ್ತಾನೆ ನಂತರ ನನ್ನ ಮನಸ್ಸು ಗೆಲ್ಲಬೇಕು ಎಂದು ಯೋಚಿಸುತ್ತಾನೆ ನಾನು ಏಕೆ ಧ್ಯಾನ ಮಾಡಬಾರದು ಎಂದು ಯೋಚಿಸಿ ರೈತನು ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ.

 ಕಣ್ಣು ಮುಚ್ಚಿದರೆ ಗುದಲಿಯೇ ನೆನಪಿಗೆ ಬರುತ್ತಿತ್ತು ಅವನ ಗುದ್ದಲಿಯು ಆಗಾಗ ಅಡ್ಡ ಬರುತ್ತಿರುತ್ತದೆ ಅದಕ್ಕಾಗಿ ಆ ಗುದ್ದಲಿಯನ್ನು ಒಂದು ಮರದ ಕೆಳಗೆ ಇಟ್ಟು ನಂತರ ದೂರದಲ್ಲಿ ಧ್ಯಾನ ಮಾಡುತ್ತಾನೆ ಆದರೂ ಗುದ್ದಲಿಯು ನೆನಪಾಗುತ್ತಿರುತ್ತದೆ ಏನೇ ಮಾಡಿದರೂ ಗುದ್ದಲಿ ನೆನಪಾಗುತ್ತಿರುತ್ತದೆ.

ಹಲವಾರು ಬಾರಿ ಕಣ್ಣು ಮುಚ್ಚಿ ಧ್ಯಾನಕ್ಕೆ ಕುಳಿತನು ಗುದ್ದಲಿ ಅಡ್ಡ ಬರುತ್ತಿದೆ ಒಂದು ವಾರದ ನಂತರ ಯೋಚಿಸುತ್ತಾನೆ ಏನಾದರಾಗಲಿ ನಾನು ಗೆಲ್ಲಲೇ ಬೇಕು ಎಂದು ಗುದ್ದಲಿ ಇದ್ದರೆ ತಾನೆ ನನಗೆ ನೆನಪು ಬರುವುದು ಎಂದು ಯೋಚನೆ ಮಾಡಿ ಗುದ್ದಲಿಯನ್ನು ತೆಗೆದುಕೊಂಡು ಹೋಗಿ ನದಿಯ ಬಳಿ ನಿಂತುಕೊಂಡು ಒಮ್ಮೆ ಕಣ್ಣು ಮುಚ್ಚಿ ನೋಡಲೇಬಾರದು ಎಂದು ಕಣ್ಣುಮುಚ್ಚಿ ದೂರಕ್ಕೆ ಎಸೆದು ಬಿಡುತ್ತಾನೆ.

ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ ಮತ್ತೆ ಕಣ್ಣುಬಿಡುತ್ತಾನೆ ಗುದ್ದಲಿ ನೆನಪಾಗುವುದಿಲ್ಲ ಆವಾಗ ನಾನು ಗೆದ್ದೆ ನಾನು ಗೆದ್ದೆ ಎಂದು ಎಂದು ಜೋರಾಗಿ ಶಬ್ದ ಮಾಡುತ್ತಿರುತ್ತಾನೆ ಇದನ್ನು ಆ ಕಡೆಯಿಂದ ಬರುತ್ತಿರುವ ಯುದ್ಧವನ್ನು ಗೆದ್ದ ರಾಜ ಕೇಳಿ ಆಶ್ಚರ್ಯಪಡುತ್ತಾನೆ ಏಕೆ ಹೀಗೆ ಹೇಳುತ್ತಿದ್ದಾನೆ ಎಂದು ರೈತನನ್ನು ವಿಚಾರಿಸಿದಾಗ ರೈತನು ಹೇಳುತ್ತಾನೆ ನನ್ನ ಮನಸ್ಸನ್ನು ನಾನು ಗೆದ್ದಿದ್ದೇನೆ ಎಂದನು ಆಗ ರಾಜನು ಕೂಡ ಅರ್ಥಮಾಡಿಕೊಳ್ಳುತ್ತಾನೆ.

 ನಮ್ಮ ಶತ್ರುಗಳನ್ನು ಗೆಲ್ಲುವುದು ಮುಖ್ಯವಲ್ಲ ನಮ್ಮ ಮನಸ್ಸನ್ನು ನಾವು ಗೆಲ್ಲುವುದು ತುಂಬಾ ಮುಖ್ಯ ಎಂದು ಅರಿತುಕೊಳ್ಳುತ್ತಾನೆ. ನನ್ನ ಮನಸ್ಸನ್ನು ನಾನು ಎಷ್ಟರಮಟ್ಟಿಗೆ ಗೆದ್ದಿದ್ದೇನೆ?

Leave a Comment