ನಮ್ಮ ಜೊತೆ ಇದ್ದರೆ ಸಾಕು

ಒಂದು ಸಾರಿ ತನಿಷ್ ಶ್ರೀಮಂತರ ಕಾರ್ ಸ್ಟಾರ್ಟ್ ಆಗುತ್ತಿರುವುದಿಲ್ಲಾ ಅಲ್ಲೇ ಹತ್ತಿರದಲ್ಲಿ ಇರುವ ನಿರ್ಮಯ್ ಮೆಕಾನಿಕ್ ಅನ್ನು ಕರಿಸುತ್ತಾರೆ ಮೆಕಾನಿಕ್ ಎಲ್ಲವನ್ನು ನೋಡಿ ಚೆಕ್ ಮಾಡಿ ಸರಿ ಮಾಡುತ್ತಾನೆ ನಂತರ ಶ್ರೀಮಂತರು ಮೆಕಾನಿಕ್ ಗೆ ಹಣವನ್ನು ಕೊಡುತ್ತಾರೆ ಆಗ ಕೇಳುತ್ತಾರೆ ನಿಮ್ಮ ಮಗ ಏನು ಮಾಡುತ್ತಿದ್ದಾನೆ ಆಗ ಮೆಕಾನಿಕ್ ಪ್ರಾಮಾಣಿಕವಾಗಿ ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ.

  ಶ್ರೀಮಂತ ಹೆಮ್ಮೆಯಿಂದ ನನ್ನ ಮಗ ಈ ಊರಿನ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾನೆ ಹಾಗೆಯೇ ನಂತರ ಲಂಡನ್ ನಲ್ಲಿ ಓದುತ್ತಾನೆ ಶ್ರೀಮಂತನಾಗಿ ಬದುಕುತ್ತಾನೆ ಎಂದು ಗರ್ವದಿಂದ ಹೇಳುತ್ತಾರೆ ಆಗ ಮೆಕಾನಿಕ್ ಆದವನು ನೋಡಿ ಸ್ವಾಮಿ ನಮಗೆ ಅದೆಲ್ಲವೂ ಅಷ್ಟು ತಿಳಿಯುವುದಿಲ್ಲ.

  ವಿದ್ಯಾಭ್ಯಾಸ ಮಾಡಲಿ ಮಾಡದೆ ಹೋಗಲಿ ನಮ್ಮನ್ನು ನೋಡಿಕೊಂಡು ನಮ್ಮ ಜೊತೆ ಇದ್ದರೆ ಸಾಕು ಎಂದು ಹೇಳುತ್ತಾನೆ.  ಅದಕ್ಕೆ ಶ್ರೀಮಂತ ನೀವು ಸಾಧಾರಣವಾಗಿ ಬೆಳೆದು ಬಂದಿರುತ್ತೀರಿ ನಿಮ್ಮ ಯೋಚನೆಯು ಸಾಧಾರಣ ರೀತಿಯಲ್ಲಿಯೇ ಇರುತ್ತದೆ ಎಂದು ಕೀಳಾಗಿ ಹೇಳುತ್ತಾನೆ ಮೆಕಾನಿಕ್ ಆದವನು ತಲೆಕೆಡಿಸಿಕೊಳ್ಳದೆ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಾನೆ.

ಹಲವು ವರ್ಷಗಳ ನಂತರ ಊರಿನಲ್ಲಿ ಒಂದು ಮದುವೆ ಇರುತ್ತದೆ ಆ ಮದುವೆಗೆ ಶ್ರೀಮಂತ ಬಂದಿರುತ್ತಾನೆ ಆಗ ಮೆಕಾನಿಕ್ ಕೂಡ ತನ್ನ ಮಗನೊಂದಿಗೆ ಬಂದಿರುತ್ತಾನೆ ಶ್ರೀಮಂತನನ್ನು ನೋಡಿದ ತಕ್ಷಣ ಹೇಗಿದ್ದೀರಾ?  ಶ್ರೀಮಂತ ಹೇಳಿದ ಮಾತು ನೆನಪಿಗೆ ಬರುತ್ತದೆ ನಂತರ ಪ್ರೀತಿಯಿಂದ ನೋಡಿ ಮೆಕಾನಿಕ್ ಇವನು ನನ್ನ ಮಗ ಒಂದು ಕಾರ್ ಶೋರೂಮ್ ಇಟ್ಟಿದ್ದಾನೆ ಕೆಲವು ಕೆಲಸಗಾರರಿಗೆ ಕೆಲಸ ಕೊಟ್ಟಿದ್ದಾನೆ ಸ್ವಂತವಾಗಿ ಬದುಕುತ್ತಿದ್ದಾನೆ.

 ಎಲ್ಲಿ ನಿಮ್ಮ ಮಗ ಎಂದು ಕೇಳುತ್ತಾನೆ ಆಗ ಶ್ರೀಮಂತರ ಮುಖ ಬಾಡಿ ಹೋಗುತ್ತದೆ ನನ್ನ ಮಗ ಲಂಡನ್ ನಲ್ಲಿ ಇದ್ದಾನೆ ಅಲ್ಲಿಯೇ ಮದುವೆ ಮಾಡಿಕೊಂಡು ಸೆಟಲ್ ಆಗಿದ್ದಾನೆ ಎಂದು ನಿರಾಶೆಯಿಂದ ಹೇಳುತ್ತಾರೆ.

ಹೆಚ್ಚು ವಿದ್ಯಾಭ್ಯಾಸ ಪಡೆದು ಗುಲಾಮನಾಗಿ ಬದುಕುವುದೊ ಅಥವಾ ಕಡಿಮೆ ವಿದ್ಯಾಭ್ಯಾಸ ಮಾಡಿ ಸ್ವಂತವಾಗಿ ಬದುಕುವುದೊ ಯಾವುದು ಒಳ್ಳೆಯದು ನಾವು ಮಾಡಿದ್ದೆ ಸರಿ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ ಕಾಲಚಕ್ರ ಯಾವಾಗ ಬೇಕಾದರೂ ಬದಲಾಗುತ್ತದೆ.

 ಅವರ ಕೆಲಸದಿಂದ ಅವರ ಬಟ್ಟೆಯಿಂದ ಅವರ ಶ್ರೀಮಂತಿಕೆಯಿಂದ ಗೌರವಿಸುವುದು ಬೇಡ ಅವರ ಮಾನವೀಯತೆಗೆ ಗೌರವಿಸೋಣ.

ಯತ್ನಿಸಿ ಸೋತಿದ್ದೇವೆ

ಒಂದು ಸಾರಿ ತ್ರಯಂಬಿಕ್ ರಾಜನು ಕಾಡಿಗೆ ಬೇಟೆಯಾಡಲು ಹೋಗುತ್ತಾನೆ ಆಗ ರಾಜನಿಗೆ ಒಂದು ಆಕರ್ಷಕವಾದ ಜಿಂಕೆ ಕಾಣುತ್ತದೆ ಇದನ್ನು ಬೇಟೆಯಾಡಬೇಕು ಎಂದು ಬೇಟೆಯಾಡಲು ಸಿದ್ಧನಾಗಿ ಹಲವಾರು ಬಾಣಗಳನ್ನು ಬಿಟ್ಟರು.

 ಆ ಜಿಂಕೆ ಗುರಿಗೆ ಸಿಗುವುದಿಲ್ಲ ರಾಜನಿಗೆ ಇದೊಂದು ಸವಾಲು ಎನಿಸಿ ಮತ್ತೆ ನಾಳೆ ಬಂದು ಬೇಟೆಯಾಡುತ್ತಾನೆ ಬಹಳಷ್ಟು ಸಾರಿ ಪ್ರಯತ್ನ ಪಟ್ಟರು ಆ ಜಿಂಕೆಯು ತಪ್ಪಿಸಿಕೊಳ್ಳುತ್ತಿರುತ್ತದೆ ನಂತರ ಆ ಕಾಡಿನಲ್ಲಿ ಇರುವ ಬೇಟೆಗಾರರಿಗೆ ಹೇಳುತ್ತಾನೆ ಈ ಜಿಂಕೆಯನ್ನು ಹಿಡಿದು ಕೊಡಿ ಎಂದಾಗ ಆಗ ಬೇಟೆಗಾರರು ಹೇಳುತ್ತಾರೆ.

  ಇಲ್ಲಿಯವರೆಗೆ ನಾವು ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ ಮನುಷ್ಯರನ್ನು ನೋಡಿದ ತಕ್ಷಣ ಅದು ಶರವೇಗದಿಂದ ಓಡಿ ಹೋಗುತ್ತಿದೆ  ನಾವು ಜಿಂಕೆಯನ್ನು ಹಿಡಿಯಲು ಯತ್ನಿಸಿ ಸೋತಿದ್ದೇವೆ ಆದುದರಿಂದ ನೀವು ಈ ಕನಸನ್ನು ಬಿಟ್ಟುಬಿಡಿ ಎಂದು ಹೇಳಿದರು ಈ ಮಾತು ಕೇಳಿ ರಾಜನಿಗೆ ನಿರಾಶೆಯಾಯಿತು.

 ರಾಜನು ಇದೇ ಆಲೋಚನೆಯಲ್ಲಿ ಮುಳುಗಿದನು ನಂತರ ನಮ್ಮ ಬಾಬಾ ಅವರನ್ನು ಭೇಟಿಯಾಗಿ ಹಲವಾರು ದಿನವಾಗಿದೆ ಅವರನ್ನು ಕೇಳಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಬಾಬಾ ಅವರ ಬಳಿಗೆ ಬರುತ್ತಾನೆ ಬಾಬಾ ಅವರಿಗೆ ಪ್ರಣಾಮಮಾಡಿ ನಂತರ ತನ್ನ ಸಮಸ್ಯೆಯನ್ನು ಹೇಳುತ್ತಾನೆ.

 ಬಾಬಾ ಅವರು ಸಮಾಧಾನವಾಗಿ ಹೇಳುತ್ತಾರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಉದ್ಯಾನವನದಲ್ಲಿ ಬರುತ್ತದೆ. ಎಂದು ರಾಜನಿಗೆ ಭರವಸೆ ನೀಡಿ ಕಳುಹಿಸುತ್ತಾರೆ.

 ರಾಜನಿಗೆ ಒಂದು ಮನಸ್ಸು ನಂಬುತ್ತದೆ ಇನ್ನೊಂದು ಮನಸ್ಸು ಸುಮ್ಮನೆ ಹೇಳುತ್ತಿರಬಹುದು ಏನೇ ಇರಲಿ ಕಾದು ನೋಡೋಣ ಎಂದು ಅರಮನೆಗೆ ಹೋಗುತ್ತಾನೆ ಹದಿನೈದು ದಿನದ ನಂತರ ಹೇಳಿದ ಹಾಗೆಯೇ ರಾಜನ ಹತ್ತಿರ ಜಿಂಕೆ ಇರುತ್ತದೆ ರಾಜನಿಗೆ ಆಶ್ಚರ್ಯವಾಗುತ್ತದೆ.

 ಬಾಬಾ ಅವರೇ ನಾನು ಹಾಗೂ ಬೇಟೆಗಾರರೇ ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ ನೀವು ಹೇಗೆ ಜಿಂಕೆಯನ್ನು ಹಿಡಿದಿದ್ದೀರಿ ಹೇಳಿ ಎಂದು ಕೇಳಿದಾಗ ಬಾಬಾ ಅವರು ಹೇಳುತ್ತಾರೆ ನಾನು ಕಾಡಿಗೆ ಹೋಗಿ ಜಿಂಕೆಗಳು ಎಲ್ಲೆಲ್ಲಿ ಇರುತ್ತವೆ ಎಂದು ಗಮನಿಸಿದೆ ಮತ್ತೆ ಏನೇನು ತಿನ್ನುತ್ತವೆ ಅದನ್ನು ಗಮನಿಸಿದೆ ಜಿಂಕೆಗಳು ತಿನ್ನುವ ಹುಲ್ಲಿನ ಮೇಲೆ ಸ್ವಲ್ಪ ಜೇನುತುಪ್ಪವನ್ನು ಸವರಿದೆ.

 ಈ ಹುಲ್ಲನ್ನು ತಿಂದಿತು ಈ ಹುಲ್ಲಿನ ರುಚಿಗಾಗಿ ಮತ್ತೆ ಅಲ್ಲಿಯೇ ಬಂದು ಹುಲ್ಲು ತಿನ್ನುತ್ತಿದ್ದವು ಇದನ್ನು ಗಮನಿಸಿದ ನಂತರ ನಾನು ಮತ್ತೆ ಸ್ವಲ್ಪ ದೂರದಲ್ಲಿ ಇರುವ ಹುಲ್ಲಿಗೆ ಜೇನು ಹಚ್ಚಿದೆ ನಂತರ ಆ ಜಿಂಕೆಗಳು ಅಲ್ಲಿಗೆ ಬಂದು ಹುಲ್ಲು ತಿನ್ನಲು ಪ್ರಾರಂಭಿಸಿತು ಮತ್ತೆ 2 ದಿನದ ನಂತರ ಬೇರೆ ಕಡೆ ಹುಲ್ಲಿಗೆ ಜೇನನ್ನು ಸವರಿದೆ ನಂತರ ಅಲ್ಲಿಗೆ ಬಂದು ಹುಲ್ಲನ್ನು ತಿನ್ನತೊಡಗಿದವು.

 ಕೊನೆಗೆ ಅರಮನೆಯ ಅಂಗಳದಲ್ಲಿ ಇರುವ ಹುಲ್ಲಿನಲ್ಲಿ ಜೇನನ್ನು ಹಚ್ಚಿದೆ ಈ ರುಚಿಗಾಗಿ ಜಿಂಕೆಗಳೇ ಇಲ್ಲಿಗೆ ಬಂದಿದೆ ಪ್ರತಿಯೊಬ್ಬರಿಗೂ ಯಾವುದಾದರೂ ಒಂದೊಂದು ದೌರ್ಬಲ್ಯ ಇದ್ದೇ ಇರುತ್ತದೆ ಅದನ್ನು ನಾನು ಬಳಸಿಕೊಂಡು ಸುಲಭವಾಗಿ ಹಿಡಿದಿದ್ದೇನೆ ಎಂದು ಹೇಳಿದರು.

  ಜಿಂಕೆ ಸಿಕ್ಕಿ ಹಾಕಿಕೊಂಡಿದ್ದು ಏಕೆ ಎಂದರೆ ಜಿಂಕೆಯ ದುರ್ಬಲತೆಯಿಂದಾಗಿ ಹಾಗೆಯೇ ಮನುಷ್ಯನಿಗೂ ಹಲವಾರು ದುರ್ಬಲತೆಗಳು ಇವೆ. ನನ್ನ ಯಾವ ದುರ್ಬಲತೆಯಿಂದ ನಾನು ಯಾವುದಕ್ಕೆ ಬಲಿಯಾಗಿದ್ದೇನೆ?

ಶರಣಾಗತಿ, ಶ್ರದ್ಧೆ, ಶಿಸ್ತು.

ಒಂದು ಊರಿನ ಕೊನೆಯಲ್ಲಿ ಒಂದು ಆಶ್ರಮ ಇತ್ತು ಅಲ್ಲಿ ತಪೋಮಯ್ ಗುರುಗಳು ಇದ್ದರು ಶಿಷ್ಯ ಬಂದು ನಾನು ಬೃಹತ್ ಆಗಿ ಬೆಳೆಯಬೇಕು ಅದಕ್ಕಾಗಿ ಮಾರ್ಗದರ್ಶನ ಮಾಡಿ ಎಂದು ಕೇಳಿಕೊಂಡನು. ಆಗ ಗುರುಗಳು ದಿನನಿತ್ಯ ಪಾಠ ಪ್ರವಚನಗಳು ಅಭ್ಯಾಸಗಳು ಮಾಡುತ್ತಿದ್ದೀಯಾ ಮುಖ್ಯವಾಗಿ ಶರಣಾಗತಿ ಬರಬೇಕು ಶ್ರದ್ದೆಯಿಂದ ಕಲಿಯಬೇಕು ಶಿಸ್ತುಗಳು ಪಾಲನೆ ಮಾಡಲೇಬೇಕು ಎಂದು ಹೇಳುತ್ತಿದ್ದರು.

 ಕೆಲವು ದಿನಗಳ ನಂತರ ಗುರುಗಳು ನಾನು ಬೇರೆ ಊರಿಗೆ ಹೋಗಿ ಬರುತ್ತೇನೆ ಅಲ್ಲಿಯವರೆಗೂ ನೀನು ನಾನು ಹೇಳಿದಂತೆ ನಿನ್ನ ಅಭ್ಯಾಸವನ್ನು ಮುಂದುವರಿಸು ಎಂದು ಹೇಳಿ ಹೊರಟರು ಶಿಷ್ಯನಾದವನು ದಿನನಿತ್ಯ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತ ಕಾಲದಲ್ಲಿ ಎದ್ದು ಸ್ನಾನ ಮಾಡಿ ಆಶ್ರಮವನ್ನು ನೀಟಾಗಿ ಇಟ್ಟು ಬಟ್ಟೆಗಳನ್ನು ತೊಳೆದು ಒಣಗಿಸಿ ನಂತರ ತನ್ನ ಹೊಟ್ಟೆಪಾಡಿಗಾಗಿ ದಿನನಿತ್ಯ ಭಿಕ್ಷೆ ಬೇಡಿಕೊಂಡು ಬರುತ್ತಿದ್ದನು.

ಬಟ್ಟೆ ತೊಳೆದು ಒಣಗಿದ ನಂತರ ಮನೆಯಲ್ಲಿ ಇಟ್ಟರೆ ಇಲಿಗಳು ಬಂದು ಬಟ್ಟೆಗಳನ್ನು ಸ್ವಲ್ಪ ಸ್ವಲ್ಪ ತಿಂದು ಹೋಗುತ್ತಿದ್ದವು. ದಿನನಿತ್ಯ ಬಂದು ಸೂಜಿಯಿಂದ ಹೋಲಿಯಬೇಕಾಗಿತ್ತು ಇದು ಶಿಷ್ಯನಿಗೆ ತುಂಬಾ ಕೋಪ ಬಂತು ನಂತರ ಯೋಚನೆ ಮಾಡಿದನು ಇದಕ್ಕೆ ಸರಿಯಾದ ಮಾರ್ಗ ಹುಡುಕಲೇಬೇಕು ಎಂದು ಯೋಚನೆ ಮಾಡಿದ ನಂತರ ಒಂದು ಬೆಕ್ಕನ್ನು ತಂದನು ತಾನು ತಂದ ಭಿಕ್ಷೆಯಲ್ಲಿ ಬೆಕ್ಕಿಗೂ ಸ್ವಲ್ಪ ಹಾಕುತ್ತಿದ್ದನು.

 ಚಿಕ್ಕ ಮನೆಯಲ್ಲಿ ಇರುವುದರಿಂದ ಇಲಿ ಕಾಟ ತಪ್ಪಿತು ಸಮಾಧಾನವಾಯಿತು ಆದರೆ ಬೆಕ್ಕಿಗೆ ಸಾಕುವುದು ಸ್ವಲ್ಪ ಕಷ್ಟವಾಯಿತು ಏಕೆಂದರೆ ಬೆಕ್ಕಿಗೆ ಹಾಲನ್ನು ಕೊಡಬೇಕು ಆಗ ಶಿಷ್ಯ ಯೋಚನೆ ಮಾಡಿದನು ಏಕೆ ನಾನು ಒಂದು ಹಸುವನ್ನು ತರಬಾರದು ಎಂದು ಯೋಚನೆ ಮಾಡಿದನು ಕಷ್ಟಪಟ್ಟು ಒಂದು ಹಸುವನ್ನು ಖರೀದಿ ಮಾಡಿಕೊಂಡು ಬಂದನು.

 ಸ್ವಲ್ಪ ಹಾಲನ್ನು ಬೆಕ್ಕಿಗೆ ಹಾಕಿ ಇನ್ನು ಉಳಿದ  ಹಾಲನ್ನು ಮಾರಿದನು ಇದರಿಂದ ಸ್ವಲ್ಪ ಹಣ ಬಂತು ನಾನು ಸಾಧನೆ ಮಾಡಬೇಕಾದರೆ ಇದು ಅಡ್ಡಿ ಬರುತ್ತಿದೆ ಎಂದು ಯೋಚನೆ ಮಾಡಿ ಒಂದು ಕೆಲಸಗಾರನನ್ನು ನೇಮಿಸಿದ ನಂತರ ಕೆಲಸಗಾರರಿಗೆ ಸಂಬಳ ನೀಡಬೇಕು ಏನು ಮಾಡುವುದು ಎಂದು ಯೋಚನೆ ಮಾಡಿ ತನ್ನ ಸುತ್ತ ಇರುವ ಭೂಮಿಯಲ್ಲಿಯೇ ತರಕಾರಿಗಳನ್ನು ಬೆಳೆಸಿದನು.

 ತರಕಾರಿಗಳು ಸಮೃದ್ಧವಾಗಿ ಬೆಳೆಯಿತು ನಂತರ ತೆಂಗಿನ ಮರಗಳನ್ನು ನೆಟ್ಟಿದನು ಬೆಳೆಯುತ್ತಾ ಬೆಳೆಯುತ್ತಾ ಗುಡಿಸಲು ಇದ್ದಂತಹ ಸ್ಥಳದಲ್ಲಿ ಈಗ ದೊಡ್ಡ ಮಂದಿರದಂತೆ ಆಗಿದೆ ಹಲವಾರು ವರ್ಷಗಳ ನಂತರ ಗುರುಗಳು ಬಂದರು ನನ್ನ ಶಿಷ್ಯ ಹೇಗಿರಬಹುದು ಎಂದು ಯೋಚಿಸಿದರು ಬಂದು ನೋಡಿದರೆ ಗುಡಿಸಲು ಇದ್ದ ಸ್ಥಳದಲ್ಲಿ ಮಂದಿರವಾಗಿದೆ.

 ಗುರುಗಳು ಅಶ್ಚರ್ಯಚಕಿತರಾದರು ನಂತರ ನಿಧಾನವಾಗಿ ನೋಡೋಣ ಎಂದು ಬಂದಾಗ ಶಿಷ್ಯ ನೋಡಿದ ನಂತರ ಓಡಿಬಂದು ಗುರುಗಳಿಗೆ ನಮಸ್ಕರಿಸಿದನು ಆಗ ಗುರುಗಳು ಹೇಳಿದರು ಇಷ್ಟೆಲ್ಲಾ ಹೇಗೆ ಬೆಳೆದೆ ಎಂದು ಕೇಳಿದರು ಆಗ ಶಿಷ್ಯನು ಹೇಳಿದನು ನೀವು ಹೇಳಿದ ಮೂರು ಮಾತು ಈಗಲೂ ನಾನು ಮರೆತಿಲ್ಲ ಶರಣಾಗತಿ, ಶ್ರದ್ಧೆ, ಶಿಸ್ತು. ಇದರಿಂದ ನಾನು ಇಷ್ಟು ಬೆಳೆದಿದ್ದೇನೆ ಎಂದು ತಾನು ಬೆಳೆದು ಬಂದ ಕಥೆಯನ್ನು ಹೇಳಿದನು.

 ಆಗ ನಿಜವಾಗಿಯೂ ಗುರುಗಳಿಗೆ ತುಂಬಾ ಸಂತೋಷವಾಯಿತು ನಾವು ಕೂಡ ಅಷ್ಟೇ ಇನ್ನಷ್ಟು ಅಭಿವೃದ್ಧಿ ಆಗಬೇಕಾದರೆ, ಶರಣಾಗತಿ, ಶ್ರದ್ಧೆ, ಶಿಸ್ತು ನಿಯಮಗಳನ್ನು ನಾವು ಪಾಲಿಸೋಣ.

ಮೂರು ಪ್ರಶ್ನೆಗಳ ಅರ್ಥ

ಸಾಕ್ರೆಟಿಸ್ ವಿಭಿನ್ನ ಸ್ವಭಾವದವರು ಹಲವಾರು ಜನರು ಇವರನ್ನು ಅರ್ಥಮಾಡಿ ಕೊಳ್ಳಲು ಆಗಲೇ ಇಲ್ಲ ಹಾಗೆಯೇ ಇವರ ರೀತಿ ನೀತಿಗಳು ಹಾಗೆ ಇರುತ್ತಿದ್ದವು ಬಹಳಷ್ಟು ಜನರಿಗೆ ಇವರು ಅರ್ಥವೇ ಆಗುತ್ತಿರಲಿಲ್ಲ ಇವರ ಬಳಿ ಶಿಷ್ಯರಾಗಿ ಬರಬೇಕಾದ್ರೆ ಕೆಲವು ಪರೀಕ್ಷೆಗಳನ್ನು ಕೊಡುತ್ತಿದ್ದರು.

 ಪರೀಕ್ಷೆಗಳಲ್ಲಿ ಶಿಷ್ಯರು ಪಾಸಾದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು ಮಿಕ್ಕಿದವರನ್ನು ಕಳಿಸಿಬಿಡುತ್ತಿದ್ದರು ಒಂದು ಸಾರಿ ಒಬ್ಬ ಶಿಷ್ಯ ತುಂಬಾ ಆತುರದಲ್ಲಿ ಓಡೋಡಿ ಬಂದನು ಉತ್ಸಾಹ ಕುತೂಹಲದಿಂದ ಒಂದು ಮುಖ್ಯವಾದ ವಿಷಯವನ್ನು ಹೇಳಲು ಬಂದಿದ್ದೇನೆ ಎಂದು ಹೇಳುತ್ತಾನೆ.

 ಸಾಕ್ರೆಟಿಸ್ ರವರು ಆಗ ಸಮಾಧಾನ ಸಮಾಧಾನ ಅವಸರ ಬೇಡ ಸಾಕ್ರೆಟಿಸ್ ಅವರು ನನ್ನ 3 ಪ್ರಶ್ನೆಗಳಿಗೆ ಉತ್ತರ ನೀಡಿ ನಂತರ ಯಾವ ವಿಷಯವನ್ನು ಬೇಕಾದರು ಹೇಳಬಹುದು ಎಂದು ಹೇಳಿದರು ಯಾವ 3 ಪ್ರಶ್ನೆಗಳು ಎಂದು ಶಿಷ್ಯನು ಕೇಳಿದನು

1 ಒಂದನೇ ಪ್ರಶ್ನೆ ನೀನು ಹೇಳುವ ವಿಷಯ ಸತ್ಯವೇ? ಆ ವಿಷಯ ನೀನು ಸತ್ಯ ವೆಂಬುದು ನಿನಗೆ ತಿಳಿದಿದೆಯೇ ಅಥವಾ ಪರೀಕ್ಷಿಸಿದ್ದಿಯೋ ನೋಡಿದ್ದೇಯೇ?

2 ನೀನು ಹೇಳಬೇಕು ಎನ್ನುವ ವಿಷಯ ಹೇಳಲೇ ಬೇಕೆ ಅಥವಾ ಹೇಳದಿದ್ದರೆ ನನಗೆ ಏನಾದರೂ ತೊಂದರೆ ಆಗುತ್ತದೆಯೇ?

3 ಈ ವಿಷಯ ಹೇಳಲು ನಾನೇ ಸರಿಯಾದ ಮನುಷ್ಯನೇ ವಿಷಯ ಹೇಳಿದರೆ ಏನಾದರೂ ಪ್ರಯೋಜನ ಇದೆಯೇ? ಎಂದು ಕೇಳಿದರು. ಆ ಶಿಷ್ಯನು ಈ ವಿಷಯವನ್ನು ನಾನು ಖಚಿತವಾಗಿ ನೋಡಲಿಲ್ಲ ಬರಿ ಕೇಳಿದ್ದೇನೆ ಹೇಳಿದರೂ ತೊಂದರೆಯಿಲ್ಲ ಹೇಳದಿದ್ದರೂ ಅದು ಏನೂ ಸಮಸ್ಯೆ ಆಗುವುದಿಲ್ಲ.

 ಈ ವಿಷಯ ಕೇಳುವುದರಿಂದ ನನಗೆ ಏನು ಪ್ರಯೋಜನ ಹಾಗೆ ನಿನಗೆ ಪ್ರಯೋಜನವಿದೆಯೇ ಇಷ್ಟನ್ನು ಹೇಳಿದ ಮೇಲೆ ಆ ಶಿಷ್ಯನು ಮಾತನಾಡಲೇ ಇಲ್ಲ ಇದು ತಮಾಷೆಯಾಗಿ ಕಾಣಿಸಬಹುದು ಆದರೆ ಇದರ ಮೂರು ಪ್ರಶ್ನೆಗಳ ಅರ್ಥಮಾತ್ರ ತುಂಬಾ ವಿಶಾಲವಾಗಿದೆ.

 ನಾವು ಯಾವುದೇ ವಿಷಯವನ್ನು ಇತರರಿಗೆ ಹೇಳಬೇಕಾದರೆ ಈ 3ಪ್ರಶ್ನೆಗಳನ್ನು ನೆನಪಿನಲ್ಲಿ ಇಟ್ಟು ಕೊಂಡು ಹೇಳಿದರೆ ಅವರಿಗೂ ನಮಗೂ ಪ್ರಯೋಜನವಾಗುತ್ತದೆ.

ಭಗವಂತನಿಗೂ ಮೆಚ್ಚುಗೆ ಆಗುತ್ತದೆ

ಒಂದು ಊರಿನಲ್ಲಿ ಒಂದು ದೊಡ್ಡ ಸರ್ವಧರ್ಮ ಮಂದಿರ ಇರುತ್ತದೆ ಯಾರು ಬೇಕಾದರೂ ಬಂದು ಉಳಿದು ಹೋಗಬಹುದು ಊಟ ವಸತಿ ಎಲ್ಲವೂ ಉಚಿತವಾಗಿರುತ್ತದೆ ಇದನ್ನು ನೋಡಿಕೊಳ್ಳುವವರು ಸಹ ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುತ್ತಿರುತ್ತಾರೆ.

 ಒಂದು ಸಾರಿ ದೂರದ ಊರಿನಿಂದ ಒಬ್ಬ ದೊಡ್ಡ ಇಂಧೀವರ್ ಶ್ರೀಮಂತ ಬರುತ್ತಾನೆ ಅವನು ಮಂದಿರದ ವ್ಯವಸ್ಥಾಪಕರಿಗೆ ನಮಸ್ಕಾರ ಮಾಡಿ ನನ್ನ ಹತ್ತಿರ ಲಕ್ಷಗಟ್ಟಲೆ ಹಣ ಇದೆ ಈ ಮಂದಿರದ ಅಭಿವೃದ್ಧಿಗೆ ನನ್ನ ಕಡೆಯಿಂದ ಯಾವ ರೀತಿ ಸಹಾಯ ಮಾಡಬಹುದು ತಿಳಿಸಿ ಎಂದು ವಿನಂತಿಸಿಕೊಳ್ಳುತ್ತಾನೆ.

ವ್ಯವಸ್ಥಾಪಕರು ಇವರ ಉದಾರತೆಗೆ ಸಂತೋಷವಾಗುತ್ತದೆ ಮಂದಿರ ಇನ್ನಷ್ಟು ಅಭಿವೃದ್ಧಿ ಗೊಳಿಸಬಹುದು ವ್ಯವಸ್ಥಾಪಕರು ಶ್ರೀಮಂತನಿಗೆ ಇನ್ನೂ ಒಂದು ಕಟ್ಟಡ ಕಟ್ಟಬಹುದು ಎಂದು ಹೇಳಿ ಎರಡು ನಿಮಿಷ ದೀರ್ಘವಾಗಿ ಯೋಚಿಸಿ ಇನ್ನೊಂದು ದೇವರು ಮೆಚ್ಚುವ ಕಾರ್ಯವನ್ನು ಮಾಡಬಹುದು ಎಂದು ಹೇಳಿದರು.

 ಆ ಶ್ರೀಮಂತ ಏನು ಮಾಡಬೇಕು ಎಂದಾಗ ವ್ಯವಸ್ಥಾಪಕರು ಸದ್ಯಕ್ಕೆ ಈ ಊರಿನಲ್ಲಿ ಬರಗಾಲ ಬಂದಿದೆ ಊರಿನ ಜನರಿಗೆ ತಿನ್ನುವುದಕ್ಕೂ ಕಷ್ಟವಾಗಿದೆ ಅದಕ್ಕಾಗಿ ನಿಮ್ಮ ಹತ್ತಿರ ಇರುವ ಹಣದಲ್ಲಿ ನೀವೇ ಊರಿನ ಜನರಿಗೆ ಆಹಾರವನ್ನು ನೀಡಬಹುದು ಆಗ ಆ ಶ್ರೀಮಂತನು ಯೋಚನೆ ಮಾಡಿ ಮಂದಿರದ ಪಕ್ಕದಲ್ಲೇ ಒಂದು ಕಟ್ಟಡವನ್ನು ನಿರ್ಮಾಣಮಾಡಿ ಅದರಲ್ಲಿ ದವಸ ಧಾನ್ಯಗಳನ್ನು ತರಿಸಿದನು.

 ಅವನೇ ಕೆಲವು ಕೆಲಸಗಾರರನ್ನು ನೇಮಿಸಿ ಎಲ್ಲರಿಗೂ ಸರಿಯಾಗಿ ಹಂಚುವಂತೆ ವ್ಯವಸ್ಥೆ ಮಾಡಿದನು. ಅವನ ಬಳಿ ಇದ್ದ ಹಣದಿಂದ ಹಲವಾರು ತಿಂಗಳು ತನ್ನ ಸೇವೆಯನ್ನು ಸಲ್ಲಿಸಿದನು ನಂತರ ಆ ಊರಿನಲ್ಲಿ ಮಳೆ ಬಂತು ನಂತರ ಎಲ್ಲಾ ಸಮಸ್ಯೆಗಳು ತೊಂದರೆಗಳು ನಿವಾರಣೆಯಾದವು.

 ನಂತರ ಶ್ರೀಮಂತನೂ ಊರಿಗೆ ಹೊರಟನು ಸ್ವಲ್ಪ ದಿನಗಳ ನಂತರ ಬಂದು ನೋಡಿದರೆ ಶ್ರೀಮಂತನಿಗೆ ತುಂಬಾ ಸಂತೋಷ ವಾಯಿತು ಏಕೆಂದರೆ ಇವನು ಕಟ್ಟಿಸಿದ ಕಟ್ಟಡಕ್ಕೆ ಇವನದೇ ಹೆಸರು ಹಾಕಿ ಇವನದೇ ಒಂದು ವಿಗ್ರಹದಂತೆ ಮಾಡಿ ಇದಕ್ಕೆ ಹಲವಾರು ಜನರು ನಮಸ್ಕರಿಸುತ್ತಿದ್ದರು.

 ಕಷ್ಟ ಕಾಲದಲ್ಲಿ ಈ ವ್ಯಕ್ತಿಯು ನಮಗೆ ಆಹಾರವನ್ನು ನೀಡಿದ ಕರುಣಾಮಯಿ ಎಂದು ಹೇಳುತ್ತಿದ್ದರು ವ್ಯವಸ್ಥಾಪಕರಿಗೂ ತುಂಬಾ ಸಂತೋಷವಾಯ್ತು ಆ ಶ್ರೀಮಂತನಿಗೂ ತುಂಬ ತೃಪ್ತಿಯಾಯಿತು. ನನಗೆ ಹಾಗೂ ಇತರರಿಗೆ ತೃಪ್ತಿಯಾಗುವಂತಹ ಸಹಾಯ ಮಾಡೋಣ?

Leave a Comment