ಜುಳು ಜುಳು ಎಂದು ಹರಿಯುತ್ತಿರುವ ನೀರಿನ ಮುಖ್ಯ ಉದ್ದೇಶ ಹರಿಯುವ ನೀರು ಸಮುದ್ರವನ್ನು ಸೇರಬೇಕು ನದಿಯ ನೀರು ಹರಿದು ಹೋಗಬೇಕಾದರೆ ಅದಕ್ಕೆ ಹಲವಾರು ಅಡೆತಡೆಗಳು ಬಂದೇ ಬರುತ್ತದೆ ಮಣ್ಣಿನ ರಾಶಿ ಇರಬಹುದು, ಕಲ್ಲುಗಳು ಇರಬಹುದು, ಬೆಟ್ಟಗಳು, ಗುಡ್ಡಗಳು, ಮರಗಳು, ಹಾಗೆ ನೀರು ಹರಿಯಲು ನೀರಿನ ಎರಡೂ ಬದಿಯೂ ಮರಳು ಮಾತ್ರ ಇದ್ದೇ ಇರುತ್ತದೆ.
ಮರಳು ಮಾತ್ರ ನೀರನ್ನು ಹುರಿಯಲು ಸಹಾಯ ಮಾಡುತ್ತಿರುತ್ತದೆ ಹೀಗೆ ನದಿಯ ನೀರು ತನ್ನ ಗುರಿಯನ್ನು ಮುಟ್ಟಬೇಕೆಂದು ತುಂಬ ಆಸೆಯಿಂದ, ಹರಿಯುತ್ತಿದ್ದಾಗ ಮುಂದೆ ಸಾಗುತ್ತಾ ಸಾಗುತ್ತಾ ಕೊನೆಗೆ ಮರಳಿನ ರಾಶಿ ರಾಶಿಯ ಹತ್ತಿರ ಹೋಗಿ ನಿಂತುಬಿಡುತ್ತದೆ ಮುಂದೆ ಹೋಗಲು ಯಾವುದೇ ಕಾರಣಕ್ಕೂ ಸಾಧ್ಯವಾಗುತ್ತಿರುವುದಿಲ್ಲ.
ಮೊದಲು ನೀರನ್ನು ಹೋಗಲು ಮರಳೆ ಸಹಾಯ ಮಾಡುತ್ತಿತ್ತು ಆದರೆ ಈಗ ಹೆಚ್ಚಾಗಿ ಮರಳು ಇರುವುದರಿಂದ ನೀರು ಹೋಗಲಿಕ್ಕೆ ಮರಳೆ ತಡೆಯಾಗಿ ನಿಂತಿದೆ ನೀರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನೀರು ಮರಳಿನಿಂದ ಹೋಗಲಾರದ ಅಲ್ಲಿ ನಿಲ್ಲುತ್ತಿತ್ತು.
ನಂತರ ನೀರಿಗೆ ಮರಳಿನ ಮೇಲೆ ಕೋಪ ಬಂತು ನನ್ನನ್ನು ನೀನು ಏಕೆ ಹೀಗೆ ಹಿಂಸೆ ಕೊಡುತ್ತಿದ್ದೀಯಾ ಎಂದು ಕೇಳಿತು ಆಗ ಮರಳು ಮೃದುವಾದ ಧ್ವನಿಯಲ್ಲಿ ಹೇಳಿತ್ತು ನಿನ್ನ ರಭಸದ ಶಕ್ತಿಯ ಮೇಲೆ ಹೆಚ್ಚಾಗಿ ನಂಬಿಕೆ ಇಡಬೇಡ ನೀನು ಈಗ ದಾಟಬೇಕಾದರೆ ಗಾಳಿಯ ಸಹಾಯವನ್ನು ತೆಗೆದುಕೋ ನೀನು ನಿನ್ನ ಗುರಿಯನ್ನು ಸುಲಭವಾಗಿ ಮುಟ್ಟುತ್ತೀಯಾ ಎಂದು ಹೇಳಿತು.
ಆಗ ನೀರು ಹೇಳಿತು ನಾನು ನಿನ್ನನ್ನು ನನ್ನ ಸ್ನೇಹಿತೆ ಎಂದು ನಂಬಿದ್ದೆ. ಆದರೆ ನೀನು ಹೀಗೆ ಯಾಕೆ ಹೇಳಿದೀಯಾ ನೀನೆ ಅಡ್ಡಲಾಗಿ ನಿಂತಿದ್ದೀಯಾ ನನಗೆ ದಾರಿ ಬಿಡಬಹುದಲ್ಲ ಎಂದು ಕೇಳಿತು ಆಗ ಮರಳು ಹೇಳಿತು ನಾನು ನಿನ್ನ ಶತ್ರುವಲ್ಲ ಇದು ಪ್ರಕೃತಿ ನಿಯಮವಾದುದರಿಂದ ನಾವು ಎಲ್ಲಾ ಸಮಯದಲ್ಲೂ ನಮ್ಮ ಸಾಮರ್ಥ್ಯದ ಮೇಲೆಯೇ ಬದುಕಲಿಕ್ಕೆ ಸಾಧ್ಯವಿಲ್ಲ.
ಹಲವಾರು ಹಂತಗಳಲ್ಲಿ ನಮಗೆ ಬೇರೆಯವರು ನಮಗೆ ಸಹಾಯ ಮಾಡುತ್ತಾರೆ ನೀನು ದೊಡ್ಡ ಪ್ರವಾಹವಾಗಿ ಹರಿಯಬೇಕಾದರೆ ಇನ್ನೊಬ್ಬರ ಸಹಾಯ ಬೇಕೇ ಬೇಕು ಎಂದು ಹೇಳುತ್ತದೆ ಆಗ ನೀರು ಹೇಳುತ್ತದೆ ನಾನು ಇಲ್ಲಿಯವರೆಗೂ ನಾನು ನನ್ನ ಸ್ವಂತ ಶಕ್ತಿಯಿಂದಲೇ ಮುನ್ನುಗ್ಗಿದ್ದೇನೆ.
ಬಂಡೆಗಳು, ಬೆಟ್ಟಗಳು, ಗುಡ್ಡಗಳು, ಯಾವುದನ್ನೂ ಬಿಟ್ಟಿಲ್ಲ. ಈಗ ನಾನು ಇತರರನ್ನು ಏಕೆ ಅವಲಂಬನ ಮಾಡಬೇಕು? ನಂತರ ಮರಳು ಹೇಳುತ್ತೆ ಅಹಂಕಾರವನ್ನು ಬಿಡು ನೀನು ನಿನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಏನು ಇಲ್ಲ ನೀನು ಕೇವಲ ಪರಿವರ್ತನೆ (ರೂಪಾಂತರ) ಆಗುತ್ತೀಯಾ ಅಷ್ಟ ಗಾಳಿಯ ಸಹಾಯ ಪಡೆದರೆ ಒಳ್ಳೆಯದು ಎಂದು ಹೇಳಿತು.
ನದಿ ಸ್ವಲ್ಪ ಸಮಯದ ನಂತರ ಚಿಂತನ ಮಾಡಿತ್ತು ಮರಳು ಯಾವಾಗಲೂ ನನ್ನ ಜೊತೆಯಲ್ಲಿಯೇ ಇರುತ್ತದೆ ಆದುದರಿಂದ ಇದು ನನ್ನ ಒಳ್ಳೆಯದಕ್ಕೆ ಹೇಳುತ್ತಿರಬಹುದು ಎಂದು ನೀರು ರಭಸದಿಂದ ಹೋಗುವುದನ್ನು ಬಿಟ್ಟು ಮರಳಿನ ಮೇಲೆ ಬಂತು ಆಗ ಗಾಳಿಯೂ ತುಂಬಾ ಜೋರಾಗಿ ಬಂತು ನೀರು ಮರಳಿನ ಮೇಲೆ ನಿಂತಿತು ಅಷ್ಟೇ ನೀರು ಆವಿಯಾಗಿ ಭಾರವೇ ಇಲ್ಲದಂತೆ ನಿರಾಯಾಸವಾಗಿ ತಲುಪಿತು.
ಈ ರೀತಿ ಆಗುತ್ತೆ ಎಂದು ನೀರು ಕಲ್ಪನೆ ಕೂಡ ಮಾಡಿರಲಿಲ್ಲ ಅಷ್ಟು ಬೇಗ ಹೋಗಿ ಸಮುದ್ರದ ಮೇಲೆ ಬಂತು ನಂತರ ಸಮುದ್ರ ದೊಂದಿಗೆ ಮಿಲಿನ ಗೊಂಡಿತು ನೀರು ತನ್ನ ಗುರಿಯನ್ನು ಸೇರಿತು ನಂತರ ಮರಳಿಗೆ ಕೃತಜ್ಞತೆ ಸಲ್ಲಿಸಿತು ಆಗ ನೀರು ಹೇಳಿತು ಹೌದು ನಾನು ಹೋಗುವ ದಾರಿಯಲ್ಲಿ ಹಲವಾರು ಸಂದರ್ಭಗಳು ಬರುತ್ತವೆ.
ನಾವು ಬದಲಾಗಬೇಕಾದುದು ಅನಿವಾರ್ಯ ಎಂದು ನಾನು ಮೊದಲು ನೀರೇ ಆಗಿದೆ ಈಗಲೂ ನೀರೇ ಆಗಿದ್ದೀನಿ ಆದರೆ ಇದಕ್ಕೆ ಕೆಲವು ಸಾರಿ ಇನ್ನೊಬ್ಬರ ಸಹಾಯ ಬೇಕೇ ಬೇಕು ಎಂದು ಅರಿತುಕಂಡಿತು. ನಮ್ಮ ಬದುಕಿನಲ್ಲೂ ಹಲವಾರು ಸಾರಿ ಬೇಡ ಬೇಡವೆಂದರೂ ನಾವು ಆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಇತರರ ಸಹಾಯ ಪಡೆಯಲೇ ಬೇಕಾಗುತ್ತದೆ ಸಹಾಯ ಪಡೆದು ನಮಗೆ ಸಾಧ್ಯವಾದಾಗ ಇತರರಿಗೆ ಖಂಡಿತವಾಗಿ ಸಹಾಯ ಮಾಡೋಣ.
ಬೇಗ ಬೇಗ ಎಚ್ಚರಗೊಳ್ಳಿ
ಚಿಕ್ಕ ಹಳ್ಳಿ ಒಂದು ವಿಶಾಲವಾದ ಮನೆ ಇರುತ್ತದೆ ಅದರಲ್ಲಿ ಹಲವಾರು ಕೊಠಡಿಗಳು ಇರುತ್ತವೆ ಆದರೆ ಅಜ್ಜಿ ಒಬ್ಬರೇ ಇರುತ್ತಾರೆ ಕಳ್ಳರು ಎಲ್ಲಾ ಮನೆಗಳನ್ನು ನೋಡಿ ದೊಡ್ಡದಾದ ಮನೆಯಲ್ಲಿ ಏನಾದರೂ ಇರಬಹುದು ಎಂದು ನಿಧಾನವಾಗಿ ಕಳ್ಳತನ ಮಾಡಲಿಕ್ಕೆ ಹಿತ್ತಲಿನಿಂದ ಬರುತ್ತಾರೆ ಕಳ್ಳರು ಒಳಗೆ ಬಂದಾಗ ಏನು ಬಿದ್ದಂತೆ ಶಬ್ದ ಬರುತ್ತದೆ.
ನಿಧಾನವಾಗಿ ಅಜ್ಜಿ ಎದ್ದು ನೋಡಿದಾಗ ಅಜ್ಜಿಗೆ ಕಳ್ಳರು ಬಂದಿದ್ದಾರೆ ಎಂದು ಮನದಟ್ಟಾಗುತ್ತದೆ ಆಗ ಅಜ್ಜಿಗೆ ಒಂದು ಉಪಾಯ ಹೊಳೆಯುತ್ತದೆ ಅಜ್ಜಿಯು ತಕ್ಷಣ ಹಿಟ್ಟು ರುಬ್ಬುವ ಕಲ್ಲಬಳಿ ಹೋಗಿ ಅಕ್ಕಿಯನ್ನು ಬೀಸಬೇಕು ಎಂದು ಜೋರಾಗಿ ಹೇಳುತ್ತಾರೆ ಮತ್ತೆ ಮಕ್ಕಳೇ ಎದ್ದೋಳಿ ಬೆಳಿಗ್ಗೆ ನಾವು ತುಂಬಾ ಬೇಗ ಹೊಲಕ್ಕೆ ಹೋಗಬೇಕಾಗಿದೆ.
ನೆನ್ನೆ ಹೇಳಿದ್ದು ನಿಮಗೆ ನೆನಪಿಲ್ಲವೇ ಎಂದು ಪ್ರತಿಯೊಂದು ಕೊಠಡಿಗೂ ಬಾಗಿಲ ಮೇಲೆ ಬಡೆದು ಬೇಗ ಬೇಗ ಎಚ್ಚರಗೊಳ್ಳಿ ಎಂದು ಹೇಳುತ್ತಾರೆ ಇದನ್ನು ಕೇಳಿದ ಕಳ್ಳರಿಗೆ ಗಾಬರಿಯಾಗುತ್ತದೆ ಮನೆಯಲ್ಲಿ ಬಹಳಷ್ಟು ಜನ ಇದ್ದಾರೆ ಎಂದು ಹೆದರುತ್ತಾರೆ ನಂತರ ಅಜ್ಜಿಯು ಈಚೆ ಬಂದು ಅಕ್ಕ ಪಕ್ಕದ ಮನೆಯವರಿಗೆ ನೀವು ಇನ್ನೂ ಏಕೆ ಏಳಲಿಲ್ಲ ಬೇಗ ಕೆಲಸ ಮುಗಿಸೋಣ ಎಂದು ಹೇಳುತ್ತಾಳೆ.
ಈ ಮಾತನ್ನು ಕೇಳಿದ ಅಕ್ಕಪಕ್ಕದವರು ನಿಧಾನವಾಗಿ ಏಳುತ್ತಾರೆ ನಂತರ ಅಜ್ಜಿಯ ಮನೆಗೆ ಬರುತ್ತಾರೆ ಇದನ್ನು ಗಮನಿಸಿದ ಕಳ್ಳರು ಕಳ್ಳತನ ಮಾಡುವುದಕ್ಕಿಂತ ನಾವು ಇಲ್ಲಿಂದ ತಪ್ಪಿಸಿಕೊಂಡರೆ ಸಾಕು ಎಂದು ಕಳ್ಳರು ಕಳ್ಳತನ ಮಾಡಿ ತಂದಿದ್ದ ಹಣವೆಲ್ಲವೂ ಅಜ್ಜಿಯ ಮನೆಯಲ್ಲಿ ಬಿಟ್ಟು ಸದ್ದು ಮಾಡದೆ ಒಬ್ಬೊಬ್ಬರಾಗಿ ಓಡಿ ಹೋದರು ನಂತರ ಅಜ್ಜಿ ಪಕ್ಕದ ಮನೆಯವರಿಗೆ ಹೇಳಿದರು ಕಳ್ಳರು ಇದ್ದಕ್ಕಿದ್ದ ಹಾಗೆ ಬಂದರು.
ಅದಕ್ಕಾಗಿ ನಾನು ಈ ರೀತಿ ಮಾಡಿದೆ ಎಂದಾಗ ಅಕ್ಕಪಕ್ಕದ ಮನೆಯವರು ತುಂಬಾ ಸಂತೋಷಪಟ್ಟರು ನಂತರ ನೋಡಿದರೆ ಹಣವು ಕೂಡ ಬಿಟ್ಟು ಹೋಗಿದ್ದರು ನಂತರ ಆ ಹಣವೆಲ್ಲವೂ ಅಜ್ಜಿ ಹಳ್ಳಿಯ ಒಳ್ಳೆ ಕಾರ್ಯಕ್ಕೆ ಆಗಲಿ ಎಂದು ಆ ಹಣವನ್ನು ಕೊಟ್ಟರು. ಆಗ ಅಜ್ಜಿಗೆ ಎಲ್ಲರೂ ಗೌರವಿಸಿದರು.
ರುಚಿರುಚಿಯಾದ ವಿಶೇಷ ಶರಬತ್
ಒಂದು ಆಶ್ರಮ ಇರುತ್ತದೆ ಅಲ್ಲಿ ಹಲವಾರು ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯಲಿಕ್ಕೆ ಬಂದಿರುತ್ತಾರೆ ವಿದ್ಯೆ ಕಲಿತ ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನಕ್ಕಾಗಿ ಬೇರೆಬೇರೆ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಬದುಕುತ್ತಿರುತ್ತಾರೆ.
ಹಲವಾರು ವರ್ಷಗಳು ಕಳೆದ ನಂತರ ಎಲ್ಲಾ ವಿದ್ಯಾರ್ಥಿಗಳು ಆಶ್ರಮದ ವಾರ್ಷಿಕೋತ್ಸವಕ್ಕೆ ಬರುತ್ತಾರೆ ಗುರುಗಳನ್ನು ಕಂಡಾಗ ವಿದ್ಯಾರ್ಥಿಗಳಿಗೆ ತುಂಬಾ ಸಂತೋಷವಾಗುತ್ತದೆ ಸಮಾರಂಭವು ತುಂಬಾ ಅದ್ದೂರಿಯಾಗಿ ನಡೆಯುತ್ತದೆ ನಂತರ ಹಳೆ ವಿದ್ಯಾರ್ಥಿಗಳು ಗುರುವಿನ ಜೊತೆ ಒಂದೆರಡು ದಿನ ಇದ್ದು ಕಾಲ ಕಳೆಯಬೇಕೆಂದು ಎಲ್ಲಾ ಹಳೆ ವಿದ್ಯಾರ್ಥಿಗಳು ನಿಶ್ಚಯ ಮಾಡಿ ಆಶ್ರಮದಲ್ಲಿಯೇ ಉಳಿಯುತ್ತಾರೆ.
ಗುರುಗಳು ಹಳೆ ವಿದ್ಯಾರ್ಥಿಗಳಿಗೆ ಕುಶಲೊಪರಿಯನ್ನು ವಿಚಾರಿಸುತ್ತಾರೆ ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಕಾಡುತ್ತಿರುತ್ತದೆ ಆಗ ಗುರುಗಳು ಎಲ್ಲಾ ಸಮಸ್ಯೆಯನ್ನು ಸಮಾಧಾನದಿಂದ ಕೇಳುತ್ತಾರೆ ನಂತರ ಹಳೆ ವಿದ್ಯಾರ್ಥಿಗಳಿಗೆ ಒಂದು ಕಡೆ ಸೇರಿಸಿ ಇಂದು ನಾನು ರುಚಿಯಾದ ವಿಶೇಷ ಶರಬತ್ತನು ಮಾಡಿಕೊಡುತ್ತೇನೆ ಎಂದು ಒಂದು ಬಕೆಟ್ನಲ್ಲಿ ರುಚಿರುಚಿಯಾದ ವಿಶೇಷ ಶರಬತ್ತನ್ನು ತಯಾರಿಸುತ್ತಾರೆ.
ಗುರುಗಳು ನಾಲ್ಕು ದೊಡ್ಡ ತಟ್ಟೆಗಳಲ್ಲಿ ಲೋಟಗಳನ್ನು ತರುತ್ತಾರೆ ಲೋಟಗಳು ಮಾತ್ರ ವಿಧವಿಧವಾಗಿ ವಿಭಿನ್ನವಾಗಿ ರಂಗುರಂಗಾಗಿ ಇರುತ್ತವೆ ಕೆಲವು ಪ್ಲಾಸ್ಟಿಕ್ ಲೋಟಗಳು ಮಣ್ಣಿನ ಲೋಟಗಳು ಇನ್ನೂ ಕೆಲವು ಗಾಜಿನ ಲೋಟಗಳು ಲೋಟಗಳು ಪೇಪರ್ ಗ್ಲಾಸಿನ ಲೋಟಗಳು ಹಲವಾರು ರೀತಿಯ ಹಿತ್ತಾಳೆಯ ಲೋಟಗಳು ತರುತ್ತಾರೆ ನಂತರ ಗುರುಗಳು ಹಲವಾರು ರೀತಿಯ ವಿಶೇಷ ಲೋಟಗಳನ್ನು ತಂದಿದ್ದೇನೆ ನಿಮಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ಗುರುಗಳು ಈ ಮಾತು ಹೇಳಿದ್ದೆ ತಡ ಎಲ್ಲಾ ವಿದ್ಯಾರ್ಥಿಗಳು ಕುರಿಗಳಂತೆ ನುಗ್ಗಿ ತಮಗೆ ಬೇಕಾದ ವಿಶೇಷವಾಗಿರುವ ಆಕರ್ಷಕವಾಗಿರುವ ಲೋಟಗಳನ್ನು ಆಯ್ಕೆ ಮಾಡಿಕೊಂಡರು ಕೆಲವರಿಗೆ ಸಾಧಾರಣ ಸಿಕ್ಕವು ನಿರಾಶೆಯಿಂದ ಸಾಲಾಗಿ ಬಂದು ನಿಂತುಕೊಂಡರು ಗುರುಗಳು ತಮ್ಮ ಕೈಯಾರೆ ಎಲ್ಲರಿಗೂ ರುಚಿಯಾದ ವಿಶೇಷ ಶರಬತ್ತನ್ನು ಲೋಟಗಳಿಗೆ ಹಾಕಿದರು.
ವಿದ್ಯಾರ್ಥಿಗಳು ವಿಶೇಷ ಶರಬತ್ತನ್ನು ಕುಡಿದು ಸಂತೋಷಪಟ್ಟರು. ಗುರುಗಳು ರುಚಿಯಾದ ಶರಬತ್ ಕುಡಿದ ನಂತರ ವಿದ್ಯಾರ್ಥಿಗಳಿಗೆ ನೋಡಿ ನೀವು ಬಹಳಷ್ಟು ವಿದ್ಯಾರ್ಥಿಗಳು ಆಕರ್ಷಕವಾಗಿರುವ ಒಳ್ಳೆಯ ಲೋಟಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ ಸಹಜವಾಗಿರುವ ಲೋಟಗಳು ಅಲ್ಲೇ ಬಿಟ್ಟು ಬಂದಿದ್ದೀರಿ ಅಲ್ಲವೇ ಎಂದಾಗ ಎಲ್ಲಾ ವಿದ್ಯಾರ್ಥಿಗಳು ಹೌದು ಎಂದರು ಗುರುಗಳು ಇದೆ ನಿಮಗೆ ಸಮಸ್ಯೆಯಾಗಿ ಕಾಡುತ್ತಿದೆ.
ನಿಮಗೆ ಬೇಕಾಗಿರುವುದು ಶರಬತ್ ಮಾತ್ರ ಅಲ್ಲವೇ ಆದರೆ ಅತ್ಯುತ್ತಮ ಆಕರ್ಷಕವಾಗಿರುವ ಉತ್ತಮ ಲೋಟ ಆರಿಸಿಕೊಂಡಿದ್ದೀರಿ ಅಂದರೆ ಎಂತಹ ಲೋಟವನ್ನು ಆರಿಸಿಕೊಂಡಿದ್ದರು ಯಾವುದೇ ಲೋಟದಲ್ಲಿ ಶರಬತ್ ಕುಡಿದರು ವ್ಯತ್ಯಾಸವಾಗುವುದೇ ಇಲ್ಲ ಅದೇ ರೀತಿ ತೃಪ್ತಿ ಆನಂದ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ
ಲೋಟಗಳು ಹಣ ಅಧಿಕಾರ ಗೌರವ ಇದ್ದಂತೆ ನಾವು ಶರಬತ್ ಗೆಮಾತ್ರ ಹೆಚ್ಚು ಬೆಲೆ ಕೊಡಬೇಕೇ ಹೊರತು ಲೋಟಗಳಿಗೆ ಅಲ್ಲ ಎಲ್ಲರಿಗೂ ಶರಬತ್ ನಂತಹ ಜೀವನ ಇದ್ದೆ ಇದೆ ಆದರೆ ಅದನ್ನು ನಾವು ಅನುಭವಿಸದೆ ಇರುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಉತ್ತಮವಾದ ಶೈಲಿಯಲ್ಲಿ ಇರಬೇಕು ಎಂದು ಇರುವ ಸಂತೋಷವನ್ನು ಕಡೆಗಣಿಸುತ್ತಿದ್ದೇವೆ ನಮಗೆ ಏನು ಬರುತ್ತದೆ ಅದರಲ್ಲಿ ನಾವು ತೃಪ್ತಿ ಸಂತೋಷವನ್ನು ಕಾಣಬೇಕು ಇದೆ ಸಾರ್ಥಕ ಬದುಕಿನ ಲಕ್ಷಣ ಎಂದು ಹೇಳಿದರು ಆಗ ಎಲ್ಲಾ ವಿದ್ಯಾರ್ಥಿಗಳು ಅರ್ಥಮಾಡಿಕೊಂಡರು.
ಹಣ ಇಲ್ಲದವರ ಸಮಸ್ಯೆಯೇ ಬೇರೆ
ಒಂದು ದೊಡ್ಡ ಬೆಟ್ಟ ಇರುತ್ತದ ಅದರ ಮೇಲೆ ಹೋಗಿ ಒಬ್ಬ ಯುವಕನಾದವನು ನಿರಾಶನಾಗಿ ಕುಳಿತಿರುತ್ತಾನೆ ಮತ್ತೆ ಸ್ವಲ್ಪ ಸಮಯದ ನಂತರ ಇನ್ನೊಬ್ಬ ಯುವಕ ಬರುತ್ತಾನೆ ಇಬ್ಬರು ಕೂಡ ಕಾಯುತ್ತಲೇ ಇರುತ್ತಾರೆ ಕೊನೆಗೆ ಒಬ್ಬ ಯುವಕ ಹೇಳುತ್ತಾನೆ.
ನೀನು ಇಷ್ಟು ಸಮಯ ಇಲ್ಲೇಕೆ ಕುಳಿತಿರುವೆ ಎಂದಾಗ ಅವನು ಹೇಳುತ್ತಾನೆ ನನಗೆ ಜೀವನ ಜಿಗುಪ್ಪೆಯಾಗಿ ಹೋಗಿದೆ ನಾನು ಸಾಯಬೇಕೆಂದು ಕಾಯುತ್ತಿದ್ದೇನೆ ಆದರೆ ನೀನು ಕುಳಿತಿದ್ದೀಯಾ ಎಂದು ನಾನು ಸಾಯಲಿಕ್ಕೆ ಕಾಯುತ್ತಿದ್ದೇನೆ ಎಂದಾಗ ಆ ಯುವಕನು ಕೂಡ ಅದೇ ರೀತಿ ಹೇಳುತ್ತಾನೆ.
ನಾನು ಸಾಯಲಿಕೆ ಕಾಯುತ್ತಿದ್ದೇನೆ ನೀನು ಇದ್ದೀಯ ಎಂದು ನಾನು ಕಾಯುತ್ತಿದ್ದೇನೆ ಎಂದಾಗ ಇಬ್ಬರು ಕೂಡ ಮಾತನಾಡಿಕೊಳ್ಳುತ್ತಾರೆ ಓಹೋ ನೀನು ಸಾಯಲಿಕ್ಕೆ ಬಂದಿದ್ದೀಯೋ ಹೌದು ಎಂದಾಗ ನಿನ್ನ ಸಮಸ್ಯೆ ಏನು ಎಂದು ಒಬ್ಬ ಯುವಕ ಹೇಳುತ್ತಾನೆ.
ನನಗೆ ಹಣದ ಅವಶ್ಯಕತೆ ಜಾಸ್ತಿ ಇದೆ ಏನೇ ಮಾಡಿದರೂ ನಾನು ಹೆಚ್ಚಾಗಿ ದುಡಿಯುವುದಕ್ಕೆ ಆಗುತ್ತಿಲ್ಲ ನನ್ನ ಅರ್ಹತೆಗೆ ಸರಿಯಾದ ಕೆಲಸ ಸಿಗುತ್ತಿಲ್ಲ ದುಡಿಯುವುದಕ್ಕೆ ದಾರಿಗಳೇ ಸಿಗುತ್ತಿಲ್ಲ ದುಡಿಯಲಿಲ್ಲದಿದ್ದರೆ ನನ್ನ ಮೇಲೆ ನನಗೆ ಬೇಸರ ಉಂಟಾಗಿದೆ ಬದುಕಿನಿಂದ ಬೇಸತ್ತು ಬಂದಿದ್ದೇನೆ ಆದುದರಿಂದ ನನಗೆ ಬೇಸರವಾಗಿದೆ.
ಇನ್ನೊಬ್ಬ ನನಗೆ ಬೇಕಾದಷ್ಟು ಇದೆ ಹಣ ಇದೆ ಬಂಗ್ಲೆ ಇದೆ ಆದರೆ ನನಗೆ ಪ್ರೀತಿ, ಆನಂದ, ಒಳ್ಳೆಯ ಖುಷಿ ಸಿಗುತ್ತಿಲ್ಲ. ನನಗೆ ಯಾರೂ ಇಲ್ಲ ಎಂದು ಹೇಳುತ್ತಾನೆ ಹಣ ಇದ್ದವರ ಸಮಸ್ಯೆ ಒಂದು ಎಂದರೆ ಹಣ ಇಲ್ಲದವರ ಸಮಸ್ಯೆಯೇ ಬೇರೆ ಇಬ್ಬರೂ ಮಾತನಾಡುತ್ತಾ ಸ್ನೇಹಿತರಾಗುತ್ತಾರೆ ಮುಂದೆ ಹೊಸ ಬದುಕು ಪ್ರಾರಂಭಿಸುತ್ತಾರೆ.
ಅವಕಾಶಗಳು ಸಿಕ್ಕಿದರೂ
ಸರ್ಕಸ್ಸನ್ನು ನೋಡಲು ಹೋದಾಗ ಅಲ್ಲಿ ಹಲವಾರು ಆಟಗಳು ಇರುತ್ತವೆ ಪಂಜರದಲ್ಲಿ ಸಿಂಹವು ಕೂಡ ಇರುತ್ತದೆ ಸಿಂಹದ ಆಟವೂ ಇರುತ್ತದೆ ಕಾಡಿನಲ್ಲಿ ರಾಜನಾಗಿ ಇರುವ ಆ ಸಿಂಹವನ್ನು ಕೇವಲ ಇಪ್ಪತ್ತು ಅಡಿ ಬೋನಿನಲ್ಲಿ ಕೂಡಿ ಹಾಕಿರುತ್ತಾರೆ ಅದಕ್ಕೆ ಸಮಯಕ್ಕೆ ಸರಿಯಾಗಿ ಮಾಂಸವಂತೂ ಸಿಗುತ್ತದೆ ಆದರೆ ಪಂಜರ ಬಿಟ್ಟು ಬೇರೆ ಕಡೆ ಹೋಗಲು ಸಾಧ್ಯವಿಲ್ಲ.
ಇದೇ ರೀತಿ ಕೆಲವು ವರ್ಷಗಳ ನಂತರ ಸಿಂಹವು ತಪ್ಪಿಸಿಕೊಳ್ಳುತ್ತದೆ ಕಾಡಿಗೆ ಹೋಗುತ್ತದೆ ಸಿಂಹವು ಬೇಟೆಯನ್ನು ಆಡದೆ ಮತ್ತೆ ಅಷ್ಟರಲ್ಲೇ ಸುತ್ತುತ್ತಿರುತ್ತದೆ ಏಕೆಂದರೆ ಅದಕ್ಕೆ ಅಭ್ಯಾಸವಾಗಿಬಿಟ್ಟಿರುತ್ತದೆ ನನ್ನ ಶಕ್ತಿ, ಸಾಮರ್ಥ್ಯ ಅಷ್ಮ ಎಂದು ಅವಕಾಶ ಸಿಕ್ಕಿದರೂ ಕೂಡ ಅದು ಉಪಯೋಗಿಸಿಕೊಳ್ಳುವುದಿಲ್ಲ.
ಆ ಸಿಂಹ ಕಾಡಿನಲ್ಲಿಯೂ ಬದುಕಬಹುದು ಆದರೆ ಅದು ಕಾಡಿನಲ್ಲಿ ಬದುಕದೆ ಹೆದರಿ ಮತ್ತೆ ಸರ್ಕಸ್ ಗೆ ಹುಡುಕಿಕೊಂಡು ಬರುತ್ತದೆ ಅಷ್ಟರಲ್ಲೇ ಹೊಂದಿಕೊಂಡು ಬದುಕುತ್ತದೆ ಹಾಗೆ ಕೆಲವರು ಹಾಗೇ ಇದ್ದಾರೆ ಕೆಲವು ಘಟನೆಗಳಿಂದ ಹೆದರಿ ನಾವು ಇಷ್ಟನ್ನೇ ಮಾತ್ರ ಮಾಡಬಹುದು ಬೇರೆ ಯಾವುದೋ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಹೆದರಿಕೊಂಡು ಜೀವಿಸುತ್ತಿರುತ್ತಾರೆ.
ನಮಗೆಒಳ್ಳೆಯ ಅವಕಾಶಗಳು ಸಿಕ್ಕಿದರೂ ಕೂಡ ಅವಕಾಶಗಳನ್ನು ಬಳಸಿಕೊಳ್ಳದೆ ಇರುವುದರಲ್ಲಿಯೇ ತೃಪ್ತಿಪಟ್ಟುಕೊಂಡು ಬದುಕುವವರು ಇದ್ದಾರೆ. ಕಾಡಿನ ಸಿಂಹವಾಗಿ ಇರಬೇಕೋ ಅಥವಾ ಸರ್ಕಸ್ ನಲ್ಲಿ ಇರುವ ಸಿಂಹವಾಗಬೇಕು? ಆಯ್ಕೆ ನಮ್ಮದೇ ಇಂದು ಮೃಗಾಲಯದಲ್ಲಿ ಮಾತ್ರ ಪ್ರಾಣಿಗಳು ಇವೆ ಸರ್ಕಸ್ ನಲ್ಲಿ ಪ್ರಾಣಿಗಳನ್ನು ನಿಷೇಧಿಸಲಾಗಿದೆ.