ಒಂದು ಊರಿನಲ್ಲಿ ದಯಾಳು ರಾಜ ಇರುತ್ತಾನೆ ಒಂದು ಸಾರಿ ಊರಿನಿಂದ ಬರಬೇಕಾದರ ಒಬ್ಬ ಹುಡುಗ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡಿರುತ್ತಾನೆ ಇವನಿಗೆ ತಂದೆ ತಾಯಿ ಯಾರು ಇರುವುದಿಲ್ಲ. ಇವನನ್ನು ಕರೆದುಕೊಂಡು ಆಸ್ನಾನಕ್ಕೆ ಬಂದು ಇವನಿಗೆ ಕೆಲವು ಕೆಲಸಗಳನ್ನು ನೇಮಿಸುತ್ತಾನೆ.
ಹುಡುಗ ಪ್ರಾಮಾಣಿಕತೆಯಿಂದ ಕೆಲಸಗಳನ್ನು ಚಾಚೂ ತಪ್ಪದೆ ಶ್ರದ್ಧೆ ಭಕ್ತಿಯಿಂದ ಮಾಡುತ್ತಿರುತ್ತಾನೆ ಹುಡುಗನು ಬೆಳೆದಂತೆ ರಾಜನು ಇವನಿಗೆ ಮಂತ್ರಿಯ ಸ್ನಾನವನ್ನು ನೀಡುತ್ತಾನೆ ಆಗ ಇತರ ಸಿಪಾಯಿಗಳಿಗೆ ಸೇನಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ ಹೇಗಾದರೂ ಮಾಡಿ ಇವನನ್ನು ಪದವಿಯಿಂದ ತೆಗೆಯಬೇಕು ಎಂದು ಹೊಂಚು ಹಾಕುತ್ತಿರುತ್ತಾರೆ ಆದರೆ ಅರಮನೆಯಲ್ಲಿರುವ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.
ಒಂದು ಸಾರಿ ರಾಜನ ಆಸ್ಥಾನದಲ್ಲಿ ತುಂಬಾ ಅದ್ದೂರಿಯಾಗಿ ಸಮಾರಂಭ ಏರ್ಪಡಿಸುತ್ತಾರೆ ಊರಿನ ಪ್ರಜೆಗಳು ರಾಜರು ಬಂದು ಎಲ್ಲರೂ ಈ ರಾಜನಿಗೆ ಒಂದೊಂದು ಬೆಲೆಬಾಳುವ ಉಡುಗೊರೆಯನ್ನು ಕೊಟ್ಟು ಹೋಗುತ್ತಾರೆ. ಕೊನೆಯಲ್ಲಿ ಎಲ್ಲರೂ ಹೋದ ಮೇಲೆ ನೋಡಿದಾಗ ಒಂದು ಚಿಕ್ಕ ಚೀಲದಲ್ಲಿ ಸೌತೆಕಾಯಿಗಳು ಇರುತ್ತವೆ ಇದನ್ನು ಗಮನಿಸಿದ ರಾಜನು ಸೌತೆಕಾಯಿಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾನೆ.
ರಾಜನು ಆಲೋಚಿಸುತ್ತಾನೆ ಒಬ್ಬ ರೈತನೂ ಸೌತೆಕಾಯಿಗಳನ್ನು ನನಗೆ ಕೊಡಲು ಬಂದಿದ್ದಾನೆ ಆದರೆ ಬೇರೆಯವರು ದೊಡ್ಡ ದೊಡ್ಡ ಕಾಣಿಕೆಯನ್ನು ಕೊಟ್ಟಿದ್ದಾರೆ ನಾನು ಇಷ್ಟು ಚಿಕ್ಕ ಕಾಣಿಕ ಹೇಗೆ ಕೊಡಲಿ ಎಂದು ಇಲೇ ಬಿಟ್ಟು ಹೋಗಿದ್ದಾನ ಎಂದು ಅರಿತುಕೊಳ್ಳುತ್ತಾನೆ.
ನಂತರ ಸೇವಕನಿಗೆ ಹೇಳಿ ಚಾಕುವಿನಿಂದ ಸೌತೆಕಾಯಿಗಳನ್ನು ಕತ್ತರಿಸಿ ಎಲ್ಲರಿಗೂ ಹಂಚುತ್ತಾರೆ ಎಲ್ಲರೂ ತಿನ್ನುತ್ತಾರೆ ಅದರೆ ಅವರ ಮುಖದಲ್ಲಿ ಸೌತೆಕಾಯಿ ಕಹಿ ಇದೆ ಎಂದು ಅನ್ನಿಸುತ್ತದೆ ನಂತರ ಈ ಮಂತ್ರಿಯು ತಿನ್ನುತ್ತಾನೆ ಆಗ ಅವನು ಅಮೃತದಂತೆ ತಿನ್ನುತ್ತಾನೆ.
ನಂತರ ರಾಜನೂ ಕೂಡ ಒಂದು ತುಂಡನ್ನು ಬಾಯಿಗೆ ಹಾಕುತ್ತಾನೆ ತುಂಬಾ ಕಹಿ ಇರುತ್ತದೆ ಕೆಲವರು ಕಸಿವಿಸಿಯಾದರು ಕೆಲವರು ಉಗಿದು ಬಿಟ್ಟರು ಆದರೆ ನೀನೇಕೆ ಉಗಿಯಲಿಲ್ಲ ಎಂದಾಗ ಆ ಮಂತ್ರಿಯೂ ಹೇಳುತ್ತಾನೆ.
ರಾಜರೇ ನೀವು ನನಗೆ ಕೊಟ್ಟ ಯಾವುದೇ ವಸ್ತು ಅದರೂ ಅದು ನನಗೆ ಅಮೃತಾ ಅನಿಸುತ್ತದೆ.
ಮೊದಲು ನೀವು ನನಗೆ ಆಸರೆ ಕೊಟ್ಟಿದ್ದೀರಿ ಬಹಳಷ್ಟು ಒಳ್ಳೆಯದನ್ನು ಮಾಡಿದ್ದೀರಿ ಎಲ್ಲವೂ ಅಮೃತ ಇರುವಾಗ ಇದು ಒಂದು ಚಿಕ್ಕ ಸೌತೆಕಾಯಿ ನನಗೆ ಕಹಿ ಅನಿಸಲಿಲ್ಲ ನಿಮ್ಮ ಮೇಲೆ ನನಗೆ ಅಷ್ಟು ಕೃತಜ್ಞತೆ ಇದೆ ಎಂದು ಹೇಳುತ್ತಾನೆ.
ನಮ್ಮ ಅಭಿವೃದ್ಧಿಗಾಗಿ ತಂದೆ ತಾಯಿ ಬದುಕನ್ನೇ ಸವಿಸಿರುತ್ತಾರೆ ಚಿಕ್ಕ ತಪ್ಪಾದಾಗ ನಾವು ದೂಷಿಸುತ್ತೇವೆ ಸಣ್ಣ ಪುಟ್ಟ ದೋಷಗಳು ಬಂದರೂ ನಾವು ಸರಿಪಡಿಸಿಕೊಂಡು ಸನ್ಮಾರ್ಗದ ದಾರಿಯಲ್ಲಿ ನಡೆಯೋಣ. ನಾವು ತಂದೆ ತಾಯಿಗೆ ಗುರು, ಹಿರಿಯರಿಗೆ, ಕೃತಜ್ಞತರಾಗಿರೋಣ.
ಕಾಣದೆ ಇರುವುದಕ್ಕೆ ನೋಡುವ ಆಸೆ
ಒಂದು ಹಳ್ಳಿಯಲ್ಲಿ ಒಬ್ಬ ಅತಿ ಬುದ್ದಿವಂತ ಮಾಲೀಕ ಇರುತ್ತಾನೆ ಮಾಲೀಕ ತನಗಿಂತ ಬುದ್ಧಿವಂತರು ಯಾರೂ ಇಲ್ಲ ಎನ್ನುವ ಭಾವನೆ ಅವನಿಗಿರುತ್ತದೆ ಹಲವಾರು ಜನ ಕೆಲಸಗಾರರು ಇರುತ್ತಾರೆ ಮನೆಯು ದೊಡ್ಡದಾಗಿರುವುದರಿಂದ ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ವಹಿಸಿರುತ್ತಾನೆ.
ಮಾಲೀಕನ ವರ್ತನೆಯನ್ನು ಕಂಡು ಇಬ್ಬರು ಕೆಲಸಗಾರರು ಒಂದು ಹೊಸ ಆಲೋಚನೆಯನ್ನು ಮಾಡಿ ಕೆಲಸಗಾರರು ಮಾಲೀಕನಿಗೆ ಹೇಗಾದರೂ ಮಾಡಿ ಚಿಂತೆಗೀಡು ಮಾಡಬೇಕು ಎಂದು ಯೋಚನೆ ಮಾಡುತ್ತಾರೆ ಎಲ್ಲಾ ಸೇವೆಗಳಿಗೂ ಕೆಲಸಗಾರರಿಗೆ ಭಾನುವಾರ ಒಂದು ದಿನ ರಜಾ ಇರುತ್ತದೆ.
ಇಬ್ಬರು ಕೆಲಸಗಾರರು ತಮ್ಮ ಪ್ಲಾನ್ ನಂತೆ ಶನಿವಾರ ಸಂಜೆ ಹೋಗುವ ಸಮಯದಲ್ಲಿ ಒಂದು ಮೊಲ ಒಂದು ಬೆಕ್ಕು ಇನ್ನೊಂದು ನಾಯಿಮರಿ ಇವು 3ಕ್ಕೆ ಅಂದರೆ ಮೊಲಕ್ಕೆ ಒಂದನೇಯ ಸಂಖ್ಯೆ ಬೆಕ್ಕಿಗೆ ಎರಡನೇ ಸಂಖ್ಯೆ ಮತ್ತು ನಾಲಕ್ಕನೆ ಸಂಖ್ಯೆ ನಾಯಿ ಮರಿಯ ಮೇಲೆ ಒಂದೇ ರೀತಿ ಒಂದೇ ಬಣ್ಣದಲ್ಲಿ ಬರೆದಿರುತ್ತಾರೆ.
ಸೋಮವಾರ ಮಾಲೀಕನು ಬಂದು ನೋಡಿದಾಗ ಅಲ್ಲಲ್ಲಿ ಅಲ್ಲಲ್ಲಿ ಪ್ರಾಣಿ ಮಲಗಳು ಕಂಡು ಬಂತು ಆಗ ಮಾಲೀಕನು ಎಲ್ಲಾ ಕೆಲಸಗಾರರನ್ನು ಕರೆದು ನೋಡಿ ನಮ್ಮ ಆವರಣದಲ್ಲಿ ಏನೋ ಬಂದು ಸೇರಿಕೊಂಡಿದೆ ಅದನ್ನು ಹೇಗಾದರೂ ಮಾಡಿ ಹುಡುಕಿ ಎಂದು ಎಲ್ಲರನ್ನು ಹೇಳಿ ಹುಡುಕಿಸುತ್ತಾನೆ.
ಕೆಲಸಗಾರರು ಸ್ವಲ್ಪ ಸಮಯದಲ್ಲಿ ಮೂರು ಪ್ರಾಣಿಗಳನ್ನು ಹಿಡಿದು ತರುತ್ತಾರೆ ಕ್ರಮವಾಗಿ 1. 2. 4. ಹೀಗೆ ಸಂಖ್ಯೆ ಇರುತ್ತದೆ ಈ ರೀತಿ ಸಂಖ್ಯೆ ನೋಡಿದ ಮಾಲಿಕನು ಗಾಬರಿಯಾಗುತ್ತಾನೆ. ಮತ್ತೆ ಹೇಳುತ್ತಾನೆ ಮೂರನೇ ಸಂಖ್ಯೆಯ ಪ್ರಾಣಿಯನ್ನು ಎಲ್ಲರೂ ಹುಡುಕಿಕೊಂಡು ಬನ್ನಿ ಎಂದು ಕಳಿಸುತ್ತಾನೆ ಅದು ಎಲ್ಲಿಯೂ ಸಿಗುವುದಿಲ್ಲ.
ಏಕೆಂದರೆ ಇರುವುದು 3 ಪ್ರಾಣಿಗಳು ತಾನೆ ಆಗ ಮಾಲೀಕನು ಗಾಬರಿಕೊಂಡು ಕ್ರಮವಾಗಿ 3 ಪ್ರಾಣಿಗಳು ಇದೆ ಇನ್ನೊಂದು ನಾಪತ್ತೆಯಾಗಿದೆ ಅದಕ್ಕಾಗಿ ಅದು ಯಾವ ಪ್ರಾಣಿ ಯಾಗಿದೆಯೆಂದು ತಿಳಿಯಲಾಗುತ್ತಿಲ್ಲ ಎಂದು ಆ ದಿನ ಮಾಲಿಕ ಎಲ್ಲರಿಗೂ ರಜೆ ನೀಡಿ ಕಳಿಸುತ್ತಾನೆ.
ಮತ್ತೆ ಅಲ್ಲಿಯ ಆವರಣವನ್ನು ಪ್ರತಿಯೊಂದು ಸ್ಥಳದಲ್ಲಿಯೂ ಬೇರೆಯವರನ್ನು ಕರೆಸಿ ಮತ್ತೊಂದು ಸಾರಿ ಬಿಡದಂತೆ ಸ್ವಚ್ಛ ಗೊಳಿಸುತ್ತಾರೆ ಆದರೂ ಕೂಡ ಏನೂ ಸಿಗುವುದಿಲ್ಲ ಆದರೆ ಈ ಹೊಸ ಕೆಲಸಗಾರರಿಗೆ ಸಂತೋಷವಾಗುತ್ತದೆ ನಾವು ಮಾಡಿದ ಒಂದು ಪ್ಲಾನ್ ನಲ್ಲಿ ಸಕ್ಸಸ್ ಆಗಿದೆ ಎಂದು ಸಂತೋಷ ಪಡುತ್ತಾರೆ ಮತ್ತೆ ಒಂದು ದಿನ ರಜಾ ಸಿಕ್ಕಿದ್ದಕ್ಕಾಗಿ ಕುಣಿದು ಕುಪ್ಪಳಿಸುತ್ತಾರೆ.
ಇದು ಒಂದು ಘಟನೆ ಆಗಿರಬಹುದು ಕೆಲವೊಂದು ಸಾರಿ ನಾವು ಕೂಡ ಹಾಗೆ ಮಾಡುತ್ತೇವೆ ಇಲ್ಲದೆ ಇರುವುದನ್ನು ಹುಡುಕಿ ಹುಡುಕಿ ಸಾಕಾಗುತ್ತವೆ ಇನ್ನೂ ಏನೇನೋ ಇರಬಹುದು ಇದ್ದಿರಬಹುದು ಎಂದು ಚಿಂತೆ ಮಾಡಿ ಕೊರಗಿದ್ದೇವೆಯೇ?
ಹೆಸರು ಪಡೆಯುವುದೇ ಯಾರೋ
ಎರಡು ಹಳ್ಳಿಗಳು ಇರುತ್ತವೆ ಅದನ್ನು ದಾಟಬೇಕಾದರೆ ನದಿ ಇರುವುದರಿಂದ ಒಂದು ಸೇತುವೆ ಕಟ್ಟಿದರೆ ಒಳ್ಳೆಯದು ಎಂದು ಎಲ್ಲರೂ ತೀರ್ಮಾನ ಮಾಡುತ್ತಾರೆ ಅದಕ್ಕಾಗಿ ಸೇತುವೆ ಕಟ್ಟಲು ಪ್ರಾರಂಭಿಸುತ್ತಾರೆ.
ಸೇತುವೆ ಕಟ್ಟಲು ಮುಖ್ಯವಾಗಿ ಹೊರುವುದಕ್ಕೆ ಕತ್ತೆಗಳೇ ಬೇಕಾಗುತ್ತದೆ ಹಾಗೂ ಮನುಷ್ಯರು ಕೂಡ ಸೇರಿ ಅತಿ ಹೆಚ್ಚು ಶ್ರಮವಹಿಸಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾರೆ ಅದೇ ರೀತಿ ಸಾಕಷ್ಟು ಕತ್ತೆಗಳು ಶ್ರಮ ಪಡುತ್ತವೆ ಅದರಲ್ಲಿ ಹಲವಾರು ಕತ್ತೆಗಳು ಸಾಯುತ್ತವೆ.
ಹಲವಾರು ಕತ್ತೆಗಳು ಗಾಯಗೊಳ್ಳುತ್ತವೆ ಹಾಗೆಯೇ ಕೆಲವು ಕೆಲಸದವರು ಕೂಡ ಹಾಗೆ ಸಾಯುತ್ತಾರೆ ಕೆಲವರು ಸೊಂಟ ಮುರಿದುಕೊಳ್ಳುತ್ತಾರೆ ಹೀಗೆಯ ಕೊನೆಗೆ ಸೇತುವೆ ಸಿದ್ಧವಾಗುತ್ತದೆ ಆಗ ಎರಡೂ ಊರಿನವರಿಗೂ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ ನಂತರ ಸೇತುವೆಯ ನಿರ್ಮಾಣಕಾರರು ರಾಜನ ಹೆಸರು ಕೆತ್ತಲಾಗಿರುತ್ತದೆ.
ಇದನ್ನೆಲ್ಲಾ ನೋಡಿದ ಒಬ್ಬ ಹಿರಿಯ ವ್ಯಕ್ತಿ ಮಾತ್ರ ಈ ಬರಹವನ್ನು ನೋಡಿ ನಗುತ್ತಾನೆ ಇದನ್ನು ಗಮನಿಸಿದ ಕೆಲವರು ನೀವು ಏಕೆ ನಕ್ಕಿದ್ದು ಎಂದು ಕೇಳುತ್ತಾರೆ ಆಗ ಹಿರಿಯ ವ್ಯಕ್ತಿ ಹೀಗೆ ವಿವರಣೆ ನೀಡುತ್ತಾನೆ.
ಕಷ್ಟ ಪಡುವುದೇ ಯಾರೋ ಆದರೆ ಅದರ ಹೆಸರು ಪಡೆಯುವುದೇ ಯಾರೋ ಎಂದು ಹೇಳುತ್ತಾನೆ. ಇಂದು ಕೂಡ ಇದೇ ರೀತಿ ನಡೆಯುತ್ತಿದೆ ಕಷ್ಟ ಯಾರೋ ಪಡುತ್ತಾರೆ ಪ್ರಸಿದ್ಧಿ ಯಾರು ಆಗುತ್ತಾರೆ.
ಗಮನಿಸಲೇ ಇಲ್ಲ
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ತಂದೆ ಮಾಡುತ್ತಿದ್ದ ಕೆಲಸವನ್ನೇ ಮಕ್ಕಳು ಮಾಡುತ್ತಿದ್ದರು ಒಬ್ಬ ವ್ಯಾಪಾರಸ್ಸನು ತನ್ನ ಮಗನನ್ನು ವ್ಯಾಪಾರ ರಂಗಕ್ಕೆ ಬರಬೇಕು ಮತ್ತೆ ಪ್ರಪಂಚದ ಜ್ಞಾನವನ್ನು ತಿಳಿಯಬೇಕು ಎಂದು ಬಾಬಾ ಅವರ ಬಳಿ ಕಳಿಸಿದನು.
ಬಾಬಾ ಅವರು ವ್ಯಾಪಾರಿ ಮಗನನ್ನು ಕುಶಲೊಪರಿ ವಿಚಾರಿಸಿ ಒಂದು ತಂಬಿಗೆ ತುಂಬಾ ಕೊಬ್ಬರಿ ಎಣ್ಣೆಯನ್ನು ಕೊಟ್ಟು ಇದನ್ನು ತಲೆ ಮೇಲೆ ಇಟ್ಟುಕೊಂಡು ಒಂದು ತೊಟ್ಟು ಕೂಡ ಬೀಳಬಾರದು ನಮ್ಮ ಈ ಅರಮನೆಯನ್ನು ಸುತ್ತಿಕೊಂಡು ಬಾ ಎಂದು ಹೇಳಿದರು ಹುಡುಗ ಅರಮನೆಯನ್ನು ಸುತ್ತಿಕೊಂಡು ಬಂದನು.
ಕೊಬ್ಬರಿ ಎಣ್ಣೆಹಾಗೇ ಇತ್ತು ಆಗ ಬಾಬಾ ಅವರು ಪ್ರೋತ್ಸಾಹಿಸಿದರು ನೀನು ಅರಮನೆಯನ್ನು ಸುತ್ತಿ ಬಂದ ತಾನೇ ಆದರೆ ಎಲ್ಲ ಗೋಡೆಗಳ ಮೇಲೆ ಚಿತ್ರಗಳು ಇದ್ದವು ಹಾಗೆ ಹಲವು ರೀತಿಯ ಹೂವಿನ ಗಿಡಗಳು ಒಂದು ವಿಶೇಷವಾದ ರಂಗುರಂಗಿನ ಪಳ ಪಳ ಹೊಳೆಯುವ ದೀಪ ಇತ್ತು ಅದನ್ನು ನೋಡಿದೆಯಾ ಎಂದು ಕೇಳಿದರು.
ಈ ಅರಮನೆಯ ಮೇಲೆ ತುಂಬಾ ಸುಂದರವಾದ ಶಿಲ್ಪಿಗಳು ಮನ ಸೆಳೆಯುವ ಚಿತ್ರಗಳು ಇತ್ತು ಅದನ್ನು ನೋಡಿದೆ ಅಲ್ಲವೇ ಹೇಗಿದೆ ಹೇಳು ಎಂದು ಕೇಳಿದರು ಆಗ ಹುಡುಗನು ಹೇಳಿದ ನಾನು ಅದೆಲ್ಲ ಗಮನಿಸಲೇ ಇಲ್ಲ. ನಾನು ನನ್ನ ತಲೆ ಮೇಲಿದ್ದ ಕೊಬ್ಬರಿ ಎಣ್ಣೆ ಮಾತ್ರ ಗಮನಿಸುತ್ತಿದೆ ಎಂದನು ನಂತರ ಬಾಬಾ ಅವರು ಹೋಗಲಿ ಮತ್ತೆ ನೀನು ಹೋಗು ಜಾಗ್ರತೆಯಾಗಿ ಶ್ರದ್ದೆಯಿಂದ ಎಲ್ಲವನ್ನು ನೋಡಿ ಬಾ ಎಂದು ಹೇಳಿದರು.
ಹುಡುಗನಿಗೆ ವಿಚಿತ್ರ ಅನಿಸಿತು ಈ ಬಾಬಾ ಅವರು ಮತ್ತೆ ಮತ್ತೆ ತಿರುಗಿ ಬಾ ಎಂದು ಹೇಳುತ್ತಾರಲ್ಲ ಎಂದು ಉದಾಸೀನದಿಂದ ಹೊರಟ ಇರುವ ಎಲ್ಲಾ ಸೌಂದರ್ಯವನ್ನು ನೋಡಿಕೊಂಡು ಬಂದನು ಆಗ ಬಾಬಾ ಅವರು ಕೇಳಿದರು ನಿನ್ನ ತಲೆಯ ಮೇಲಿರುವ ಕೊಬ್ಬರಿ ಎಣ್ಣೆ ಎಲ್ಲಿದೆ ಎಂದಾಗ ಹುಡುಗನಿಗೆ ಅರಿವಾಯಿತು.
ಬಹಳಷ್ಟು ಕೊಬ್ಬರಿ ಎಣ್ಣೆಯನ್ನು ಚೆಲ್ಲಿದ್ದಾನೆ ಆಗ ಹುಡುಗ ಬಾಬಾ ಅವರಿಗೆ ನಾಚಿಕೆಯಿಂದ ತಲೆ ಬಗ್ಗಿಸಿದನು ಆಗ ಬಾಬಾ ಅವರು ಮೊದಲನೇ ಸಾರಿ ಎಣ್ಣೆಯ ಬಗ್ಗೆ ಎಚ್ಚರ ವಹಿಸಿದೆ ಎರಡನೆ ಬಾರಿ ಸೌಂದರ್ಯಕ್ಕೆ, ಗಮನಿಸಿದೇ ಇರಲಿ ಒಳ್ಳೆಯದು ಇನ್ನು ಮುಂದೆ ಎರಡರಲ್ಲಿಯೂ ಜಾಗ್ರತೆ ಇರಲಿ ನೀನು ವ್ಯಾಪಾರದಲ್ಲಿ ಅಭಿವೃದಿ ಹೊಂದುತ್ತೀಯ ಎಂದು ತಿಳಿಸಿದರು ನಾವು ಸಮತೋಲನದಿಂದ ಮುನ್ನಡೆಯೋಣ.
ಹಸಿವು ತಾಳಲಾರದೆ
ಒಂದು ದೊಡ್ಡ ಆಶ್ರಮ ವಿರುತ್ತದೆ ಅಲ್ಲಿ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿಕೊಂಡು ಇರುತ್ತಾರ ತಪ್ಪು ಮಾಡಿದರೆ ಶಿಕ್ಷೆ ಕೊಡುವುದಿಲ್ಲ ಬದಲಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳುತ್ತಾರೆ ಇದು ಗುರುಗಳ ದೊಡ್ಡತನ ಎಂತಲೂ ಹೇಳಬಹುದು.
ಸಾಧಾರಣವಾಗಿ ಆಶ್ರಮದಲ್ಲಿ ಓರ್ವರು ಪ್ರತಿ ವರ್ಷಕ್ಕೆ ಒಂದು ಸಾರಿ ಬಂದು ತಮ್ಮಲ್ಲಿ ಇದ್ದ ಕಾಣಿಕೆಗಳನ್ನು ಕೊಟ್ಟು ಹೋಗುತ್ತಾರೆ ಏಕೆಂದರೆ ಇದೇ ಆಶ್ರಮದಲ್ಲಿ ಅವರು ಓದಿ ಕಲಿತಿರುತ್ತಾರೆ ಆಶ್ರಮದ ಋಣ ತೀರಿಸಬೇಕೆಂದು ಅವರ ಮನಸ್ಸಿನಲ್ಲಿ ಇರುತ್ತದೆ ಆದುದರಿಂದ ಏನಾದರೂ ಕಾಣಿಕೆ ಕೊಡಲೇ ಬೇಕೆಂದು ಕಾಣಿಕೆ ಕೊಟ್ಟು ಹೋಗುತ್ತಿರುತ್ತಾರೆ.
ಒಂದು ಸಾರಿ ಒಬ್ಬ ಹಳೆಯ ವಿದ್ಯಾರ್ಥಿ ಗುರುಗಳಿಂದ ಆಶೀರ್ವಾದ ಪಡೆದು ಐವತ್ತು ದೊಡ್ಡ ಸೇಬಿನ ಬಾಕ್ಸುಗಳನ್ನು ಇಟ್ಟನು ದಯವಿಟ್ಟು ಸ್ವೀಕರಿಸಬೇಕು ಎಂದು ಹೇಳಿದನು ಆಗ ಗುರುಗಳು ಹೇಳಿದರು ಇಷ್ಟು ಜಾಸ್ತಿ ಏಕೆ ಎಂದು ಕೇಳಿದಾಗ ಹಳೆವಿದ್ಯಾರ್ಥಿ ಹೇಳಿದನು ನಾನು ಓದುತ್ತಿರಬೇಕಾದರೆ ಹಸಿವು ತಾಳಲಾರದೆ ನಾನು ಒಂದು ಸೇಬನ್ನು ಕಳ್ಳತನ ಮಾಡಿದ ಆದ್ದರಿಂದ ಇವತ್ತು ಇಷ್ಟು ಕೊಟ್ಟು ಧನ್ಯನಾಗುತ್ತೇನೆ ಎಂದು ಹೇಳುತ್ತಾನೆ.
ಆಗ ಗುರುಗಳು ಎಲ್ಲರನ್ನು ಕರೆದು ಹೇಳುತ್ತಾರೆ ಒಂದು ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ ಅದಕ್ಕೆ ಉದಾಹರಣೆ ಇಲ್ಲಿದೆ ಎನ್ನುತ್ತಾರೆ ಏಕೆಂದರೆ ಒಂದು ಹಣ್ಣನ್ನು ಕದ್ಯವನು ಇವತ್ತು ಹತ್ತು ಬಾಕ್ಸ್ ಹಣ್ಣನ್ನು ತಂದು ಕೊಟ್ಟಿದ್ದಾನೆ ಎಂದು ಎಲ್ಲರಿಗೂ ಹೆಮ್ಮೆಯಿಂದ ಹೇಳುತ್ತಾರೆ.