ಶಿಖರ್ ಪ್ರತಿಭಾವಂತ ಯುವಕ ಎಂ ಎ ಪಾಸಾದ ನಂತರ ಕೆಲಸಕ್ಕಾಗಿ ಹಲವಾರು ಕಂಪನಿಗಳಲ್ಲಿ ಅರ್ಜಿ ಹಾಕಿದ್ದನು ಒಂದು ಕಂಪೆನಿಯಿಂದ ಯುವಕನನ್ನು ಸಂದರ್ಶನಕ್ಕೆ ಕರೆದರು ಆ ಕಂಪನಿಯಲ್ಲಿ 3 ಸಾರಿ ಸಂದರ್ಶನ ಇರುತ್ತದೆ. ಮೊದಲ 2 ರೌಂಡ್ ಗಳನ್ನು ಪಾಸ್ ಮಾಡಿಕೊಂಡನು ಫೈನಲ್ ರೌಂಡ್ ಗೆ ಬಂದನು ಆಗ ಮಾಲೀಕರೇ ಯುವಕನ ಸಂದರ್ಶನಕ್ಕೆ ಹಾಜರಾದರು ಮೊದಲು ಯುವಕನನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಷ್ಟಪಟ್ಟು ಓದಿದ್ದೀಯಾ ಎಲ್ಲದರಲ್ಲೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ನಂತರ ಕೇಳಿದರು ನೀನು ಇಲ್ಲಿಯ ವರೆಗೂ ನಿನ್ನ ಶಿಕ್ಷಣಕ್ಕೆ ಹಣ ಎಲ್ಲಿಂದ ಬಂತು ಎಂದಾಗ ಯುವಕನು ವಿವರಿಸಿದನು. ಸ್ವಲ್ಪವಾಗಿ ಸ್ಕಾಲರ್ ಶಿಪ್ ದೊರೆಯಿತು ನಂತರ ನಮ್ಮ ತಂದೆ ತಾಯಿಯವರೆ ನನಗೆ ಹಣವನ್ನು ನೀಡಿದ್ದಾರೆ ಮಾಲೀಕ ನಿಮ್ಮ ಎರಡೂ ಕೈಗಳನ್ನು ನನಗೆ ತೋರಿಸಿ ಎಂದು ಕೇಳಿದರು.
ಯುವಕನು ಕೈಯನ್ನು ಚಾಚಿದಾಗ ಕೈಗಳು ತುಂಬಾ ಮೃದುವಾಗಿದ್ದವು ನಂತರ ಮಾಲೀಕರು ಕೇಳಿದರು ನಿಮ್ಮ ತಂದೆ ತಾಯಿ ಏನು ಎಂದು ಪ್ರಶ್ನಿಸಿದರು ಯುವಕ ಹೇಳಿದನು ನಮ್ಮ ತಂದೆ ಡ್ರೈವರಾಗಿ ನಮ್ಮ ತಾಯಿ ಬಟ್ಟೆಗಳನ್ನು ಹೊಲೆದು ಇಸ್ತ್ರಿ ಮಾಡುತ್ತಾರೆ ಎಂದು ಹೇಳಿದ.
ಮತ್ತೆ ಮಾಲೀಕರು ಇವತ್ತು ನೀನು ಮನೆಗೆ ಹೋಗಿ ನಿಮ್ಮ ತಂದೆ ತಾಯಿಯ ಕೈಗಳನ್ನು ಚೆನ್ನಾಗಿ ತೊಳೆದು ಅವರ ಕೈಗೆ ಎಣ್ಣೆಯನ್ನು ಹಚ್ಚಿ ನಂತರ ಆಶೀರ್ವಾದ ಪಡೆದು ಬನ್ನಿ ಎಂದು ಹೇಳಿದರು ಯುವಕನ ಸಂತೋಷಕ್ಕೆ ಪಾರವೇ ಇಲ್ಲ ನನಗೆ ಕೆಲಸ ಗ್ಯಾರಂಟಿ ಎಂದು ಮನೆಗೆ ಉತ್ಸಾಹದಿಂದ ಕುಣಿಯುತ್ತ ನಲಿಯುತ್ತಾ ಬಂದನು.
ಮೊದಲು ತಾಯಿಯ ಬಳಿ ಹೋಗಿ ನಿಮ್ಮ ಕೈಗಳನ್ನು ನೀಡಿಯೆಂದು ಸೋಪಿನಿಂದ ತೊಳೆದು ಕೈಗಳನ್ನು ನೋಡಿದ ಕೈಗಳು ತುಂಬಾ ಒರಟಾಗಿದ್ದವು ಅಲ್ಲಲ್ಲಿ ಸುಕ್ಕುಗಳಿದ್ದವು ಆಗ ಯುವಕನಿಗೆ ಅರ್ಥವಾಯಿತು.
ನನ್ನ ತಾಯಿ ಎಷ್ಟು ಕಷ್ಟ ಪಟ್ಟಿದ್ದಾರೆ ನಂತರ ತಂದೆಯವರು ಬಂದರು ಅವರಿಗೂ ಅದೇ ರೀತಿ ಕೈಯನ್ನು ತೊಳೆದು ನೋಡಿದಾಗ ಅವರ ಕೈಗಳು ಸಹ ತುಂಬಾ ಒರಟಾಗಿದ್ದವು ಆಗ ಯುವಕನಿಗೆ ಅರ್ಥವಾಯ್ತು ನನ್ನ ಭವಿಷ್ಯಕ್ಕಾಗಿ ತಂದೆ ತಾಯಿ ಎಷ್ಟೊಂದು ಕಷ್ಟ ಪಟ್ಟಿದ್ದಾರೆ ಎಂದು ಅರ್ಥ ಮಾಡಿಕೊಂಡನು.
ನಾನು ಬರೀ ಓದಬೇಕು ನನ್ನದೇ ಗುರಿ ಮುಟ್ಟಬೇಕು ಎಂದು ನಾನು ಮುಂದೆ ಹೋಗುತ್ತಿದ್ದೇನೆ ಹೊರತು ನಮ್ಮ ತಂದೆ ತಾಯಿಯ ಬಗ್ಗೆ ನಾನು ಗಮನಿಸಲೇ ಇಲ್ಲ ಎಂದು ಅರಿವಾಯಿತು ಯುವಕ ಹೇಳಿದನು ಇನ್ನು ಮುಂದೆ ನೀವು ಹೆಚ್ಚಾಗಿ ಕೆಲಸ ಮಾಡಬೇಡಿ ಇಲ್ಲಿಯವರೆಗೆ ನನಗೆ ಸಾಕಿದ್ದೀರಿ ಇನ್ನು ಮುಂದೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದನು.
ಆಗ ತಂದೆ ತಾಯಿ ಅತ್ತರು ಮಾರನೆಯ ದಿನ ಕಂಪೆನಿಗೆ ಹೋದನು ನಡೆದ ಘಟನೆಯನ್ನು ವಿವರಿಸಿದನು ನಂತರ ನಿನಗೇನು ಅರ್ಥವಾಯಿತು ಎಂದು ಕೇಳಿದರು ನನಗಾಗಿ ತಂದೆ ತಾಯಿಯವರು ತುಂಬಾ ತ್ಯಾಗ ಮಾಡಿದ್ದಾರೆ ಎಂದು ಇರುವ ಸತ್ಯವನ್ನು ಹೇಳಿದನು.
ಮಾಲೀಕರು ಒಂದು ಕಂಪೆನಿಯು ಕೂಡ ಅಷ್ಟೆ ಹಲವಾರು ವರ್ಷಗಳ ಸಾಧನೆಯಿಂದ ಎತ್ತರಕ್ಕೆ ಬೆಳೆದಿದೆ ಇದರಲ್ಲಿ ಹಲವಾರು ಜನರು ಕೆಲಸ ಮಾಡುತ್ತಾರೆ ಅವರು ಕೂಡ ನಿನ್ನವರೇ ಎಂದು ತಿಳಿದುಕೋ ಎಂದು ಹೇಳಿದರು. ನಂತರ ಕೆಲಸಕ್ಕೆ ಸೇರಿಕೊಂಡನು ನಾನು ಉದ್ಯೋಗಿಯಾಗಿದ್ದರೆ ನನ್ನದೇ ಕೆಲಸ ಎಂದು ಮಾಡುತ್ತಿದ್ದೇನೆಯೇ? ನಾನು ವ್ಯಾಪಾರಿಯಾಗಿದ್ದರೆ ಸೇವಾ ಮನೋಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆಯೇ?
ಮನಸ್ಸಿಗೆ ಒಪ್ಪುವಂತೆ ಹೇಳಿದೆ
ಒಂದು ಕಂಪೆನಿಯಲ್ಲಿ ಹಲವಾರು ಉದ್ಯೋಗಿಗಳು ಕೆಲಸ ಮಾಡಿಕೊಂಡಿದ್ದರು ಉದ್ಯೋಗಿಗಳಿಗೆ ಒಳ್ಳೆಯದಾಗಲಿ ಎನ್ನುವ ಆಲೋಚನೆಯಿಂದ ಒಂದು ಪಿಂಚಿನ್ ಪ್ಲಾನನ್ನು ಜಾರಿಗೆ ತಂದರು ಹಲವಾರು ಉದ್ಯೋಗಿಗಳು ಅರ್ಜಿಗೆ ಸಹಿಯನ್ನೂ ಮಾಡಿದರು ಆದರೆ ಅದರಲ್ಲಿ ಮೂವರು ಉದ್ಯೋಗಿಗಳು ಮಾತ್ರ ಸಹಿ ಮಾಡಲಿಲ್ಲ.
ಯಾವ ರೀತಿ ಬಿಡಿಸಿ ಹೇಳಿದರು ಮೂವರು ಮಾತ್ರ ಆ ಪಿಂಚಿನ್ ಪ್ಲಾನನ್ನು ಒಪ್ಪುತ್ತಲೇ ಇರಲಿಲ್ಲ ಇದರಿಂದ ಹಲವಾರು ತಿಂಗಳು ಪಿಂಚಿನ್ ಪ್ಲಾನ್ ಜಾರಿಗೆ ಬರಲೇ ಇಲ್ಲ ನಂತರ ಕಂಪನಿ ಮಾಲಿಕರು ತನ್ನಅಂಜುಮನ್ ಸ್ನೇಹಿತನಿಗೆ ನಡೆದ ಘಟನೆಯನ್ನು ತಿಳಿಸಿದರು ಅದಕ್ಕೆ ಸ್ನೇಹಿತ ಹೇಳಿದನು ನಾಳೆ ನಾನು ಒಂದು ದಿನ ಕಂಪನಿಗೆ ಬರುತ್ತೇನೆ ಎಂದರು.
ಮಾಲೀಕರು ಹೊಸದಾಗಿ ಮ್ಯಾನೇಜರ್ ಬರುತ್ತಿದ್ದಾರೆ ಎಂದು ಹೇಳಿದಾಗ ಅದಕ್ಕೆ ಎಲ್ಲಾ ಉದ್ಯೋಗಿಗಳು ಆಗಲಿ ಎಂದು ಒಪ್ಪಿದರು ಮಾರನೆ ದಿನ ಹೊಸ ಮ್ಯಾನೇಜರ್ ಆಗಿ ಬಂದರು ಮೂವರು ವ್ಯಕ್ತಿಗಳನ್ನು ಕರೆದರು ನಂತರ ಇವರ ಕೊಠಡಿಗೆ ಒಬ್ಬನನ್ನು ಕರೆದರು ಅವನು ಬಂದ ಮೇಲೆ ಬಾಗಿಲು ಕಿಟಕಿಗಳನ್ನು ಹಾಕಿದರು ನಂತರ ಹೇಳಿದರು.
ಇಂದು ನೀವು ಈ ಅರ್ಜಿಗೆ ಸಹಿ ಹಾಕದಿದ್ದರೆ ಎಲ್ಲರೂ ನಿನ್ನನ್ನು ನಿವೃತ್ತಿ ಮಾಡಲು ಎಲ್ಲರೂ ತಿಳಿಸಿದ್ದಾರೆ ಎಂದು ಫಾರಂನ್ನು ಇಟ್ಟರು ಅದಕ್ಕೆ ಸಹಿ ಮಾಡಿ ಹೊರಟು ಹೋದನು. ನಂತರ ಎರಡನೆಯವನನ್ನು ಕರೆದರು ನಾನು ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ ನಿಮಗೆ ಒಬ್ಬರಿಗೇ ಅಲ್ಲ ನಿಮ್ಮ ಕುಟುಂಬಕ್ಕೂ ಎಲ್ಲರಿಗೂ ಪ್ರಯೋಜನವಾಗುತ್ತದೆ ಯೋಚನೆ ಮಾಡಿ ಎಂದು ತಿಳಿಸಿ ಹೇಳಿದರು.
ಎರಡನೆಯವನು ಮನಸ್ಸಿಗೆ ನಾಟುವಂತೆ ಹೇಳಿದಾಗ ಅರಿತನು ನಂತರ ಸಹಿ ಮಾಡಿದನು ಮೂರನೆಯವನು ಕರೆದರು ಈಗ ಹೋದವರು ಎಲ್ಲರೂ ಸಹಿ ಮಾಡಿದ್ದಾರೆ ಈಗ ನೀನೊಬ್ಬನೇ ಉಳಿದಿದ್ದೀಯ ನೀನು ಈ ಅರ್ಜಿಗೆ ಸಹಿ ಮಾಡಿದರೆ ಸರಿ ಇಲ್ಲದಿದ್ದರೆ ನಿನ್ನನ್ನು ಪೊಲೀಸ್ ಠಾಣೆಗೆ ಕಳುಹಿಸುತ್ತೇನೆ ಎಂದು ಹೆದರಿಸಿದರು.
ನಾನು ಜೈಲಿಗೆ ಹೋದರೂ ಪರವಾಗಿಲ್ಲ ನಿನ್ನ ಒಬ್ಬನಿಂದ ಇಡೀ ಉದ್ಯೋಗಿಗಳಿಗೆ ತೊಂದರೆಯಾಗಬಾರದು ಎನ್ನುವುದೇ ನನ್ನ ಉದ್ದೇಶ ಎಂದು ಕೋಪದಿಂದ ಹೆದರಿಸಿ ಹೇಳಿದರು.
ಕೊನೆಯವನು ಕೂಡ ಅರ್ಜಿಗೆ ಸಹಿ ಮಾಡಿ ಹೊರಟು ಹೋದನು ಹೀಗೆ ಯಾರಿಗೆ ಯಾವ ರೀತಿ ಹೇಳಬೇಕು ಅದೇ ರೀತಿ ಹೇಳಿದರು. ಯಾರಿಗೆ ಯಾವ ರೀತಿ ಹೇಳಬೇಕೂ ಅದೇ ರೀತಿ ಹೇಳಿದರೆ ಅರ್ಥವಾಗುತ್ತದೆ.
ಅನುಭವಿಸಲು ಸಾಧ್ಯವಿಲ್ಲ
ಉತ್ತೇಜನ್ ಗುಣವಂತ ಯುವಕ ಚೆನ್ನಾಗಿ ಓದಿದ ನಂತರ ಅವನಿಗೊಂದು ಕೆಲಸ ಸಿಗುತ್ತದೆ ಯುವಕನು ವಿದೇಶಕ್ಕೆ ಹೋಗಬೇಕೆಂದು ತನ್ನ ಹಳ್ಳಿಯಿಂದ ಹೊರಡುತ್ತಾನೆ ದಾರಿಯಲ್ಲಿ ಜಗನ್ ಮಿತ್ರ ಹಿರಿಯರು ಖಾಲಿ ಜಾಗದಲ್ಲಿ ಮಾವಿನ ಚಿಕ್ಕ ಚಿಕ್ಕ ಗಿಡಗಳನ್ನು ನೆಡುತ್ತಿರುತ್ತಾರೆ.
ಮಾವಿನ ಗಿಡಗಳಿಗೆ ನೀರು ಹಾಕುತ್ತಿರುವುದನ್ನು ನೋಡಿದ ಯುವಕನಿಗೆ ಓಂದು ಪ್ರಶ್ನೆ ಹುಟ್ಟುತ್ತದೆ ಈ ಚಿಕ್ಕ ಗಿಡಗಳನ್ನು ನೆಡುತ್ತಿದ್ದಾರೆ ಆದರೆ ಆ ಹಿರಿಯರು ಇದನ್ನು ಅನುಭವಿಸುವುದಿಲ್ಲವಲ್ಲ ಎಂದು ಯೋಚನೆ ಮಾಡಿ ಆ ಹಿರಿಯರಿಗೆ ನಮಸ್ಕಾರ ಮಾಡಿದನು.
ಸ್ವಾಮಿ ನೀವು ಮಾಡುತ್ತಿರುವ ಕೆಲಸ ತುಂಬಾ ಚೆನ್ನಾಗಿದೆ ಆದರೆ ನೀವು ಈ ಗಿಡಗಳನ್ನು ನೆಡುತ್ತಿದ್ದೀರಿ ನೀವು ಬೆಳೆಸುತ್ತಿರುವ ಹಣ್ಣಿನ ರುಚಿಯನ್ನು ಅನುಭವಿಸುತ್ತಿರೋ ಇಲ್ಲವೋ ಎಂದು ನನಗೆ ಖಾತರಿ ಇಲ್ಲ ಎಂದಾಗ ಹಿರಿಯರು ನಗುತ್ತಾ ಹೇಳುತ್ತಾರೆ ನೀನು ಹೇಳಿದ್ದು ಸರಿಯೇ ಅಕ್ಷರಸ್ಥ ನಿಜ ನಾನು ಈಗ ಚಿಕ್ಕ ಗಿಡಗಳನ್ನು ನೆಡುತ್ತಿದ್ದೇನೆ.
ನಾನಂತೂ ಅನುಭವಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತು ಆದರೆ ಇತರರು, ನನ್ನ ಮಕ್ಕಳು, ನನ್ನ ಮೊಮ್ಮಕ್ಕಳು, ಇದನ್ನು ಅನುಭವಿಸಿಯೇ ತೀರುತ್ತಾರೆ ಏಕೆಂದರೆ ನಾನು ಇಂದು ಏನು ಅನುಭವಿಸುತ್ತಿದ್ದೇನೆ ಅದು ನಮ್ಮ ಹಿರಿಯರು ನಮಗಾಗಿ ನೆಟ್ಟಿದ್ದಾರೆ. ಇಂದು ನಾವು ಅನುಭವಿಸುತ್ತಿದ್ದೇವೆ ಇತರರಿಗಾಗಿ ನನಗೆ ಸಾಧ್ಯವಾದಷ್ಟು ಸೇವೆ ಮಾಡೋಣ ಇತರರಿಗಾಗಿ ಬದುಕೋಣ ಎಂದು ಹೇಳುತ್ತಾರೆ.
ಹಿರಿಯರು ಹೇಳಿದ ನಂತರ ಯುವಕ ಅಲ್ಲಿಂದ ಹೊರಡುತ್ತಾನೆ ವಿದೇಶದಲ್ಲಿ ಕೆಲಸ ಮುಗಿಸಿ ಕೆಲವು ವರ್ಷಗಳ ನಂತರ ಅದೇ ದಾರಿಯಲ್ಲಿ ಬರುತ್ತಿದ್ದಾಗ ಯುವಕನು ನೋಡಿದಾಗ ಆ ಮಾವಿನ ಮರಗಳು ತುಂಬಾ ಚೆನ್ನಾಗಿ ಫಸಲು ಬಂದಿರುತ್ತದೆ. ಮಾವಿನ ಹಣ್ಣುಗಳು ಸಮೃದ್ಧವಾಗಿ ಬೆಳೆದಿರುತ್ತದೆ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.
ಮಾವಿನ ಹಣ್ಣುಗಳನ್ನು ನೋಡುತ್ತಿದ್ದಂತೆಯೇ ಬಾಯಲ್ಲಿ ನೀರು ಬರುತ್ತದೆ.ಆಗ ಆ ತೋಟಕ್ಕೆ ಹೋಗಿ ಇಷ್ಟವಾದ ರುಚಿರುಚಿಯಾದ ಮಾವಿನ ಹಣ್ಣುಗಳನ್ನು ತಿನ್ನುತ್ತಾನೆ ಮಾವಿನ ಹಣ್ಣುಗಳನ್ನು ತಿಂದ ನಂತರ ಯುವಕ ಕೇಳುತ್ತಾನೆ ಇಲ್ಲಿ ಹಿರಿಯರು ಇದ್ದರಲ್ಲ ಅವರು ಕಾಣುತ್ತಿಲ್ಲ ಎಂದಾಗ ಅಲ್ಲಿಯವರು ಹೇಳುತ್ತಾರೆ.
ಹಿರಿಯರು ತೀರಿ ಹೋಗಿದ್ದಾರೆ ಎಂದು ಹೇಳಿದಾಗ ಅವರ ಮಾತುಗಳು ನೆನಪಾಗುತ್ತವೆ. ಇಂದು ನಾವು ಇತರರು ಕಷ್ಟಪಟ್ಟಿದ್ದು ನಾವು ಇಂದು ಅನುಭವಿಸುತ್ತಿದ್ದೇವೆ ನಾವು ಇತರರಿಗಾಗಿ ನಮ್ಮಿಂದ ಸಾಧ್ಯವಾದಷ್ಟು ಇತರರಿಗಾಗಿ ಉಪಯೋಗವಾಗುವಂತಹ ಕೆಲಸವನ್ನು ಮಾಡೋಣ. ನಾನು ಇತರರಿಗೆ ಉಪಯೋಗವಾಗುವಂತಹ ಯಾವ ಕೆಲಸ ಮಾಡಿದ್ದೇನೆ?
ಸರಿಯಾದ ಗುರು ಅತಿ ಅವಶ್ಯಕ
ಅರಮನೆಯಲ್ಲಿ ಒಂದು ಚಿನ್ನದ ಪಂಜರದಲ್ಲಿ ಸುಂದರವಾದ ಗಿಣಿ ಇರುತ್ತದೆ ಗಿಳಿಯ ವಿಶೇಷತೆ ಎಂದರೆ ಗಿಣಿ ತುಂಬ ಚೆನ್ನಾಗಿ ಮನುಷ್ಯರಂತೆ ಮುದ್ದು ಮುದ್ದಾಗಿ ಮಾತನಾಡುತ್ತಿರುತ್ತದೆ ಆ ಅರಮನೆಯಲ್ಲಿ ಪ್ರಜೆಗಳೆಲ್ಲರೂ ಸಭೆ ಸೇರಿ ವಾರಕ್ಕೆ ಒಂದು ಸಾರಿ ಸತ್ಸಂಗಕ್ಕೆ ಸೇರುತ್ತಿದ್ದರು.
ಸತ್ಸಂಗಕ್ಕೆ ತುಷಿತ್ ಪಂಡಿತರು ಬಂದು ಸತ್ಸಂಗವನ್ನು ನಡೆಸಿಕೊಡುತ್ತಿದ್ದರು ಪಂಡಿತರು ಎಲ್ಲಾ ಮಂತ್ರಿಗಳು ಜಪಗಳು ಆದ ಮೇಲೆ ಯಾರೇ ಆಗಲಿ ಮಂತ್ರವನ್ನು ಜಪಿಸಿದರೆ ಸುಖವನ್ನು ಪಡೆಯಬಹುದು ಸ್ವತಂತ್ರವಾಗಿ ಇರಬಹುದು ಎಂದು ಹೇಳುತ್ತಾರೆ ಈ ರೀತಿ ಹೇಳಿದಾಗ ಗಿಣಿಯು ಮಾತ್ರ ನಗುತ್ತಾ ಹೇಳಿತು.
ಇದು ಸುಳ್ಳು ಸುಳ್ಳು ಎಂದಿತು 4 ಸಾರಿ ಸತ್ಸಂಗ ನಡೆಸಿಕೊಟ್ಟರು ಗಿಣಿ ಮಾತ್ರ ಕೊನೆಯಲ್ಲಿ ಸುಳ್ಳು ಸುಳ್ಳು ಎಂದು ಹೇಳುತ್ತಿತ್ತು ಕೊನೆಗೆ ಪಂಡಿತರಿಗೆ ಏನೂ ತಿಳಿಯದೆ ನಂತರ ನಡೆದ ಘಟನೆಯನ್ನು ಬಾಬಾ ಅವರಿಗೆ ಹೇಳಿದರು ಆಗ ಬಾಬಾ ಅವರು ಮುಂದಿನ ಸಾರಿ ನಾನು ಪ್ರಾರ್ಥನೆಗೆ ಬರ್ತೇನೆ ಎಂದು ಹೇಳಿದರು ಅದರಂತೆಯೇ ಬಾಬಾ ಅವರು ಬಂದರು.
ಬಾಬಾ ಅವರು ಅದೇ ರೀತಿ ಪ್ರಾರ್ಥನೆಯನ್ನು ಮುಗಿಸಿದರು ಆಗ ಗಿಳಿಯು ಅದೇ ರೀತಿ ಹೇಳಿತು ಆಗ ಇದನ್ನು ಕೇಳಿದ ಬಾಬಾ ಅವರು ಗಿಣಿಗೆ ಕೇಳಿದರು ನೀನು ಈ ರೀತಿ ನಗುವುದಕ್ಕೆ ಕಾರಣವೇನು ಎಂದು ಕೇಳಿದರು ಆಗ ಗಿಳಿಯು ಹೇಳಲಾರಂಭಿಸಿತು ನಾನು ಮೊದಲು ಕಾಡಿನಲ್ಲಿ ಸ್ವತಂತ್ರವಾಗಿ ಇದೆ ಬೇಟೆಗಾರನೂ ನನ್ನನ್ನು ಹಿಡಿದು ಒಂದು ಪಂಜರದಲ್ಲಿ ಹಾಕಿದನು ನಂತರ ಮಾತನಾಡುವುದನ್ನು ನೋಡಿ ಇನ್ನೊಬ್ಬ ಸಾಹುಕಾರ ನನ್ನನ್ನು ಖರೀದಿಸಿದನು.
ಅವನು ಬೆಳ್ಳಿಯ ಪಂಜರದಲ್ಲಿ ಇಟ್ಟನು ನಂತರ ನನಗೆ ರಾಜನೇ ಖರೀದಿ ಮಾಡಿ ಈಗ ಚಿನ್ನದ ಪಂಜರದಲ್ಲಿ ಇಟ್ಟಿದ್ದಾರೆ ನನಗೆ ಪಂಜರಗಳು ಬದಲಾಗಿದೆಯೇ ಹೊರತು ನಾನು ಮಾತ್ರ ಸ್ವತಂತ್ರವಾಗಿಲ್ಲ ನೀವು ಹೇಳುವ ಮಂತ್ರದಿಂದ ಸ್ವತಂತ್ರವಾಗಿ ಇರುತ್ತಾರೆ ಎಂದರೆ ಅದು ಹೇಗೆ ಸಾಧ್ಯ ನಾನು ಈಗಲೂ ಕೂಡ ಬಂಧಿಯಾಗಿ ಉಳಿದಿದ್ದೇನೆ ನಾನೂ ಕೂಡ ಮಂತ್ರ ಹೇಳಿದೆ ಆದರೂ ನಾನು ಬಿಡುಗಡೆಯಾಗಿಲ್ಲ ಏಕೆ ಎಂದು ಗಿಳಿ ಪ್ರಶ್ನೆಸಿತು ನಂತರ ಬಾಬಾ ಅವರು ಅರ್ಥಮಾಡಿಕೊಂಡರು.
ಬಾಬಾ ಅವರು ಗಿಣಿಯ ಕಿವಿಯಲ್ಲಿ ಏನೋ ಹೇಳಿ ಹೋದರು ಮಾರನೇ ದಿನ ಗಿಣಿಯನ್ನು ನೋಡಿದಾಗ ಗಿಣಿಯು ಸತ್ತು ಹೋಗಿದೆ ಎನ್ನುವ ರೀತಿ ಇತ್ತು ಇದನ್ನು ನೋಡಿ ಸಿಪಾಯಿಗಳು ರಾಜನಿಗೆ ಹೇಳಿದರು ಎಲ್ಲರೂ ಓಡೋಡಿ ಬಂದರು ಎಲ್ಲರೂ ನೋಡಿ ಗಿಣಿ ಸತ್ತು ಹೋಗಿದೆ ಇದನ್ನು ಅಂತ್ಯ ಸಂಸ್ಕಾರ ಮಾಡೋಣ ಎಂದು ಗಿಣಿಯನ್ನು ಪಂಜರದಿಂದ ಆಚೆ ತೆಗೆದರು.
ಗಿಣಿಯು ಹೊರಗೆ ಬಂದ ತಕ್ಷಣ ಮೇಲೆ ಹಾರಿತು ಹೋಗುತ್ತಿರಬೇಕಾದರೆ ಒಂದು ಮಾತು ಹೇಳಿ ಹೋಯ್ತು ನಾವು ಸ್ವತಂತ್ರರಾಗಬೇಕಾದರೆ ಸರಿಯಾದ ಗುರು ಅತಿ ಅವಶ್ಯಕ ಗುರುವಿನ ಮಾರ್ಗದರ್ಶನ ಬೇಕೇ ಬೇಕು ಸರಿಯಾದ ಮಾರ್ಗದಲ್ಲಿ ಹೋದರೆ ಯಶಸ್ಸು ಖಂಡಿತ ಎಂದು ಹೇಳಿ ಹಾರಿತು ಹೋಯಿತು ಇದನ್ನು ಎಲ್ಲರೂ ಆಶ್ಚರ್ಯಕರವಾಗಿ ನೋಡುತ್ತಿದ್ದರು. ನಮಗೂ ಸರಿಯಾದ ಗುರುಗಳು ಇದ್ದರೆ ನಾವು ಕೂಡ ಬಂಧನದಿಂದ ಪಾರಾಗಬಹುದು.
ಮಗು ಬಿಸಿಲಿನಲ್ಲಿ ಮಲಗಿದೆ
ತಕ್ಷಕ್ ಕಾರ್ಪೆಂಟರ್ ತನ್ನ ಮನೆಯ ಮುಂದೆ ಕೆಲಸ ಮಾಡುತ್ತಿದ್ದನು. ಮರದ ಒಂದು ಬಾಗಿಲು ತಯಾರಿಸಬೇಕು ಅದಕ್ಕಾಗಿ ಬೆಳಿಗ್ಗಿನಿಂದಲೇ ಕೆಲಸವನ್ನು ಆರಂಭಿಸುತ್ತಾನೆ ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲು ಜಾಸ್ತಿ ಆದುದರಿಂದ ಬೆವರು ಕೂಡ ಬರಲು ಆರಂಭವಾಗುತ್ತದೆ ಆಗ ವಯಸ್ಸಾದ ಪ್ರಕರ್ಶ್ ತಂದೆ ಹೇಳುತ್ತಾರೆ ನಿನ್ನ ಕೆಲಸವನ್ನು ನೆರಳಿನಲ್ಲಿ ಮಾಡು ಎಂದು ಹೇಳುತ್ತಾರೆ.
ಮಗನು ಸ್ವಲ್ಪ ಸಮಯದಲ್ಲಿಯೇ ಮುಗಿಯುತ್ತದೆ ಎಂದು ಕೆಲಸವನ್ನು ಮತ್ತೆ ಮುಂದುವರಿಸಿದನು ಮತ್ತೆ ಸ್ವಲ್ಪ ಸಮಯದ ನಂತರ ತಂದೆಯಾದವರು ಬಿಸಿಲಿನ ತಾಪ ಜಾಸ್ತಿಯಾಗಿದೆ ನೆರಳಿನಲ್ಲಿ ಕೆಲಸ ಮಾಡಿಕೋ ಇಲ್ಲದಿದ್ದರೆ ಟೋಪಿಯನ್ನಾದರೂ ಹಾಕು ಬಿಸಿಲು ಸುಡುತ್ತಿದೆ ಎಂದು ಎಚ್ಚರಿಸಿದರು.
ಕೆಲಸ ಮಾಡುತ್ತಿದ್ದವನು ಹೇಳಿದ ಅಪ್ಪಾ ನನಗೆ ಮೊದಲೇ ಕೆಲಸ ಆಗಲಿಲ್ಲ ಎಂದು ಚಿಂತೆಯಾಗಿದೆ ಅದ್ರಲ್ಲಿ ನೀವು ಕೂಡಾ ಬಂದು ನನ್ನನ್ನು ಹೀಗೆ ಪೀಡಿಸಬೇಡಿ ಎಂದು ಹೇಳಿದನು ಮತ್ತೆ ಅವನ ಕೆಲಸವನ್ನು ಶುರು ಮಾಡಿದನು ಸ್ವಲ್ಪ ಹೊತ್ತು ಕೂತಿದ್ದ ವಯಸ್ಸಾದ ತಂದೆಯವರು ಮನೆ ಒಳಗೆ ಹೋದರು.
ಸದ್ಯ ಒಳಗೆ ಹೋಗಿದ್ದಾರಲ್ಲ ಇರಲಿ ಎಂದು ನಿಟ್ಟುಸಿರು ಬಿಟ್ಟನು ನಂತರ ಸ್ವಲ್ಪ ಸಮಯದಲ್ಲಿ ನೋಡಿದರೆ ತನ್ನ ಒಂದು ವರ್ಷದ ಮಗು ಬಿಸಿನಲ್ಲಿ ಮಲಗಿದೆ ಆಗ ಕೋಪ ಬಂತು ಈ ಮಗುವಿಗೆ ಇಲಿ ಹಾಕಿದವರು ಯಾರು ಇಷ್ಟು ಬಿಸಿಲು ಇದೆ ತಿಳಿದಿಲ್ಲವೇ ಎಂದು ಕೋಪದಿಂದ ಹೇಳಿದನು.
ವಯಸ್ಸಾದ ತಂದೆ ವಿನಯವಾಗಿ ಹೇಳಿದರು ನನ್ನ ಮಗ ಬಿಸಿನಲ್ಲಿ ಇರಬೇಕಾದರೆ ನನಗೂ ಇಷ್ಟೇ ಸಂಕಟವಾಗುತ್ತದೆ ಅದನ್ನು ನಿನಗೆ ತಿಳಿಯಲಿ ಎಂದು ನಾನು ಹೀಗೆ ಮಾಡಿದೆ ಎಂದರು ತಂದೆ ತಾಯಿಗಳು ನಮ್ಮ ಜೀವಗಳು ಅವರ ಪ್ರೀತಿ ಎಂದೆಂದಿಗೂ ಅಜರಾಮರ.