ತಾಯಿಯ ಪ್ರೀತಿ ಅತ್ಯುತ್ತಮ

ಒಂದು ತಾಯಿ ಒಂದು ಪತ್ರವನ್ನು ಬರೆಯುತ್ತಾಳೆ ನನಗೆ ಒಬ್ಬ ಮಗ ಇದ್ದನು ಈಗ ಮಗನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದೇನೆ ಈಗ ಅವನಿಗೆ ಇಪ್ಪತ್ತೆರಡು ವರ್ಷ ನನ್ನ ಮಗ ಸ್ಕೂಲ್ ನಲ್ಲಿ ಇದ್ದಾಗ ಅಷ್ಟಾಗಿ ಓದಲಿಲ್ಲ ಆದರೆ ಅವನ ಸ್ನೇಹಿತರು ಮಾತ್ರ ತುಂಬಾ ಜಾಸ್ತಿ ಇದ್ದರು.

 ಮಗನ ಕೆಲವು ಕೆಲಸಗಳು ನನಗೆ ಹಿಡಿಸುತ್ತಿರಲಿಲ್ಲ ಏಕೆಂದರೆ ಅವನ ವಿಚಿತ್ರವಾದ ಕೆಲಸಗಳು ಬೈಕ್ ಜೋರಾಗಿ ಓಡಿಸುವುದು ವಿಚಿತ್ರ ರೀತಿಯ ಅಲಂಕಾರ ಮಾಡಿಕೊಳ್ಳುತ್ತಿದ್ದನು ಮತ್ತೆ ಸಂಗೀತ ಕೇಳಬೇಕಾದರೆ ಹೆಚ್ಚು ಶಬ್ದ ಬರುವಂತೆ ಕೇಳುತ್ತಿದ್ದನು ಇದರಿಂದ ನನಗೆ ಬೇಸರವಾಗುತ್ತಿತ್ತು ನಂತರ ಅವನಿಗೆ ಏನು ಬುದ್ಧಿಬಂತೋ ನಂತರ ಕೆಲಸಕ್ಕೆ ಸೇರಿದನು.

ಕೆಲಸ ಮಾಡಿ ಬರುವುದು ಕೆಲವು ಸಾರಿ ತಡವಾಗುತ್ತಿತ್ತು ಒಂದು ಸಾರಿ ಮಗ ಫೋನ್ ಮಾಡಿದನು ಅಮ್ಮಾ ನೀನು ನನಗಾಗಿ ಇವತ್ತು ಅಡಿಗೆ ಮಾಡಬೇಡ ಹಾಗೆ ನನಗೆ ಒಂದು ಬೇರೆ ಕೆಲಸವಿದೆ ನೀನು ಊಟ ಮಾಡಿ ನೆಮ್ಮದಿಯಿಂದ ನಿದ್ರೆ ಮಾಡು ಎಂದನು ಮತ್ತೆ ಅಮ್ಮ ನಾನು ನಿನಗೆ ಒಂದು ಮಾತು ಹೇಳಬೇಕಾಗಿದೆ.

 ಇಷ್ಟು ದಿನ ನಾನು ನಿನ್ನನ್ನು ಸತಾಯಿಸಿದೆ ಆದರೂ ನೀನು ಏನೂ ಹೇಳಿಲ್ಲ ತುಂಬ ನೊಂದುಕೊಂಡಿದ್ದೀಯಾ ತುಂಬ ಅವಮಾನ ಮಾಡಿಬಿಟ್ಟಿದ್ದೇನೆ ಅದನ್ನು ಕೂಡ ನೀನು ಸಹಿಸಿಕೊಂಡಿದ್ದೀಯಾ ಏನೋ ಮಧ್ಯವಯಸ್ಸು ಆದುದರಿಂದ ಗೊತ್ತು ಗೊತ್ತಿಲ್ಲದೆ ತಪ್ಪು ಮಾಡಿದ್ದೇನೆ ನನ್ನನ್ನು ಚೆನ್ನಾಗಿ ತಿದ್ದಿ ಇವತ್ತು ಒಳ್ಳೆಯ ಮಗನಾಗಿ ಮಾಡಿದ್ದೀಯಾ ಹಿಂದೆ ತಿರುಗಿ ನೋಡಿದಾಗ ತಾಯಿಯ ಪ್ರೀತಿ ಅತ್ಯುತ್ತಮ ಎಂದು ಹೇಳಿ ಫೋನನ್ನು ಕಟ್ ಮಾಡಿದನು.

 ಈ ಕಡೆಯಿಂದ ತಾಯಿ ನೀನೂ ಒಬ್ಬ ಒಳ್ಳೆಯ ಮಗ ನೀನು ಕೂಡ ನನಗೆ ಸಂತೋಷ ಕೊಟ್ಟಿದ್ದೀಯ ಬಂಜೆತನ ಎಂಬ ಹೆಸರಿನಿಂದ ದೂರ ಮಾಡಿದ್ದೀಯಾ ಎಂದು ಹೇಳಬೇಕಿತ್ತು ಆದರೆ ಹೇಳಲಿಕ್ಕೆ ಆಗಲಿಲ್ಲ ಎಂದು ಸುಮ್ಮನಾದಳು ನಂತರ ಮಧ್ಯರಾತ್ರಿಯಲ್ಲಿ ಒಂದು ದೂರವಾಣಿ ಬಂತು ಮಗನು ಅಪಘಾತದಲ್ಲಿ ಸತ್ತಿದ್ದಾನೆ.

ತಾಯಿ ಹೋಗಿ ನೋಡಿದಳು ಅವಳ ದುಃಖಕ್ಕೆ ಪಾರವೇ ಇಲ್ಲ  ರೋಧಿಸಿದಳು  ಮಗ ಹೇಳಿದ ಮಾತುಗಳು ಅಚ್ಚಳಿಯದೇ ಉಳಿಯಿತು ಆದರೆ ಮಗನಿಗೆ ತಾನು ಹೇಳಬೇಕಾದ ಮಾತು ಹೇಳಲಿಲ್ಲ ಎಂದು ನೊಂದುಕೊಂಡಳು.

 ಈ ವಿಷಯವನ್ನು ಏಕೆ ಹೇಳಲು ಇಚ್ಛಿಸುತ್ತಿದ್ದೇನೆ ಎಂದರೆ ಮಕ್ಕಳು ಏನೇ ಒಳ್ಳೆಯದನ್ನು ಮಾಡಿದರು ಅದನ್ನು ಆಗಲೇ ಹೇಳಿಬಿಡಬೇಕು ನನಗೆ ಹೇಳಲು ಸಮಯವಿಲ್ಲ ಆದರೆ ನಿಮಗೆ ಸಮಯವಿದೆ ನಿಮಗೆ ತಂದೆ ತಾಯಿ ಗಂಡ ಹೆಂಡತಿ ಅಣ್ಣಾ ತಮ್ಮಾ ಅಕ್ಕ ತಂಗಿ ಹೀಗೆ ಹಲವಾರು ಸಂಬಂಧಗಳು ಇದೆ ಅವರಿಗೆ ಆಗಲೇ ಹೇಳಿ ನೀವು ಹೇಳಿದ ಮಾತು ಮುಂದೆ ಹೇಳಲು ಸಾಧ್ಯವಾಗದಿರಬಹುದು ಹಲವು ಜನರು ತುಂಬಾ ಪ್ರೀತಿಸುತ್ತಾರೆ ತುಂಬಾ ಇಷ್ಟಪಡುತ್ತಾರೆ ಆದರೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ ಆದರೆ ಅದನ್ನು ಹೇಳುವುದಿಲ್ಲ. ಹಾಗಾಗಿ ಈಗ ಸಮಯವಿದೆ ಮನಸ್ಸಿನಲ್ಲಿರುವುದನ್ನು ಹೇಳಿ ಮನಸ್ಸು ಹಗುರಮಾಡಿಕೊಳ್ಳೋಣ.

ಬೇರೆ ದಾರಿಯಿಲ್ಲದೆ ಒಪ್ಪಿದನು

ಹಳ್ಳಿಯಲ್ಲಿ ಒಬ್ಬ ಬಡವವನು ಹಳ್ಳಿಯ ಸಾಹುಕಾರನ ಹತ್ತಿರ ಐನೂರು ರೂಪಾಯಿ ಸಾಲವನ್ನು ಪಡೆದನು ಸಾಲವನ್ನು ತೀರಸಲಿಕ್ಕೆ ಬಹು ಕಷ್ಟ ಮಾಡುತ್ತಿದ್ದನು ಆದರೂ ಸಾಲ ತೀರಲಿಲ್ಲ ಊರಿನ ಮಾಲೀಕ ಹುಡುಕಿಕೊಂಡು ಬಂದನು ಏನಾದರೂ ಆಗಲಿ ನನಗೆ ಹಣ ಬೇಕೇ ಬೇಕು ಮನೆಯ ಮುಂದೆ ಕುಳಿತನು.

ಬಡವನ ಹತ್ತಿರ ಏನೂ ಇರಲಿಲ್ಲ ಆದರೆ ಅವನು ಸಾಕಿದ ಒಂದು ಮುದ್ದಾದ ನಾಯಿಮರಿ ಇತ್ತು ಆ ನಾಯಿಮರಿಯನ್ನು ಅವನು ತನ್ನ ಮಗನಂತೆ ಸಾಕಿದನು ಬಡವನ ಆಧಾರ ಎಂದರೆ ನಾಯಿ ಮಾತ್ರವೇ ಆಗ ಮಾಲೀಕನು ಹೇಳಿದನು.

 ನೀನು ನನ್ನ ಸಾಲ ತೀರಿಸುವವರೆಗೆ ಈ ನಾಯಿಯನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ನಾಯಿಯನ್ನು ಕರೆದುಕೊಂಡು ಹೋದನು ಬಡವ ಬೇರೆ ದಾರಿಯಿಲ್ಲದೆ ಒಪ್ಪಿದನು ಸ್ವಲ್ಪ ದಿನದ ನಂತರ ಮಾಲೀಕನು ಮಲಗಿದನು ಮನೆ ದೊಡ್ಡದಾಗಿದೆ ಕಳ್ಳರು ಬಂದು ನುಗ್ಗಿದರು ಏನೇನು ಬೇಕೋ ಅದು ಎಲ್ಲವನ್ನು ದೋಚಿ ಕೊಂಡರು ಈ ನಿಯತ್ತಿನ ನಾಯಿ ಎಷ್ಟೇ ಬೊಗಳಿದರೂ ಮಾಲೀಕ ಏಳಲೇ ಇಲ್ಲ ಗಾಢ ನಿದ್ರೆಯಲ್ಲಿ ಮಲಗಿದ್ದನು.

ನಿಯತ್ತಿನ ನಾಯಿ ದೋಚಿ ಕೊಂಡ ನಂತರ ಕಳ್ಳರು ಎಲ್ಲಿ ಹೋಗುತ್ತಾರೆ ಎಂದು ಹಿಂಬಾಲಿಸಿತು ಎಲ್ಲಿ ಕದ್ದಿದ್ದ ಮೂಟೆಗಳನ್ನು ಬಚ್ಚಿಟ್ಟಿದ್ದರೂ ಅದನ್ನು ನೋಡಿ ನಾಯಿ ಮತ್ತೆ ಮನೆಗೆ ಬಂದು ಆ ಮಾಲಿಕನು ಎದ್ದ ನಂತರ ನಾಯಿಯು ಕರೆದುಕೊಂಡು ಹೋಯಿತು.

 ಮಾಲೀಕನಿಗೆ ಏನೂ ತೋಚದೆ ನಾಯಿ ಹೇಳಿದಂತೆ ಹಾಗೆ ಹೋದನು ಅಲ್ಲಿ ನೋಡಿದರೆ ಇವನ ವಸ್ತು ಎಷ್ಟು ಕಳ್ಳತನವಾಗಿತ್ತು ಆ ಎಲ್ಲಾ ವಸ್ತುಗಳು ಅಲ್ಲಿ ಇತ್ತು ಇದನ್ನು ಕಂಡು ಮಾಲೀಕ ನಾಯಿಯನ್ನು ಮುದ್ದಾಡಿದನು ಬಚ್ಚಿಟ್ಟಿದ್ದ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಬಂದನು.

 ನಿಯತ್ತಿನ ನಾಯಿಯನ್ನು ಬಡವನಿಗೆ ವಾಪಸ್ ನೀಡಿದನು ನಂತರ ಸಾಹುಕಾರ ಹೇಳಿದ ನಿನ್ನ ಸಾಲ ಈ ನಾಯಿ ತೀರಿಸಿದೆ ಆದುದರಿಂದ ನೀನು ನನಗೆ ಸಾಲ ಕೊಡುವುದು ಬೇಡ ಎಂದು ಹೇಳಿ ನಾಯಿಗೆ ಬಿಟ್ಟು ಹೋದನು.

 ಬಡವ ನಾಯಿ ಬಂದಂತೆಯೇ ಸಂತೋಷಪಟ್ಟು ನಾಯಿಯನ್ನು ಮುದ್ದಾಡಿದನು ನಂತರ ಆ ಬಡವ ಹಾಗೂ ಅವನ ನಾಯಿ ಬಹಳಷ್ಟು ದಿನಗಳು ಚೆನ್ನಾಗಿ ಬದುಕಿದರು.

ಆಕಸ್ಮಿಕ ಘಟನೆ

ನನ್ನ ಸ್ನೇಹಿತ ಹಂಚಿಕೊಂಡ ಘಟನೆ ತನ್ನ ಸ್ನೇಹಿತ ಮೈಸೂರಿನಿಂದ ಬೆಂಗಳೂರಿಗೆ ಆಗಾಗ ಕೆಲಸದ ಮೇಲೆ ಹೋಗುತ್ತಿದ್ದನು ಆದರೆ ಅವನ ಒಂದು ಅಭ್ಯಾಸ ಏನೆಂದರೆ ಬೇರೆಯವರಿಗೆ ಏನೇ ಆಗಲಿ ಅವನು ನೋಡುತ್ತಿರಲಿಲ್ಲ.

 ಏಕೆಂದರೆ ಅವನು ಒಂದು ಸಾರಿ ಅಪಘಾತವಾದಾಗ ಯಾರನ್ನು ಹೋಗಿ ಸಹಾಯ ಮಾಡಿದನು ಅದಕ್ಕೆ ನೀನೇ ಮಾಡಿರಬೇಕು ಎಂದು ಹೇಳಿದರಂತೆ ಸಾಕಷ್ಟು ತೊಂದರೆ ಅನುಭವಿಸಿದನು ಅದರಿಂದಾಗಿ ಅವನು ಅಷ್ಟಾಗಿ ಯಾರಿಗೂ ಏನೇ ಆದರೂ ನೋಡುತ್ತಿರಲಿಲ್ಲ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ.

ಒಂದು ಸಾರಿ ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾದರೆ ಮಂಡ್ಯದ ಸ್ವಲ್ಪ ಮುಂದೆ ತೂಬಿನ ಕೆರೆ ಇದೆ ಅಲ್ಲಿ ಟ್ರಾಫಿಕ್ ಜಾಮ್ ಆಗಿತ್ತು ಆಗ ನಿಧಾನವಾಗಿ ಇಳಿದು ಏಕೆ ಟ್ರಾಫಿಕ್ ಜಾಮ್ ಆಗಿದೆ ಎಂದು ನೋಡಲು ಬಂದನು.

 ಒಂದು ಚಿಕ್ಕ ಅಪಘಾತವಾಗಿತ್ತು ಆದರೆ ಯಾರಿಗೂ ಏನೂ ಆಗಿರಲಿಲ್ಲ ಅಪಘಾತಕ್ಕೆ ಒಳಗಾದವರು ಬೇರೆ ಯಾರೂ ಅಲ್ಲ ಸ್ನೇಹಿತನ ತಂದೆಯವರೇ ಆಗ ತಕ್ಷಣ ಇವನು ಬೇರೆಯ ಒಂದು ಕಾರನ್ನು ಗೊತ್ತುಮಾಡಿ ಬೇರೆ ಹಾಸ್ಪಿಟಲ್ ಗೆ ತಂದು ಸೇರಿಸಿದನು.

ಅವರು ಬದುಕಿ ಉಳಿದರು ನಂತರ ಅವನು ಹೇಳುತ್ತಾನೆ ಏನೇ ಆಗಲಿ ನಮ್ಮ ಕಣ್ಣ ಮುಂದೆ ಏನಾದರೂ ಘಟನೆ ನಡೆದರೆ ನೋಡುವುದು ಒಳ್ಳೆಯದು ಎಂದು ಹೇಳಿದ ನಮ್ಮ ಬದುಕಿನಲ್ಲಿ ನಾವು ಕಲ್ಪನೆ ಕೂಡ ಮಾಡಿರುವುದಿಲ್ಲ ಆ ರೀತಿಯ ಘಟನೆಗಳು ನಡೆಯುತ್ತವೆ.

 ನಮಗೆ  ರಕ್ಷಣೆ ಇದೆಯೇ?

ಕಳ್ಳರ ಒಂದು ಗುಂಪು ಬಂದು ದೊಡ್ಡ ಮನೆಗೆ ನುಗ್ಗಿದರು ಕಳ್ಳತನ ಮಾಡಲು ಮುಂದಾದರೂ ಕಳ್ಳರಿಗೆ ಏನೇನು ಬೇಕೋ ಅದೆಲ್ಲವನ್ನೂ ತೆಗೆದುಕೊಂಡರು ನಂತರ ನೋಡಿದರೆ ಹುಂಜ ದುರುಗುಟ್ಟಿ ನೋಡುತ್ತಿತ್ತು ಆಗ ಕಳ್ಳರ ನಾಯಕ ಹೇಳುತ್ತಾನೆ.

ನಮ್ಮನ್ನು ಏಕೆ ಹೀಗೆ ನೋಡುತ್ತಿದ್ದೀಯಾ ಎಂದು ಪ್ರೀತಿಯಿಂದ ಕೇಳಿದನು ನಾನು ಒಂದು ಸಾರಿ ಕೂಗಿ ಎಲ್ಲರನ್ನೂ ನಾನು ಎಬ್ಬಿಸುತ್ತೇನೆ ಎಂದು ಜಂಬದಿಂದ ಹೇಳುತ್ತದೆ.

 ಇದು ನಮಗೆ ಗೊತ್ತಿರುವ ವಿಚಾರವೇ ನೀನು ಒಳ್ಳೆಯ ಪ್ರಾಣಿ ಅಲ್ಲವೇ ಎಂದು ಪಾಲಿಸಿಯಿಂದ ಮಾತನಾಡಿಕೊಂಡು ಈಗ ನೀನು ಇದ್ದರೆ ನಮಗೆ ಕಷ್ಟ ಆದುದರಿಂದ ನೀನು ಸಾಯುವುದೇ ಸರಿಯೆಂದು ಹುಂಜನನ್ನು ಸಾಯಿಸಿದರು.

 ಮೊದಲು ನಮಗೆ ರಕ್ಷಣೆ ಇದೆಯೇ? ನಮಗೆ ರಕ್ಷಣೆ ಇದ್ದಾಗ ಮಾತ್ರ ನಾವು ಧೈರ್ಯದಿಂದ ದರ್ಪದಿಂದ ಗರ್ವದಿಂದ ಹೇಳಬಹುದಾಗಿದೆ ಇಲ್ಲದಿದ್ದರೆ ಸುಮ್ಮನಿರುವುದೇ ಒಳ್ಳೆಯದು.

ದೂರ ಇಟ್ಟರು

ಒಬ್ಬರು ಮಾನವೀಯ ದೃಷ್ಟಿಯುಳ್ಳ ಹಿರಿಯರು ಇದ್ದರು ಹಿರಿಯರು ಎಲ್ಲರಿಗೂ ಅರ್ಥವಾಗುವಂತೆ ತುಂಬಾ ಚೆನ್ನಾಗಿ ಸಲಹೆ ನೀಡುತ್ತಿದ್ದರು ಹಿರಿಯರನ್ನು ಹುಡುಕಿಕೊಂಡು ತುಂಬಾ ಜನ ಬರುತ್ತಿದ್ದರು ಇವರು ತುಂಬಾ ಪ್ರಸಿದ್ದಿಯಾಗಿದ್ದರು ಸಾಧ್ಯವಾದಷ್ಟು ಹಿರಿಯರು ದೂರವಾಣಿಯಲ್ಲೇ ಉಚಿತವಾಗಿ ಸಲಹೆಗಳನ್ನು ನೀಡುತ್ತಿದ್ದರು.

 ಒಂದು ಸಾರಿ ಹಿರಿಯರನ್ನು ನೇರವಾಗಿ ಯಾರೋ ಹೋಗಿ ಭೇಟಿ ಮಾಡಿದರು ಇಷ್ಟು ನೀವು ಎಲ್ಲರಿಗೂ ಸಹಾಯ ಮಾಡುತ್ತೀರಿ ಸಲಹೆ ನೀಡುತ್ತಿದ್ದೀರಿ ಇದು ಯಾವಾಗಿನಿಂದ ನಿಮ್ಮಲ್ಲಿ ಆಲೋಚನೆ ಬಂತು ಎಂದು ಪ್ರಶ್ನೆ ಕೇಳಿದರು.

 ಹಿರಿಯರು ನನ್ನ ದೇಹ ಗಟ್ಟಿಯಾಗಿದ್ದಾಗ ಶಕ್ತಿ ಇದ್ದಾಗ ನಾನು ಬರೀ ಕೋಪ ಮಾಡಿಕೊಳ್ಳುತ್ತಿದ್ದೆ ಹೆಂಡತಿಗೆ ಮಕ್ಕಳಿಗೆ ನನ್ನ ಸಹಪಾಠಿಯ ಜೊತೆ ನೆರೆಹೊರೆಯವರ ನನ್ನ ಹೆಸರು ಕೇಳಿದರೆ ಸಾಕು ಹತ್ತಿರ ಯಾರೂ ಬರುತ್ತಿರಲಿಲ್ಲ.

 ನಾನು ಕಠೂರ ಸ್ವಭಾವದ ವ್ಯಕ್ತಿ ನನ್ನ ವರ್ತನೆಯಿಂದಾಗಿ ಎಲ್ಲರೂ ನನ್ನನ್ನು ದೂರ ಇಟ್ಟರು ಇದರಿಂದಾಗಿ ನಾನು ಮತ್ತಷ್ಟು ಕೋಪ ಬಂತು ಆತಂಕ, ಖಿನ್ನತೆ, ನಿರಾಶೆ. ಎಲ್ಲವೂ ಕೂಡ ಒಮ್ಮೆಯೇ ನನಗೆ ಬಂತು.

 ಏಕೆಂದರೆ ನಾನು ಮಾಡುತ್ತಿದ್ದ ಕೆಲಸವೇ ಅಂತಹದು ಇದಕ್ಕೆ ಸರಿಯಾದ ದಾರಿ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದು ನಾನು ಒಂದು ಸಾರಿ ಆತ್ಮಹತ್ಯೆ ಮಾಡಲಿಕ್ಕೆ ಹೋದೆ ಆದರೆ ಅದೃಷ್ಟವಶಾತ್ ನಾನು ಬದುಕಿದೆ ಮೇಲಿಂದ ಬಿದ್ದು ನನ್ನ ಕಾಲುಗಳು ಸಂಪೂರ್ಣವಾಗಿ ಸಮತೋಲನ ಕಳೆದುಕೊಂಡವು.

ನಾನು ಆಸ್ಪತ್ರೆಯಲ್ಲೇ ಇರಬೇಕಾಯಿತು ಮಲಗಿದ್ದಾಗ ಒಂದು ಕನಸು ಬಿತ್ತು ಅದರಲ್ಲಿ ನಾನು ದೇವರಿಗೆ ತುಂಬಾ ಬಯ್ಯುತ್ತಿದ್ದೆ ಆಗ ಒಂದು ವಾಣಿ ಕೇಳಿಸಿತು.

 ಆಗ ನಿನ್ನ ದೇಹ ಸರಿಯಾಗಿ ಇತ್ತು ಮನಸು ಸರಿಯಾಗಿ ಇರಲಿಲ್ಲ ಈಗ ನಿನ್ನ ಮನಸ್ಸು ಸರಿಯಾಗೇ ಇದೆ ಆದರೆ ನಿನ್ನ ದೇಹ ಸರಿಯಾಗಿ ಇಲ್ಲ ಈಗಲೂ ಕೂಡ ನೀನು ಪ್ರಯತ್ನ ಮಾಡಿದ್ದೆ ಆದರೆ ಒಳ್ಳೆಯ ಜೀವನ ನಡೆಸಬಹುದು ನಿನ್ನಲ್ಲಿರುವ ವರ್ತನೆ ಬದಲಾದರೆ ಒಳ್ಳೆಯದಾಗುತ್ತದೆ ಎಂದು ಕೇಳಿಸಿತು.

 ನಾನು ಸ್ವಲ್ಪ ದಿನ ಯೋಚಿಸಿದೆ ಏಕೆ ನಾನು ನನ್ನ ಮನೋಭಾವನೆ ಬದಲಿಸಿಕೊಳ್ಳಬಾರದು ಎಂದು ಅಂದಿನಿಂದ ನಾನು ನನ್ನ ಮನೋಭಾವವನ್ನು ಬದಲಾಯಿಸಿಕೊಂಡೆ ನಂತರ ಇರುವ ಸಮಯದಲ್ಲಿ ಯಾರಿಗಾದರೂ ಸಹಾಯ ಮಾಡಬಹುದು ಎಂದು ನಂತರ ನಾನು ಎಲ್ಲರಿಗೂ ದೂರವಾಣಿಯ ಮೂಲಕ ಸಹಾಯ ಮಾಡಲು ಮುಂದಾದೆ ಎಂದು ಸತ್ಯವನ್ನು ಹೇಳಿದರು.

 ಯಾರು ಯಾವಾಗ ಬೇಕಾದರೂ ತನ್ನ ಮನೋಭಾವನೆಯನ್ನು ಬದಲಿಸಿಕೊಳ್ಳಬಹುದು ಕೆಲವರು ಬದಲಿಸಿಕೊಂಡಿದ್ದಾರೆ ಇವರನ್ನು ನೋಡಬಹುದು ಅಲ್ಲಲ್ಲಿ ಆಗಾಗ ಉಚಿತ ಸಲಹೆ ನೀಡುತ್ತಿದ್ದಾರೆ ಉಚಿತವಾಗಿ ಟ್ಯೂಷನ್ ಹೇಳಿಕೊಡುತ್ತಿದ್ದಾರೆ ಉಚಿತವಾಗಿ ಔಷಧಿ ನೀಡುತ್ತಾರೆ ತಪಾಸಣೆ ಮಾಡುತ್ತಾರೆ ಹೀಗೆ ನಾನಾ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಸಾಧ್ಯವಾದಷ್ಟು ಸಹಾಯ ಮಾಡೋಣ. ನಾನು ಇತರರಿಗೆ ಸಹಾಯ ಮಾಡುತ್ತಿದ್ದೇನೆಯೇ?

Leave a Comment