ತತ್ವಗಳುಪಾಲಿಸಬೇಕು

ಒಂದು ಊರಿನಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಒಬ್ಬ ತಂದೆ ತಾಯಿಯನ್ನು ಕಳೆದುಕೊಂಡ ಕರವೀರ್ ಹುಡುಗ ಇರುತ್ತಾನೆ, ಹುಡುಗ ಒಳ್ಳೆಯ ವಿದ್ಯಾಭ್ಯಾಸ ಪಡೆಯುತ್ತಾನೆ ನಂತರ ಹುಡುಗ ಯುವಕನಾಗುತ್ತಾನೆ ಆಗ ಗುರುಗಳು ಯುವಕನನ್ನು ಕರೆದು ಸಾಕಷ್ಟು ನಿನ್ನಲ್ಲಿ ವಿದ್ಯೆ ಬಂದಿದೆ ನೀನು ಕೂಡ ಯುವಕನಾಗಿದ್ದೀಯ ಈಗ ನೀನು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಹೇಳುತ್ತಾರೆ.

ಯುವಕನು ಹೇಳುತ್ತಾನೆ ನೀವು ಹೇಳಿದ ಮೇಲೆ ನಾನು ಹಾಗೆಯೇ ಮಾಡುತ್ತೇನೆ ಆದರೆ ಗುರುಕುಲದಲ್ಲಿ ಬದುಕಿ ನನಗೆ ಅಭ್ಯಾಸವಾಗಿದೆ ಈಗ ನಾನು ಹೊರಗೆ ಬದುಕಬೇಕು ಹೊರಗೆ ಹೇಗೆ ಬದುಕಬೇಕು ಎನ್ನುವ ಅನುಭವ ಇಲ್ಲ ಆದುದರಿಂದ ನಾನು ಹೇಗೆ ಬದುಕಬೇಕು ಅದಕ್ಕೆ ಸಂದೇಶವನ್ನು ನೀಡಿ ಎಂದು ವಿನಂತಿಸಿಕೊಳ್ಳುತ್ತಾನೆ.

 ಗುರುಗಳು ಪಂಚ ತತ್ವಗಳನ್ನು ಹೇಳುತ್ತಾರೆ 1 ಮಂಗಳಾರತಿ ಆರಂಭಿಸಿದರೆ ಮಂಗಳಾರತಿ ನೋಡಿ ಪಡೆದು ಹೋಗಬೇಕು. 2 ಸಮಯ ಸಿಕ್ಕಿದಾಗ ಪ್ರಾರ್ಥನೆ ಮಾಡಬೇಕು. 3 ಇತರರ ತಪ್ಪುಗಳು ನೋಡಿದರೆ ಮರೆ ಮಾಡಬೇಕು ಅಥವಾ ಮುಚ್ಚಬೇಕು. 4 ಪ್ರಸಾದ ನೀಡುತ್ತಿದ್ದರೆ  ಪ್ರಸಾದ ಸ್ವೀಕರಿಸಬೇಕು 5 ಹೆಣಕ್ಕೆ ಹೆಗಲು ಕೊಡಬೇಕು. ಇದರಂತೆ ನೀನು ಬದುಕು ಎಂದು ಆಶೀರ್ವಾದ ಮಾಡಿ ಕಳುಹಿಸುತ್ತಾರೆ.

ಯುವಕನು ಕೆಲಸ ಹುಡುಕುತ್ತಾ ಕೊನೆಗೆ ರಾಜನ ಅರಮನೆಗೆ ಬರುತ್ತಾನೆ ಆಗ ರಾಜರು ಯುವಕನ ನಡುವಳಿಕೆ ಮಾತು ವರ್ತನೆ ಎಲ್ಲವೂ ಗ್ರಹಿಸಿ ನಂತರ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.

 ಮೊದಲಿಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ ನಂತರ ಈ ಯುವಕ ಚೆನ್ನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದನು ನಂತರ ಸಿಪಾಯಿಯಾದನು ನಂತರ ಇವನೇ ಮುಖ್ಯಮಂತ್ರಿಯಾದನು ಹೀಗೆ ಕೆಲವು ವರ್ಷಗಳು ಕಳೆದವು ನಂತರ ಒಂದು ದಿನ ರಾಜ ಊರಿಗೆ ಮೆರವಣಿಗೆ ಹೋಗಬೇಕಾಗಿತ್ತು. ಆಗ ರಾಜನು ತನ್ನ ಕತ್ತಿಯನ್ನು ಮರೆತಿದ್ದನು ರಾಜನು ಯುವಕನಿಗೆ ಹೇಳಿದನು.

 ನಾನು ಕತ್ತಿಯನ್ನು ಮರೆತಿದ್ದೇನೆ ನೀನು ತೆಗೆದುಕೊಂಡು ಬಾ ಎಂದನು ಆಗ ಯುವಕನು ಅರಮನೆಗೆ ಬಂದನು ಕತ್ತಿಯನ್ನು ತೆಗೆದು ಕೊಂಡಾಗ ಪಕ್ಕದಲ್ಲಿ ನೋಡಿದರೆ ರಾಣಿ ಕಾವಲುಗಾರನ ಜೊತೆ ಸರಸ ಸಲ್ಲಾಪ ನಡೆಯುತ್ತಿತ್ತು ಇದನ್ನು ನೋಡಿದ ಯುವಕ ಅದಕ್ಕೆ ಒಂದು ಪರದೆಯನ್ನು ಹಾಕಿ ಈಚೆ ಬಂದನು.

ಕತ್ತಿಯನ್ನು ರಾಜನಿಗೆ ಕೊಟ್ಟನು ರಾತ್ರಿ ರಾಜ ಬಂದ ನಂತರ ರಾಣಿಯು ಯುವಕನ ಮೇಲೆ ಆಪಾದನೆ ಹೋರಿಸಿದಳು ಯುವಕ ಸರಿ ಇಲ್ಲ ಯುವಕನ ವರ್ತನೆ ಸರಿ ಇಲ್ಲ ನನ್ನನ್ನು ಬಲವಂತ ಮಾಡಿದನು ಎಂದು ಸುಳ್ಳು ಹೇಳಿದಳು ಇದನ್ನು ಕೇಳಿದ ರಾಜನಿಗೆ ತಲೆ ಕೆಟ್ಟು ಹೋಯಿತು ಆಗ ಏನು ಮಾಡಬೇಕು ಎಂದು ರಾಣಿಗೆ ಕೇಳಿದಾಗ ರಾಣಿ ಹೇಳಿದಳು.

 ಯುವಕನನ್ನು ಕೊಂದುಬಿಡುವುದೇ ಒಳ್ಳೆಯದು ಎಂದಾಗ ರಾಜನು ರಾಣಿಯ ಎಂದು ಹೇಳಿದಾಗ ರಾಣಿಯೇ ಅದಕ್ಕೆ ಒಂದು ಉಪಾಯವನ್ನು ಹೇಳಿದಳು ನಾಲ್ಕು ಸಿಪಾಯಿಗಳನ್ನು ಊರಿನ ಆಚೆ ಇರುವ ಬಾವಿಯ ಹತ್ತಿರ ಇರಲು ಹೇಳಿ ನಂತರ ಯುವಕನಿಗೆ ಕಳಿಸೋಣ ಯುವಕನಿಗೆ ಅವರು ಕೊಲ್ಲುತ್ತಾರೆ ಇದು ಸರಿಯಾದ ದಾರಿ ಎಂದು ಹೇಳಿದಳು.

 ರಾಜನು ಆಗಲಿ ಎಂದು ಹೇಳಿ ನಾಳೆ ಮಧ್ಯಾಹ್ನಕ್ಕೆ ಕಳಿಸೋಣ ಎಂದು ಹೇಳುತ್ತಾಳೆ ಮಾರನೆಯ ದಿನ ಮಧ್ಯಾಹ್ನ ವಾದ ನಂತರ ಯುವಕನನ್ನು ಊರಿನ ಆಚೆ ಬಾವಿ ಇದೆ ಅಲ್ಲಿ ಕೆಲಸ ಆಯಿತೇ ಎಂದು ಕೇಳಿ ಬನ್ನಿ ಎಂದು ಕಳುಹಿಸುತ್ತಾರೆ.

 ಯುವಕ ಆಗಲಿ ಎಂದು ಅರಮನೆಯಿಂದ ಸ್ವಲ್ಪ ದೂರ ಬರುತ್ತಾನೆ ಆಗ ಒಂದು ಮಂದಿರದಲ್ಲಿ ಮಂಗಳಾರತಿ ಆರಂಭವಾಗುತ್ತದೆ ಅದಕ್ಕೆ ಆ ಮಂಗಳಾರತಿಯನ್ನು ಪಡೆದು ತೀರ್ಥವನ್ನು ಕುಡಿದು ನಂತರ ಬರುತ್ತಾನೆ ಇನ್ನು ಸ್ವಲ್ಪ ದೂರ ಮುಂದೆ ಹೋದಾಗ ಅಲ್ಲಿ ಒಂದು ಮಂದಿರ ಇರುತ್ತದೆ ಯೋಚನೆ ಮಾಡುತ್ತಾನೆ ಹೇಗೋ ಸಮಯ ಇದೆ ಸ್ವಲ್ಪ ಪ್ರಾರ್ಥನೆ ಮಾಡಿಕೊಂಡು ಹೋಗಬಹುದು ಎಂದು ಯೋಚನೆ ಮಾಡಿ ಸ್ವಲ್ಪ ಸಮಯ ಪ್ರಾರ್ಥನೆಯನ್ನು ಮಾಡಿ ನಂತರ ಮುಂದೆ ಹೋಗುತ್ತಾನೆ.

 ಯುವಕನು ಹೋಗುತ್ತಿದ್ದ ದಾರಿಯಲ್ಲಿ ಒಂದು ಮಾವಿನ ತೋಟ ಇರುತ್ತದೆ ಮಾವಿನ ತೋಟದಲ್ಲಿ ಮಾಲೀಕನಿಗೆ ಗೊತ್ತಿಲ್ಲದಂತೆ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡುತ್ತಿರುತ್ತಾರೆ ಇದನ್ನು ನೋಡಿದ ಯುವಕ ನಮಗೆ ಏಕೆ ಅವರು ಮಾಡಿದ್ದು ಅವರಿಗೆ ಎಂದು ಪಕ್ಕದಲ್ಲಿ ಇದ್ದ ಹುಲ್ಲನ್ನು ಮರೆಮಾಡಿ ಯಾರಿಗೂ ಗೊತ್ತಾಗದಿರಲಿ ಎಂದು ಬೇರೆ ದಾರಿಯಿಂದ ಬಳಸಿಕೊಂಡು ಹೋಗುತ್ತಾನೆ.

ಸ್ವಲ್ಪ ದೂರ ಹೋದ ನಂತರ  ಒಂದು ಮಂದಿರದ ಉದ್ಘಾಟನೆ ಯಾಗುತ್ತದೆ ಪ್ರಸಾದವನ್ನು ಹಂಚುತ್ತಿರುತ್ತಾರೆ ಆಗ ಪ್ರಸಾದವನ್ನು ಪಡೆದು ಹಾಗೆ ಇವನು ಕೂಡ ಸ್ವಲ್ಪ ಸಹಾಯ ಮಾಡಿ ಮುಂದೆ ಹೊರಡುತ್ತಾನೆ ಸ್ವಲ್ಪ ದೂರ ಹೋದ ನಂತರ ಒಬ್ಬ ವ್ಯಕ್ತಿ ಸತ್ತಿರುತ್ತಾನೆ ಹೆಣ ಇನ್ನೇನು ಎತ್ತಿಕೊಂಡು ಹೋಗಬೇಕು ಇದನ್ನು ನೋಡಿದ ಯುವಕ ತಾನು ಕೂಡ ಹೆಣಕ್ಕೆ ಹೆಗಲು ಕೊಡಬೇಕು ಎಂದು ನಾಲ್ಕು ಕಡೆ ಹೇಗಲು ಕೊಟ್ಟು ನಡೆಯುತ್ತಾನೆ,

ಮುಂದೆಯೇ ಸುಡುಗಾಡು (ಸ್ಮಶಾನ) ಇರುತ್ತದೆ ಅಂತಕ್ರಿಯೆ ಮುಗಿಸಿ ಪ್ರಾರ್ಥನೆ ಸಲ್ಲಿಸಿ ಬರುತ್ತಾನೆ ಊರಿನ ಕೊನೆಗೆ ಬಾವಿಯ ಹತ್ತಿರ ಬಂದು ಕೆಲಸ ಆಯಿತೇ ಎಂದು ಕೇಳುತ್ತಾನೆ ಕೆಲಸ ಆಗಿದೆ ಎಂದು ಹೇಳುತ್ತಾರೆ ಆಗ ಮರಳಿ ನೇರವಾಗಿ ಅರಮನೆಗೆ ಬರುತ್ತಾನೆ ಅರಮನೆಗೆ ಬಂದ ನಂತರ ರಾಜ ಹಾಗೂ ರಾಣಿ ಇಬ್ಬರು ದಿಗ್ಭ್ರಮೆಯಾಗುತ್ತಾರೆ.

 ಏಕೆ ಇಷ್ಟು ನಿಧಾನವಾಗಿ ಬಂದಿದ್ದೀಯಾ ಎಂದಾಗ ಯುವಕನು ನಮ್ಮ ಗುರುಗಳು ಪಂಚತತ್ವಗಳನ್ನು ಪಾಲನೆ ಮಾಡು ಎಂದು ಹೇಳಿದ್ದಾರೆ ಅದನ್ನು ಪಾಲನೆ ಮಾಡಿ ಬಂದಿದ್ದೇನೆ ಎಂದು ನಡೆದ ಕಥೆಯನ್ನು ವಿವರಿಸುತ್ತಾನೆ ಆಗ ಯುವಕನ ಮಾತಿನ ಮೇಲೆ ರಾಜನಿಗೆ ಭರವಸೆ ಬರುತ್ತದೆ.

ರಾಣಿಗೆ ಕೇಳುತ್ತಾನೆ ಸತ್ಯ ಏನು ಎಂದು ಕೇಳಿದಾಗ ರಾಣಿ ಇರುವ ಸತ್ಯವನ್ನು ಹೇಳುತ್ತಾಳೆ ಊರಿನ ಆಚೆ ಮೊದಲು ಯಾರು ಹೋಗಿ   ಕೇಳುತ್ತಾರೆ ಅವರನ್ನು ಕೊಲ್ಲುತ್ತಾರೆ ಅದಕ್ಕೆ ರಾಣಿ ಯುವಕ ಹೋದ ಸ್ವಲ್ಪ ಸಮಯದ ನಂತರ ಕಾವಲುಗಾರನನ್ನು ಕಳಿಸುತ್ತಾಳೆ.

ಮೊದಲು ಕವಾಲುಗಾರ ಹೋಗುತ್ತಾನೆ ಕಾವಲುಗಾರನನ್ನು ಕೊಲ್ಲುತ್ತಾರೆ ಯುವಕ ನಿಧಾನವಾಗಿ ಹೋಗುತ್ತಾನೆ ಯುವಕ ಮರಳಿ ವಾಪಸ್ ಬರುತ್ತಾನೆ ಆಮೇಲೆ ರಾಜ ರಾಣಿಗೆ ಏನೂ ಮಾಡಿದನು ತಿಳಿಯದು ಆದರೆ ನಾವು ನಮ್ಮ ಹಿರಿಯರು ಹೇಳಿರುವ ತತ್ವಗಳನ್ನು ಪಾಲನೆ ಮಾಡೋಣ.

ಎಸೆಯಲು ಮನಸ್ಸು ಒಪ್ಪುವುದಿಲ್ಲ

 

ಒಂದು ಶ್ರೀಮಂತರ ಮನೆಯಲ್ಲಿ ಒಂದು ಹೆಂಗಸು ಕೆಲಸ ಮಾಡಿಕೊಂಡು ಇರುತ್ತಾಳೆ ದಿನ ನಿತ್ಯವೂ ಕೆಲಸ ಮುಗಿಸಿ ಹೋಗಬೇಕಾದರೆ ಸೆರಗಿನಲ್ಲಿ ಒಂದು ಡಬ್ಬ ಇಟ್ಟುಕೊಂಡು ಹೋಗುತ್ತಿರುತ್ತಾಳೆ ಇದನ್ನು ಒಂದೆರಡು ದಿನ ಗಮನಿಸಿದ ಹೊಸ ಸೊಸೆ ಅತ್ತೆಗೆ ಹೇಳುತ್ತಾಳೆ.

 ಅಮ್ಮ ನಮ್ಮ ಮನೆ ಕೆಲಸದವಳು ಸೆರಗಿನಲ್ಲಿ ಏನೋ ತೆಗೆದುಕೊಂಡು ಹೋಗುತ್ತಿದ್ದಾಳೆ ಎಂದಾಗ ಅತ್ತೆಯವರು ಕೆಲಸದಾಕೆ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ ಅವಳ ಮೇಲೆ ಅನುಮಾನ ಪಡುವುದು ತಪ್ಪು ಎಂದು ಹೇಳುತ್ತಾರೆ ನಂತರ ಸೊಸೆಯು ಹೇಳುತ್ತಾಳೆ.

 ಇಲ್ಲ ಏನೋ ನನಗೆ ಅನುಮಾನ ಕಾಡುತ್ತಿದೆ ನಂತರ ಇವರು ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ದಿನನಿತ್ಯ ಪರಿಶೀಲಿಸುತ್ತಾರೆ ಅಡಿಗೆ ಮನೆಯಲ್ಲಿ ಇದ್ದ ಎಲ್ಲಾ ವಸ್ತುಗಳು ಹಾಗೆಯೇ ಇರುತ್ತದೆ ಯಾವುದೇ ವಸ್ತುಗಳು ಕೂಡ ಕಡಿಮೆ ಆಗಿರುವುದಿಲ್ಲ ಆದರೂ ಏಕೋ ಏನೋ ಸೊಸೆಗೆ ಅನುಮಾನ ಹೋಗುವುದೇ ಇಲ್ಲ ಸೊಸೆ ಅತ್ತೆಗೆ ಹೇಳುತ್ತಾಳೆ.

ಏನಾದರೂ ಆಗಲಿ ನಾವು ಒಂದು ಸಿಸಿ ಕ್ಯಾಮೆರಾವನ್ನು ಅಳವಡಿಸಿ ಏನು ಮಾಡುತ್ತಾಳೆ ನೋಡೋಣ ಎಂದು ಹೇಳಿದಾಗ ಸೊಸೆಯ ಮಾತಿಗೆ ಬೆಲೆಕೊಟ್ಟು ಸಿಸಿ ಕ್ಯಾಮರಾ ವನ್ನು ಅಳವಡಿಸುತ್ತಾರೆ. 

ಅತ್ತೆ ಸೊಸೆಗೆ ಉತ್ಸಾಹ ಏಕೆಂದರೆ ಸಾಕ್ಷಿ ಸಮೇತವಾಗಿ ಹಿಡಿಯಬಹುದು ಎಂದು ನೋಡುತ್ತಿರುತ್ತಾರೆ ಕೆಲಸದಾಕೆ ತನ್ನ ಎಲ್ಲಾ ಕೆಲಸವನ್ನು ಮುಗಿಸುತ್ತಾಳೆ ನಂತರ ತಿಂದ ತಟ್ಟೆಗಳು ಹಾಗೂ ಲೋಟಗಳು ಎಲ್ಲವನ್ನು ಸಿಂಕ್ ಹತ್ತಿರ ಇಡಬೇಕಾದರೆ ತಟ್ಟೆಯಲ್ಲಿ ಉಳಿದಿದ್ದ ಎಂಜಲು ಅನ್ನವನ್ನು ತಾನು ಮಡಗಿದ್ದ ಸೆರಗಿನಿಂದ ಒಂದು ದೊಡ್ಡ ಡಬ್ಬವನ್ನು ತೆಗೆದು ಅದರಲ್ಲಿ ಚಿಕ್ಕ ಚಿಕ್ಕ ಡಬ್ಬಗಳಿಗೆ ಹಾಕಿ ಅದನ್ನು ಮತ್ತೆ ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಎಲ್ಲಾ ಕೆಲಸ ಮುಗಿಸಿ ನಾನು ಹೋಗಿ ಬರುತ್ತೇನೆ ಎಂದು ಹೇಳಿ ಹೊರಡುತ್ತಾಳೆ.

ಕೆಲಸದಾಕೆಯನ್ನು ನೋಡಿದ ಅತ್ತೆ ಸೊಸೆಯರಿಗೆ ಕರುಳು ಹಿಸುಕಿದಂತೆ ಆಗುತ್ತದೆ ಆಗಲಿ ಎಂದು ಮಾರನೆಯ ದಿನವು ಚೆಕ್ ಮಾಡುತ್ತಾರೆ ಆದರೂ ಇದೇ ರೀತಿ ಉಳಿದ ಎಂಜಲು ಅನ್ನವನ್ನು ಸೆರಗಿನಲ್ಲಿ ಇಟ್ಟ ಡಬ್ಬದಲ್ಲಿ ಹಾಕಿಕೊಂಡು ಹೋಗುತ್ತಿರುತ್ತಾಳೆ ನಂತರ ಅತ್ತೆ ಸೊಸೆಗೆ ಅನುಮಾನ ಬರುತ್ತದೆ.

 ಈ ಎಂಜಲು ಅನ್ನವನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದಾಳೆ ಅದಕ್ಕೆ ತನ್ನ ಮಗನನ್ನು ಹೇಳುತ್ತಾರೆ ಹೋಗಿ ಈ ಕೆಲಸದವಳು ಈ ಎಂಜಲು ಅನ್ನವನ್ನು ಏನು ಮಾಡುತ್ತಾಳೆ ನೋಡು ಎಂದಾಗ ಕೆಲಸದಾಕೆಯ ಹಿಂದೆ ನಿದಾನವಾಗಿ ಹೋಗುತ್ತಾನೆ ಕೆಲಸದಾಕೆ ಮನೆಗೆ ಹೋಗಿ ತಾನು ತಂದಿದ್ದ ಎಂಜಲು ಅನ್ನವನ್ನು ತನ್ನ ಗಂಡನಿಗೆ ಹಾಗೂ ಮಕ್ಕಳಿಗೆ ತಿನಿಸುತ್ತಾಳೆ.

ಕಣ್ಣಾರೆ ಕಂಡ ದೃಶ್ಯವನ್ನು ಮಗ ನೋಡಿ ವಿಡಿಯೋವನ್ನು ಮಾಡುತ್ತಾನೆ ನಂತರ ತಂದು ತಾಯಿಗೆ ತೋರಿಸುತ್ತಾನೆ ಆಗ ತಾಯಿಯ ಕಣ್ಣಲ್ಲಿ ಸೊಸೆಯ ಕಣ್ಣಿನಲ್ಲಿ ನೀರು ಬರುತ್ತದೆ.

 ಮಾರನೇ ದಿನ ಎಂದಿನಂತೆ ಕೆಲಸದಾಕೆ ಕೆಲಸ ಮಾಡುತ್ತಾಳೆ ಎಂಜಲು ಅನ್ನವನ್ನು ಇಟ್ಟಾಗ ಕೆಲಸದವಳನ್ನು ಹೇಳುತ್ತಾರೆ ನೀನು ಕಸಗುಡಿಸು ನಾನು ಇದನ್ನು ನೋಡುತ್ತೇನೆ ಎಂದು ಉಳಿದ ಎಲ್ಲಾ ಅನ್ನವನ್ನು ಕಸದ ಬುಟ್ಟಿಗೆ ಹಾಕುತ್ತಾರೆ.

ಕೆಲಸದಾಕೆ ಬಂದು ನೋಡುತ್ತಾಳೆ ಎಂಜಿಲು ಅನ್ನ ಕಸದ ಬುಟ್ಟಿಗೆ ಹಾಕಿರುತ್ತಾರೆ ಇದನ್ನು ನೋಡಿದ ಕೆಲಸದಾಕೆ ಕಣ್ಣಲ್ಲಿ ನೀರು ಬರುತ್ತದೆ ಏಕೆಂದರೆ ಇವತ್ತು ನನ್ನ ಗಂಡ ಮಕ್ಕಳು ಉಪವಾಸ ಇರಬೇಕಲ್ಲ ನಂತರ ಕೆಲಸದಾಕೆ ಯೋಚಿಸುತ್ತಾಳೆ ಎಲ್ಲಾ ಕೆಲಸವು ಮುಗಿಸಿ ಕಣ್ಣಲ್ಲಿ ನೀರು ಹಾಕಿಕೊಂಡು ಮನೆಯಿಂದ ಈಚೆ ಬರುತ್ತಾಳೆ.

ಯಜಮಾನಿ ಗಡಸು ಧ್ವನಿಯಲ್ಲಿ ಕರೆಯುತ್ತಾಳೆ ಆಗ ಕೆಲಸದವಳು ಏನು ಅಮ್ಮ ಎಂದು ಒಳಗೆ ಬರುತ್ತಾಳೆ ಒಂದು ಬ್ಯಾಗನ್ನು ಕೊಡುತ್ತಾರೆ ಇದರಲ್ಲಿ ಅನ್ನವಿದೆ ನಿಮ್ಮ ಮನೆಯವರೆಲ್ಲರಿಗೂ ಅನ್ನವನ್ನು ಕೊಡು ಎಂಜಲು ಅನ್ನವನ್ನು ಕೊಡಬೇಡ ಎಂದು ಹೇಳುತ್ತಾಳೆ.

 ಕೆಲಸದಾಕೆಗೆ ಇನ್ನೂ ಹೆಚ್ಚಾಗಿ ಕಣ್ಣಿನಲ್ಲಿ ನೀರು ಬರುತ್ತದೆ ಕೆಲಸದಾಕೆ ನಮಗೆ ಕಳ್ಳತನ ಮಾಡಲು ಮನಸ್ಸು ಬರುವುದಿಲ್ಲ ಹಾಗೆಂದು ಇಷ್ಟು ರುಚಿಯಾದ ಅಡಿಗೆ ಮಾಡಿರುತ್ತೀರಾ ಅದಕ್ಕೆ ಸಾಕಷ್ಟು ಬಾದಾಮಿ ತುಪ್ಪ ಹಾಕಿರುತ್ತೀರಿ ಅದನ್ನು ಎಸೆಯಲು ಮನಸ್ಸು ಒಪ್ಪುವುದಿಲ್ಲ ಅದಕ್ಕೆ ನಾನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಇರುವ ಸತ್ಯವನ್ನು ಹೇಳುತ್ತಾಳೆ.

 ಇರುವ ಊಟವನ್ನು ನಾನು ಕಳ್ಳತನ ಮಾಡಿದಾಗ ನೀವು ನೋಡಿದ್ದರೆ ನನಗೆ ಕೆಲಸದಿಂದ ತೆಗೆಯುತ್ತಿದ್ದೀರಿ ಆಗ ನನಗೆ ಇರುವ ಕೆಲಸವು ಹೋಗುತ್ತಿತ್ತು ಎಂದು ಹೇಳುತ್ತಾಳೆ ನಂತರ ಯಜಮಾನಿ ಇನ್ನು ಮುಂದೆ ಅವರಿಗೆ ಇಲ್ಲಿಂದಲೇ ಅಡಿಗೆ ಮಾಡಿ ತೆಗೆದುಕೊಂಡು ಹೋಗು ಎಂದು ಹೇಳುತ್ತಾರೆ.

 ನಾವು ಬಹಳಷ್ಟು ಉದಾಹರಣೆಗಳನ್ನು ನೋಡಿದ್ದೇವೆ ಯಾರೋ ಹಸಿವು ತಾಳಲಾರದೆ ಬ್ರೆಡ್ಡು ಕದ್ದಿದ್ದಾರೆ ಅವರಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ ಎಷ್ಟೋ ಜನ ಹಸಿವು ತಾಳಲಾರದೆ ಯಾವುದೋ ಸಮಾರಂಭಗಳಿಗೆ ಮದುವೆಗಳಿಗೆ ಗೊತ್ತಿಲ್ಲದಂತೆ ಹೋಗಿ ಊಟ ಮಾಡುತ್ತಾರೆ.

 ಎಲ್ಲಿ ಪ್ರಸಾದ ಹಂಚುತ್ತಾರೋ ಅಲ್ಲಿ ಸಾಲಾಗಿ ನಿಂತು ಪ್ರಸಾದವನ್ನು ಪಡೆಯುತ್ತಾರೆ ಹಸಿವಿನಿಂದ ಯಾರೂ ಬಳಲಿ ಇರುತ್ತಾರೋ ಅವರಿಗೆ ಮಾತ್ರ ಹಸಿವು ಗೊತ್ತು ಬೇರೆ ಏನೇ ಕದಿಯಲ್ಲಿ ಅದು ತಪ್ಪು ಆದರೆ ಹೊಟ್ಟೆ ಹಸಿವು ಇದ್ದಾಗ ಅನ್ನ ಕದ್ದರೆ ಅವರಿಗೆ ಹೊಡೆಯುವ ಬದಲು ಬೈಯುವ ಬದಲು ಸ್ವಲ್ಪ ಆಹಾರ ನಿಡೋಣ.

ನನ್ನ ಕೆಲಸದಲ್ಲಿ ನಾನು ಮಗ್ನನಾದೆ

ಒಂದು ಆಶ್ರಮದಲ್ಲಿ  ಕಮಲಿನ್ ಗುರು  ತೇಜಾ ಶಿಷ್ಯ ಮಾತ್ರ ಇರುತ್ತಾರೆ ಗುರುಗಳು ಚಿತ್ರ ಬರೆಯುವುದರಲ್ಲಿ ನಿಪುಣರು ಅದಕ್ಕಾಗಿ ಅವರಿಗೆ ಒಂದು ಒಳ್ಳೆಯ ಚಿತ್ರವನ್ನು ಬರೆದು ಕೊಡುವಂತೆ ಅಲ್ಲಿಯ ರಾಜನು ಹೇಳಿರುತ್ತಾನೆ ಅದಕ್ಕಾಗಿ ಚಿತ್ರಕಾರರು ಚಿತ್ರವನ್ನು ಬರೆಯುತ್ತಿರುತ್ತಾರೆ.

 ಚಿತ್ರ ಬರೆದ ನಂತರ ಶಿಷ್ಯ ನೋಡುತ್ತಾನೆ ಗುರುಗಳೆ ಇದು ಅಷ್ಟೊಂದು ಚೆನ್ನಾಗಿಲ್ಲ ಬೇರೆಯದನ್ನು ಬರಿಯಿರಿ ಎನ್ನುತ್ತಾನೆ ನಂತರ ಗುರುಗಳು ಬೇರೆಯ ಚಿತ್ರವನ್ನು ಬರೆಯುತ್ತಾರೆ ಅದು ಕೂಡ ಚೆನ್ನಾಗಿ ಮೂಡಿ ಬಂದಿರುವುದಿಲ್ಲ ಹೀಗಾಗಿ ಅನೇಕ ಬಟ್ಟೆಗಳು ಇರುತ್ತದೆ ಹೀಗೆ ನಿಧಾನವಾಗಿ ಎಲ್ಲವೂ ಖಾಲಿಯಾಗುತ್ತಾ ಬರುತ್ತದೆ.

 ಕೊನೆಗೆ ಒಂದೇ ಒಂದು ಬಟ್ಟೆ ಇರುತ್ತದೆ ಕೊನೆಗೆ ಗುರುಗಳಿಗೂ ಬೇಸರವಾಗಿರುತ್ತದೆ ಆಗ ಶಿಷ್ಯನಿಗೆ ಹೇಳುತ್ತಾರೆ ನೀನು ಪೇಟೆಗೆ ಹೋಗಿ ಕೆಲವು ಬಟ್ಟೆಗಳನ್ನು ಖರೀದಿಸಿಕೊಂಡು ಬಾ ಅದರಲ್ಲಿ ಚಿತ್ರ ಬರೆಯಬೇಕಾಗಿದೆ ಎಂದು ಕಳಿಸುತ್ತಾರೆ ಆಗ ಶಿಷ್ಯನಾದವನು ಬಟ್ಟೆ ತರಲೆಂದು ಪೇಟೆಗೆ ಹೋಗುತ್ತಾನೆ.

  ಇದ್ದ ಒಂದು ಬಟ್ಟೆಯಲ್ಲಿ ಒಂದು ಚಿತ್ರವನ್ನು ಚಿತ್ರಸುತ್ತಾರೆ ಅದು ತುಂಬಾ ಕಡಿಮೆ ಸಮಯದಲ್ಲಿ ಬರೆಯುತ್ತಾರೆ ಆ ಚಿತ್ರವು ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿರುತ್ತದೆ ಶಿಷ್ಯ ಬಂದು ನೋಡಿ ಬೆರಗಾಗುತ್ತಾನೆ.

 ಗುರುಗಳೇ ಇಷ್ಟೊಂದು ಒಳ್ಳೆಯ ಚಿತ್ರವನ್ನು ಹೀಗೆ ಬರೆದದ್ದು ಇದರ ರಹಸ್ಯವೇನು ಎಂದು ಕೇಳಿದನು ಆಗ ಗುರುಗಳು ಹೇಳಿದರು ಇಷ್ಟು ದಿನವೂ ನಾನು ಬರೆಯುತ್ತಿದ್ದುದು ನನ್ನಲ್ಲಿ ಬೇರೆಯ ಆಲೋಚನೆಯೂ ಇತ್ತು ಬೇರೆಯವರಿಗೆ ಮೆಚ್ಚಿಸಲು ಚೆನ್ನಾಗಿ ಬರೆಯಬೇಕು ಎಂದು ಬರೆಯುತ್ತಿದ್ದೆ.

ಇಂದು ನೀನು ಕೂಡ ಇರಲಿಲ್ಲ ನಾನು ಚಿತ್ರ ಬರೆಯಲಿಕ್ಕೆ ಆರಂಭಿಸಿದಾಗ ನನ್ನನ್ನೇ ನಾನು ಮರೆತೆ ಚಿತ್ರ ಬರೆಯುವುದರಲ್ಲಿ ಮಗ್ನನಾದೆ ನಂತರ ನನ್ನ ಆತ್ಮ ಸಂತೋಷಕ್ಕಾಗಿ ಈ ಕೆಲಸ ಮಾಡಿದೆ ಅದಕ್ಕಾಗಿ ಒಳ್ಳೆಯ ಚಿತ್ರ ಮೂಡಿದೆ ಎಂದು ಹೇಳಿದರು

ನಾವು ಮಾಡಿದ ಕೆಲಸ ನಮಗೆ ಮೆಚ್ಚುಗೆ ಆದರೆ ಸಾಕು ಈ ರೀತಿ ನಾವು ಕೆಲಸ ಮಾಡಿದೆ ಆದರೆ ಯಶಸ್ಸು ಖಂಡಿತ ಹಾಗೆ ನಮಗೂ ಆತ್ಮತೃಪ್ತಿ ಸಿಗುತ್ತದೆ. ನನ್ನ ಆತ್ಮ ತೃಪ್ತಿಗಾಗಿ ಯಾವ ಸಾಧನೆ ಮಾಡಿದ್ದೇನೆ?

 ವಿಶ್ರಾಂತಿ ನೀಡಬೇಡಿ

ಒಂದು ಊರಿನಲ್ಲಿ ಒಬ್ಬ ಕಠೋರ ಹೃದಯ ಮಧುರಂಕ್ ಮಾಲೀಕ ಇದ್ದನು ಸಾಕಷ್ಟು ಕೆಲಸಗಾರರು ಇದ್ದರು ಕೆಲಸಗಾರರನ್ನು ಕರುಣೆ ಇಲ್ಲದೆ ಬೆಳಿಗ್ಗೆ ಸಂಜೆ ದುಡಿಸಿಕೊಳ್ಳುತ್ತಿದ್ದನು ಹಾಗೆಯೇ ಊಟವು ಸರಿಯಾಗಿ ನೀಡುತ್ತಿರಲಿಲ್ಲ.

ಹೊಲದಲ್ಲಿ ಬೆಳೆದ ಎಲ್ಲಾ ಪೈರುಗಳನ್ನು ಕಿತ್ತು ಒಂದು ಕಡೆ ಹಾಕಿದರು ನಂತರ ಮಾಲೀಕನಿಗೆ ಅದೇ ದಿನ ನೀವು ಈ ಫೈರುಗಳ ಕಾಳುಗಳನ್ನು ಬೇರ್ಪಡಿಸಿ ಎಂದು ಆಜ್ಞೆ ಮಾಡಿದನು ಆಗಲೇ ಸಂಜೆಯಾಗಿತ್ತು ಮಧ್ಯಾಹ್ನದ ಊಟವು ಸರಿಯಾಗಿ ನೀಡಲಿಲ್ಲ ಹಾಗಾಗಿ ಎಲ್ಲಾ ಕೆಲಸಗಾರರು ಹೇಳಿದರು.

 ಇಂದು ನಮಗೆ ತುಂಬಾ ಆಯಾಸವಾಗಿದೆ ನಾಳೆ ಈ ಕೆಲಸವನ್ನು ಮಾಡುತ್ತೇವೆ ಎಂದಾಗ ಮಾಲೀಕ ಇವತ್ತೇ ಮಾಡಬೇಕು ಇಲ್ಲದಿದ್ದರೆ ನಿಮಗೆ ರಾತ್ರಿಯ ಊಟವು ಸಿಗುವುದಿಲ್ಲ ಎಂದು ಹೆದರಿಸಿದನು ಆಗ ಮತ್ತೆ ಕೆಲಸದವರು ಹೇಳಿದರು.

 ನಮಗೆ ಒಂದು ಎತ್ತನ್ನಾದರೂ ಕೊಡಿ ಕಾಲಿನಿಂದ ತುಳಿಸಿದರೆ ಕಾಳುಗಳು ಬೇರ್ಪಡುತ್ತವೆ ಕೆಲಸವು ಬೇಗ ಆಗುತ್ತದೆ ನಿಮಗೂ ಸುಲಭವಾಗುತ್ತದೆ ಹಾಗೂ ನಾಳೆಯ ಕೆಲಸ ಎಂದಿನಂತೆ ನಡೆಯುತ್ತದೆ ಎಂದು ವಿನಮ್ರವಾಗಿ ಹೇಳಿದರು.

ಮಾಲೀಕನು ಕೋಪಿಸಿಕೊಂಡು ನಿಮಗೆ ಎತ್ತು ಕೊಡಬೇಕೇ ನೀವೇ ಮಾಡಬೇಕು ಇಲ್ಲದಿದ್ದರೆ ಎತ್ತಿಗೆ ಹೊಡೆಯುವಂತೆ ಹೊಡೆಯುತ್ತೇನೆ ಎಂದು ಹೇಳಿ ಹೊರಟು ಹೋದನು ನಂತರ ಮಾಲೀಕನು ಮಲಗಿದನು ಕನಸು ಕಂಡನು ಎಲ್ಲಾ ಕೆಲಸದವರು ಒಂದು ಕಡೆ ಕುಳಿತುಕೊಂಡು ಶ್ರದ್ಧೆ ಭಕ್ತಿಯಿಂದ ಅಳುತ್ತಾ ಪ್ರಾರ್ಥನೆ ಮಾಡಿದರು. ಹೇಗೆ ಈ ಕೆಲಸ ಮುಗಿಸುವುದು ಎಂದಾಗ ಒಂದು ಶಬ್ದ ಬಂತು.

 ನಿಮ್ಮ ಪ್ರಾರ್ಥನೆಗೆ ನಾನು ಬಂದಿದ್ದೇನೆ ನಾನು ನಿಮಗೆ ಒಂದು ಎತ್ತನ್ನು ಕೊಡುತ್ತೇನೆ ಇದರಿಂದ ನೀವು ಸಾಕಷ್ಟು ಕೆಲಸವನ್ನು ಮಾಡಿಸಿಕೊಳ್ಳಬಹುದು ಈ ಎತ್ತಿಗೆ ವಿಶ್ರಾಂತಿ ನೀಡಬೇಡಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿಸಿ ಮತ್ತೆ ಕೆಲಸ ಮಾಡದಿದ್ದರೆ ಚೆನ್ನಾಗಿ ಹೊಡೆಯಿರಿ.

ಒಂದೇ ಒಂದು ನಿಯಮ ಏನೆಂದರೆ ತಲೆಯ ಮೇಲೆ ಮಾತ್ರ ಹೊಡೆಯಬೇಡಿ ಎನ್ನುವ ಶಬ್ದ ಬಂತು ನಂತರ ನೋಡಿದರೆ ಒಂದು ಎತ್ತು ಬಂದಿದೆ. ಕೆಲಸಗಾರರಿಗೆ ತುಂಬಾ ಸಂತೋಷವಾಯಿತು ನಮ್ಮ ಕಷ್ಟಕ್ಕೆ ದೇವರು ನಮಗೆ ಸಹಾಯ ಮಾಡಿದ್ದಾರೆ ಹಾಗಾಗಿ ಎತ್ತಿನಿಂದ ಕೆಲಸ ಕೆಲಸ ಮಾಡಿಸೋಣವೆಂದು ಎಲ್ಲಾ ಕೆಲಸಗಾರರು ಎತ್ತಿನಿಂದ ಕೆಲಸ ಮಾಡಿಸಿದರು ಕೆಲವು ಸಾರಿ ಎತ್ತು ಕೆಲಸವೇ ಮಾಡುವುದಿಲ್ಲ ಎನ್ನುತ್ತಿದೆ ಅದಕ್ಕೆ ಕೆಲಸದವರು ಬೆನ್ನಿಗೆ ಚೆನ್ನಾಗಿ ಬಾಸುಂಡೆ ಬರುವಂತೆ ಹೊಡೆದರು.

ಕೆಲಸ ಮಾಡಲು ಆರಂಭಿಸಿತು ಏನೇನು ಕೆಲಸ ಮಾಡಿಸಬೇಕಾಗಿತ್ತೋ ಆ ಕೆಲಸಗಳನ್ನು ಮಾಡಿಸಿದರು ಆಗ ಕೆಲಸಗಾರರಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತಿತ್ತು ಕೆಲಸದವರು ಕೆಲವು ಸಾರಿ ಆಹಾರವೇ ನೀಡುತ್ತಿರಲಿಲ್ಲ ಏಕೆಂದರೆ ಮಾಲೀಕನು ನಮಗೆ ನೀಡುತ್ತಿರಲಿಲ್ಲ ನೀನು ಹಾಗೆಯೇ ಹಸಿದುಕೊಂಡು ಕೆಲಸ ಮಾಡು ಎಂದು ಎತ್ತಿಗೆ ಆಗಾಗ ಹೊಡೆಯುತ್ತಿದ್ದರು.

  ಕೆಲವು ಸಾರಿ ಎತ್ತು ಓಡಿ ಹೋಗುವುದಕ್ಕೆ ಪ್ರಯತ್ನಪಟ್ಟಿತು ಆದರೂ ಎಲ್ಲರೂ ಹಿಡಿದು ಕಟ್ಟಿ ಹಾಕುತ್ತಿದ್ದರು ಎತ್ತು ಬಂದ ನಂತರದಿಂದ ಮಾಲೀಕನು ಕಣ್ಮರೆಯಾಗಿದ್ದನು ಎಲ್ಲಿ ಹುಡುಕಿದರೂ ಸಿಗಲಿಲ್ಲ ಏನಾದರೂ ಆಗಲಿ ಎಂದು ಎಲ್ಲಾ ಕೆಲಸಗಾರರು ನೆಮ್ಮದಿಯಿಂದ ಇದ್ದರು.

 ಒಂದು ವಾರ ಆಗುತ್ತಿದಂತೆ ಎತ್ತು ನಿಶಕ್ತಿ ಯಾಗ ತೊಡಗಿತು ನಡೆಯಲು ಓಡಾಡಲು ಕಷ್ಟ ಪಡುತ್ತಿತ್ತು ಕೊನೆಗೆ ಕುಳಿತುಕೊಂಡಿತು ಕೆಲಸಗಾರರು ಬದುಕಿದ್ದೀಯೋ ಸತ್ತು ಹೋಗಿದೆಯೋ ಎಂದು ಸ್ವಲ್ಪ ನೀರು ಕುಡಿಸಿದರು ನಂತರ ನಿಧಾನವಾಗಿ ನಡೆಯಿತು.

ಕೆಲಸಗಾರರು ಹಗ್ಗ ಕಟ್ಟುವುದನ್ನು ಮರೆತರು ಆಗ ಎತ್ತಿಗೆ ತುಂಬಾ ಹಸಿವು ಆಗಿತ್ತು ಹಾಗಾಗಿ ನಿಧಾನವಾಗಿ ಮನೆಯ ಅಂಗಳದ ಹತ್ತಿರ ಹೋಗಿ ಗಿಡಗಳನ್ನು ತಿನ್ನುವುದಕ್ಕೆ ಆರಂಭಿಸಿತು ಇದನ್ನು ನೋಡಿದ ಮಾಲೀಕನ ಹೆಂಡತಿಗೆ ಕೋಪ ಬಂತು ದೊಣ್ಣೆಯನ್ನು ತೆಗೆದುಕೊಂಡು ಬಂದು ಎತ್ತಿನ ತಲೆಯ ಮೇಲೆ ರಫ್ ಎಂದು ಹೊಡೆದಳು.

 ನಂತರ ಎಲುಬು ಮೂಳೆಗಳು ಮಾತ್ರ ಕಾಣಿಸುತ್ತಿದೆ ಒಣಕಲ ಮನುಷ್ಯನಾಗಿದ್ದನು ಯಾರು ಎಂದು ನೋಡಿದರೆ ತನ್ನ ಗಂಡನೇ ಆಗಿದ್ದನು ಏನು ನಿಮ್ಮ ಅವಸ್ಥೆ ಏಕೆ ಹೀಗಾಯ್ತು ಇಷ್ಟು ದಿನ ನೀವು ಎಲ್ಲಿದ್ದೀರಿ ಎಂದು ಕೇಳಿದಾಗ ನಾನು ಕೆಲಸದವರನ್ನು ಹೆಚ್ಚು ದುಡಿಸಿಕೊಳ್ಳುತ್ತಿದ್ದೆ ಅದಕ್ಕಾಗಿ ಸರಿಯಾದ ಪಾಠ ಕಲಿತಿದ್ದೇನೆ ಎಂದು ಹೇಳಿದನು.

 ನೀನು ತಲೆಯ ಮೇಲೆ ಹೊಡೆದಿದ್ದರಿಂದ ನನಗೆ ಮರುಜನ್ಮ ಬಂದಿದೆ ಈಗ ನನಗೆ ಅರ್ಥವಾಗಿದೆ ಕೆಲಸಗಾರರು  ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಅರಿತನು ಮುಂದೆ ನಾನು ಕೆಲಸಗಾರರನ್ನು ಹೆಚ್ಚಾಗಿ ದುಡಿಸಿಕೊಳ್ಳುವುದಿಲ್ಲ ಒಳ್ಳೆಯ ಮನುಷ್ಯನಾಗುತ್ತೇನೆ ಎಂದು ಹೆಂಡತಿಗೆ ಹೇಳಿದನು. ನಂತರ ಗಾಬರಿಯಾಗಿ ಮಾಲೀಕ ಎದ್ದನು ನಂತರ ತಿಳಿಯಿತು ನಾನು ಕನಸು ಕಂಡೆ ಎಂದು ಅರಿತನು.

ಬೆಂಕಿ ಹಚ್ಚಿದರು

ಬಹಳಷ್ಟು ವರ್ಷಗಳ ಹಿಂದೆ ಒಂದು ಊರಿನಿಂದ ಉಪನ್ಯಾಸ ಮಾಡಿ ಬಾಬಾ ಅವರು ಬೇರೆ ಊರಿಗೆ ಹೋಗುತ್ತಿದ್ದರು ಸಂಜೆಯಾಗುತ್ತಿತ್ತು ಊರಿಗೆ ಹೋಗುವ ಮುನ್ನವೇ ಒಂದು ದೊಡ್ಡ ಗುಹೆ ಇತ್ತು ಆ ಕಡೆ ಹೋದರೆ ಅರಣ್ಯಕ್ಕೆ ದಾರಿ ಈ ಕಡೆ ಬಂದರೆ ಊರಿಗೆ ದಾರಿ ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಕುಳಿತರು.

 ಆಗ ಊರಿನಿಂದ ಒಬ್ಬ ಬಲಾಂಬ್ ವ್ಯಕ್ತಿ ಒಂದು ದೊಡ್ಡ ಪಾತ್ರೆಯಲ್ಲಿ ಅನ್ನ ಸಾರು ತೆಗೆದುಕೊಂಡು ಬಂದು ಗುಹೆಯ ಮುಂದೆ ನಿಂತು ಆಹಾರ ಬಂದಿದೆ ಎಂದು ಕೂಗಿದನು ನಂತರ ಒಬ್ಬ ವ್ಯಕ್ತಿ ಆಹಾರವನ್ನು ತೆಗೆದುಕೊಂಡು ಒಳಗಡೆ ಹೋದನು.

 ಮತ್ತೆ ಆಹಾರ ತಂದ ವ್ಯಕ್ತಿ ಊರಿಗೆ ಹೋಗುತ್ತಿದ್ದಾಗ ಬಾಬಾ ಅವರು ಗುಹೆಯಲ್ಲಿ ಯಾರಿಗೆ ಆಹಾರವನ್ನು ನೀಡಿದ್ದೀರಿ ಎಂದು ಕೇಳಿದರು ಆಗ ಊರಿನವನು ಹೇಳಿದ ಬಾಬಾ ಅವರೇ ನಿಮಗೆ ತಿಳಿದಿಲ್ಲ ಈ ಊರಿನಲ್ಲಿ ಒಬ್ಬ ರಾಕ್ಷಸ ಇದ್ದನು ಅವನು ಬಹಳಷ್ಟು ತೊಂದರೆ ನೀಡುತ್ತಿದ್ದನು ಇದರಿಂದ ಊರೆಲ್ಲವೂ ಬೇಸತ್ತು ಹೋಗಿತ್ತು.

ಊರಿನ ಮುಖ್ಯಸ್ಥರು ರಾಕ್ಷಸನೊಂದಿಗೆ ಮಾತನಾಡಿ ದಿನನಿತ್ಯ ಬೇಕಾದ ಆಹಾರವನ್ನು ನೀಡಿದರೆ ಊರಿನ ಜನಕ್ಕೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ ಅದರಂತೆಯೇ ನಾವು ದಿನನಿತ್ಯ ಇವರಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

 ಬಾಬಾ ಅವರು ರಾಕ್ಷಸರು ಇರುತ್ತಾರೆಯೇ? ಎಂದು ಯೋಚನೆ ಮಾಡಿದರು ನಂತರ ಏನಾದರೂ ಆಗಲಿ ಎಂದು ನಿಧಾನವಾಗಿ ಗುಹೆಯ ಒಳಗೆ ಸದ್ದಿಲ್ಲದಂತೆ ಹೋದರು ಅಲ್ಲಿ ಕುದುರೆ ಒಂದು ಸಂಸಾರ ವಾಸ ಮಾಡಿಕೊಂಡಿದ್ದಾರೆ ಈಗ ಕೊಟ್ಟಿದ್ದ ಆಹಾರವನ್ನು ತಿನ್ನುತ್ತಿದ್ದಾರೆ ಬಾಬಾ ಅವರು ಎಲ್ಲವನ್ನು ಗಮನಿಸಿ ನಿಧಾನಕ್ಕೆ ಮತ್ತೆ ಊರಿಗೆ ಬಂದರು ನಂತರ ಊರಿನವರಿಗೆ ಹೇಳಿದರು.

 ನೀವೇನು ಭಯಪಡುವ ಅವಶ್ಯಕತೆ ಇಲ್ಲ ರಾಕ್ಷಸ ನೆನ್ನೆಯೇ ಸತ್ತುಹೋಗಿದ್ದಾನೆ ಈ ಮಾತು ಕೇಳಿದ ಊರಿನವರಿಗೆ ಗಲಿಬಿಲಿ ರಾಕ್ಷಸ ಏನಾದರೂ ಮಾಡಿದರೆ ಎನ್ನುವ ಹೆದರಿಕೆ ಮತ್ತೊಂದು ಕಡೆ ಬಾಬಾ ಅವರು ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದಿಲ್ಲ ನಂತರ ಇರುವ ಎಲ್ಲಾ ಕತೆಯನ್ನು ಕೇಳಿದರು.

 ಮೊದಲು ಬಹಳಷ್ಟು ಜನ ರಾಕ್ಷಸನನ್ನು ಹೆದರಿಸಲು ಹೋದರು ಆದರೆ ಅವರೆಲ್ಲರೂ ಬರಲಿಲ್ಲ ಕೊನೆಗೆ ಊರಿನ ಮುಖ್ಯಸ್ಥರ ಕುಟುಂಬವೇ ಹೋಯಿತು ಆದರೆ ಕುಟುಂಬದಲ್ಲಿ ಇರುವ ಎಲ್ಲರೂ ನಾಪತ್ತೆಯಾದರೂ ಅದಕ್ಕಾಗಿ ಮುಖ್ಯಸ್ಥರೇ ಹುಡುಕಿಕೊಂಡು ಹೋದಾಗ ರಾಕ್ಷಸ ದಿನನಿತ್ಯ ನನಗೆ ಇಷ್ಟು ಕೊಟ್ಟರೆ ನಾನು ನಿಮಗೆ ಏನು ಮಾಡುವುದಿಲ್ಲ ಎಂದು ರಾಕ್ಷಸ ಹೇಳಿತು ಎಂದು ಹೇಳಿದರು.

ಈ ಊರಿನ ಮುಖ್ಯಸ್ಥರು ಕೂಡ ನಮಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ನಮ್ಮನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು ಇದನ್ನು ಅರಿತ ಬಾಬಾ ಅವರು ಈಗ ನೀವೇನು ಭಯಪಡಬೇಡಿ ರಾಕ್ಷಸ ಸತ್ತು ಹೋಗಿದ್ದಾನೆ ಅಲ್ಲಿ ಇರುವುದು ಮನುಷ್ಯರು ಮಾತ್ರವೇ ಆದ್ದರಿಂದ ನಾವೆಲ್ಲರೂ ಸೇರಿ ಹೋಗೋಣ ನಾನು ಮುಂದೆ ಹೋಗುತ್ತೇನೆ ನಾನು ಹೇಳಿದಂತೆ ಮಾಡಿ ಎಂದು ಹೇಳಿದರು.

ಊರಿನವರು ಆಗಲಿ ಎಂದು ಬಾಬಾ ಅವರ ಜೊತೆ ಗುಹೆಯ ಹತ್ತಿರ ಬಂದರು ದೊಡ್ಡ ಗುಹೆಗೆ ಎರಡು ದಾರಿಗಳಿದ್ದವು ಸ್ವಲ್ಪ ಜನಕ್ಕೆ ಒಂದು ಕಡೆ ನಿಲ್ಲಿಸಿ ಗುಹೆಯ ಸುತ್ತಲೂ ಸೌದೆಯನ್ನು ಜೋಡಿಸಿದರು ಮತ್ತೆ ಈ ಕಡೆ ಗುಹೆಯ ಬಾಗಿಲ ಬಳಿ ಬಾಬಾ ಅವರು ಊರಿನ ಜನರು ಕಾಯುತ್ತಿದ್ದರು ಆ ಕಡೆ ಬೆಂಕಿ ಹಚ್ಚಿದರು.

 ಬೆಂಕಿ ಹತ್ತಿಸುತ್ತಿದ್ದಂತೆ ಹೊಗೆ ಜಾಸ್ತಿ ಆಯ್ತು ಒಳಗಡೆ ಇರಲು ಸಾಧ್ಯವಾಗಲಿಲ್ಲ ಆಗ ಕಾಪಾಡಿ ಕಾಪಾಡಿ ಎಂದು ಓಡಿ ಬಂದರು ಯಾರು ಓಡಿ ಬಂದರೂ ಎಂದು ನೋಡಿದರೆ ಊರಿನ ಮುಖ್ಯಸ್ಥರ ಸಂಸಾರವೇ ಇತ್ತು.

 ಆಗ ಊರಿನವರಿಗೆ ಎಲ್ಲರಿಗೂ ಊರಿನ ಮುಖ್ಯಸ್ಥರ ಬಂಡವಾಳ ತಿಳಿಯಿತು ಮುಖ್ಯಸ್ಥನೇ ಈ ರೀತಿ ಎಲ್ಲರಿಗೂ ಮೋಸ ಮಾಡುತ್ತಿದ್ದಾನೆ ಎಂದು ಊರಿನವರು ಬೈದರು ಆಗ ಮುಖ್ಯಸ್ಥನು ತನ್ನ ತಪ್ಪನ್ನು ಅರಿತುಕೊಂಡನು ನಂತರ ನಾನು ಈ ಊರಿನಲ್ಲಿ ಇರುವುದಿಲ್ಲ ಎಂದು ಹೇಳಿ ಬೇರೆ ಊರಿನಲ್ಲಿ ಹೋಗಿ ಬದುಕಿದರು.

Leave a Comment