ಜೋರಾಗಿ ಕುಕ್ಕಿದರು

ಒಂದು ತುಂಬಾ ದೊಡ್ಡ ಆಶ್ರಮ ಆ ಆಶ್ರಮದಲ್ಲಿ ಹಲವಾರು ಶಿಷ್ಯರು ಹಲವಾರು ಗುರುಗಳು ಇದ್ದರು ಒಬ್ಬರು ಹಿರಿಯ ಗುರುಗಳು ಇದ್ದರು ಅವರ ಉಪನ್ಯಾಸಗಳು ಎಂದರೆ ಕೇಳುವುದಕ್ಕೆ ಅಷ್ಟೆ ಆನಂದ ಮತ್ತೆ ಬಹಳಷ್ಟು ಸಾಧನೆ ಮಾಡಿದ್ದರು ಆದರೆ ಆ ಹಿರಿಯ ಗುರುಗಳಿಗೆ ಕೋಪ ಮೂಗಿನ ತುದಿಯ ಮೇಲೆ ಇರುತ್ತಿತ್ತು.

 ಏನೇ ಒಂದು ಸಣ್ಣ ಎಡವಟ್ಟು ಆದರೂ ಅವರಿಗೆ ಕೋಪ ಬಲುಬೇಗ ಬರುತ್ತಿತ್ತು ಇದರಿಂದಾಗಿ ಆಶ್ರಮದಲ್ಲಿ ಇರುವವರು ಗುರುಗಳ ವರ್ತನೆಗೆ ಬೇಸರಿಸಿಕೊಳ್ಳುತ್ತಿದ್ದರು ಹಿರಿಯ ಗುರುಗಳಿಗೂ ಗೊತ್ತು ನನಗೆ ಕೋಪ ಬರುತ್ತಿದೆ ಎಂದು ತಿಳಿದಿತ್ತು ಆದರೆ ಅದನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

 ಗುರುಗಳೇ ಒಂದೊಂದು ಸಾರಿ ಯೋಚನೆ ಮಾಡುತ್ತಿದ್ದರು ನಾನು ಎಲ್ಲರಿಗೂ ಉಪನ್ಯಾಸವನ್ನು ಕೊಡುತ್ತೇನೆ ಆದರೆ ನಾನೇ ಕೋಪವನ್ನು ನಿಗ್ರಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಪಶ್ಚಾತ್ತಾಪ ಪಟ್ಟರು ಕೊನೆಗೆ ಯೋಚನೆ ಮಾಡಿದರು ಏನೇ ಆಗಲಿ ನಾನು ಕೋಪವನ್ನು ಗೆಲ್ಲಲೇಬೇಕು ಎಂದು ಯಾರಿಗೂ ಹೇಳದೆ ಆಶ್ರಮದಿಂದ ದೂರ ನಡೆದರು.

 ಆಶ್ರಮದಲ್ಲಿ ಸಣ್ಣಪುಟ್ಟ ಎಡವಟ್ಟುಗಳು ಆದರೆ ಮಾತ್ರ ನನಗೆ ಕೋಪ ಬರುತ್ತದೆ ಆದುದರಿಂದ ನಾನು ಬೆಟ್ಟದ ಮೇಲೆ ಹೋದರೆ ಒಳ್ಳೆಯದು ಎಂದು ಬೆಟ್ಟದ ಮೇಲೆ ನಡೆದುಕೊಂಡು ಹೋದರು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡರು ಹಾಗೆಯೇ ನೀರಿಗಾಗಿ ಒಂದು ಚಿಕ್ಕ ಹಿತ್ತಾಳೆಯ ಬಿಂದಿಗೆಯನ್ನು ತೆಗೆದುಕೊಂಡು ಹೋದರು.

ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಬೇಕಾದಾಗ ನೀರು ಕುಡಿಯುತ್ತಿದ್ದರು ಹೀಗೆ ಒಂದು ದಿನ ಕಳೆಯಿತು ಹಿರಿಯ ಗುರುಗಳಿಗೆ ಈಗ ನಾನು ಕೋಪ ಗೆದ್ದಿದ್ದೇನೆ ಎನ್ನುವ ಅರಿವು ಆಗುತ್ತಿತ್ತು ಮತ್ತೆ ಅವರು ನೀರನ್ನು ತುಂಬಿ ಒಂದು ಬಂಡೆಯ ಮೇಲೆ ಇಟ್ಟಿದಾಗ ಅದು ಮತ್ತೆ ಉರುಳಿ ಕೆಳಗೆ ಬಂತು ಮತ್ತೆ ಸರಿಯಾಗಿ ಇಟ್ಟರು.

 ಮತ್ತೆ ಗಾಳಿಗೆ ಉರುಳಿ ಕೆಳಗೆ ಬಂತು ಹೀಗೆ ಐದಾರು ಸರಿ ಇಟ್ಟರೂ ಕೂಡ ಬೀಳುತ್ತಲೇ ಇತ್ತು ಕೊನೆಗೆ ಕೋಪ ಬಂದು ಆ ಬಿಂದಿಗೆಯನ್ನು ಜೋರಾಗಿ ಕುಕ್ಕಿದರು ಅದು ಬೆಟ್ಟದ ಮೇಲಿಂದ ಉರುಳಿ ಕೆಳಗೆ ಬಂತು ಮತ್ತೆ ಆ ಬಿಂದಿಗೆಯನ್ನು ಎತ್ತಬೇಕಾದರೆ ಬೆಟ್ಟದ ಕೆಳಗೆ ಬಂದು ಎತ್ತಿಕೊಂಡು ಹೋಗಬೇಕು ಆಗ ಅವರಿಗೆ ಅರಿವಾಯಿತು.

 ಕೋಪ ಬರುತ್ತಿರುವುದು ಹೊರಗಡೆಯ ಘಟನೆಗಳಿಂದ ಅಲ್ಲ ನನ್ನ ಮನಸ್ಸಿನ ಒಳಗಡೆಯಿಂದ ಎಂದು ಅರಿತರು ಕೋಪಕ್ಕೆ ಕಾರಣ ನಾನೇ ನನ್ನ ಮನಸ್ಸನ್ನು ನಾನು ಹಿಡಿತದಲ್ಲಿ ಇಟ್ಟುಕೊಂಡರೆ ಯಾವುದೇ ರೀತಿಯ ಕೋಪ ಬರುವುದಿಲ್ಲ ಎಂದು ಅರಿತರು. ನನ್ನ ಕೋಪವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆಯೇ?

ನಾನು ಮೋಸ ಮಾಡಿದೆ

ಒಂದು ಊರಿನಲ್ಲಿ ಸಿಕಂದರ್ ಹಾಗೂ ಕಲಂದರ್ ಎನ್ನುವ ಇಬ್ಬರು ಸ್ನೇಹಿತರು ಇರುತ್ತಾರೆ ಕಲಂದರ್ ಎನ್ನುವವನು ತನ್ನ ಕುದುರೆಯನ್ನು ತುಂಬಾ ಚೆನ್ನಾಗಿ ಸಾಕಿರುತ್ತಾನೆ. ಕುದುರೆ ತನ್ನ ಮಗನಂತೆ ಸಾಕಿರುತ್ತಾನೆ, ಆ ಕುದುರೆಯು ಹಾಗೆಯೇ ನೋಡಲು ತುಂಬಾ ಸುಂದರವಾಗಿರುತ್ತದೆ.

 ಸಿಕಂದರ್ ಏನಾದರೂ ಆಗಲಿ ಕುದುರೆ ನಾನು ಪಡೆಯಬೇಕು ಎನ್ನುವ ಆಸೆ ಇರುತ್ತದೆ ಅದಕ್ಕಾಗಿ ಸಿಕಂದರ್ ಕುದುರೆಯ ಬೆಲೆ ಎಷ್ಟು ಹೇಳು ಎಂದು ಕೇಳುತ್ತಾನೆ ಆಗ ಕಲಂದರ್ ನಾನು ಈ ಕುದುರೆಯನ್ನು ಮಗನಂತೆ ಸಾಕಿದ್ದೇನೆ ಇದನ್ನು ನಾನು ಮಾರುವುದಿಲ್ಲ ಎಂದು ಹೇಳುತ್ತಾನೆ.

 ಸಿಕಂದರ್ ಕುತಂತ್ರ ಯೋಚನೆ ಮಾಡುತ್ತಾನೆ ಏನೆಂದರೆ ಕಲಂದರ್ ಬರುವ ದಾರಿಯಲ್ಲಿ ಸಿಕಂದರ್ ಬೇರೆ ವೇಷದಲ್ಲಿ ಮುದುಕನಂತೆ ಹೊಟ್ಟೆ ನೋವಿನಿಂದ ಬಳಲುತ್ತಿರುತ್ತಾನೆ ಯಾರಾದರೂ ನನಗೆ ಕಾಪಾಡಿ ಕಾಪಾಡಿ ಎಂದು ಗೋಗರೆಯುತ್ತಾನೆ.

 ಬಳಲುತ್ತಿರುವುದನ್ನು ನೋಡಿ ಕಲಂದರ್ ನಿಧಾನವಾಗಿ ಕುದುರೆಯಿಂದ ಇಳಿದು ಸಿಕಂದರ್ ಗೆ ಕುದುರೆ ಮೇಲೆ ಎತ್ತಿ ಕೂರಿಸಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಸಿಕಂದರ್ ಜಾಡಿಸಿ ಕಲಂದರ್ ನನ್ನು ಒದೆಯುತ್ತಾನೆ ಆಗ ಹೇಳುತ್ತಾನೆ.

 ನೋಡು ನಾನು ನಿನ್ನ ಕುದುರೆಯನ್ನು ಪಡೆದಿದ್ದೇನೆ ಎಂದು ಹೇಳಿದನು ಆಗ ಕಲಂದರ್ ಜೋರಾಗಿ ಓಡಿ ಬಂದು ಹೇಳುತ್ತಾನೆ ಕುದುರೆ ನೀನೆ ಇಟ್ಟಿಕೋ ಪರವಾಗಿಲ್ಲ ಆದರೆ ನಾನು ಮೋಸ ಮಾಡಿ ಪಡೆದಿದ್ದೇನೆ ಎಂದು ಯಾರಿಗೂ ಹೇಳಬೇಡ.  

 ಸಹಾಯ ಮಾಡುವವರಿಗೆ ತಿಳಿದರೆ ಯಾರು ಇತರರಿಗೆ ಸಹಾಯ ಮಾಡುವುದಿಲ್ಲ ಎಂದು ವಿನಂತಿಸಿಕೊಳ್ಳುತ್ತಾನೆ ಒಬ್ಬ ವ್ಯಕ್ತಿ ಮೋಸ ಮಾಡುತ್ತಾನೆ ಆದರೆ ಕೆಟ್ಟ ಹೆಸರು ಎಲ್ಲರಿಗೂ ಬರುತ್ತದೆ ಇದನ್ನು ಯೋಚನೆ ಮಾಡಿದವನು ಯಾರಿಗೂ ಮೋಸ ಮಾಡುವುದಿಲ್ಲ. ನನಗೆ ನಂಬಿಸಿ ಮೋಸ ಮಾಡಿದ್ದಾರೆಯೇ?

ನಾವು ಹೇಗೆ ವರ್ತಿಸುತ್ತೇವೆ

ಬಹಳಷ್ಟು ಯುವಕರು ಯುವತಿಯರು ಯಾವುದಾದರೂ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ ಅದು ಕ್ರೀಡೆ ಯಾಗಿರಬಹುದು ಅಥವಾ ಬೇರೆಯೂ ಆಗಿರಬಹುದು ಕೆಲವರು ಕರಾಟೆಯು ಕೂಡ ಆರಿಸಿಕೊಳ್ಳುತ್ತಾರೆ ಕರಾಟೆಯಲ್ಲಿಯು ಹಲವಾರು ವಿಧಗಳಿವೆ ಓಕಿನವಾ, ಕುಂಗ್ ಫೂ, ಟೈಕ್ವೊಂಡೊ, ಮಾರ್ಷಲ್ ಆರ್ಟ್ಸ್, ಇತ್ಯಾದಿ ಕರಾಟೆ ಕಲಿಯುತ್ತಿದ್ದಂತೆಯೇ ಒಂದು ನಿಯಮವಿದೆ.

ಮೊದಲನೆಯದು ವೈಟ್ ಬೆಲ್ಟ್, ಎಲ್ಲೋ ಬೆಲ್ಟ್, ಆರೆಂಜ್ ಬೆಲ್ಟ್, ಗ್ರೀನ್ ಬೆಲ್ಟ್. ಹೀಗೆ ಬ್ಲಾಕ್ ಬೆಲ್ಟ್ ಇದೆ ಬ್ಲಾಕ್ ಬೆಲ್ಟ್ ಪಡೆಯಬೇಕು ಎಂದರೆ ಹೆಚ್ಚಾಗಿ ಸಾಧನೆ ಮಾಡಿರಬೇಕು ಆಗಲೇ ಬ್ಲಾಕ್ ಬೆಲ್ಟ್ ಸಿಗುತ್ತದೆ ಬ್ಲಾಕ್ ಬೆಲ್ಟ್ ಕೊಡುವುದಕ್ಕಿಂತ ಮುಂಚೆ ಗುರುಗಳು ವಿದ್ಯಾರ್ಥಿಗೆ ಒಂದು ಪ್ರಶ್ನೆಯನ್ನು ಕೇಳಿದರು.

 ಬ್ಲಾಕ್ ಬೆಲ್ಟ್ ನ ನಿಜವಾದ ಅರ್ಥ ಏನು ಎಂದಾಗ ಯುವಕನು ಹೇಳಿದನು ನಾವು ಇಲ್ಲಿಯವರೆಗೆ ಒಂದು ಹಂತಕ್ಕೆ ತಲುಪಿದ್ದೇವೆ ಎಂದು ಹೇಳಿದನು.

ಗುರುಗಳು ನೀನು ಬ್ಲಾಕ್ ಬೆಲ್ಟ್ ಗೆ ಅರ್ಹನಾಗಿಲ್ಲ ಇನ್ನೂ ಒಂದು ವರ್ಷ ಅಭ್ಯಾಸ ಮಾಡು ಎಂದರು ಒಂದು ವರ್ಷದ ನಂತರ ಬಂದನು ನಾವು ಒಂದಾದ ನಂತರ ಕ್ರಮಬದ್ಧವಾಗಿ ನಾವು ಕಲಿಯುತ್ತಾ ಬಂದಿರುತ್ತೇವೆ ಅದಕ್ಕಾಗಿ ನೀವು ನಮಗೆ ಕೊಡುವ ಪ್ರಮಾಣಪತ್ರ ಎಂದನು ನಂತರ ಗುರುಗಳು ಇದು ಅಲ್ಲ ಎಂದು ಸೂಚಿಸಿದರು.

ಮತ್ತೆ ಒಂದು ವರ್ಷದ ನಂತರ ಯುವಕ ಬಂದನು ಬ್ಲಾಕ್ ಬೆಲ್ಟ್ ಎಂದರೆ ಒಂದು ಘಟ್ಟ ಅಷ್ಟೆ ಮತ್ತು ಇನ್ನೂ ಹೆಚ್ಚಾಗಿ ಸಾಧನೆ ಮಾಡಬೇಕಾದುದು ನಮಗೆ ಎಷ್ಟು ಶಕ್ತಿ ಇದೆ ಎನ್ನುವುದಕ್ಕಿಂತ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದರಲ್ಲಿ ಅಡಗಿದೆ ಎಂದನು ಆಗ ಗುರುಗಳು ವಿದ್ಯಾರ್ಥಿಗೆ  ಬ್ಲಾಕ್ ಬೆಲ್ಟ್ ನೀಡಿದರು.

ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ತಪ್ಪಲ್ಲ ಆದರೆ ಆ ಶಕ್ತಿಯನ್ನು ಎಲ್ಲಿ ಯಾವಾಗ ಹೇಗೆ ಉಪಯೋಗಿಸಬೇಕು ಎನ್ನುವುದು ಮುಖ್ಯ. ನಾನು  ವಿನಮ್ರತೆಯಿಂದ ವರ್ತಿಸುತ್ತಿದ್ದೇನೆಯೇ?

ಕಿತಾಪತಿ ಮಾಡಬೇಕು

ಒಂದು ಕಾಡಿನಲ್ಲಿ ಒಂದು ವಿಶಾಲವಾದ ಮರ ಇರುತ್ತದೆ ಆ ಮರದ ಮೇಲಿನ ಒಂದು ಕೊಂಬೆಯಲ್ಲಿ ಗಿಡುಗ ಗೂಡು ಕಟ್ಟಿಕೊಂಡು ಇರುತ್ತದೆ ಅದಕ್ಕಿಂತ ಸ್ವಲ್ಪ ಕೆಳಗಡೆ ಇರುವ ಒಂದು ಕೊಂಬೆಯಲ್ಲಿ ಬೆಕ್ಕು ವಾಸಮಾಡಿಕೊಂಡು ಇರುತ್ತದೆ ಮರದ ಬುಡದಲ್ಲಿ ಮೊಲಗಳು ವಾಸಮಾಡಿಕೊಂಡು ಇರುತ್ತವೆ.

 ಬೆಕ್ಕು ಯೋಚಿಸುತ್ತದೆ ಏನಾದರೂ ನಾನು ಕಿತಾಪತಿ ಮಾಡಬೇಕು ಎಂದು ಮರದ ಮೇಲೆ ಇರುವ ಗಿಡುಗನಿಗೆ ಹೇಳುತ್ತದೆ ನೀನು ಯಾವಾಗಲೂ ಎಚ್ಚರಿಕೆ ಇರಬೇಕು ಏಕೆಂದರೆ ಮರದ ಕೆಳಗೆ ಮೊಲಗಳು ಇರುವುದರಿಂದ ಅವು ಕೊರೆಯುತ್ತಿರುತ್ತವೆ ಆದುದರಿಂದ ಮರಗಳು ಯಾವಾಗ ಬೀಳುತ್ತದೋ ತಿಳಿಯದು ನಂತರ ಕೆಳಗೆ ಮೊಲವನ್ನು ನೋಡಿ ಹೇಳುತ್ತದೆ.

 ಮೊಲಕ್ಕೆ ನಿನ್ನ ಸಂಸಾರವನ್ನೂ ನಿನ್ನ ಮಕ್ಕಳನ್ನು ಚೆನ್ನಾಗಿ ರಕ್ಷಣೆ ಮಾಡಿಕೋ ಇಲ್ಲದಿದ್ದರೆ ಮೇಲಿನಿಂದ ಗಿಡುಗ ಬಂದು ನಿನ್ನ ಮಕ್ಕಳನ್ನು ತಿಂದುಬಿಡುತ್ತಾನೆ ಎಂದು ಇಬ್ಬರಲ್ಲಿಯೂ ದ್ವೇಷ ಬರುವಂತೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತದೆ ನಂತರ ಬೆಕ್ಕು ಗಿಡುಗಕ್ಕೆ ಧೈರ್ಯ ನೀಡುತ್ತದೆ ನಾನು ಇದ್ದೀನಿ ನೀವೇನೂ ಹೆದರಬೇಡಿ ಎಂದು ಬೆಳಿಗ್ಗಿನಿಂದ ಸಂಜೆಯವರೆಗೂ ಆಗಾಗ ಹೋಗಿ ಸುಳ್ಳು ಧೈರ್ಯ ಕೊಡುತ್ತದೆ.

 ಕೆಳಗಡೆಯೂ ಬಂದು ಬೆಕ್ಕು ಸುಳ್ಳು ನಾಟಕ ಮಾಡುತ್ತಿರುತ್ತದೆ ಆದರೆ ಕತ್ತಲಾದ ನಂತರ ಬೆಕ್ಕು ಮಾತ್ರ ತನಗೆ ಏನು ಬೇಕೋ ಅದನ್ನು ಎಲ್ಲಾ ಕಡೆಯಿಂದ ಸಂಗ್ರಹಿಸಿಕೊಂಡು ತಾನು ಚೆನ್ನಾಗಿರುತ್ತದೆ ಮೇಲೆ ಇದ್ದ ಗಿಡುಗನಿಗೆ ಕೆಳಗೆ ಇದ್ದ ಮೊಲಕ್ಕೂ ಭಯ ಎಲ್ಲಿ ಯಾವಾಗ ಏನಾಗುತ್ತದೋ ಎಂದು ಹೆದರಿ ಗಿಡುಗವೂ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.

  ಹಾಗೆಯೇ ಮೊಲವು ಕೂಡ ಎಲ್ಲೂ ಹೋಗುವುದಿಲ್ಲ ಆದ್ದರಿಂದ ಇಬ್ಬರ ಮಕ್ಕಳು ಕೂಡ ಹಸಿವಿನಿಂದ ಸಾಯುತ್ತವೆ   ಆದರೆ ಇದನ್ನು ನೋಡಿ ಬೆಕ್ಕು ಸಂತಸ ಪಡುತ್ತಿರುತ್ತದೆ ಹೀಗೆ ಕೆಲವರು ಚಾಡಿಕೋರರು ಇರುತ್ತಾರೆ ಇವರನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಇಲ್ಲದಿದ್ದರೆ ನಮ್ಮ ನೆಮ್ಮದಿ ಹಾಳಾಗುತ್ತದೆ.

ಹಸಿವಿನಿಂದ ಕೆಲಸ ಮಾಡಿದರು

ಹಲವಾರು ವರ್ಷಗಳ ಹಿಂದೆ ಒಂದು ಸಮಾರಂಭವನ್ನು ಏರ್ಪಡಿಸಿ ಔತಣಕ್ಕೆ ತನ್ನ ಎಲ್ಲಾ ಸೈನಿಕರನ್ನು ಕರೆದಿದ್ದನು ನೆಪೋಲಿಯನ್ ಸರಿಯಾದ ಸಮಯಕ್ಕೆ ಬಂದಿದ್ದನು.

 ಬಹಳಷ್ಟು ಸೈನಿಕರು ಬರಲಿಲ್ಲ ಅದಕ್ಕಾಗಿ ನೆಪೋಲಿಯನ್ ಊಟವನ್ನು ಮಾಡಿದನು ಅಲ್ಪ ಸ್ವಲ್ಪ ಸೈನಿಕರು ಬಂದರೂ ಅವರು ಕೂಡ ಸ್ವಲ್ಪ ಸ್ವಲ್ಪ ಊಟವನ್ನು ಮಾಡುತ್ತಿದ್ದರು ನಂತರ ಊಟದ ಸಮಯವು ಮುಗಿಯಿತು.

 ನೆಪೋಲಿಯನ್ ಆಚೆಗೆ ಬಂದನು ಊಟ ಮಾಡಲಿಕ್ಕೆ ಹೋಗುವ ಕೊಠಡಿಯನ್ನು ಮುಚ್ಚಿದನು ಆಗ ಕೆಲವರು ನಿಧಾನವಾಗಿ ಬರಲು ಆರಂಭಿಸಿದರು.

 ಆಗ ನೆಪೋಲಿಯನ್ ಹೇಳಿದನು ನಾನು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಯಾರು ಬರಲಿಲ್ಲ ಊಟದ ಸಮಯ ಮೀರಿದೆ ಅದರಿಂದ ಈಗ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಕೆಲಸಕ್ಕೆ ಕರೆದುಕೊಂಡು ಹೋದನು.

 ನೆಪೋಲಿಯನ್  ಹೇಳಿದ ಸೈನಿಕರು ಮರುಮಾತಾಡದೆ ಹಸಿವಿನಿಂದ ಕೆಲಸ ಮಾಡಿದರು ನಂತರ ಎಲ್ಲರೂ ಸರಿಯಾದ ಸಮಯಕ್ಕೆ ಬರಲು ಪ್ರಾರಂಭಿಸಿದರು.

Leave a Comment