ಏಳು ವರ್ಷ ತುಂಬಿದ ರಮನ್ ಹುಡುಗನ ಏಳನೇ ವರ್ಷದ ಹುಟ್ಟುಹಬ್ಬವೂ ತುಂಬಾ ಅದ್ದೂರಿಯಾಗಿ ಆಚರಿಸಿದರು. ನಂತರ ಹುಡುಗನು ಎಲ್ಲರ ಉಡುಗೊರೆಯನ್ನು ತೆಗೆದು ಒಂದೊಂದಾಗಿ (ಚೆಕ್ ಮಾಡುತ್ತಾ) ಪರಿಶೀಲಿಸುತ್ತಾ ಬಂದನು ಯಾರ್ಯಾರು ನನಗೆ ಏನು ಕೊಟ್ಟಿದ್ದಾರೆ ಎಂದು ನೋಡುತ್ತಿದ್ದನು ವಾರಿಜ್ ಅಜ್ಜನವರು ಒಂದು ಕವರ್ ನಲ್ಲಿ ಚಿಕ್ಕ ಪೇಪರ್ ಗಳನ್ನು ಇಟ್ಟಿದ್ದರು ಇದನ್ನು ನೋಡಿ ಹುಡುಗ ಕೋಪದಿಂದ ಬಿಸಾಕಿದನು.
ಹುಡುಗನ ತಂದೆ ತಾಯಿ ಆ ಪೇಪರನ್ನು ನೋಡಿ ಹರ್ಷಗೊಂಡರು ಆಗ ಮಗುವಿಗೆ ಹೇಳಿದರೂ ಅಜ್ಜನಿಗೆ ಹೋಗಿ ನಮಸ್ಕಾರ ಮಾಡಿ ತಪ್ಪಾಯ್ತು ಎಂದು ಕೇಳು ಎಂದಾಗ ಹುಡುಗನು ತಂದೆ ತಾಯಿಯ ಮಾತು ಕೇಳಲೇಬೇಕು ಆದುದರಿಂದ ಅಜ್ಜನ ಹತ್ತಿರ ಹೋಗಿ ಸುಮ್ಮನೆ ನಿಂತನು.
ಅಜ್ಜನವರು ಅರ್ಥಮಾಡಿಕೊಂಡು ಹುಡುಗನಿಗೆ ಒಂದು ಮುಷ್ಟಿಯಷ್ಟು ನಾಣ್ಯಗಳು ಕೊಟ್ಟರು ಈ ನಾಣ್ಯಗಳನ್ನು ಹಿಡಿದುಕೊಂಡು ತುಂಬ ಸಂತೋಷಪಟ್ಟನು ಹಿಗ್ಗಿ ಹಿಗ್ಗಿ ಕುಣಿದನು ತನ್ನ ಸ್ನೇಹಿತರಿಗೆ ಎಲ್ಲರಿಗೂ ಹೇಳಿದನು ನನಗೆ ನಮ್ಮ ಅಜ್ಜನವರು ಕೈ ತುಂಬಾ ನಾಣ್ಯಗಳು ಕೊಟ್ಟಿದ್ದಾರೆ ಏನು ಬೇಕಾದರೂ ನಾನು ತಿನ್ನಬಹುದು ಎಂದನು.
ತಂದೆ ತಾಯಿ ಆ ಪೇಪರಲ್ಲಿ ಏನು ಇದೆ ಎಂದು ನೋಡಿದರೆ ಒಂದು ದೊಡ್ಡ ಬಿಲ್ಡಿಂಗನ್ನು ಹುಡುಗನ ಹೆಸರಿಗೆ ಬರೆದಿದ್ದರು. ಮಗುವಿಗೆ ಅರ್ಥವಾಗಲಿಲ್ಲ ಮಗುವಿಗೆ ಚಿಲ್ಲರೆ ಕಾಸಿನಲ್ಲಿಯೇ ತುಂಬಾ ಸಂತೋಷವಿದೆ. ನನಗೆ ಯಾವುದರಲ್ಲಿ ಸಂತೋಷವಿದೆ?
ಪ್ರಶ್ನೆಗಳನ್ನು ಕೇಳಲೇ ಬೇಕು
ಒಂದು ಶಾಲೆಯಲ್ಲಿ ವಿಜ್ಞಾನದ ಅಚ್ಚುಮೆಚ್ಚಿನ ಲಿಕುಲಿಶ್ ಶಿಕ್ಷಕರು ಇದ್ದರು ತುಂಬಾ ಒಳ್ಳೆಯ ವ್ಯಕ್ತಿತ್ವ ಇವರು ಪಾಠ ಮಾಡಿದರೆ ಎಲ್ಲರೂ ಆಕರ್ಷಿತರಾಗುತ್ತಿದ್ದರು ಏನೇ ಹೇಳಿದರೂ ಅದು ಸರಿಯಾಗಿ ಅರ್ಥವಾಗುವಂತೆ ಹೇಳುತ್ತಿದ್ದರು.
ಸಾಧ್ಯವಾದಷ್ಟು ಚಟುವಟಿಕೆ ಕೊಟ್ಟು ಹೊಸ ಹೊಸ ಪ್ರಯೋಗಗಳನ್ನು ಮಾಡಿಸುತ್ತಿದ್ದರು ಒಂದು ದಿನ ತರಗತಿಗೆ ಬಂದಾಗ ಅವರ ಕೈಯಲ್ಲಿ ಒಂದು ಚಿಕ್ಕ ತಲೆಬುರುಡೆ ಇತ್ತು ಇದನ್ನು ನೋಡಿದ ಎಲ್ಲರಿಗೂ ತುಂಬಾ ಆಶ್ಚರ್ಯವಾಯ್ತು ಆ ತಲೆಬುರುಡೆಯನ್ನು ತೋರಿಸಿ ಎಲ್ಲರಿಗೂ ಕೇಳಿದರು.
ಇದು ಯಾವ ಪ್ರಾಣಿಯ ಬುರುಡೆ ಎಂದಾಗ ಒಬ್ಬ ಮನುಷ್ಯನದು ಇನ್ನೊಬ್ಬ ಕೋತಿಯದು ಮತ್ತೊಬ್ಬ ಕರಡಿಯದು ಹೀಗೆ ಅವರ ಮನಸ್ಸಿಗೆ ಬಂದಂತೆ ಉತ್ತರಗಳನ್ನು ಕೊಟ್ಟರು ಕೊನೆಗೆ ಶಿಕ್ಷಕರು ಹೇಳಿದರು ನೀವು ಹೇಳಿದ ಯಾವುದೇ ಪ್ರಾಣಿಯ ತಲೆಬುರುಡೆ ಅಲ್ಲ ಎಂದು ಹೇಳಿದರು.
ಈ ಪ್ರಾಣಿಯ ಹೆಸರು ಡ್ರಾಗನ್ ಈ ಪ್ರಾಣಿ ಇಪ್ಪತ್ತು ಸಾವಿರ ವರ್ಷಗಳ ಹಿಂದೆಯೇ ಬದುಕುತ್ತಿತ್ತು ನಂತರ ನಂತರ ಇದರ ಸಂತತಿ ಕ್ರಮೇಣ ಕಡಿಮೆಯಾಗುತ್ತಾ ಬಂತು ಈ ಪ್ರಾಣಿಯ ಲಕ್ಷಣಗಳು ತುಂಬಾ ವಿಚಿತ್ರ ವಾಗಿವೆ ಈ ಪ್ರಾಣಿಗೆ 4 ಕಾಲುಗಳು ಇದ್ದರೂ ಇದಕ್ಕೆ ಬಾಲವು ತುಂಬಾ ಉದ್ದವಾಗಿತ್ತು.
ಹಾಗೆಯೇ 2ರೆಕ್ಕೆಗಳು ಕೂಡ ಇತ್ತು ಗಾಳಿಯಲ್ಲಿಯೂ ಕೂಡ ಇದು ಹಾರಿ ಬೇಟೆ ಆಡುತ್ತಿತ್ತು ಇದರ ಕಣ್ಣುಗಳು ತುಂಬಾ ಸೂಕ್ಷ್ಮವಾಗಿ ಇರುತ್ತಿತ್ತು ರಾತ್ರಿಯೂ ತುಂಬ ಚೆನ್ನಾಗಿ ಬೇಟೆಯಾಡುತ್ತಿತ್ತು ಹೀಗೆ ಇನ್ನೂ ಹಲವಾರು ಗುಣ ಲಕ್ಷಣಗಳನ್ನು ಹೇಳಿದರು ನಂತರ ಆ ತಲೆ ಬುರುಡೆಯನ್ನು ನೋಡಲು ಮುಟ್ಟಲು ಅವಕಾಶ ಮಾಡಿಕೊಟ್ಟರು.
ಎಲ್ಲಾ ವಿದ್ಯಾರ್ಥಿಗಳಿಗೂ ತುಂಬಾ ಸಂತೋಷವಾಯ್ತು ಹೊಸದಾದ ಪ್ರಾಣಿಯ ಬಗ್ಗೆ ತಿಳಿದುಕೊಂಡೆವು ಎಂದು ಆನಂದಿಸಿದರು ಮಾರನೇ ದಿನ ಶಿಕ್ಷಕರು ಬಂದು ಅದರ ಬಗ್ಗೆ ಮೂವತ್ತು ನಿಮಿಷದ ಪ್ರಶ್ನೆ ಪತ್ರಿಕೆಯನ್ನು ಕೊಟ್ಟು ಕೆಲವು ಪ್ರಶ್ನೆಗಳನ್ನು ಕೇಳಿದರು ಪಾಠವು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಬರೆದಿದ್ದರು.
ಶಿಕ್ಷಕರು ಬಂದು ಎಲ್ಲಾ ಉತ್ತರ ಪತ್ರಿಕೆಗೆ ಸೊನ್ನೆ ಅಂಕವನ್ನು ಕೊಟ್ಟರು ಆಗ ಎಲ್ಲ ವಿದ್ಯಾರ್ಥಿಗಳು ಗಾಬರಿಯಾದರು ಏಕೆ ಸೊನ್ನೆ ಅಂಕಗಳು ನೀಡಿದ್ದೀರಿ ಎಂದಾಗ ಶಿಕ್ಷಕರು ಹೇಳಿದ್ರು ನೀವೆಲ್ಲಾ ಬುದ್ಧಿವಂತರು ಅಲ್ಲ ವಿಜ್ಞಾನ ಕಲಿಯುವವರು ಯಾವಾಗಲೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ.
ನೀವು ನಿನ್ನೆ ನನಗೆ ಒಂದು ಪ್ರಶ್ನೆಯು ಕೇಳಲಿಲ್ಲ ನಾನು ಏನೇನು ಹೇಳಿದನೋ ಅದನ್ನು ಎಲ್ಲವೂ ಕೇಳಿಸಿಕೊಂಡಿದ್ದೀರಿ ನಾನು ಹಳೆ ಪ್ರಾಣಿ ಎಂದು ಹೇಳಿದೆ ಗಿಳಿಯಂತೆ ಬಾಯಿಪಾಠ ಕೇಳಿದ್ದೀರಿ ಅದರ ಸಂತತಿ ನಶಿಸಿ ಹೋಯಿತು ಎಂದು ಕೇಳಲಿಲ್ಲ ಮತ್ತೆ ನಿಮಗೆ ಈ ತಲೆಬುರುಡೆ ಎಲ್ಲಿ ಸಿಕ್ಕಿತು ಎಂದು ಕೂಡ ಕೇಳಲಿಲ್ಲ.
ವಿಜ್ಞಾನದಲ್ಲಿ ಬದುಕಿನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲೇಬೇಕು ಇಲ್ಲದಿದ್ದರೆ ಏನು ಕಲಿಯುವುದಿಲ್ಲ ಎಂದು ಹೇಳಿದರು ಯಾರು ಏನೇ ಹೇಳಿದರೂ ಯಾವುದು ಸರಿ ಯಾವುದು ತಪ್ಪು ಎಂಬ ವಿವೇಚನೆ ಬೆಳೆಸಿಕೊಳ್ಳೋಣ.
ಸಾವಿನಿಂದ ಗೆದ್ದು ಬಂದಿದ್ದೇನೆ
ಸದಮಲ್ ಆಚಾರ್ಯರು ತುಂಬಾ ಬಡತನದಲ್ಲಿ ಬೆಳೆದು ಕಷ್ಟಪಟ್ಟು ಸಂಪಾದನೆ ಮಾಡಿ ಒಂದು ಆಸ್ತಿಯನ್ನು ಖರೀದಿಸಿದರು ಮೊದಲು ಆಸ್ತಿ ಖರೀದಿಸಿದ ನಂತರ ಪಿಂಚಿನ್ ಕಟ್ಟಬೇಕು ಸುತ್ತ ಬೇಲಿ ಹಾಕಬೇಕು ಈ ಕೆಲಸ ಮಾಡಿಸಬೇಕು ಎಂದು ಹುಡುಕುತ್ತಿರುತ್ತಾರೆ.
ಅಷ್ಟರಲ್ಲಿಯೇ ಒಲುಮಶ್ ಕಂಟ್ರ್ಯಾಕ್ಟರ್ ಬರ್ತಾನೆ ನಾನು ನಿಮ್ಮ ಕೆಲಸವನ್ನು ಮಾಡಿ ಕೊಡುತ್ತೇನೆ ನನಗೆ ಇಪ್ಪತ್ತೈದು ಪರ್ಸೆಂಟ್ ಹಣ ಕೊಡಿ ನಂತರ ಎಪ್ಪತ್ತೈದು ಕೊಡಿ ಎಂದು ನಯವಾಗಿ ಕೇಳುತ್ತಾನೆ ಆಚಾರ್ಯರು ಅದಕ್ಕೆ ಒಪ್ಪಿಕೊಳ್ಳುತ್ತಾರೆ ಮಾರನೆಯ ದಿನವೇ ಬಂದು ಸ್ವಲ್ಪ ಕೆಲಸವನ್ನು ಮುಗಿಸುತ್ತಾನೆ.
ಕಂಟ್ರ್ಯಾಕ್ಟರ್ ಕಣ್ಣಿಗೆ ಕಾಣುವುದೇ ಇಲ್ಲ ನಂತರ ವಿಚಾರಿಸಿದರೆ ಇವನು ನಂಬರ್ ವನ್ ಕಂತ್ರಿ ಆಗಿರುತ್ತಾನೆ ಕೆಲವು ತಿಂಗಳ ನಂತರ ಬರುತ್ತಾನೆ ಬಂದವನೇ ಇನ್ನೂ ಐವತ್ತು ಪರ್ಸೆಂಟ್ ಹಣವನ್ನು ಕೊಡಿ ನಾಳೆ ಕೆಲಸ ಆರಂಭಿಸುತ್ತೇನೆ ಎಂದು ಕೇಳುತ್ತಾನೆ. ನೀನು ಕೆಲಸವೇ ಮುಗಿಸಿಲ್ಲ ಹೇಗೆ ಹಣ ಕೊಡುವುದು ಎಂದು ಹೇಳಿದಾಗ ಕಂಟ್ರ್ಯಾಕ್ಟರ್ ಗತ್ತಿನಿಂದ ನಾನು ಯಾರು ಗೊತ್ತೆ ನಾನು ಆ ಹಳ್ಳಿಯ ಶ್ರೀಮಂತನನ್ನು ಚಾಕು ಹಾಕಿದ್ದೇನೆ ಆ ಊರಿನ ವ್ಯಕ್ತಿಗೆ ಹೊಡೆದಿದ್ದೇನೆ ಯಾವ ಪೋಲಿಸ್ ಠಾಣೆಗೆ ಹೋದರು ನನ್ನದೇ ನಡೆಯುವುದು ಹೀಗೆಲ್ಲಾ ಹರಿಕಥೆ ಹೇಳಿದನು.
ಆಚಾರ್ಯರು ನಗುತ್ತಾ ನಿನ್ನ ಬಗ್ಗೆ ನನಗೆ ಈಗ ತಿಳಿಯಿತು ನಂತರ ತಮ್ಮ ಬ್ಯಾಗಿನಲ್ಲಿ ಚೂಪಾದ ಚಾಕುವನ್ನು ತೆಗೆದು ಹೇಳಿದರೂ ಇದು ಚೂಪಾಗಿ ಇದೆಯಾ ನೋಡು ನೀನು ಚಾಕುವೂ ಕೂಡ ತಂದಿಲ್ಲ ಮತ್ತೆ ಈಗಾಗಲೇ ನಾನು 3 ಸಾರಿ ಸಾವಿನಿಂದ ಗೆದ್ದು ಬಂದಿದ್ದೇನೆ.
ಸಾವಿಗೆ ಅಂಜಬಾರದು ಅದೇ ರೀತಿ ನಾನು ಬದುಕುತ್ತಿರುವವನು ನಾನು ಇಲ್ಲಿಯವರೆಗೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದ್ದೇನೆ ಸತ್ತರೂ ನನಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿ ಚಾಕು ತೆಗೆದುಕೊಂಡು ಚುಚ್ಚು ಎಂದರು ಇಷ್ಟು ನಿರ್ಭಯವಾಗಿ ಹೇಳಿದಾಗ ಕಂಟ್ರ್ಯಾಕ್ಟರ್ ಆಶ್ಚರ್ಯಚಕಿತನಾದ.
ಕಂಟ್ರ್ಯಾಕ್ಟರ್ ನನ್ನನ್ನು ಕ್ಷಮಿಸಿ ಎಂದು ಕೇಳಿದ ಬಾಕಿ ಕೆಲಸ ಆರಂಭಿಸಿದನು ನಾವು ಹೆದರಿದರೆ ಹೆದರಿಸುವವರು ತುಂಬಾ ಜಾಸ್ತಿ ಇರುತ್ತಾರೆ ಯಾರ ಜೊತೆ ಹೇಗೆ ಇರಬೇಕು ಎಂದು ಮೊದಲೇ ಅರಿತು ಎಚ್ಚರಿಕೆಯಿಂದ ಬದುಕೋಣ.
ಭಯಾನಕ ಪರಿಸ್ಥಿತಿಯಲ್ಲೂ
ಒಂದು ಊರಿನಲ್ಲಿ ಬಲ್ವಾನ್ ಅಗರ್ಭ ಶ್ರೀಮಂತ ಇರುತ್ತಾನೆ ಶ್ರೀಮಂತನಿಗೆ ಜಮೀನು ಹೊಲ ಗದ್ದೆ ತೋಟ ಮನೆ ಕೆಲವು ಪ್ರಾಣಿಗಳು ಕೂಡ ಇರುತ್ತವೆ ಇವನ ಹತ್ತಿರ ಕೆಲವು ದಿನ ಕೆಲಸ ಮಾಡಿದರೆ ಸಂಬಳ ಪಡೆದ ನಂತರ ಮತ್ತೆ ಕೆಲಸಗಾರರು ಬರುತ್ತಿರಲಿಲ್ಲ ಇವನು ಕೆಲಸಗಾರರಿಗೆ ಹುಡುಕುತ್ತಿರುತ್ತಾನೆ.
ಇಂಥ ಪರಿಸ್ಥಿತಿಯಲ್ಲಿ ಒಬ್ಬ ಯುವಕ ಕೆಲಸವನ್ನು ಕೇಳಿಕೊಂಡು ಬರುತ್ತಾನೆ ಆಗ ಶ್ರೀಮಂತನು ಎಲ್ಲವನ್ನು ವಿವರಿಸುತ್ತಾನೆ ನಂತರ ಯುವಕ ಹೆಚ್ಚು ಸಂಬಳವನ್ನು ನಿರೀಕ್ಷೆ ಮಾಡುತ್ತಾನೆ ಆಗ ಶ್ರೀಮಂತ ಏನಾದರೂ ಹೋದರೆ ನಿನದೆ ಜವಾಬ್ದಾರಿ ನೀನು ಕಟ್ಟಿ ಕೊಡಬೇಕು ಎಂದಾಗ ಅದಕ್ಕೆ ಯುವಕನು ಭಯಾನಕ ಪರಿಸ್ಥಿತಿಯಲ್ಲಿ ನಾನು ಸುಖವಾಗಿ ಇರುತ್ತೇನೆ ನೀವು ಹೆದರಿಕೊಳ್ಳಬೇಡಿ ಎಂದು ಹೇಳುತ್ತಾನೆ.
ಶ್ರೀಮಂತ ಯಾರೂ ಕೆಲಸಕ್ಕೆ ಸಿಗುತ್ತಿಲ್ಲ ಇವನೆ ಗತಿಯೆಂದು ಯುವಕನನ್ನು ಬೇರೆ ದಾರಿ ಇಲ್ಲದೆ ಸೇರಿಸಿಕೊಳ್ಳುತ್ತಾನೆ. ದಿನನಿತ್ಯವೂ ಇವನ ಕೆಲಸವನ್ನು ಗಮನಿಸುತ್ತಾರೆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಚಾಣಾಕ್ಷತನದಿಂದ ಪ್ರಾಮಾಣಿಕವಾಗಿ ಶ್ರದ್ಧೆ ಭಕ್ತಿಯಿಂದ ಕೆಲಸವನ್ನು ಮಾಡುತ್ತಿರುತ್ತಾನೆ.
ಒಂದು ರಾತ್ರಿ ತುಂಬಾ ಜೋರಾಗಿ ಬಿರುಗಾಳಿ ಜೊತೆಗೆ ಧಾರಾಕಾರವಾಗಿ ಮಳೆ ಬರುತ್ತಿರುತ್ತದೆ. ಯುವಕನನ್ನು ನೋಡಿದ್ರೆ ಆರಾಮಾಗಿ ಮಲಗಿರುತ್ತಾನೆ ಶ್ರೀಮಂತ ನೋಡಿ ಕೆಲಸ ಮಾಡುವ ಸಮಯದಲ್ಲಿ ನಿದ್ದೆ ಮಾಡುತ್ತಿದ್ದೀಯಾ ಎಂದು ಇವನನ್ನು ಕೆಲಸದಿಂದ ಓಡಿಸಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ ಆಗ ಯುವಕನು ನಿಶ್ಚಿಂತೆಯಿಂದ ಮಾಲೀಕರೇ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ ನಾನು ಎಲ್ಲವನ್ನು ಭದ್ರಪಡಿಸಿದ್ದೇನೆ ಎಂದು ಹೇಳುತ್ತಾನೆ ನಂತರ ಹೋಗಿ ಶ್ರೀಮಂತನು ನೋಡಿದನು.
ಮನೆಯ ಕಿಟಕಿ ಬಾಗಿಲುಗಳು ಸರಿಯಾಗಿ ಮುಚ್ಚಿದನು ಯಾವುದೇ ರೀತಿ ನೀರು ಬರಲು ಸಾಧ್ಯವಿರಲಿಲ್ಲ ಆಚೆ ಕುರಿಗಳು ಒಂದು ಕಡೆ ಭದ್ರವಾಗಿ ಕಟ್ಟಿದನು ನೀರು ಜಾಸ್ತಿ ಬಂದು ಸೇರಿದರು ಅದಕ್ಕೆ ಸರಿಯಾದ ವ್ಯವಸ್ಥೆ ಮಾಡಿದನು ನಂತರ ಶ್ರೀಮಂತನಿಗೆ ಅರ್ಥವಾಯ್ತು ಇವನು ಸಂಬಳ ಹೆಚ್ಚಾಗಿ ಏಕೆ ಕೇಳಿದನೆಂದು ಅರಿವಾಯಿತು. ಎಲ್ಲರು ಒಪ್ಪುವಂತೆ ನಾವು ಕೆಲಸ ಮಾಡೋಣ. ನಾನು ಸಂಬಳ ಪಡೆಯುವಷ್ಟು ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆಯೇ?
ನಾನು ಸ್ಟಾರ್ಟ್ ಮಾಡಬಲ್ಲೆ
ನಾವೆಲ್ಲರೂ ಸೇರಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿದ್ದೆವು ವಾರ್ಷಿಕೋತ್ಸವ ತುಂಬಾ ಚೆನ್ನಾಗಿ ನಡೆಯಿತು ಎಲ್ಲವೂ ಮುಗಿದ ಬಳಿಕ ನನ್ನ ಸ್ನೇಹಿತನ ಬೈಕ್ ನ್ನು ಸ್ಟಾರ್ಟ್ ಮಾಡಿದರೆ ಸ್ಟಾರ್ಟ್ ಆಗುತ್ತಿರಲಿಲ್ಲ ಅದರಲ್ಲಿ ಇನ್ನೊಬ್ಬನು ಆಟೊಮೊಬೈಲ್ ಇಂಜಿನಿಯರಿಂಗ್ ಆಗಿದ್ದನು.
ಅವನಿಗೆ ಎಲ್ಲವೂ ಗೊತ್ತು ಬೋರ್ ಎಂದರೇನು ಆಕ್ಸಲ್ ಅಂದರೇನು ಇಂಜಿನ್ ಹೇಗಿರುತ್ತೆ ಹೇಗೆ ಕೆಲಸ ಮಾಡುತ್ತೆ ಎಲ್ಲವೂ ಗೊತ್ತು ಆದರೆ ಬೈಕ್ ಸ್ಟಾರ್ಟ್ ಮಾಡಲು ಆಗುತ್ತಿಲ್ಲ ಶತ ಪ್ರಯತ್ನ ಪಟ್ಟಿದ್ದ ಮೇಲೂ ಆಗಲಿಲ್ಲ ಅಷ್ಟರಲ್ಲಿ ವಿಕ್ಷಾತ್ ವಿದ್ಯಾರ್ಥಿ ಬಂದನು.
ಅವನು ಓದುವುದರಲ್ಲಿ ಗಣಿತದಲ್ಲಿ ಎಲ್ಲದರಲ್ಲೂ ಹಿಂದೆಯೇ ಎಂದು ಹೇಳಬೇಕು ಅವನ ಬಂದು ನೋಡಿದ ತಕ್ಷಣ ಸರ್ ನೀವು ಈ ಕಡೆ ಬನ್ನಿ ನಾನು ಸ್ಟಾರ್ಟ್ ಮಾಡಬಲ್ಲೆ ಎಂದನು ಅವನ ಉತ್ಸಾಹ ನೋಡಿ ನಾವು ಬಿಟ್ಟೆವು ಒಂದು ಕಡೆ ನೋಡಿದನು ನಂತರ ಒಂದು ವೈರನ್ನು ತೆಗೆದು ಡೈರಕ್ಟ್ ಮಾಡಿದನು.
ನಂತರ ಸ್ಟಾರ್ಟ್ ಮಾಡಿದ್ರೆ ಸ್ಟಾರ್ಟ್ ಆಯ್ತು ಆಗ ಹುಡುಗನಿಗೆ ಕೇಳಿದರೆ ಹೇಗೆ ಸ್ಟಾರ್ಟ್ ಆಯಿತು ಎಂದು ಕೇಳಿದೆವು ಇಗ್ನೇಷನ್ ಹೋಗಿದೆ ಅದಕ್ಕೆ ನಾನು ಡೈರೆಕ್ಟಾಗಿ ಸ್ಟಾರ್ಟ್ ಮಾಡಿದ್ದೇನೆ ಎಂದು ಹೇಳಿದನು ತುಂಬ ಸುಲಭವಾಗಿ ಮಾಡಿದನು ನಿನಗೆ ಹೇಗೆ ಗೊತ್ತು ಎಂದು ಕೇಳಿದವು ಸರ್ ನಮ್ಮ ತಂದೆ ಮೆಕಾನಿಕ್ ಆಗಿರುವುದರಿಂದ ನನಗೆ ಈ ಕೆಲಸ ಗೊತ್ತು ಎಂದು ಹೇಳಿದನು.
ನನ್ನ ಸ್ನೇಹಿತ ಇಂಜಿನಿಯರ್ ಆಗಿದ್ದರೂ ಅವನಿಗೆ ಎಲ್ಲಾ ಗೊತ್ತಿದ್ದರೂ ಕೂಡ ಬೈಕನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗಲಿಲ್ಲ ಆದರೆ ಹುಡುಗ ಅಷ್ಟು ಓದಿಲ್ಲದಿದ್ದರೂ ಐದೇ ನಿಮಿಷಕ್ಕೆ ಬೈಕನ್ನು ಸ್ಟಾರ್ಟ್ ಮಾಡಿದನು ಇವನಿಗೆ ವಿದ್ಯೆ ಇದೆ ಅವನಿಗೆ ಜ್ಞಾನ ಇದೆ ಅನುಭವವಿದೆ ಜ್ಞಾನವೇ ಬೇರೆ ವಿದ್ಯಾಭ್ಯಾಸವೇ ಬೇರೆ ವಿದ್ಯೆಯನ್ನು ಕಲಿಯುವುದರ ಜೊತೆ ಜೊತೆಗೆ ಜ್ಞಾನ ಹಾಗೂ ಕೌಶಲ್ಯಗಳನ್ನು ಕಲಿಯುತ್ತಿರೋಣ.