ಚಿಕ್ಕವರನ್ನು ಸತಾಯಿಸಿದರೆ

ಹಳ್ಳಿಯಲ್ಲಿ ವಯಸ್ಸಾದ ಅಜ್ಜಿಯು ಹಲವಾರು ಕೋಳಿಗಳನ್ನು ಸಾಕಿರುತ್ತಾರೆ ಅದರಲ್ಲಿ ಒಂದು ಕೋಳಿ ಮಾತ್ರ ಬುದ್ಧಿವಂತ ಕೋಳಿ ಎಲ್ಲಾ ಕೋಳಿಗಳು ಆಹಾರ ತಿನ್ನಲಿಕ್ಕೆ ಕೆದಕುತ್ತಿದ್ದಾಗ ಒಂದು ವಜ್ರ ಸಿಗುತ್ತದೆ ಇದನ್ನು ನೋಡಿ ನನ್ನ ಅಜ್ಜಿಗೆ ಕೊಟ್ಟರೆ ಇದು ಅಜ್ಜಿಗೆ ಸಹಾಯವಾಗಬಹುದು ಎಂದು ಕೊಕ್ಕಿನಲ್ಲಿ ಹಿಡಿದುಕೊಂಡು ಸಂತೋಷದಿಂದ ಹೋಗುತ್ತಿರುತ್ತದೆ.

 ಅಷ್ಟರಲ್ಲಿ ಆ ಹಳ್ಳಿಯ ಶ್ರೀಮಂತ ಅದೇ ದಾರಿಯಲ್ಲಿ ಹೋಗುತ್ತಿರುತ್ತಾನೆ ಕೋಳಿ ಕೊಕ್ಕಿನಲ್ಲಿ ವಜ್ರವನ್ನು ನೋಡಿ ದುರಾಸೆಯಿಂದ ಕೋಳಿಗೆ ಹೇಳುತ್ತಾನೆ ಆ ವಜ್ರ ನನಗೆ ಕೊಡು ಎಂದಾಗ ಕೋಳಿ ಹೇಳುತ್ತದೆ ಇದು ನನ್ನನ್ನು ಸಾಕಿದವರಿಗೆ ಸೇರಬೇಕಾದ್ದು ನಿನಗೆ ಸೇರುವುದಿಲ್ಲ ಎಂದು ಮೃದುವಾಗಿ ಹೇಳಿದಾಗ ಆ ಮಾಲೀಕನು ನನಗದು ಬೇಕೇ ಬೇಕು ಎಂದು ಗದರಿಸಿ ಹೊಡೆದು ಕಿತ್ತುಕೊಳ್ಳುತ್ತಾನೆ.

 ಕೋಳಿಯು ಹೇಳುತ್ತೆ ವಜ್ರವನ್ನು ನನಗೆ ಕೊಟ್ಟು ಬಿಡು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತದೆ. ಮಾಲೀಕನಿಗೆ ಕೋಪ ಬಂದು ನೀನು ಇದ್ದರೆ ತುಂಬಾ ತೊಂದರೆ ಎಂದು ಕೋಳಿಯನ್ನು ಹಿಡಿದು ಬಾವಿಯಲ್ಲಿ ಹಾಕಿಬಿಡುತ್ತಾನೆ ನಂತರ ಬಾವಿಯಿಂದಲೂ ಶಬ್ದ ಬರುತ್ತದೆ.

ನನ್ನ ವಜ್ರ ನನಗೆ ಕೊಡು ಎಂದು ಕೋಳಿ ಹೇಳುತ್ತದೆ ಆಗ ಮಾಲಿಕನು ಯೋಚಿಸುತ್ತಾನೆ ಈ ಕೋಳಿಗೆ ಹಿಡಿದು ಸಾಯಿಸಿ ಬಿಟ್ಟರೆ ಎಂದು ಸಾಯಿಸಲು ಓಡಿಸಿಕೊಂಡು ಬರುತ್ತಾನೆ ಬುದ್ಧಿವಂತ ಕೋಳಿಯು ಆಕಡೆ ಈ ಕಡೆ ಹೋಗಿ ಹಳ್ಳವನ್ನು ಹಾರುತ್ತದೆ ಆಗ ಅದರಲ್ಲಿ ಬಿದ್ದು ಮಾಲೀಕ ಕಾಲು ಮುರಿದುಕೊಳ್ಳುತ್ತಾನೆ.

ಕೋಳಿ ಹೇಳುತ್ತದೆ ಈಗಲಾದರೂ ವಜ್ರ ಕೊಡು ಎಂದಾಗ ಅದಕ್ಕೆ ಮಾಲೀಕ ಒಪ್ಪುವುದಿಲ್ಲ ನಿನ್ನನ್ನು ನಾನು ಬಿಡುವುದಿಲ್ಲ ಎಂದು ಮತ್ತೆ ಕೋಳಿಗೆ ಹೊಡೆಯಲು ಬರುತ್ತಾನೆ ಬುದ್ಧಿವಂತ ಕೋಳಿ ಜೇನು ಗೂಡಿಗೆ ಹೋಗಿ ಜೇನುಗೂಡನ್ನು ಅಲ್ಲಾಡಿಸಿಬಿಡುತ್ತದೆ.

 ಹಲವಾರು ಜೇನು ನೊಣಗಳು ಬಂದು ಮಾಲೀಕನನ್ನು ಮುತ್ತಿಕೊಳ್ಳುತ್ತವೆ ನಂತರ ನಿಧಾನವಾಗಿ ಕೋಳಿಯು ವಜ್ರವನ್ನು ಮಾತ್ರ ಎತ್ತಿಕೊಂಡು ತನ್ನ ಸಾಕಿದವರನ್ನು ಕೊಡುತ್ತದೆ.

 ನಮಗೆ ಶಕ್ತಿ ಇದೆಯೆಂದು ಚಿಕ್ಕವರ ಮೇಲೆ ಬಲಪ್ರಯೋಗ ಮಾಡಿದರೆ ಚಿಕ್ಕವರು ದೊಡ್ಡವರಿಗಿಂತ ಹೆಚ್ಚು ಕೆಲಸವನ್ನು ಮಾಡಬಲ್ಲವರಾಗಿರುತ್ತಾರೆ ಆದುದರಿಂದ ಯಾರಿಗೂ ಕಡೆಗಣಿಸದಿರೋಣ. ನನಗೆ ಚಿಕ್ಕವನು ಎಂದು ಸತಾಯಿಸಿದಾಗ ಸರಿಯಾದ ಪಾಠ 

ಬೆಂಕಿ ಇಲ್ಲದೆ ಸುಡಬಲ್ಲೆ

ಒಂದು ಸಾರಿ ಎಲ್ಲಾ ದುಷ್ಟ ಶಕ್ತಿಗಳು ಸಭೆ ಸೇರಿದವು ಅದರಲ್ಲಿ ಯಾರು ಹೆಚ್ಚು ಶಕ್ತಿಶಾಲಿಯಾಗಿದ್ದೀರಿ ಎಂದು ಪರೀಕ್ಷಿಸಬೇಕು ಎಂದು ದುಷ್ಟಶಕ್ತಿ ಹೇಳಿತು ಅದಕ್ಕೆ ಎಲ್ಲಾ ದುಷ್ಟ ಶಕ್ತಿಗಳು ಒಪ್ಪಿದವು.

 ಮೊದಲನೆಯದಾಗಿ, ಬಂದು ಸುಳ್ಳು ದುಷ್ಟ ಶಕ್ತಿ ಹೇಳಿತು ಕ್ಷಣಗಳಲ್ಲಿ ನಾನು ಮನುಷ್ಯರನ್ನು ಮೃಗಗಳನ್ನಾಗಿ ಮಾಡುತ್ತೇನೆ ಎಷ್ಟೇ ದೊಡ್ಡವರು ಪ್ರಮುಖರಾಗಿದ್ದರು ಪ್ರಸಿದ್ಧರಾಗಿದ್ದರು ಕೂಡ ಅವರನ್ನು ಹಾಳು ಮಾಡುತ್ತೇನೆ ಎಂದು ಹೇಳಿತು.

ನಾನು ಕೋಪ ಸೌಮ್ಯವಾಗಿ ಹೇಳಿತು ನಾನು ಬೆಂಕಿ ಆದ್ದರಿಂದ ನಾನು ಎಲ್ಲರನ್ನೂ ಬೆಂಕಿ ಇಲ್ಲದೆ ಸುಡಬಲ್ಲೆ. ಲಾಭ ಅಣ್ಣಾ ತಮ್ಮಾ ನೆರೆಹೊರೆಯವರು ಎಲ್ಲಾ ಸಂಬಂಧಗಳನ್ನು ಹಾಳು ಮಾಡುತ್ತೇನೆ ಎಂದು ಹೆಮ್ಮೆಯಿಂದ ಹೇಳಿತು. ದುರಾಸೆ ನಾನು ಮೋಹ ಪಾಶಕ್ಕೆ ಸಿಲುಕಿಸಿ ಇಡಿ ಬದುಕೆ ಕೊರಗುವಂತೆ ಮಾಡುತ್ತೇನೆ.

ಲಾಭ ನಾನು ಹೋದರೆ ಸಾಕು ಎಂಥ ಮನುಷ್ಯರೇ ಆಗಿದ್ದರೂ ಅವರು ಕ್ಷಣಾರ್ಧದಲ್ಲಿ ರಾಕ್ಷಸರಾಗಿ ಬದಲಾಗುತ್ತಾರೆ ಇಡೀ ಸಂಬಂಧವನ್ನು ಕಳಚಿಕೊಳ್ಳುತ್ತಾರೆ ಎಂದು ಹೇಳಿತು. ಆಲಸ್ಯ, ದ್ವೇಷ, ಅಸೂಯೆ, ಆತಂಕ, ಜೂಜು, ಕುಡಿತ. ಎಲ್ಲವೂ ಒಂದೊಂದಾಗಿ ಬಂದು ತಮ್ಮ ಶಕ್ತಿಯ ಪ್ರದರ್ಶನ ಮಾಡಿದರು ಎಲ್ಲರೂ ಹೇಳಿದ ಮೇಲೆ ಕೊನೆಗೆ ಬಂದು ದುಷ್ಟ ಶಕ್ತಿ ಬಂದು ಹೇಳಿತು.

 ನಾನು ಎಲ್ಲರಿಗೂ ಒಳ್ಳೆಯದನ್ನೇ ಹೇಳುತ್ತೇನೆ ನಂತರ ಮನವರಿಕೆಯೂ ಮಾಡುತ್ತೇನೆ ನಂತರ ಇಂದಲ್ಲ ನಾಳೆ ಮಾಡಿದರೆ ಆಯಿತು ಎಂದು ಹೇಳುತ್ತೇನೆ ಎಂದಿತು ಈಗಲೇ ಮಾಡುವ ಅವಶ್ಯಕತೆ ಇಲ್ಲ ನಾಳೆ ಮಾಡಿದರೆ ಆಯಿತು ಮುಂದಿನ ವಾರ ಮುಂದಿನ ವರ್ಷಮಾಡಿದರೆ ಆಯಿತು ಎಂದು ದಾರಿ ತಪ್ಪಿಸುತ್ತೇನೆ ಎಂದು ಹೇಳಿತು ಆಗ ಎಲ್ಲಾ ದುಷ್ಟ ಶಕ್ತಿಗಳು ಒಪ್ಪಿದವು. ನಾನು ನಾಳೆ ನೋಡೋಣ ಎಂದುಸುವರ್ಣ ಅವಕಾಶವನ್ನು ಕಳೆದುಕೊಂಡಿದ್ದೇನೆಯೇ?

ಉಪ್ಪು ನೀರು ಕುಡಿದನು

ಒಬ್ಬ ಸಹನಶೀಲ ರಾಜನು ತನ್ನ ಸೈನಿಕರ ಜೊತೆ ಸಮುದ್ರಯಾನ ಮಾಡ ಬೇಕಾಯಿತು ಗುಂಪಿನಲ್ಲಿ ಒಬ್ಬ ಸಿಪಾಯಿ ಮಾತ್ರ ಮೊದಲನೇ ಸಾರಿ ಹಡಗಿನಲ್ಲಿ ಕುಳಿತನು ಹಡಗು ಮುಂದೆ ಹೋದಂತೆ ಶಬ್ದ ಮಾಡುತ್ತಿದ್ದಂತೆಯೇ ಇವನಿಗೆ ಗಾಬರಿಯಾಗಿ ಕಿರುಚುತ್ತಿದ್ದನು ಭಯಪಡುತ್ತಿದ್ದನು ಆತಂಕ ಪಡುತ್ತಿದ್ದನು.

 ಯಾರು ಎಷ್ಟೇ ಹೇಳಿದರು ಸಮಾಧಾನಪಡಿಸಿದರು ಅವನ ಸದ್ದು ಕಡಿಮೆ ಮಾಡುತ್ತಿಲ್ಲ ಇದು ರಾಜನ ಕಿವಿಗೂ ಬಿತ್ತು ಆಗ ಮುಖ್ಯ ಮಂತ್ರಿಯನ್ನು ಕರೆದು ಹೇಳಿದರು ಹೇಗಾದರೂ ಮಾಡಿ ಅವನ ಶಬ್ದವನ್ನು ನಿಲ್ಲಿಸು ಎಂದು ರಾಜರು ಹೇಳಿದರು.

 ಮಂತ್ರಿ ಹೋದವನೆ ಇಬ್ಬರನ್ನು ಕರೆದುಕೊಂಡು ಹೋಗಿ ಕಿರಿಚುತ್ತಿದ್ದವನಿಗೆ ಕೈ ಕಾಲು ಹಿಡಿದು ಸಮುದ್ರಕ್ಕೆ ಎಸೆದು ಬಿಟ್ಟರು ಸಮುದ್ರಕ್ಕೆ ಎಸೆಯುತ್ತಿದ್ದಂತೆಯೇ ಇನ್ನೂ ಗಾಬರಿಗೊಂಡು ಉಪ್ಪು ನೀರು ಕುಡಿದನು ನಂತರ ಉಸಿರಾಡಲು ಕಷ್ಟವಾಗುತ್ತಿದೆ ಇನ್ನೇನು ಮುಳುಗುತ್ತಿದ್ದನು ಆಗ ಹಡಗಿನ ಒಂದು ಹಗ್ಗವನ್ನು ಹಿಡಿದು ಕೊಂಡನು ಸ್ವಲ್ಪ ದೂರ ಹಗ್ಗವನ್ನು ಹಿಡಿದುಕೊಂಡು ಬಂದನು.

 ನಾನು ಸದ್ದು ಮಾಡುವುದಿಲ್ಲ ನನಗೆ ಕರೆದುಕೊಳ್ಳಿ ಎಂದು ಬೇಡಿದನು ಆಗ ಮಂತ್ರಿಯೂ ಅರಿತು ಅವನನ್ನು ಮೇಲಕ್ಕೆ ಕರೆದರು ಆಗ ಅವನು ಸದ್ದು ಮಾಡದೆ ಮೌನವಾಗಿ ಕುಳಿತುಬಿಟ್ಟನು.

 ಸದ್ದು ಬರುತ್ತಿರಲಿಲ್ಲ ಮಂತ್ರಿಯನ್ನು ಕರೆದು ರಾಜನು ಕೇಳಿದನು ಸದ್ದು ಬರುತ್ತಿಲ್ಲವಲ್ಲ ಏನು ಮಾಡಿದೆ ಎಂದಾಗ ಮಂತ್ರಿ ವಿವರಿಸಿದ ಇಲ್ಲಿ ಕಷ್ಟ ಎಂದು ತಿಳಿದಿದ್ದ ಅದಕ್ಕೆ ಸಮುದ್ರದಲ್ಲಿ ಎಸೆದೆ ಅಲ್ಲಿ ಉಪ್ಪು ನೀರು ಕುಡಿದು ಉಸಿರಾಡುವುದಕ್ಕೂ ಇನ್ನಷ್ಟು ಕಷ್ಟ ಜಾಸ್ತಿಯಾಯಿತು.

 ಅವನು ಯೋಚಿಸಿದನು ಈ ಕಷ್ಟಕ್ಕಿಂತ ಹಡಗಿನಲ್ಲಿಯೇ ಕುಳಿತುಕೊಳ್ಳುವುದು ಒಳ್ಳೆಯದು ಎಂದು ಅರಿತನು ಅದಕ್ಕೆ ಅವನು ಹಾಗೆ ಸುಮ್ಮನೆ ಕುಳಿತುಕೊಂಡಿದ್ದಾನೆ ಎಂದು ಹೇಳಿದನುರಾಜನಿಗೆ ಮಂತ್ರಿಯ ಬುದ್ಧಿವಂತಿಕೆಗೆ ಸಂತೋಷವಾಯಿತು.

 ನಾವು ಕೂಡ ಅಷ್ಟೇ ಜೀವನದಲ್ಲಿ ಯಾವುದಾದರೂ ಕಷ್ಟಕ್ಕೆ ಸಿಲುಕಿದಾಗ ಬೇರೆಯವರು ಚೆನ್ನಾಗಿ ಬದುಕುತ್ತಿದ್ದಾರೆ ನಮ್ಮ ಕಷ್ಟವೇ ದೊಡ್ಡದು ಎಂದು ಅರಿತುಕೊಳ್ಳುತ್ತೇವೆ ನಮಗೆ ಸಮಾಧಾನ ಬರಬೇಕಾದ್ರೆ ನಮಗಿಂತ ಒಂದು ಹಂತ ಕೆಳಗೆ ಇರುವವರನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುತ್ತದೆ ನನಗೆ ಚಪ್ಪಲಿ ಇಲ್ಲವಲ್ಲ ಎಂದು ಕೊರಗಿದರೆ ಇನ್ನೊಬ್ಬರಿಗೆ ಕಾಲೇ ಇರುವುದಿಲ್ಲ. ನಾನು ಏನನ್ನು ನೋಡಿ ನನ್ನನ್ನು ನಾನು ಸಮಾಧಾನವಾಗಿದ್ದೇನೆ?

ಕಲಿಸಿದ್ದೇನೆಯೇ?

ಒಂಟಿಯಾಗಿದ್ದರೆ

 ಒಂದು ಸಾರಿ ಒಂದು ಕೋತಿ ದುಃಖದಿಂದ ಬೇಸರವಾಗಿ ಸಾಯಲು ಬಯಸಿತು, ನಂತರ ಮಲಗಿರುವ ಕಾಡಿನ ಸಿಂಹದ ಕಿವಿಗಳನ್ನು ಜೋರಾಗಿ ಎಳೆಯಿತು ಕಾಡಿನ ಸಿಂಹ ಕೋಪದಿಂದ ಗರ್ಜಿಸಿ, ಕಿವಿಗಳನ್ನು ಎಳೆದವರು ಯಾರು? ಎಂದಿತು.

  ಸಾವನ್ನು ಆಹ್ವಾನಿಸಿದವರು ಯಾರು? ಎಂದು ಕೇಳಿತು ಕೋತಿ ನಾನೇ ಎಂದು ಧೈರ್ಯದಿಂದ ಹೇಳಿತು. ಗೆಳೆಯರು ಇಲ್ಲದೆ ನನಗೆ ಬಹಳ ಬೇಸರವಾಗಿದೆ ಆದುದರಿಂದ ಹತಾಶೆಯಿಂದ ಸಾಯಲು ಬಂದಿದ್ದೇನೆ. ನನ್ನನ್ನು ಕೊಲ್ಲು? ಎಂದಿತು.

 ಕಾಡಿನ ಸಿಂಹ ಮುಗುಳ್ ನಗುತ್ತಾ ಹೇಳಿತು ನನ್ನ ಕಿವಿಗಳನ್ನು ನೀನು ಎಳೆಯುವಾಗ ಇತರರು ಯಾರದರೂ ನೋಡಿದರೇನು? ಕೋತಿ ಇಲ್ಲ ಎಂದು ಹೇಳಿತು.

 ಇನ್ನೂ ಕೆಲವು ಸಾರಿ ಕಿವಿಗಳನ್ನು ಎಳೆ, ಬಹಳ ಹಿತವೆನಿಸುತ್ತದೆ ಎಂದಿತು. ಒಂಟಿಯಾಗಿದ್ದರೆ ಕಾಡಿನ ರಾಜನಿಗೂ ಬೇಸರವಾಗುತ್ತದೆ ಹಾಗಾಗಿ ನಿಮ್ಮ ಗೆಳೆಯರ ಸಂಪರ್ಕದಲ್ಲಿರಿ, ಅವರ ಕಿವಿಗಳನ್ನು ಕೈಗಳನ್ನು ಮೂಗನ್ನು ಎಳೆಯುತ್ತಿರಿ, ಯಾವಾಗಲೂ ನಗುತ್ತೀರಿ ಮೋಜು ಮಸ್ತಿ ಮಾಡಿ, ಹಳೆಯ ಗೆಳೆಯರೊಡನೆ ಸಂಪರ್ಕದಲ್ಲಿರೋಣ.

ಉಚಿತವಾಗಿ ತಿನ್ನಿಸುತ್ತಾರೆ 

ಹಲವಾರು ವರ್ಷಗಳ ಹಿಂದೆ ಮೀನನ್ನು ಹಿಡಿಯಲು ಎರೆಹುಳುವನ್ನು ಹಾಕುತ್ತಾರೆ ಎರೆಹುಳುವನ್ನು ತಿನ್ನಲು ಮೀನುಗಳು ಬಂದು ಸಿಕ್ಕಿಕೊಳ್ಳುತ್ತವೆ ಬೇಟೆಗಾರರು ಅಷ್ಟೆ ಬಲೆ ಹಾಕಿ ಅದರಲ್ಲಿ ಕಾಳು ಕಡ್ಡಿ ಹಾಕಿರುತ್ತಾರೆ ಅದರಿಂದ ಪಕ್ಷಿಗಳನ್ನು ಹಿಡಿಯುತ್ತಾರೆ.

 ಕುರಿಮರಿ ಕಟ್ಟಿದಾಗ ಕುರಿಮರಿಯನ್ನು ತಿನ್ನಲು ಬೇರೆ ಪ್ರಾಣಿಗಳು ಬಂದಾಗ ಆ ಪ್ರಾಣಿಗಳನ್ನು ಹಿಡಿಯುತ್ತಾರೆ ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೆ ಇಂದು ವ್ಯಾಪಾರ ನಡೆಯಬೇಕಾದರೆ ದೊಡ್ಡ ಶೋ ರೂಂಗೆ ಹೋದರೆ ಸಾಕು ನಿಮ್ಮನ್ನು ಗೌರವ ಕೊಡುತ್ತಾರೆ ಕುಡಿಯಲು ಜ್ಯೂಸ್ ಅನ್ನು ಕೊಡುತ್ತಾರೆ.

 ಕೆಲವರು ಸ್ಯಾಂಪಲ್ ಗಾಗಿ ತಿಂದು ನೋಡಿ ಎಂದು ರುಚಿರುಚಿಯಾದ ಆಹಾರವನ್ನು ತಿನ್ನಲು ಕೊಡುವವರು ಇದ್ದಾರೆ. ಬುದ್ಧಿವಂತ ವ್ಯಾಪಾರಿಗಳು ಬರೀ ಇದನ್ನು ನೋಡಿ ನೀವು ಖರೀದಿಸಬೇಕೆಂಬ ನಿಯಮ ಇಲ್ಲ ಎಂದು ಆಯಸ್ಕಾಂತದಂತೆ ಆಕರ್ಷಿಸುತ್ತಾರೆ. ಮೊದಲು ಉಚಿತವಾಗಿ ತಿನ್ನಿಸುತ್ತಾರೆ ನಂತರ ಮಾತಿನಲ್ಲೇ ಮರುಳು ಮಾಡುತ್ತಾರೆ.

 ಉಚಿತವಾಗಿ ತಿಂದ ಮೇಲೆ ಹಾಗೆ ಬರಲಿಕ್ಕೆ ಸಾಧ್ಯವೇ ಸ್ವಲ್ಪವಾದರೂ ಖರೀದಿ ಮಾಡೇ ಮಾಡುತ್ತೇವೆ ಕೆಲವು ಅಂಗಡಿಗಳಲ್ಲಿ ಕಾಲಿಡುತ್ತಿದ್ದಂತೆಯೇ ಸುಂದರಿಯರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ ಆ ನಗುವಿಗೆ ಮರಳಿ ಬೇಕಿರುವುದನ್ನು ಬಿಟ್ಟು ಬೇಕಿಲ್ಲದೆ ಇರುವುದನ್ನು ಖರೀದಿ ಮಾಡಿ ಬರುತ್ತಾರೆ. ಉಚಿತವಾಗಿ ತಿಂದು ಬೇಡದೆ ಇರುವ ವಸ್ತುವನ್ನು ಖರೀದಿ ಮಾಡಿದ್ದೇನೆಯೇ?

 ವ್ಯಾಪಾರಿಗಳು ಬಿಸಿನೆಸ್ ಸೈಕಾಲಜಿಯನ್ನು  ಆಯುಧವಾಗಿ ಬಳಸುತ್ತಾರೆ. ನಾವು ಕೆಲವು ಸಾರಿ  ಗೊತ್ತಿದ್ದು ಈ ರೀತಿಯ ಬಲೆಯಲ್ಲಿ ಸಿಕ್ಕಿ ಬೀಳುತ್ತೇವೆ ನಂತರ ತುಂಬ ಪಶ್ಚಾತ್ತಾಪ ಪಡುತ್ತೇವೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರೋಣ. ವ್ಯಾಪಾರಿಗಳ ಅಮೃತದಂತಹ ಮಾತಿಗೆ ಬಲಿಯಾಗಿ ಕಡಿಮೆ ಬೆಲೆಯ ವಸ್ತುವನ್ನು ಹೆಚ್ಚು ಬೆಲೆ ಕೊಟ್ಟು ಖರೀದಿಸಿದ್ದೇನೆಯೇ?

Leave a Comment