ಕೊನೆಗೆ ಏನು ಸಿಗಲಿಲ್ಲ

ಒಂದು ಊರಿನಲ್ಲಿ ಒಬ್ಬ ಅತುರಗಾರ ಜಮೀನ್ದಾರನು ಇದ್ದನು ಒಳ್ಳೆಯ ಸಂಸಾರ ಎಲ್ಲರೂ ಸುಖವಾಗಿ ಇದ್ದರು ಆದರೆ ಜಮೀನ್ದಾರನಿಗೆ ಬೇಟೆ ಯಾಡುವುದು ಎಂದರೆ ತುಂಬ ಇಷ್ಟ ಬೇಟೆಯಾಡುವ ಪರಿಣಿತಿಯನ್ನು ಸಹ ಚೆನ್ನಾಗಿ ಪಡೆದನು ನಂತರ ಬೇಟೆಯಾಡಲು ಸಂಸಾರ ಸಮೇತವಾಗಿ ಹೊರಟರು.

 ಒಂದು ಕಡೆ ಕೃತಕ ಗುಡಿಸಿಲನ್ನು ನಿರ್ಮಾಣ ಮಾಡಿಕೊಂಡು ಅಲ್ಲೇ ಇದ್ದರು ನಂತರ ಬೇಟೆಗೆ ಸಿದ್ಧನಾಗಿ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಆಚೆ ಬಂದನು ಸ್ವಲ್ಪ ಸಮಯದ ನಂತರ ಒಂದು ಮೊಲ ಬಂತು ಇದನ್ನು ನೋಡಿ ಸರಿಯಾಗಿ ಮೊಲಕೆ ಗುರಿ ಇಟ್ಟನು ಅಷ್ಟರಲ್ಲಿ ಒಂದು ಕುರಿ ಓಡಿ ಬರುತ್ತಿತ್ತು.

 ನಂತರ ಮೊಲಕ್ಕೆ ಗುರಿ ಇಡುವ ಬದಲು ಕುರಿಗೆ ಗುರಿಯಿಟ್ಟನು ಅಷ್ಟರಲ್ಲಿ ಒಂದು ಶಬ್ದವಾಯಿತು ಆಗ ಒಂದು ಜಿಂಕೆ ಕಾಣಿಸಿತು ನಂತರ ಜಿಂಕೆಯತ್ತ ಗುರಿಯನ್ನು ಬದಲಿಸಿದನು ಇನ್ನೇನು ಬಾಣ ಬಿಡಬೇಕು ಅಷ್ಟರಲ್ಲಿ ಆ ಕಡೆಯಿಂದ ಒಂದು ಹುಲಿಯ ಮರಿ ಬರುತ್ತಿತ್ತು.

 ಇದನ್ನು ನೋಡಿ ಮತ್ತೆ ಗುರಿ ಬದಲಿಸಿ ಹುಲಿಯಾ ಮರಿಗೆ ಗುರಿ ಇಟ್ಟನು ಇದನ್ನು ನಾನು ಬೇಟೆಯಾಡಿದರೆ ನನಗೆ ಗೌರವ ಹೆಚ್ಚುತ್ತದೆ ಎಂದು ಯೋಚಿಸಿದನು ಇನ್ನೇನು ಬಾಣ ಬಿಡಬೇಕು ಎನ್ನುವಷ್ಟರಲ್ಲಿ ಮೇಲಿನಿಂದ ಒಂದು ಸದ್ದಾಯ್ತು ಅದೇನು ಅಂದರೆ ಗರುಡ ಹಾರಿ ಹೋಗುತ್ತಿತ್ತು.

 ಗರುಡಕ್ಕೆ ನಾನು ಹೊಡೆದರೆ ನನ್ನ ಕೀರ್ತಿ ಹೆಚ್ಚುತ್ತದೆ ಎಂದುಕೊಂಡು ಸರಿಯಾಗಿ ಗರುಡಕ್ಕೆ ಗುರಿ ಇಟ್ಟು ಹೊಡೆದನು ಆದರೆ ಗರುಡ ತಪ್ಪಿಸಿಕೊಂಡಿತ್ತು ನಂತರ ಇವನು ಹುಲಿಯ ಮರಿಗೆ ಬೇಟೆಯಾಡೋಣ ಎಂದು ನೋಡಿದನು ಅದೂ ಕೂಡ ತಪ್ಪಿಹೋಗಿತ್ತು.

 ನಂತರ ಜಿಂಕೆ ಕುರಿ ಮೊಲ ಹೀಗೆ ಯಾವುದೂ ಕೂಡ ಇರಲಿಲ್ಲ ಆಗ ಮನೆಯವರನ್ನು ಬಯ್ಯತೊಡಗಿದ ನಿಮ್ಮಿಂದಲೇ ನನ್ನ ಬೇಟೆ ಹೋಯ್ತು ಎಂದನು ಮನೆಯವರು ತಾನೆ ಏನು ಮಾಡಲು ಸಾಧ್ಯ ಇಲ್ಲಿ ತಪ್ಪು ಇರುವುದು ಈ ಬೇಟೆಗಾರನದು ಏಕೆಂದರೆ ಮೊದಲು ಮೊಲ ನೋಡಿದ ಮೊಲವನ್ನು ಬೇಟೆ ಆಡಬಹುದಿತ್ತು.

 ಅದು ಬಿಟ್ಟು ಕುರಿ ಜಿಂಕೆ ಹುಲಿ ಹೀಗೆ ಒಂದೊಂದಾಗಿ ಒಂದೊಂದಾಗಿ ಗುರಿ ಬದಲಿಸುತ್ತಾ ಬಂದನು ಕೊನೆಗೆ ಏನು ಸಿಗಲಿಲ್ಲ ನಂತರ ಮನೆಯವರನ್ನು ಬೈಯಲು ಶುರು ಮಾಡಿದನು ಜಮೀನ್ದಾರರು ಮನಸ್ಸಿನ ನಿಯಂತ್ರಣ ಕಳೆದುಕೊಂಡನು. ನನ್ನ ಮನಸ್ಸಿನ ಮೇಲೆ ನನಗೆ ನಿಯಂತ್ರಣವಿದೆಯೇ?

ನಾನು ಸತ್ತರು ದೇಶಕ್ಕಾಗಿ

 

ಯುದ್ಧಕ್ಕಾಗಿ ಕುದುರೆ ಸಿದ್ಧವಾಯಿತು ಆ ಕುದುರೆಗೆ ತುಂಬಾ ಚೆನ್ನಾಗಿ ಅಲಂಕಾರ ಮಾಡಿದರು ಇನ್ನೇನು ಹೊರಡಬೇಕು ಆ ಸಮಯದಲ್ಲಿ ಒಂದು ಕುರಿ ಬಂತು ಕುರಿ ಕುದುರೆಯ ಅಲಂಕಾರ ನೋಡಿ ಕೊಂಕು ನುಡಿಯಲ್ಲಿ ನಿನಗೆ ಅಲಂಕಾರ ಏತಕ್ಕೆ ಎಂದು ಕೇಳಿತು.

 ಕುದುರೆ ನನಗೆ ಏಕೆ ಅಲಂಕಾರ ಮಾಡಿದ್ದಾರೆ ತಿಳಿಯದು ಎಂದು ಹೇಳುತ್ತದೆ ಆಗ ಕುರಿಯು ನೀನು ಈಗ ಯುದ್ಧಕ್ಕೆ ಹೋಗುತ್ತಿದ್ದೀಯಾ ನೀನು ಸಾಯಲು ಬಹುದು ಸಾಯಬೇಕಾದರೆ ಇಂತಹ ಅಲಂಕಾರ ಬೇಕೆ ಅದಕ್ಕಾಗಿ ನನಗೆ ತುಂಬಾ ನಗು ಬರುತ್ತಿದೆ ಎಂದು ಹಾಸ್ಯವಾಗಿ ಹೇಳಿತು.

 ಈ ಮಾತು ಕೇಳಿ ಕುದುರೆಗೆ ಸ್ವಲ್ಪ ಬೇಸರವಾಯಿತು ಆದರೂ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕುರಿಗೆ ಹೇಳಿತು ನೋಡು ನಾನು ಯುದ್ಧಕ್ಕೆ ಹೋಗುತ್ತಿದ್ದೇನೆ ನಾನು ಸಾಯಲು ಬಹುದು ಆದರೆ ನಾನು ಸತ್ತಾಗ ನನಗೆ ಗೌರವಿಸುತ್ತಾರೆ ಮತ್ತೆ ನನಗೆ ರಾಜನು ತುಂಬಾ ಚೆನ್ನಾಗಿ ಕೊನೆಯವರೆಗೂ ನೋಡಿಕೊಳ್ಳುತ್ತಾನೆ.

 ಅದೇ ನಿನಗೆ ಇರುವವರಿಗೆ ಸಾಕುತ್ತಾರೆ ನಂತರ ನಿನ್ನನ್ನು ಕೊಂದು ಮಾಲೀಕನೇ ತಿನ್ನಬಹುದು ಅಥವಾ ಇತರರು ಯಾರಾದರೂ ತಿನ್ನಬಹುದು ಇದನ್ನು ನೀನು ಯೋಚನೆಯೇ ಮಾಡಿಲ್ಲ ನಾನು ಸತ್ತರು ದೇಶಕ್ಕಾಗಿ ಸಾಯುತ್ತೇನೆ ಕುದುರೆ ಸತ್ತಿದೆ ಎಂದು ಗೌರವಿಸುತ್ತಾರೆ ಎಂದು ಕುದುರೆ ಹೇಳಿತು ಆಗ ಕುರಿಗೆ ಏನು ಅರ್ಥವಾಗಲಿಲ್ಲ.

ಕೆಲಸದಿಂದ ತೆಗೆದುಬಿಡಿ

ಒಂದು ಊರಿನಲ್ಲಿ ಒಬ್ಬ ಪ್ರಾಮಾಣಿಕ ರಾಜ ಇರುತ್ತಾನೆ ಪ್ರಜೆಗಳಿಗೂ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ ಒಬ್ಬ ಮಂತ್ರಿಯೂ ಕೂಡ ಇರ್ತಾನೆ ಅವನು ಕೂಡ ಕೆಲಸಗಳನ್ನು ಚೆನ್ನಾಗಿ ನಿಭಾಯಿಸುತ್ತಿರುತ್ತಾನೆ ಯಾವುದೋ ಒಂದು ಚಿಕ್ಕ ತಪ್ಪು ಮಂತ್ರಿಯಿಂದ ಘಟಿಸುತ್ತದೆ.

  ರಾಣಿ  ಮಂತ್ರಿಯನ್ನು ಕೆಲಸದಿಂದ ತೆಗೆದುಬಿಡಿ ಎಂದಾಗ ರಾಜನು ಹೇಳುತ್ತಾನೆ ಏನು ತಪ್ಪು ಮಾಡಿಲ್ಲವಾದ್ದರಿಂದ ಕೆಲಸದಿಂದ ಹೇಗೆ ತೆಗೆಯುವುದು ಎಂದು ಹೇಳಿದಾಗ ಹೆಂಡತಿಯು ಯೋಚನೆ ಮಾಡಿ ಹೇಳುತ್ತಾಳೆ.

  ಬೇರೆ ರಾಜ್ಯದಲ್ಲಿ ನದಿ ಹರಿಯುತ್ತಿದೆ ಅದೇ ನದಿ ನಮ್ಮ ರಾಜ್ಯದಲ್ಲಿ ಹರಿಯಬೇಕು ಹೀಗೆ ಮಾಡಿದಾಗ ಅವನನ್ನು ನೀವು ಉಳಿಸಿಕೊಳ್ಳಬಹುದು ಎಂದು ಹೇಳುತ್ತಾಳೆ ರಾಜನಿಗೆ ಇದೇನು ಅರ್ಥವಾಗುವುದಿಲ್ಲ ಆದರೂ ಬೇರೆ ದಾರಿ ಇಲ್ಲದೆ ಸಭೆ ಸೇರಿಸಿ ಹೇಳುತ್ತಾನೆ ಪಕ್ಕದ ರಾಜ್ಯದಲ್ಲಿ ನದಿ ಹರಿಯುತ್ತಿದೆ ಅದೇ ನದಿ ನಮ್ಮ ರಾಜ್ಯದಲ್ಲಿ ಹರಿಯಬೇಕು.

 ಹಾಗಾಗಿ ಯಾರು ಮಾಡುತ್ತೀರಾ ಅವರು ಮಾತ್ರ ಮಂತ್ರಿಯ ಪದವಿಯಲ್ಲಿ ಇರಬಹುದು ಎಂದು ಹೇಳಿ ರಾಜ ಹೊರಟು ಹೋಗುತ್ತಾನೆ ಮಂತ್ರಿ ಆದವನು ಯೋಚನೆ ಮಾಡುತ್ತಾನೆ ಏನು ಮಾಡುವುದು ಎಂದು ರಾತ್ರಿ ಎಲ್ಲಾ ಯೋಚಿಸುತ್ತಾನೆ ನಂತರ ಒಂದು ಉಪಾಯ ಹೊಳೆಯುತ್ತದೆ ನಾನು ಏಕೆ ಬಾಬಾ ಅವರ ಜೊತೆಗೆ ಮಾತನಾಡಬಾರದು ನಂತರ ಬಾಬಾ ಅವರಿಗೆ ತನ್ನ ಸಮಸ್ಯೆ ಹೇಳುತ್ತಾನೆ.

ಆಗ ಬಾಬಾ ಅವರು ಹೇಳುತ್ತಾರೆ ನೋಡು ನನಗೆ ತಿಳಿದಿರುವ ಮಟ್ಟಿಗೆ ನದಿಯನ್ನು ಈ ರಾಜ್ಯದಲ್ಲಿ ಹರಿಸಲು ಸಾಧ್ಯವಿಲ್ಲ ಆದರೆ ರಾಜ್ಯವನ್ನೇ ನೀವು ಗೆದ್ದುಬಿಟ್ಟರೆ ನಿಮ್ಮದೇ ರಾಜ್ಯದಲ್ಲಿ ನದಿ ಹರಿಯುತ್ತಿರುತ್ತದೆ ಇದನ್ನು ನೀನು ಮಾಡಬಹುದಾಗಿದೆ ಎಂದಾಗ ಮಂತ್ರಿಗೆ ಅರ್ಥವಾಗುತ್ತದೆ.

 ಆಗ ಮಂತ್ರಿ ನಾನು ಮಾಡುತ್ತೇನೆ ನನಗೆ ಆರು ತಿಂಗಳುಗಳ ಕಾಲ ಸಮಯ ಬೇಕು ಹಾಗೆ 50,000 ಸಿಪಾಯಿಗಳು ಬೇಕು ಹಾಗೆ ಒಂದು ಲಕ್ಷ ಚಿನ್ನದ ನಾಣ್ಯಗಳು ಬೇಕು ಎಂದು ಹೇಳುತ್ತಾನೆ ರಾಜ ಆಗಲಿ ಎಂದು ಒಪ್ಪಿಗೆ ನೀಡುತ್ತಾನೆ. ಮಂತ್ರಿಯೂ ತನ್ನ ಸಿಪಾಯಿಗಳಿಗೆ ಸೇನಾಧಿಪತಿಗಳಿಗೆ ಚೆನ್ನಾಗಿ ಯುದ್ಧದ ತರಬೇತಿಯನ್ನು ನೀಡುತ್ತಾನೆ.

 ಪಕ್ಕದ ರಾಜ್ಯವನ್ನು ಕೂಲಂಕುಶವಾಗಿ ಪರೀಕ್ಷೆ ಮಾಡುತ್ತಾನೆ ಪಕ್ಕದ ರಾಜ್ಯದವರು ಯಾವುದೇ ರೀತಿಯ ತಯಾರಿ ಮಾಡಿರುವುದಿಲ್ಲ ಇವರ ಸೈನಿಕರಿಗೆ ಸೇನಾಧಿಪತಿಗಳಿಗೆ ಒಳ್ಳೆಯ ತರಬೇತಿ ಐದು ತಿಂಗಳು ನೀಡುತ್ತಾನೆ ನಂತರ ಪಕ್ಕದ ರಾಜ್ಯಕ್ಕೆ ಯುದ್ಧವನ್ನು ಮಾಡಿ ಆ ರಾಜ್ಯವನ್ನು ಸಹ ತಮ್ಮ ರಾಜ್ಯಕ್ಕೆ ವಿಸ್ತರಿಸಿ ಬಿಡುತ್ತಾನೆ.

  ನಂತರ ರಾಜರಿಗೆ ಹೋಗಿ ಹೇಳುತ್ತಾನೆ ನೀವು ಹೇಳಿದಂತೆ ಕೆಲಸ ಆಗಿದೆ ನೋಡಿ ಆ ನದಿ ಅಲ್ಲೇ ಹರಿಯುತ್ತಿದೆ ಆ ನದಿ ಇಲ್ಲಿಗೆ ಹರಿಸುವ ಬದಲು ನಮ್ಮ ರಾಜ್ಯವನ್ನೇ ವಿಸ್ತರಿಸಿದ್ದೇನೆ ಎಂದಾಗ ಮಂತ್ರಿಯ ಬುದ್ಧಿವಂತಿಕೆಗೆ ತುಂಬಾ ಸಂತೋಷ ಪಡುತ್ತಾನೆ ನಂತರ ಅವನೇ ಮಂತ್ರಿಯಾಗಿ ಮುಂದುವರಿಯುತ್ತಾನೆ ಕೆಲವು ಕೆಲಸಗಳು ಅಸಾಧ್ಯವಾಗಿರಬಹುದು ತಾಳ್ಮೆಯಿಂದ ಯೋಚಿಸಿದಾಗ ಸಾಧ್ಯವಾಗುತ್ತದೆ.

 ಕಲಿಯುವ ಮನಸ್ಸು ಇದ್ದರೆ

ಒಂದು ದೊಡ್ಡ ಆಶ್ರಮ ಆ ಆಶ್ರಮದಲ್ಲಿ ಹಲವಾರು ಶಿಷ್ಯರು ಇದ್ದರು ಗುರುಗಳು ಕೂಡ ಇದ್ದರು ಆ ಆಶ್ರಮದಲ್ಲಿ ಕೆಲವರು ಶಿಷ್ಯರು ಸರಿಯಾದ ಸಮಯ ಹಾಗೂ ಕರ್ತವ್ಯಗಳನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ ಏನೇ ಹೇಳಿದರೂ ಅವರು ಮಾಡುವಂಥ ಕೆಲಸಗಳನ್ನು ಮಾಡುತ್ತಿದ್ದರು.

ವರ್ತನೆಯನ್ನು ಗಮನಿಸಿದ ನೋಡಿದ ಗುರುಗಳು ಒಂದು ನಿರ್ಧಾರಕ್ಕೆ ಬಂದರು ಇನ್ನು ಮುಂದೆ ನೀವು ನಿಯಮಗಳು ಜವಾಬ್ದಾರಿಗಳು ಪಾಲಿಸದಿದ್ದರೆ ನಾನು ಯಾರೊಂದಿಗೂ ಮಾತನಾಡುವುದಿಲ್ಲ ಮೌನವಾಗಿ ಇರುತ್ತೇನೆ ಎಂದಾಗ ಹಾಗಾದರೆ ನಾವು ಪಾಠ ಹೇಗೆ ಕಲಿಯಬೇಕು ಎಂದು ಕೆಲವು ಶಿಷ್ಯರು ಕೇಳಿದರು ಆಗ ಗುರುಗಳು ಹೇಳಿದರು ಬಹಳಷ್ಟು ಕಲಿಯಬಹುದಾಗಿದೆ.

 ಕಲಿಯುವ ಮನಸ್ಸು ಇದ್ದರೆ ಉದಾಹರಣೆಗೆ ಆಕಾಶ, ಸೂರ್ಯ, ಭೂಮಿ, ನೀರು. ಮಾತನಾಡುತ್ತದೆಯೇ ಇಲ್ಲ ಆದರೂ ಅವುಗಳಿಂದ ಬಹಳಷ್ಟು ನಾವು ಕಲಿಯಬಹುದು ಅಲ್ಲವೇ ಎಂದರು ಮತ್ತೆ ಕೆಲವು ವಿದ್ಯೆಗಳು ಮೌನದಿಂದಲೇ ಕಲಿಯ ಬೇಕಾಗುತ್ತದೆ ಎಂದರು.

ಮುಖವಾಡ ಎಷ್ಟೇ ದಿನ ಹಾಕಿದರೂ

 

ಊರಿನ ಆಚೆ ಒಂದು ಕತ್ತೆ ಇತ್ತು ಅದಕ್ಕೆ ಆಹಾರ ಸಿಗುವುದು ಕಷ್ಟವಾಗುತ್ತಿತ್ತು ಇದೇ ಯೋಚನೆಯಲ್ಲಿ ಮುಳುಗಿ ನಿಧಾನವಾಗಿ ನಡೆಯುತ್ತಿದ್ದಾಗ ಒಂದು ಹುಲಿಯು ಸತ್ತು ಹೋಗಿತ್ತು ಅದರ ಚರ್ಮ ಮಾತ್ರ ಇತ್ತು ಕತ್ತೆಗೆ ಒಂದು ಉಪಾಯ ಹೊಳೆಯಿತು ನಂತರ ಆ ಚರ್ಮವನ್ನು ಹಾಕಿಕೊಂಡು ತನ್ನನ್ನು ನೀರಿನಲ್ಲಿ ನೋಡಿತು.

 ಅದು ಹುಲಿಯ ತರವೇ ಕಾಣಿಸಿತು ಆಗ ಕತ್ತೆ ಏನು ಬೇಕೋ ಅದನ್ನು ತಿನ್ನಲಿಕ್ಕೆ ಬರುತ್ತಿತ್ತು ಮೊದಮೊದಲು ಜನರು ಹುಲಿ ಬಂದಿದೆ ಎಂದು ಹೆದರಿ ಓಡಿಹೋಗುತ್ತಿದ್ದರು.

 ಕೆಲವು ದಿನಗಳ ನಂತರ ಅದು ಕತ್ತೆ ಎಂದು ತಿಳಿಯಿತು ನಂತರ ಕತ್ತೆಗೆ ಜನರು ಹೊಡೆದು ಸಾಯಿಸಿದರು ನಾವು ಮುಖವಾಡ ಎಷ್ಟೇ ದಿನ ಹಾಕಿದರೂ ಕೂಡ ಒಂದಲ್ಲ ಒಂದು ದಿನ ಸತ್ಯ ತಿಳಿದೇ ತಿಳಿಯುತ್ತದೆ.

Leave a Comment