ಒಲಿಂಪಿಕ್ ಕ್ರೀಡೆಗಳು ನೋಡಿದ್ದೀರಾ ಅದರಲ್ಲಿ ಹಲವಾರು ಸ್ಪರ್ಧೆಗಳು ಇರುತ್ತವೆ ಇದನ್ನು ನೋಡಲು ಲೆಕ್ಕವಿಲ್ಲದಷ್ಟು ಜನ ನೋಡುತ್ತಾರೆ ಇದು 4ವರ್ಷಕ್ಕೆ ಒಮ್ಮೆ ನಡೆಯುತ್ತದೆ ಆ ಕಾಲಕ್ಕೆ ಆ ರೀತಿಯ ಸ್ಪರ್ಧೆಗಳು ನಡೆಯುತ್ತದೆ ನೂರು ಮೀಟರ್ ಓಟದ ಸ್ಪರ್ಧೆ ಇತ್ತು ಇದು ವಿಶೇಷವಾಗಿ ಆಯೋಜಿಸಲಾಗಿತ್ತು.
ವಿಶೇಷ ಚೇತನ ಇರುವ ಮಕ್ಕಳು ಎಲ್ಲಾ ಮಕ್ಕಳು ಓಡಲಿಕ್ಕೆ ಸಿದ್ಧರಾದರು ಸ್ಪರ್ಧೆ ಎಂದರೆ ಎಲ್ಲರೂ ಗೆಲ್ಲಲೇ ಬೇಕು ಎಂದು ಯೋಚಿಸುವುದು ಸಹಜ ಹಾಗೆ ಎಲ್ಲರಲ್ಲೂ ತುಂಬ ಉತ್ಸಾಹ ಕಳೆ ಇತ್ತು ಸನ್ನೆ ಮಾಡಿದಾಗ ಎಲ್ಲರೂ ಓಡಲು ಶುರುಮಾಡಿದರು.
ಸ್ವಲ್ಪ ದೂರ ಓಡಿದ ನಂತರ ಒಬ್ಬ ಹುಡುಗ ಮಾತ್ರ ಕಾಲು ಜಾರಿ ಬಿದ್ದನು ನಂತರ ಆ ಹುಡುಗನು ಅಳಲು ಶುರು ಮಾಡಿದನು ಈ ಹುಡುಗ ಅಳುತ್ತಿದ್ದ ಶಬ್ದ ಕೇಳಿದ ಮುಂದೆ ಹೋಗುತ್ತಿದ್ದ ಓಟಗಾರರು ಹಾಗೂ ಎಲ್ಲರೂ ನಿಂತು ಮತ್ತೆ ವಾಪಸ್ ಬಂದು ಬಿದ್ದಿದ್ದ ಹುಡುಗನ ಸುತ್ತಲು ಬಂದು ಏನಾಯಿತು ಎಂದು ಕೇಳಿದರು.
ಅಳುತ್ತಲೇ ಇದ್ದ ನೋಡಿದರೆ ರಭಸವಾಗಿ ಬಿದ್ದಿದ್ದರಿಂದ ಕಾಲಿಗೆ ಏಟು ಆಗಿದೆ ನಂತರ ಎಲ್ಲಾ ಓಟಗಾರರು ಅವನನ್ನು ಹಿಡಿದುಕೊಂಡು ಹೆಗಲಿಗೆ ಹೆಗಲು ಹಾಕಿಕೊಂಡು ಚಿಂತಿಸಬೇಡ ನಾವೆಲ್ಲರೂ ಇದ್ದೇವೆ ಎಂದು ಜೊತೆಯಲ್ಲಿ ಕರೆದುಕೊಂಡು ಓಡಿದರು.
ಈ ಸ್ಪರ್ಧೆಯೂ ಜನರು ನೋಡುತ್ತಲೇ ಇದ್ದಾರೆ ಏನಾಗುತ್ತದೆ ಎನ್ನುವ ಕುತೂಹಲ ಮತ್ತು ಎಲ್ಲಾ ಸ್ಪರ್ಧಿಗಳು ನಿಧಾನವಾಗಿ ಓಡುತ್ತ ಬಂದು ಕೊನೆಯ ಹಂತಕ್ಕೆ ಬಂದು ಟೇಪನ್ನು ಮುಟ್ಟಬೇಕು ಆ ಟೇಪನ್ನು ಮೊದಲು ಬಿದ್ದ ಹುಡುಗನ ಕೈಗೆ ಮುಟ್ಟಿಸಿ ನಂತರ ಎಲ್ಲರೂ ಆ ಟೇಪನ್ನು ಮುಟ್ಟಿದರು.
ಇದನ್ನು ನೋಡಿದ ಜನರ ಮನಸು ಬೆಣ್ಣೆಯಂತೆ ಕರಗಿತು ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿದರು ಕೆಲವೇ ಬಹುಮಾನಗಳು ಮಾತ್ರ ಇತ್ತು ಮಾನವೀಯ ದೃಷ್ಟಿಯಿಂದ ಎಲ್ಲರಿಗೂ ಬಹುಮಾನ ನೀಡಿದರು. ನಮ್ಮ ಬದುಕಿನಲ್ಲಿ ಗೆಲ್ಲುವುದೇ ಮುಖ್ಯವಾಗಬಾರದು ನಮ್ಮ ಜೊತೆಯಲ್ಲಿ ಇರುವವರನ್ನು ಗೆಲ್ಲಿಸೋಣ.
ನನ್ನ ಪ್ರಸಿದ್ದಿ ಗೊತ್ತಾಗಬೇಕು
ಒಂದು ಆಶ್ರಮದಲ್ಲಿ ಸಾತ್ವಿಕ ಸ್ವಭಾವದ ಗುರುಗಳು ಇದ್ದರು ಗುರುಗಳು ಬಹಳಷ್ಟು ಕಾಲ ಸಾಧನೆಯನ್ನು ಮಾಡಿ ಹೆಚ್ಚು ಹೆಚ್ಚಾಗಿ ಜ್ಞಾನವನ್ನು ಗಳಿಸಿದ್ದರೂ ಪ್ರಸಿದ್ಧಿಯಾಗಿದ್ದರು. ಸಿದ್ದಿ ಪಡೆದ ನಂತರ ಗುರುಗಳಿಗೆ ಸ್ವಾರ್ಥ ಅಹಂಕಾರ ತುಂಬಿ ತುಳು ಕಾಡುತ್ತಿತ್ತು
ನಾನೇ ಹೆಚ್ಚಾಗಿ ಕಲಿತಿದ್ದೀನಿ ನನಗಿಂತ ಹೆಚ್ಚು ಯಾರು ಕಲಿತಿಲ್ಲ ಎಂಬುವ ಮನೋಭಾವನೆ ಇತ್ತು ಇವರ ಹತ್ತಿರ ಕೆಲವರು ಶಿಷ್ಯರು ಸಾಧನೆಯನ್ನು ಮಾಡಿದರು ನಂತರ ಗುರುವಿಗೆ ಕೇಳಿದರು ನಾವು ಇನ್ನೂ ಹೆಚ್ಚಾಗಿ ಏನಾದರೂ ಕಲಿಯಬೇಕಾಗಿದೆಯೇ ಎಂದು ಶಿಷ್ಯರು ಕೇಳಿದರು.
ನಾನು ನಿಮಗೆ ಎಲ್ಲವನ್ನೂ ಕಲಿಸಿದ್ದೇನೆ ಎಂದು ಗುರುಗಳು ಹೇಳಿದರು ಮತ್ತೆ ನನ್ನ ಪ್ರಸಿದ್ದಿ ಗೊತ್ತಾಗಬೇಕು ಎಂದು ಒಂದು ತಂಬಿಗೆಯಲ್ಲಿ ನೀರು ತುಂಬಿ ಕೊಟ್ಟು ಕಳಿಸಿದರು ಈ ನೀರನ್ನು ತೆಗೆದುಕೊಂಡು ಹೋಗಿ ಬೇರೆ ಗುರುವಿಗೆ ಕೊಡಿ ಎಂದು ಹೇಳಿದರು ಬೇರೆ ಗುರುಗಳು ವಿದ್ಯಾರ್ಥಿಗಳನ್ನು ಗಮನಿಸಿದರು ಆ ತಂಬಿಗೆ ತುಂಬಾ ನೀರು ಇದೆ ಅಂದರೆ ಇದರರ್ಥ ಈ ಬಂದಿರುವ ವಿದ್ಯಾರ್ಥಿಗಳು ಎಲ್ಲವನ್ನು ಕಲಿತಿದ್ದಾರೆ ಪರಿಪೂರ್ಣರಾಗಿದ್ದಾರೆ ಎನ್ನುವ ಉದ್ದೇಶವಾಗಿತ್ತು.
ಗುರುಗಳು ತಂಬಿಗೆ ಪಡೆದುಕೊಂಡು ಅದರಲ್ಲಿ ಬೆಲ್ಲ, ಸಕ್ಕರೆ, ಸೊಗದೆ ಬೇರಿನ ರಸ, ಏಲಕ್ಕಿ ಪುಡಿ. ಹಾಕಿ ಬೆರೆಸಿದಾಗ ರುಚಿಯಾದ ಸೊಗದೆ ಬೇರಿನ ಶರಬತ್ತು ತಯಾರಾಯಿತು ಶಿಷ್ಯರಿಗೆ ಹೇಳಿದರು ಈ ತಂಬಿಗೆಯನ್ನು ನಿಮ್ಮ ಗುರುಗಳಿಗೆ ಕೊಟ್ಟು ಕುಡಿಯಲು ಹೇಳಿ ಎಂದರು.
ಶಿಷ್ಯರು ಆ ತಂಬಿಗೆಯನ್ನು ತೆಗೆದುಕೊಂಡು ಹೋಗಿ ಗುರುಗಳಿಗೆ ಕೊಟ್ಟರು ಗುರುಗಳು ಕುಡಿದರು ರುಚಿರುಚಿಯಾಗಿತ್ತು ಆಗ ಗುರುಗಳಿಗೆ ಅಹಂಕಾರ ಮೇಣದಬತ್ತಿಯಂತೆ ಕರಗಿತು ನನಗಿಂತ ಹೆಚ್ಚಾಗಿ ಕಲಿತಿರುವವರು ಇದ್ದಾರೆ ನಾನು ಗರ್ವ ಅಹಂಕಾರ ದಿಂದ ಇರುವುದು ಸರಿಯಲ್ಲ ಎಂದು ಅರಿತುಕೊಂಡರು.
ಜಗತ್ತಿನಲ್ಲಿ ಹಲವಾರು ಶ್ರೇಷ್ಠ ವಿಜ್ಞಾನಿಗಳು ಸಂಶೋಧಕರು ಇದ್ದಾರೆ ವಿಜ್ಞಾನಿಗಳ ಕೆಲಸ ನವನವೀನ ಅವಿಷ್ಕಾರಗಳನ್ನು ಕಂಡುಹಿಡಿಯುವುದು ವಿಜ್ಞಾನಿಗಳು ಆವಿಷ್ಕಾರಗಳಿಗಾಗಿ ತಮ್ಮ ಬದುಕನ್ನೆ ಮುಡುಪಾಗಿ ಇಟ್ಟಿರುತ್ತಾರೆ.
ಕನಸಿನಲ್ಲಿಯೂ ಯೋಚಿಸಿರಲಿಲ್ಲ
ಥಾಮಸ್ ಆಲ್ವ ಎಡಿಸನ್ ಇವರು ಕೂಡ ಪ್ರಮುಖ ವಿಜ್ಞಾನಿ ಇವರು ಕೂಡ ಸಣ್ಣಪುಟ್ಟ ಅವಿಷ್ಕಾರಗಳನ್ನು ಮಾಡುತ್ತಲೇ ಇದ್ದರು ಎಡಿಸನ್ ಅವಿಷ್ಕಾರಗಳನ್ನು ನೋಡಿ ಒಂದು ಬಹುದೊಡ್ಡ ಕಂಪೆನಿಯವರು ಇವರ ಅವಿಷ್ಕಾರಗಳನ್ನು ಕೂಲಂಕುಷವಾಗಿ ಗಮನಿಸುತ್ತಿದ್ದರು.
ಎಡಿಸನ್ ಮಾಡಿರುವ ಒಂದು ಸಂಶೋಧನೆಯನ್ನು ನಾವು ಪಡೆಯೋಣ ಎಂದು ಎಡಿಸನ್ ರವರಿಗೆ ತಿಳಿಸಿದರು ನಾವು ಎರಡು ದಿನದ ನಂತರ ಬಂದು ಸಂಶೋಧನೆಯನ್ನು ನೋಡಿ ಮಾತಾಡಿ ಹೋದರು ಈ ನಿಮ್ಮ ಒಂದು ಅವಿಷ್ಕಾರ ನಮಗೆ ಬೇಕಾಗಿದೆ ಇದಕ್ಕೆ ನೀವು ಎಷ್ಟು ಬೆಲೆ ಎಂದು ಹೇಳಿ ನಾವು ಕೊಡುತ್ತೇವೆ ಎಂದರು ತಕ್ಷಣಕ್ಕೆ ಎಡಿಸನ್ ಗೊಂದಲದಲ್ಲಿ ಸಿಲುಕಿದರು.
ಮುಂದಿನ ಕೆಲವು ದಿನಗಳಲ್ಲಿ ನಾವು ಬರುತ್ತೇವೆ ಅಲ್ಲಿಯವರೆಗೂ ನೀವು ಹೇಳಿ ಎಂದು ಹೊರಟು ಹೋದರು ಎಡಿಸನ್ ಅವರಿಗೆ ಗಾಬರಿ ಎಷ್ಟು ಹಣವನ್ನು ಕೇಳುವುದು ಮತ್ತೆ ಇದೇ ಪ್ರಶ್ನೆಯನ್ನು ಮನೆಯವರಿಗೂ ತಿಳಿಸಿದರು ಅವರು ಕೂಡ ಗಲಿಬಿಲಿಯಾದರು.
ಎಷ್ಟು ಕೇಳುವುದು ಇಪ್ಪತ್ತು, ಇಪ್ಪತ್ತೈದು, ಮೂವತ್ತುಸಾವಿರ. ಇದು ಜಾಸ್ತಿಯಾದರೆ ಏನು ಮಾಡುವುದು ಹೀಗೆ ಚಿಂತೆಯಲ್ಲಿ ಮುಳುಗಿದರು ಗೊತ್ತು ಮಾಡಿದ ದಿನಾಂಕ ಬಂದೇ ಬಿಟ್ಟಿತು ಆ ದಿನ ಕಂಪೆನಿಯವರು ಬಂದು ಇವರ ಅವಿಷ್ಕಾರವನ್ನು ಪಡೆದುಕೊಂಡರು ನೀವಿನ್ನೂ ಬೆಲೆ ಹೇಳಲೇ ಇಲ್ಲ ಈಗ ನಾನು ಒಂದು ಮೊತ್ತವನ್ನು ಕೊಡುತ್ತೇನೆ.
ಇಷ್ಟು ನಿಮಗೆ ತೃಪ್ತಿಯಾಗದಿದ್ದರೆ ಮತ್ತೆ ನಾವು ಹತ್ತರಿಂದ ಇಪ್ಪತ್ತೈದು ಪರ್ಸೆಂಟ್ ವರೆಗೆ ಏರಿಸುತ್ತೇನೆ ಎಂದು ಹೇಳಿದರು ಇವರು ಕೊಟ್ಟಿದ್ದು ಎಷ್ಟು ಗೊತ್ತೆ ಒಂದು ಲಕ್ಷ ನಂತರ ಕಡಿಮೆ ಅನಿಸಿದರೆ ನೀವು ಕೇಳಿ ನಾವು ಕೊಡುತ್ತೇವೆ ಎಂದರು ಎಡಿಸನ್ ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ.
ಕೆಲವು ಸಾರಿ ನಮ್ಮ ಜೀವನದಲ್ಲಿಯೂ ಹಾಗೆಯೇ ಕೆಲವು ಸಾರಿ ನಾವು ಚಿಕ್ಕದಾಗಿ ಕೇಳಬೇಕು ಎಂದು ಮನಸ್ಸಿನಲ್ಲಿ ಯೋಚಿಸಿರುತ್ತೇವೆ ಕೇಳದೆಯೇ ಅದರ ಹತ್ತು ಪಟ್ಟು ಜಾಸ್ತಿ ಬಂದಿರುತ್ತದೆ. ನಮ್ಮ ಪಾಲಿಗೆ ಬಂದ ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡೋಣ.
ಕತ್ತೆಯಿಂದ ಕಲಿತ ಪಾಠ
ಒಂದು ಊರಿನಲ್ಲಿ ಒಂದು ಆಶ್ರಮ ಇರುತ್ತದೆ ಅಲ್ಲಿ ಒಬ್ಬ ಹಿರಿಯ ಬಾಬಾ ಇರುತ್ತಾರೆ ಅವರು ಯಾವಾಗಲೂ ತುಂಬ ಖುಷಿಯಾಗಿ ಇರುತ್ತಾರೆ ಹಲವಾರು ಭಕ್ತರು ಬರುತ್ತಾರೆ ಹೋಗುತ್ತಿರುತ್ತಾರೆ ಅದರಲ್ಲಿ ಒಬ್ಬ ತುಂಬ ಹಳೆಯ ಭಕ್ತ ಬಾಬಾ ಅವರನ್ನು ಮಾತನಾಡಿಸಿದನು.
ಬಾಬಾ ಅವರೇ ನಾನು ನಿಮ್ಮನ್ನು ಹಲವಾರು ವರ್ಷಗಳಿಂದ ನೋಡುತ್ತಿದ್ದೇನೆ ಯಾವಾಗಲೂ ನೀವು ಹಸನ್ಮುಖಿಯಾಗಿ ಇರುತ್ತೀರಾ ಇದರ ರಹಸ್ಯವೇನು ಎಂದು ಕೇಳುತ್ತಾನೆ ಆಗ ಬಾಬಾ ಅವರು ಹೇಳುತ್ತಾರೆ ನೀನು ಕತ್ತೆಯನ್ನು ನೋಡಿದರೆ ನಿನಗೆ ಅರ್ಥವಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭಕ್ತನಿಗೆ ಆಶ್ಚರ್ಯವಾಗುತ್ತದೆ.
ಬಾಬಾ ಅವರು ಹೇಳಿದಂತೆ ಬೆಳಿಗ್ಗೆ ಸಂಜೆ ಎರಡು ಸಾರಿ ಕತ್ತೆಯನ್ನು ನೋಡಿಕೊಂಡು ಬರುತ್ತಾನೆ ಬಂದು ನನಗೇನೂ ಅರ್ಥವಾಗಲಿಲ್ಲ ಎಂದು ನಿರಾಶೆಯಿಂದ ಹೇಳುತ್ತಾನೆ ಆಗ ಬಾಬಾ ಅವರು ಹೇಳುತ್ತಾರೆ ಕತ್ತೆಯೂ ಬೆಳಿಗ್ಗೆ ಕೊಳೆಯಾದ ಬಟ್ಟೆಗಳ ಮೂಟೆಯನ್ನು ಹೊತ್ತುಕೊಂಡು ಹೋಗುತ್ತದೆ ಸಂಜೆ ಸ್ವಚ್ಛವಾದ ಬಟ್ಟೆಯನ್ನು ಹೊತ್ತುಕೊಂಡು ಬರುತ್ತದೆ.
ಕತ್ತೆಗೆ ನಾನು ಕೊಳೆಯ ಬಟ್ಟೆ ಹೊತ್ತುಕೊಂಡು ಹೋಗುತ್ತಿದ್ದೇನೆ ಸ್ವಚ್ಛವಾದ ಬಟ್ಟೆಯನ್ನು ಹೊತ್ತುಕೊಂಡು ಬರುತ್ತಿದ್ದೇನೆ ಎಂಬ ಬೇಸರವೂ ಇಲ್ಲ ಕೊಳೆಯ ಬಟ್ಟೆ ಸ್ವಚ್ಛವಾದ ಬಟ್ಟೆ ಎಂಬ ಖುಷಿಯೂ ಇಲ್ಲ ಇದಕ್ಕೆ ಎರಡೂ ಒಂದೆಯೇ ಇದನ್ನು ನೋಡಿದ ಮೇಲೆ ನಾನು ಅರ್ಥಮಾಡಿಕೊಂಡೆ ಎಂದು ಬಾಬಾ ಹೇಳಿದರು. ಭಕ್ತನು ಬಾಬಾ ಅವರ ಉದಾಹರಣೆಗೆ ಬೆರಗಾದನು.
ಪ್ರತಿಸಾರಿಯೂ ಸೋಲುತ್ತಿರುತ್ತಾನೆ
ಒಂದು ಊರಿನಲ್ಲಿ ಒಬ್ಬ ಮುಂದಾಲೋಚನೆಯುಳ್ಳ ರಾಜ ಇದ್ದನು ಹಲವಾರು ವಿದ್ಯೆಗಳಲ್ಲಿ ಪಾರಂಗತನಾಗಿದ್ದನು ಮತ್ತೆ ಮುಂದೆ ಏನಾಗಬಹುದು ಎಂದು ಯೋಚಿಸಬಲ್ಲವನಾಗಿದ್ದನು. ಕೆಲವು ಕೆಲಸಗಳನ್ನು ಭವಿಷ್ಯ ನುಡಿದಂತೆ ನಿಖರವಾಗಿ ಹೀಗೆಯೇ ಆಗುತ್ತದೆ ಎಂದು ಹೇಳುತ್ತಿದ್ದನು. ಅದೇ ರೀತಿ ಅವನ ಮಗನನ್ನು ಕೂಡ ಬೆಳೆಸಿದನು ಅವನಿಗೂ ಎಲ್ಲಾ ಕಲೆಗಳನ್ನು ಕಲಿಸಿದನು ಎಷ್ಟು ಏನೇ ಕಲಿತರು ತಂದೆಯ ಜೊತೆ ಹೋದಾಗ ಯುವರಾಜನು ಸೋಲುತ್ತಿದ್ದನು.
ಯುವರಾಜನಿಗೆ ನಾನೂ ಕೂಡ ಕಲಿತಿದ್ದೇನೆ ಎಂದು ತೋರಿಸಬೇಕೆಂಬ ಹಂಬಲ ಆದರೆ ಪ್ರತಿಸಾರಿಯೂ ಸೋಲುತ್ತಿರುತ್ತಾನೆ ಮಗನಾದವನು ತಂದೆಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ ಆಗ ಕೆಲವು ಪರೀಕ್ಷೆಗಳನ್ನು ಒಡ್ಡುತ್ತಾನೆ ಆದರೆ ತಂದೆಯಾದವರು ಸರಿಯಾಗಿ ನಿಖರವಾಗಿ ಹೇಳುತ್ತಾರೆ.
ಒಂದು ಸಾರಿ ಮಗನಾದವನು ಒಂದು ಚಾಲೆಂಜ್ ಅನ್ನು ಕೊಡುತ್ತಾನೆ ತಂದೆಗೆ ಅರಮನೆಯ ಮೇಲೆ ಕರೆದುಕೊಂಡು ಹೋಗಿ ತೋಟದಲ್ಲಿರುವ ಹೂವುಗಳನ್ನು ತೋರಿಸುತ್ತಾನೆ ತೋಟದಲ್ಲಿ ಹೂವುಗಳು ಕ್ರಮವಾಗಿ ಜೋಡಿಸಿರುತ್ತಾರೆ ದೂರದಿಂದ ನೋಡಿದರೆ ಯಾವುದೇ ಕಾರಣಕ್ಕೂ ಅಸಲಿ ಯಾವುದು ನಕಲಿ ಯಾವುದು ಎಂದು ತಿಳಿಯುವುದಿಲ್ಲ ತಂದೆಗೆ ಹೇಳುತ್ತಾನೆ.
ದೂರದಲ್ಲಿ ಹೂವುಗಳು ಕಾಣುತ್ತಿದೆ ಆದಲ್ಲಿ ಅಸಲಿ ಯಾವುದು ನಕಲಿ ಯಾವುದು ಹೇಳಿ ಎಂದು ಕೇಳುತ್ತಾನೆ ಆಗ ತಂದೆಯಾದವರು ಸರಿಯಾಗಿ 2ನಿಮಿಷ ನೋಡಿ ಬಲಭಾಗದಲ್ಲಿ ಇರುವುದು ನಕಲಿ ಎಡಭಾಗದಲ್ಲಿರುವ ಅಸಲಿ ಎಂದು ಹೇಳುತ್ತಾರೆ ಮಗನಿಗೆ ಆಶ್ಚರ್ಯವಾಗುತ್ತದೆ.
ತಂದೆಯವರಿಗೆ ಕೇಳುತ್ತಾನೆ ನೀವು ಹೇಗೆ ಅದನ್ನು ಸರಿಯಾಗಿ ಗುರುತಿಸಿದಿರಿ ಎಂದಾಗ ತಂದೆಯವರು ನೋಡು ಅಸಲಿ ಹೂವು ಇರುವ ಕಡೆ ಚಿಟ್ಟೆಗಳು ಒಡಾಡುತ್ತಿದೆ ನಕಲಿ ಇರುವ ಕಡೆ ಯಾವುದೇ ಚಿಟ್ಟೆ ಓಡಾಡುತ್ತಿಲ್ಲ ಅದನ್ನು ಗಮನಿಸಿ ಹೇಳಿದೆ ಎಂದು ತಿಳಿಸುತ್ತಾರೆ.