ಕುತೂಹಲ್ ಚಿತ್ರಕಾರನು ಯಾವುದಾದರೂ ಒಳ್ಳೆಯ ಚಿತ್ರ ಬರೆಯಬೇಕು ಎಂದು ಯೋಚಿಸಿದನು ಅದಕ್ಕೆ ಊರಿನ ಶ್ರೀಮಂತರ ಮನೆಗೆ ಹೋದನು ಬಾಗಿಲು ತಟ್ಟಿದನು ನಂತರ ತಾಯಿ ಬಂದರು ತಾಯಿಯವರಿಗೆ ಹೇಳಿದನು ಅಮ್ಮಾ ನಾನು ಒಂದು ಚಿತ್ರವನ್ನು ಬರೆಯಬೇಕು ಎಂದಿದ್ದೇನೆ ಆಗ ಆ ತಾಯಿಯು ನನ್ನ ಚಿತ್ರ ಬರೆದರೆ ಏನು ಉಪಯೋಗವಿಲ್ಲ ಎಂದು ಹೇಳಿದರು.
ಚಿತ್ರಕಾರನು ಯಾರ ಚಿತ್ರ ಬೇಕಾದರೂ ನಾನು ಬರೆಯುತ್ತೇನೆ ಹೇಳಿ ಎಂದು ವಿನಂತಿಸಿದನು ಅದಕ್ಕೆ ತಾಯಿಯೂ ಸ್ವಲ್ಪ ಸಮಯ ಯೋಚಿಸಿ ಹೇಳಿದಳು ನನ್ನ ಮಗ ಇದ್ದಾನೆ ಅವನ ಚಿತ್ರ ನೀವು ಬರೆಯಿರಿ ನನ್ನ ಮಗ ಯಾವಾಗಲೂ ಒಂದೇ ಕಡೆ ಇದ್ದು ತಿನ್ನುವುದು ಮಲಗುವುದು ಸುಮ್ಮನೆ ಕುಳಿತಿರುತ್ತಾನೆ ಎಂದು ಹೇಳುತ್ತಾರೆ.
ತಾಯಿಯು ಬಲವಂತದಿಂದ ಹುಡುಗನನ್ನು ಕರೆದುಕೊಂಡು ಬಂದು ಕೂರಿಸುತ್ತಾರೆ ಆಗ ಚಿತ್ರಕಾರರು ಈ ಯುವಕನ ಚಿತ್ರವನ್ನು ನೀಟಾಗಿ ಚೆನ್ನಾಗಿ ನಗುತ್ತಿರುವಂತೆ ಚಿತ್ರವನ್ನು ಚಿತ್ರಿಸಿದರು ಚಿತ್ರವನ್ನು ನೋಡಿದ ಯುವಕನಿಗೆ (ಶಾಕ್) ಆಘಾತವಾಯಿತು.
ಇದು ನಾನು ಅಲ್ಲವೇ ಅಲ್ಲ ಏಕೆಂದರೆ ನಾನು ತಲೆ ಬಾಚಿಲ್ಲಾ ಸರಿಯಾಗಿ ಶೇವ್ ಮಾಡಿಲ್ಲ ಸರಿಯಾದ ಬಟ್ಟೆ ಹಾಕಿಲ್ಲ ವ್ಯವಸ್ಥಿತವಾಗಿ ಇಲ್ಲ ಚಿತ್ರ ನೋಡಿದರೆ ವ್ಯವಸ್ಥಿತವಾಗಿ ಇದೆ ಎಂದನು ಆಗ ಚಿತ್ರಕಾರರು ಹೇಳಿದರು ನೀನು ಕಲ್ಪಿಸಿದಂತೆ ಬದುಕಬಹುದಾಗಿದೆ ಒಮ್ಮೆ ಯೋಚಿಸು ಎಂದು ಹೇಳಿದರು.
ಆ ಚಿತ್ರವನ್ನು ನೋಡಿದ ತಕ್ಷಣ ನೀವು ಇಲ್ಲೇ ಇರಿ ಎಂದು ಅರ್ಧ ಗಂಟೆಯಲ್ಲಿ ತಾನು ಸ್ನಾನ ಮಾಡಿ ಶೇವ್ ಮಾಡಿ ತಲೆ ಬಾಚಿ ಒಳ್ಳೆಯ ಬಟ್ಟೆ ಹಾಕಿ ಹೊರಗಡೆ ಬಂದನು ಈಗ ನೋಡು ನೀನು ಚೆನ್ನಾಗಿ ಇದ್ದೀಯಾ ಎಂದು ಚಿತ್ರಕಾರರು ಹೇಳಿದರು ನಂತರ ಯುವಕನು ಊರಿನ ಹೊರಗೆ ಸುತ್ತಾಡಿ ಬರೋಣ ಎಂದು ಬಂದನು.
ಆಗ ಎಲ್ಲರೂ ಯುವಕನಿಗೆ ಓ ನಮ್ಮ ಶ್ರೀಮಂತರ ಮಗ ಎಷ್ಟು ಮುದ್ದಾಗಿದ್ದಾನೆ ಎಷ್ಟು ಚೆನ್ನಾಗಿದ್ದಾನೆ ಎಂದು ಹೊಗಳಿದರು ನಂತರ ಆ ಯುವಕ ತನ್ನ ಬದುಕನ್ನೇ ಬದಲಿಸಿಕೊಂಡನು.
ಬದುಕು ಸಾರ್ಥಕವಾಗುತ್ತದೆ
ಸುಮಾರು ತೊಂಬತ್ತು ವರ್ಷದ ಆಯುಷ್ ವೃದ್ಧರು ಚೆನ್ನಾಗಿ ಬಾಳಿ ಬದುಕಿದರು ಇವರನ್ನು ಸಂತೈಸಲು ಬಹಳ ಜನ ಬಂದಿದ್ದರು ಇನ್ನೇನು ಅವರು 3 ದಿನ ಬದುಕಬಹುದು ಅಷ್ಟೆ ಈ ಸ್ಥಿತಿ ಇತ್ತು ಆಗ ಒಬ್ಬ ಯುವಕನು ಬಂದು ಕೇಳಿದನು ನೀವು ತುಂಬಾ ಚೆನ್ನಾಗಿ ಬದುಕನ್ನು ಸಾಗಿಸಿದ್ದೀರಿ.
ನಿಮ್ಮ ವಯಸ್ಸಿಗೆ ನಾವು ಬರುತ್ತೇವೆ ಎನ್ನುವುದು ಖಾತರಿ ಇಲ್ಲ ಬದುಕಿನ ಸಾರ್ಥಕತೆಗಾಗಿ ನಿಮ್ಮ ಸಲಹೆ ಹೇಳಿ ಎಂದು ವಿನಂತಿಸಿದನು ಆಗ ಹಿರಿಯರು ಹೇಳಿದರು ಬದುಕಿನಲ್ಲಿ ಬದುಕನ್ನು ಪ್ರೀತಿಸಿ ಮತ್ತೆ ಯಾವುದೇ ಚಿಕ್ಕ ಚಿಕ್ಕ ಸಂತೋಷ ಸಿಕ್ಕರು ಸಂತೋಷದಿಂದ ಇರಿ.
ನಾನು ಬೈಕ್ ತೆಗೆದುಕೊಂಡರೆ ಸಂತೋಷವಾಗಿರುತ್ತೇನೆ ಮನೆ ಖರೀದಿಸಿದರೆ ಹೆಚ್ಚು ಆಸ್ತಿ ಮಾಡಿದರೆ ಸಂತೋಷವಾಗಿ ಇರುತ್ತೇನೆ ಎಂಬುದು ಸರಿಯಲ್ಲ ಇವು ಸಂತೋಷಕ್ಕೆ ಸಾಧನಗಳು ಅಷ್ಟೆ ಆದರೆ ಸಂತೋಷ ಅನ್ನುವುದು ನಮ್ಮ ಮನಸ್ಸಿನಲ್ಲಿ ಇದೆ.
ನಿಮ್ಮ ಮನೆಯವರೊಂದಿಗೆ, ಸಂಬಂಧಿಕರೊಂದಿಗೆ, ಹಾಗೂ ನೆರೆಹೊರೆಯವರಿಗೆ ಸಮಾಜದೊಂದಿಗೆ ಹೊಂದಿಕೊಂಡು ಬಾಳಬೇಕು ಇವರು ಎಲ್ಲರು ತುಂಬಾ ಮುಖ್ಯ ಮತ್ತೆ ಬೇರೆಯವರನ್ನು ಅನುಕರಣೆ ಮಾಡಬೇಡಿ ಎಂದು ಹೇಳಿದರು.
ಗಂಡ ಹೆಂಡತಿಯಲ್ಲಿ ಮೇಲು-ಕೀಳು ಎಂಬ ಭಾವನೆ ಇರಲೇಬಾರದು. ಸಂಸಾರ ಎರಡು ಎತ್ತಿನ ಗಾಡಿ ಇದ್ದಂತೆ ಗಂಡ ಹೆಂಡತಿ ಇಬ್ಬರಿಗೂ ಅವರದೇ ಆದ ಜವಾಬ್ದಾರಿಗಳು ಇದ್ದೆ ಇರುತ್ತವೆ ಬಂದದ್ದನ್ನು ಸಂಭಾಳಿಸಿಕೊಂಡು ಹೋಗಬೇಕು.ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಅವಮಾನಿಸಬಾರದು ಮಕ್ಕಳ ಮುಂದೆ ಯಾವಾಗಲೂ ಹೆಂಡತಿಯಾದವಳು ಗಂಡನನ್ನು ನಮ್ಮೆಲ್ಲರಿಗಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ದುಡಿಯುತ್ತಿದ್ದಾರೆ ಎಂದು ಗೌರವಿಸಬೇಕು.
ಗಂಡನಾದವನು ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಡುವಿಲ್ಲದೆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೆಂಡತಿಗೆ ಗೌರವಿಸಬೇಕು. ನಾವು ಹೇಗೆ ಬದುಕುತ್ತೀರಿ ಅದೇ ರೀತಿ ಮಕ್ಕಳು ಅನುಕರಣೆ ಮಾಡುತ್ತಿರುತ್ತಾರೆ.
ನಿಮ್ಮ ಬೆರಳಚ್ಚು ಇಡೀ ವಿಶ್ವದಲ್ಲಿ ಯಾರಿಗೂ ಒಂದೇ ರೀತಿ ಇರುವುದಿಲ್ಲ ಹಾಗೆ ನೀವು ಕೂಡ ವಿಶೇಷವೇ ಆದುದರಿಂದ ನಿಮಗೆ ಏನು ಅನಿಸುತ್ತದೆ ನಿಮಗೆ ಇಷ್ಟವಿರುವ ದಾರಿಯನ್ನು ಸೃಷ್ಟಿಸಿಕೊಂಡು ಮುನ್ನಡೆಯಿರಿ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ನಾನು ಎಲ್ಲರೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆಯೇ?
ನನಗೆ ಕಿವಿ ಕೇಳಿಸುತ್ತಿಲ್ಲ
ಕೋಳಿ ತನ್ನ ಮಕ್ಕಳೊಂದಿಗೆ ಒಂದು ಕಾಡಿನಲ್ಲಿ ಸುಂದರವಾದ ಮನೆಯನ್ನು ಕಟ್ಟಿಕೊಂಡು ಅಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದವು ಒಂದು ಸಾರಿ ಒಂದು ಮೊಲ ಕೋಳಿ ಮನೆಗೆ ಬಂದು ಸೇರಿಕೊಂಡಿತು ಕೋಳಿ ಮರಿಗಳನ್ನು ಆಚೆಗೆ ತಳ್ಳಿತು.
ತಾಯಿ ಕೋಳಿ ಏಕೆ ಇಲ್ಲಿ ಓಡಾಡುತ್ತಿದ್ದೀರಾ ಎಂದು ಕೇಳಿದಾಗ ಕೋಳಿ ಮರಿಗಳು ಮನೆಯಲ್ಲಿ ಯಾರೋ ಇದ್ದಾರೆ ಎಂದು ಹೇಳಿದಾಗ ನೊಡೋಣ ಎಂದು ತಾಯಿ ಕೋಳಿ ಹೋದಾಗ ಬಾಗಿಲಲ್ಲೇ ಮೊಲ ಹೇಳಿತು ಇದು ಕಾಡು ಈ ಮನೆಯಲ್ಲಿ ನಾನು ಇರಬಹುದು ಕೋಳಿ ಹೇಳಿತು ನಾನು ಕಷ್ಟಪಟ್ಟು ಮನೆ ಕಟ್ಟಿದ್ದೇನೆ ಬೇರೆ ಕಡೆ ಹೋಗಿ ನೀನು ಬದುಕು ಎಂದು ಮೃದುವಾಗಿ ಹೇಳಿತ್ತು.
ಮೂಲ ಹೇಳಲಿಲ್ಲ ಎಲ್ಲಿ ಬೇಕಾದರೂ ನಾನು ಬದುಕಬಹುದಾಗಿದೆ ಅದಕ್ಕೆ ನೀನ್ಯಾರು ಕೇಳುವುದಕ್ಕೆ ಎಂದು ಗದರಿಸಿ ಹೇಳಿತು ನಂತರ ನೀನು ಮಾಡಿದ್ದು ತಪ್ಪು ಎಂದು ಹೇಳಿ ನಡಿ ನ್ಯಾಯ ಕೇಳೋಣ ಎಂದು ಮೊಲ ಕೋಳಿ ಬೆಕ್ಕಿನ ಹತ್ತಿರ ಹೋದವು.
ದೈತ್ಯಾಕಾರದ ಕಾಡು ಬೆಕ್ಕು ಆಹಾರವಿಲ್ಲದೆ ಮಲಗಿತ್ತು ಇಬ್ಬರನ್ನು ನೋಡಿತು ಮೊದಲು ಮೊಲ ಹೇಳಿತು ನಾನು ಎಲ್ಲಿ ಬೇಕಾದರೂ ಇರಬಹುದಲ್ಲವೇ ಎಂದು ಹೇಳಿತು ಆಗ ಬೆಕ್ಕು ನನಗೆ ಕಿವಿ ಕೇಳಿಸುತ್ತಿಲ್ಲ ಇನ್ನೂ ಸ್ವಲ್ಪ ಮುಂದೆ ಬಂದು ಹೇಳು ಎಂದು ಹೇಳಿತು ಮೊಲ ಮುಂದೆ ಬರುತ್ತಿದ್ದಂತೆಯೇ ಕತ್ತು ಹಿಡಿದು ಸಾಯಿಸಿತ್ತು.
ಕೋಳಿ ಓಡಲಿಕ್ಕೆ ಶುರು ಮಾಡಿತ್ತು ಹೇಗೋ ತಪ್ಪಿಸಿಕೊಂಡಿತು ಕೋಳಿಯ ಪೂರ್ತಿ ಮಾತು ಹೇಳಲಿಕ್ಕೆ ಸಾಧ್ಯವಾಗಲಿಲ್ಲ ಮೊಲವು ಬೆಕ್ಕಿನ ಆಹಾರವಾಯಿತು ಇದು ಯಾವ ರೀತಿ ನ್ಯಾಯ ಅಂತ ಹೇಳ್ತಾರೋ ಗೊತ್ತಾಗಲ್ಲ ಕೆಲವು ಸಾರಿ ಹೀಗೂ ಆಗುತ್ತದೆ ಆದ್ದರಿಂದ ನಾವು ಎಚ್ಚರಿಕೆಯಾಗಿ ವಿವೇಚನೆಯಿಂದ ಬದುಕೋಣ.
ದಂಡವನ್ನು ಕಟ್ಟಲೇಬೇಕು
ಒಬ್ಬ ಗೋರಾ ದುರಾಚಾರಿ ಶ್ರೀಮಂತ ಇದ್ದನು ಕೆಟ್ಟ ಎಲ್ಲಾ ಗುಣಗಳು ಇವನಲ್ಲಿ ಸೇರಿಕೊಂಡಿದ್ದವು
ಎಲ್ಲಿಗೆ ಹೋದರು ಒಂದು ಬ್ಯಾಗಿನಲ್ಲಿ ಹಣವನ್ನು ಇಟ್ಟುಕೊಂಡು ಹೋಗುತ್ತಿದ್ದನು ಇವನಿಗೆ ಹಣದ ಕೊರತೆ ಇರಲಿಲ್ಲ ಯಾರಿಗೂ ಗೌರವಿಸುತ್ತಿರಲಿಲ್ಲ.
ಒಂದು ಸಾರಿ ಕುಡಿದ ಅಮಲಿನಲ್ಲಿ ತಾನು ಹೋಗುತ್ತಿದ್ದಾಗ ಇವನ ಕೈ ತಗಲಿ ಪ್ರದರ್ಶನಕ್ಕೆ ಇಟ್ಟಿದ್ದ ಗಾಜಿನ ಮಡಿಕೆ ಬಿದ್ದುಹೋಯಿತು ಅದಕ್ಕೆ ಅಂಗಡಿಯವರು ನಿಮ್ಮ ನಿರ್ಲಕ್ಷದಿಂದ ಗಾಜಿನ ಮಡಿಕೆ ಹೊಡೆದು ಹೋಗಿದೆ ಅದಕ್ಕೆ ದಂಡವನ್ನು ಕಟ್ಟಲೇಬೇಕು ಎಂದು ಹೇಳಿದರು.
ದುರಾಚಾರಿ ಶ್ರೀಮಂತ ನೋಟಿನ ಕಂತೆಯನ್ನು ತೆಗೆದು ಅವನ ಮುಖದ ಮೇಲೆ ಬಿಸಾಕಿದನು ಇದರಲ್ಲಿ ಅದರ 10 ಪಟ್ಟು ಹಣ ಇದೆ ಎಂದು ಹೇಳಿ ದುರಹಂಕಾರದಿಂದ ಹೋದನು ಹೀಗೆ ಹಲವಾರು ವರ್ಷ ಕಳೆದನು ನಂತರದಲ್ಲಿ ನಿಧಾನವಾಗಿ ಇವನ ವ್ಯಾಪಾರಗಳು ಕ್ಷೀಣಿಸುತ್ತಾ ಬಂತು.
ನಂತರ ಎಲ್ಲದರಲ್ಲೂ ನಷ್ಟವಾಗುತ್ತಾ ಬಂತು ಆಗ ಇವನಿಂದ ಎಲ್ಲಾ ಸ್ನೇಹಿತರು ಸಂಬಂಧಿಕರು ಕೆಲಸದವರು ಕೂಡ ದೂರವಾದರೂ ನಂತರ ಕಷ್ಟಪಟ್ಟು ಹೇಗೋ ಅಲ್ಪಸ್ವಲ್ಪ ಹಣ ಗಳಿಸಿದನು ಆದರೆ ಇವನ ಆತ್ಮೀಯ ಸ್ನೇಹಿತರನ್ನು ಕುಟುಂಬದವರನ್ನು ನೆರೆಹೊರೆಯವರು ಇವನ ಹತ್ತಿರ ಬರಲಿಲ್ಲ.
ಇವನಿಂದ ದೂರವೇ ಇದ್ದರು ಹಣ ಕಷ್ಟ ಪಟ್ಟಿ ಸಂಪಾದನೆ ಮಾಡಬಹುದು ಆದರೆ ಒಳ್ಳೆಯ ಬದುಕು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಅರಿತನು.ನಮ್ಮಲ್ಲಿ ಹಣ ಇರಲಿ ಇಲ್ಲದೆ ಇರಲಿ ಸದ್ಗುಣವಂತರಾಗಿರೋಣ.
ಎಲ್ಲರೂ ಉಳಿಯಬಹುದಾಗಿತ್ತು
ಒಂದು ಹಿಮಪರ್ವತ ಇರುತ್ತದೆ ಹಿಮ ಪರ್ವತಕ್ಕೆ ಸಾಧ್ಯವಾದಷ್ಟು ಬೇಸಿಗೆ ಕಾಲದಲ್ಲಿ ಹೋಗುತ್ತಾರೆ ಅಂಥ ಸಮಯದಲ್ಲೂ ಕೂಡ ಕೆಲವು ಸಾರಿ ಹಿಮ ಜಾಸ್ತಿ ಬಿಳುವ ಸಾಧ್ಯತೆ ಇದ್ದೇ ಇರುತ್ತದೆ ಬೆಳಿಗ್ಗೆ ಹೋದರೆ ಸಂಜೆಯವರೆಗೆ ವಾಪಸ್ ಬರುತ್ತಾರೆ ಯಾರೇ ಹೋಗಲಿ ಅವರು ಸೌದೆಯ ಕೆಲವು ತುಂಡುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಮಧ್ಯದಲ್ಲಿ ಏನಾದರೂ ಚಳಿ ಜಾಸ್ತಿಯಾದರೆ ಸೌದೆಗಳನ್ನು ಹಚ್ಚಿ ಬೆಂಕಿ ಮಾಡಿಕೊಂಡಾಗ ಸ್ವಲ್ಪ ಬಿಸಿಯಾಗುತ್ತದೆ ಎನ್ನುವ ಉದ್ದೇಶದಿಂದ ಗುಂಪು ಗುಂಪಾಗಿ ಹೋಗುತ್ತಾರೆ ಇಲ್ಲದಿದ್ದರೆ ಅಲ್ಲಿ ಇರುವ ಚಳಿಯಿಂದ ನರಳಿ ಸಾಯಬೇಕಾಗುತ್ತದೆ ಹೀಗೆ ಒಂದು ಸಾರಿ ಒಂದು ಗುಂಪು ಹಿಮಪರ್ವತಕ್ಕೆ ಹೋದರು.
ಆಕಸ್ಮಿಕವಾಗಿ ದಾರಿಯೂ ಕಾಣದಂತಾಯಿತು ಮತ್ತೆ ಒಂದು ಗುಹೆ ಸಿಕ್ಕಿತು ಹಿಮ ಜಾಸ್ತಿ ಆದುದರಿಂದ ಎಲ್ಲರೂ ಅಲ್ಲೇ ಉಳಿದರು ಅಂದು ಹಿಮಾ ಕಡಿಮೆ ಆಗುತ್ತಲೇ ಇಲ್ಲ ಚಳಿ ಜಾಸ್ತಿ ಯಾಗುತ್ತಲೇ ಇದೆ.
ಇಲ್ಲಿಯವರೆಗೂ ಯಾರೂ ಹಾಕಿದ್ದ ಬೆಂಕಿಯಿಂದ ಸುಖವಾಗಿ ಇದ್ದರು ಈಗ ಸಮಯ ಮೀರುತ್ತಿದೆ ಬೆಂಕಿಗೆ ಸೌದೆ ಹಾಕದಿದ್ದರೆ ಚಳಿಯಿಂದ ಸಾಯುವುದು ಖಚಿತ ಈ ಗುಂಪಿನಲ್ಲಿ ಮೊದಲನೆಯವನು ತುಂಬ ದೊಡ್ಡ ಶ್ರೀಮಂತ ಅವನ ಹತ್ತಿರ ಸೌದೆ ಇದೆ ಎಲ್ಲರನ್ನೂ ಒಂದು ಸಾರಿ ಗಮನಿಸಿದನು.
ನಾನು ಸೌದೆ ಹಾಕಿದರೆ ಇವರಿಗೆಲ್ಲ ಒಳ್ಳೆಯದಾಗುತ್ತದೆ ಬೇಡ ಎಂದು ಸೌದೆಯನ್ನು ಹಾಗೆ ಇಟ್ಟುಕೊಂಡನು. ಎರಡನೆಯವನು ತುಂಬ ಬಡವ ಅವನು ಕೂಡ ಎಲ್ಲರನ್ನು ಗಮನಿಸಿದನು ನಾನು ಸೌದೆ ಹಾಕಿದರೆ ಶ್ರೀಮಂತ ಉಳಿಯುತ್ತಾನೆ ಶ್ರೀಮಂತರು ನಮಗೆ ಆಗಾಗ ತೊಂದರೆ ಕೊಡುತ್ತಾರೆ ನಾನು ಸೌದೆ ಹಾಕುವುದು ಬೇಡ ಎಂದು ಬಡವನು ಸೌದೆಯ ಹಾಕಲಿಲ್ಲ.
ಮೂರನೆಯ ವ್ಯಕ್ತಿ ಧರ್ಮಗುರು ಅವರು ಕೂಡ ಒಂದು ಸಾರಿ ಎಲ್ಲರನ್ನು ನೋಡಿದರು ಧರ್ಮಗುರು ಯೋಚಿಸಿದರು ಇವರು ನನ್ನ ಧರ್ಮಕ್ಕೆ ಸೇರಿಲ್ಲ ನಾನೂ ಸೌದೆ ಹಾಕುವುದು ಬೇಡ ಎಂದು ಸೌದೆ ಹಾಕಲಿಲ್ಲ.
ನಾಲ್ಕನೆಯ ವ್ಯಕ್ತಿ ಕಪ್ಪು ಮನುಷ್ಯ ಇವನು ಕೂಡ ಯೋಚನೆ ಮಾಡಿದನು ನಾನು ಇವರಿಗೇಕೆ ಒಳ್ಳೆಯದನ್ನು ಮಾಡಬೇಕು ನಮಗೆ ಯಾವತ್ತೂ ಸರಿಸಮಾನವಾಗಿ ನೋಡಿಲ್ಲ ಎಂದು ಕಪ್ಪು ಮನುಷ್ಯ ಕೂಡ ಸೌದೆ ಬೆಂಕಿಗೆ ಹಾಕಲಿಲ್ಲ.
ಕೊನೆಗೆ ಐದನೆಯವನು ಉಳಿದನು ಇವನು ಕೂಡ ಯೋಚಿಸಿದನು ಯಾರೂ ಕೂಡ ಸೌದೆಯನ್ನು ಬೆಂಕಿಗೆ ಹಾಕುತ್ತಿಲ್ಲ ಆದುದರಿಂದ ನಾನು ಏಕೆ ಹಾಕಬೇಕು ಎಂದು ನೋಡುತ್ತಾ ಕುಳಿತಿದ್ದನು ಕೊನೆಗೆ ಹಿಮಪಾತ ಇನ್ನೂ ಜಾಸ್ತಿಯಾಯಿತು ಆಗ ಚಳಿಯಲ್ಲಿ ಎಲ್ಲರೂ ಸತ್ತರು.
ಎಲ್ಲರ ಹತ್ತಿರವೂ ಸೌದೆ ಹಾಗೇ ಇತ್ತು ಒಬ್ಬೊಬ್ಬರು ಕೂಡ ಸೌದೆ ಹಾಕಿದ್ದಿದ್ದರೆ ಎಲ್ಲರೂ ಉಳಿಯಬಹುದಾಗಿತ್ತು ಅವರು ಸತ್ತಿದ್ದು ಹೃದಯ ವಂತಿಕೆ ಇಲ್ಲದೆ ಇರುವುದರಿಂದ ಹಾಗೆಯೇ ಸೂರ್ಯನು ಯೋಚನೆ ಮಾಡಿದರೆ ಎಲ್ಲರ ಗತಿಯೇನು?
ಸೂರ್ಯನಾದವನು ಬಡವ ಶ್ರೀಮಂತ ಬಿಳಿ ಕಪ್ಪು ಯಾರನ್ನೂ ನೋಡುವುದಿಲ್ಲ ತನ್ನ ಕೆಲಸ ತಾನು ಮಾಡಿ ಹೋಗುತ್ತಾನೆ ಅದೇ ರೀತಿ ನಮ್ಮ ಕರ್ತವ್ಯ ನಾವು ಮಾಡುತ್ತಿರೋಣ ಎಲ್ಲರಿಗಾಗಿ ಬದುಕೋಣ.ನಾನು ಎಲ್ಲರಿಗೂ ಸಮನಾಗಿ ನೋಡುತ್ತೇನೆಯೇ?