ಇಷ್ಟವಿದ್ದರೆ ಬಳಸಿಕೊಳ್ಳಿ

ಒಂದು ಶಾಲೆಯಲ್ಲಿ ಕೌಶಲ್ಯ ತರಬೇತಿ ನೀಡುವ ಶಿಕ್ಷಕರು ಬಂದರು ತರಬೇತಿ ನೀಡಿದ ನಂತರ ಎಲ್ಲರಿಗೂ ಅವಕಾಶವನ್ನು ಒದಗಿಸಿದ್ದರು ನೂರು 100 ಬಾಕ್ಸ್  ಚಾಕಲೇಟ್ ಮಾರಿದರೆ ಉಚಿತವಾಗಿ ಸಿನಿಮಾ ನೋಡುವ ಅವಕಾಶ ಇರುತ್ತದೆ ಎಂದು ಹೇಳಿದರು.

ಕೆಲವು ವಿದ್ಯಾರ್ಥಿಗಳು ಮಾತ್ರ ಒಪ್ಪಿಕೊಂಡರು ಅದರಂತೆ ಯಾರೂ ಕೂಡ ಟಾರ್ಗೆಟ್ ಪೂರ್ತಿ ಮಾಡಲಿಲ್ಲ, ಆದರೆ ಇದರಲ್ಲಿ ಒಂದು ಬಾಲಕ ಮಾತ್ರ ಮಾರಿದ  ಅವನು ಮಾರಿದ ರೀತಿ ವಿಶಿಷ್ಟವಾಗಿತ್ತು ಮೊದಲು. ತಮ್ಮ ಮನೆಗೆ ಒಂದೆರಡು ಬಾಕ್ಸ್ ನಂತರ ಬೀದಿಯಲ್ಲಿ ತದನಂತರ ತಮ್ಮ ಸಂಬಂಧಿಕರಲ್ಲಿ ನಂತರ ಬೀದಿ ಬೀದಿಗಳಲ್ಲಿ ಮತ್ತೆ ಇದೇ ರೀತಿ ತನ್ನಗೆ ಗೊತ್ತಿರುವ ಎಲ್ಲಾ ಕಡೆ ಮಾರುತ್ತಾ ಬಂದನು.

ಕೊನೆಗೆ ಬರೀ ಹತ್ತು ಬಾಕ್ಸ್ ಮಾತ್ರ ಉಳಿದುಕೊಂಡಿತು ಏನಾದರೂ ಮಾಡಿ ಇದು ಮಾರಲೇಬೇಕೆಂದು ಚಿಂತಿಸಿದನು ನಂತರ ಬಾಲಕನಿಗೆ ಕಂಡದ್ದು ಒಂದು ಪೋಲಿಸ್ ಸ್ಟೇಷನ್ ಒಳಗಡೆ ಹೋಗಿ ಇನಿಸ್ಪೆಕ್ಟರ್ ಸಾಹೇಬರನ್ನು ಮಾತನಾಡಿ ನಾನು ಈ ಚಾಕಲೇಟ್ ಅನ್ನು ಮಾರಲು ಬಂದಿದ್ದೇನೆ ಕೊನೆಯ 10 ಬಾಕ್ಸ್  ಚಾಕಲೇಟ್ ನಾನು ಮಾರಿದರೆ ನನಗೆ ಒಂದು ಸಿನಿಮಾ ನೋಡುವ ಅವಕಾಶವಿದೆ ತಾವು ಕೂಡ ಖರೀದಿಸಿ ಎಂದು ಕೇಳಿದ.

ವಿದ್ಯಾರ್ಥಿಯ ಮಾತು ಕೇಳಿದ ನಂತರ ಇನಿಸ್ಪೆಕ್ಟರ್ ಸಾಹೇಬರು ನಕರಾತ್ಮಕವಾಗಿ ನಾನು ನಿನ್ನ ಚಾಕಲೇಟ್ ಖರೀದಿಸಿದರೆ ನನಗೆ ಲಾಭವೇನು ನಿನಗೆ ನಾನೇಕೆ ಸಹಾಯ ಮಾಡಬೇಕು ಎಂದು  ತಿರಸ್ಕಾರದಿಂದ ಅಣಕಿಸಿದರು. ಕೇವಲವಾಗಿ ಮಾತನಾಡಿದರು.

 ಆಗ  ವಿದ್ಯಾರ್ಥಿಯು ನನ್ನ ಚಾಕಲೇಟ್ ಮಾರಾಟವಾಗದೆ ಇದ್ದರೂ ಪರವಾಗಿಲ್ಲ. ನಾನು ಸಿನಿಮಾ ನೋಡಲಿಲ್ಲ ಎಂದರು ಪರವಾಗಿಲ್ಲ . ನಾನು ಬೇರೆ ಕಡೆ ಮಾರಾಟ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ನನಗೆ ಇದ್ದೇ ಇದೆ.

ನಾನು ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದೆ ಅಷ್ಟೆ ಮತ್ತು ಇದರಿಂದ ನಿಮಗೂ ಒಳ್ಳೆಯ ಉನ್ನತ ಸ್ಥಾನ ದೊರೆಯುತ್ತದೆ ಇಷ್ಟ ವಿದ್ದರೆ ಬಳಸಿಕೊಳ್ಳಿ ಇಲ್ಲದಿದ್ದರೆ ಬೇಡ ಎಂದು ಆ ವಿದ್ಯಾರ್ಥಿಯು ಹೋರಡಲು ಸಿದ್ದನಾದನು.

ಆಗ ಇನ್ಸ್ ಪೆಕ್ಟರ್ ಸಾಹೇಬರು ವಿದ್ಯಾರ್ಥಿಯ ಧೈರ್ಯ ಆತ್ಮ ವಿಶ್ವಾಸಕ್ಕೆ ಮೆಚ್ಚಿ  ನಿನ್ನ ಸಲಹೆ ಹೇಳು ಎಂದು ಕೇಳುತ್ತಾರೆ ನೀವು ಬಹಳಷ್ಟು ದಿನಗಳು ಆಯಿತು. ಈ ಠಾಣೆಗೆ ಬಂದು ಇಲ್ಲಿ ನಿಮ್ಮ ಕೈ ಕೆಳಗೆ ಇರುವವರು ನಿಮಗೆ ಗೌರವ ಕೊಡುತ್ತಿದ್ದಾರೆ ಹೌದು ನೀವು ನಿಮ್ಮ ಕಡೆಯಿಂದ ಒಂದು ಸಾರಿ ಚಾಕಲೇಟ್ ಕೊಟ್ಟರೆ ನಿಮ್ಮ ಗೌರವ ಇನ್ನು ಹೆಚ್ಚಾಗುತ್ತದ ಯೋಚಿಸಿ ನೋಡಿ ಎಂದನು.

ಬುದ್ಧಿವಂತಿಕೆಯಿಂದ ಮಾತನಾಡಿದ್ದನ್ನು ಕೇಳಿ ಮಾತಿನ ಜಾಣ್ಮೆಯನ್ನು ಗ್ರಹಿಸಿ ಮತ್ತೆ ಅವನ  ಸೃಜನಶೀಲತೆಗೆ ಮೆಚ್ಚಿಕೊಂಡು ಇನ್ಸ್ ಪೆಕ್ಟರ್ ಸಾಹೇಬರು  ಎಲ್ಲಾ ಚಾಕಲೇಟನ್ನು ಖರೀದಿ ಮಾಡಿ ಎಲ್ಲರಿಗೂ ಹಂಚುತ್ತಾರೆ ಆ ಹುಡುಗ ಹೇಳಿದಂತೆ ಗೌರವ  ಇನ್ಸ್ ಪೆಕ್ಟರ್ ಸಾಹೇಬರಿಗೆ ಸಿಗುತ್ತದೆ.

ಕುಕ್ಕಿ ಕುಕ್ಕಿ ಆಚೆಗೆ ತಳ್ಳಿದವು

 

ಒಂದು ಹಳ್ಳಿಯಲ್ಲಿ ವಿಶಾಲವಾದ ಮಾವಿನ ಮರ ಇತ್ತು ಆ ಮರದಲ್ಲಿ ಕಾಗೆಗಳು ವಾಸ ಮಾಡಿಕೊಂಡಿದ್ದವು. ಕಾಗೆಯ ಮನೆಯಲ್ಲಿ ಕೋಗಿಲೆಯು ಮೊಟ್ಟೆಯನ್ನು ಇಟ್ಟಿತು ಮೊಟ್ಟೆಯು ಮುಂದೆ ಮರಿಯಾಗಿ ಬಂತು ಹಾಗೆ ಮರಿ ಬೆಳೆದಂತೆ ಕಪ್ಪಾಗಿ ಕಂಡರೂ ಸ್ವಲ್ಪ ದಿನಗಳ ನಂತರ ಅಂದರೆ ವಸಂತ ಮಾಸದ ಗಾಳಿ ಬಂದಾಗ ಸಹಜವಾಗಿ ಕೋಗಿಲೆಯು ತನ್ನ ಮಧುರ ಗೀತೆ ಹೊರಹೊಮ್ಮಿತು.

ಇಂಪಾದ ಮಧುರ ಗೀತೆ ಹಾಡಿದಾಗ ಕಾಗೆಗಳು ಎಲ್ಲವೂ ಸೇರಿ ಕೋಗಿಲೆಗೆ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಆಚೆಗೆ ತಳ್ಳಿದವು ಆದರೆ ಕೋಗಿಲೆ ಕುಹು ಕುಹು ಎಂದು ಹಾಡದೆ ಇರಲು ಸಾಧ್ಯವೇ ಅದು ತನ್ನ ಪಾಡಿಗೆ ತಾನು ಹಾಡುವುದನ್ನು ಆರಂಭಿಸಿತು ಆಗ ಅಲ್ಲಿ ಇರುವ ಕೋಗಿಲೆಗೆ ಕಾಗೆಗಳು ಓಡಿಸಿದವು.

ಕೋಗಿಲೆಯು ಅಗಸದಲ್ಲಿ ಹಾರಿ ಬೇರೆ ಮಾವಿನ ಮರದಲ್ಲಿ ಕುಳಿತು ತನಗೆ ಬೇಕಾದಂತೆ ಹಾಡಿತು ಇದನ್ನು ನೋಡುತ್ತಿದ್ದ ಗಿಳಿ ಇಂಥ ಒಳ್ಳೆಯ ಕಂಠ ಇರುವ ನಿನಗೆ ಕಾಗೆಗಳು ಇಷ್ಟೊಂದು ಕಷ್ಟ ಕೊಡಬಾರದಾಗಿತ್ತು ಎಂದು ಮರುಗಿತು ಕಾಗೆಗಳಿಗೆ ಬಯ್ಯಲು ಆರಂಭಿಸಿತು.

ಕೋಗಿಲೆಯು ಕೀಳಾಗಿ ನೋಡಿದರು ಉಪಯೋಗಿಸಿಕೊಂಡರು ತೊಂದರೆ ಕೊಟ್ಟರು ಅವರಿಗೆ ಧನ್ಯವಾದಗಳು ಹೇಳಬೇಕು ಏಕೆಂದರೆ ನನಗೆ ಕಾಗೆಗಳು ಓಡಿಸದಿದ್ದರೆ ನಾನು ಕೋಗಿಲೆ ಯಾಗುತ್ತಿರಲಿಲ್ಲ ನಾನು ಕೂಡ ಕಾಗೆಯಾಗಿಯೇ ಉಳಿಯುತ್ತಿದೆ ಮತ್ತೆ ನನಗೆ ಸಾಕಷ್ಟು ದಿನ ಆಸರೆ ನೀಡಿದ್ದಾರೆ. ಆದ್ದರಿಂದ ನಾನು ಕಾಗೆಗಳಿಗೆ ಧನ್ಯವಾದಗಳು ಹೇಳಲೇಬೇಕು ಕೃತಜ್ಞತೆಯನ್ನು  ಸಲ್ಲಿಸಲೇಬೇಕು ಎಂದು ಹೇಳಿತು .

ಬಹಳಷ್ಟು ಜನರು ನಮ್ಮನ್ನು ಉಪಯೋಗಿಸಿಕೊಂಡಿರುತ್ತಾರೆ ಅವರಿಂದ ನಾವು ಏನಾದರೂ ಕಲಿತಿರುತ್ತೇವೆ  ನಮಗೆ ಸಹಾಯ ಮಾಡಿದವರಿಗೆ ಎಲ್ಲರಿಗೂ ಹಾರೈಸೋಣ.

ದಯಮಾಡಿ ಸ್ವೀಕರಿಸಿ 

 

ಒಬ್ಬ ದಯಾಮಯಿ ಮಹಾರಾಜ ಇರುತ್ತಾನೆ ಅವನಿಗೆ ಒಬ್ಬನೇ ಒಬ್ಬ ಮಗನಿರುತ್ತಾನೆ ಯುವಕನಿಗೆ ಬೇಕಾದಂಥಹ ಹೆಣ್ಣು ಎಲ್ಲಿ ಯಾವ ಕಡೆ ನೋಡಿದರೂ ಸಿಗುತ್ತಿರುವುದಿಲ್ಲ ಅದರಂತೆ ಯುವರಾಜನಿಗೆ ಹೆಣ್ಣುಗಳು ನೋಡುವುದೇ ಕೆಲಸವಾಗಿರುತ್ತದೆ ಕೊನೆಗೆ ಒಂದು ಸಾರಿ ತನ್ನ ರಾಜ್ಯದಲ್ಲಿ ಮೆರವಣಿಗೆ ಬರುತ್ತಿದ್ದಾಗ ಒಂದು ಯುವತಿ ಕಾಣುತ್ತಾಳೆ ಅವಳನ್ನು ಇಷ್ಟಪಡುತ್ತಾನೆ.

 ನೋಡಲು ಸುಂದರವಾಗಿ ಇರುತ್ತಾಳೆ ಆದರೆ ಇವರ ಕೆಲಸ ಭಿಕ್ಷೆ ಬೇಡಿ ಬದುಕುವುದು ಯುವರಾಜನ ತಂದೆತಾಯಿಗೆ ಹೇಳುತ್ತಾನೆ ನಾನು ಅವಳನ್ನೇ ಮದುವೆಯಾಗುವುದು ಎಂದಾಗ ತಂದೆ ತಾಯಿಗಳಿಗೆ ಅಷ್ಟೇನೂ ಇಷ್ಟವಾಗಲಿಲ್ಲ ಎಷ್ಟು ಹೇಳಿದರೂ ಯುವರಾಜನು ಕೇಳುವುದಿಲ್ಲ. ನಂತರ ಯುವರಾಜನ ಹಠದಿಂದಲೇ ಮದುವೆ ಆಗುತ್ತದೆ .

 ಯುವರಾಜನು  ಇಷ್ಟ ಪಟ್ಟಿ ಮೇಲೆ ಏನೂ ಮಾತಾಡಲಿಕ್ಕೇ ಸಾಧ್ಯವಿಲ್ಲವಾದ್ದರಿಂದ ಅದೇ ರೀತಿ ಅವಳನ್ನು ವಿಶೇಷವಾಗಿ ಅಲಂಕರಿಸಿ ಮದುವೆ ಮಾಡುತ್ತಾರೆ ಮದುವೆಯಾದ ಹದಿನೈದು ದಿನಗಳು ಸಂತೋಷವಾಗಿ ಇರುತ್ತಾರೆ.

ದಿನ ಕಳೆದಂತೆ ಯುವರಾಣಿಯು ಬಾಡುತ್ತಾ ಹೋಗುತ್ತಾಳೆ ಯುವರಾಜನಾದವನು ಎಲ್ಲಾ ವೈದ್ಯರನ್ನು ಕರೆಸಿ ಎಲ್ಲಾ ರೀತಿಯ ಚಿಕಿತ್ಸೆ ಕೊಡಿಸುತ್ತಾರೆ ನಂತರ ಎಲ್ಲ ಪ್ರಯೋಗಗಳನ್ನು ಮಾಡಿಸುತ್ತಾನೆ ಆದರೆ ದಿನಕಳೆದಂತೆ ಇವಳ ಆರೋಗ್ಯ ಕ್ಷೀಣಿ ಸುತ್ತಿರುತ್ತದೆ ಇದಕ್ಕೆ ಪರಿಹಾರವೇ ಎಂದು ಚಿಂತಿಸುತ್ತಿರುತ್ತಾನೆ.

ಅಲ್ಲಿಯ ಮುಖ್ಯಮಂತ್ರಿ ಇದ್ದವನು ನಾನು ಹೇಳಿದಂತೆ ನೀವು ನನಗೆ ಹದಿನೈದು ದಿನಗಳ ಕಾಲ ಅವಕಾಶ ಕೊಡಿ ಎಂದು ಕೇಳುತ್ತಾನೆ ಮತ್ತೆ ಯಾವುದೇ ಕಾರಣಕ್ಕೂ ಮದ್ಯ ಬಂದು ನೀವು ಯಾವುದೇ ರೀತಿಯ ಸಲಹೆಗಳು ನೀಡಬಾರದು ಎಂದು ಮೊದಲೇ ಒಪ್ಪಿಗೆ ಪಡೆಯುತ್ತಾನೆ.

ಮಂತ್ರಿಯು ಎಲ್ಲವನ್ನೂ ಕೂಲಂಕುಷವಾಗಿ ಪರೀಕ್ಷಿಸಿ ಏನು ತೊಂದರೆ ಯಾಗುತ್ತಿದೆ ಎಂದು ನೋಡಿ ಕೊನೆಗೆ ಒಂದು ಉಪಾಯ ಹೊಳೆಯುತ್ತದೆ ಆಗ ಮರುದಿನವೇ ಕೆಲವು ಸಿಪಾಯಿಗಳನ್ನು ಕಳಿಸಿ ಮನೆಗಳಿಗೆ ಹೋಗಿ ಸ್ವಲ್ಪ ಸ್ವಲ್ಪ ಭಿಕ್ಷೆ ಬೇಡಿಕೊಂಡು ಬನ್ನಿ ಎಂದು ಕಳುಹಿಸುತ್ತಾನೆ.

ಸಿಪಾಯಿಗಳು ತಂದ ಅನ್ನಗಳು ಹಲವಾರು ರೀತಿಯ ಊಟಗಳನ್ನು ಒಂದು ಮೂಲೆಯಲ್ಲಿ ಇರಿಸಿ ನಂತರ ಯುವರಾಣಿಗೆ ಹೇಳುತ್ತಾರೆ ರಾಣಿಯವರೇ ನಿಮಗಾಗಿ ಕೆಲವು ಉಡುಗೊರೆ ಬಂದಿದೆ ದಯಮಾಡಿ ಸ್ವೀಕರಿಸಿ  ಎಂದಾಗ ಆ ರಾಣಿಯು ಆ ಅನ್ನವನ್ನು ಸಂತೋಷದಿಂದ ತಿನ್ನುತ್ತಾಳೆ.

 ಕೆಲವು ಮನೆಯ ಅನ್ನವು ಹಳಸಿ ಹೋಗಿರುತ್ತದೆ ತಂಗಳು ಅನ್ನ ಇರುತ್ತದೆ ಚೆನ್ನಾಗಿರುವ ಅನ್ನವು ಇರುತ್ತದೆ ಬಗೆಬಗೆಯ ಅನ್ನ ಇರುತ್ತದೆ ಇವಳಿಗೆ ವಿವಿಧ ರೀತಿಯ ಅನ್ನವನ್ನು ತಿಂದು ಅಭ್ಯಾಸವಾಗಿರುತ್ತದೆ ಹಾಗಾಗಿ ಮುಂದಿನ ಮೂರೇ ದಿನಗಳಲ್ಲಿ ಇವಳ ಆರೋಗ್ಯ ಮರಳಿ ಬರುತ್ತದೆ ಹಾಗೆಯೇ ಕೆಲವು ಅಭ್ಯಾಸಗಳು ಒಂದೇ ಸಾರಿಗೆ ಬದಲಾಗುವುದಿಲ್ಲ ನಿಧಾನವಾಗಿ ಬದಲಾಗುತ್ತದೆ ಮೊದಲಿನಿಂದಲೇ ಒಳ್ಳೆಯ ಹವ್ಯಾಸಗಳುಗೂಡಿಸಿಕೊಳ್ಳೋಣ.

ಜಂಬ ಕೊಚ್ಚಿಕೊಳ್ಳುತಿತ್ತು

ಒಂದು ಗಾಳಿಪಟವು ಆಕಾಶದಲ್ಲಿ ಹಾರುತ್ತಿತ್ತು ನನ್ನ ಮುಂದೆ ಯಾರೂ ಹಾರಲಾರರು ನಾನೇ ಹೆಚ್ಚು ಎಂದು ಜಂಬ ಕೊಚ್ಚಿಕೊಳ್ಳುತಿತ್ತು ಆಗ ಕೆಳಗೆ ಇದ್ದ ಬಾಲಂಗೋಚಿ ಹೇಳಿತು ಸ್ನೇಹಿತ ನಾನೂ ನಿನ್ನ ಕೆಳಗೆ ಇದ್ದೇನೆ ನನ್ನನ್ನು ಮರೆಯಬೇಡ ಎಂದು ಗಾಳಿಪಟಕ್ಕೆ ನೆನಪಿಸಿತು.

ಪಟವು ಹೇಳಿತು ನೀನು ಯಾರೋ ನನಗೆ ಗೊತ್ತಿಲ್ಲ ಎಲ್ಲರೂ ನೋಡುವುದು ನನ್ನನ್ನೇ ಆದರೆ ನಿನಗೆ ಯಾರೂ ನೋಡುವುದಿಲ್ಲ. ನಿನಗೆ ಬೆಲೆಯೂ ಇಲ್ಲ ನಿನಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತೆ  ಪಟ ಹೇಳುತ್ತೆ ನನ್ನಿಂದಲೇ ನೀನೂ ಇದ್ದೀಯ ಮತ್ತೆ ನೀನು ಇಲ್ಲದಿದ್ದರೆ ನಾನು ಇನ್ನೂ ಎತ್ತರಕ್ಕೆ ಹಾರುತ್ತಿದೆ ಎಂದು ಅಹಂಕಾರದಿಂದ ಹೇಳಿತು.

 ಬಾಲಂಗೋಚಿ ಅರ್ಥಮಾಡಿಕೊಂಡು ಪಟಕ್ಕೆ ಸರಿಯಾದ ಪಾಠವನ್ನು ಕಲಿಸಲೇಬೇಕು ಎಂದು ತಕ್ಷಣವೇ ಪಟದಿಂದ ಬೇರೆಯಾಯಿತು ತುಂಬ ಮೇಲೆ ಹಾರುತ್ತಿದ್ದ ಪಟಕ್ಕೆ  ಯಾವುದೇ ರೀತಿಯ (ಬ್ಯಾಲೆನ್ಸ್)   ಸಿಗದೇ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿತು ಬಿದ್ದ ಮೇಲೆ ಬಾಲಂಗೋಚಿ ಹೇಳಿತ್ತು ಏಕೆ ನೀನು ನೆಲಕ್ಕೆ ಬಂದು ಇಳಿದು ಬಿಟ್ಟೆ ಸಾಕಾಯಿತೆ ಇನ್ನು ಎತ್ತರಕ್ಕೆ ಹಾರಬಹುದಿತ್ತಲ್ಲ ಎಂದು ಹೇಳಿದಾಗ  ಗಾಳಿಪಟಕ್ಕೆ ತನ್ನ ತಪ್ಪಿನ ಅರಿವಾಯಿತು.

ಪಟ ಬಾಲಂಗೋಚಿಗೆ ಕ್ಷಮೆ ಕೇಳಿತ್ತು ಬಾಲಂಗೋಚಿ ಸಮಾಧಾನದಿಂದ ಈಗಲಾದರೂ ನೀನು ಅರಿತೆ ಅಲ್ಲವೆ ಅಷ್ಟೇ ಸಾಕು ಅದೇ ರೀತಿ ನಮ್ಮ ಅಭಿವೃದ್ಧಿಗೆ ಬೇಕಾದಷ್ಟು ಜನರು ಕಾರಣವಾಗಿರುತ್ತಾರೆ ಅವರನು ನಾವು ಎಂದು ಮರೆಯಬಾರದು ನಮಗೆ ಸಹಾಯ ಮಾಡಿದವರನ್ನು ಗೌರವಿಸೋಣ.

ಪ್ರೀತಿಯ ಅವಶ್ಯಕತೆ ಇದೆ

ಒಬ್ಬ ಧನವಂತ ಹಿರಿಯ ವ್ಯಕ್ತಿ ಬಂದು ತನ್ನ ಮಗನ ಮೇಲೆ ಒಂದು ಕಂಪ್ಲೇಂಟ್ ಕೊಟ್ಟರು ನನಗೆ ನನ್ನ ಮಗ ಪ್ರತಿ ತಿಂಗಳು ಹಣ ಕೊಡಬೇಕು  ಹಣ ಕೊಡುತ್ತಿಲ್ಲ ಆಗ ನ್ಯಾಯಾಧೀಶರು ಮಗನನ್ನು ಕರೆದರೂ ವಯಸಾದವರಿಗೆ  ನಿಮಗೆ ಏನು ಬೇಕು ಎಂದು ಕೇಳಿದರು ಆಗ ವಯಸ್ಸಾದವರು ನನಗೆ ಪ್ರತಿ ತಿಂಗಳು ನೂರು ರೂಪಾಯಿ ಕೊಟ್ಟರೆ ಸಾಕು ಎಂದಾಗ ಮಗನು ಹೇಳಿದನು.

 ನನ್ನ ತಂದೆಯವರ ಬಳಿಯೇ ಸಾಕಷ್ಟು ಹಣ ಇದೆ ಇದನ್ನು ಗಮನಿಸಿದ ನ್ಯಾಯಾಧೀಶರು ಹಿರಿಯ ವ್ಯಕ್ತಿಯನ್ನು ಕರೆದು ಕೇಳಿದರು ನನಗೆ ಒಂದು ಸಂದೇಹ ನಿಮ್ಮ ಬಳಿಯೂ ಹಣ ಇದೆ, ಆದರೂ ನೀವು ಏಕೆ ಕೇವಲ 100 ರೂಪಾಯಿಯನ್ನು ಕೇಳಿದ್ದೀರಿ ಎಂದಾಗ ಹಿರಿಯರು ನನ್ನ ಬಳಿ ಸಾಕಷ್ಟು ಹಣ ಇದೆ ಮಗನಿಗೆ ನೋಡುವ ಇಚ್ಛೆ ಆಯಿತು ನಾನು ದೂರವಾಣಿಯಲ್ಲಿ ಕರೆ ಮಾಡಿದೆ ಆದರೂ ಮಗ ಮಾತನಾಡಿಸುತ್ತಿಲ್ಲ ಎಂದು ಮನಸ್ಸಿನಲ್ಲಿ ಅಡಗಿರುವ ಸತ್ಯವನ್ನು ಹೇಳುತ್ತಾರೆ.

ಹಿರಿಯರು ನನಗೆ ಹಣ ಬೇಡ ಅವನನ್ನು ನೋಡಬೇಕು ಅನಿಸುತ್ತದೆ ಎಂದು ಹೇಳುತ್ತಾರೆ ಇದನ್ನು ನ್ಯಾಯಾಧೀಶರು ಅರ್ಥ ಮಾಡಿಕೊಳ್ಳುತ್ತಾರೆ ಹೆತ್ತವರಿಗೆ ಹಣದ ಅವಶ್ಯಕತೆ ಇಲ್ಲ ಆದರೆ ಪ್ರೀತಿಯ ಅವಶ್ಯಕತೆ ಇದೆ ನಂತರ ಮಗನನ್ನು ನ್ಯಾಯಾಧೀಶರು ಕರೆದು ಸಮಯ ಸಿಕ್ಕಿದಾಗ ನಿಮ್ಮ ತಂದೆ ತಾಯಿಯರನ್ನು ಮಾತನಾಡಿಸು ಹೆತ್ತವರನ್ನು ಮರೆಯಬಾರದು ಎಂದು ಹೆತ್ತವರ ಬಗ್ಗೆ ವಿವರಿಸುತ್ತಾರೆ ಆಗ ಮಗನು ಅರ್ಥಮಾಡಿಕೊಳ್ಳುತ್ತಾನಂತೆ.

 ನನ್ನ ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಇತರರು ನಮಗೆ ಹೇಳಬೇಕೇ?

Leave a Comment