ಇಲ್ಲಿ ಯಾರಿಗೆ ಪ್ರವೇಶವಿದೆ

ಒಂದು ದೊಡ್ಡ ಆಸ್ಪತ್ರೆಯಲ್ಲಿ ಅಳಗಿರಿ ಹುಡುಗ ಹೋಗುತ್ತಾನೆ ತನ್ನ ಚಿಕ್ಕಪ್ಪನನ್ನು ಅಡ್ಮಿಟ್ ಮಾಡಿರುತ್ತಾರೆ ಯಾವ ವಾರ್ಡ್ ಎಂದು ಹುಡುಗನಿಗೆ ತಿಳಿದಿರುತ್ತದೆ ಆದ್ರೆ ಆಸ್ಪತ್ರೆಗೆ ಹೋದಾಗ ಎಲ್ಲಿ ಹೇಗೆ ಹೋಗಬೇಕು ಎಂಬುದು ಗೊತ್ತಿರುವುದಿಲ್ಲ.

 ಸೆಕ್ಯೂರಿಟಿ ಅವರಿಗೆ ನಾನು ನಮ್ಮ ಚಿಕ್ಕಪ್ಪ ಅವರನ್ನು ನೋಡಬೇಕು ಹೇಗೆ ಹೋಗಬೇಕು ಎಂದಾಗ ಆಗ ಅಲ್ಲೇ ಇದ್ದ ಒಬ್ಬ ಸೆಕ್ಯುರಿಟಿ ಗಾರ್ಡ್ ಹೇಳುತ್ತಾರೆ ನೇರವಾಗಿ ಹೋಗು ಎಡಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿ ಹಾಗೆ ನೇರವಾಗಿ ಹೋಗು ಒಂದು ಕೊಠಡಿ ಕಾಣುತ್ತದೆ.

 ಅಲ್ಲಿ ಪ್ರವೇಶವಿಲ್ಲ ಎಂದು ಒಂದು ಫಲಕವಿರುತ್ತದೆ ಅದರೆ ಬಲಗಡೆಗೆ ಹೋಗು ನಿನಗೆ ತುಂಬ ಸುಲಭವಾಗಿ ನಿನ್ನ ವಾರ್ಡ್ ಸಿಗುತ್ತದೆ ಎಂದು ಹೇಳಿದರು ಹಾಗೆಯೇ ಹುಡುಗ ಹೋಗುತ್ತಾನೆ ಎಡಕ್ಕೆ ಬಲಕ್ಕೆ ಹೋಗಿ ನೇರವಾಗಿ ಒಂದು ಕೊಠಡಿ ಕಾಣುತ್ತದೆ ಬೋರ್ಡ್ ಇರುತ್ತದೆ ಆದರೆ ಏನು ಬರೆದಿದ್ದಾರೆ ಎಂದು ಅಷ್ಟೊಂದು ಗಮನಿಸಲಿಲ್ಲ ಓದಿನಲ್ಲೂ ಅಷ್ಟೊಂದು ಜಾಣನಲ್ಲ ಒಳಗಡೆ ಹೋಗುತ್ತಾನೆ.

 ಅಲ್ಲಿ ಹಿರಿಯರು ಹುಡುಗನನ್ನು ಹೇಳುತ್ತಾರೆ ಪ್ರವೇಶವಿಲ್ಲ ಎಂದರು ನೀನು ಬಂದಿದ್ದೀಯಲ್ಲ ಎಂದು ಹೇಳುತ್ತಾರೆ ಆಗ ಹುಡುಗ ಮುಗ್ಧವಾಗಿ ಕೇಳುತ್ತಾನೆ ಇಲ್ಲಿ ಯಾರಿಗೆ ಪ್ರವೇಶವಿದೆ ಎಂದಾಗ ಹಿರಿಯ ಸರ್ಜನ್ ರವರು ಇಲ್ಲಿ ಪರಿಣಿತಿ ಪಡೆದ ಸರ್ಜನ್ ಗಳು ಡಾಕ್ಟರ್ ಗಳಿಗೆ ಮಾತ್ರ ಪ್ರವೇಶ ಇರುತ್ತದೆ ಸಾಮಾನ್ಯವಾದ ವೈದ್ಯರು ನರ್ಸ್ ಗಳು ಅಲ್ಲಲ್ಲೇ ಇರುತ್ತಾರೆ ಎಂದು ಮೃದುವಾಗಿ ಹೇಳಿದರು ನಂತರ ವಾರ್ಡ್ ಸಂಖ್ಯೆ ಹೇಳಿ ಕಳುಹಿಸುತ್ತಾರೆ.

 ಹುಡುಗ ತನ್ನ ಚಿಕ್ಕಪ್ಪನವರನ್ನು ನೋಡಿದ ನಂತರ ಹುಡುಗನ ಮನಸ್ಸಿನಲ್ಲಿ ಮತ್ತೊಂದು ಪ್ರಶ್ನೆ ಕಾಡುತ್ತದೆ ಪ್ರವೇಶವಿಲ್ಲ ಎಂದು ಹೇಳಿದರು ಮತ್ತೆ ಆ ಹಿರಿಯರನ್ನು ಹೋಗಿ ಕೇಳುತ್ತಾನೆ ನಾನು ಇದೇ ರೀತಿ ಓದಿಕೊಂಡರೆ ನನಗೂ ವಾರ್ಡ್ ಗೆ ಪ್ರವೇಶ ಇರುತ್ತದೆ ಅಲ್ಲವೆ ಎಂದು ಕೇಳುತ್ತಾನೆ.

ಸರ್ಜನ್ ರವರು ಹೌದು ನೀನೂ ಕೂಡ ಏನು ಬೇಕಾದರೂ ಮಾಡಬಹುದಾಗಿದೆ ನೀನು ಎಂಬಿಬಿಎಸ್ ಹಾಗೂ ಎಂ ಎಸ್ ಮಾಡಿದರೆ ನಿನಗೂ ಪ್ರವೇಶವಿದೆ ಎಂದು ಹೇಳುತ್ತಾರೆ ಆಗ ಹುಡುಗನು ಇದೇ ಒಂದು ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ನಂತರ ಚೆನ್ನಾಗಿ ಓದಿ ದೊಡ್ಡ ಸರ್ಜನ್ ಆಗುತ್ತಾನೆ ಇಲ್ಲಿ ನಾವು 2 ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು.

  ಪ್ರವೇಶವಿಲ್ಲ ಎಂದಾಗ ಪ್ರವೇಶ ಎನ್ನುವ ಅರ್ಹತೆ ಗಳಿಸಿಕೊಳ್ಳಬೇಕು ಆಗ ನಮಗೂ ಪ್ರವೇಶ ಇರುತ್ತದೆ ಇನ್ನೊಂದು ಉನ್ನತ ಮಟ್ಟಕ್ಕೆ ಬೆಳೆದಾಗ ಮೃದುವಾಗಿ ನಯವಾಗಿ ಮಾತನಾಡೋಣ ಬೆಳೆಯುವವರಿಗೆ ಸರಿಯಾದ ಮಾರ್ಗದರ್ಶನ ನೀಡೋಣ.

ತಪ್ಪು ನನ್ನದೋ ನಿಮ್ಮದೋ

ರೈಲ್ವೆ ನಿಲ್ದಾಣದಿಂದ ಆಚೆ ಬಂದ ನಂತರ ಒಬ್ಬ ಆರಿದಂ ತರಲೇ ಪ್ರಯಾಣಿಕ ಅವಸರವಾಗಿ ಬಂದು ಆಟೋದಲ್ಲಿ ಕುಳಿತುಕೊಂಡನು ನಂತರ ಮೀಟರ್ ಹಾಕಿ ಬೇಗ ಹೋಗು ಎಂದು ಚಾಲಕನಿಗೆ ಹೇಳಿದನು ಅದರಂತೆ ಆ ಆಟೋ ಚಾಲಕ ವೇಗವಾಗಿಯೇ ಹಾರನ್ ಮಾಡಿಕೊಂಡು ವೇಗವಾಗಿ ಮುಂದೆ ಮುಂದೆ ಹೋಗುತ್ತಿದ್ದಾನೆ.

ಆಟೋ ಚಾಲಕ ಕೇಳಿದನು ಸರ್ ಎಲ್ಲಿಗೆ ಹೋಗಬೇಕು ಆದರೂ ಪ್ರಯಾಣಿಕ ಮಾತ್ರ ಮುಂದೆ ಬೇಗ ಹೋಗಿ ನನಗೆ ಸಮಯವಾಗುತ್ತಿದೆ ಎಂದು ಹೇಳುತ್ತಿದ್ದಾನೆ ಎಲ್ಲಿಗೆ ಎಂದು ಹೇಳುತ್ತಿಲ್ಲ ಸುಮಾರು ಅರ್ಧಗಂಟೆಯಷ್ಟು ಕಳೆದಿದೆ ಚಾಲಕನು ತನಗೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಚಾಲನೆ ಮಾಡುತ್ತಿದ್ದಾನೆ ಆದರೂ ಆ ಪ್ರಯಾಣಿಕ ಬೆವರು ಒರೆಸಿಕೊಳ್ಳುತ್ತಿದ್ದಾನೆ.

 ಮತ್ತೆ ಕೇಳಿದರೆ ಇನ್ನೂ ವೇಗವಾಗಿ ಹೋಗು ಇದನ್ನು ಕೇಳಿದ ಚಾಲಕ ಕೊನೆಗೆ ಕೇಳಿದನು ಸರ್ ನನಗೆ ಎಷ್ಟು ಸಾಧ್ಯವೋ ಅಷ್ಟು ನಾನು ವೇಗವಾಗಿ ಚಾಲನೆ ಮಾಡುತ್ತಿದ್ದೇನೆ ನಾವು ಎಲ್ಲಿಗೆ ಹೋಗಬೇಕು ಎಂದು ಹೇಳಿ ಎಂದು ಬಲವಂತವಾಗಿ ಹೇಳಿದಾಗ ಪ್ರಯಾಣಿಕ ಆಗ ವಿಳಾಸ ಹೇಳಿದ.

ವಿಳಾಸವನ್ನು ಕೇಳಿದ ನಂತರ ಚಾಲಕ ಗಾಬರಿಯಾದನು ಮೊದಲೇ ಹೇಳಬಾರದೆ ನಾವು ವಿಳಾಸದ ವಿರುದ್ಧ ದಿಕ್ಕಿಗೆ ಹೋಗುತ್ತಿದ್ದೇವೆ ಎಂದನು ಆಗ ಆ ಪ್ರಯಾಣಿಕ ತಲೆ ಚಚ್ಚಿಕೊಂಡು ಹೇಳಿದನು.

 ನನ್ನ ಸಮಯ ವ್ಯರ್ಥ ಮಾಡಿದೆ ಎಂದು ಚಾಲಕನನ್ನು ಬಯ್ಯಲು ಶುರುಮಾಡಿದರು ಆಗ ಚಾಲಕನು ವಿನಮ್ರವಾಗಿ ಹೇಳಿದನು ನೀವು ಹೇಳಿದಂತೆ ನಾನು ಚಾಲನೆ ಮಾಡುತ್ತಿದ್ದೇನೆ ಅಷ್ಟೆ ಆದರೆ ನೀವು ಎಲ್ಲಿಗೆ ಎಂದು ಹೇಳುತ್ತಿಲ್ಲ ತಪ್ಪು ನನ್ನದೋ ಅಥವಾ ನಿಮ್ಮದೋ ಎಂದು ಕೇಳಿದನು

ನಂತರ ಮೀಟರ್ ನಲ್ಲಿ ತೋರಿಸಿದಷ್ಟು ದುಡ್ಡು ಕೊಟ್ಟು ಮತ್ತೆ ಬೇರೆ ಆಟೊಗೆ ಪ್ರಯಾಣಿಕ ಹೋದನು ಚಾಲಕ ತಲೆಕೆಟ್ಟ ಗಿರಾಕಿ ಎಂದು ಮುಂದೆ ಹೋದನು.

ಸರಿಯಾದ ಯೋಜನೆ ಇದ್ದು ಕೆಲಸ ಮಾಡಿದರೆ ಕೆಲಸವು ಪೂರ್ಣವಾಗುತ್ತದೆ ಯೋಜನೆ ಇಲ್ಲದ ಕೆಲಸ ಮಾಡಿದರೆ ಸಮಯವೂ ಹಣವು ವ್ಯರ್ಥವಾಗುವುದಲ್ಲದೇ ದೈಹಿಕವಾಗಿ ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೇವೆ ಆದುದರಿಂದ ಮೊದಲೇ ಯೋಜನೆ ಮಾಡಿ ಮುನ್ನಡೆಯೋಣ.

ಯೋಚಿಸಿದ ನಂತರ

ಹಲವಾರು ವರ್ಷಗಳ ಹಿಂದೆ ಒಂದು ಅರಣ್ಯದಲ್ಲಿ ಒಂದು ನದಿ ಇತ್ತು ಆ ನದಿಯ ಬಳಿ ಒಂದು ಕೋತಿ ಹಾಗೂ ಒಂದು ಮೀನು ಆತ್ಮೀಯ ಸ್ನೇಹಿತರಾಗಿದ್ದವು ದಿನನಿತ್ಯವೂ ತನ್ನ ಕಷ್ಟ ಸುಖ ಎಲ್ಲವೂ ಹಂಚಿಕೊಳ್ಳುತ್ತಿದ್ದವು ನೀರಿನ ಪ್ರವಾಹ ತುಂಬಾ ಜಾಸ್ತಿಯಾಯ್ತು.

ನದಿಯ ನೀರು ಹೆಚ್ಚಾಗು ತ್ತಿದೆ ಇದನ್ನು ಗ್ರಹಿಸಿದ  ಮೀನು ಹೇಳಿತು ಸ್ನೇಹಿತ ನನಗೆ ಯಾಕೋ ತುಂಬಾ ಹೆದರಿಕೆಯಾಗುತ್ತಿದೆ ಬೆಳಿಗ್ಗೆಯಿಂದ ಸಂಜೆಗೆ ದಿನದಿಂದ ದಿನಕ್ಕೆ ನೀರು ಹೆಚ್ಚಾಗಿ ಹೋಗುತ್ತಿದೆ ನಾನು ಬದುಕುತ್ತೇನೆಯೊ ಇಲ್ಲವೊ ಎಂದು ಜೀವಭಯದಿಂದ ಹೇಳಿತು.

 ಆಗ ಕೋತಿಯು ನೀನು ಯಾವುದೇ ಕಾರಣಕ್ಕೂ ನೀನು ಹೆದರಬೇಡ ನಾನು ಇದ್ದೇನೆ ನಾನು ನಿನ್ನನ್ನು ಕಾಪಾಡುತ್ತೇನೆ ಎಂದು ಹೇಳಿ ನಿಧಾನವಾಗಿ ಮೀನನ್ನು ಹಿಡಿದು ಕೊಂಡು ಮರದ ಮೇಲೆ ಹೋಗಿ ಎಲೆಗಳನ್ನು ಜೋಡಿಸಿ ಒಂದು ಬೆಚ್ಚಗಿನ ಮನೆಯನ್ನು ಮಾಡಿತು.

 ಮೀನನ್ನು ಅಲ್ಲಿ ಇಟ್ಟಿತು ಕೋತಿಗೆ ತುಂಬಾ ಸಂತೋಷವಾಯ್ತು ನಾನು ನನ್ನ ಸ್ನೇಹಿತನನ್ನು ಸಾವಿನಿಂದ ಕಾಪಾಡಿದ್ದೇನೆ ಎಂದು ಹೀಗಿತು ಬೆಳಿಗ್ಗೆ ಪ್ರವಾಹ ಕಡಿಮೆಯಾಯಿತು ಮೀನನ್ನು ಬಿಡಲು ಹೋಗೋಣ ಎಂದು ನೋಡಿದಾಗ ಮೀನು ಸತ್ತು ಹೋಗಿತ್ತು ಕೋತಿ ಮರೆತು ಬಿಟ್ಟಿತ್ತು.

 ಮೀನು ನೀರು ಇಲ್ಲದೆ ಬದುಕುವುದಿಲ್ಲ ಕೋತಿಯು ತನ್ನ ಸ್ನೇಹಿತನನ್ನು ಕಳೆದುಕೊಂಡೆ ಎಂದು ಕೊನೆಗೆ ಪಶ್ಚಾತ್ತಾಪಪಟ್ಟಿತು ಹೀಗೆಯೇ ಕೆಲವರು ಸಹಾಯ ಮಾಡುತ್ತಾರೆ ಆದರೆ ಆ ಸಹಾಯ ನಿಜಕ್ಕೂ ಅನುಕೂಲ ವಾಗುತ್ತದೆಯೋ ಅಥವಾ ಅನಾನುಕೂಲವಾಗುತ್ತದೆಯೋ ತಿಳಿದ ನಂತರ ನಾವು ಯೋಚಿಸಿ ಸಹಾಯ ಮಾಡೋಣ.

ಮಹಾಸೋಮರಿ

ಒಂದು ಊರಿನಲ್ಲಿ ಒಬ್ಬ ಅಜಿಶ್ಯ ಸೋಮಾರಿ ರಾಜ ಇರುತ್ತಾನೆ ಅವನಿಗೆ ಒಂದು ಆಲೋಚನೆ ಬರುತ್ತದೆ ಮಹಾ ಸೋಮರಿಗಳನ್ನು ಹೇಗೆ ಕಂಡುಹಿಡಿಯಬಹುದು ಎಂದು ಅಕ್ಷಲಾ ಮಂತ್ರಿಗೆ ಕೇಳುತ್ತಾನೆ. ಮಂತ್ರಿ ಹೇಳುತ್ತಾನೆ ಮಹಾರಾಜರೇ. ಎಲ್ಲಾ ಸೋಮಾರಿಗಳಿಗೆ ಕರೆಸಿ ಗುಡಿಸಿನಲ್ಲಿ ಇರಿಸೋಣ ಆಗ ತಿಳಿಯುತ್ತದೆ ಎಂದು ಹೇಳಿದಾಗ ರಾಜನಿಗೆ ಇದು ಅರ್ಥವಾಗುವುದಿಲ್ಲ.

 ಪ್ರಾಯೋಗಿಕವಾಗಿ ಮಾಡಿ ತೋರಿಸು ಎಂದು ರಾಜರು ಹೇಳುತ್ತಾರೆ ಸೋಮಾರಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಎಲ್ಲಾ ಸೋಮಾರಿಗಳಿಗೂ ಕರೆಯುತ್ತಾರೆ ಪ್ರತಿಯೊಬ್ಬರಿಗೂ ಒಂದೊಂದು ಗುಡಿಸಿಲಿನಲ್ಲಿ ಉಳಿದುಕೊಳ್ಳಲಿಕ್ಕೆ ವ್ಯವಸ್ಥೆ ಮಾಡುತ್ತಾರೆ ಸೋಮಾರಿಗಳಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಿದ್ಧಪಡಿಸುತ್ತಾರೆ.

 ಮುಸ್ಸಂಜೆಯ ಸಮಯ ಇದ್ದಕ್ಕಿದ್ದಂತೆ ಗುಡಿಸಿಲು ಗಳಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಇದನ್ನು ನೋಡಿದ ಬಹಳಷ್ಟು ಸೋಮಾರಿಗಳು ಬದುಕಿದರೆ ಸಾಕು ಎಂದು ಓಡಿ ಹೋಗುತ್ತಾರೆ ಆದರೆ ಒಬ್ಬ ಸೋಮಾರಿ ಮಾತ್ರ ಹಾಗೆ ಮಲಗಿರುತ್ತಾನೆ ಇನ್ನೊಬ್ಬ ಬಂದು ಮಹಾ ಸೋಮಾರಿಗೆ ಎಬ್ಬಿಸುತ್ತಾನೆ.

 ಕುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ ಬೇಗ ಆಚೆ ಬಾ ಎಂದರೆ ನೀನೇಕೆ ತಲೆಕೆಡಿಸಿಕೊಳ್ಳುತ್ತಿಯ ಈ ಗುಡಿಸಲು ಬೇರೆಯವರದು ಗುಡಿಸಿಲಿಗೆ ಬೆಂಕಿ ಹತ್ತಿಕೊಂಡಿದೆ ನಾನು ನಿಶ್ಚಿಂತೆಯಿಂದ ಮಲಗುತ್ತೇನೆ ಎಂದು ಹೇಳುತ್ತಾನೆ ತಕ್ಷಣ ನೀನು ಕೂಡ ಅದರಲ್ಲೇ ಬೆಂಕಿಗೆ ಸುಟ್ಟು ಹೋಗುತ್ತೀಯಾ ಎಂದಾಗ ಮಹಾ ಸೋಮಾರಿಗೆ ಅರ್ಥವಾಗುತ್ತದೆ.

 ಆಗ ಮಹಾಸಮಾರಿ ನಿಧಾನಕ್ಕೆ ಆಚೆ ಬರುತ್ತಾನೆ ಇವನನ್ನು ಹಿಡಿದು ಮಹಾಸಮಾರಿಯೆಂದು ಬಹುಮಾನ ಕೊಟ್ಟಿ ಕಳುಹಿಸುತ್ತಾರೆ.

ಆಕಾಶದಲ್ಲಿ ಹಾರಲು ಸಾಧ್ಯವಿಲ್ಲ

ಒಂದು ದೊಡ್ಡ ಚರ್ಚಿನಲ್ಲಿ ಒಂದು ಸಮಾರಂಭ ಇತ್ತು ಇದರಲ್ಲಿ ಹಲವಾರು ದೊಡ್ಡ ದೊಡ್ಡ ಪಾದ್ರಿಗಳು ಭಾಗವಹಿಸಿದರು ಚರ್ಚಿಸಿದ ವಿಷಯ ಏನೆಂದರೆ ಪ್ರಪಂಚ ಮುಂದೆ ಬದಲಾಗುತ್ತದೆ ಅದಕ್ಕೆ ಹೊಂದಿ ಕೊಳ್ಳಬೇಕು.

 ಹೇಗೆ ಹೊಂದಿಕೊಳ್ಳಬೇಕು ಎನ್ನುವ ಚಿಂತನೆಗಳನ್ನು ಎಲ್ಲರೂ ಅವರಿಗೆ ಅನಿಸಿತಂತೆ ಹೇಳಿದರು ಅದರಲ್ಲಿ ಒಬ್ಬ ಪಾದ್ರಿಯವರು ಹೇಳಿದರು ಮುಂದೆ ತಂತ್ರಜ್ಞಾನ ಆವಿಷ್ಕಾರ ಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತದೆ ಹಾಗೆಯೇ ಮನುಷ್ಯ ಗಾಳಿಯಲ್ಲಿ ಹಾರಾಡುವ ದಿನಗಳು ಕೂಡ ನಾವು ನೋಡಬಹುದು ಎಂದು ಹೇಳಿದರು.

ಈ ಮಾತು ಕೇಳುತ್ತಿದ್ದಂತೆಯೇ ಸಭೆಯಲ್ಲಿ ಕುಳಿತಿದ್ದವರು ಗಾಬರಿಯಾದರು ಬಹಿರಂಗವಾಗಿ ಪ್ರತಿಭಟಿಸಿದರು  ಆಕಾಶದಲ್ಲಿ ಹಾರುವುದು   ಹಾರುವುದು ಅಸಂಭವ  ಇದು ದೇವರಿಂದ ಮಾತ್ರ ಸಾಧ್ಯ ಎಂದು ಮೇಲು ಧ್ವನಿಯಲ್ಲಿ  ಕಿರಿಚಿದರು ಈ ಮಾತನ್ನು ಕೇಳುತ್ತಿದ್ದಂತೆಯೇ ಹಿರಿಯ ಪಾದ್ರಿ ಅವರು ಮರು ಮಾತನಾಡದೆ  ಆ ಸಮಾರಂಭದಿಂದ ತಮ್ಮ ಎರಡೂ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದರು ನಂತರದಲ್ಲಿ ಇದೇ ಮಕ್ಕಳು ದೊಡ್ಡವರಾಗಿ ಅಸಾಧ್ಯ ಸಾಧಿಸಿದರು.

 ಪ್ರಪ್ರಥಮವಾಗಿ ವಿಮಾನ ಯಾನವನ್ನು ಪರಿಚಯಿಸಿದರು ಇವರ ಹೆಸರು ಬಿಷಪ್ ರೈಟ್ ಮಕ್ಕಳ ಹೆಸರು ಆರ್ವಿಲ್ ರೈಟ್ ಮತ್ತು ವಿಲ್ಬರ್ ರೈಟ್ ಯಾರು ಹೆಚ್ಚಾಗಿ ಭೂತಕಾಲದಲ್ಲಿಯೇ ಇರುತ್ತಾರೋ ಅವರು ಹಿಂದೆ ಉಳಿಯುತ್ತಾರೆ ಯಾರೂ ವರ್ತಮಾನದ ಕಾಲದ ಬಗ್ಗೆ ಚಿಂತಿಸುತ್ತಾರೆ ಅವರು ಮಧ್ಯಮದಲ್ಲಿ ಇರುತ್ತಾರೆ ಯಾರು ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಅವರು ಅಭಿವೃದ್ಧಿ ಹೊಂದುತ್ತಾ ಹೋಗುತ್ತಾರೆ. ನಾನು ಭವಿಷ್ಯದ ಬಗ್ಗೆ ಏನೇನು ಯೋಚಿಸುತ್ತಿದ್ದೇನೆ?

Leave a Comment