ಇನ್ನೂ ಕಳೆದುಕೊಳ್ಳಬೇಕಾಗುತ್ತದೆ

ಒಂದು ಊರಿನಲ್ಲಿ ಜಗವೀರ್ ಮಹಾರಾಜ ಅಕಂಪಿತ ಮಹಾರಾಣಿ ಇಬ್ಬರೂ ವಾಯು ಸಂಚಾರಕ್ಕೆಂದು ಬಂದಿರುತ್ತಾರೆ ಎಲ್ಲವನ್ನು ನೋಡಿದ ನಂತರ ದಾರಿಯಲ್ಲಿ ಬರಬೇಕಾದರೆ ಒಬ್ಬ ಮೀನು ವ್ಯಾಪಾರಿಯೂ ಆಕರ್ಷಕವಾಗಿರುವ ಬಣ್ಣ ಬಣ್ಣದ ಮೀನುಗಳನ್ನು ಮಾರಾಟಕ್ಕೆ ಇಟ್ಟಿದ್ದನು ಇದನ್ನು ರಾಜರು ನೋಡಿ ಒಂದು ಮೀನನ್ನು ತೆಗೆದುಕೊಂಡು ಮಹಾರಾಣಿಯವರಿಗೆ ಕೊಟ್ಟರು ನಂತರ ಮೀನಿನ ಬೆಲೆ ಎಷ್ಟು ಎಂದು ಕೇಳಿದರು.

ಬುದ್ಧಿವಂತ ಮೀನು ವ್ಯಾಪಾರಿಯು ಮಹಾರಾಜರೇ ನನಗೆ ಏನೂ ಬೇಡ ನನ್ನ ಕಡೆಯಿಂದ ನಿಮಗೆ ಸಮರ್ಪಣೆ ಯಾಗಲಿ ಎಂದು ವಿನಮ್ರವಾಗಿ ಕೇಳಿದ ರಾಜನಾದವನು ಇವನ ಒಳ್ಳೆಯ ಮನಸ್ಸನ್ನು ನೋಡಿ ನೂರು ಚಿನ್ನದ ನಾಣ್ಯ ಇರುವ ಒಂದು ಥೈಲಿಯನ್ನು ಕೊಟ್ಟನು ರಾಣಿಗೆ ಮಾತ್ರ ತುಂಬ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ಮನಸ್ಸಿನಲ್ಲಿ ಕೊರಗಿದಳು.

 ತಕ್ಷಣ ಅತಿ ಬುದ್ಧಿವಂತಿಕೆಯಿಂದ ರಾಣಿಯು ಈ ಮೀನು ಗಂಡೋ ಹೆಣ್ಣೋ ಎಂದು ಕೇಳಿ ಗಂಡು ಇದ್ದರೆ ಹೆಣ್ಣು ಹೆಣ್ಣು ಇದ್ದರೆ ಗಂಡು ಎಂದು ಹೇಳಿ ಆ ಹಣವನ್ನು ವಾಪಸ್ ಪಡೆಯುತ್ತೇನೆ ಎಂದು ರಾಜನಿಗೆ ಹೇಳಿದಳು ರಾಜರು ಸುಮ್ಮನಾದರು ಮಹಾರಾಣಿ ಕೇಳಿದಳು ಆ ಮೀನು ಗಂಡೋ ಹೆಣ್ಣೋ ಹೇಳಿ ಎಂದು ಕೇಳಿದಳು ಮೀನು ವ್ಯಾಪಾರಿಯೂ ವಿನಯದಿಂದ ಮಹಾರಾಣಿಯವರೇ ಇದು ನಿಮ್ಮ ಕೈಗೆ ಸೇರಿದೆ ಗಂಡಾದರೇನು ಹೆಣ್ಣಾದರೇನು ಅದು ನೀವೇ ಹೇಳಬಹುದಾಗಿದೆ ಎಂದು ಹೇಳಿದನು.

 ರಾಣಿಯ ಕಸರತ್ತು ವಿಫಲವಾಯಿತು ಆಗ ರಾಜನಿಗೆ ಇನ್ನಷ್ಟು ಸಂತೋಷವಾಗಿ ಇನ್ನೂ ನೂರು ಚಿನ್ನದ ನಾಣ್ಯ ಇರುವ ಥೈಲಿಯನ್ನು ಹೆಂಡತಿಗೆ ಕೊಟ್ಟನು ವ್ಯಾಪಾರಿಗೆ ಕೊಡು ಎಂದು ಹೇಳಿದನು ರಾಣಿಯು ಬೇಕು ಬೇಕೆಂದು ಒಂದು ಚಿನ್ನದ ನಾಣ್ಯ ಬೀಳುವಂತೆ ಕೊಟ್ಟಳು ವ್ಯಾಪಾರಿಯು ಒಂದು ಚಿನ್ನದ ನಾಣ್ಯವನ್ನು ಹುಡುಕುತ್ತಿದ್ದನು.

ರಾಣಿಯು ಇಷ್ಟು ಚಿನ್ನದ ನಾಣ್ಯಗಳು ಬಂದರೂ ಒಂದು ಚಿನ್ನದ ನಾಣ್ಯ ಬೇರೆಯವರಿಗೆ  ಸಿಕ್ಕರೆ ಅವರು ಸಂತೋಷ ಪಡುತ್ತಾರೆ ನಿನಗೆ ಹೆಚ್ಚು ದುರಾಸೆ ಇದೆ ಎಂದು ಹೇಳಿದಳು ಇದನ್ನು ಕೇಳಿದ ಮೀನಿನ ವ್ಯಾಪಾರಿಯು ನಯ  ವಿನಯವಾಗಿ ಮಹಾರಾಣಿಯವರೇ ನಾನು ಒಂದು ಚಿನ್ನದ ನಾಣ್ಯಕ್ಕೆ ದುರಾಸೆ ಪಡುತ್ತಿಲ್ಲ ಆ ನಾಣ್ಯದ ಮೇಲೆ ರಾಜರ ಭಾವಚಿತ್ರವಿದೆ ಅದನ್ನು ಯಾರೂ ತುಳಿಯಬಾರದು ಎನ್ನುವ ನನ್ನ ಮನೋಭಾವನೆ ಆದ್ದರಿಂದ ಚಿನ್ನದ ನಾಣ್ಯವನ್ನು ಹುಡುಕುತ್ತಿದ್ದೇನೆ ಎಂದು ಹೇಳಿದನು.

 ಸಿಕ್ಕಿದ ಮೇಲೆ ಆ ನಾಣ್ಯ ನಾನು ಬೇರೆಯವರಿಗೆ ಕೊಡುತ್ತೇನೆ ಇದನ್ನು ಕೇಳಿದ ಮಹಾರಾಣಿಗೆ ತಲೆ ಕೆಟ್ಟು ಹೋಯಿತು ನಂತರ ಮಹಾರಾಜರು ಇನ್ನೂ ನೂರು ಚಿನ್ನದ ನಾಣ್ಯದ ಥೈಲಿಯನ್ನು ವ್ಯಾಪಾರಿಗೆ ಬಹುಮಾನವಾಗಿ ಕೊಟ್ಟರು ರಾಣಿಯು ಈಗ ನಾನು ಏನೇ ಮಾತನಾಡಿದರೂ ಇನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಮೌನವಾದಳು.  

ಯಾರೂ ಗುರುತು ಹಿಡಿಯುತ್ತಿಲ್ಲ

ಒಂದು ಕಾಗೆ ಆಹಾರಕ್ಕಾಗಿ ಅಲೆದು ಅಲೆದು ಸಾಕಾಗಿ ಒಂದು ಕಡೆ ಕುಳಿತುಕೊಂಡಿತು ಎಲ್ಲಾ ಪಾರಿವಾಳಗಳು ಮಂದಿರದ ಮುಂದೆ ಚೆನ್ನಾಗಿ ತಿನ್ನುತ್ತಾ ಇದ್ದವು ಅವುಗಳಿಗೆ ಬೇಕಾದಷ್ಟು ಧಾನ್ಯಗಳು ಇದ್ದವು ಕಾಗೆ ಯೋಚಿಸಿತು ನಾನೂ ಕೂಡ ಪಾರಿವಾಳದ ತರ ಇದ್ದರೆ ನನಗೂ ಚೆನ್ನಾಗಿ ಆಹಾರ ಸಿಗುತ್ತದೆ ಎಂದು ಒಂದು ಉಪಾಯ ಕೊಂಡುಕೊಂಡಿತು.

 ಬೂದಿಯಲ್ಲಿ ಹೋಗಿ ಒದ್ದಾಡಿ ಮತ್ತೆ ನೀರಿನಲ್ಲಿ ಬಂದು ತನ್ನ ಬಣ್ಣವೆಲ್ಲವೂ ಪಾರಿವಾಳದ ರೀತಿಲಿ ಮಾಡಿಕೊಂಡಿತು ನಂತರ ಕಾಗೆಯು ಪಾರಿವಾಳದ ತರವೇ ಇತ್ತು ಕಾಗೆಯು ಕೂಡ ಚೆನ್ನಾಗಿ ತಿಂದಿತು ನಂತರ ಸುಮ್ಮನೆ ಇರಬಾರದೆ ಕಾಗೆ ಕಾಕಾ ಎಂದು ಶಬ್ದವನ್ನು ಮಾಡಿತು ಆಗ ಎಲ್ಲ ಪಾರಿವಾಳಗಳಿಗೆ ತಿಳಿದು ಚುಚ್ಚಿ ಚುಚ್ಚಿ ಓಡಿಸಿದವು.

 ಕಾಗೆಯು ತನ್ನ ಪರಿವಾರದೊಂದಿಗೆ ಬಂದಿತು ಆಗ ಅಲ್ಲಿಯೂ ಕೂಡ ಯಾರೂ ಗುರುತು ಹಿಡಿಯುತ್ತಿಲ್ಲ ಕಾಗೆಗಳು ಕೂಡ ಅವರ ಭಾಷೆಯಲ್ಲಿ ಬೈದು ಹೊಡೆದು ಓಡಿಸುತ್ತಾರೆ ಕಾಗೆಯ ಭಾಷೆಯಲ್ಲಿ ಮಾತನಾಡಿದರೂ ಕಾಗೆಗಳು ಅರ್ಥಮಾಡಿಕೊಳ್ಳುತ್ತಿಲ್ಲ ಆಗ ನಾನು ಮಾಡಿದ್ದು ತಪ್ಪು ಎಂದು ಕಾಗೆ ಅರ್ಥಮಾಡಿಕೊಳ್ಳುತ್ತದೆ.

 ಮಾಡಿದ್ದು ಒಂದೇ ತಪ್ಪು ಬಣ್ಣ ಬದಲಾಯಿಸಿತು ಇದು ಪಾರಿವಾಳದ ಕಡೆಗೂ ಹೋಗಲಿಲ್ಲ ಈ ಕಡೆ ಕಾಗೆಯ ಗುಂಪಿಗೂ ಸೇರಲಿಲ್ಲ ನಂತರ ಹೋಗಿ ತನ್ನ ದೇಹ ಸರಿ ಮಾಡಿಕೊಂಡು ಬಂದರು ಯಾರು ಸೇರಿಸಲಿಲ್ಲ.

ಯಾರು ಬೇಕಾದರೂ ಬರಬಹುದು

ಒಂದು ಸಾರಿ ಬಾಬಾ ಅವರು ಊರಿನ ತತ್ತರ್ ರಾಜನ ಅಹಂ ಕಡಿಮೆ ಮಾಡಬೇಕೆಂದು ತೀರ್ಮಾನಿಸಿದರು ಅದಕ್ಕಾಗಿ ಬಾಬಾ ಅವರು ರಾಜನ ಅರಮನೆಯ ಮುಂದೆ ಕುಳಿತರು ಸಿಪಾಯಿಗಳು ಬಂದು ಇಲ್ಲಿಂದ ಹೋಗಿ ಎಂದು ಹೇಳಿದರು.

 ಬಾಬಾ ಅವರು ಕೇಳಲಿಲ್ಲ ಅಲ್ಲಿಯೇ ಇದರು ನಂತರ ಬೇರೆ ಮಂತ್ರಿಗಳು ಕೂಡ ಹೋಗಿ ಹೇಳಿದರು ಆದರೂ ಬಾಬಾ ಸುಮ್ಮನೆ ಕುಳಿತಿದ್ದರು ನಂತರ ರಾಜನೆ ಬಂದನು ಕೋಪದಿಂದ ಹೇಳಿದನು ಇದು ನನ್ನ ಅರಮನೆ ಧರ್ಮಛತ್ರವಲ್ಲ ಎಂದನು.

 ಬಾಬಾ ಅವರು ರಾಜನನ್ನು ನೋಡಿ ನಾನು ದಾರಿಯಲ್ಲಿ ಬರುತ್ತಿರಬೇಕಾದರೆ ಎರಡು ವೃತ್ತಗಳಲ್ಲಿಅಂದವಾದ ಎರಡು ಮೂರ್ತಿಗಳನ್ನು ನೋಡಿದೆ ನಿಮ್ಮನ್ನೇ ಕೋಲುವಂತಿದ್ದವು ಎಂದಾಗ ರಾಜನು ಹೆಮ್ಮೆಯಿಂದ ಒಂದು ಮೂರ್ತಿ ನನ್ನ ತಂದೆಯವರದು ಇನ್ನೊಂದು ಮೂರ್ತಿ ನನ್ನ ತಾತನವರದು ಎಂದು ಹೇಳಿದನು.

ಬಾಬಾ ಅವರು ರಾಜನಿಗೆ ಒಂದು ಪ್ರಶ್ನೆ ಕೇಳಿದರು ಈ ಅರಮನೆಯಲ್ಲಿ ನೀವು ರಾಜ ಆಗುವುದಕ್ಕಿಂತ ಮುಂಚೆ ಯಾರು ರಾಜರಾಗಿದ್ದರು ರಾಜ ನನ್ನ ತಂದೆ ತಂದೆಗೆ ಮುಂಚೆ ನನ್ನ ತಾತ ತಾತನಿಗಿಂತ ಮುಂಚೆ ಯಾರು ಇದ್ದರು ನನ್ನ ಮುತ್ತಾತ ಅವರಿಗಿಂತ ಮುಂಚೆ ಯಾರು ಇದ್ದರು ನನ್ನ ಪೂರ್ವಜರು ಎಂದು ಸಿಟ್ಟಿನಿಂದ ಹೇಳಿದ.

 ನಿಮ್ಮ ಅರಮನೆಯು ಧರ್ಮಛತ್ರ ಧರ್ಮಾಚತ್ರಕ್ಕೆ ಯಾರು ಬೇಕಾದರೂ ಬರಬಹುದು ಯಾರು ಬೇಕಾದರೂ ಹೋಗಬಹುದು. ನೀವು ಸತ್ತನಂತರವೂ ಅರಮನೆ ಇದ್ದೆ ಇರುತ್ತದೆ. ನಿಮ್ಮ ಅರಮನೆ ಏಕೆ ಈ ಜಗತ್ತೇ ಒಂದು ಧರ್ಮಛತ್ರ ನಾವು ಹುಟ್ಟುತ್ತೇವೆ ಸಾಯುವವರೆಗೂ ಇಲ್ಲಿ ಬದುಕುತ್ತೇವೆ ಆದ್ದರಿಂದ ನನ್ನದು ಎಂಬ ಮೋಹ ಇರುವುದು ಒಳ್ಳೆಯದಲ್ಲ ಎಂದು ಹೇಳಿದರು. ಈ ಮಾತಿನಿಂದ ರಾಜನಿಗೆ ಜ್ಞಾನೋದಯವಾಯ್ತು.

ಕೇವಲ ಗೆರೆಗಳು

ಒಂದು ಊರಿನಲ್ಲಿ ಒಬ್ಬ ತಪೋನಿಧಿ ಶ್ರೀಮಂತ ಇದ್ದನು ಅವನಿಗೆ ಒಬ್ಬ ದುರ್ಜಯ್ ಮಗನಿದ್ದನು ಅದೇ ಊರಿನಲ್ಲಿ ಒಬ್ಬ ಕ್ಷೀರಜ್ ಬಡವ ಇದ್ದನು ಬಡವನಿಗೂ ಒಬ್ಬ ಮಗ ಇದ್ದನು ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು ಶ್ರೀಮಂತನ ಮಗ ಇವನು ಒಳ್ಳೆಯ ವಾತಾವರಣದಲ್ಲಿ ಬೆಳೆಯಲಿಲ್ಲ ಬರೀ ಮೋಜು ಮಸ್ತಿ ಮಾಡಿಕೊಂಡು ಇದ್ದನು.

 ಕಲಿಯುವುದರಲ್ಲೂ ಬರೆಯುವುದರಲ್ಲೂ ತುಂಬಾ ಹಿಂದೆ ಉಳಿದಿದ್ದನು ಅದೇ ಬಡವನ ಮಗ ತುಂಬಾ ಚೆನ್ನಾಗಿ ಓದುತ್ತಿದ್ದನು ಹಾಗೆ ಮನೆಯಲ್ಲೂ ಕೂಡ ಓದುತ್ತಿದ್ದನು ಹೀಗೆ ಕಾಲ ಕಳೆಯಿತು ಒಂದು ಸಾರಿ ಶಾಲೆಯಲ್ಲಿ ಯಾರು ಚೆನ್ನಾಗಿ ಓದುತ್ತಿದ್ದಾರೆ ಎಂದು ಪರೀಕ್ಷೆ ಮಾಡಲು ಕಪ್ಪು ಹಲಗೆಯ ಮೇಲೆ ಏನೋ ಬರೆದರು.

 ಮೊದಲು ಶ್ರೀಮಂತನ ಮಗನಿಗೆ ಏನು ಬರೆದಿದೆ ಎಂದು ಶಿಕ್ಷಕರು ಕೇಳಿದರು ಕಪ್ಪು ಹಲಗೆಯ ಮೇಲೆ ಬರೆದಿರುವುದು ಎಲ್ಲ ಗೆರೆಗಳು ಎಂದು ಹೇಳಿದನು ಓದಿಸಿದ ಶಿಕ್ಷಕರಿಗೂ ತುಂಬಾ ಅವಮಾನವಾಯಿತು ನಂತರ ಬಡವನ ಹುಡುಗನಿಗೆ ಓದಲು ಹೇಳಿದರು ಶಿಕ್ಷಕರು ಏನು ಬರೆದಿದ್ದರು ಅದನ್ನು ಸರಿಯಾಗಿ ಉಚ್ಚಾರ ಮಾಡಿ ಓದಿದನು.

 ಆಗ ಪರೀಕ್ಷೆಗೆ ಬಂದಿದ್ದವರು ಸಂತೋಷಪಟ್ಟು ಹೋದರು ಇಲ್ಲಿ ಕಪ್ಪು ಹಲಗೆಯ ಮೇಲೆ ಏನೇನೋ ಬರೆದಿರುತ್ತದೆ ಆದರೆ ಅದನ್ನು ಚೆನ್ನಾಗಿ ಬಲ್ಲವರು ಅಕ್ಷರವೆಂದು ಅರಿತರೆ ಗೊತ್ತಿಲ್ಲದೇ ಇರುವವರು ಕೇವಲ ಗೆರೆಗಳು ಎಂದು ಅರ್ಥಮಾಡಿಕೊಳ್ಳುತ್ತಾರೆ.

ಸನ್ನೆ ಮಾಡಿ ತೋರಿಸುತ್ತಿದೆ

ಒಂದು ಸಾರಿ ಮನೆ ನಾಯಿಯು ಆಚೆ ಓಡಾಡಲು ಬರುತ್ತದೆ ಅದೇ ಸಮಯಕ್ಕೆ ನಾಯಿ ಹಿಡಿಯುವವರು ಬರುತ್ತಾರೆ ಓಡಾಡುತ್ತಿದ್ದ ನಾಯಿಯನ್ನು ಹಿಡಿಯಲು ಓಡಿಸಿಕೊಂಡು ಬರುತ್ತಾರೆ ನಾಯಿಯು ತುಂಬಾ ವೇಗವಾಗಿ ಓಡಿ ಪಕ್ಕದ ಬೀದಿಗೆ ಬರುತ್ತದೆ ಆಗ ಒಂದು ಮನೆ ಕಾಣುತ್ತದೆ.

 ಮನೆಯ ಮುಂದೆ ಒಬ್ಬ ಶಕುನಿ ಮನುಷ್ಯ ನಿಂತಿರುತ್ತಾನೆ ಆಗ ನಾಯಿಯು ಶಕುನಿ ಮನುಷ್ಯನನ್ನು ದಯವಿಟ್ಟು ನನಗೆ ಹಿಡಿಯಲು ಬರುತ್ತಿದ್ದಾರೆ ಸ್ವಲ್ಪ ಸಮಯ ನಾನು ಮನೆಯ ಅಂಗಳದಲ್ಲಿ ಅವಿತುಕೊಳ್ಳುತ್ತೇನೆ ಅವರು ಹೋದ ನಂತರ ನಾನು ಹೋಗುತ್ತೇನೆ ದಯಮಾಡಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತದೆ.

 ಆ ಶಕುನಿ ಮನುಷ್ಯನ್ನು ನಾಯಿಯಲ್ಲಿ ತುಂಬಾ ನಿಯತ್ತು ಜಾಸ್ತಿ ಇರುತ್ತದೆ ನಾನು ಇಷ್ಟು ಮಾಡದಿದ್ದರೆ ಭಗವಂತ ಮೆಚ್ಚುವುದಿಲ್ಲ ಹೋಗಿ ಒಳಗೆ ಅವಿತುಕೋ ಎಂದು ಭರವಸೆ ನೀಡುತ್ತಾನೆ. ನಂತರ ನಾಯಿ ಹಿಡಿಯುವವರು ಬರುತ್ತಾರೆ ಶಕುನಿ ಮನುಷ್ಯನನ್ನು ಕೇಳುತ್ತಾರೆ ಇಲ್ಲಿ ಯಾವುದಾದರೂ ನಾಯಿ ಬಂದಿದೆಯೇ ಆಗ ಮನುಷ್ಯನು ಬಾಯಿಯಿಂದ ಯಾವುದೇ ನಾಯಿ ಬಂದಿಲ್ಲ ಕೈಯಿಂದ ನಾಯಿ ಒಳಗಡೆ ಇದೆ ಎಂದು ಕೈಯಿಂದ ಸನ್ನೆ ಮಾಡಿ ತೋರಿಸುತ್ತಿರುತ್ತಾನೆ.

  ನಾಯಿ ಹಿಡಿಯುವವರು ಶಕುನಿ ಮನುಷ್ಯ ಮಾಡಿದ ಸನ್ನೆಯನ್ನು ಅರ್ಥಮಾಡಿಕೊಳ್ಳದೆ ಹೊರಟು ಹೋಗುತ್ತಾರೆ ನಾಯಿ ಹಿಡಿಯುವವರು ಹೊರಟು ಹೋದ ಮೇಲೆ ನಾಯಿ ಈಚೆ ಬರುತ್ತದೆ ಸುಮ್ಮನೆ ತನ್ನ ಪಾಡಿಗೆ ಹೋಗುತ್ತಿರುತ್ತದೆ ಆಗ ನಿಂತಿದ್ದ ಶಕುನಿ ಮನುಷ್ಯ ನೀನು ನನಗೆ ಧನ್ಯವಾದ ಹೇಳುತ್ತಿಲ್ಲವಲ್ಲ ಎಂದು ಹೇಳುತ್ತಾನೆ.

 ಆಗ ನಾಯಿಯು ನೀನು ಬಾಯಿಯಿಂದ ನಾಯಿ ಇಲ್ಲ ಎಂದು ಹೇಳುತ್ತಿದೆ ಕೈಯಿಂದ ಸನ್ನೆ ಮಾಡಿ ತೋರಿಸುತ್ತಿದೆ ಇದನ್ನು ನಾನು ಒಳಗಡೆಯಿಂದ ನೋಡುತ್ತಿದ್ದೆ ಹೇಗೋ ನಾನು ಪಾರಾದೆ ನಿನ್ನಲ್ಲಿ ನೀಚ ಬುದ್ಧಿ ಇರುವುದರಿಂದ ನಿನಗೆ ನಾನು ಕೃತಜ್ಞತೆ ಆಗಲಿ ಧನ್ಯವಾದ ವಾಗಲಿ ಹೇಳುವುದಿಲ್ಲ ಎಂದು ಹೇಳಿ ಹೋಯಿತು.

 ಕೆಲವು ಮನುಷ್ಯರು ಇರುತ್ತಾರೆ ತುಟಿಗೆ ಸಿಹಿಯನ್ನು ಅಂಟಿಸುತ್ತಾರೆ ತುತ್ತಿನಲ್ಲಿ ವಿಷ ತುಂಬಿರುತ್ತದೆ ಎಚ್ಚರಿಕೆಯಿಂದ ಇರೋಣ.

Leave a Comment