ಹಳ್ಳಿಯಲ್ಲಿ ಒಬ್ಬ ಮಹಾ ಜಿಪುಣ ಇರುತ್ತಾನೆ ಮಹಾ ಜಿಪುಣ ತೆಂಗಿನಕಾಯಿ ಖರೀದಿ ಮಾಡಲು ಅಂಗಡಿಗೆ ಹೋಗುತ್ತಾನೆ ಒಂದು ತೆಂಗಿನ ಕಾಯಿಯ ಬೆಲೆ ಎಷ್ಟು? ಎಂದು ಕೇಳಿದಾಗ ಅಂಗಡಿಯಾತ ನಾಲ್ಲು ರೂಪಾಯಿ ಎಂದು ಹೇಳುತ್ತಾನೆ.
ಮಹಾ ಜಿಪುಣನು ಇದಕ್ಕಿಂತ ಕಡಿಮೆ ಬೆಲೆಗೆ ಎಲ್ಲಾದರೂ ಸಿಗಬಹುದೇ ಎಂದು ಕೇಳುತ್ತಾನೆ ನಿಮಗೆ ಮೂರು ರೂಪಾಯಿಗೆ ಸಂತೆಯಲ್ಲಿ ಸಿಗುತ್ತದೆ ಎಂದಾಗ ಸಂತೆಗೆ ಹೋಗುತ್ತಾನೆ ಸಂತೆಯಲ್ಲ ತಿರುಗಿ ಸಂತೆಯವರಿಗೆ ಕೇಳುತ್ತಾನೆ.
ತೆಂಗಿನಕಾಯಿ ಕಡಿಮೆ ಬೆಲೆಗೆ ಸಿಗುತ್ತದೆಯೇ ಎಂದಾಗ ಸಂತೆಯಲ್ಲಿ ಇರುವವನು ಸ್ವಲ್ಪ ಮುಂದೆ ಹೋದರೆ ತೆಂಗಿನ ತೋಟವಿದೆ ಅಲ್ಲಿ ನಿಮಗೆ ಎರಡು ರೂಪಾಯಿಗೆ ಸಿಗುತ್ತದೆ ಎಂದು ಹೇಳುತ್ತಾನೆ. ಮಹಾ ಜಿಪಣವು ಸಂತೋಷದಿಂದ ತೇಲುತ್ತಾನೆ ತೋಟಕ್ಕೆ ಹೋಗುತ್ತಾನೆ ತೋಟದ ಆಚೆ ನೋಡಿದಾಗ ತೆಂಗಿನಕಾಯಿಗಳು ಇರುತ್ತದೆ ಬೆಲೆ ಎಷ್ಟು ಎಂದು ಕೇಳುತ್ತಾನೆ.
ಮಾಲೀಕನು ಎರಡು ರೂಪಾಯಿಯಂತೆ ನೀವು ಖರೀದಿಸಬಹುದು ಎಂದಾಗ ತೋಟದ ಮಾಲೀಕನಿಗೆ ಇದಕ್ಕಿಂತ ಕಡಿಮೆ ಸಿಗುತ್ತದೆಯೇ ಎಂದಾಗ ಮಾಲೀಕನು ನೀವು ಒಂದು ತೆಂಗಿನಕಾಯಿಯನ್ನು ಒಂದು ರೂಪಾಯಿಯಂತೆ ಖರೀದಿ ಮಾಡಬಹುದಾಗಿದೆ.
ನಿಮಗೆ ಇಷ್ಟವಾದ ತೆಂಗಿನಕಾಯಿಯನ್ನು ನೀವೇ ಕಿತ್ತುಕೊಳ್ಳಬೇಕಾಗಿದೆ ಎಂದಾಗ ಮಹಾ ಜಿಪುಣನಿಗೆ ಮನಸ್ಸಿನಲ್ಲಿ ಆನಂದವಾಗುತ್ತದೆ ಮತ್ತೆ ಮರ ಹತ್ತುವ ಅಭ್ಯಾಸವಿರಲಿಲ್ಲ ಮಹಾ ಜಿಪುಣ ತೆಂಗಿನ ಮರವನ್ನು ಹತ್ತುತ್ತಾನೆ ಆದರೆ ಹತ್ತಲು ಬರದೆ ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುತ್ತಾನೆ. ಆಸೆ ಇರಬೇಕು ಆದರೆ ದುರಾಸೆ ಹೆಚ್ಚಾದಾಗ ಏನಾದರೂ ಎಡವಟ್ಟು ಸಂಭವಿಸುತ್ತದೆ.
ಬೊಗಸೆಯಲ್ಲಿ ಬೆಂಕಿಯ ಕೆಂಡ
ಒಂದು ಊರಿನ ಆಚೆ ಒಂದು ಆಶ್ರಮ ಇರುತ್ತದೆ ಅಲ್ಲಿ ಬಾಬಾ ಅವರು ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಣ ನೀಡುತ್ತಿರುತ್ತಾರೆ ಈ ಆಶ್ರಮದಲ್ಲಿ ಹೋಗಿ ಸೇರಬೇಕು ಎಂದರೆ ಬಾಬಾ ಅವರು ಹಲವಾರು ಚಟುವಟಿಕೆಗಳನ್ನು ನೀಡುತ್ತಿದ್ದರು.
ಚಟುವಟಿಕೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಬಾಬಾ ಅವರು ಸೇರಿಸಿಕೊಳ್ಳುತ್ತಿದ್ದರು. ಹಳ್ಳಿಯಿಂದ ಒಬ್ಬ ಹುಡುಗ ಆಶ್ರಮಕ್ಕೆ ಬಂದನು ಬಾಬಾ ಅವರನ್ನು ನಾನು ಆಶ್ರಮದಲ್ಲಿ ವಿದ್ಯಾಭಾಸ ಮಾಡಬೇಕು ಎಂದು ಹೇಳಿದನು ಅದಕ್ಕೆ ಬಾಬಾ ಅವರು ಹುಡುಗನನ್ನು ನೋಡಿ ಗಮನಿಸಿ ಬೊಗಸೆಯಲ್ಲಿ ಬೆಂಕಿಯ ಕೆಂಡಗಳನ್ನು ತೆಗೆದುಕೊಂಡು ಬಾ ಆಗ ನಾನು ನಿನ್ನನ್ನು ಸೇರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಹುಡುಗ ಆಗಲಿ ತರುತ್ತೇನೆ ಎಂದು ಆಚೆ ಬಂದನು ಈ ರೀತಿ ಕೇಳುತ್ತಾರೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಇದೇ ಮಾತನ್ನು ತಂದೆ ತಾಯಿಗೆ ಹೇಳಿದನು ಆಗ ಮನೆಯವರು ಬಾಬಾ ಅವರಿಗೆ ತಲೆ ಕೆಟ್ಟು ಹೋಗಿದೆ ಹಾಗಾಗಿ ಹೀಗೆ ಹೇಳುತ್ತಿದ್ದಾರೆ ಬೊಗಸೆಯಲ್ಲಿ ಕೆಂಡವನ್ನು ತೆಗೆದುಕೊಂಡು ಹೋಗಲಿಕ್ಕೆ ಸಾಧ್ಯವೇ ಎಂದು ಪುಶ್ನೆ ಕೇಳುತ್ತಾರೆ ಆದರೆ ಹುಡುಗನಿಗೆ ಎಲ್ಲೋ ಒಂದು ಕಡೆ ಬಾಬಾ ಅವರು ಹೇಳಿದ್ದಾರೆ ಎಂದರೆ ಇದರಲ್ಲಿ ಏನು ಸತ್ಯ ಅಡಗಿದೆ ಎಂದು ಮನಸ್ಸಿನಲ್ಲಿ ಅನಿಸುತ್ತಿತ್ತು
ಬಹಳಷ್ಟು ಜನರನ್ನು ಕೇಳಿದ ಬೊಗಸೆಯಲ್ಲಿ ಕೆಂಡವನ್ನು ಹೇಗೆ ತೆಗೆದುಕೊಂಡು ಹೋಗಬಹುದು ಅದರ ಯಾರೂ ಕೂಡ ಉತ್ತರ ನೀಡಲಿಲ್ಲ ಹುಡುಗನ ಮನಸ್ಸಿನಲ್ಲಿ ನಾನು ಹೇಗಾದರೂ ಮಾಡಿ ಆಶ್ರಮದಲ್ಲಿ ಸೇರಲೇಬೇಕು ಎನ್ನುವ ಛಲ ಬೊಗಸೆಯಲ್ಲಿ ಬೆಂಕಿಯ ಕೆಂಡ ಹೇಗೆ ತೆಗೆದುಕೊಂಡು ಹೋಗಬಹುದು ಎಂದು ಬಹಳಷ್ಟು ದಿನ ಚಿಂತಿಸುತ್ತಾನೆ.
ಕೆಲವು ನಂತರ ಹಳ್ಳಿಗೆ ಹೋಗುತ್ತಾನೆ ಇವನ ಸ್ನೇಹಿತನಿಗೆ ಮಾತನಾಡಿಸುತ್ತಾನೆ ಇವನ ಸ್ನೇಹಿತ ಸ್ವಲ್ಪ ಕೆಲಸ ಇದೆ ಮುಗಿಸಿ ಬರೋಣ ಎಂದು ತಂದೆಯ ಹತ್ತಿರ ಹೋಗುತ್ತಾನೆ ತಂದೆಯವರು ಕಬ್ಬಿಣವನ್ನು ಬಿಸಿ ಮಾಡಿ ಕಬ್ಬಿಣಕ, ಆಕಾರ ಕೊಡುವ ಕೆಲಸ ಅವರದು ಕೆಲಸ ಮುಗಿದ ನಂತರ ಸ್ನೇಹಿತನಿಗೆ ಕೇಳುತ್ತಾನೆ.
ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದನೆ ನಾನು ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಬೇಕು ಅದಕ್ಕಾಗಿ ಗುರುಗಳು ಬೊಗಸೆಯಲ್ಲಿ ಬೆಂಕಿಯ ಕೆಂಡವನ್ನು ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ ಎಂದಾಗ ಸ್ನೇಹಿತನು ನಗುತ್ತಾ ಹೇಳುತ್ತಾನ ಸ್ನೇಹಿತ ನಾನು ಜೊತೆಯಲ್ಲಿ ಬರುತ್ತೇನೆ ಎಂದು ಬೆಂಕಿಯ ಕೆಂಡಗಳನ್ನು ಒಂದು ಡಬ್ಬದಲ್ಲಿ ಹಾಕಿಕೊಂಡು ಇನ್ನೊಂದು ಡಬ್ಬದಲ್ಲಿ ಮರಳನ್ನು ಹಾಕಿಕೊಂಡು ಬರುತ್ತಾನೆ.
ಆಶ್ರಮದ ಬಾಗಿಲ ಬಳಿ ಬಂದು ಸ್ನೇಹಿತ ಬೊಗಸೆಯಲ್ಲಿ ಮೊದಲು ಮರಳನ್ನು ಹಾಕಿ ನಂತರ ಬೆಂಕಿಯ ಕೆಂಡಗಳನ್ನು ಇಡುತ್ತಾನೆ ನಂತರ ಬಾಬಾ ಅವರನ್ನು ಕರೆಯುತ್ತಾನ ಆಗ ಬಾಬಾ ಅವರು ಬಂದು ನೋಡಿ ಸಂತೋಷ ಪಡುತ್ತಾರೆ ನಂತರ ಶಿಷ್ಯನಾಗಿ ಸ್ವೀಕರಿಸುತ್ತಾರೆ.
ವಿದ್ಯಾರ್ಥಿಗಳನ್ನು ಏಕೆ ಈ ರೀತಿಯ ಪರೀಕ್ಷೆಗಳನ್ನು ನೀಡುತ್ತಾರೆ ಎಂದರೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇದೆಯೇ ಎಂದು ಪರೀಕ್ಷಿಸುತ್ತಾರೆ ಬದುಕಿನಲ್ಲಿ ಏನಾದರೂ ಸಮಸ್ಯೆ ಬಂದರೆ ಅದನ್ನು ಪರಿಹರಿಸಿಕೊಳ್ಳುವ ಶಕ್ತಿ ಬರಲಿ ಎಂದು ಈ ರೀತಿಯ ಚಟುವಟಿಗಳನ್ನು ನೀಡುತ್ತಾರೆ.
ಉಕ್ಕುತ್ತಿರುವ ಕೋಪವನ್ನು ನಿಯಂತ್ರಿಸಿಕೊಂಡು
ಒಂದು ಸಾರಿ ಗಂಡ ಹೆಂಡತಿ ಇಬ್ಬರೂ ಹಲವಾರು ವರ್ಷಗಳ ನಂತರ ಒಂದು ಶಾಪಿಂಗ್ ಮಾಲ್ ಗೆ ಮಗುವನು ಕರೆದುಕೊಂಡು ಹೋಗುತ್ತಾರೆ ತುಂಟ ಹುಡುಗ ಅದು ನೋಡುವುದು ಇದು ನೋಡುವುದು ಅದು ಬೇಕು ಇದು ಬೇಕು ಎಂದು ಗಲಾಟೆ ಮಾಡುತ್ತಿದ್ದ ಮತ್ತೆ ಅದೇ ವೇಳೆಯಲ್ಲಿ ಮೆಟ್ಟಿಲುಗಳ ಮೇಲೆ ಹತ್ತುವುದು ಇಳಿಯುವುದು ಮಾಡುತ್ತಿರುತ್ತಾನೆ.
ತಾಯಿಯಾದವಳು ಮಗುವಿನ ಗಲಾಟೆ ವರ್ತನೆಯನ್ನು ಹೇಗೋ ಸಹಿಸಿಕೊಂಡು ಮಗುವನ್ನು ಹಿಡಿದುಕೊಂಡು ಏನೇನು ಬೇಕೋ ಅದನ್ನು ನೋಡಿ ತುರ್ತಾಗಿ ಗಂಡನ ಹತ್ತಿರ ಬಂದು ಮಗುವನ್ನು ಗಂಡನ ಕೈಗೆ ಒಪ್ಪಿಸಿ ಹೇಳುತ್ತಾಳೆ ಇವನನ್ನು ಸ್ವಲ್ಪ ನೋಡಿಕೊಳ್ಳಿ ತುಂಬಾ ಕೀಟಲೆ ಮಾಡುತ್ತಿದ್ದಾನೆ ಎಂದು ಹೇಳುತ್ತಾಳೆ.
ತಂದೆಯ ಜೊತೆ ಬಂದಾಗ ಮಟ್ಟಲಿನಿಂದ ಮೇಲೆ ಹತ್ತುತ್ತಿರುತ್ತಾನೆ ಕೆಳಗೆ ಇಳಿಯುತ್ತಿರುತ್ತಾನೆ. ನಂತರ (ಟ್ರಾಲಿ) ವಸ್ತು ಹಾಕುವ ಗಾಡಿಯಲ್ಲಿ ಕುಳಿತು ಕುಣಿಯುತ್ತಿರುತ್ತಾನೆ. ಮತ್ತೆ ಆ ಕಡೆ ಈ ಕಡೆ ಅಡ್ಡಾಡುತ್ತಿರುತ್ತಾನೆ ಮತ್ತು ಅದು ಬೇಕು ಎಂದು ಹೇಳಿರುತ್ತಾನೆ ಹೀಗೆ ಮಾಡಬೇಡ ಎಂದು ಹೇಳಿದರೆ ಕಿರುಚುತ್ತಾನೆ.
ಏನು ಮಾಡುವುದು ಎಂದು ತೋಚದೆ ಕೋಪವಂತೂ ತುಂಬಾ ಬರುತ್ತದೆ ಆದರೆ ಉಕ್ಕುತ್ತಿರುವ ಕೋಪವನ್ನು ನಿಯಂತ್ರಿಸಿಕೊಂಡು ನಯ ವಿನಯವಾಗಿ ಮಾತನಾಡಿಸಿಕೊಂಡು ಬೇಗ ಶಾಪಿಂಗ್ ಮುಗಿಸಿ ಗಂಡ ಹೆಂಡತಿ ಖರೀದಿ ಮಾಡಬೇಕಾಗಿದ್ದ ಇನ್ನೂ ಬೇಕಾದಷ್ಟು ವಸ್ತುಗಳು ಇದ್ದವು. ಹುಡುಗನ ವರ್ತನೆಯಿಂದ ಸದ್ಯಕೆ ಎಷ್ಟು ಖರೀದಿಸಿದ್ದರು ಅಷ್ಟನ್ನೇ ಕೌಂಟರ್ ನಲ್ಲಿ ಬಿಲ್ ಹಾಕಿಸಿ ಆಚೆಗೆ ಬರುತ್ತಾರೆ.
ಹೆಂಡತಿಗೆ ಆಶ್ಚರ್ಯ ಮನೆಯಲ್ಲಿದ್ದಾಗ ಗಂಡ ಸಿಟ್ಟು ಮಾಡಿಕೊಂಡು ಕೋಪ ಮಾಡಿಕೊಳ್ಳುತ್ತಾರೆ ಆದರೆ ಮಾಲ್ ನಲ್ಲಿ ಕೋಪ ಮಾಡಿಕೊಳ್ಳಲೇ ಇಲ್ಲವಲ್ಲ ಎಂದು ಹೆಂಡತಿ ಕೇಳುತ್ತಾಳೆ. ಇಂದು ನೀವು ಕೋಪಿಸಿಕೊಳ್ಳಲಿಲ್ಲ ಎಂದಾಗ ಗಂಡ ಹೇಳುತ್ತಾನೆ ಮನೆಯಲ್ಲಿ ಅಂದರೆ ಯಾರೂ ನೋಡುವುದಿಲ್ಲ ಮನೆಯ ವಿಚಾರವೇ ಬೇರೆ ಆಚೆಯ ವಿಚಾರವೇ ಬೇರೆ ನಾವು ಎಲ್ಲಿ ಹೇಗಿರಬೇಕೋ ಹಾಗೆಯೇ ಇರಬೇಕು.
ಇದ್ದಂತೆಯೇ ಒಪ್ಪಿಕೊಳ್ಳಬೇಕು ಅಥವಾ ಯಾವುದನ್ನು ಸರಿ ಪಡಿಸಲಿಕ್ಕೆ, ಆಗುವುದಿಲ್ಲವೋ ಅದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ಬೇರೆ ದಾರಿಯಿಲ್ಲ ಮತ್ತೆ ನಾವು ಬೇರೆಯವರಿಗೆ ಹೇಳುತ್ತೇವೆ ಸಹನೆಯಿಂದ ಇರಿ ಎಂದು ಅದರ ಬದಲು ಮೊದಲು ನಾವೇ ಸಹನೆಯಿಂದ ಇರಬೇಕು ಎಂದು ಹೇಳಿದಾಗ ಹೆಂಡತಿಗೆ ಅರ್ಥವಾಗುತ್ತದೆ.
ದೊಡ್ಡ ಜಗಳವೇ ಆಯಿತು
ಗುರು ಶಿಷ್ಯರು ಒಂದು ಸಾರಿ ಪ್ರವಾಸಕ್ಕೆ ಹೊರಟಿದ್ದರು ಹೋಗುವ ದಾರಿಯಲ್ಲೇ ಒಬ್ಬ ಮಾಲೀಕ ಇವರನು ನೋಡಿ ತಮ್ಮ ಮನೆಗೆ ಬರಬೇಕೆಂದು ಒತ್ತಾಯಿಸಿದನು ಒತ್ತಾಯದ ಮೇರೆಗೆ ಗುರು ಶಿಷ್ಯರು ಹೋದರು ಊಟ ಉಪಚಾರವಾದ ಮೇಲೆ ಗುರು ಮತ್ತು ಶಿಷ್ಯರು ಅಂಗಡಿ ಹೇಗಿದೆ ಎಂದು ನೋಡಲು ಹೋದರು.
ಈ ಮಾಲೀಕನು ಎಣ್ಣೆಯ ವ್ಯಾಪಾರಿ ಡಬ್ಬಗಳಲ್ಲಿ ಎಣ್ಣೆಯನ್ನು ತುಂಬಿದ್ದುದರಿಂದ ಅದು ಬೆಣ್ಣೆ, ತುಪ್ಪದಂತೆ ತುಂಬ ಚೆನ್ನಾಗಿ ಕಾಣುತ್ತಿತ್ತು ಶಿಷ್ಯನಾದವನು ಸುಮ್ಮನಿರದೇ ಅದನ್ನು ನೋಡಲೆಂದು ಒಂದು ಬೆರಳನ್ನು ಹಾಕಿದ ಎಣ್ಣೆಯೂ ತನ್ನ ಬೆರಳಿಗೆ ಅಂಟಿಕೊಂಡಿತ್ತು ಎಣ್ಣೆ ಹೇಗೆ ಒರೆಸಿಕೊಳ್ಳುವುದು ಎಂದು ಚಿಂತನೆ ಮಾಡಿ ಆಚೆ ಬರುತ್ತಿದ್ದಂತೆ ಅಂಗಡಿಯ ಹತ್ತಿರವಿದ್ದ ಒಂದು ಬಾಗಿಲಿಗೆ ಎಣ್ಣೆಯನ್ನು ಒರೆಸಿದನು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗುರುಗಳು ನೀನು ಹೀಗೇಕೆ ಮಾಡಿದೆ ಎಂದು ಕೇಳಿದರು ಶಿಷ್ಯನಾದವನು ಇದರಿಂದ ಏನಾಗುತ್ತೆ ಗುರುಗಳೇ ಎಂದು ಉಡಾಫೆಯಿಂದ ಹೇಳಿದ ಗುರುಗಳು ಸ್ವಲ್ಪ ದೂರದಲ್ಲಿ ನಾವು ನಿಂತು ನೋಡೋಣ ಎಂದು ಹೇಳಿ ಇಬ್ಬರೂ ಕುಳಿತರು ಬಾಗಿಲಿಗೆ ಒರೆಸಿದ್ದ ಎಣ್ಣೆಯ ಸುವಾಸನೆಗೆ ಕೀಟಗಳು, ನೊಣಗಳು, ಬಂದು ಕುಳಿತವು.
ಆ ನೊಣಗಳಿಗೆ ತಿನ್ನಲು ಹಲ್ಲಿ ನಿಧಾನವಾಗಿ ಸದ್ದು ಮಾಡದೆ ಬಂತು ಇದನ್ನು ಗಮನಿಸುತ್ತಿದ್ದ ಬೆಕ್ಕು, ಹಲ್ಲಿಯನ್ನು ಹಿಡಿಯೋಣವೆಂದು ಬಂತು ಇದನ್ನು ನೋಡಿದ ಪಕ್ಕದ ಮನೆಯ ನಾಯಿ ಬೆಕ್ಕನ್ನು ಹಿಡಿಯಲಿಕೆ, ದಿಕ್ಕುದೆಸೆ ಇಲ್ಲದೆ ಜೋರಾಗಿ ಹಾರಿ ಬೆಕ್ಕನ್ನು ಹಿಡಿಯೋಣ ಎಂದು ಹಾರಿತು.
ಬೆಕ್ಕು ಹಾರಿದಾಗ ಕಾಲಿಗೆ ಎಣ್ಣೆಯ ಡಬ್ಬಕೆ ತಗುಲಿತು ಇದರಿಂದಾಗಿ ಡಬ್ಬದಲ್ಲಿರುವ ಎಣ್ಣೆಯು ನೆಲಕ್ಕೆ ಬಿದ್ದಿತು ಇದನ್ನು ನೋಡಿದ ಮಾಲೀಕನಿಗೆ ಕೋಪ ಬಂತು ದೊಣ್ಣೆಯಿಂದ ಜೋರಾಗಿ ನಾಯಿಯ ಕಾಲಿಗೆ ಹೊಡೆದಾಗ ಏಟು ಬಿದ್ದು ನಾಯಿ ಕುಯ್ ಕುಯ್ ಎಂದು ಕುಂಟುತ್ತಿತ್ತು ಇದನ್ನು ನೋಡಿದ ಪಕ್ಕದ ಮನೆಯವನಿಗೆ ಕೋಪ ಬಂತು ನಾಯಿಗೆ ಏಕೆ ಹೊಡೆದೆ ಎಂದು ಕೇಳಿದ ಮಾಲೀಕ ನನ್ನ ಎಣ್ಣೆಯ ಡಬ್ಬವನ್ನು ಬೀಳಿಸಿದೆ ಎಂದು ಹೇಳಿದನು.
ಪಕ್ಕದ ಮನೆಯವನು ನೀನು ಏಕೆ ನಾಯಿಗೆ ಹೊಡೆದೆ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ಆಯಿತು ಕೆಲವು ಸಾರಿ ಗೊತ್ತಿಲ್ಲದೆ ಮಾಡಿದ ಚಿಕ್ಕ ಕೆಲಸಗಳಿಂದ ಇಷ್ಟೆಲ್ಲಾ ಅನಾಹುತ ಆಗುತ್ತವೆ ಎಂದು ಶಿಷ್ಯನಿಗೆ ಸಂದರ್ಭ ಸಹಿತ ತಿಳಿಸಿದರು ನಂತರ ಶಿಷ್ಯನಿಗೆ ಅರಿವಾಯಿತು.
ಏಕೆ ಹೊಡೆಯುತ್ತಿದ್ದೀರಾ
ಒಬ್ಬ ವ್ಯಕ್ತಿ ಒಂದು ಕಂಪೆನಿಗೆ ಮ್ಯಾನೇಜರಾಗಿ ಕೆಲಸ ಮಾಡುತ್ತಿರುತ್ತಾನೆ ಮ್ಯಾನೇಜರ್ ವ್ಯಕ್ತಿಯನ್ನು ನೋಡುತ್ತಿದ್ದಂಗೆ ಒಳ್ಳೆಯವನು, ಕೆಟ್ಟವನು, ಎಂದು ಹೇಳುವ ಸ್ವಭಾವದವನು ಒಂದು ಸಾರಿ ಬೇರೆ ಕಡೆ ಮೀಟಿಂಗ್ ಗೆ ಹೋಗಬೇಕಾಗಿರುತ್ತದೆ ಮ್ಯಾನೇಜರ್ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದ ಸಂಗತಿ ಬರುತ್ತದೆ.
ಬಸ್ಸಿನಲ್ಲಿ ಸಾಮಾನ್ಯವಾಗಿ ನೂಕುನುಗ್ಗಲು ಇದ್ದೇ ಇರುತ್ತದೆ ಅಂತಹದಲ್ಲಿ ಒಬ್ಬ ಪ್ರಯಾಣಿಕ ಮ್ಯಾನೇಜರ್ ಗೆ ತಳ್ಳಿಕೊಂಡು ಅವಸರದಿಂದ ಹೋಗುತ್ತಿರುತ್ತಾನೆ ತಕ್ಷಣ ಮ್ಯಾನೇಜರ್ ಗೆ ಅನುಮಾನ ಬರುತ್ತದೆ ತನ್ನ ಜೇಬನ್ನು ಚೆಕ್ ಮಾಡಿದಾಗ ಅದರಲ್ಲಿ ಇವರ ಪರ್ಸ್ ಇರುವುದಿಲ್ಲ ಗಾಬರಿಯಾಗುತ್ತಾರೆ ಆಗ ತಕ್ಷಣ ಕಳ್ಳ ಕಳ್ಳ ಎಂದಾಗ ಎಲ್ಲರೂ ಸೇರಿ ಪ್ರಯಾಣಿಕನನ್ನು ಹಿಡಿಯುತ್ತಾರೆ ಮತ್ತು ಹೊಡೆಯುತ್ತಾರೆ.
ಏಟು ತಿನ್ನುತ್ತಿರುವವ ಪ್ರಯಾಣಿಕ ಕೇಳುತ್ತಾನೆ ನನ್ನನು ನೀವು ಏಕೆ ಹೊಡೆಯುತ್ತಿದ್ದೀರಾ ಎಂದು ಕೇಳುತ್ತಾನೆ ಆಗ ಮ್ಯಾನೇಜರ್ ಹೇಳುತ್ತಾನೆ ನನ್ನ ಪರ್ಸ್ ನನ್ನ ಜೇಬಿನಲ್ಲಿಲ್ಲ ಚೆಕ್ ಮಾಡಿ ಎಂದಾಗ ಪ್ರಯಾಣಿಕನ ಜೇಬನ್ನು ಚೆಕ್ ಮಾಡಿದರೆ ಯಾವುದೇ ರೀತಿಯ ಪರ್ಸ್ ಇರುವುದಿಲ್ಲ.
ಕೆಲವು ವಿಸಿಟಿಂಗ್ ಕಾರ್ಡ್ ಕೆಲವು ಚೀಟಿಗಳು, ಮತ್ತೆ ಕೆಲವು ಔಷಧೀಯ ಚೀಟಿಗಳು ಮತ್ತೆ ಒಂದು ಮಗುವಿನ ಅಪ್ಲಿಕೇಷನ್ ಫಾರ್ಮ್ ಇರುತ್ತದೆ ಆಗ ಇತರ ಪ್ರಯಾಣಿಕರು ಕೇಳುತ್ತಾರೆ ಮ್ಯಾನೇಜರ್ ಅವರಿಗೆ ನಿಮಗೆ ಇವನೇ ಕಳ್ಳ ಎಂದು ಹೇಗೆ ಗೊತ್ತು ಎಂದಾಗ ಮ್ಯಾನೇಜರ್ ಹೇಳುತ್ತಾನೆ.
ನಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ ನಾನು ಬಹಳಷ್ಟು ಜನರನ್ನು ನೋಡಿದ್ದೇನೆ ನನ್ನ ಕೈ ಕೆಳಗೆ ಬಹಳಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ನಾನು ನೋಡುತ್ತಿದ್ದ ಹಾಗೆಯೆ ಇವನು ಒಳ್ಳೆಯವನು ಕೆಟ್ಟವನು ಎಂದು ನಾನು ತುಂಬ ಚೆನ್ನಾಗಿ ಹೇಳಬಲ್ಲೆಎಂದು ಹೇಳುತ್ತಾನೆ.
ಅಷ್ಟರಲ್ಲಿ ಒಂದು ಫೋನ್ ಬರುತ್ತದೆ ಮ್ಯಾನೇಜರ್ ಗೆ ಮ್ಯಾನೇಜರ್ ನ ಡ್ರೈವರ್ ಆದವನು ಹೇಳುತ್ತಾನೆ ಸರ್ ನೀವು ಪರ್ಸನ್ನು ಇಲೇ ಬಿಟ್ಟು ಹೋಗಿದ್ದೀರಿ ಎಂದು ಹೇಳುತ್ತಾನೆ ಆಗ ಇದನ್ನು ಕೇಳಿದ ಸುತ್ತ ಮುತ್ತಲಿನವರು ಮಾನೇಜರ್ ಗೆ ಸರಿಯಾಗಿ ವಿಚಾರಿಸುತ್ತಾರೆ.
ಪ್ರಯಾಣಿಕರು ಕೂಡ ಸರಿಯಾಗಿ ಗ್ರಹಿಸಲಿಲ್ಲ ಮ್ಯಾನೇಜರ್ ಕೂಡ ಸರಿಯಾಗಿ ಗಮನಿಸಲಿಲ್ಲ ಯಾವುದೇ ವಿಷಯ ಕೇಳಿದರೂ ಅದನ್ನು ತಾಳ್ಮೆಯಿಂದ ಪರೀಕ್ಷಿಸಿ, ನಂತರ ನಿರ್ಧಾರಕ್ಕೆ ಬರೋಣ.