ಒಬ್ಬರು ಪ್ರಸಿದ್ಧ ಕಿಲಾಡಿ ವೈದ್ಯರು ಇರುತ್ತಾರೆ ಏನೇ ಕಾಯಿಲೆ ಬರಲಿ ವೈದ್ಯರು ತೆಗೆದುಕೊಳ್ಳುತ್ತಿದ್ದ ಹಣ ಒಂದು ರೂಪಾಯಿ ಮಾತ್ರ ಅವರಿಂದ ಗುಣಪಡಿಸಲು ಸಾಧ್ಯ ಇಲ್ಲದಿದ್ದಾಗ ಅವರು ಹತ್ತು ರೂಪಾಯಿಗಳನ್ನು ಹಿಂತಿರುಗಿಸುತ್ತಿದ್ದರು.
ಕಿಲಾಡಿ ವೈದ್ಯರು ತುಂಬಾ ಪ್ರಸಿದ್ಧಿಯಾಗಿದ್ದರು ಒಬ್ಬ ಅತಿ ಬುದ್ಧಿವಂತ ವೈದ್ಯರ ಹತ್ತಿರ ನಾನು ಹತ್ತು ರೂಪಾಯಿ ಹೇಗಾದರೂ ಮಾಡಿ ಸುಳ್ಳು ಹೇಳಿ ನಾನು ಪಡೆಯುತ್ತೇನೆ ಎಂದು ತೀರ್ಮಾನಿಸಿ ವೈದ್ಯರ ಹತ್ತಿರ ಹೋಗಿ ವೈದ್ಯರೇ ನನಗೆ ಏನೇ ತಿಂದರೂ ರುಚಿಸುತ್ತಿಲ್ಲ ಎಂದು ಹೇಳುತ್ತಾನೆ.
ಆಗ ವೈದ್ಯರು ಬಂದ ವ್ಯಕ್ತಿಯನ್ನು ಸರಿಯಾಗಿ ಗಮನಿಸಿ ನಾಲಿಗೆ ಪರೀಕ್ಷಿಸಿ ಕಹಿಯಾಗಿರುವ ಬೇವಿನ ಎರಡು ತೊಟ್ಟು ರಸ ಹಾಕುತ್ತಾರೆ ಆಗ ಆ ಕಹಿಯನ್ನು ತಾಳಲಾರದೆ ಮುಖವನ್ನು ವಿಚಿತ್ರ ಮಾಡಿಕೊಂಡು ತುಂಬಾ ಕಹಿ ಇದೆ ಎಂದು ಹೇಳುತ್ತಾನೆ ಆಗ ವೈದ್ಯರು ಹೇಳುತ್ತಾರೆ ಈಗ ನಿಮ್ಮಗೆ ಎಲ್ಲಾ ರುಚಿಯೂ ತಿಳಿಯುತ್ತದೆ ಎಂದು ರೂಪಾಯಿ ಪಡೆದು ಕಳಿಸುತ್ತಾರೆ.
ನಾನು ಮೂರ್ಖನಾದೆ ನಾನು ಮುಂದಿನ ಸಾರಿ ಮತ್ತೆ ವೈದ್ಯರನ್ನು ಮೂರ್ಖರನ್ನಾಗಿ ಮಾಡುತ್ತೇನೆ ಎಂದು ಚಿಂತಿಸುತ್ತಾನೆ ಮತ್ತೆ ಒಂದು ವಾರದ ನಂತರ ಹೋಗುತ್ತಾನೆ ವೈದ್ಯರೇ ನನಗೆ ಇತ್ತೀಚೆಗೆ ಮರವು ಜಾಸ್ತಿ ಆಗಿದೆ ಎಂದು ಹೇಳುತ್ತಾನೆ ಹೌದೆ ಎಂದು ವೈದ್ಯರು ಪರೀಕ್ಷಿಸುತ್ತಾರೆ ಮತ್ತೆ ಆ ಹಳೆ ಔಷಧಿಯನ್ನು ನೀಡಲಿಕ್ಕೆ ಬರುತ್ತಾರೆ.
ಆಗ ಅತಿ ಬುದ್ಧಿವಂತ ಈ ಔಷಧಿ ತುಂಬಾ ಕಹಿಯಾಗಿದೆ ಬೇಡ ಎನ್ನುತ್ತಾನೆ ಆಗ ವೈದ್ಯರು ಈಗ ನಿಮಗೆ ನೆನಪಿನಶಕ್ತಿ ಮರಳಿ ಬಂದಿದೆ ನನಗೆ ನನ್ನ ಹಣ ಕೊಡಿ ಎಂದು ಪಡೆಯುತ್ತಾರೆ ಬುದ್ಧಿವಂತನಾದವನು ಮತ್ತೆ ನನ್ನ ಹಣ ಹೋಯಿತು ಎಂದು ಮತ್ತೆ ತನ್ನ ನಿರ್ಲಕ್ಷಕ್ಕೆ ತನ್ನನ್ನೇ ತಾನು ಬೈದುಕೊಳ್ಳುತ್ತಾನೆ.
ಈ ಸಾರಿ ನಾನು ಹೇಗಾದರೂ ಮಾಡಿ ವೈದ್ಯರನ್ನು ಮೂರ್ಖನಾಗಿ ಮಾಡಲೇಬೇಕು ಎಂದು ತೀರ್ಮಾನ ಮಾಡುತ್ತಾನೆ ಮತ್ತೆ ಒಂದು ವಾರ ಬಿಟ್ಟು ವೈದ್ಯರ ಬಳಿಗೆ ಹೋಗುತ್ತಾನೆ ವೈದ್ಯರೇ ನನಗೆ ಇಂದು ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ನಾನೇನು ಮಾಡಲಿ ಅಳುವಂತೆ ನಾಟಕ ಮಾಡುತ್ತಾನೆ.
ವೈದ್ಯರು ಇವನನ್ನು ಸರಿಯಾಗಿ ಗಮನಿಸಿ ಹೇಳುತ್ತಾರೆ ನೋಡಪ್ಪ ನಾನು ಕಣ್ಣಿನ ವೈದ್ಯನಂತೂ ಅಲ್ಲ ಅದುದರಿಂದ ನಾನು ನಿನಗೆ ಈ ಚಿಕಿತ್ಸೆಯನ್ನು ನೀಡಲಾರೆ ಎಂದಾಗ ಸಂತೋಷದಿಂದ ಅವನು ಹೇಳುತ್ತಾನೆ ನೀವು ಚಿಕಿತ್ಸೆ ಕೂಡಲಿಲ್ಲವೆಂದರೆ ಐದು ರೂಪಾಯಿ ಕೊಡಿ ಎಂದು ಕೇಳುತ್ತಾನೆ ವೈದ್ಯರು ಐದು ರೂಪಾಯಿಯ ನೋಟನ್ನು ಕೊಡುತ್ತಾರೆ.
ಅತಿ ಬುದ್ಧಿವಂತನಾದವನು ಈ ನೋಟನ್ನು ನೋಡಿ ಬರೀ ಐದು ರೂಪಾಯಿ ಇದಿಯಲ್ಲ ವೈದ್ಯರೇ ಎಂದಾಗ ಮತ್ತೆ ಆ ಐದು ರೂಪಾಯಿ ಪಡೆದು ಹೇಳುತ್ತಾರೆ ನನ್ನ ಫೀಸ್ ಕೊಡಿ ಎಂದು ಕೇಳುತ್ತಾರೆ ಏಕೆಂದರೆ ನಿಮಗೆ ಐದು ರೂಪಾಯಿ ಎಂದು ಹೇಗೆ ತಿಳಿಯಿತು ನಿಮ್ಮ ಕಣ್ಣು ಕೂಡ ಸರಿಯಾಗಿದೆ ಎಂದು ಕಳಿಸುತ್ತಾರೆ.
ಮೂರ್ಖ ಮಾಡಲು ಹೋಗಿ ಅವನೇ ಮೂರ್ಖನಾಗುತ್ತಾನೆ. ನಮ್ಮ ಉದ್ದೇಶ ನಮ್ಮ ಆಲೋಚನೆ ಸರಿಯಾಗಿದ್ದರೆ ಒಳ್ಳೆಯದಾಗುತ್ತದೆ ನಮ್ಮ ಯೋಚನೆ. ಆಲೋಚನೆ. ಒಳ್ಳೆಯದು ಇದ್ದರೆ ಅದು ನಮಗೆ ಮರಳಿ ಬರುತ್ತದೆ.
ಆಕಳು ತನ್ನ ತಾಯಿ ಎಲ್ಲೇ ಇದ್ದರೂ ಸರಿಯಾಗಿ ಹುಡುಕಿಕೊಂಡು ಬರುತ್ತದೆ ಹಾಗೆ ನಮ್ಮ ಕರ್ಮ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾವು ನಿರ್ಧಾರಗಳು ತೆಗೆದುಕೊಂಡಾಗಲೇ ಸರಿಯಾದ ಉದ್ದೇಶ, ನಿರ್ಧಾರಗಳನ್ನು ತೆಗೆದುಕೊಳ್ಳೋಣ.
ಯಾರಿಗೂ ತೊಂದರೆ ಕೊಡುವುದಿಲ್ಲ
ಒಂದು ದೊಡ್ಡ ಸಮಾರಂಭ ಆ ಸಮಾರಂಭದಲ್ಲಿ ಹೆಚ್ಚಾಗಿ ಸಂತರು ಋಷಿಗಳು ಗುರುಗಳೇ ಭಾಗವಹಿಸುತ್ತಾರೆ ಎಲ್ಲರೂ ಗುಂಪು ಗುಂಪಾಗಿ ಆಶ್ರಯ ಪಡೆದಿರುತ್ತಾರೆ ಕೊಠಡಿಯಲ್ಲಿ ಇಕ್ಕಟ್ಟಿನಿಂದ ಇರುತ್ತಾರೆ ಹೊಂದಾಣಿಕೆ ಮಾಡಿಕೊಂಡು ಉಳಿದಿರುತ್ತಾರೆ.
ಹೆಚ್ಚಾಗಿ ಯಾರೇ ಬಂದರು ಇರಲು ಸ್ಥಳ ಇರುವುದಿಲ್ಲ.ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರು ಸಾಧುಗಳು ಅಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿಯುತ್ತದೆ ಆಗ ಪಿಕಲಾಟ ಶುರುವಾಗುತ್ತದೆ ಇಲ್ಲಿ ಇದ್ದ ಎಲ್ಲ ಸಾಧು ಸಂತರು ಅವರು ಬರಬಾರದು ಎಂದು ನೇರವಾಗಿ ಹೇಳದೆ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ತುಂಬ ತುಂಬಿ ಅವರಿಗೆ ಕಳುಹಿಸುತ್ತಾರೆ.
ಹೇಗೆ ತುಂಬಿರುತ್ತಾರೆ ಅಂದರೆ ಒಂದು ಹನಿಯು ಕೂಡ ಹಾಕಿದರೆ ಚೆಲ್ಲುತ್ತದೆ ಈ ಸಂದೇಶವನ್ನು ನೋಡಿದ ಸಾಧು ಅವರು ಆ ಕಡೆ ಈ ಕಡೆ ನೋಡಿದಾಗ ಒಂದು ಹೂವು ಸಿಗುತ್ತದೆ ಅದರಲ್ಲಿ ಒಂದು ಎಲೆಯನ್ನು ಮಾತ್ರ ಕಿತ್ತು ಎಣ್ಣೆಯಲ್ಲಿ ತೇಲಿ ಬಿಡುತ್ತಾರೆ.
ಎಣ್ಣೆಯೂ ಚೆಲ್ಲಲಿಲ್ಲ ಇರುವ ಜಾಗವೂ ಕೂಡ ತೆಗೆದುಕೊಳ್ಳಲಿಲ್ಲ ಮತ್ತೆ ಈ ಸಂದೇಶವನ್ನು ಅವರಿಗೆ ಕೊಡಿ ಎಂದು ಹೇಳಿದರು ಶಿಷ್ಯರು. ಬಂದು ಇದನ್ನು ತೋರಿಸಿದರು ಆಗ ಅಲ್ಲಿ ಇದ್ದ ಎಲ್ಲಾ ಸಾಧು ಸಂತರು ಅರ್ಥಮಾಡಿಕೊಂಡರು. ಮತ್ತೆ ಶಿಷ್ಯರಿಗೂ ಅರ್ಥವಾಯಿತು ನಾನು ಎಲೆಯಂತೆ ತೇಲುತ್ತೇನೆ ನಿಮಗೆ ಯಾರಿಗೂ ತೊಂದರೆ ಕೊಡುವುದಿಲ್ಲ ಇಂದು ಇಲ್ಲಿ ನಾಳೆ ಇನ್ನೆಲ್ಲಿಯೋ ಇರುತ್ತೇನೆ ಎಂದು ಸಾಧು ಅವರು ಸಂದೇಶ ತಿಳಿಸಿದರು.
ಗುಣವೇ ತುಂಬಾ ಮುಖ್ಯ
ಒಂದು ಊರಿನಲ್ಲಿ ಒಬ್ಬ ಮನ್ಮಥ ರಾಜ ಇರುತ್ತಾನೆ ರಾಜನು ಸೌಂದರ್ಯ ಇರುವಂತಹ ವಸ್ತುಗಳಿಗೆ ಹೆಚ್ಚು ಬೆಲೆ ನೀಡುತ್ತಿರುತ್ತಾನೆ ಸೌಂದರ್ಯ ಬಿಟ್ಟರೆ ಏನು ಇಲ್ಲ ಎನ್ನುವುದೇ ಅವನ ಅಭಿಪ್ರಾಯ ಹಾಗಾಗಿ ಸೌಂದರ್ಯ ಇರುವಂತಹ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಒಂದು ಸಾರಿ ಊರಿನ ಆಚೆ ಹೋದಾಗ ಬಾಬಾ ಅವರು ಧ್ಯಾನ ಮಾಡಿಕೊಂಡು ಇರುತ್ತಾರ ಬಾಬಾ ಅವರನ್ನು ನಮಸ್ಕರಿಸಿ ಬಾಬಾ ಅವರೊಂದಿಗೆ ಮಾತುಕತೆ ಆರಂಭವಾಗುತ್ತದೆ. ರಾಜನು ಸುಂದರ ಇರುವುದೇ ಮುಖ್ಯ ಎಂದು ವಾದಿಸುತ್ತಾನೆ.
ಬಾಬಾ ಅವರು ಇದಕ್ಕೆ ಉತ್ತರ ಬೇಕಾದರೆ ನಾನು ನಿಮ್ಮ ಅರಮನೆಗೆ ಬಂದು ನೀಡುತ್ತೇನೆ ಎಂದು ಹೇಳಿ ಅರಮನೆಗೆ ಬಂದು ರಾಜನಿಗೆ ಸುಂದರವಾಗಿ ಇರುವ ಒಂದು ಪಾತ್ರೆಯನ್ನು ಆಯ್ಕೆ ಮಾಡಿ ಒಂದು ಕಡೆ ಇಟ್ಟು ನಂತರ ಬಾಬಾ ಅವರು ಒಂದು ಮಣ್ಣಿನ ಪಾತ್ರೆಯನ್ನು ಪಡೆದು ಎರಡರಲ್ಲೂ ನೀರು ಹಾಕಿ ಎಂದು ರಾಜನಿಗೆ ಕೇಳುತ್ತಾರೆ.
ಸ್ವಲ್ಪ ಸಮಯದ ನಂತರ ಯಾವ ಪಾತ್ರೆಯ ನೀರು ತಂಪಾಗಿರುತ್ತದೆ ಎಂದು ಕೇಳುತ್ತಾರೆ ಮಡಿಕೆಯಲ್ಲಿ ಇರುವ ನೀರೇ ತಂಪಾಗಿರುತ್ತದೆ ಎಂದಾಗ ಬಾಬಾ ಅವರು ಹೇಳುತ್ತಾರೆ.
ನೀರು ತಂಪಾಗಬೇಕಾದರೆ ಸೌಂದರ್ಯ ಮುಖ್ಯವಲ್ಲ ಅದಕ್ಕೆ ಗುಣ ಮುಖ್ಯವಾಗಿರುತ್ತದೆ ಹಾಗೆಯೇ ಮನುಷ್ಯರನ್ನು ನಾವು ನೋಡಿದಾಗ ಅವರ ಸುಂದರತೆ ಅಷ್ಟು ಮುಖ್ಯವಾಗುವುದಿಲ್ಲ ಅವರ ಗುಣವೇ ಮುಖ್ಯವಾದುದು ಎಂದು ವಿವರಿಸಿ ಹೇಳುತ್ತಾರೆ ಆಗ ರಾಜನು ಅರ್ಥಮಾಡಿಕೊಳ್ಳುತ್ತಾನೆ.
ಕಾಣುವುದೇ ಸತ್ಯವಲ್ಲ
ಭಾನುವಾರ ಬಂತು ಎಂದರೆ ಬಹಳಷ್ಟು ಜನರಿಗೆ ಸಂತಸ ಮಕ್ಕಳಿಗೆ ಇನ್ನೂ ತುಂಬಾ ಸಂತೋಷ ಭಾನುವಾರ ಬಂದಾಗ ಮಕ್ಕಳು ಉದ್ಯಾನವನಕ್ಕೆ ಹೋಗುವುದು ಸಹಜ ಒಂದು ಸಾರಿ ತಂದೆ ತಾಯಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಆಟವಾಡಲಿಕ್ಕೆ ಉದ್ಯಾನವನಕ್ಕೆ ಹೋಗುತ್ತಾರೆ.
ಉದ್ಯಾನವನದಲ್ಲಿ ಉಯ್ಯಾಲೆಗಳು, ಜಾರುಗುಪ್ಪೆ ಇತರ ಹಲವಾರು ಆಟದ ವಸ್ತುಗಳು ಇರುತ್ತದೆ ಅಲ್ಲಿ ಆಟ ಅಡಿ ನಂತರ ಸ್ವಲ್ಪ ಮುಂದೆ ಹೋದರೆ ವಿಶ್ರಾಂತಿಗಾಗಿ ಮರಳಿನಲ್ಲಿ ಒಂದು ಮರವಿದ್ದು, ಮರದ ನೆರಳಿನಲ್ಲಿ ಕುಳಿತುಕೊಳ್ಳಲು ಮಕ್ಕಳು ಬಯಸುತ್ತಾರೆ ಅಲ್ಲಿ ಹೋಗುತ್ತಿದ್ದಂತೆಯೇ ಅಲ್ಲಿ ಒಬ್ಬ ಮರದ ಕೆಳಗೆ ಇರುತ್ತಾನೆ.
ಅವನು ಮುಂದೆ ಬರುತ್ತಿದ್ದರೆ ಬೈದು ಕಳಿಸುತ್ತಿರುತ್ತಾನೆ ಆಗ ಮಕ್ಕಳು ಹೇಳುತ್ತಾರೆ ಅಮ್ಮಾ ನಾನು ಅಲ್ಲಿ ಹೋಗಿ ಕುಳಿತುಕೊಳ್ಳುತ್ತೇನೆ ಎಂದು ಹೋಗುತ್ತಿದ್ದರೆ ಒಬ್ಬ ಹುಚ್ಚ ಹೊಗಿ ಎಂದು ಎಲ್ಲಾ ಮಕ್ಕಳಿಗೂ ಕೋಪದಿಂದ ಹೆದರಿಸಿ ಕಳುಹಿಸುತ್ತಿದ್ದಾನೆ ಎಂದು ಮಗು ಹೇಳುತ್ತದೆ.
ಅಮ್ಮ ಆದವಳು ಗಂಡನಿಗೆ ಹೇಳುತ್ತಾಳೆ ರಿ ಯಾಕೋ ಆ ಹುಚ್ಚ ಮಕ್ಕಳು ಆಟವಾಡುತ್ತೇನೆ ಎಂದರೆ, ಹುಚ್ಚ ಬಿಡುತ್ತಿಲ್ಲ ನೋಡಿ ವಿಚಾರಿಸಿ ಎಂದಾಗ ಗಂಡನಾದವನು ನಿಧಾನವಾಗಿ ಮುಂದೆ ಹೋಗಿ ನೋಡಿದಾಗ ಮಕ್ಕಳು ಹೇಳಿದಂತೆಯೇ ಅವನು ಹುಚ್ಚನಾಗಿರುವಂತೆಯೇ ಕಾಣುತ್ತಾನೆ.
ವ್ಯಕ್ತಿಯ ಬಟ್ಟೆಗಳು ಸ್ವಲ್ಪ ಹರಿದಿರುತ್ತದೆ ಸ್ನಾನ ಮಾಡಿ ಎಷ್ಟೋ ದಿನಗಳು ಆಗಿರುತ್ತದೆ ಕಿರುಚಲು ಕೂದಲು ಕೈಯಲ್ಲಿ ಒಂದು ಚೀಲವನ್ನು ಹಿಡಿದುಕೊಂಡು ಮರಳಿನಲ್ಲಿ ಬಗಿ, ಏನೇನೂ ಹುಡುಕಿ ಹುಡುಕಿ ತೆಗೆಯುತ್ತಿರುತ್ತಾನೆ ಮತ್ತೆ ಬ್ಯಾಗಿನಲ್ಲಿ ಹಾಕುತ್ತಿರುತ್ತಾನೆ ಸ್ವಲ್ಪ ಹೊತ್ತು ಗಮನಿಸುತ್ತಾರೆ.
ಮತ್ತೆ ಮಕ್ಕಳು ಬಂದಾಗ ಬೈದು ಅದೇ ರೀತಿ ಕಳಿಸುತ್ತಾನೆ ಹತ್ತಿರ ಬಂದಷ್ಟೂ ಜೋರಾಗಿ ಬೈದು ಕಳಿಸುತ್ತಿರುತ್ತಾನೆ ಹೀಗೆ ಎಲ್ಲಾ ಮಕ್ಕಳು ಗಾಬರಿಯಿಂದ ಕಿರುಚಿಕೊಂಡು ಓಡಿ ಹೋಗುತ್ತಿರುತ್ತಾರೆ ನಂತರ ತಂದೆಯಾದವನು ಧೈರ್ಯವಾಗಿ ಆ ಹುಚ್ಚನ ಬಳಿಗೆ ಹೋಗಿ ನೋಡಿದಾಗ ಆ ಹುಚ್ಚನ್ನು ಯಾವ ಯೋಚನೆಯೂ ಮಾಡುತ್ತಿಲ್ಲ ತನ್ನ ಕೆಲಸದಲ್ಲಿ ಮಗನಾಗಿದ್ದಾನೆ.
ಮರಳಿನಲ್ಲಿ ಇರುವ ಸಣ್ಣ ಸಣ್ಣ ಗಾಜುಗಳ ಚೂರುಗಳನ್ನು ತೆಗೆದು ಚೀಲದಲ್ಲಿ ಹಾಕುತ್ತಿರುತ್ತಾನೆ ಆಗ ತಂದೆಯವರು ಈ ಗಾಜಿನ ಚಿಕ್ಕ ಚೂರುಗಳು ಹೇಗೆ ಬಂದವು ಎಂದು ಪ್ರಶ್ನಿಸುತ್ತಾರೆ ಆಗ ಹುಚ್ಚ ನಂತಿದ್ದವನು ಹೇಳುತ್ತಾನೆ ನೋಡಿ ಸ್ವಾಮಿ ನಿನ್ನ ರಾತ್ರಿ ಶನಿವಾರ ಕೆಲವು ಮೂರ್ಖರು ಬಂದು ಇಲ್ಲಿ ಕುಡಿದು ಹೊಡೆದಾಡಿದರು.
ಆ ಗಾಜಿನ ಬಾಟಲ್ಗಳು ಎಲ್ಲಾ ಚೂರು ಚೂರುಗಳಾಗಿ ಈ ಮರಳಿನಲ್ಲಿ ಬಿದ್ದಿವೆ ಮಕ್ಕಳು ಇಲ್ಲಿ ಆಟ ಆಡಲಿಕ್ಕೆ ಬಂದಾಗ ಕಾಲಿಗೆ ಅಥವಾ ಮೈಗೆ ಚುಚಿಕೊಳ್ಳುತ್ತವೆ ಯಾರಿಗೂ ತೊಂದರೆಯಾಗಬಾರದು ಅಲ್ಲವೇ ಆದ್ದರಿಂದ ನಾನು ಈ ಎಲ್ಲಾ ಗಾಜಿನ ಚೂರುಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದೇನೆ ಎಲ್ಲಾ ಮಕ್ಕಳಿಗೂ ಈ ಕಡೆ ಬಂದರೆ ಎಲ್ಲರಿಗೂ ನಾನು ಬೈದು ಕಳಿಸುತ್ತಿದ್ದೇನೆ ಎಂದು ಹೇಳುತ್ತಾನೆ.
ಯಾರದೇ ಮಕ್ಕಳಾದರೂ ಮಕ್ಕಳಲ್ಲವೇ ಯಾರಿಗೂ ತೊಂದರೆ ಯಾಗಬಾರದೆಂದು ಅದಕ್ಕಾಗಿ ನಾನು ಈ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ.
ಕೆಲವು ಸಾರಿ ನಮಗೆ ಕಟ್ಟದಾಗಿ ಕಂಡರೂ ಮುಂದೆ ಹೋಗಿ ನೋಡಿದಾಗ ನಮಗೆ ಸತ್ಯದ ಅರಿವಾಗುತ್ತದೆ ನಮ್ಮ ಕಣ್ಣಿಗೆ ಕಾಣುವುದೇ ಸತ್ಯವಲ್ಲ ಅದರ ಹಿಂದೆ ಇನ್ನೊಂದು ಸತ್ಯವು ಅಡಗಿರುತ್ತದೆ. ಸಹನೆಯಿಂದ ಪರಿಶೀಲಿಸಿದಾಗ ಅಥವಾ ಪರೀಕ್ಷಿಸಿ ನೋಡಿದಾಗ ಮಾತ್ರ ಅದರ ಸತ್ಯವನ್ನು ನಮಗೆ ತಿಳಿಯುತ್ತದೆ.
ನಿಮ್ಮನ್ನು ನೀವು ಬೈಯ್ದುಕೊಳ್ಳಿ
ಒಂದು ಸಾರಿ ಬಾಬಾ ಅವರ ಆಶ್ರಮಕ್ಕೆ ಬಂದು ಒಬ್ಬ ಮನುಷ್ಯನು ನನಗೆ ಪ್ರತಿಸಾರಿಯೂ ತುಂಬಾ ಕೋಪವ ಬರುತ್ತದೆ ಏನು ಮಾಡಬೇಕು ಎಂದು ಕೇಳಿದನು ಆಗ ಬಾಬಾ ಅವರು ಕೋಪ ಬಂದಾಗ ಕೋಪ ಮಾಡಿಕೊಳ್ಳದೆ ಕೋಪಕ್ಕೆ ಕಾರಣವೇನು? ಎಂಬುದನ್ನು ನಾವು ಕಂಡುಹಿಡಿದರೆ ಕೋಪ ತಾನೇ ತಾನಾಗಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ಆಗ ಮನುಷ್ಯನು ನನಗೆ ಮಾಲೀಕರು ಸದಾ ಬೈಯುತ್ತಲೇ ಇರುತ್ತಾರೆ ಆಗ ನಾನು ಏನೂ ಮಾಡಬೇಕು ಎಂದು ಕೇಳುತ್ತಾನೆ ಬಾಬಾ ಅವರು ನೀವು ತಾಳ್ಮೆಯಿಂದ ಕೇಳಿದರೆ ಸಾಕು ಎಂದು ಉತ್ತರ ನೀಡುತ್ತಾರೆ ನಂತರ ಅವರೊಂದಿಗೆ ಸೇರಿ ನೀವು ನಿಮ್ಮನ್ನೇ ನೀವು ಬೈದುಕೊಳ್ಳಿ ಎಲ್ಲವೂ ಸರಿಹೋಗುತ್ತದೆ ಎನ್ನುತ್ತಾರೆ.
ಕೆಲವೊಂದು ಸಾರಿ ನಾವು ಬೇರೆಯವರನ್ನು ಬಯ್ಯುವುದಕ್ಕೆ ಆಗುವುದಿಲ್ಲ ಆಗ ನಮ್ಮನ್ನು ನಾವೇ ಬೈದುಕೊಳ್ಳುವುದು ಒಳ್ಳೆಯ ಮಾರ್ಗ ಹೀಗೆ ಮಾಡುವುದರಿಂದ ನಮ್ಮ ಕೋಪವನ್ನು ನಾವೇ ಹತೋಟಿಗೆ ತರಬಹುದಾಗಿದೆ.