ಅವಂತಿಕ್ ಗುರು ಮತ್ತು ಚಂಚಲ್ ಶಿಷ್ಯ ಇಬ್ಬರೂ ಕೂಡ ಒಂದು ಉಪನ್ಯಾಸ ಮುಗಿಸಿ ತಮ್ಮ ಆಶ್ರಮಕ್ಕೆ ನಡೆದುಕೊಂಡು ಬರುತ್ತಿದ್ದರು ದಾರಿಯೂ ತುಂಬ ದೀರ್ಘವಾಗಿತ್ತು ಗುರು ಶಿಷ್ಯನಿಗೆ ಹೇಳುತ್ತಿದ್ದಾರೆ ಇವತ್ತು ಸ್ವಲ್ಪ ಬೇಗ ಹೋಗೋಣ ಕತ್ತಲೆಗಿಂತ ಮುಂಚೆ ನಮ್ಮ ಆಶ್ರಮ ಸೇರಿಕೊಳ್ಳೋಣ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂದು ಶಿಷ್ಯನಿಗೆ ಅರ್ಥವಾಗುತ್ತಿಲ್ಲ.
ಗುರುಗಳು ತಮ್ಮ ಒಂದು ಬ್ಯಾಗಿನಲ್ಲಿ ಏನೋ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಹೀಗೆ ಮುಂದೆ ಮುಂದೆ ಬೇಗಬೇಗ ಸಾಗುತ್ತಿದ್ದಾರೆ ಸಂಜೆಯ ಸಮಯ ಬಂತು ಗುರುಗಳು ಪ್ರಾರ್ಥನೆ ಮಾಡಿ ಬರುತ್ತೇನೆ ಎಂದು ಆ ಬ್ಯಾಗನ್ನು ಶಿಷ್ಯನ ಕೈಗೆ ಕೊಟ್ಟರು ಶಿಷ್ಯ ಬ್ಯಾಗನ್ನು ತೆಗೆದು ನೋಡಿದಾಗ ಬ್ಯಾಗಿನಲ್ಲಿ ಚಿನ್ನದ ನಾಣ್ಯದ ಚೀಲವೂ ಇತ್ತು ಆಗ ಶಿಷ್ಯನಿಗೆ ಅರ್ಥವಾಯ್ತು.
ಗುರುಗಳು ಏಕೆ ಹೀಗೆ ವರ್ತಿಸುತ್ತಿದ್ದಾರೆ ಎಂದರೆ ಚಿನ್ನದ ಮೋಹದಿಂದ ಎಂದು ಅರಿತನು ನಂತರ ಗುರುಗಳು ಪ್ರಾರ್ಥನೆ ಮುಗಿಸುವುದಕ್ಕಿಂತ ಮುಂಚೆ ಚಿನ್ನದ ಆ ಚಿಕ್ಕ ಚೀಲವನ್ನು ಬಾವಿಯ ಹತ್ತಿರ ಅಡಗಿಸಿದನು ನಂತರ ಅಷ್ಟೇ ಭಾರವಾದ ಕಲ್ಲುಗಳನ್ನು ಹಾಕಿದನು.
ಗುರುಗಳು ಆ ಬ್ಯಾಗನ್ನು ಪಡೆದು ಅದೇ ರೀತಿ ಗಾಬರಿಯಾಗಿ ಹೋಗುತ್ತಿದ್ದರು ಕೊನೆಗೂ ಸೂರ್ಯಾಸ್ತವಾಯ್ತು ಆಗ ಗುರುಗಳು ಏನು ಮಾಡುವುದು ಆಶ್ರಮ ಸಿಗುತ್ತಿಲ್ಲವಲ್ಲ ಎಂದು ಚಡಪಡಿಸಿದರು.
ಆಗ ಶಿಷ್ಯನು ತಾಳ್ಮೆಯಿಂದ ಹೇಳಿದನು ನೀವು ಚಡಪಡಿಸುವ ಅವಶ್ಯಕತೆ ಇಲ್ಲ ನಾವು ನೆಮ್ಮದಿಯಾಗಿ ಇಲ್ಲಿ ಇದ್ದು ಹೋಗಬಹುದು ಹೇಗೆ ಎಂದು ಗುರುಗಳು ಕೇಳಿದರು ನಾನು ಬ್ಯಾಗಿನಲ್ಲಿರುವ ಚಿನ್ನದ ನಾಣ್ಯವನ್ನು ಅದಲು ಬದಲು ಮಾಡಿದ್ದೇನೆ ಈಗ ನಾವು ನೆಮ್ಮದಿಯಾಗಿ ಇರಬಹುದು ಎಂದು ಹೇಳಿದನು.
ಶಿಷ್ಯನಿಗೆ ಭಯವು ಇತ್ತು ಆಗ ಗುರುಗಳು ತುಂಬಾ ಸಂತೋಷಪಟ್ಟರು ಗುರುಗಳು ಹೆಚ್ಚಿನ ಮೋಹ ಇದ್ದಷ್ಟು ಅಪಾಯ ಜಾಸ್ತಿ ಹೆಚ್ಚು ಪ್ರೀತಿ ಇದ್ದರೂ ಕೇಡು ತಪ್ಪಿದ್ದಲ್ಲ .
ಇವು ಇರುವಷ್ಟು ದಿನ ಇದನ್ನು ಕಾಪಾಡಿಕೊಳ್ಳಬೇಕು ರಕ್ಷಣೆ ಮಾಡಬೇಕು ಎನ್ನುವ ಚಿಂತೆ ಇದ್ದೇ ಇರುತ್ತದೆ ಯಾವಾಗ ಈ ಚಿಂತನೆಗಳು ಮಾಯವಾಗುತ್ತದೋ ಆಗ ತಾಳ್ಮೆ ಸಹಜವಾಗಿ ಬರುತ್ತದೆ ಎಂದು ಶಿಷ್ಯನಿಗೆ ಹೇಳಿದರು ನಂತರ ಅಲ್ಲೆ ಮಲಗಿದ್ದು ಬೆಳಿಗ್ಗೆ ಹೋದರು.
ಬೆಲೆ ಕಟ್ಟಲು ಸಾಧ್ಯವೇ?
ನೇಕಾರ ಎಂಬುವ ವ್ಯಕ್ತಿ ಇದ್ದನು ಇವನ ವೃತ್ತಿ ಬಟ್ಟೆಯನ್ನು ನೇಯ್ದು ಅದೇ ಬಟ್ಟೆಯನ್ನು ಊರಿಗೆ ಹೋಗಿ ಮಾರಿಕೊಂಡು ಬರುವುದು ಇದರಿಂದಾಗಿ ಇವರ ಸಂಸಾರವು ಚೆನ್ನಾಗಿ ನಡೆಯುತ್ತಿತ್ತು ನೇಕಾರ ತಾಳ್ಮೆ ಸ್ವಭಾವದವರು ಬಂದ ಹಣದಲ್ಲಿಯೇ ಸಂತೃಪ್ತಿಯಾಗಿ ಬದುಕುತ್ತಿದ್ದರು.
ನೇಕಾರರು ಬಟ್ಟೆಯನ್ನು ನೇಯ್ದು ದಿನನಿತ್ಯದಂತೆ ಮಾರಾಟ ಮಾಡಲು ಹೋದರು ಆಗ ಒಬ್ಬ ಧಡೂತಿ ಯುವಕ ಬಂದನು ಅವನ ಶೈಲಿ ನೋಡಿದರೆ ಕೋಪಿಷ್ಟ ನೆಂದು ಮುಖದಿಂದಲೇ ಗೊತ್ತಾಗುತ್ತಿದೆ ನೇಕಾರರ ಬಳಿ ಬಂದ ತಕ್ಷಣ ಒಂದು ಬಟ್ಟೆಯನ್ನು ತೆಗೆದು ಕೊಂಡನು ಇದರ ಬೆಲೆ ಎಷ್ಟು ಎಂದು ಗತ್ತಿನಿಂದ ಹೇಳಿದನು.
ನೇಕಾರರು ವಿನಯದಿಂದ ಇಪ್ಪತ್ತು ರೂಪಾಯಿ ಎಂದು ಹೇಳಿದರು ಆಗ ಅವನು ಆ ಬಟ್ಟೆಯನ್ನು ಅರ್ಧಕ್ಕೆ ಹರಿದನು ಈಗ ಈ ಬಟ್ಟೆಗೆ ಎಷ್ಟು ಬೆಲೆ ಎಂದು ಕೇಳಿದನು ಹತ್ತುರೂಪಾಯಿ ಎಂದು ಹೇಳಿದರು ಮತ್ತೆ ಅದರಲ್ಲಿ ಒಂದು ತುಂಡನ್ನು ತೆಗೆದುಕೊಂಡು ಮತ್ತೆ ಅದನ್ನು ಹರಿದನು.
ಈಗ ಇದಕ್ಕೆ ಬೆಲೆ ಎಷ್ಟು ಎಂದು ಕೇಳಿದನು 5 ರೂಪಾಯಿ ಎಂದು ಹೇಳಿದರು ನಂತರ ಹೀಗೆ ಆ ಬಟ್ಟೆಯನ್ನು ಹರಿದು ಹರಿದು ಚಿಕ್ಕದಾಗಿ ಮಾಡಿಬಿಟ್ಟನು ನಂತರ ಇದಕ್ಕೆ ಎಷ್ಟು ಬೆಲೆ ಎಂದು ಕೇಳಿದನು ಆಗ ನೇಕಾರರವರು ವಿನಯದಿಂದ ಹೇಳಿದರು ಇದಕ್ಕೆ ಯಾವುದೇ ಬೆಲೆ ಇಲ್ಲ ಎಸೆಯುವಂಥದ್ದು.
ಹರಿದ ಬಟ್ಟೆ ಯಾವುದಕ್ಕೂ ಉಪಯೋಗವಾಗುವುದಿಲ್ಲ ಎಂದು ಹೇಳಿದರು ಬೇಕಾದರೆ ನೀನೆ ತೆಗೆದುಕೊಂಡು ಹೋಗು ಎಂದರು ಆಗ ಆ ಯುವಕನಿಗೆ ಇವರ ತಾಳ್ಮೆ ನೋಡಿ ಕ್ಷಮಿಸಬೇಕು ಎಂದು ಕೇಳಿದನು ಆಗ ನೇಕಾರ ಅವರು ಹೇಳಿದರು.
ಬಟ್ಟೆಗೆ ಇಪ್ಪತ್ತು ರೂಪಾಯಿ ಬೆಲೆ ಇರಬಹುದು ಆದರೆ ಅದರ ನಿಜವಾದ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ಏಕೆಂದರೆ ತುಂಬಾ ಕಷ್ಟಪಟ್ಟು ಮಾಡಿರುತ್ತಾರೆ ಒಬ್ಬ ರೈತನಾದವನು ಬಿಸಿಲು ಮಳೆ ಗಾಳಿ ಎನ್ನದೆ ಬೆಳೆ ಬೆಳೆಸುತ್ತಾನೆ ಬಹಳ ಕಷ್ಟ ಪಡುತ್ತಾನೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಎಂದು ಕೇಳುತ್ತಾರೆ.
ಈ ರೀತಿ ನೀನು ತುಂಡು ತುಂಡು ಮಾಡಿದ್ದೀಯಾ ಎಂದರೆ ಆ ಶ್ರಮಕ್ಕೆ ಬೆಲೆ ಇಲ್ಲದಂತಾಯಿತು ಎಂದು ತಾಳ್ಮೆಯಿಂದಲೇ ಹೇಳಿದರು.
ಆಗ ಯುವಕನು ಹೇಳಿದನು ನಾನು ಬಟ್ಟೆ ಹರಿಯುತ್ತಿರಬೇಕಾದರೆ ನೀವೇಕೆ ಕೋಪಗೊಳ್ಳಲಿಲ್ಲ ಆವಾಗಲೇ ಯಾಕೆ ಹೇಳಲಿಲ್ಲ ಎಂದು ಕೇಳಿದನು ನಾನು ಇಷ್ಟು ತಾಳ್ಮೆಯಿಂದ ಏಕೆ ಇದ್ದೆ ಎಂದರೆ ನಿನ್ನ ಕೋಪ ಹರಿದು ಹೋಗಲಿ ಎನ್ನುವ ಉದ್ದೇಶದಿಂದ ನಾನು ತಾಳ್ಮೆಯಿಂದ ಇದ್ದೆ ಎಂದು ಮೃದುವಾಗಿ ಹೇಳಿದರು.
ತಾಳ್ಮೆಯಲ್ಲಿ ಹೇಡಿಯ ತಾಳ್ಮೆ ಬೇರೆ ಧೀರರ ತಾಳ್ಮೆ ಬೇರೆ ತಾಳ್ಮೆಯಿಂದ ಇದ್ದು ಸರಿಯಾದ ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳಬೇಕು ಒಂದು ಬುಟ್ಟಿ ಎಷ್ಟು ಬುದ್ಧಿ ಇರುವುದಕ್ಕಿಂತ ಒಂದು ಹಿಡಿಯಷ್ಟು ತಾಳ್ಮೆ ಇದ್ದರೆ ಸಾಕು ಸಂತೃಪ್ತಿಯಾಗಿ ಬದುಕಬಹುದು. ನನ್ನಲ್ಲಿ ತಾಳ್ಮೆ ಎಷ್ಟಿದೆ?
ಅವರಂತೆ ಅವರ ಪ್ರಾರ್ಥನೆ
ಹರ್ ದೀಪ್ ಪ್ರಾಮಾಣಿಕ ವ್ಯಕ್ತಿ ಬೆಳಿಗ್ಗೆ ಎದ್ದ ನಂತರ ನನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಸಿಕ್ಕರೆ ಸಾಕು ಎಂದು ಪ್ರಾರ್ಥನೆ ಮಾಡುತ್ತಿದ್ದನು.
ಒಂದು ಸಾರಿ ವ್ಯಾಪಾರ ಮುಗಿಸಿ ಬರಬೇಕಾದರೆ ಕೆಲವು ದರೋಡೆಕೋರರು ಅವನನ್ನು ತಡೆಹಿಡಿದು ನಿನ್ನಲ್ಲಿರುವ ಎಲ್ಲಾ ಹಣವನ್ನು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮಗೆ ಗ್ರಹಚಾರ ತಪ್ಪಿದ್ದಲ್ಲ ಎಂದು ಹೇಳಿದರು.
ಆ ವ್ಯಾಪಾರಿಯು ಏನೂ ಮಾತನಾಡದೆ ತನ್ನಲ್ಲಿ ಇಟ್ಟಿದ್ದ ಹಣ ಮತ್ತು ಪರ್ಸನ್ನು ಕೊಡುತ್ತಾನೆ ಮತ್ತೆ ಊರಿಗೆ ಬಂದ ತಕ್ಷಣ ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿ ಬಂದನು ದಿನವೂ ಬೇಗ ಬರುತ್ತಿದ್ದೀರಿ
ಇಂದು ಏಕೆ ತಡವಾಗಿ ಬಂದಿದ್ದೀರಿ ಎಂದು ಹೆಂಡತಿ ಕೇಳಿದಳು.ನಡೆದ ಕಥೆಯನ್ನು ಹೇಳಿದನು ನೀವು ದೂರು ಕೊಡ ಬಹುದಾಗಿತ್ತು ಅದರ ಬದಲು ನೀವು ಪ್ರಾರ್ಥನೆ ಮಾಡಿ ಬಂದಿದ್ದೀರಿ ಎಂದು ಕೇಳಿದಳು.
ವ್ಯಾಪಾರಿಯು ನಾನು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಕಾರಣಗಳು ಇವೆ ಇವತ್ತು ನಾನು ಮರೆತು ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗಿರಲಿಲ್ಲ ಮತ್ತೆ ಇವತ್ತು ಅಷ್ಟು ವ್ಯಾಪಾರವು ಕೂಡ ಆಗಲಿಲ್ಲ ಮತ್ತೆ ದರೋಡೆಕೋರರು ಕೂಡ ನನ್ನನ್ನು ಯಾವುದೇ ರೀತಿಯ ಅನಾಹುತ ಮಾಡಲಿಲ್ಲ ಮರಳಿ ಮನೆಗೆ ಬಂದಿದ್ದೇನೆ ಆದುದರಿಂದ ಪ್ರಾರ್ಥನೆ ಸಲ್ಲಿಸಿದೆ ಎಂದನು.
ವೇಷಕ್ಕೆ ತಕ್ಕಂತೆ ನಿರ್ಧಾರ
ನಟರಾಜ್ ಎಂಬುವರು ನಾಟಕ ಕಂಪೆನಿಯ ಮಾಲೀಕರಾಗಿದ್ದರು ಇವರು ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಿದ್ದರು ಯಾವುದೇ ನಟನೆ ಕೊಟ್ಟರು ಅವರು ಅಷ್ಟೇ ಚೆನ್ನಾಗಿ ಅಭಿನಯಿಸುತ್ತಿದ್ದರು ಆದರೆ ಇವರು ಚಿಕ್ಕ ಚಿಕ್ಕ ಕೆಲಸಕ್ಕೂ ತುಂಬ ದೊಡ್ಡದಾಗಿ ಯೋಚನೆ ಮಾಡುತ್ತಿದ್ದರು ಹಾಗಾಗಿ ಇವರು ಕೆಲವು ಚಿಕ್ಕ ಚಿಕ್ಕ ಕೆಲಸಗಳನ್ನು ಕಳೆದುಕೊಂಡಿದ್ದರು.
ಚಿಕ್ಕ ಚಿಕ್ಕ ಕೆಲಸಗಳಿಗೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಿದ್ದರು ಇವರ ಬಳಿ ಕೆಲಸ ಮಾಡುವವರು ಕೂಡ ತುಂಬಾ ಹೆದರಿಕೆಯಿಂದ ಇರುತ್ತಿದ್ದರು ಯಾವ ರೀತಿ ಕೆಲಸ ಮಾಡಿದರೆ ಇಷ್ಟಪಡುತ್ತಾರೋ ಇಲ್ಲವೋ ಎಂಬ ಭಯ ಇದ್ದೇ ಇತ್ತು. ಹೆಜ್ಜೆ ಹೆಜ್ಜೆಗೂ ತಪ್ಪು ಕಂಡು ಹಿಡಿಯುತ್ತಿದ್ದರು.
ಒಂದು ಸಾರಿ ಒಂದು ನಾಟಕ ಮಾಡಬೇಕಾಗಿರುತ್ತದೆ ಆ ನಾಟಕದಲ್ಲಿ ಇವರೇ ಮುಖ್ಯ ನಟರು ಇವರ ಪಾತ್ರ ಏನು ಎಂದರೆ ಮಿಲಿಟರಿ ಜನರಲ್ ಮೆನೇಜರ್ ಇವರು ನಾಟಕಕ್ಕೆ ತುಂಬಾ ಚೆನ್ನಾಗಿ ಅಭ್ಯಾಸ ಮಾಡಿದರು ನಾಟಕಕ್ಕಾಗಿ ಸಿದ್ಧವಾದರು.
ಇನ್ನೂ ಸ್ವಲ್ಪ ಸಮಯವಿದೆ ಎನ್ನುವಷ್ಟರಲ್ಲಿ ಮನೆಯಿಂದ ಒಂದು ದೂರವಾಣಿ ಕರೆ ಬಂತು ನಟರಾಜ್ ಅವರ ಪತ್ನಿಯವರು ಒಂದು ಮನೆಯನ್ನು ನೋಡಿದ್ದೇನೆ ಅದನ್ನು ನೀವು ನೋಡಿ ಖರೀದಿ ಮಾಡಬೇಕು ಇಲ್ಲದಿದ್ದರೆ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಆದುದರಿಂದ ನೀವು ಬರಲೇಬೇಕು ಎಂದು ಬೇಡಿಕೊಂಡರು.
ಜನರಲ್ ಆಗಿದ್ದ ವ್ಯಕ್ತಿ ತಕ್ಷಣ ಮನೆಗೆ ಹೋಗಿ ಆ ಮನೆ ನೋಡಿ ಆಗಷ್ಟೇ ಮನೆಗೆ ಅಡ್ವಾನ್ಸ್ ನೀಡಿ ಮರಳಿ ಬಂದು ನಾಟಕವನ್ನು ಕೂಡ ಯಶಸ್ವಿಯಾಗಿ ಅಭಿನಯಿಸಿದರು ಆಗ ಪತ್ನಿಗೆ ಹಾಗೂ ಈ ಕೆಲಸದವರಿಗೆ ತುಂಬಾ ಆಶ್ಚರ್ಯವಾಯ್ತು.
ನೀವು ಹೇಗೆ ಇಷ್ಟು ಬೇಗ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಮೊದಲು ಒಂದು ಚಿಕ್ಕ ನಿರ್ಧಾರವನ್ನು ತೆಗೆದುಕೊಳ್ಳಿ ಎಂದರೆ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದಿರಿ ಈಗ ನೀವು ತಕ್ಷಣಕ್ಕೆ ನಿರ್ಧಾರವನ್ನು ಮಾಡಿದ್ದೀರಿ ಇದು ಹೇಗೆ ಸಾಧ್ಯ ಎಂದು ಕೇಳಿದರು.
ನಾನು ಜನರಲ್ ವೇಷ ಧರಿಸಿ ಆ ವೇಷಕ್ಕೆ ತಕ್ಕಂತೆ ನಿರ್ಧಾರ ಮಾಡಿದ್ದೇನೆ ಮೇಜರ್ ಆದವರು ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ತುಂಬಾ ನಷ್ಟವಾಗುತ್ತದೆ ಅದೇ ರೀತಿ ನಾನು ಹಾಕಿಕೊಂಡಿರುವ ಬಟ್ಟೆಯ ಪ್ರಭಾವ ಎಂದು ಹೇಳಿದರು.
ಕಷ್ಟಗಳು ಸಮಸ್ಯೆಗಳು ಬಂದಾಗ
ನಾವು ಹಲವಾರು ಆಶಾವಾದಿಗಳನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಅದರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಮರೆಯುವ ಹಾಗಿಲ್ಲ ಏಕೆಂದರೆ ಇವರು 27ವರ್ಷಗಳ ಕಾಲ ಜೈಲಿನಲ್ಲಿ ಕಳೆದವರು ಡಿ ವರ್ಗದ ಖೈದಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರು.
ಒಂಟಿಯಾಗಿ ಇರಬೇಕು 6ತಿಂಗಳಿಗೆ ಒಂದು ಸಾರಿ ಮಾತ್ರ ಯಾರಾದರೂ ಭೇಟಿ ಮಾಡಬಹುದು ಬೇರೆ ವ್ಯಕ್ತಿಗಳು ಈ ಸ್ಥಿತಿಯಲ್ಲಿ ಇದ್ದಿದ್ದರೆ ಯಾವ ರೀತಿ ಇರುತ್ತಿದ್ದರು ಎನ್ನುವುದು ತಿಳಿಯದು ಆದರೆ ಮಂಡೇಲಾ ಅವರು ಸಕಾರಾತ್ಮಕ ಭಾವನೆ ಇತ್ತು (ಪಾಸಿಟಿವ್ ಥಿಂಕಿಂಗ್) ನಾನು ಈ ಜೈಲಿನಿಂದ ಹೊರಗೆ ಬಂದು ನಾನು ನೆಮ್ಮದಿಯಿಂದ ಒಳ್ಳೆಯ ಜೀವನ ನಡೆಸುತ್ತೇನೆ ಎಂಬ ಅಚಲವಾದ ನಂಬಿಕೆ ಇತ್ತು ಆಶಾವಾದಿಯಾಗಿದ್ದರು.
ಇವರು ಜೈಲಿನಲ್ಲಿ ಇರಬೇಕಾದರೆ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಅಧ್ಯಯನ ಮಾಡಿದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇವರು ಹೆಸರು ಮಾಡಿದರು ನಂತರ ಬಿಡುಗಡೆಯಾಗಿ ತಮ್ಮ ದೇಶಕ್ಕೆ ಸೇವೆಯನ್ನು ಸಲ್ಲಿಸಿದರು ಮಂಡೇಲಾ ಅವರು ಆರು ಅಡಿ ಎರಡು ಇಂಚ್ ಇದ್ದರು ಜೈಲಿನಲ್ಲಿ ಇದ್ದ ಕೊಠಡಿ ಆರು ಅಡಿ ಮಾತ್ರ ಇತ್ತು ಶಿಕ್ಷೆ ಮುಗಿಯುವವರೆಗೂ ಅಲ್ಲೇ ಕಳೆದಿದ್ದಾರೆ ಹೇಗೆ ಕಳೆದಿರಬಹುದು ಇದು ಸಾಧ್ಯವಾದುದು ಇವರ ಸಕಾರಾತ್ಮಕ ಆಲೋಚನೆಯಿಂದ ನಮಗೆ ಕಷ್ಟಗಳು ಸಮಸ್ಯೆಗಳು ಬಂದಾಗ ಸಕರಾತ್ಮಕವಾಗಿ ಆಲೋಚಿಸೋಣ.
1990 ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ ಯಾದರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದರು ತಾವು ಇರುವವರೆಗೂ ಎಲ್ಲರಿಗೂ ಸೇವೆಯನ್ನು ಸಲ್ಲಿಸಿದರು.