ಒಂದು ಸಾರಿ ಮನೆ ಮಾಲೀಕ ತುಂಬಾ ನಿಧಾನವಾಗಿ ಮನೆಗೆ ಬರುತ್ತಾನೆ ಎಷ್ಟೇ ಬಾಗಿಲು ಬಡಿದರೂ ಯಾರು ಬಾಗಿಲು ತೆರೆಯುವುದಿಲ್ಲ. ಆಗ ಮಾಲೀಕನಿಗೆ ಭಯಂಕರ ಕೋಪ ಬರುತ್ತದೆ ಆ ಕಡೆ ಈ ಕಡೆ ನೋಡುತ್ತಾನೆ ಪಕ್ಕದಲ್ಲಿ ನೋಡಿ ಕಿಟಕಿಯಿಂದ ಮನೆಗೆ ಹೋಗಬಹುದು ಎಂದು ನಿಧಾನವಾಗಿ ಕಿಟಕಿ ಬಾಗಿಲನ್ನು ತೆಗೆದು ಒಳಗೆ ಹೋಗಲು ಪ್ರಯತ್ನಿಸುತ್ತಾನೆ.
ಆಗ ಕಿಟಕಿಯ ಚೌಕಟ್ಟು ಸಮೇತ ಮಾಲೀಕನು ಕೆಳಗೆ ಬೀಳುತ್ತಾನೆ ಕಾಲಿಗೆ ಗಾಯವಾಗುತ್ತದೆ ಆಗ ಮಾಲೀಕನಿಗೆ ತುಂಬಾ ಸಿಟ್ಟು ಬರುತ್ತದೆ ಅದುದರಿಂದ ಮಾಲೀಕನು ರಾಜನ ಹತ್ತಿರ ಹೋಗಿ ದೂರು ನೀಡುತ್ತಾನೆ ನನ್ನ ಮನೆಯಲ್ಲಿ ಕಿಟಕಿಯನ್ನು ಜೋಡಿಸಿದವನು ಸರಿಯಾಗಿ ಕೆಲಸ ಮಾಡಲಿಲ್ಲ ಆದ್ದರಿಂದ ನೀವು ನನಗೆ ನ್ಯಾಯ ಒದಗಿಸಬೇಕು ಎಂದು ಹೇಳುತ್ತಾನೆ.
ಮಾಲಿಕ ಹೇಳುವುದರಲ್ಲೂ ನ್ಯಾಯವಿದೆ ಎಂದು ಕಿಟಕಿ ಜೋಡಿಸಿದವನಿಗೆ ಕರೆಯುತ್ತಾನೆ. ರಾಜ ಕೇಳುತ್ತಾನೆ ನಿನ್ನ ಮೇಲೆ ಅಪವಾದ ಇದೆ ನೀನು ಮನೆಯ ಕಿಟಕಿಯನ್ನು ಸರಿಯಾಗಿ ಜೋಡಿಸಿಲ್ಲ ಅದು ಮುರಿದಿದೆ ಇದಕ್ಕೆ ಕಾರಣವೇನು? ರಾಜರೇ ಇದರಲ್ಲಿ ನನ್ನದೇನೂ ತಪ್ಪಿಲ್ಲ ಗಾರೆ ಕೆಲಸ ಮಾಡುವವನು ಸರಿಯಾಗಿ ಗಾರೆಯನ್ನು ಹಾಕಿಲ್ಲವಾದ್ದರಿಂದ ಅದು ಅವನ ತಪ್ಪು ಅವನಿಗೆ ನೀವು ಶಿಕ್ಷೆ ನೀಡಬಹುದಾಗಿದೆ ಎಂದು ಹೇಳುತ್ತಾನೆ.
ನಂತರ ಗಾರೆಯವನನ್ನು ಕರೆಯುತ್ತಾರೆ ಗಾರೆಯವನು ಹೇಳುತ್ತಾನೆ ಇದರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಸ್ವಾಮಿ ಕಿಟಕಿಯನ್ನು ಜೋಡಿಸುತ್ತಿರಬೇಕಾದರೆ ಒಂದು ಅತಿ ಸುಂದರವಾದ ಹೆಂಗಸು ಹೋಗುತ್ತಿದ್ದಳು ಅಕೆಯನ್ನು ನೋಡುತ್ತಾ ನನ್ನನ್ನು ನಾನೇ ಮರೆತು ಈ ಚೌಕಟ್ಟನ್ನು ಸರಿಯಾಗಿ ಹಾಕಲಾಗಲಿಲ್ಲ. ಆದ್ದರಿಂದ ನನ್ನ ತಪ್ಪು ಏನೂ ಇಲ್ಲ ಎನ್ನುತ್ತಾನೆ ನಂತರ ಆ ಸುಂದರ ಹೆಂಗಸನ್ನು ಕರೆಯುತ್ತಾನೆ
ಕಾಲು ಗಾಯವಾದುದಕ್ಕೆ ನೀನೆ ಕಾರಣವಂತೆ ಎಂದು ಸುಂದರ ಹೆಂಗಸಿಗೆ ಹೇಳಿದಾಗ ನಾನು ಅಂಥ ಸುಂದರವತಿ ಏನೂ ಇಲ್ಲ ಆದರೆ ನಾನು ಹಾಕಿದ್ದ ಆ ಬಟ್ಟೆಯಿಂದ ನಾನು ತುಂಬ ಸುಂದರವಾಗಿ ಕಾಣುತ್ತಿದೆ ಎಂದು ನನ್ನ ಗೆಳತಿಯರು ಹೇಳಿದರು ಆದುದರಿಂದ ನಾನು ಹಾಕಿಕೊಂಡಿದ್ದ. ಬಟ್ಟೆಯೇ ಕಾರಣವಾಗಿದೆ ಎಂದು ಹೇಳುತ್ತಾಳೆ.
ನೀವು ಆ ಬಟ್ಟೆಗೆ ಶಿಕ್ಷೆ ಕೊಡಬಹುದು ಎಂದು ಹೆಂಗಸು ಹೇಳುತ್ತಾಳೆ ನಂತರ ಆ ಬಟ್ಟೆಯನ್ನು ತಂದವರು ಯಾರು ಅವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದಾಗ ಆ ಬಟ್ಟೆಯನ್ನು ಅಂದರೆ ಮಾಲೀಕನೇ ತನ್ನ ಹೆಂಡತಿಗೆ ಆ ಬಟ್ಟೆಯನ್ನು ತಂದುಕೊಟ್ಟಿರುತ್ತಾನೆ.
ಕೊನೆಗೆ ತೀರ್ಮಾನವಾಗುತ್ತದೆ ಯಾರು ಬಟ್ಟೆ ತಂದು ಕೊಟ್ಟಿದ್ದಾರೆ ಅವರಿಗೆ ಶಿಕ್ಷೆ ಕೊಡಬೇಕು ಎಂದು ರಾಜ ಹೇಳುತ್ತಾನೆ ಮತ್ತೆ ಕಿಟಕಿಯಿಂದ ಹೋಗಿದ್ದು ತಪ್ಪೇ ತನ್ನ ಮನೆ ಇದ್ದರೂ ಕಳ್ಳತನದಿಂದ ಹೋಗಬಾರದು ಎಂದು ಶಿಕ್ಷೆ ನೀಡುತ್ತಾರೆ. ನಾನು ತಪ್ಪು ಮಾಡಿ ಬೇರೆಯವರು ತಪ್ಪು ಮಾಡಿದ್ದಾರೆ ಎಂದು ವ್ಯರ್ಥ ಪ್ರಯತ್ನ ಮಾಡಿದ್ದೇನೆಯೇ?
ನಾನು ಭಯಭೀತನಾಗಿದ್ದೇನೆ
ಒಂದು ಸಾರಿ ವಿಚಿತ್ರ ಪ್ರಯಾಣಿಕ ರೈಲು ನಿಲ್ದಾಣದಿಂದ ಬಂದ ಒಂದು ಕಾರನ್ನು ಬಾಡಿಗೆಗೆ ಪಡೆದು ಪ್ರಯಾಣಿಸುತ್ತಾನೆ ಹಿಂದಿನ ಸೀಟಿನಲ್ಲಿ ಆರಾಮಾಗಿ ಕುಳಿತಿರುತ್ತಾನೆ ಚಾಲಕನಾದವನು ಮಾತೆ ಆಡುವುದಿಲ್ಲ ಹೆಚ್ಚು ಕಡಿಮೆ ಪ್ರಯಾಣದ ಸಮಯ ಎರಡು ಗಂಟೆಗಳು ಇರುತ್ತವೆ ವಿಳಾಸ ಯಾವುದು ಎಂದು ಮೊದಲೇ ಹೇಳಿರುತ್ತಾನೆ ಹಾಗಾಗಿ ಚಾಲಕ ಯಾವುದೇ ಕಾರಣಕ್ಕೂ, ಮಾತನಾಡುವುದಿಲ್ಲ. ತನ್ನ ಪಾಡಿಗೆ ತಾನು ಚಾಲನೆ ಮಾಡುತ್ತಿರುತ್ತಾನೆ.
ಪುಯಾಣಿಕನಿಗೆ ಗಾಬರಿ ರಾತ್ರಿಯ ಸಮಯ ನಿದ್ದೆ ಹೋದರೆ ಎನ್ನುವ ಭಯ ಆದ್ದರಿಂದ ಏನೇ ಆಗಲಿ ಒಂದು ಸರಿ ಚಾಲಕನಿಗೆ ಮಾತನಾಡಿಸೋಣ ಎಂದು ಪ್ರಯಾಣಿಕನು ಕಾಫಿಯಾದರೂ ಇಬ್ಬರು ಸೇರಿ ಕುಡಿಯಬಹುದಲ್ಲ ಎಂದು ನಿಧಾನವಾಗಿ ಭುಜದ ಮೇಲೆ ಕೈ ಇಟ್ಟ ಅಷ್ಟೆ ಚಾಲಕನಾದವನು ಹೆದರಿ ಭಯಭೀತನಾಗಿ ಬೆವೆತು ಎಡಬದಿಯ ಡಿವೈಡರ್ ಗೆ ಹೋಗಿ ಹೊಡೆದು ನಿಲ್ಲಿಸುತ್ತಾನೆ.
ಸದ್ಯಕೆ ಇಬ್ಬರಿಗೂ ಏನೂ ಆಗುವುದಿಲ್ಲ ಆಗ ಪ್ರಯಾಣಿಕ ಕೇಳುತ್ತಾನೆ ನಾನು ನಿನಗೆ ವಿಧಾನವಾಗಿ ನಿಲ್ಲಿಸು ಎಂದು ಕೈಯಿಟ್ಟೆ ನೀನೇಕೆ ಭಯ ಭೀತನಾದೆ ಎಂದು ಕೇಳುತ್ತಾನೆ ಚಾಲಕನು ಹೇಳುತ್ತಾನೆ.
ಸ್ವಾಮಿ ನಾನು ಈಗೀಗ ಕಾರನ್ನು ಚಾಲನೆ ಮಾಡುತ್ತಿದ್ದನೇ ಇದಕ್ಕಿಂತ ಮೊದಲು ನಾನು ಮಾಡುತ್ತಿದ್ದ ಕೆಲಸ ಶವಗಳನ್ನು ಸಾಗಿಸುವ ವಾಹನವಾಗಿತ್ತು ಅದರಲ್ಲಿ ಯಾರೂ ಕೂಡ ಮಾತನಾಡುವವರು ಇರುತ್ತಿರಲಿಲ್ಲ ನನ್ನ ಹಿಂದೆ ಶವಗಳೇ ಇರುತ್ತಿದ್ದವು.
ಈಗ ನೀವು ನನಗೆ ಭುಜವನ್ನು ಮುಟ್ಟಿದಿರಿ ಆ ಹಳೆ ಅಭ್ಯಾಸದಿಂದಾಗಿ ನಾನು ಭಯಬೀತನಾಗಿದ್ದೇನೆ ಎಂದು ಹೇಳುತ್ತಾನೆ ನೀವು ಕುಳಿತಿರುವುದು ನನಗೆ ನೆನಪೇ ಇಲ್ಲ ಎಂದು ಹೇಳುತ್ತಾನೆ ಇದುವರೆಗೆ ನನಗೆ ಹೀಗೆ ಯಾರೂ ಹೇಳಲಿಲ್ಲ ಎನ್ನುತ್ತಾನೆ.
ಕೆಲವು ಸಾರಿ ನಾವು ಹೊಸ ವಾತಾವರಣಕ್ಕೆ ಹೋಗುತ್ತವೆ ಆದರೂ ಕೂಡ ನಾವು ಹಳೆಯ ಕೆಲವು ಅಭ್ಯಾಸಗಳು, ಚಟಗಳು. ಬಿಡುವುದೇ ಇಲ್ಲ ಏನಾದರೂ ಆಗಲಿ ನಾವು ಯಾವ ವಾತಾವರಣದಲ್ಲಿ ಇದುತ್ತೇವೆ ಎನ್ನುವುದು ಮರೆಯಬಾರದು ನಾವು ವರ್ತಮಾನದಲ್ಲಿ ಬದುಕೋಣ.
ನಿನ್ನಿಂದಲೇ ಶುರುವಾಗುತ್ತದೆ
ಒಬ್ಬ ಪ್ರಸಿದ್ಧ ವಿಜ್ಞಾನಿಯು ಇದ್ದನು ವಿಜ್ಞಾನಿಗೆ ಒಂದು ಕುತೂಹಲ ಮತ್ತೆ ಅಸ ವಿಜ್ಞಾನಿಯಾದವನು ಸಾಮಾನ್ಯವಾಗಿ ಏನಾದರೂ ಒಂದು ಹೊಸದನ್ನು ಕಂಡು ಹಿಡಿಯಬೇಕು ಎನ್ನುವ ಆಸಕ್ತಿ ವಿಜ್ಞಾನಿಗಳಲ್ಲಿ ಇದೇ ಇರುತ್ತದೆ.
ವಿಜ್ಞಾನಿಗೆ ಒಂದು ಆಸೆ ಏನೆಂದರೆ ಎಲ್ಲಾ ದಿಕ್ಕುಗಳು ಎಲ್ಲಿಂದ ಹುಟ್ಟುತ್ತವೆ ಎಲ್ಲಿಗೆ ಕೊನೆಗೊಳ್ಳುತ್ತವೆ ಇದನ್ನು ಕಂಡು ಹಿಡಿಯಲು ಕಾಡುಮೇಡು, ಬೆಟ್ಟ, ಗುಡ್ಡ, ಸಮುದ್ರ, ಸಾಗರ, ನದಿ ಎಲ್ಲಾ ಕಡೆ ಅಲೆಮಾರಿಯಾಗಿ ಹುಡುಕುತ್ತಿರುತ್ತಾನೆ.
ವಿಜ್ಞಾನಿಗೆ ಗೊತ್ತಾಗುತ್ತಿರಲಿಲ್ಲ ಇದೇ ಯೋಚನೆಯಲ್ಲಿ ಹುಡುಕುತ್ತಿರಬೇಕಾದರೆ ಒಬ್ಬ ತತ್ವಜ್ಞಾನಿ ಹಿರಿಯರು ಸಿಗುತ್ತಾರೆ ನೀನು ಏನೂ ಹುಡುಕುತ್ತಿದ್ದೀಯಾ ಎಂದು ಕೇಳುತ್ತಾರೆ ಆಗ ವಿಜ್ಞಾನಿ ತನ್ನನ್ನು ಪರಿಚಯ ಮಾಡಿಕೊಂಡು ನನ್ನ ಒಂದು ಆಸೆ ಇದೆ ದಿಕ್ಕುಗಳು ಎಲ್ಲಿ ಮುಕ್ತಾಯವಾಗುತ್ತದೆ ಎಂದು ಕಂಡುಹಿಡಿಯಲು ಹೊರಟಿದ್ದೇನೆ ಎನ್ನುತ್ತಾನೆ.
ಹಿರಿಯರು ನೀನು ನಾಳೆ ಬೆಳಿಗ್ಗೆ, ಸೂರ್ಯ ಹುಟ್ಟುವ ಸಮಯಕ್ಕೆ ಈ ಸ್ಥಳಕ್ಕೆ ಬಂದರೆ ನಾನು ವಿನಗೆ ತೋರಿಸುವ ಎಂದು ಹೇಳುತ್ತಾರೆ ಆಗ ಆ ವಿಜ್ಞಾನಿಯು ಸಂತೋಷಪಟ್ಟು ಉತ್ಸಾಹದಿಂದ ನಾಳೆ ಅದೇ ಸಮಯಕ್ಕೆ ಸರಿಯಾಗಿ ಬರುತ್ತಾನೆ ಆಗ ವಿಜ್ಞಾನಿಯನ್ನು ನಿಲ್ಲಿಸಿ ಅವನ ಸುತ್ತ ಒಂದು ವೃತ್ತವನ್ನು ಹಾಕುತ್ತಾರೆ.
ಹಿರಿಯರು ನೀನು ನೋಡುತ್ತಿದ್ದೀಯಾ ಸೂರ್ಯ ಉದಯಿಸುತ್ತಿದ್ದಾನೆ ಅದು ಪೂರ್ವ ನಿನ್ನ ಹಿಂದಕ್ಕೆ ಪಶ್ಚಿಮ ನಿನ್ನ ಬಲಗಡೆಗೆ ದಕ್ಷಿಣ ಎಡಗಡೆಗೆ ಉತ್ತರ ಮತ್ತೆ ಇದಕ್ಕೆ ನೀನೆ ಕೇಂದ್ರ ಬಿಂದು ಗೆರೆಯಿಂದ ಒಂದು ಹೆಜ್ಜೆ ಮುಂದಿಟ್ಟರು ಪೂರ್ವ ಒಂದು ಹೆಜ್ಜೆ ಹಿಂದಿಟ್ಟರು ಪಶ್ಚಿಮ ನಿನ್ನ ಒಂದು ಹೆಜ್ಜೆ ಬಲಕ್ಕೆ ಬಂದರೆ ದಕ್ಷಿಣ ಎಡಗಡೆಗೆ ಬಂದರೆ ಉತ್ತರ ಎಂದು ವಿವರವಾಗಿ ಅರ್ಥವಾಗುವಂತೆ ಹೇಳುತ್ತಾರೆ.
ಎಲವೂ ನಿನ್ನಿಂದಲೇ ಶುರುವಾಗುತ್ತದೆ ನಿನ್ನಿಂದಲೇ ಮುಕ್ತಾಯವಾಗುತ್ತದೆ ಎಂದು ಸರಳವಾಗಿ ಹೇಳಿದರು. ಆಗ ವಿಜ್ಞಾನಿಗೆ ತುಂಬ ಸುಲಭವಾಗಿ ಅರ್ಥವಾಯಿತು ಊರಿನ ದಾರಿ ಯಾರು ಬೇಕಾದರೂ ತೋರಿಸಬಹುದು ಹಾಗೆಯೇ ನಮಗೆ ಜ್ಞಾನ ಯಾರು ಬೇಕಾದರೂ ಕಲಿಸಬಹುದಾಗಿದೆ. ನಾವು ಎಲ್ಲರಿಂದ ಕಲಿಯುವ ಗುಣ ಬೆಳೆಸಿಕೊಳ್ಳೋಣ.
ಯಾವ ಬಲೂನ್ ಬೇಕಾದರೂ ಹಾರುತ್ತದೆ
ಹಳ್ಳಿಗಳಲ್ಲಿ ಸಹಜವಾಗಿ ವಾರಕ್ಕೆ ಒಂದು ಸಂತೆ ನಡೆಯುತ್ತದೆ ಒಂದು ಮನಯ ಸಂಸಾರ ಆ ಸಂತೆಗೆ ಹೋಗಿರುತ್ತಾರೆ ಆಗ ಅದರಲ್ಲಿ ಒಂದು ಚಿಕ್ಕ ಮಗುವು ಹಾರುವ ವಿಧವಿಧವಾದ ಬಣ್ಣ ಬಣ್ಣದ ಬಲೂನುಗಳನ್ನು ನೋಡಿ ತುಂಬಾ ಸಂತೋಷಪಡುತ್ತದೆ.
ಆ ಹಾರುವ ಬಲೂನಿನ ವ್ಯಾಪಾರಿ ಹತ್ತಿರ ಹೋಗಿ ಮಗು ನಿಮ್ಮ ಹತ್ತಿರ ಎಲ್ಲಾ ಬಣ್ಣದ ಬಲೂನುಗಳು ಹಾರುತ್ತಿದೆಯಲ್ಲ ನನ್ನ ಹತ್ತಿರ ಒಂದು ಕಪ್ಪು ಬಲೂನ್ ಇದೆ ಕಪ್ಪಾಗಿರುವ ಬಲೂನ್ ಹಾರುತ್ತದೆಯೇ ಎಂದು ಪ್ರಶ್ನೆ ಕೇಳುತ್ತದೆ.
ಬಲೂನ್ ವ್ಯಾಪಾರಿಯು ನಕ್ಕು ಹೌದು ಮಗು ಯಾವ ಬಲೂನ್ ಬೇಕಾದರೂ ಹಾರುತ್ತದೆ ಬಲೂನ್ ಗೆ ಹಾರಲು ಅತಿ ಮುಖ್ಯವಾಗಿ ಬೇಕಾಗಿರುವುದು ಹೀಲಿಯಂ(ಗ್ಯಾಸ್)ನ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಗ್ಯಾಸ್ ಇದ್ದರೆ ಯಾವ ಬಣ್ಣದ ಬಲೂನ್ ಬೇಕಾದರೂ ಹಾರುತ್ತದೆ ತನ್ನಲ್ಲಿರುವ ಕಪ್ಪು ಬಲೂನಿಗೆ ಗ್ಯಾಸ್ ತುಂಬಿ ದಾರವನ್ನು ಕಟ್ಟಿ ಹಾರಿಸುತ್ತಾರೆ ಮಗುವಿಗೆ ತುಂಬಾ ಖುಷಿಯಾಗುತ್ತದೆ.
ನಮ್ಮ ದೇಹ ಹೇಗಾದರೂ ಇರಲಿ, ಊನವಾಗಿರಲಿ, ಕೈ ಇಲ್ಲದೆ ಇರಲಿ, ಕಾಲು ಇಲ್ಲದೇ ಇರಲಿ, ಕಣ್ಣು ಇಲ್ಲದಿದ್ದರೂ ಪರವಾಗಿಲ್ಲ ಆದರೆ ಆತ್ಮವಿಶ್ವಾಸ ಇದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದಾಗಿದೆ.
ವಿಚಾರಧಾರೆಗಳನ್ನು ಬದಲಿಸಿದರು
ವಯಸ್ಸಾದ ಹಿರಿಯ ಅಜ್ಜಿ ಸಂತೆಯ ಮುಂದೆ ಹೂವು ಮಾರುತ್ತಿದ್ದರು ಮಾರುತ್ತಿದ್ದ ಹೂಗಳು ತುಂಬಾ ಚೆನ್ನಾಗಿ ಅರಳಿ ನಗುತ್ತಿದ್ದವು ಆದರೆ ಅಜ್ಜಿಯು ಮಾತ್ರ ಯಾವಾಗಲೂ ಅಳು ಮುಖದಿಂದಲೇ ಇರುತ್ತಿದ್ದರು ಇದನ್ನು ಹಲವು ಸಾರಿ ಗಮನಿಸಿದ ಒಬ್ಬರು ಆಕೆಯನ್ನು ಕೇಳಿದರು.
ನೀವು ಏಕೆ ಸದಾ ಚಿಂತೆಯಲ್ಲಿ ಇರುತ್ತೀರಾ ಎಂದಾಗ ಆ ಹಿರಿಯ ಅಜ್ಜಿಯೂ ತನ್ನ ವಿಚಾರವನ್ನು ತಿಳಿಸಿದರು ಆ ವಿಚಾರ ಏನಂದರೆ ಹಿರಿಯ ಅಜ್ಜಿಗೆ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ ಒಬ್ಬ ಕಾಟನ್ ಬಟ್ಟೆಗಳು ಮಾರುವ ವ್ಯಾಪಾರಿ. ಇನ್ನೊಬ್ಬ ಕೊಡೆ ವ್ಯಾಪಾರಿ ಇಬ್ಬರು ಹೆಣ್ಣು ಮಕ್ಕಳ ದುಃಖ ಹೇಳಿಕೊಂಡರು.
ಮಳೆಗಾಲದಲ್ಲಿ ಕಾಟನ್ ಬಟ್ಟೆ ಮಾರುವವನಿಗೆ ವ್ಯಾಪಾರವಿಲ್ಲ ಬಿಸಿಲು ಕಾಲದಲ್ಲಿ ಕೊಡೆ ವ್ಯಾಪಾರಿಗೆ ವ್ಯಾಪಾರವಾಗುವುದಿಲ್ಲ. ಇದೇ ಅಜ್ಜಿಯವರ ಚಿಂತೆ ಆಗ ಇದನ್ನು ಅರಿತು ಅಜ್ಜಿ ನೀವು ಈ ರೀತಿ ಯೋಚನೆ ಮಾಡುವುದಕ್ಕಿಂತ ನೀವು ಏಕೆ ಬೇಸಿಗೆಗಾಲದಲ್ಲಿ ಬಟ್ಟೆ ಅವನಿಗೆ ಚೆನ್ನಾಗಿ ವ್ಯಾಪಾರ ಆಗುತ್ತದೆ ಮತ್ತೆ ಮಳೆಗಾಲದಲ್ಲಿ ಕೊಡ ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂದು ಏಕೆ ಯೋಚನೆ ಮಾಡಬಾರದು ಎಂದು ಅಜ್ಜಿಯು ಯೋಚಿಸುವ ಶೈಲಿಯನ್ನು, ವಿಚಾರಧಾರೆಗಳನ್ನು ಬದಲಿಸಿದರು.
ಆಗ ಅಜ್ಜಿ ಯೋಚಿಸುವ ದೃಷ್ಟಿಕೋನ ಬದಲಿಸಿಕೊಂಡರು ಕೆಲವು ಸಾರಿ ನಾವು ಅಷ್ಟೆ ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಯೋಚಿಸುತ್ತಿರುತ್ತೇವೆ ಅದರ ಬದಲಾಗಿ ಸಕಾರಾತ್ಮಕವಾಗಿ ಯೋಚಿಸೋಣ.