ಒಂದು ಆಶ್ರಮವಿತ್ತು ಆಶ್ರಮದಲ್ಲಿ ದಿನನಿತ್ಯ ಉಪನ್ಯಾಸಗಳು ನಡೆಯುತ್ತಿತ್ತು ಉಪನ್ಯಾಸಗಳಿಂದ ಮನುಷ್ಯರು ತೃಪ್ತಿ ನೆಮ್ಮದಿ ಕಾಣುತ್ತಿದ್ದರು ಒಂದು ಸಾರಿ ಚಿಮಿಣಿ ಹೆಂಗಸು ಉಪನ್ಯಾಸವನ್ನು ಕೇಳಿದಳು ಕೇಳಿದ ನಂತರ ಬಾಬಾ ಅವರಿಗೆ ಹೋಗಿ ನಮಸ್ಕಾರ ಮಾಡಿ ನನಗೆ ಒಂದು ಸಮಸ್ಯೆ ತುಂಬಾ ಕಾಡುತ್ತಿದೆ ಅದಕ್ಕೆ ನೀವು ಪರಿಹಾರ ತಿಳಿಸಿ ಎಂದು ಕಳಿಕಳಿಯಿಂದ ಕೇಳಿದಳು.
ಸಮಸ್ಯೆ ಏನು ಎಂದು ಬಾಬಾ ಅವರು ಕೇಳಿದರು ಹೆಂಗಸು ನಾನು ಪರೀಕ್ಷೆ ಮಾಡದೆ ಬೇರೆಯವರ ಮಾತು ಕೇಳಿ ನನ್ನ ಸ್ನೇಹಿತೆ ಸ್ವಲ್ಪ ತಪ್ಪು ಮಾಡಿದ್ದಳು ಅದರ ಜತೆಗೆ ಇನ್ನಷ್ಟು ಸೇರಿಸಿ ಹೇಳಿಬಿಟ್ಟಿದ್ದೇನೆ ಇದು ನನಗೆ ತುಂಬಾ ವೇದನೆಯಾಗುತ್ತಿದೆ ಆಕೆ ಎಷ್ಟು ನೊಂದಿದ್ದಾಳೆ ಗೊತ್ತಿಲ್ಲ ನನ್ನ ತಪ್ಪಿಗೆ ನಾನು ಯಾವ ರೀತಿ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು ಎಂದು ದೀನವಾಗಿ ಕೇಳಿದಳು.
ಬಾಬಾ ಅವರು ಒಂದು ಬಿದಿರಿನ ಬುಟ್ಟಿಯನ್ನು ತೆಗೆದುಕೊಂಡು ಬಂದು ಅದರಲ್ಲಿ ಚಿಕ್ಕ ಚಿಕ್ಕ ಹತ್ತಿಯ ಉಂಡೆಗಳು ಹಾಕಿದರು ತಲೆ ಮೇಲೆ ಇಟ್ಟುಕೊಂಡು ಮನೆಗೆ ಹೋಗು ನಂತರ ನಾಳೆ ಬಾ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಅದೇ ರೀತಿ ಮಾರನೆಯ ದಿನ ಚಿಮಿಣಿ ಹೆಂಗಸು ಬಂದಳು ಹತ್ತಿಯ ಉಂಡೆ ಎಲ್ಲಿ ಎಂದು ಕೇಳಿದಾಗ ಗಾಳಿಗೆ ಹಾರಿ ಹೋಯ್ತು ಎಂದು ಹೆಂಗಸು ಹೇಳಿದಳು ಈಗ ಆ ಹತ್ತಿಯ ಉಂಡೆಗಳು ಎಲ್ಲೆಲ್ಲಿ ಇವೆಯೋ ಅದನ್ನು ಶೇಖರಣೆ ಮಾಡಿಕೊಂಡು ಬಾ ಎಂದು ಹೇಳಿದರು ಇದು ಹೇಗೆ ಸಾಧ್ಯ ಬಾಬಾ ಅವರೇ ಎಂದು ಕೇಳಿದಾಗ ಬಾಬಾ ಅವರು ಹೇಳಿದರು.
ನೀನು ಹೇಳಿ ಆಗಿದೆ ಯಾವುದೇ ಕಾರಣಕ್ಕೂ ಆಗಿರುವುದನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಆಗಿದ್ದು ಆಗಿ ಹೋಯಿತು ಮಾಡಿದ ತಪ್ಪು ಇನ್ನೊಂದು ಸಾರಿ ಮಾಡದೇ ಇರುವುದೇ ಮನುಷ್ಯನ ಲಕ್ಷಣ ಎಂದು ಹೇಳಿದರು.
ಹಳೆ ಮನೆಯಲ್ಲಿಯೇ
ಒಂದು ಹಳ್ಳಿಯಿಂದ ಜ್ಞಾನ್ ದತ್ ಯುವಕ ಊರಿಗೆ ಬಂದನು ಒಳ್ಳೆಯ ಕೆಲಸಕ್ಕಾಗಿ ಹುಡುಕಿದನು ನಂತರ ಅದೇ ರೀತಿ ಒಳ್ಳೆಯ ಕೆಲಸವೂ ಸಿಕ್ಕಿತು ಸಂಬಳವೂ ಚೆನ್ನಾಗಿ ಬರುತ್ತಿತ್ತು ಬಂದ ಸಂಬಳದಲ್ಲಿ ಉಳಿಸೀ ಒಂದು ಮನೆಯನ್ನು ಕಟ್ಟಿದನು ಮನೆಯನ್ನು ಕೂಡ ತುಂಬಾ ಚೆನ್ನಾಗಿ ಕಟ್ಟಿದನು.
ಕಟ್ಟಿದ ಮನೆಯನ್ನು ಬಾಡಿಗೆಗೆ ಕೊಟ್ಟನು ಅದರಿಂದ ಬರುವ ಹಣವನ್ನು ಇನ್ನೊಂದಕ್ಕೆ ಹೂಡಿಕೆ ಮಾಡಿದನು ಆದರೆ ಇವನು ಮಾತ್ರ ಅದೇ ಹಳೆ ಬಾಡಿಗೆ ಮನೆಯಲ್ಲಿಯೇ ಇದ್ದಾನೆ ಬಾಡಿಗೆ ಮನೆಯಲ್ಲಿ ಸೌಲಭ್ಯಗಳು ಇಲ್ಲದೇ ಇದ್ದರೂ ಅಲ್ಲೇ ಹೊಂದಿಕೊಂಡು ಬದುಕುತ್ತಿದ್ದಾನೆ.
ಇವನ ಸ್ವಂತ ಮನೆಯಲ್ಲಿ ಹೋಗಿ ಬದುಕಬಹುದು ಆದರೂ ಕೂಡ ಆ ಹಳೆ ಮನೆಯಲ್ಲಿಯೇ ಜೀವನಪೂರ್ತಿ ಇದ್ದು ಸತ್ತನು ಅದೃಷ್ಟ ಒಲಿದಿದ್ದರೂ ಸಣ್ಣ ಬುದ್ಧಿ ಹೋಗಲಿಲ್ಲ.
ಆಯ್ಕೆ ನಮ್ಮದೇ ಇರಬೇಕು
ಜಾನಿ ಎಂಬುವ ವ್ಯಕ್ತಿ ಒಂದು ಊರಿನಲ್ಲಿ ಸಂಸಾರ ಸಮೇತವಾಗಿ ಒಂದು ಚಿಕ್ಕ ವ್ಯಾಪಾರ ಮಾಡಿಕೊಂಡು ಇದ್ದನು ಆದರೆ ಅಷ್ಟು ಬೆಳವಣಿಗೆ ಯಾಗಲಿಲ್ಲ ಜಾನಿಗೆ ಒಬ್ಬ ಸ್ನೇಹಿತ ಇದ್ದನು ಅವನ ಹೆಸರು ಲಿಯೋ ಇವನು ಆಗಾಗ ಬಂದು ಹೇಳುತ್ತಿದ್ದನು ನೀನು ಇಷ್ಟು ಕಷ್ಟ ಪಡುವ ಬದಲು ಒಂದು ವಜ್ರವನ್ನು ಹುಡುಕಿಕೊಂಡರೆ ಸಾಕು ನೀನೆ ತುಂಬ ದೊಡ್ಡ ಶ್ರೀಮಂತನಾಗುತ್ತಿದ್ದೆ ಎಂದು ಹೇಳುತ್ತಿದ್ದನು.
ಇವನಿಗೂ ಸ್ನೇಹಿತ ಹೇಳಿದ ಮಾತು ಹಿಡಿಸಿತು ಅದಕ್ಕಾಗಿ ಇವನು ತಾನು ಇದ್ದ ಮನೆಯನ್ನೂ ಮಾರಿ ತನ್ನ ಹೆಂಡತಿ ಮಕ್ಕಳನ್ನು ಬೇರೆ ಬಾಡಿಗೆ ಮನೆ ಮಾಡಿ ಇಟ್ಟನು ನಂತರ ಸ್ವಲ್ಪ ಹಣ ತೆಗೆದುಕೊಂಡು ವಜ್ರ ಹುಡುಕುವುದಕ್ಕಾಗಿ ಹೊರಟನು ಅಲ್ಲಿ ಇಲ್ಲಿ ಹುಡುಕಾಡಿ ಇರುವ ಹಣವನ್ನು ಖರ್ಚು ಮಾಡಿಕೊಂಡನು.
ಬಹಳಷ್ಟು ಶ್ರಮ ಪಟ್ಟನು ಆದರೂ ಏನೂ ಉಪಯೋಗವಾಗಲಿಲ್ಲ ಕೊನೆಗೆ ಮಾನಸಿಕವಾಗಿ ಕೂಡ ನೊಂದುಕೊಂಡನು ನಂತರ ಬೇರೆ ಕಡೆ ಕೆಲಸ ಮಾಡಿ ಅಲ್ಪ ಸ್ವಲ್ಪ ಹಣ ಮನೆಗೆ ಕಳುಹಿಸುತ್ತಿದ್ದನು ನಂತರ ಕೆಲವು ವರ್ಷಗಳ ಮೇಲೆ ಯೋಚನೆ ಮಾಡಿದನು.
ನಾನು ಏನಾದರೂ ನಮ್ಮ ಊರಿನಲ್ಲಿಯೇ ಚಿಕ್ಕದಾದ ವ್ಯಾಪಾರ ಮಾಡಿ ನಾನು ಬದುಕುತ್ತೇನೆ ಎಂದು ತೀರ್ಮಾನ ಮಾಡಿದನು ನಂತರ ಊರಿಗೆ ಬಂದನು ನೋಡಿದರೆ ತುಂಬಾ ಬದಲಾಗಿಬಿಟ್ಟಿದೆ ಮನೆಗಳು ಇದ್ದಿದ್ದು ಭವ್ಯ ಕಟ್ಟಡಗಳಾಗಿವೆ ಮನೆಗೆ ಬಂದನು ಆಗ ಹೆಂಡತಿ ಹೇಳಿದಳು ಬಿಲ್ಡಿಂಗ್ ಕಟ್ಟಬೇಕಾದರೆ ಒಂದು ಕಲ್ಲು ಸಿಕ್ಕಿತು ಅದನ್ನು ಪರೀಕ್ಷಿಸಿದರೆ ವಜ್ರವೇ ಆಗಿತ್ತು.
ನಾವು ಮಾರಿದ ಆಸ್ತಿಯಲ್ಲಿ ವಜ್ರದ ಗಣಿಯೇ ಇದೆಯಂತೆ ಅದಕ್ಕಾಗಿ ಸರ್ಕಾರದವರು ದುಪ್ಪಟ್ಟು ಹಣವನ್ನು ಕೊಟ್ಟು ಅದನ್ನು ಖರೀದಿ ಮಾಡಿದ್ದಾರೆ ಅದರಿಂದ ವಜ್ರವನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದಳು ಈ ಆಸ್ತಿಯನ್ನು ಖರೀದಿಸಿದವನು ಆ ಊರಿಗೆ ದೊಡ್ಡ ಶ್ರೀಮಂತನಾಗಿದ್ದನು,
ಜಾನಿ ಮಾತ್ರ ಅತಿ ಚಿಕ್ಕ ವ್ಯಕ್ತಿಯಾಗಿಯೇ ಇದ್ದನು ತನ್ನ ತಪ್ಪಿನ ಅರಿವೂ ಆಯಿತು ನನ್ನ ಜಾಗದಲ್ಲಿ ವಜ್ರ ಇತ್ತು ಆದರೆ ಅದನ್ನು ಬಿಟ್ಟು ನಾನು ಹೊರಗಡೆ ಅಲೆಮಾರಿಯಂತೆ ಬಹಳಷ್ಟು ಕಡೆ ಹುಡುಕಿಕೊಂಡು ಹೋದೆ ನಮ್ಮ ಆಸ್ತಿಯಲ್ಲಿಯೇ ಇದೆಯೆಂದು ನನಗೆ ಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಕೊರಗಿದನು.
ಕೆಲವು ಸಾರಿ ಯಾವುದೋ ಆಕರ್ಷಣೆಗೆ ಒಳಗಾಗಿ ಇರುವುದೆಲ್ಲವನ್ನೂ ನಷ್ಟ ಮಾಡಿಕೊಳ್ಳುತ್ತೇವೆ ಯಾವುದೇ ಕೆಲಸ ಮಾಡಬೇಕಾದರೂ ಆಯ್ಕೆ ನಮ್ಮದೇ ಇರಬೇಕು ದೀರ್ಘವಾಗಿ ಆಲೋಚನೆ ಮಾಡಿ ಸಾಗೋಣ.
ಕತ್ತಲೆ ಕವಿದಿರುತ್ತದೆ
ಒಂದು ಕಾಡಿನ ಮೂಲೆಯಲ್ಲಿ ಒಂದು ಆಶ್ರಮವಿತ್ತು ರಾತ್ರಿಯವರೆಗೂ ಆಶ್ರಮದಲ್ಲಿ ಇರುತ್ತಿದ್ದರು ನಂತರ ಋಷಿಗಳು ಧ್ಯಾನ ಮಾಡಲಿಕ್ಕೆ ಕಾಡಿನ ಒಳಗೆ ಹೋಗಿ ಧ್ಯಾನ ಮಾಡಿ ಬರುತ್ತಿದ್ದರು ಆಶ್ರಮದಲ್ಲಿ ಇರುವ ಒಬ್ಬ ಶಿಷ್ಯನಿಗೆ ಅನುಮಾನ ಬಂತು ಭಯಂಕರ ಕತ್ತಲೆ ಕವಿದಿರುತ್ತದೆ ಕಾಡಿನಲ್ಲಿ ಹೇಗೆ ಧ್ಯಾನ ಮಾಡುತ್ತಾರೆ ಏನಾದರೂ ಆಗಲಿ ಇವರನ್ನು ನಾನು ನೋಡಲೇಬೇಕು ಎಂದು ಹಿಂಬಾಲಿಸಿದನು.
ಋಷಿಗಳು ದಿನನಿತ್ಯ ಅವರು ಕುಳಿತುಕೊಳ್ಳುವ ಸ್ಥಳದಲ್ಲಿ ಕುಳಿತು ಧ್ಯಾನಮಗ್ನರಾದರು ಶಿಷ್ಯನು ಮರೆಯಲ್ಲಿ ಕುಳಿತು ನೋಡುತ್ತಲೇ ಇದ್ದಾನೆ ರಾತ್ರಿ 3ಗಂಟೆ ಯಾದರೂ ಕೂಡ ಧ್ಯಾನಮಗ್ನವಾಗಿ ಇದ್ದಾರೆ 4 ಗಂಟೆಗೆ ಒಂದು ಹುಲಿ ಬಂದು ಇವರ ಕಾಲು ಇವರ ಮುಖವನ್ನು ನಕ್ಕಿತು ನಿದಾನವಾಗಿ ಕಣ್ಣು ತೆರೆದರು ಹುಲಿಯನ್ನು ತಬ್ಬಿಕೊಂಡು ಪ್ರೀತಿಯಿಂದ ಕೆಲವು ನಿಮಿಷಗಳ ಕಾಲ ಅಲ್ಲೇ ಇದ್ದು ನಂತರ ಹುಲಿಯು ನಮಸ್ಕಾರ ಮಾಡಿ ಹೊರಟು ಹೋಯಿತು ಇದನ್ನು ನೋಡಿದ ಶಿಷ್ಯನಿಗೆ ಚಮತ್ಕಾರ ಎನಿಸಿತು.
ಶಿಷ್ಯನು ಬಂದು ಕಾಲು ಮುಗಿದನು ನೀವು ಹುಲಿಯನ್ನು ಬೆಕ್ಕಿನ ಹಾಗೆ ಪಳಗಿಸಿ ಬಿಟ್ಟಿದ್ದೀರಿ ಇದು ಯಾವ ಶಕ್ತಿ ನಿಮ್ಮಲ್ಲಿ ಅಡಗಿದೆ ಎಂದು ಶಿಷ್ಯ ಕೇಳಿದನು ಇದು ಯಾವ ಶಕ್ತಿ ಯಾವ ಪವಾಡವೂ ಇಲ್ಲ ಒಂದು ಸಾರಿ ಹುಲಿಗೆ ಬೇಟೆಗಾರನು ಬಾಣ ಬಿಟ್ಟನು ಅದು ತಗುಲಿ ಕಾಲಿಗೆ ಗಾಯವಾಗಿತ್ತು.
ಹೇಗೋ ತಪ್ಪಿಸಿಕೊಂಡು ಬಂತು ಅದು ತುಂಬಾ ಭಯ ಪಟ್ಟಿತ್ತು ಆಗ ನಾನು ನೋಡಿದೆ ನಂತರ ಅದಕ್ಕೆ ಕುಡಿಯಲು ನೀರು ಕೊಟ್ಟೆ ನಂತರ ಆ ಗಾಯಕ್ಕೆ ಗಿಡ ಮೂಲಿಕೆಗಳನ್ನು ಹಾಕಿ ಕಟ್ಟಿದೆ ಕೆಲವು ದಿನಗಳ ನಂತರ ಅದು ಚೆನ್ನಾಗಿ ಓಡಾಡಲು ಆರಂಭಿಸಿತು ಅಂದಿನಿಂದ ದಿನನಿತ್ಯವೂ ನನ್ನ ಜೊತೆ ಪ್ರೀತಿಯನ್ನು ತೋರಿಸುತ್ತಿದೆ ನಾನೂ ಕೂಡ ಅದಕ್ಕೆ ಪ್ರೀತಿಯನ್ನು ತೋರಿಸುತ್ತೇನೆ ಎಂದು ಹೇಳಿದರು.
ಯಾವ ನರಕ ಬೇಕು?
ಒಬ್ಬ ಪುಷ್ಕಲ್ ವ್ಯಕ್ತಿ ಸ್ವರ್ಗ ನರಕದ ಬಗ್ಗೆ ಯೋಚನೆ ಮಾಡಿ ಮಲಗುತ್ತಾನೆ ನಂತರ ಒಂದು ಕನಸು ಬೀಳುತ್ತದೆ ಸ್ವರ್ಗ ನರಕ ಎರಡೂ ಇದೆ ನೀವು ಮಾಡಿದ ಕರ್ಮದ ಅನುಸಾರವಾಗಿ ನಿಮಗೆ ಸ್ವರ್ಗ ಅಥವಾ ನರಕ ಸಿಗುತ್ತದೆ.
ಸ್ವರ್ಗ ನರಕ ಗಳಲ್ಲಿಯೂ ದರ್ಜೆಗಳು ಇವೆಯಂತೆ ಸರ್ಕಸ್ ನೋಡಲು ಹೋದರೆ ಮೊದಲನೆಯ ದರ್ಜೆ ಎರಡನೆ ದರ್ಜೆ ಮೂರನೆ ದರ್ಜೆ ಹೀಗೆ ಇರುತ್ತದೆ ಅದೇ ರೀತಿ ಸ್ವರ್ಗ ನರಕಗಳನ್ನು ಇರುತ್ತದೆಯಂತೆ.
ಒಬ್ಬ ಮನುಷ್ಯನು ಸಾಯುತ್ತಾನೆ ನಂತರ ಇವನನ್ನು ಚಿತ್ರಗುಪ್ತನ ಹತ್ತಿರ ಕರೆದುಕೊಂಡು ಹೋಗುತ್ತಾರೆ ಇವನ ಲೆಕ್ಕ ನೋಡಿದರೆ ಪಾಪದ್ದೆ ಲೆಕ್ಕ ಜಾಸ್ತಿ ಇರುತ್ತದೆ ಆದ್ದರಿಂದ ಇವನಿಗೆ ನರಕ ಎಂದು ಘೋಷಿಸುತ್ತಾರೆ ನಂತರ ನಿನಗೆ ವಿದೇಶಿ ನರಕ ಬೇಕೊ ಸ್ವದೇಶಿ ನರಕ ಬೇಕೊ ಎಂದು ಕೇಳುತ್ತಾರೆ.
ಈ ಮಾತು ಕೇಳಿ ಈ ವ್ಯಕ್ತಿಗೆ ಆಶ್ಚರ್ಯವಾಗುತ್ತದೆ ಎರಡು ರೀತಿಯ ನರಕವಿದೆಯೋ ಎರಡನ್ನೂ ವಿವರಿಸಿ ಎಂದು ಹೇಳುತ್ತಾನೆ ಸ್ವದೇಶಿ ನರಕದಲ್ಲಿ (ಕರೆಂಟಿನ ರೂಮಿನಲ್ಲಿ) ವಿದ್ಯುಚ್ಛಕ್ತಿಯ ಕೊಠಡಿಯಲ್ಲಿ ಕೂರಿಸಿ (ಕರೆಂಟ್) ವಿದ್ಯುಚ್ಛಕ್ತಿ ಕೊಡಲಾಗುತ್ತದೆ ಕಾದ ನಂತರ ಮತ್ತೆ ಕಡಿಮೆ ಮಾಡುತ್ತಾರೆ ಅಲ್ಲಿ ಇರುವವರು ಸರಿಯಾಗಿ ನಿಮ್ಮನ್ನು ನೋಡಿಕೊಳ್ಳುತ್ತಾರೆ.
ವಿದೇಶಿ ನರಕದಲ್ಲೂ ಒಂದು ವಿದ್ಯುಚ್ಚಕ್ತಿ ಕೊಠಡಿಯಲ್ಲಿ ಕೂರಿಸಿ ಕರೆಂಟ್ ಕೊಡಲಾಗುತ್ತದೆ ಕಾದ ನಂತರ ಮತ್ತೆ ಕಡಿಮೆ ಮಾಡುತ್ತಾರೆ ಅಲ್ಲಿ ಇರುವವರು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಕೇಳಿದ ವ್ಯಕ್ತಿ ಗಾಬರಿಯಾದನು.
ನೀವು ಎರಡರಲ್ಲೂ ಅದೇ ಶಿಕ್ಷೆ ಹೇಳುತ್ತಿದ್ದೀರಾ ಏನೂ ವ್ಯತ್ಯಾಸವಿಲ್ಲ ಎಂದು ಹೇಳುತ್ತಿದ್ದೀರಿ ಎಂದಾಗ ಆಗ ಚಿತ್ರಗುಪ್ತ ಸ್ವದೇಶಿ ನರಕವೇ ತೆಗೆದುಕೊ ಏಕೆಂದರೆ ಕೆಲವು ಸಾರಿ ಕರೆಂಟ್ ಇರುವುದಿಲ್ಲ ನೋಡಿಕೊಳ್ಳುವವರು ಕೂಡ ಅಷ್ಟಾಗಿ ಸರಿಯಾಗಿ ಜವಾಬ್ದಾರಿ ವಹಿಸಿ ಕೆಲಸ ಮಾಡುವುದಿಲ್ಲ.
ಸ್ವಲ್ಪ ಲಂಚ ಕೊಟ್ಟರೆ ಅವರು ನಿಮ್ಮ ಕಡೆ ಇರುತ್ತಾರೆ ನೀವು ಎಷ್ಟು ಸಮಯ ಕುಳಿತಿದ್ದೀರಿ ಎನ್ನುವುದು ಲೆಕ್ಕ ಸರಿಯಾಗಿ ಇಡುವುದಿಲ್ಲ ನಿಮಗೆ ಹೇಗೆ ಬೇಕೋ ಹಾಗೆ ಲೆಕ್ಕವನ್ನು ತೋರಿಸುತ್ತಾರೆ ಎಂದು ಹೇಳಿದರಂತೆ ನಂತರ ಗಾಬರಿಯಾದ ಕಣ್ಣು ಬಿಟ್ಟನು ಕನಸು ಎಂದು ಅರ್ಥಮಾಡಿಕೊಂಡನು.