ಗಂಡ ಹೆಂಡತಿ ಇಬ್ಬರೂ ಪ್ರೀತಿಸಿ ಮದುವೆಯಾಗಿರುತ್ತಾರೆ ಗಂಡನಿಗೆ ಮಾತ್ರ ಕೆಲಸ ತುಂಬ ಹೆಚ್ಚಾಗಿ ಇರುತ್ತದೆ ಸಹಜವಾಗಿ ಮದುವೆಯಾದ ನಂತರ ಹೆಂಡತಿಗೆ ಅಷ್ಟೊಂದು ಗಮನ ಕೊಟ್ಟಿರುವುದಿಲ್ಲ ಸಂಸಾರವೇ ಆ ರೀತಿ ಕೆಲವು ಸಾರಿ ಬಹಳಷ್ಟು ಕೆಲಸಗಳು ನಿಭಾಯಿಸಬೇಕಾಗಿರುತ್ತದೆ.
ಒಂದು ಹಬ್ಬ ಬಂದಾಗ ಗಂಡಹೆಂಡತಿ ಕುಳಿತುಕೊಂಡು ಊಟ ಮಾಡಿದ ನಂತರ ಹೆಂಡತಿ ಒಂದು ಮಾತನ್ನು ಕೇಳಿದಳು ಅಕಸ್ಮಾತ್ ನಾನು ಸತ್ತರೆ ನೀವು ನನ್ನ ಅಂತ್ಯ ಕ್ರಿಯೆ ಮಾಡಬಹುದೇ ಈ ಪ್ರಶ್ನೆಯಿಂದ ಗಂಡನಿಗೆ ಒಂದೇ ಸರಿ ತಣ್ಣೀರು ಸುರಿದಂತೆ ಅನಿಸಿತು ಆಗ ಗಂಡ ಹೇಳಿದನು ನಿನ್ನ ಅಂತ್ಯಕ್ರಿಯೆ ದುಬಾರಿಯಾಗಿಯೇ ನಾನು ಮಾಡುತ್ತೇನೆ.
ಒಳ್ಳೆಯ ಹೂಗಳನ್ನು ತಂದು ಅಲಂಕಾರ ಮಾಡುತ್ತೇನೆ ಮತ್ತೆ ಇತರರಿಗೆ ಅನ್ನದಾನ ಮಾಡುತ್ತೇನೆ ಎಂದನು ಮತ್ತೆ ಈ ರೀತಿ ಪ್ರಶ್ನೆ ಏಕೆ ಬಂತು ಎಂದು ಕೇಳಿದನು ಇದಕ್ಕೆ ತುಂಬಾ ಹಣ ಖರ್ಚು ಆಗಬಹುದು ಅಲ್ಲವೇ ಎಂದು ಕೇಳಿದಳು ಆಗ ಗಂಡನು ಹಣ ಎಷ್ಟು ಬೇಕಾದರೂ ಖರ್ಚುಆಗಲಿ ಪರವಾಗಿಲ್ಲ ಎಂದನು.
ಒಂದು ಮಾತು ನೀವು ನಾನು ಸತ್ತ ಮೇಲೆ ಎಷ್ಟು ಖರ್ಚು ಮಾಡುತ್ತೀರೋ ಅದು ನಾನು ನೋಡಲಾರೆನು ಆದರೆ ನಾನು ಬದುಕಿರುವಾಗಲೇ ಚಿಕ್ಕಚಿಕ್ಕ ವಸ್ತುಗಳು ಮಲ್ಲಿಗೆ ಹೂವು, ಗುಲಾಬಿ ಹೂವು, ಹಣ್ಣುಗಳು, ತಿಂಡಿಗಳು, ಏನಾದರೂ ತರಬಹುದು ಅಲ್ಲವೇ ಎಂದು ಮುಗ್ಧವಾಗಿ ಹೇಳಿದಳು.
ಗಂಡನು ಬದುಕಿರುವಾಗಲೇ ಕೊಡಬೇಕು ಎಂದು ಅರ್ಥಮಾಡಿಕೊಂಡನು ನಂತರ ಅವನ ಬದುಕೇ ಬದಲಿಸಿಕೊಂಡನು ನಾವು ನಮ್ಮ ಹೆಂಡತಿಗಾಗಿ ಬದುಕಿರುವಾಗಲೇ ಚಿಕ್ಕಚಿಕ್ಕ ವಸ್ತುಗಳು ಕೊಡಬಹುದು ಸತ್ತ ಮೇಲೆ ಎಷ್ಟೇ ದೊಡ್ಡ ಖರ್ಚು ಮಾಡಿದರೂ ಉಪಯೋಗವಿಲ್ಲ ಬದುಕಿರಬೇಕಾದರೆ ಚಿಕ್ಕಚಿಕ್ಕ ವಸ್ತುಗಳು ಕೊಟ್ಟರೂ ಸಹ ಅವರು ಅದನ್ನು ಮನಸಾರೆ ಮೆಚ್ಚಿಕೊಳ್ಳುತ್ತಾರೆ ಮನೆಗೆ ಹೋಗಬೇಕಾದರೆ ಚಿಕ್ಕ ಚಿಕ್ಕ ವಸ್ತುಗಳನ್ನು ಖರೀದಿಸಿಕೊಂಡು ಹೋಗೋಣ?
ನಾವು ಎಳೆಯಲಿಲ್ಲ
ಒಂದು ಹಳ್ಳಿಯಲ್ಲಿ ರೈತನು ಬಲಶಾಲಿಯಾದ ಎತ್ತುಗಳನ್ನು ಸಾಕಿಕೊಂಡಿದ್ದನು ಆ ಎತ್ತುಗಳು ತುಂಬಾ ಶಕ್ತಿಶಾಲಿಯಾಗಿದ್ದವು ನೋಡುವುದಕ್ಕೆ ತುಂಬಾ ಆಕರ್ಷಕವಾಗಿದ್ದವು ಬೇರೆ ಎತ್ತುಗಳು ಒಂದು ಗಾಡಿಗಳು ಎಳೆಯುತ್ತಿದ್ದರೆ ಈ ಎತ್ತುಗಳು ಒಂದೇ ಸಾರಿಗೆ 10 ಗಾಡಿಗಳನ್ನು ಕೂಡ ಎಳೆಯುವ ತಾಕತ್ತು ಇತ್ತು.
ಆ ಊರಿನಲ್ಲಿ ಒಳ್ಳೆಯ ಹೆಸರು ಇರುವುದರಿಂದ ರೈತನು ಬೇರೆ ಊರಿಗೆ ಹೋಗಿ ಹೇಳಿದ ನನ್ನ ಎತ್ತುಗಳು ಹತ್ತು ಗಾಡಿಗಳನ್ನು ಎಳೆಯುತ್ತದೆ ಅದಕ್ಕೆ ಹಳ್ಳಿಯವರು ನಕ್ಕರೂ ಅದು ಹೇಗೆ ಸಾಧ್ಯ ಎಳೆಯುವುದಿಲ್ಲ ಅದಕ್ಕೆ ಬೇಕಾದರೆ ಒಂದು ಪಂದ್ಯವನ್ನು ಕಟ್ಟೋಣ ಎಂದರು.
ನಿನ್ನ ಎತ್ತುಗಳು ಹಾಗೇನಾದರು ಹತ್ತು ಗಾಡಿಗಳು ಎಳೆದರೆ ನಿಮಗೆ ನಾವು ನೂರು ಚಿನ್ನದ ನಾಣ್ಯ ಕೊಡುತ್ತೇವೆ ಇಲ್ಲದಿದ್ದರೆ ನೀನು ನೂರು ಚಿನ್ನದ ನಾಣ್ಯಗಳನ್ನು ಕೊಡಬೇಕು ಇದಕ್ಕೆ ಒಪ್ಪಿದರೆ ಸ್ಪರ್ಧೆ ಊರಿನ ಮೈದಾನದಲ್ಲಿ ನಡೆಯಲಿ ಎಂದು ಹೇಳಿದರು.
ರೈತನು ಸ್ಪರ್ಧೆಗೆ ಸಜ್ಜಾದನು ಮಾರನೆಯ ದಿನ ಹತ್ತು ಗಾಡಿಗಳು ಸಾಲಾಗಿ ನಿಲ್ಲಿಸಿದರು ಎತ್ತುನು ಕಟ್ಟಿದರು ರೈತನು ಎಳೆಯಿರಿ ದರ್ಪದಿಂದ ಬಯ್ಯುತ್ತಾ ಎತ್ತುಗಳಿಗೆ ಹೇಳಿದನು ಆದರೆ ಎತ್ತು ಕದಲಲೇ ಇಲ್ಲ ಆಗ ರೈತನು ಸೋತು ಬಂದನು.
ರಾತ್ರಿ ಎತ್ತುಗಳಿಗೆ ಹುಲ್ಲು ಹಾಕಬೇಕಾದರೆ ಹೇಳಿದ ಏಕೆ ನೀವು ಇವತ್ತು ಗಾಡಿಯನ್ನು ಎಳೆಯಲೇ ಇಲ್ಲವಲ್ಲ ಎಂದನು ಆಗ ಎತ್ತುಗಳು ಹೇಳಿದವು ಇಲ್ಲಿಯವರೆಗೆ ನೀವು ನಮ್ಮನ್ನು ಬೈದಿರಲಿಲ್ಲ ಏಕೆ ಇವತ್ತು ಊರಿನ ಜನರ ಮುಂದೆ ನಮ್ಮನ್ನು ಬೈದಿದ್ದೀರಿ ಅವಮಾನಿಸಿದ್ದೀರಿ ಅದಕ್ಕಾಗಿ ನಾವು ಎಳೆಯಲಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದವು.
ತಾನು ಮಾಡಿದ ತಪ್ಪು ರೈತನಿಗೆ ಅರ್ಥವಾಯಿತು ನಾನು ಎತ್ತುಗಳನ್ನು ಸಾಕಿರಬಹುದು ಆದರೆ ಅದಕ್ಕೂ ನಾನು ಬೈದಿದ್ದು ತಪ್ಪು ಎಂದು ಅರ್ಥಮಾಡಿಕೊಂಡು ಇನ್ನು ಮುಂದೆ ನಾನು ಬೈಯುವುದಿಲ್ಲಎಂದು ಪ್ರಮಾಣ ಮಾಡಿದನು.
ಬೇರೆ ಊರಿನಲ್ಲಿ ಹೋಗಿ ಅದೇ ರೀತಿ ಸ್ಪರ್ಧೆ ಏರ್ಪಡಿಸಿದನು ಎತ್ತುಗಳು ಎಳೆದವು ಮತ್ತೆ ರೈತನು ಕೂಡ ಶ್ರೀಮಂತನಾದನು ನಾವು ಸಾಕಿದ ಮಕ್ಕಳನ್ನು ಕೆಲವು ವೇಳೆ ತುಂಬಾ ಬಯ್ಯುತ್ತೇವೆ ಅಲ್ವೇ ಬೈದು ಹೇಳುವ ಬದಲು ಪ್ರೀತಿಯಾಗಿ ಹೇಳುವ ಅಭ್ಯಾಸ ಬೆಳೆಸಿಕೊಳ್ಳೋಣ. ನಾನು ಎಲ್ಲರಿಗೂ ಗೌರವದಿಂದ ಮಾತನಾಡಿಸುತ್ತೇನೆಯೇ?
ವಾದಿಸುವದು ಒಳ್ಳೆಯದಲ್ಲ
ರಾಮಣ್ಣ ಶಾಮಣ್ಣ ಎನ್ನುವ ಒಳ್ಳೆಯ ಸ್ನೇಹಿತರು ಹೀಗೆ ಮಾತನಾಡುತ್ತಿರಬೇಕಾದರೆ ಉಸುರುವಳ್ಳಿಯ ಮಾತು ಬಂತು ಆಗ ರಾಮಣ್ಣ ಉಸರವಳ್ಳಿ ನೀಲಿ ಬಣ್ಣದ್ದು ಎಂದನು ಶಾಮಣ್ಣ ಉಸರವಳ್ಳಿ ಕಪ್ಪು ಬಣ್ಣದ್ದು ಎಂದು ಹೇಳಿದನು.
ಇಬ್ಬರೂ ಕೂಡ ಒಬ್ಬರೊಬ್ಬರು ಜಗಳವಾಡುತ್ತಿದ್ದರು ಹೀಗೆ ಸೋಮಣ್ಣ ಎಂಬುವನು ಬಂದನು ಇದನ್ನು ಪರಿಶೀಲಿಸಿ ಅವನು ಹೇಳಿದ ನಾನು ನಿನ್ನೆ ಒಂದು ಉಸರವಳ್ಳಿಯನ್ನು ನೋಡಿದೆ ಅದು ಬಿಳಿ ಬಣ್ಣದ್ದು ಬನ್ನಿ ನೋಡೋಣ ಎಂದು ಕರೆದುಕೊಂಡು ಹೋಗುತ್ತಾನೆ.
ಉಸರವಳ್ಳಿಯನ್ನು ನೋಡಿದಾಗ ಅದು ಆಚೆ ಬಂದ ನಂತರ ಒಂದು ಸಾರಿ ಒಂದೊಂದು ಬಣ್ಣವಾಗಿ ರೂಪ ತಾಳುತ್ತದೆ ಮೂವರು ಕೂಡ ಸರಿಯೇ ನೀವು ಕಂಡದ್ದು ಮಾತ್ರ ಸತ್ಯ ಹಾಗಾಗಿ ವಾದಿಸುವದು ಒಳ್ಳೆಯದಲ್ಲ ಎಂದು ಮೂವರು ಕೂಡ ಅರ್ಥಮಾಡಿಕೊಂಡರು.
ಕೆಲವು ಸಾರಿ ನಾವು ನೋಡಿದ್ದು ಕೂಡ ಸುಳ್ಳಾಗುವ ಸಾಧ್ಯತೆಯಿದೆ ಆದುದರಿಂದ ಸರಿಯಾಗಿ ಪರಿಶೀಲಿಸಿ ನಿಖರವಾಗಿ ತಿಳಿದಿದ್ದರೆ ಮಾತ್ರ ಹೇಳೋಣ. ನಾನು ನೋಡಿದ್ದೆ ಸರಿ ಎಂದು ವಾದಿಸಿದ್ದೇನೆಯೇ?
ನಿನ್ನ ಭವಿಷ್ಯವನ್ನೇ ಎಸೆಯಲು
ಒಂದು ಊರಿನಲ್ಲಿ ದೊಡ್ಡ ಆಶ್ರಮ ಇರುತ್ತದೆ ಆ ಆಶ್ರಮಕ್ಕೆ ಹಲವಾರು ಜನರು ಬಂದು ದರ್ಶನ ಮಾಡಿ ಹೋಗುತ್ತಿರುತ್ತಾರೆ ಆಶ್ರಮಕ್ಕೆ ಬಂದರೆ ಇದ್ದ ಹಲವಾರು ನೋವುಗಳು ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾಗಿ ನಂಬಿಕೆಯಿಂದ ಆಶ್ರಮಕ್ಕೆ ಆಗಾಗ ಬಂದು ಹೋಗುತ್ತಿರುತ್ತಾರೆ.
ಅಲ್ಲಿಯ ಮಹಾತ್ಮರು ಕೂಡ ಅಷ್ಟೆ ಎಲ್ಲರಿಗೂ ಸರಿಯಾದ ಸಲಹೆಗಳನ್ನು ನೀಡುತ್ತಿರುತ್ತಾರೆ ಒಂದು ಸರಿ ಒಬ್ಬ ಸಾಂಸಾರಿಕ ವ್ಯಕ್ತಿ ಬಂದನು ಇವರೇ ಗುರುಗಳು ಎಂದು ತಿಳಿದು ನಮಸ್ಕಾರ ಮಾಡಿ ಏನಾಯಿತು ಎಂದು ಕೇಳಿದರು.
ಸಾಂಸಾರಿ ಗಳಗಳನೆ ಅತ್ತುಬಿಟ್ಟನು ಏನು ಎಂದು ಕೇಳಿದಾಗ ನನಗೆ ಕಷ್ಟಗಳೇ ಕಡಿಮೆಯಾಗುತ್ತಿಲ್ಲ ಏನು ಮಾಡುವುದು ಎಂದು ದಾರಿ ಕಾಣದಂತಾಗಿದೆ ಮೊದಮೊದಲು ಊಟಕ್ಕೆ ತೊಂದರೆ ಆಗುತ್ತಿತ್ತು ನಂತರ ಮನೆಯ ತೊಂದರೆ ಈಗ ಆರೋಗ್ಯ ತೊಂದರೆ ಮತ್ತೆ ಮಕ್ಕಳ ತೊಂದರೆಯಾಗುತ್ತಿದೆ ಏನು ಮಾಡಲಿ ಎಂದು ಕೇಳಿದನು.
ಕೊನೆಯದಾಗಿ ನಿಮ್ಮನ್ನು ನೋಡಿ ಆಶೀರ್ವಾದ ಪಡೆದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದಾಗ ಮಹಾತ್ಮರು ಒಳ್ಳೆಯದೆ ಆಗಬಹುದು ನಿನಗೆ ಸರಿ ಎನ್ನಿಸಿದ್ದನ್ನು ಮಾಡು ಎಂದರು.
ಮಹಾತ್ಮರ ಆಕಡೆ ಈ ಕಡೆ ಇದ್ದ ಎಲ್ಲಾ ಜನರು ಆಶ್ಚರ್ಯಚಕಿತರಾದರು ಆಗ ಮಹಾತ್ಮರು ಊಟಕ್ಕಾಗಿ ಸಿದ್ಧ ಮಾಡಿ ಇಟ್ಟ ಹಲವಾರು ಎಲೆಗಳು ಇತ್ತು ಈಗ ಊಟದ ಸಮಯ ಈ ಎಲೆಗಳನ್ನು ತೆಗೆದುಕೊಂಡು ಹೋಗಿ ಬಿಸಾಕಿ ಬಾ ನಂತರ ಊಟ ಮಾಡಿಕೊಂಡು ಮಾತನಾಡೋಣ ಎಂದರು.
ಮನುಷ್ಯನು ನಾವು ಇಷ್ಟು ಕಷ್ಟಪಟ್ಟು ಮಾಡಿದ ಎಲೆಗಳನ್ನು ತಿಪ್ಪೆಗುಂಡಿಗೆ ಬಿಸಾಕಬೇಕು ಎಷ್ಟು ಶ್ರಮ ವ್ಯರ್ಥವಲ್ಲವೇ ಎಂದು ಕೇಳಿದನು ಈ ಎಲೆಗಳನ್ನು ಮಾಡಿರುವುದಕ್ಕೆ ಶ್ರಮ ಇರಬೇಕಾದರೆ ದೇವರು ನಿನಗೂ ಕೂಡ ಸೃಷ್ಟಿಸುವುದಕ್ಕೆ ಬಹಳಷ್ಟು ಕಷ್ಟ ಪಟ್ಟಿದ್ದಾರೆ ನಿಮ್ಮ ತಾಯಿ ನಿನಗೆ ಜನ್ಮ ನೀಡಲು ಎಂಟು ತಿಂಗಳು ಹೊತ್ತುಕೊಂಡು ಇದ್ದಾರೆ ಹುಟ್ಟಿದ ನಂತರವೂ ಬಹಳಷ್ಟು ಕಷ್ಟಪಟ್ಟಿದ್ದಾರೆ ಎಂದು ಹೇಳಿದರು.
ಮಹಾತ್ಮರ ಮಾತು ಈ ವ್ಯಕ್ತಿಗೆ ಅರ್ಥವಾಯಿತು ಮಹಾತ್ಮರು ಒಂದು ಎಲೆಯನ್ನು ಎಸೆಯಲು ನಿನಗೆ ಇಷ್ಟು ಯೋಚಿಸುತ್ತಿದ್ದೀಯಾ ಎಂದರೆ ಇಷ್ಟು ಕಷ್ಟಪಟ್ಟು ಸೃಷ್ಟಿ ಆಗಿದ್ದೀಯಾ ನಿನ್ನ ಭವಿಷ್ಯವನ್ನೇ ಎಸೆಯಲು ನಿರ್ಧಾರ ಮಾಡಿದ್ದು ವ್ಯರ್ಥವಾಗುವುದಿಲ್ಲವೇ ಎಂದು ಕೇಳಿದರು.
ಈ ಒಂದು ಮಾತಿನಿಂದ ಅರ್ಥಮಾಡಿಕೊಂಡು ಮುಂದೆ ಚೆನ್ನಾಗಿ ಬದುಕಿದನಂತೆ ತಲೆ ಇರುವವರೆಗೂ ತಲೆನೋವು ಬಂದೆ ಬರುತ್ತದೆ, ಸಮುದ್ರ ಇರುವವರೆಗೂ ಅಲೆಗಳು ಆಗಾಗ ಬರುತ್ತಿರುತ್ತವೆ ಹಾಗೆಯೇ ಕಷ್ಟ ನಷ್ಟಗಳು ಜೀವನದಲ್ಲಿ ಆಗಾಗ ಬರುತ್ತಲೇ ಇರುತ್ತವೆ ಇದನ್ನು ಸಂಭಾಳಿಸಿಕೊಂಡು ಮುನ್ನಡೆಯೋಣ.
ಉತ್ತರ ನೀಡಲು ಆಗುವುದಿಲ್ಲ
ಒಂದು ಮನೆಯಲ್ಲಿ ಮಾಲೀಕ ಒಬ್ಬ ಕೆಲಸದವನು ನಾಯಿ ಮತ್ತು ಬೆಕ್ಕು ಇರುತ್ತದೆ ಒಂದು ಸಾರಿ ಮಾಲೀಕ ನಾದವನು ಕೆಲಸದವನನ್ನು ಬೈಯುತ್ತಿರುತ್ತಾನೆ ಏಕೆ ಬೈಯುತ್ತಿರುತ್ತಾನೆ ಎಂದು ಗೊತ್ತಿರುವುದಿಲ್ಲ.
ನಾಯಿ ಬೆಕ್ಕಿಗೆ ಕೇಳುತ್ತೆ ಮನೆಯಲ್ಲಿ ಏಕೆ ಕೆಲಸದವನನ್ನು ಬೈಯುತ್ತಿದ್ದಾನೆ ಎಂದಾಗ ಬೆಕ್ಕು ಕೆಲಸದವನಿಗೆ ರಜಾ ಬೇಕಂತೆ ಆದುದರಿಂದ ಮಾಲೀಕನು ಬೈಯುತ್ತಿದ್ದಾನೆ ಆ ರೀತಿ ಬಯ್ಯುವುದಕ್ಕೆ ಏನಾದರೂ ತಪ್ಪು ಆಗಿದೆಯೇ ಎಂದು ನಾಯಿ ಕೇಳುತ್ತದೆ ಆಗ ಇರುವ ಒಂದು ಸತ್ಯವನ್ನು ಬೆಕ್ಕು ಹೇಳುತ್ತದೆ.
ನಾನು ಒಂದು ಮೀನನ್ನು ಪೂರ್ತಿಯಾಗಿ ತಿನ್ನದೆ ಅದರ ತಲೆಯ ಭಾಗವನ್ನು ಮಾತ್ರ ಉಳಿದಿದೆ ಆದುದರಿಂದ ಮಾಲೀಕನು ಕೆಲಸದವನಿಗೆ ಬೈಯುತ್ತಿದ್ದಾನೆ ಹೇಳುತ್ತದೆ ಆಗ ನಾಯಿಗೆ ಅರ್ಥವಾಗುತ್ತದೆ.
ತಪ್ಪು ಮಾಡಿರುವುದು ಬೆಕ್ಕು ನಾಯಿ ಹೇಳುತ್ತದೆ ನೀನು ತಪ್ಪು ಮಾಡಿದ್ದೀಯಾ ಎಂದು ಒಪ್ಪಿಕೋ ಎಂದಾಗ ಬೆಕ್ಕು ಹೇಳುತ್ತದೆ ಇದನ್ನು ನಾನು ಒಪ್ಪುವುದಿಲ್ಲ ಎನ್ನುತ್ತದೆ ಕೆಲವು ಸಾರಿ ಬರೀ ಕೇಳಿಸಿ ಕೊಳ್ಳಬೇಕಾಗುತ್ತದೆ ಅದಕ್ಕೆ ಉತ್ತರ ನೀಡಲು ಆಗುವುದಿಲ್ಲ ಕೆಲವರು ಮಾಡಿದ್ ತಪ್ಪು ಒಪ್ಪಿಕೊಳ್ಳುವುದೇ ಇಲ್ಲ. ನಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತೇನೆಯೇ?