ಪ್ರೀತಿ ವ್ಯಕ್ತ ಪಡಿಸಿತು

ಒಂದು ಊರಿನಲ್ಲಿ ಒಬ್ಬ ಲಾಲಾಮ್ ಶ್ರೀಮಂತ ಇದ್ದನು ದೊಡ್ಡ ಮನೆ ತೋಟ ಹೊಲಗದ್ದೆ ನಾಯಿ ಹಸುಗಳು ಕುರಿಗಳು ಕೋಳಿಗಳು ಎಲ್ಲವೂ ಇದ್ದವು ಅವು ತಮ್ಮ ತಮ್ಮ ಕೆಲಸ ಮಾಡಿಕೊಂಡು ಇರುತ್ತಿದ್ದವು ಶ್ರೀಮಂತ ಮನೆಯಲ್ಲಿ ಇರಲಿಲ್ಲ ಆ ಸಮಯಕ್ಕೆ ಒಂದು ಚಿಕ್ಕ ಮುದ್ದು ಮುದ್ದಾಗಿ ಇರುವ ನಾಯಿಮರಿ  ಶಬ್ದ ಮಾಡುತ್ತಾ ಬಂತು ಅದು ತುಂಬಾ ಹಸಿವೆಯಿಂದ ಇತ್ತು ಹಾಗೆ ನಾಯಿ ಮರಿ ಗಾಬರಿಯಾಗಿತ್ತು.

 ಮನೆಯಲ್ಲಿ ಇರುವ ಪ್ರಾಣಿಗಳು ನೀನು ಯಾರು ನೀನು ಏಕೆ ಬಂದೆ ಎಂದು ಕೇಳಿದವು ಮೊದಲಿಗೆ ಹಸು ಕೇಳಿತು ನೀನು ಇಲ್ಲಿ ಬರುವ ಅವಶ್ಯಕತೆಯಿಲ್ಲ ನಾವು ಇಲ್ಲಿ ಹಾಲು ಕೊಡುತ್ತೇವೆ ಅದರಿಂದ ಮೊಸರು ಬೆಣ್ಣೆ ತುಪ್ಪ ಎಲ್ಲವೂ ಮಾಡಬಹುದಾಗಿದೆ ನಾವು ಉಪಯೋಗಿಗಳು ನಿನ್ನ ಉಪಯೋಗವಿಲ್ಲ.

 ಕೋಳಿಗಳು ನಾವು ಮೊಟ್ಟೆ ಇಡುತ್ತವೆ ಅದನ್ನು ಮಾರಿದರೆ ದುಡ್ಡು ಬರುತ್ತದೆ ಅದರಿಂದ ನಾವು ಉಪಯೋಗಿ ನಿನ್ನ ಉಪಯೋಗವಿಲ್ಲ ನಂತರ ಎತ್ತುಗಳು ಹೇಳಿದವು ನಾವು ಹೊಲ ಉಳುಮೆ ಮಾಡುತ್ತೇವೆ ನಾವು ಉಪಯೋಗಿ ನಿನ್ನ ಉಪಯೋಗವಿಲ್ಲ ಹೀಗೆ ಮನೆಯಲ್ಲಿ ಇರುವ ಎಲ್ಲ ಪ್ರಾಣಿಗಳು ಹೆದರಿಸಿದವು. ಕೊಂಕು ನುಡಿಯಿಂದ ತಿರಸ್ಕರಿಸಿದವು.

 ಈ ನಾಯಿಮರಿ ಇನ್ನೂ ಹೆದರಿತ್ತು ಏನು ಮಾಡುವುದು ಎಂದು ಯೋಚಿಸುತ್ತಿತ್ತು ಅಷ್ಟರಲ್ಲಿ ದೂರ ನಿಂತಿದ್ದ ನಾಯಿ ನೋಡಿತು ನಾಯಿಗೆ ಕನಿಕರ ಬಂತು ಚಿಕ್ಕ ಮರಿಗೆ ಹೇಳಿತು ಬೇರೆಯವರು ಏನೇ ಹೇಳಲಿ ನೀನು ತಾಳ್ಮೆಯಿಂದ ಇರು ಧೈರ್ಯ ಆತ್ಮವಿಶ್ವಾಸದಿಂದ ಇರು ನಾನು ಹೇಳಿದಂತೆ ನೀನು ಮಾಡಿದರೆ ನಿನ್ನ ಬದುಕು ಬದಲಾಗುವುದು ಖಂಡಿತ ಎಂದು ಭರವಸೆ ನೀಡಿತು.

 ಸ್ವಲ್ಪ ಹೊತ್ತು ಮಾತನಾಡಿತು ನಂತರ ಕಿವಿಯಲ್ಲಿ ಏನೋ ಹೇಳಿತು. ನಂತರ ಶ್ರೀಮಂತನು ಬಂದನು ಚಿಕ್ಕ ನಾಯಿಮರಿ ಶ್ರೀಮಂತನ ಬಳಿ ಎರಡು ಸಾರಿ ಸುತ್ತು ಹಾಕಿ ಕಾಲನ್ನು ನಕ್ಕಿತು ಪ್ರೀತಿ ವ್ಯಕ್ತ ಪಡಿಸಿತು ಶ್ರೀಮಂತನಿಗೆ ನಾಯಿಮರಿಯೆಂದರೆ ತುಂಬ ಇಷ್ಟ ಆದುದರಿಂದ ನಾಯಿಮರಿಯನ್ನು ಮುದ್ದಾಡಿದನು.

 ಶ್ರೀಮಂತನು ಈ ನಾಯಿಮರಿ ಇಲ್ಲೇ ಇರಲಿ ಎಂದು ಎಲ್ಲರಿಗೂ ಹೇಳಿದನು ಮಿಕ್ಕಿದ ಪ್ರಾಣಿಗಳಿಗೆ ತುಂಬಾ ಮತ್ಸರ ಉಂಟಾಯಿತು ಎಲ್ಲಾ ಪ್ರಾಣಿಗಳು ನಾವು ಇಷ್ಟು ದಿನ ನಿಮಗೆ ನಾವು ಉಪಯೋಗವಾಗಿದ್ದೇವೆ ಈಗ ಬಂದ ನಾಯಿಮರಿಗೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರುವುದು ಸರಿಯಲ್ಲ ಎಂದು ಹೇಳಿದವು.

 ಶ್ರೀಮಂತನಾದವನು ನೀವು ನನಗೆ ಎಲ್ಲವನ್ನೂ ಕೊಡುತ್ತಿದ್ದೀರಾ ನಿಜ ಆದರೆ ಈ ಚಿಕ್ಕ ನಾಯಿ ಮರಿ ಪ್ರೀತಿಯನ್ನು ಕೊಟ್ಟಿದೆ ಏನೇ ಇರಲಿ ಇಲ್ಲದೇ ಇರಲಿ ಪ್ರೀತಿಯೇ ತುಂಬಾ ದೊಡ್ಡದು ಎಂದು ಶ್ರೀಮಂತನು ಹೇಳಿದನು. ಆಗ ಎಲ್ಲಾ ಪ್ರಾಣಿಗಳು ಅರ್ಥಮಾಡಿಕೊಂಡವು.

ಕನಸಿಗೆ ಶ್ರಮ ಪಡಬೇಕು

ಹಲವಾರು ವರ್ಷಗಳ ಹಿಂದೆ ಸುಲ್ತಾನ್ ಬೈಜದ್ ತೈಮೂರ್ ಲಂಗ್ ಇಬ್ಬರಿಗೆ ಯುದ್ಧ ನಡೆಯಿತು ಈ ಯುದ್ಧದಲ್ಲಿ ಬೈಜದ್ ಸೋತನು ಅದಕ್ಕಾಗಿ ಅವನಿಗೆ ದರ್ಬಾರಿನಲ್ಲಿ ಬೇಡಿ ಹಾಕಿ ನಿಲ್ಲಿಸಿದರು ತೈಮೂರ್ ಜೋರಾಗಿ ನಕ್ಕನು.

ಬೈಜದ್ ಗೆ ಮತ್ತಷ್ಟು ಕೋಪ ಬಂತು ಆಗ ಬೈಜದ್ ಹೇಳಿದ ನಾನು ಸೋತಿದ್ದೇನೆ ಎಂದು ನೀನು ನಗುತ್ತಿದ್ದೀಯಾ ನಾನು ಒಬ್ಬ ಸುಲ್ತಾನನೇ ನಾಳೆ ನಿನಗೂ ಈ ಸ್ಥಿತಿ ಬರಬಹುದು ಇನ್ನೊಬ್ಬರ ಸೋಲನ್ನು ಕಂಡು ನಗುವುದು ಒಳ್ಳೆಯದಲ್ಲ ನಿನಗಾಗಿಯೋ ಈ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಬಹುದು ಎಂದನು.

ನಗುತ್ತಾ ತೈಮೂರ್ ನಾನು ನಕ್ಕಿದ್ದು ಅದಕ್ಕೆಲ್ಲಾ ನನಗೆ ಒಂದು ಕಣ್ಣಿಲ್ಲ ನಿನಗೆ ಒಂದು ಕಾಲಿಲ್ಲ ಅಂದರೆ ನಾನು ಕುಂಡ ನೀನು ಕುಂಟ ಆದರೆ ಇಬ್ಬರೂ ರಾಜರಾಗಿ ಇದ್ದೇವೆ ನಾವು ಹಲವಾರು ಸಾಧನೆಗಳನ್ನು ಮಾಡಿದ್ದೇವೆ ಕೆಲವುಗಳಲ್ಲಿ ಗೆದ್ದಿದ್ದೇವೆ ಆದುದರಿಂದ ನಾನು ನಗುತ್ತಿದ್ದೇನೆ.

 ಇದೇ ಕೆಲಸವನ್ನು ಬೇರೆಯವರು ದೈಹಿಕವಾಗಿ ಮಾನಸಿಕವಾಗಿ ಚೆನ್ನಾಗಿದ್ದಾರೆ ಆದರೂ ಮಾಡಲಿಲ್ಲವಲ್ಲ ಎಂದು ಹೇಳುತ್ತಾನೆ ಆಗ ಬೈಜದ್ ಹೇಳುತ್ತಾನೆ ಯಾರು ನನಗೆ ಇಷ್ಟರಲ್ಲೇ ತೃಪ್ತಿ ಇದೆ ಇಷ್ಟರಲ್ಲೇ ನೆಮ್ಮದಿಯಾಗಿ ಇರ್ತೀನಿ ಅನ್ನುವವರಿಗೆ ಅಷ್ಟೇ ದೊರೆಯುತ್ತದೆ.

 ಯಾರು ಕಷ್ಟಪಟ್ಟು ಶ್ರದ್ಧೆ ಭಕ್ತಿಯಿಂದ ನಿರಂತರವಾಗಿ ಸಾಧನೆ ಮಾಡುತ್ತಾರೆ ಅವರು ಮಾತ್ರ ಬೆಳೆಯುತ್ತಾರೆ ಎಂದು ಹೇಳುತ್ತಾನೆ. ದೈಹಿಕವಾಗಿ ಮಾನಸಿಕವಾಗಿ ಚೆನ್ನಾಗಿದ್ದರೆ ಸಾಲದು ಅದಕ್ಕಿಂತ ಮುಖ್ಯವಾಗಿ ಅವರಿಗೆ ಒಂದು ಕನಸು ಇರಬೇಕು ಆ ಕನಸಿಗೆ ಶ್ರಮ ಪಡಬೇಕು ಆಗಲೇ ಕನಸು ನನಸಾಗುತ್ತದೆ ಎಂದು ವಿವರಿಸಿದನು. ನಾನು ಯಾವ ಕನಸನ್ನು ನೆನೆಸು ಮಾಡಿಕೊಂಡಿದ್ದೇನೆ?

ಯಾರ ಋಣದಲ್ಲೂ

ಇಂದು ಸಾಲ ಪಡೆಯಬೇಕಾದರೆ ಕೆಲವು ಡಾಕ್ಯುಮೆಂಟ್ ಗಳು ಅಥವಾ ಏನಾದರೂ ಇಡಬೇಕು ನಂತರವೇ ಸಾಲ ಸಿಗುತ್ತದೆ ಹಲವು ವರ್ಷಗಳ ಹಿಂದೆ ಸಾಲ ಪಡೆಯಬೇಕಾದರೆ ವ್ಯಕ್ತಿಯನ್ನು ನೋಡಿ ಸಾಲ ಕೊಡುತ್ತಿದ್ದರು ಏಕೆಂದರೆ ಅಂದಿನ ವ್ಯಕ್ತಿಗಳು ಹೇಳಿದಂತೆ ನಿಯತ್ತಿನಿಂದ ನಡೆದುಕೊಳ್ಳುತ್ತಿದ್ದರು.

 ಯಾವುದೇ ರೀತಿಯ ಭದ್ರತೆಯನ್ನು ಕೇಳುತ್ತಿರಲಿಲ್ಲ ಊರಿನ ಶ್ರೀಮಂತ ಸಾಲ ಕೊಡುತ್ತಿದ್ದರು ಇದೇ ರೀತಿ ಸಬಲ್ ವ್ಯಕ್ತಿಯು ಹಲವಾರು ಸರಿ ಸಾಲ ತೆಗೆದುಕೊಂಡಿದ್ದನು ಹಾಗೆಯೇ ತೀರಿಸುತ್ತಿದ್ದನು ಕೊನೆಗೆ ಒಂದು ಸಾರಿ ಸಾಲವನ್ನು ತೆಗೆದುಕೊಂಡನು ಅವರ ಅವರ ವ್ಯಾಪಾರ ಕುಗ್ಗಿ ಹೋಯಿತು.

 ಹಲವಾರು ದಿನಗಳ ನಂತರ ಬಂದು ಇನ್ನೂ ಎಷ್ಟು ಬಾಕಿ ಇದೆ ಎಂದು ಕೇಳಿದರು ಆಗ ಇವರು 300 ರೂಪಾಯಿ ಇದೆ ಎಂದು ಹೇಳಿದರು ಆದರೆ ಇವರು ತಂದಿದ್ದು 200 ರೂಪಾಯಿ ಹಣವನ್ನು ಕೊಟ್ಟು ಇನ್ನೂ 100 ರೂಪಾಯಿ ನಾನು ನಿಮಗೆ ಕೊಡುತ್ತೇನೆ ಎಂದು ಹೇಳಿದರು.

ಸಾಲ ಕೊಟ್ಟಿದ್ದ ಶ್ರೀಮಂತರು ಹೇಳಿದರು ನೀವು ಇದನ್ನು ಕೊಡುವ ಅವಶ್ಯಕತೆ ಇಲ್ಲ ಏಕೆಂದರೆ ನನಗೆ ನೀವು ಅತಿ ಹೆಚ್ಚು ಬಡ್ಡಿಯನ್ನು ಕಟ್ಟಿದ್ದೀರಿ ಅದಲ್ಲದೆ ನಿಮಗೆ ನಷ್ಟವೂ ಆಗಿದೆ ನಿಮ್ಮ ಸಾಲವನ್ನು ಮನ್ನಾ ಮಾಡುತ್ತೇನೆ ಎಂದರು ಆದರೂ ಆ ವ್ಯಕ್ತಿ ಒಪ್ಪುತ್ತಿಲ್ಲ.

 ನಿಮ್ಮ ಹಣ ನನಗೆ ಬೇಡ ನಾನು ಇಲ್ಲಿ ತಪ್ಪಿಸಿಕೊಳ್ಳಬಹುದು ಆದರೆ ಸತ್ತ ನಂತರ ನಾನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಯಾರ ಋಣದಲ್ಲೂ ಬದುಕಲಿಕ್ಕೆ ಇಷ್ಟಪಡುವುದಿಲ್ಲ ಹೇಗಾದರೂ ಮಾಡಿ ನಿಮ್ಮ ಸಾಲವನ್ನು ತೀರಿಸುತ್ತೇನೆ ನಂತರ ನಾನು ಸುಖವಾಗಿ ಪ್ರಾಣವನ್ನು ಬಿಡುತ್ತೇನೆ ಎಂದು ಹೇಳಿ ಹೊರಟನು ಮತ್ತೆ ಕೆಲವು ದಿನಗಳ ನಂತರ ಬಾಕಿ ಇದ್ದ ಹಣವನ್ನು ಕೊಟ್ಟು ತುಂಬ ಸಂತೋಷದಿಂದ ಹೊರಟರು.

ಕೆಲವು ದಿನಗಳ ನಂತರ ಅವರು ಸತ್ತಿದ್ದಾರೆ ಎಂದು ತಿಳಿಯಿತು ಇಂದೂ ಕೂಡ ಈ ರೀತಿಯ ವ್ಯಕ್ತಿಗಳು ಕೂಡ ಇದ್ದಾರೆ. ನಾನು ನನ್ನ ಆತ್ಮಸಾಕ್ಷಿಗೆ ಒಪ್ಪುವಂತೆ ಬದುಕುತ್ತಿದ್ದೇನೆಯೇ?

ಎಚ್ಚರಿಕೆಯಾಗಿ ಇರಬೇಕು

ಒಂದು ಊರಿನಲ್ಲಿ ಒಬ್ಬ ಭದ್ರಾನಂದ್ ಸಾಮಾನ್ಯ ಮನುಷ್ಯನೂ  ಎಮ್ಮೆಗಳು, ಹಸುಗಳು ಹಾಗೂ ಕುರಿಗಳನ್ನು ಸಾಕಿಕೊಂಡು ನೆಮ್ಮದಿಯ ಬದುಕುತ್ತಿದ್ದನು ಅದೇ ಊರಿಗೆ ಒಬ್ಬ ನುರಿತ ತಜ್ಞರು ಬರುತ್ತಾರೆ ನುರಿತ ತಜ್ಞರು ಉಚಿತ ಸಲಹೆ ನೀಡುತ್ತಾರೆ ಡಂಗೂರ ಸಾರಿ ಹೇಳುತ್ತಾರೆ.

ಒಬ್ಬ ಸಾಮಾನ್ಯ ಮನುಷ್ಯನು ನುರಿತ ತಜ್ಞರು ಸಲಹೆ ನಾನು ಪಡೆದರೆ ನನಗೆ ಒಳ್ಳೆಯದಾಗುತ್ತೆ ಎಂದು ಇವನು ನುರಿತ ತಜ್ಞರು ಬಳಿಗೆ ಹೋದನು ಸಂತರು ಎಲ್ಲವನ್ನು ಕೇಳಿ ನೀನು ಯಾವ ಹುಲ್ಲು ಎಮ್ಮೆಗಳಿಗೆ ಹಾಕುತ್ತಿದ್ದೀಯಾ ಎಂದು ಕೇಳಿದರು.

 ನಾನು ಹಸಿ ಹುಲ್ಲು ಹಾಕುತ್ತಿದ್ದೇನೆ ಅದಕ್ಕೆ ನುರಿತ ತಜ್ಞರು ಬೇಡ ಅದಕ್ಕೆ ಒಣ ಹುಲ್ಲು ಹಾಕಬೇಕು ಎಂದು ಸಲಹೆ ನೀಡಿದರು ನುರಿತ ತಜ್ಞರು ಮಾತನ್ನು ನಂಬಿ  ಅದೇ ರೀತಿ ಒಣಹುಲ್ಲು ಹಾಕಿದನು ಇದರಿಂದ ಕೆಲವು ಎಮ್ಮೆಗಳು ಕಾಯಿಲೆ ಬಿದ್ದವು ನಂತರ ಸತ್ತು ಹೋದವು ಮತ್ತೆ ಸಂತರ ಹತ್ತಿರ ಹೋದನು ಎಮ್ಮೆಗಳು ಸತ್ತವು ಎಂದು ಹೇಳಿದನು.

 ನುರಿತ ತಜ್ಞರು ದಿನನಿತ್ಯ ಒಂದು ಸಾರಿ ನೀರಿನಲ್ಲಿ ಸುಣ್ಣ ಬೆರೆಸಿ ಕೊಡಬೇಕು ಎಂದು ಸಲಹೆ ನೀಡಿದರು ನುರಿತ ತಜ್ಞರು ಹೇಳಿದಂತೆ ನೀರಿನಲ್ಲಿ ಸುಣ್ಣ ಬೆರೆಸಿ ನೀರನ್ನು ಕುಡಿಸಿದನು ಆದ್ದರಿಂದ ಎಮ್ಮೆಗಳು ಸತ್ತವು ಒಂದು ವಾರದ ನಂತರ ಹೋದನು ನುರಿತ ತಜ್ಞರು ಮರದ ಎಲೆಗಳನ್ನು ತಿನಿಸು ಎಂದರು ನುರಿತ ತಜ್ಞರು ಹೇಳಿದಂತೆ ಎಲೆಗಳನ್ನು ತಿನಿಸಿದಾಗ ಇರುವ ಎತ್ತುಗಳು ಸತ್ತವು

ಎಲ್ಲವೂ ಕಳೆದುಕೊಂಡು ಬಂದನು ಬಂದನು ಸ್ವಾಮಿಯವರೇ ಎಲ್ಲವೂ ಸತ್ತುಹೋಗಿದೆ ಏನು ಮಾಡಲಿ ಎಂದಾಗನುರಿತ ತಜ್ಞರು  ನನ್ನ ಹತ್ತಿರ ಉಚಿತ ಹಲವಾರು ಸಲಹೆಗಳಿವೆ ಆದರೆ ನಿನ್ನ ಹತ್ತಿರ ಎಮ್ಮೆಗಳೇ ಕುರಿಗಳೇ ಇಲ್ಲವಲ್ಲ ನಿನ್ನ ಅದೃಷ್ಟವೇ ಸರಿಯಿಲ್ಲ ಎಂದು ಹೇಳಿ ಕಳಿಸಿದರು.

 ಕೆಲವರು ಉಚಿತ ಸಲಹೆ ನೀಡುತ್ತಾರೆ ಎಂದರೆ ಇವರಿಂದ ನಾವು ಎಚ್ಚರಿಕೆಯಾಗಿ ಇರಬೇಕು ಇಲ್ಲದಿದ್ದರೆ ಇರುವುದನ್ನು ಕಳೆದುಕೊಳ್ಳಬೇಕಾಗುತ್ತದೆ ಸಲಹೆ ಕೇಳಬೇಕಾದರೆ ಯಾರು ಅದರಲ್ಲಿ ಪ್ರವೀಣರಾಗಿರುತ್ತಾರೋ ಅವರಿಂದ ಸಲಹೆ ಪಡೆಯೋಣ ಅವರಿಗೆ ಮಾತ್ರ ಸಲಹೆ ಕೇಳಬೇಕು ಏಕೆಂದರೆ ಅವರಿಗೆ ಅದರಲ್ಲಿ ಜ್ಞಾನ ಪರಿಣಿತಿ ಇರುತ್ತದೆ ಯಾವುದೇ ಸಲಹೆ ಇರಲಿ ನಾವು ವಿಮರ್ಶೆ ಮಾಡಿ ನಂತರ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳೋಣ.

ಮಂದಿರದ ಒಳಗೆ ಹೋಗಲಾರೆ

ಒಂದಾನೊಂದು ಕಾಲದಲ್ಲಿ ಒಬ್ಬ ಪಿನಕ್ ರಾಜನು ತನ್ನ ಬಹುವರ್ಷಗಳ ಆಸೆಯಿಂದ ಒಂದು ದೊಡ್ಡ ಮಂದಿರವನ್ನು ಕಟ್ಟಿಸಿದನು ಈ ಮಂದಿರಕ್ಕೆ ಪ್ರಸಿದ್ಧರಾದ ಪರಿಣಿತಿಯನ್ನು ಹೊಂದಿದ ತಂತ್ರಜ್ಞರನ್ನು ಕರೆಸಿ ಕಟ್ಟಿಸಿದನು. ದೂರ ದೂರದವರೆಗೂ ಮಂದಿರದ ಹೆಸರು ಹಬ್ಬಿತು ಮಂದಿರವು ತುಂಬಾ ಸುಂದರವಾಗಿತ್ತು ಮಂದಿರದ ಒಂದು ಗೋಪುರ ಗೋಪುರಕ್ಕೆ ಚಿನ್ನದ ಕವಚ ಇತ್ತು.

ಸಾವಿರಾರು ಜನರು ಕುಳಿತುಕೊಳ್ಳುವಂತಹ ಭವನ ಇತ್ತು ಆ ಮಂದಿರಕ್ಕೆ ಬಂದರೆ ಉಳಿದುಕೊಳ್ಳಲು ಸಹ ಅವಕಾಶವಿತ್ತು ಅದು ನೋಡಲಿಕ್ಕೂ ತುಂಬಾ ಅದ್ಭುತವಾಗಿತ್ತು ದಿನದಿಂದ ದಿನಕ್ಕೆ ಈ ಮಂದಿರದ ಹೆಸರು ಪ್ರಸಿದ್ಧವಾಯಿತು.

  ಆಗ ಆ ದೇಶದಲ್ಲಿ ಇದ್ದ ಒಬ್ಬ ಹೆಸರಾಂತ ಬಾಬಾ ಅವರು ಅಲ್ಲಿಗೆ ಬಂದರು ಈ ಬಾಬಾ ಅವರು ಬರುತ್ತಿದ್ದಾರೆ ಎಂದು ಎಲ್ಲರೂ ಕೂಡ ಬಂದರು ಮಂದಿರವನ್ನು ನೋಡಲು ಹಾಗೂ ಬಾಬಾ ಅವರನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದರು ಆದರೆ ಈ ಬಾಬಾ ಅವರು ತಮ್ಮ ಉಪನ್ಯಾಸವನ್ನು ಮಂದಿರದ ಹೊರಗಡೆಯೇ ನೀಡಿದರು.

 ಗಮನಿಸಿದ ರಾಣಿಯು ರಾಜನಿಗೆ ಹೇಳಿದರು ಬಾಬಾ ಅವರು ಮಂದಿರದ ಒಳಗೆ ಉಪದೇಶ ನೀಡಬಹುದಲ್ಲ ಬಾಬಾ ಅವರಿಗೆ ಹೇಳಿ ಎಂದು ಹೇಳಿದಳು. ಆಗ ರಾಜನು ಬಾಬಾ ಅವರಿಗೆ ನಮಸ್ಕಾರ ಮಾಡಿ ಬಾಬಾ ಅವರೆ ತಾವು ದಯವಿಟ್ಟು ಮಂದಿರದ ಒಳಗಡೆ ಎಲ್ಲದಕ್ಕೂ ಅವಕಾಶವಿದೆ ಈ ಮಂದಿರಕ್ಕಾಗಿಯೇ ಕೋಟಿಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದೇನೆ ಎಂದನು ಬಾಬಾ ಅವರು ವಿನಯದಿಂದಲೇ ಹೇಳಿದರು.

 ನಾನು ಮಂದಿರದ ಒಳಗೆ ಹೋಗಲಾರೆ ಏಕೆಂದರೆ ಅಲ್ಲಿ ದುರ್ವಾಸನೆ ಬರುತ್ತಿದೆ ಏಕೆ ಬರುತ್ತಿದೆ ಎಂದಾಗ ರಾಜರೇ ನೀವು ಈ ಮಂದಿರ ಕಟ್ಟಿಸುವ ಸಮಯದಲ್ಲಿ ಈ ಊರಿನಲ್ಲಿ ತುಂಬಾ ಬರಗಾಲ ಇತ್ತು ಜನರು ಒಂದು ತುತ್ತು ಅನ್ನಕ್ಕೂ ಬೇಡುತ್ತಿದ್ದರು ಸಹಾಯ ಕೇಳಿ ಬಂದರೂ ಕೂಡ ನೀವು ಅವರ ಕಷ್ಟಕ್ಕೆ ಕರಗಲಿಲ್ಲ.

 ನಿಮ್ಮ ಉದ್ದೇಶ ಬರೀ ಮಂದಿರ ಕಟ್ಟಬೇಕಾಗಿತ್ತು ಆದರೆ ಜನಗಳ ಕಷ್ಟ ನಿಮಗೆ ಅರಿವಾಗಲಿಲ್ಲ ಒಳಗೆ ಹೋಗಲು ನನಗೆ ಸಾಧ್ಯವಾಗುತ್ತಿಲ್ಲ ದಯವಿಟ್ಟು ಕ್ಷಮಿಸಿ ನಾನು ಆಚೆಯೇ ಉಪನ್ಯಾಸ ನೀಡಿ ಹೊರಡುತ್ತೇನೆ ಎಂದು ಉಪನ್ಯಾಸ ನೀಡಿ ಹೊರಟರು.

Leave a Comment